ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs GT: ಗುಜರಾತ್‌ ಟೈಟನ್ಸ್‌ ಎಸಗಿದ್ದ ಸಾಲು-ಸಾಲು ತಪ್ಪುಗಳನ್ನು ರಿವೀಲ್‌ ಮಾಡಿದ ಉತ್ತಪ್ಪ!

ಮುಂಬೈ ಇಂಡಿಯನ್ಸ್‌ ವಿರುದ್ಧ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡ 20 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಎರಡನೇ ಕಪ್‌ ಗೆಲ್ಲುವ ಕನಸು ಭಗ್ನವಾಯಿತು. ಈ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಮಾಡಿದ್ದ ಸಾಲು ತಪ್ಪುಗಳನ್ನು ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಬಹಿರಂಗಪಡಿಸಿದ್ದಾರೆ.

ಗುಜರಾತ್‌ ಟೈಟನ್ಸ್‌ ಸೋಲಿಗೆ ಪ್ರಮುಖ ಕಾರಣ ತಿಳಿಸಿದ ಉತ್ತಪ್ಪ!

ಗುಜರಾತ್‌ ಟೈಟನ್ಸ್‌ ತಂಡವನ್ನು ದೂರಿದ ರಾಬಿನ್‌ ಉತ್ತಪ್ಪ.

Profile Ramesh Kote May 31, 2025 10:51 PM

ನವದೆಹಲಿ: ಶುಕ್ರವಾರ ಚಂಡೀಗಢದ ಮುಲ್ಲನ್‌ಪುರದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (MI) ವಿರುದ್ಧ ಗುಜರಾತ್‌ ಟೈಟನ್ಸ್‌ (GT) ತಂಡ 20 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಎರಡನೇ ಐಪಿಎಲ್‌ ಟ್ರೋಫಿ ಗೆಲ್ಲುವ ಗುಜರಾತ್‌ ತಂಡದ ಕನಸು ಭಗ್ನವಾಯಿತು. ಈ ಪಂದ್ಯದ ಬಳಿಕ ಭಾರತ ತಂಡದ ಮಾಜಿ ಆರಂಭಿಕ ರಾಬಿನ್‌ ಉತ್ತಪ್ಪ, ಶುಭಮನ್‌ ಗಿಲ್‌ ನಾಯಕತ್ವವನ್ನು ಟೀಕಿಸಿದ್ದಾರೆ. ಇದರ ಪರಿಣಾಮವಾಗಿ ಗುಜರಾತ್‌, ಎಲಿಮಿನೇಟರ್‌ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ದೂರಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ತಂಡ, ರೋಹಿತ್‌ ಶರ್ಮಾ (81) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 228 ರನ್‌ಗಳನ್ನು ಕಲೆ ಹಾಕಿತ್ತು. ಗುಜರಾತ್‌ ಟೈಟನ್ಸ್‌ ತಂಡದ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲ್‌ ಮಾಡುವಲ್ಲಿ ವಿಫಲರಾಗಿದ್ದರು. ಇದರ ಪರಿಣಾಮ ದೊಡ್ಡ ಮೊತ್ತವನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಡಬೇಕಾಗಿತ್ತು.

MI vs GT: ಗುಜರಾತ್‌ ಟೈಟನ್ಸ್‌ ಕನಸು ಭಗ್ನ, ಎರಡನೇ ಕ್ವಾಲಿಫೈಯರ್‌ಗೆ ಮುಂಬೈ ಇಂಡಿಯನ್ಸ್‌!

ಬಳಿಕ ಗುರಿ ಹಿಂಬಾಲಿಸಿದ್ದ ಗುಜರಾತ್‌ ಟೈಟನ್ಸ್‌ ತಂಡದ ಸಾಯಿ ಸುದರ್ಶನ್‌ (80) ಹಾಗೂ ವಾಷಿಂಗ್ಟನ್‌ ಸುಂದರ್‌ (48) ಅವರು ಕಠಿಣ ಹೋರಾಟ ನಡೆಸಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಗುಜರಾತ್‌ ಟೈಟನ್ಸ್‌ ತಂಡ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಶುಭಮನ್‌ ಗಿಲ್‌, ಶೆರ್ಫೆನ್‌ ಋದರ್‌ಫೋರ್ಡ್‌, ಶಾರುಖ್‌ ಖಾನ್‌, ಕುಸಾಲ್‌ ಮೆಂಡಿಸ್‌ ವೈಫಲ್ಯ ಅನುಭವಿಸಿದ್ದರು.

ಜಿಯೊ ಸ್ಟಾರ್‌ ಜೊತೆ ಮಾತನಾಡಿದ ರಾಬಿನ್‌ ಉತ್ತಪ್ಪ, "ಗುಜರಾತ್‌ ಟೈಟನ್ಸ್‌ ತಂಡದ ತಂತ್ರವು ಪೂರ್ವಭಾವಿಯಾಗಿರುವುದಕ್ಕಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಅವರ ಯಶಸ್ಸಿನ ಹೊರತಾಗಿಯೂ, ಪ್ರಸಿಧ್‌ ಕೃಷ್ಣ ಅವರನ್ನು ಪವರ್‌ಪ್ಲೇನಲ್ಲಿ ಬಳಸುವುದು ತಪ್ಪು ಹೆಜ್ಜೆಯಾಗಿತ್ತು. ಅವರ ಮೊದಲ ಓವರ್ ದುಬಾರಿಯಾಗಿತ್ತು ಮತ್ತು ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವಲ್ಲಿ ವಿಫಲರಾಗಿದ್ದರು. 26 ರನ್ ಮತ್ತು 22 ರನ್ ನೀಡಿದ ಓವರ್‌ಗಳು ದುಬಾರಿಯಾಗಿದ್ದವು. ಇದರ ಜೊತೆಗೆ, ಅವರ ಫೀಲ್ಡಿಂಗ್ ತುಂಬಾ ನಿರಾಸೆ ಮೂಡಿಸಿತ್ತು. ನೀವು ಅಷ್ಟೊಂದು ಕ್ಯಾಚ್‌ಗಳನ್ನು ಬಿಟ್ಟು ಚಾಂಪಿಯನ್‌ಶಿಪ್ ಗೆಲ್ಲಲು ಸಾಧ್ಯವಾಗುವುದಿಲ್ಲ," ಎಂದು ದೂರಿದ್ದಾರೆ.

GT vs MI: ಸಾಯಿ ಕಿಶೋರ್‌ ಓವರ್‌ನಲ್ಲಿ 26 ರನ್‌ ಸಿಡಿಸಿದ ಜಾನಿ ಬೈರ್‌ಸ್ಟೋವ್‌!

ಲೀಗ್‌ ಹಂತದ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡಿದ್ದ ಪ್ರಸಿಧ್‌ ಕೃಷ್ಣ ಅವರು ಎಲಿಮಿನೇಟರ್‌ ಪಂದ್ಯದಲ್ಲಿ ದುಬಾರಿಯಾಗಿದ್ದರು. ಅವರು ತಮ್ಮ ನಾಲ್ಕು ಓವರ್‌ಗಳಿಗೆ 52 ರನ್‌ಗಳನ್ನು ನೀಡಿ ಎರಡು ವಿಕೆಟ್‌ ಕಿತ್ತಿದ್ದರು. ಆದರೆ, ಇವರು ರೋಹಿತ್‌ ಶರ್ಮಾ ಮತ್ತು ನಮನ್‌ ಧೀರ್‌ ಅವರನ್ನು ಔಟ್‌ ಮಾಡಿದ್ದರು. ಬಲಗೈ ವೇಗಿ ಈ ಟೂರ್ನಿಯಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.