ಆಫ್ಘಾನ್ ವಿರುದ್ಧದ ಮೊದಲ ಏಕದಿನಕ್ಕೆ ಭಾರತದ ಪ್ಲೇಯಿಂಗ್ 11
IND vs AFG: ಭಾರತದ ಆರಂಭಿಕ ಜೋಡಿಯು ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಪ್ರಸ್ತುತ ನಾಯಕ ಶುಭಮನ್ ಗಿಲ್ ಅವರೊಂದಿಗೆ ಸ್ಥಿರವಾಗಿ ಕಾಣುತ್ತಿದೆ. ಉಭಯ ಆಟಗಾರರಲ್ಲಿ ಯಾರಾದರೂ ಗಾಯಗೊಂಡರೆ, ಬ್ಯಾಕಪ್ ಆರಂಭಿಕನಾಗಿರುವ ಯಶಸ್ವಿ ಜೈಸ್ವಾಲ್ ಆಡುವ ಅವಕಾಶ ಪಡೆಯಬಹುದು.
KL Rahul -
ಧರ್ಮಶಾಲಾ, ಜೂ. 12: ಅಫ್ಘಾನಿಸ್ತಾನ(IND vs AFG) ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಶನಿವಾರ ಆರಂಭಗೊಳ್ಳಲಿದೆ. ಭಾರತ ತಂಡವು ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಸೇವೆಗಳಿಲ್ಲದೆ ಸರಣಿ ಆಡಲಿದೆ. ಕೊಹ್ಲಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರೆ, ಸರಣಿಗೆ ಮುನ್ನ ಪುನರ್ವಸತಿ ಸಮಯದಲ್ಲಿ ಪಾಂಡ್ಯ ಅವರ ಕ್ವಾಡ್ರೈಸ್ಪ್ಸ್ಗೆ ಹೊಡೆತ ಬಿದ್ದಿದೆ. ಸಿರಾಜ್ ಮತ್ತು ಬುಮ್ರಾಗೆ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ರಾಂತಿ ನೀಡಲಾಗಿದೆ. ಇದರ ಪರಿಣಾಮವಾಗಿ, ಭಾರತ ತಂಡವು ಪ್ರಸ್ತುತ ಸ್ವಲ್ಪ ದುರ್ಬಲವಾಗಿ ಕಾಣುತ್ತಿದೆ.
ಭಾರತ ತಂಡವು ಈ ಸರಣಿಯಲ್ಲಿ ಗುರ್ನೂರ್ ಬ್ರಾರ್, ಹರ್ಷ್ ದುಬೆ ಮತ್ತು ಪ್ರಿನ್ಸ್ ಯಾದವ್ ಎಂಬ ಮೂರು ಹೊಸ ಮುಖಗಳಿಗೆ ಚೊಚ್ಚಲ ಪಂದ್ಯಗಳನ್ನು ನೀಡಬಹುದು. ಅವರೆಲ್ಲರೂ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ನಿರೀಕ್ಷೆಯಲ್ಲಿದ್ದಾರೆ.
ಭಾರತದ ಆರಂಭಿಕ ಜೋಡಿಯು ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಪ್ರಸ್ತುತ ನಾಯಕ ಶುಭಮನ್ ಗಿಲ್ ಅವರೊಂದಿಗೆ ಸ್ಥಿರವಾಗಿ ಕಾಣುತ್ತಿದೆ. ಉಭಯ ಆಟಗಾರರಲ್ಲಿ ಯಾರಾದರೂ ಗಾಯಗೊಂಡರೆ, ಬ್ಯಾಕಪ್ ಆರಂಭಿಕನಾಗಿರುವ ಯಶಸ್ವಿ ಜೈಸ್ವಾಲ್ ಆಡುವ ಅವಕಾಶ ಪಡೆಯಬಹುದು.
ಸೊಸೆ, ಮಗಳ ಜತೆ ವಿಮಾನದಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್; ವಿಡಿಯೊ ವೈರಲ್
ವಿರಾಟ್ ಕೊಹ್ಲಿ ಸರಣಿಯಿಂದ ಹೊರಗುಳಿದಿರುವುದರಿಂದ, ಭಾರತವು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ಗೆ ಅವಕಾಶ ನೀಡಲು ಬಯಸಬಹುದು. ನಾಲ್ಕನೇ ಕ್ರಮಾಂಕದಲ್ಲಿ ತಂಡಕ್ಕೆ ಸ್ಥಿರ ಪ್ರದರ್ಶನ ನೀಡುತ್ತಿರುವ ಉಪನಾಯಕ ಶ್ರೇಯಸ್ ತಮ್ಮ ಸಾಮಾನ್ಯ ಬ್ಯಾಟಿಂಗ್ ಕ್ರಮಾಂಕವನ್ನು ಉಳಿಸಿಕೊಳ್ಳಲಿದ್ದಾರೆ. ಕೆ.ಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಭಾರತೀಯ ತಂಡಕ್ಕೆ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್ಮನ್ ಆಗಿದ್ದಾರೆ. ಬ್ಯಾಟಿಂಗ್ ಜತೆಗೆ ಕೀಪಿಂಗ್ ಹೊಣೆಯನ್ನೂ ನಿಭಾಯಿಸಲಿದ್ದಾರೆ. ರಾಹುಲ್ ಮೊದಲ ಆಯ್ಕೆಯ ಕೀಪರ್ ಆಗಿರುವ ಕಾರಣ ರಿಷಭ್ ಪಂತ್ಗೆ ಅವಕಾಶ ಕಷ್ಟಸಾಧ್ಯ.
ಹಾರ್ದಿಕ್ ಪಾಂಡ್ಯ ಅಲಭ್ಯರಾದ ಕಾರಣ ಅವರ ಸ್ಥಾನದಲ್ಲಿ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆಯಲಿದ್ದಾರೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ 2027ರ ಏಕದಿನ ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಪಡೆಯಬಹುದು. ಸ್ಫಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಜತೆ ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಬಹುದು.
ಭಾರತ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಷ್ದೀಪ್ ಸಿಂಗ್, ಕುಲದೀಪ್ ಯಾದವ್.