Ranji Trophy: 2 ಪಂದ್ಯಗಳಿಂದ 15 ವಿಕೆಟ್ ಕಿತ್ತು ಬಿಸಿಸಿಐಗೆ ಸಂದೇಶ ರವಾನಿಸಿದ ಮೊಹಮ್ಮದ್ ಶಮಿ!
ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ ಎರಡು ಪಂದ್ಯಗಳಿಂದ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ 15 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೂ ಮುನ್ನ ಶಮಿ, ಬಿಸಿಸಿಐ ಚೀಫ್ ಸೆಲೆಕ್ಟರ್ಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.
ಎರಡು ಪಂದ್ಯಗಳಿಂದ 15 ವಿಕೆಟ್ ಕಿತ್ತು ಬಿಸಿಸಿಐಗೆ ಮೊಹಮ್ಮದ್ ಶಮಿ ಸಂದೇಶ ರವಾನಿಸಿದ್ದಾರೆ. -
ನವದೆಹಲಿ: ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮೊಹಮ್ಮದ್ ಶಮಿ (Mohammed Shami) ಬಿಸಿಸಿಐ ಆಯ್ಕೆದಾರರಿಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ತಾವು ಆಡಿದ ಎರಡು ಪಂದ್ಯಗಳಿಂದ ಹಿರಿಯ ವೇಗಿ 15 ವಿಕೆಟ್ಗಳೊಂದಿಗೆ ತಮ್ಮ ಫಿಟ್ನೆಸ್ ಬಗ್ಗೆ ಪ್ರಶ್ನಿಸಿದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ಗೆ (Ajit Agarkar) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸಂಪೂರ್ಣವಾಗಿ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. ಫಿಟ್ ಆಗಿದ್ದರೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಹಿಂದಿನ ಟೆಸ್ಟ್ ಸರಣಿಗೆ ಆಯ್ಕೆಯಾಗದಿದ್ದಕ್ಕೆ ಶಮಿ ಅತೃಪ್ತರಾಗಿದ್ದರು. ಇದೀಗ ರಣಜಿ ಟ್ರೋಫಿ ಟೂರ್ನಿಯಲ್ಲಿ ಅವರ ಪ್ರದರ್ಶನದ ಬಳಿಕ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಒಂದು ತಿಂಗಳ ಹಿಂದೆ ಮೊಹಮ್ಮದ್ ಶಮಿ ಟೆಸ್ಟ್ ತಂಡಕ್ಕೆ ಮರಳುವ ಬಗ್ಗೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರನ್ನು ಪ್ರಶ್ನೆ ಕೇಳಿದ್ದಾಗ ಅವರು ಪ್ರತಿಕ್ರಿಯಿಸಿ, ಶಮಿ ಫಿಟ್ನೆಸ್ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದಾಗ್ಯೂ, ಶಮಿ ಫಿಟ್ ಆಗಿದ್ದರೆ, ಅವರು ಖಂಡಿತವಾಗಿಯೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಹೋಗುತ್ತಿದ್ದರು ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದರು. ಮತ್ತೊಂದೆಡೆ, ಶಮಿ ಈ ನಿರ್ಧಾರದಿಂದ ಅತೃಪ್ತರಾಗಿದ್ದರು ಮತ್ತು ತಾವು ಫಿಟ್ ಆಗಿರುವುದಾಗಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸಿದ್ಧರಿರುವುದಾಗಿ ಘೋಷಿಸಿಕೊಂಡಿದ್ದರು. ಆ ಮೂಲಕ ಚೀಫ್ ಸೆಲೆಕ್ಟರ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು.
IND vs AUS: ಭಾರತ ತಂಡದಲ್ಲಿರುವ ಸವಾಲುದಾಯಕ ಆಟಗಾರನನ್ನು ಹೆಸರಿಸಿದ ಮಿಚೆಲ್ ಮಾರ್ಷ್!
ಇದೀಗ ಅಂತಿಮವಾಗಿ ಮೊಹಮ್ಮದ್ ಶಮಿ ಮೈದಾನದಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಬೇಕಾಯಿತು. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯು ಬಂಗಾಳದ ವೇಗದ ಬೌಲರ್ಗೆ ಆಯ್ಕೆದಾರರಿಗೆ ತನ್ನ ಸಂದೇಶವನ್ನು ಕಳುಹಿಸಲು ಅವಕಾಶ ನೀಡಿತು ಮತ್ತು ಅವರು ಅದನ್ನು ತನ್ನ ಶೈಲಿಯಲ್ಲಿ ಸಾಬೀತು ಮಾಡಿದ್ದಾರೆ. ಉತ್ತರಾಖಂಡ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ಏಳು ವಿಕೆಟ್ಗಳನ್ನು ಪಡೆದ ನಂತರ, ಅವರು ಗುಜರಾತ್ ವಿರುದ್ಧ ಎಂಟು ವಿಕೆಟ್ಗಳನ್ನು ಕಬಳಿಸಿದರು. ಈ ಪ್ರದರ್ಶನದಿಂದ ಬಂಗಾಳ ತಂಡ, ಐತಿಹಾಸಿಕ ಈಡನ್ ಗಾರ್ಡನ್ಸ್ನಲ್ಲಿ ಗುಜರಾತ್ ಅನ್ನು 141 ರನ್ಗಳಿಂದ ಸೋಲಿಸಲು ಸಹಾಯ ಮಾಡಿತು.
ಗುಜರಾತ್ ವಿರುದ್ಧ ಬಂಗಾಳ ತಂಡಕ್ಕೆ ಭರ್ಜರಿ ಜಯ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬಂಗಾಳ ತಂಡ, ಪ್ರಥಮ ಇನಿಂಗ್ಸ್ನಲ್ಲಿ 279 ರನ್ಗಳನ್ನು ಕಲೆ ಹಾಕಿತ್ತು. ಬಳಿಕ ಪ್ರಥಮ ಇನಿಂಗ್ಸ್ ಮಾಡಿದ್ದ ಗುಜರಾತ್ ತಂಡ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 167 ರನ್ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಬಂಗಾಳ ತಂಡಕ್ಕೆ 112 ರನ್ಗಳ ಮುನ್ನಡೆ ಕೊಟ್ಟಿತ್ತು. ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಸುದೀಪ್ ಘರಾಮಿ ಅರ್ಧಶತಕ ಗಳಿಸಿದರೆ, ಅನುಭವಿ ಆಟಗಾರ ಅನುಸ್ತಪ್ ಮಜುಂದಾರ್ 58 ರನ್ ಗಳಿಸಿದರು. ಶಹಬಾಜ್ ಅಹ್ಮದ್ ಮತ್ತು ಆಕಾಶ್ ದೀಪ್ ಕ್ರಮವಾಗಿ 20 ಮತ್ತು 25 ರನ್ಗಳನ್ನು ಸೇರಿಸಿದರು. ನಂತರ ದ್ವಿತೀಯ ಇನಿಂಗ್ಸ್ನಲ್ಲಿ ಬಂಗಾಳ ತಂಡ 214 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿತು, ಗುಜರಾತ್ಗೆ ಗೆಲ್ಲಲು 326 ರನ್ಗಳ ಗುರಿಯನ್ನು ನೀಡಿತು.
Mohammed Shami-Shahbaz Ahmed brilliance powers Bengal to six-point win over Gujarat at Eden Gardens. 🔥🔥🔥
— XtraTime (@xtratimeindia) October 28, 2025
Bengal: 279
Gujarat: 167
Bengal: 214/8 d
Gujarat: 185
Bengal won by 141 runs#RanjiTrophy #RanjiTrophy2025_26 #MohammedShami #BengalRanjiTeam #EdenGardens #XtraTime pic.twitter.com/CJvuBqOd19
ಗುರಿಯನ್ನು ಬೆನ್ನಟ್ಟಿದ ಗುಜರಾತ್ 50 ರನ್ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಉರ್ವಿ ಪಟೇಲ್ ಅದ್ಭುತ ಶತಕ ಗಳಿಸಿದರು, ಇದು ತಂಡಕ್ಕೆ ನಿರ್ಣಾಯಕವಾಗಿತ್ತು. ಜಯಮೀತ್ ಪಟೇಲ್ 45 ರನ್ ಗಳಿಸಿದರು, ಆದರೆ ಇತರ ಆಟಗಾರರ ಕೊಡುಗೆಗಳು ಅತ್ಯಲ್ಪವಾಗಿದ್ದವು. ಗುಜರಾತ್ನ ಎಂಟು ಬ್ಯಾಟ್ಸ್ಮನ್ಗಳು ಒಂದಂಕಿ ಗಳಿಸುವಲ್ಲಿ ಶಕ್ತವಾದರು. ಆದರೆ ಬಂಗಾಳದ ಬೌಲರ್ಗಳು ವಿನಾಶಕಾರಿ ಪ್ರದರ್ಶನ ನೀಡಿದರು. ಶಮಿ ಐದು ವಿಕೆಟ್ಗಳನ್ನು ಪಡೆದರು, ಆದರೆ ಶಹಬಾಜ್ ಮೂರು ವಿಕೆಟ್ಗಳನ್ನು ಪಡೆದರು. ಅಂತಿಮವಾಗಿ ಬಂಗಾಳ ಭರ್ಜರಿ ಜಯವನ್ನು ದಾಖಲಿಸಿತು.
ಶಮಿಗೆ ಎರಡು ಪಂದ್ಯಗಳಲ್ಲಿ 15 ವಿಕೆಟ್ಗಳು
ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯ ಎರಡು ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಒಟ್ಟು 15 ವಿಕೆಟ್ಗಳನ್ನು ಪಡೆದಿದ್ದಾರೆ. ನವೆಂಬರ್ 14 ರಂದು ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ತಂಡದಲ್ಲಿ ಶಮಿಗೆ ಸ್ಥಾನ ಸಿಗಲಿದೆಯೇ? ಎಂದು ಕಾದು ನೋಡಬೇಕಾಗಿದೆ.