ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂಬೈ ತಂಡವನ್ನು ತೊರೆಯಲು ಅಸಲಿ ಕಾರಣ ಬಹಿರಂಗಪಡಿಸಿದ ಪೃಥ್ವಿ ಶಾ!

ಸ್ಟಾರ್‌ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರು ಮುಂಬೈ ತಂಡವನ್ನು ತೊರೆಯಲು ಮುಂದಾಗಿದಾರೆ. ಅವರು ಮುಂದಿನ ದೇಶಿ ಋತುವಿನಲ್ಲಿ ಬೇರೆ ರಾಜ್ಯವನ್ನು ಪ್ರತಿನಿಧಿಸಲು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೋರಿ ಯುವ ಬ್ಯಾಟ್ಸ್‌ಮನ್‌ ಪತ್ರವನ್ನು ಬರೆದಿದ್ದಾರೆ.

ಮುಂಬೈ ತಂಡವನ್ನು ತೊರೆಯಲು ಕಾರಣ ತಿಳಿಸಿದ ಪೃಥ್ವಿ ಶಾ!

ಮುಂಬೈ ತಂಡವನ್ನು ತೊರೆಯಲು ಮುಂದಾದ ಪೃಥ್ವಿ ಶಾ.

Profile Ramesh Kote Jun 23, 2025 6:49 PM

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸ್ಟಾರ್‌ ಬ್ಯಾಟ್ಸ್‌ಮನ್‌ ಪೃಥ್ವಿ ಶಾ (Prithvi Shaw) ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಕಳಪೆ ಫಿಟ್ನೆಸ್ ಕಾರಣ ಅವರನ್ನು ಮುಂಬೈನ ದೇಶಿ ತಂಡದಿಂದ ಕೈಬಿಡಲಾಗಿತ್ತು. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಮೆಗಾ ಹರಾಜಿನಲ್ಲಿಯೂ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲು ಮನಸು ಮಾಡಿರಲಿಲ್ಲ. ಹಿನ್ನೆಲೆಯಲ್ಲಿ ಅವರು ಅನ್‌ಸೋಲ್ಡ್‌ ಆಗಿದ್ದರು. ಇದರ ನಡುವೆ ಪೃಥ್ವಿ ಶಾ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮುಂದಿನ ವರ್ಷ ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ಋತುವಿನಿಂದ ಮುಂಬೈತ ತಂಡದ ಪರ ಆಡುವುದಿಲ್ಲ. ಇದಕ್ಕಾಗಿ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ( NOC) ಕೋರಿದ್ದಾರೆ. ಮೂರು-ನಾಲ್ಕು ರಾಜ್ಯಗಳಿಂದ ಆಡಲು ಆಫರ್‌ಗಳು ಬಂದಿವೆ ಎಂದು ಪೃಥ್ವಿ ಶಾ ತಿಳಿಸಿದ್ದಾರೆ.

ಕ್ರಿಕ್‌ಬಜ್ ಜೊತೆ ಮಾತನಾಡಿದ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷ ಅಭಯ್ ಪ್ರತಾಪ್, "ಪೃಥ್ವಿ ಶಾ ನಮ್ಮಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಕೇಳಿದ್ದಾರೆ ಮತ್ತು ನಾವು ಶೀಘ್ರದಲ್ಲೇ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ," ಎಂದು ಹೇಳಿದ್ದಾರೆ. ಪೃಥ್ವಿ ಶಾ ಮತ್ತೆ ಮುಂಬೈ ತಂಡಕ್ಕೆ ಆಡಲು ಬಯಸಿದರೆ, ಅವರು ತಮ್ಮ ಫಿಟ್‌ನೆಸ್‌ನತ್ತ ಗಮನಹರಿಸಬೇಕು ಮತ್ತು ತೂಕ ಇಳಿಸಿಕೊಳ್ಳಬೇಕು ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎಂಸಿಎ ಆಯ್ಕೆ ಸಮಿತಿಯು ನಿರ್ಧರಿಸಿತ್ತು. ಮಂಡಳಿಯು ಅವರಿಗಾಗಿ ಫಿಟ್‌ನೆಸ್ ಯೋಜನೆಯನ್ನು ಸಹ ಸಿದ್ಧಪಡಿಸಿತ್ತು, ಆದರೆ ಶಾ ಅವರ ಫಿಟ್‌ನೆಸ್‌ನಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇದರಿಂದಾಗಿ ಅವರಿಗೆ 2024ರ ಡಿಸೆಂಬರ್‌ನಲ್ಲಿ ನಡೆದಿದ್ದ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡಲು ಅವಕಾಶ ಸಿಗಲಿಲ್ಲ.

IND vs ENG: ಕಪಿಲ್‌ ದೇವ್‌ಗಿಂತ ಜಸ್‌ಪ್ರೀತ್‌ ಬುಮ್ರಾ ಉತ್ತಮ ಎಂದ ರವಿ ಶಾಸ್ತ್ರಿ!

2018 ಪೃಥ್ವಿ ಶಾ ಟೀಮ್ ಇಂಡಿಯಾ ಪರ ಪದಾರ್ಪಣೆ

ಪೃಥ್ವಿ ಶಾ 2018ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರನ್ನು ಭಾರತದ ಉದಯೋನ್ಮುಖ ತಾರೆ ಎಂದು ಪರಿಗಣಿಸಲಾಗಿತ್ತು, ಆದರೆ ಅವರು ತಂಡದ ನಿರೀಕ್ಷೆಗಳಿಗೆ ತಕ್ಕಂತೆ ಪಾತ್ರ ನಿರ್ವಹಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರನ್ನು ಭಾರತ ತಂಡದಿಂದ ಕೈಬಿಡಲಾಯಿತು. ಶಾ ಇದುವರೆಗೆ ಭಾರತ ಪರ 5 ಟೆಸ್ಟ್, ಒಂದು ಏಕದಿನ ಪಂದ್ಯ ಮತ್ತು ಒಂದು ಟಿ20ಐ ಪಂದ್ಯವನ್ನು ಆಡಿದ್ದಾರೆ. ಪೃಥ್ವಿ ಶಾ 2022ರ ವಿಜಯ್ ಹಝಾರೆ ಟ್ರೋಫಿಯಲ್ಲಿ ಭಾರತದಲ್ಲಿ ತಮ್ಮ ಕೊನೆಯ ಲಿಸ್ಟ್-ಎ ಪಂದ್ಯವನ್ನು ಆಡಿದ್ದರು. ಕಳೆದ ದೇಶಿ ಋತುವಿನಲ್ಲಿ ಅವರು ಇಂಗ್ಲಿಷ್ ಕೌಂಟಿ ತಂಡ ನಾರ್ಥ್‌ಹ್ಯಮ್ಟನ್‌ಶೈರ್ ಪರ ಆಡಿದ್ದರು. ಅಲ್ಲಿ ಅವರು ಐದು ಇನಿಂಗ್ಸ್‌ಗಳಲ್ಲಿ 218 ರನ್ ಗಳಿಸಿದ್ದರು.



ಎನ್‌ಒಸಿ ಪಡೆಯಲು ಕಾರಣ ತಿಳಿಸಿದ ಪೃಥ್ವಿ ಶಾ

"ನನ್ನ ವೃತ್ತಿಜೀವನದ ಈ ಹಂತದಲ್ಲಿ, ಬೇರೆ ರಾಜ್ಯ ಅಸೋಸಿಯೇಷನ್‌ ಪರ ವೃತ್ತಿಪರ ಕ್ರಿಕೆಟ್ ಆಡಲು ನನಗೆ ಉತ್ತಮ ಅವಕಾಶ ಸಿಕ್ಕಿದೆ. ಇದು ಕ್ರಿಕೆಟಿಗನಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲು ಮತ್ತು ಪ್ರಗತಿ ಸಾಧಿಸಲು ನನಗೆ ಅನುವು ಮಾಡಿಕೊಡುತ್ತದೆ ಎಂದು ನಾನು ನಂಬುತ್ತೇನೆ. ಈ ದೃಷ್ಟಿಯಿಂದ, ಮುಂಬರುವ ದೇಶಿ ಋತುವಿನಲ್ಲಿ ಹೊಸ ರಾಜ್ಯವನ್ನು ಅಧಿಕೃತವಾಗಿ ಪ್ರತಿನಿಧಿಸಲು ಸಾಧ್ಯವಾಗುವಂತೆ ನನಗೆ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡುವಂತೆ ನಾನು ವಿನಮ್ರವಾಗಿ ವಿನಂತಿಸುತ್ತೇನೆ," ಎಂದು ಪೃಥ್ವಿ ಶಾ ಎಂಸಿಎಗೆ ಮನವಿ ಮಾಡಿದ್ದಾರೆ.

IND vs ENG: ಕೆಎಲ್‌ ರಾಹುಲ್‌ ಭಾರತದ ಅತ್ಯುತ್ತಮ ಟಸ್ಟ್‌ ಬ್ಯಾಟ್ಸ್‌ಮನ್‌ ಎಂದ ಚೇತೇಶ್ವರ್‌ ಪೂಜಾರ!

"ಮುಂಬೈ ತಂಡವನ್ನು ಪ್ರತಿನಿಧಿಸಲು ಮೌಲ್ಯಯುವ ಅವಕಾಶಗಳು ಹಾಗೂ ಅಚಲ ಬೆಂಬಲವನ್ನು ನೀಡಿದ್ದಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ)ಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ," ಎಂದು ಬಲಗೈ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.

"ಎಂಸಿಎ ತಂಡದ ಭಾಗವಾಗಲು ಇದು ನಿಜಕ್ಕೂ ಗೌರವ ಮತ್ತು ಸವಲತ್ತು ಹಾಗೂ ನಾನು ಇಲ್ಲಿ ಪಡೆದ ಅನುಭವ ಮತ್ತು ಅನುಭವಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ," ಎಂದು ಪೃಥ್ವಿ ಶಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.