ತಮ್ಮ ಕಠಿಣ ದಿನಗಳಲ್ಲಿ ರಿಷಭ್ ಪಂತ್ ಬಿಟ್ರೆ ಬೇರೆ ಯಾರೂ ಕರೆ ಮಾಡಿರಲಿಲ್ಲ: ಪೃಥ್ವಿ ಶಾ!
ಬಲಗೈ ಸ್ಪೋಟಕ ಬ್ಯಾಟ್ಸ್ಮನ್ ಪೃಥ್ವಿ ಶಾ ಸದ್ಯ ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಪೃಥ್ವಿ ಶಾ, ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲದೆ ರಿಷಭ್ ಪಂತ್ ಅವರ ಬಗ್ಗೆಯೂ ಮುಂಬೈ ಬ್ಯಾಟ್ಸ್ಮನ್ ಉಲ್ಲೇಖಿಸಿದ್ದಾರೆ.

ರಿಷಭ್ ಪಂತ್ ಬಿಟ್ಟರೆ ಬೇರೆ ಯಾರೂ ನನಗೆ ಕರೆ ಮಾಡಿರಲಿಲ್ಲ: ಪೃಥ್ವಿ ಶಾ

ನವದೆಹಲಿ: ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದ ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮುಂಬೈ (Mumbai) ಬ್ಯಾಟ್ಸ್ಮನ್ ಪೃಥ್ವಿ ಶಾ (Prithvi shaw) ಸದ್ಯ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲಿಯೇ ಶತಕ ಬಾರಿಸಿದ್ದ ಪೃಥ್ವಿ ಶಾ, ಭಾರತ ತಂಡದ ಭವಿಷ್ಯದ ಸ್ಟಾರ್ ಆಟಗಾರ ಎಂದು ಹೇಳಲಾಗಿತ್ತು. ಆದರೆ, ಅವರು ಗಾಯದಿಂದಾಗಿ ಭಾರತ ತಂಡದಲ್ಲಿ (India) ಸ್ಥಾನ ಕಳೆದುಕೊಂಡ ಬಳಿಕ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದರು. ಒವರು 2021ರಲ್ಲಿ ಭಾರತ ತಂಡದ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
ಕಳೆದ ದೇಶಿ ಆವೃತ್ತಿಯಲ್ಲಿ ಮುಂಬೈ ರಣಜಿ ತಂಡದಿಂದ ಪೃಥ್ವಿ ಶಾ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು. ಏಕೆಂದರೆ ಸಂಪೂರ್ಣ ಫಿಟ್ನೆಸ್ ಕಳೆದುಕೊಂಡಿದ್ದ ಅವರು ಸೈಯರ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ನಲ್ಲಿ ವೈಫಲ್ಯವನ್ನು ಅನುಭವಿಸಿದ್ದರು. ಇದರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಅಲ್ಲದೆ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನಲ್ಲಿಯೂ ಅವರನ್ನು ಖರೀದಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿರಲಿಲ್ಲ. ಹೀಗಾಗಿ ಅವರು ಅನ್ಸೋಲ್ಡ್ ಆಗಿದ್ದರು.
Prithvi Shaw: ಸಹವಾಸ ದೋಷದಿಂದಾಗಿ ಕ್ರಿಕೆಟ್ ವೃತ್ತಿ ಬದುಕು ಹಾಳು ಮಾಡಿಕೊಂಡೆ; ಪೃಥ್ವಿ ಶಾ
ರಿಷಭ್ ಪಂತ್ ಬೆಂಬಲ ನೀಡಿದ್ದರು: ಪೃಥ್ವಿ ಶಾ
ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಕಠಿಣ ಸಂದರ್ಭಗಳಲ್ಲಿ ಭಾರತ ಟೆಸ್ಟ್ ತಂಡದ ಉಪ ನಾಯಕ ರಿಷಭ್ ಪಂತ್ ಬೆಂಬಲ ನೀಡುತ್ತಿದ್ದರು ಎಂದು ಪೃಥ್ವಿ ಶಾ ಇತ್ತೀಚೆಗೆ ಭಾಗವಹಿಸಿದ್ದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. "ರಿಷಭ್ ಪಂತ್ ಅವರು ಏನಾದರೂ ತಪ್ಪಾಗಿದೆ ಎಂದು ಅನಿಸಿದಾಗಲೆಲ್ಲಾ ಅವರು ನನ್ನನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದರು," ಎಂದು ಪೃಥ್ವಿ ಶಾ ನ್ಯೂಸ್ 24ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸಾಕಷ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ
ಕ್ರಿಕೆಟ್ಗೆ ಕಡಿಮೆ ಸಮಯ ನೀಡುವ ಸೇರಿದಂತೆ ತಮ್ಮ ಜೀವನದಲ್ಲಿ ಸಾಕಷ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆಂದು 25ರ ವಯಸ್ಸಿನ ಬ್ಯಾಟ್ಸ್ಮನ್ ಒಪ್ಪಿಕೊಂಡಿದ್ದಾರೆ. ತಮ್ಮ ಹಾದಿಯುದ್ದಕ್ಕೂ ಗೊಂದಲಗಳಿದ್ದವು ಎಂದು ಅವರು ಹೇಳಿದ್ದಾರೆ. ಕೆಲವು ತಪ್ಪು ಸ್ನೇಹಿತರನ್ನು ಮಾಡಿಕೊಂಡಿದ್ದೆ ಮತ್ತು ಅವರು ತಮ್ಮನ್ನು ಟ್ರ್ಯಾಕ್ನಿಂದ ದೂರ ಕರೆದೊಯ್ದರು ಎಂದು ಬಲಗೈ ಬ್ಯಾಟ್ಸ್ಮನ್ ಬಹಿರಂಗಪಡಿಸಿದರು.
ಮುಂಬೈ ತಂಡವನ್ನು ತೊರೆಯಲು ಅಸಲಿ ಕಾರಣ ಬಹಿರಂಗಪಡಿಸಿದ ಪೃಥ್ವಿ ಶಾ!
"ನಾನು ಜೀವನದಲ್ಲಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ನಾನು ಕ್ರಿಕೆಟ್ಗೆ ಕಡಿಮೆ ಸಮಯ ನೀಡಲು ಪ್ರಾರಂಭಿಸಿದೆ. ನಾನು ಬಹಳಷ್ಟು ಅಭ್ಯಾಸ ಮಾಡುತ್ತಿದ್ದೆ. ಉದಾಹರಣೆಗೆ, ನಾನು ನೆಟ್ಸ್ನಲ್ಲಿ 3-4 ಗಂಟೆಗಳ ಕಾಲ ಬ್ಯಾಟಿಂಗ್ ಮಾಡುತ್ತಿದ್ದೆ. ಬ್ಯಾಟಿಂಗ್ನಲ್ಲಿ ನನಗೆ ಎಂದಿಗೂ ಆಯಾಸವಾಗುತ್ತಿರಲಿಲ್ಲ. ನಾನು ಅರ್ಧ ದಿನ ಮೈದಾನಕ್ಕೆ ಹೋಗುತ್ತಿದ್ದೆ. ನಂತರ ನನಗೆ ಗೊಂದಲವಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ," ಎಂದು ಪೃಥ್ವಿ ಶಾ ತಿಳಿಸಿದ್ದಾರೆ.
"ಇದಾದ ನಂತರ ನಾನು ಅನಗತ್ಯ ವಿಷಯಗಳನ್ನು ಅಗತ್ಯವೆಂದು ಪರಿಗಣಿಸಲು ಪ್ರಾರಂಭಿಸಿದೆ. ನಾನು ಕೆಲ ತಪ್ಪು ಸ್ನೇಹಿತರನ್ನು ಮಾಡಿಕೊಂಡೆ. ಏಕೆಂದರೆ ಆ ಸಮಯದಲ್ಲಿ ನಾನು ಉನ್ನತ ಸ್ಥಾನದಲ್ಲಿದ್ದೆ. ಹಾಗಾಗಿ ಸ್ನೇಹ ಸುಲಭವಾಗಿ ಆಗುತ್ತದೆ. ನಂತರ ಅವರು ನನ್ನನ್ನು ಇಲ್ಲಿಗೆ ಮತ್ತು ಅಲ್ಲಿಗೆ ಕರೆದೊಯ್ದರು. ಆ ಎಲ್ಲಾ ವಿಷಯಗಳಿಂದಾಗಿ ನಾನು ಟ್ರ್ಯಾಕ್ನಿಂದ ದೂರ ಸರಿದೆ. ನಾನು ಎಂಟು ಗಂಟೆಗಳ ಕಾಲ ನೆಲದ ಮೇಲೆ ಅಭ್ಯಾಸ ಮಾಡುತ್ತಿದ್ದೆ. ಈಗ ನಾಲ್ಕು ಗಂಟೆಗಳು," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.