ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TNPL 2025: ಅಂಪೈರ್‌ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ ಆರ್‌ ಅಶ್ವಿನ್‌ಗೆ ದಂಡ!

ತಿರುಪ್ಪೂರು ತಮಿಳನ್ಸ್‌ ವಿರುದ್ಧದ 2025ರ ತಮಿಳುನಾಡು ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಅಂಪೈರ್‌ ತೀರ್ಪಿನ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿದ ದಿಂಡಿಗಲ್‌ ಡ್ರ್ಯಾಗನ್ಸ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌ಗೆ ದಂಡವನ್ನು ವಿಧಿಸಲಾಗಿದೆ. ಈ ಪಂದ್ಯ ಕೊಯಮತ್ತೂರಿನಲ್ಲಿ ನಡೆದಿತ್ತು.

ಅಂಪೈರ್‌ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ ಅಶ್ವಿನ್‌ಗೆ ದಂಡ!

ಅಂಪೈರ್‌ ತೀರ್ಮಾನವನ್ನು ವಿರೋಧಿಸಿದ ಆರ್‌ ಅಶ್ವಿನ್‌ಗೆ ದಂಡ.

Profile Ramesh Kote Jun 10, 2025 4:07 PM

ಚೆನ್ನೈ: ಭಾನುವಾರ ಕೊಯಮತ್ತೂರಿನಲ್ಲಿ ತಿರುಪ್ಪೂರು ತಮಿಳನ್ಸ್‌ ವಿರುದ್ಧದ 2025ರ ತಮಿಳುನಾಡು ಪ್ರೀಮಿಯರ್‌ ಲೀಗ್‌ (TNPL 2025) ಟೂರ್ನಿಯ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ ದಿಂಡಿಗಲ್‌ ಡ್ರ್ಯಾಗನ್ಸ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌ಗೆ (R Ashwin) ಪಂದ್ಯದ ಸಂಭಾವನೆಯಲ್ಲಿ ಶೇ 30ರಷ್ಟು ದಂಡವನ್ನು ವಿಧಿಸಲಾಗಿದೆ. ಈ ಪಂದ್ಯದಲ್ಲಿ ತಿರುಪ್ಪೂರು ತಮಿಳನ್ಸ್‌ (Tiruppur Tamizhans) ತಂಡ 9 ವಿಕೆಟ್‌ಗಳಿಂದ ದಿಂಡಿಗಲ್‌ ಡ್ರ್ಯಾಗನ್ಸ್‌ (Dindigul Dragons) ತಂಡವನ್ನು ಮಣಿಸಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ದಿಂಡಿಗಲ್‌ ಡ್ರ್ಯಾಗನ್ಸ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಆರ್‌ ಅಶ್ವಿನ್‌, 11 ಎಸೆತಗಳಲ್ಲಿ 18 ರನ್‌ಗಳನ್ನು ಸಿಡಿಸಿದ್ದರು. ಆದರೆ, ಐದನೇ ಓವರ್‌ನ ಐದನೇ ಎಸೆತದಲ್ಲಿ ಸಾಯಿ ಕಿಶೋರ್‌ಗೆ ಅಶ್ವಿನ್‌ ಸ್ವೀಪ್‌ ಶಾಟ್‌ ಹೊಡೆಯಲು ಪ್ರಯತ್ನ ನಡೆಸಿದರು. ಆದರೆ, ಚೆಂಡನ್ನು ಅರಿಯುವಲ್ಲಿ ವಿಫಲರಾಗಿ ಪ್ಯಾಡ್‌ ಮೇಲೆ ಹಾಕಿಕೊಂಡರು. ಈ ವೇಳೆ ಅಂಪೈರ್‌ ಕೃತಿಕಾ ಎಲ್‌ಬಿಡಬ್ಲ್ಯುಗೆ ಬಲೆಗೆ ಬಿದ್ದರು. ಚೆಂಡು ಲೆಗ್‌ ಸ್ಟಂಪ್‌ಗೆ ನೇರವಾಗಿತ್ತು. ಈ ವೇಳೆ ಡ್ರ್ಯಾಗನ್ಸ್‌ ತಂಡಕ್ಕೆ ರಿವ್ಯೂವ್‌ ಇರಲಿಲ್ಲ. ಏಕೆಂದರೆ ವೈಡ್‌ ಬಾಲ್‌ಗಳಿಗೆ ಎರಡು ಬಾರಿ ರಿವ್ಯೂವ್‌ ಪಡೆಯಲಾಗಿತ್ತು.

R Ashwin Loses Cool: ಔಟ್‌ ವಿಚಾರವಾಗಿ ಮಹಿಳಾ ಅಂಪೈರ್‌ ಜತೆ ವಾಗ್ವಾದ ನಡೆಸಿದ ಅಶ್ವಿನ್

ಎಲ್‌ಬಿಡಬ್ಲ್ಯು ನೀಡಿದ್ದ ಅಂಪೈರ್‌ ತೀರ್ಮಾನವನ್ನು ಆರ್‌ ಅಶ್ವಿನ್‌ ಪ್ರಶ್ನೆ ಮಾಡಿದರು. ಅಲ್ಲದೆ ಕೆಲ ಕಾಲ ಅಂಪೈರ್‌ಗಳ ಜೊತೆ ಅಶ್ವಿನ್‌ ಪಿಚ್‌ ಕಡೆ ಬೆರಳು ಮಾಡಿ ತೋರಿಸಿ ವಾಗ್ವಾದ ನಡೆಸಿದ್ದರು. ಅಂತಿಮವಾಗಿ ಅಸಮಾಧಾನದೊಂದಿಗೆ ಆರ್‌ ಅಶ್ವಿನ್‌ ಪೆವಿಲಿಯನ್‌ಗೆ ಮರಳಿದರು. ತಮ್ಮ ಬ್ಯಾಟ್‌ಗೆ ಚೆಂಡು ತಾಗಿದೆ ಎಂಬುದು ಅಶ್ವಿನ್‌ ಅವರ ವಾದವಾಗಿತ್ತು. ಡಗ್‌ಔಟ್‌ಗೆ ತೆರಳಿದ್ದ ಅವರು ತಮ್ಮ ಗ್ಲೌಸ್‌ ಅನ್ನು ಆಕ್ರೋಶದೊಂದಿಗೆ ಎಸೆದಿದ್ದರು. ಪಂದ್ಯದ ಬಳಿಕ ಅಶಿಸ್ತು ವರ್ತನೆಯಿಂದ ಅಶ್ವಿನ್‌ಗೆ ದಂಡವನ್ನು ವಿಧಿಸಲಾಯಿತು.

"ಕ್ರಿಕೆಟ್‌ಗೆ ಸಂಬಂಧಿಸಿದ ವಸ್ತುಗಳನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಆರ್‌ ಅಶ್ವಿನ್‌ಗೆ ಪಂದ್ಯದ ಸಂಭಾವನೆಯಲ್ಲಿ ಶೇ 20 ರಷ್ಟು ದಂಡ ಹಾಗೂ ಅಂಪೈರ್‌ ಜೊತೆ ಅನುಚಿತವಾಗಿ ವರ್ತಿಸಿದ ಕಾರಣ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 10 ರಷ್ಟು ದಂಡವನ್ನು ವಿಧಿಸಲಾಗಿದೆ. ಇದನ್ನು ಅವರು ಸ್ವೀಕರಿಸಿದ್ದಾರೆ," ಎಂದು ಟಿಎನ್‌ಪಿಎಲ್‌ ಅಧೀಕಾರಿಯೊಬ್ಬರು ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ.

IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

ಇನ್ನು ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ದಿಂಡಿಗಲ್‌ ಡ್ರ್ಯಾಗನ್ಸ್‌ ತಂಡದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ ದೀರ್ಘಾವಧಿ ಬ್ಯಾಟ್‌ ಮಾಡುವಲ್ಲಿ ವಿಫಲರಾದರು. ಆರ್‌ ಅಶ್ವಿನ್‌ 18 ರನ್‌, ಶಿವಮ್‌ ಸಿಂಗ್‌ 30 ರನ್‌ ಹಾಗೂ ಆರ್‌ಕೆ ಜಯಂತ್‌ 18 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ದಿಂಡಿಗಲ್‌ ಡ್ರ್ಯಾಗನ್ಸ್‌ ತಂಡ 16.2 ಓವರ್‌ಗಳಿಗೆ ಕೇವಲ 93 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇನ್ನು ತಿರುಪ್ಪೂರು ತಮಿಳಯನ್ಸ್‌ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಎಸಾಕಿಮುತ್ತು 26 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು.

ಬಳಿಕ ಸುಲಭ ಗುರಿಯನ್ನು ಹಿಂಬಾಲಿಸಿದ ತಿರುಪ್ಪೂರು ತಮಿಳನ್ಸ್‌ ತಂಡ ಇನ್ನೂ 49 ಎಸೆತಗಳು ಬಾಕಿ ಇರುವಾಗಲೇ ಒಂದು ವಿಕೆಟ್‌ ನಷ್ಟಕ್ಕೆ 94 ರನ್‌ಗಳನ್ನು ಗಳಿಸಿತು. ಆ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ತುಷಾರ್‌ ರಹೇಜಾ ಅವರು 39 ಎಸೆತಗಳಲ್ಲಿ ಅಜೇಯ 65 ರನ್‌ಗಳನ್ನು ಗಳಿಸಿದರು.