ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻದಿಗ್ವೇಶ್‌ ರಾಠಿಯನ್ನು ಬ್ಯಾನ್‌ ಮಾಡಬಾರದಿತ್ತುʼ-ಎಲ್‌ಎಸ್‌ಜಿ ಬೌಲರ್‌ಗೆ ಸೆಹ್ವಾಗ್‌ ಬೆಂಬಲ!

Sehwag Defends Digvesh Rathi: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿ ಐಪಿಎಲ್‌ ನಿಯಮವನ್ನು ಉಲ್ಲಂಘಿಸಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಸ್ಪಿನ್ನರ್‌ ದಿಗ್ವೇಶ ರಾಠಿ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿತ್ತು. ಇದನ್ನು ವೀರೇಂದ್ರ ಸೆಹ್ವಾಗ್‌ ಖಂಡಿಸಿದ್ದಾರೆ ಹಾಗೂ ಎಲ್‌ಎಸ್‌ಜಿ ಸ್ಪಿನ್ನರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ರನ್‌ಔಟ್‌ ವಿವಾದಕ್ಕೀಡಾಗಿದ್ದ ದಿಗ್ವೇಶ್‌ ಸಿಂಗ್‌ಗೆ ವೀರು ಬೆಂಬಲ!

ದಿಗ್ವೇಶ್‌ ರಾಠಿಗೆ ಬೆಂಬಲ ವ್ಯಕ್ತಪಡಿಸಿದ ವೀರೇಂದ್ರ ಸೆಹ್ವಾಗ್‌.

Profile Ramesh Kote May 29, 2025 9:04 PM

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ತಮ್ಮ ನೋಟ್‌ ಬುಕ್‌ ಸೆಲೆಬ್ರೇಷನ್‌ ಮೂಲಕ ಲಖನೌ ಸೂಪರ್‌ ಜಯಂಟ್ಸ್‌ (LSG) ತಂಡದ ಸ್ಪಿನ್ನರ್‌ ದಿಗ್ವೇಶ್‌ ಸಿಂಗ್‌ ರಾಠಿ (Digvesh Singh Rathi) ಎಲ್ಲರ ಗಮನವನ್ನು ಸೆಳೆದಿದ್ದರು. ಆದರೆ, ಈ ಸೆಲೆಬ್ರೇಷನ್‌ನಿಂದಾಗಿ ಅವರು ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ. ಅವರು ಹಲವು ಪಂದ್ಯಗಳಲ್ಲಿ ದಂಡವನ್ನು ಕಟ್ಟುವ ಜತೆಗೆ ತಮ್ಮ ಚೊಚ್ಚಲ ಆವೃತ್ತಿಯಲ್ಲಿ ಒಟ್ಟು 5 ಡಿಮೆರಿಟ್‌ ಅಂಕಗಳನ್ನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿತ್ತು. ಐಪಿಎಲ್‌ ನಿಯಮಗಳ ಪ್ರಕಾರ ಒಬ್ಬ ಆಟಗಾರ ನಾಲ್ಕು ಬಾರಿ ಡಿಮೆರಿಟ್‌ ಅಂಕಗಳನ್ನು ಪಡೆದರೆ, ಅಂಥಾ ಆಟಗಾರನನ್ನು ಒಂದು ಪಂದ್ಯಕ್ಕೆ ಬ್ಯಾನ್‌ ಮಾಡಲಾಗುತ್ತದೆ.

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ತಮ್ಮ ನೋಟ್‌ ಬುಕ್‌ ಸೆಲೆಬ್ರೇಷನ್‌ ಮೂಲಕ ಅಭಿಷೇಕ್‌ ಶರ್ಮಾ ಅವರನ್ನು ಹೀಯಾಳಿಸಿದ್ದರು. ಈ ಪಂದ್ಯದ ಬಳಿಕ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿತ್ತು. ನಂತರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿಯೂ ಅವರು ತಮ್ಮ ನೋಟ್‌ಬುಕ್‌ ಸೆಲೆಬ್ರೇಷನ್‌ ಅನ್ನು ಮುಂದುವರಿಸಿದ್ದರು. ಜಿತೇಶ್‌ ಶರ್ಮಾ ಅವರನ್ನು ಔಟ್‌ ಮಾಡಿದ್ದ ಬಳಿಕ, ದಿಗ್ವೇಶ್‌ ಸಿಂಗ್‌ ನೋಟ್‌ ಬುಕ್‌ ಸೆಲೆಬ್ರೇಷನ್‌ ಮಾಡಿದ್ದರು. ಆದರೆ ಆ ಎಸೆತ ನೋ ಬಾಲ್‌ ಆಗಿತ್ತು. ನಂತರ ಮುಂದಿನ ಎಸೆತದಲ್ಲಿಯೇ ಜಿತೇಶ್‌ ಶರ್ಮಾ ಭರ್ಜರಿ ಸಿಕ್ಸರ್‌ ಬಾರಿಸಿ ತಿರುಗೇಟು ನೀಡಿದ್ದರು.

IPL 2025: ʻಆರ್‌ಸಿಬಿ ಈ ಸಲ ಕಪ್‌ ಗೆಲ್ಲುವುದು ಪಕ್ಕಾʼ-ಶೇನ್ ವ್ಯಾಟ್ಸನ್ ಭವಿಷ್ಯ ನಿಜವಾಗುತ್ತಾ?

ಅಲ್ಲದೇ ಇದೇ ಪಂದ್ಯದಲ್ಲಿ ನಾನ್‌ಸ್ಟ್ರೈಕ್‌ನಲ್ಲಿ ನಿಂತಿದ್ದ ಜಿತೇಶ್‌ ಶರ್ಮಾ ಅವರನ್ನು ದಿಗ್ವೇಶ್‌ ಸಿಂಗ್‌ ಮಂಕಡಿಂಗ್‌ ರನ್‌ಔಟ್‌ ಮಾಡಿದ್ದರು. ಆದರೆ, ನಾಯಕ ರಿಷಭ್‌ ಪಂತ್‌ ನಂತರ ವಿಥ್‌ಡ್ರಾ ಮಾಡಿಕೊಂಡಿದ್ದರು. ಇದಾದ ಬಳಿಕ ಆರ್‌ಸಿಬಿ ಅಭಿಮಾಣಿಗಳು ದಿಗ್ವೇಶ ಸಿಂಗ್‌ ರಾಠಿಯನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದರು. ಆದರೆ, ದಿಗ್ವೇಶ್‌ ರಾಠಿಯನ್ನು ಭಾರತ ತಂಡದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್‌ ಬೆಂಬಲಿಸಿದ್ದಾರೆ. ಅಲ್ಲದೆ ಎಂಎಸ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಅಭಿಮಾನಿಗಳು ಮೈದಾನದಲ್ಲಿ ಎಸಗಿದ್ದ ಪ್ರಮಾದವನ್ನು ಇದೇ ವೇಳೆ ಸೆಹ್ವಾಗ್‌ ಸ್ಮರಿಸಿಕೊಂಡಿದ್ದಾರೆ.

ಕ್ರಿಕ್‌ಬಝ್‌ ಜೊತೆ ಮಾತನಾಡಿದ ವೀರೇಂದ್ರ ಸೆಹ್ವಾಗ್‌, "ಅವರಿಗೆ ಅಮಾನತು ಶಿಕ್ಷೆಯನ್ನು ಹೇರಿದ್ದು ಸ್ವಲ್ಪ ಕಠಿಣವಾಗಿತ್ತು. ಐಪಿಎಲ್‌ ಟೂರ್ನಿಯಲ್ಲಿ ಈ ಹುಡುಗ ಆಡುತ್ತಿರುವುದು ಇದೇ ಮೊದಲು. ಎಂಎಸ್‌ ಧೋನಿ ಅನಗತ್ಯವಾಗಿ ಮೈದಾನದಲ್ಲಿ ನುಗ್ಗಿದ್ದರು, ಆದರೆ ಅವರನ್ನು ಬ್ಯಾನ್‌ ಮಾಡಿರಲಿಲ್ಲ. ವಿರಾಟ್‌ ಕೊಹ್ಲಿ ಹಲವು ಬಾರಿ ಅಂಪೈರ್‌ಗಳ ಜೊತೆ ಗಟ್ಟಿ ಧ್ವಿನಿಯಲ್ಲಿ ಮಾತನಾಡಿದ್ದರು. ಆದರೆ ಅವರನ್ನು ಅಮಾನತುಗೊಳಿಸಿರಲಿಲ್ಲ. ದಿಗ್ವೇಶ್‌ ರಾಠಿ ಇನ್ನು ಯುವ ಆಟಗಾರ ಹಾಗೂ ಇದು ಅವರಿಗೆ ಮೊದಲ ಟೂರ್ನಿಯಾಗಿದೆ. ಹಾಗಾಗಿ ಅವರನ್ನು ಬ್ಯಾನ್‌ ಮಾಡಬಾರದಿತ್ತು," ಎಂದು ಹೇಳಿದ್ದಾರೆ.

IPL 2025: GT vs MI ನಡುವೆ ಎಲಿಮಿನೇಟರ್‌ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಯಾವುದು?

2019ರಲ್ಲಿ ಮೈದಾನಕ್ಕೆ ನುಗ್ಗಿದ್ದ ಧೋನಿ

2019ರ ಐಪಿಎಲ್‌ ಟೂರ್ನಿಯಲ್ಲಿ ಎಂಎಸ್‌ ಧೋನಿ ಅನಗತ್ಯವಾಗಿ ಮೈದಾನಕ್ಕೆ ನುಗ್ಗಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 50ರಷ್ಟು ದಂಡವನ್ನು ವಿಧಿಸಲಾಗಿತ್ತು. ಈ ಸಂದರ್ಭದಲ್ಲಿಯೂ ವೀರೇಂದ್ರ ಸೆಹ್ವಾಗ್‌ ಪ್ರತಿಕ್ರಿಯಿಸಿದ್ದರು ಹಾಗೂ ಎಂಎಸ್‌ ಧೋನಿಯನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು.

IPL 2025: ಪಂಜಾಬ್‌ ತಂಡದ ವಿರುದ್ಧ ವಿಶೇಷ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ

ಪ್ಲೇಆಫ್ಸ್‌ನಿಂದ ಹೊರಬಿದ್ದಿದ್ದ ಎಲ್‌ಎಸ್‌ಜಿ

ಆರ್‌ಸಿಬಿ ವಿರುದ್ಧ ಸೋಲು ಅನುಭವಿಸುವ ಮೂಲಕ ಲಖನೌ ಸೂಪರ್‌ ಜಯಂಟ್ಸ್‌ ತಂಡ 2025ರ ಐಪಿಎಲ್‌ ಟೂರ್ನಿಯ ಅಭಿಯಾನವನ್ನು ಮುಗಿಸಿತ್ತು. ಈ ಟೂರ್ನಿಯಲ್ಲಿ ರಿಷಭ್‌ ಪಂತ್‌ ನಾಯಕತ್ವದ ಲಖನೌ ತಂಡ ಏಳನೇ ಸ್ಥಾನಕ್ಕೆ ಸೀಮಿತವಾಗಿತ್ತು. ದಿಗ್ವೇಶ್‌ ಸಿಂಗ್‌ ಅವರು ಈ ಸೀಸನ್‌ನಲ್ಲಿ ರವಿ ಬಿಷ್ಣೋಯ್‌ ಅವರ ಜಾಗದಲ್ಲಿ ಆಡಿದ್ದರು ಹಾಗೂ 13 ಪಂದ್ಯಗಳಿಂದ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಇವರು 8.25ರ ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ನೀಡಿದ್ದರು. ಆ ಮೂಲಕ ಎಲ್‌ಎಸ್‌ಜಿ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದರು.