ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾವು ಓದಿದ ಕಾಲೇಜಿನಲ್ಲಿ ಇಂಟರ್‌ ಕಾಲೇಜು ಹಾಕಿ ಟೂರ್ನಿಗೆ ಚಾಲನೆ ನೀಡಿದ ರಾಹುಲ್‌ ದ್ರಾವಿಡ್!

ತಾವು ಓದಿ ಬೆಳೆದ ಸಂತ ಜೋಸೆಫ್‌ ವಾಣಿಜ್ಯ ಕಾಲೇಜಿನಲ್ಲಿ ಆತಿಥಿಯಾಗಿ ಭಾಗವಹಿಸಿದ ಭಾರತೀಯ ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌, ಇಂಟರ್‌ ಕಾಲೇಜು ಹಾಕಿ ಟೂರ್ನಿಯನ್ನು ಉದ್ಘಾಟಿಸಿದ್ದಾರೆ ಹಾಗೂ ಹಾಕಿ ಆಟಗಾರರು ಹಾಗೂ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ.

ತಾವು ಓದಿದ ಕಾಲೇಜಿನಲ್ಲಿ ಹಾಕಿ ಟೂರ್ನಿಗೆ ಚಾಲನೆ ನೀಡಿದ ದ್ರಾವಿಡ್‌!

ಇಂಟರ್‌ ಕಾಲೇಜು ಹಾಕಿ ಟೂರ್ನಿಗೆ ಚಾಲನೆ ನೀಡಿದ ರಾಹುಲ್‌ ದ್ರಾವಿಡ್‌. -

Profile
Ramesh Kote Jul 24, 2026 6:55 PM

ಬೆಂಗಳೂರು: ಭಾರತೀಯ ಕ್ರಿಕೆಟ್‌ನ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid) ಅವರು ಶುಕ್ರವಾರ ಬೆಂಗಳೂರಿನ ಪ್ರತಿಷ್ಠಿತ 'ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್' (ಎಸ್‌ಜೆಸಿಸಿ)ನಲ್ಲಿ ಹಾಕಿ ಟೂರ್ನಿಗೆ ಅಧಿಕೃತವಾಗಿ ಚಾಲನೆ ನೀಡಿದರು. ಕಾಲೇಜಿನ ವಾಣಿಜ್ಯ ಪದವಿ ವಿಭಾಗದ 75ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಈ ಕೋಲ್ಗೇಟ್ ಟೋಟಲ್ ಅಂತರ ಕಾಲೇಜು 5 ಎ ಸೈಡ್ ಹಾಕಿ ಟೂರ್ನಿಯನ್ನು ಆಯೋಜಿಸಲಾಗಿದೆ.

ಜುಲೈ 24 ಮತ್ತು 25ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ರೋಚಕ ಟೂರ್ನಿಯನ್ನು 'ಯೆಸ್ ಫಾರ್ ಹಾಕಿ' ಸಂಸ್ಥೆಯ ಸಹಯೋಗದೊಂದಿಗೆ ಎಸ್‌ಜೆಸಿಸಿ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದೆ. ಈ ಟೂರ್ನಿಯಲ್ಲಿ ಬಾಲಕರ ಲೀಗ್ ಕಮ್ ನಾಕ್‌ಔಟ್ ವಿಭಾಗದಲ್ಲಿ ಬೆಂಗಳೂರಿನ 12 ಪ್ರಮುಖ ಕಾಲೇಜು ತಂಡಗಳು ಸೆಣಸಾಡುತ್ತಿದ್ದರೆ, ಬಾಲಕಿಯರ ರೌಂಡ್ ರಾಬಿನ್ ವಿಭಾಗದಲ್ಲಿ 5 ತಂಡಗಳು ಕಣಕ್ಕಿಳಿದಿವೆ. ಎರಡೂ ವಿಭಾಗಗಳಲ್ಲಿ ಜಯಗಳಿಸುವ ತಂಡಗಳಿಗೆ 'ಕೋಲ್ಗೇಟ್ ಟೋಟಲ್ ಇಂಟರ್ ಕಾಲೇಜಿಯೇಟ್ ಪ್ಲಾಟಿನಂ ರೋಲಿಂಗ್ ಟ್ರೋಫಿ 2026' ಅನ್ನು ನೀಡಿ ಗೌರವಿಸಲಾಗುತ್ತದೆ.

IND vs ZIM: ರಜತ್‌ ಪಾಟಿದಾರ್‌ಗೆ ಭಾರತ ತಂಡದಲ್ಲಿ ಸ್ಥಾನ ಏಕೆ ನೀಡಿಲ್ಲ? ಹನುಮ ವಿಹಾರಿ ಪ್ರಶ್ನೆ!

ಕ್ರೀಡಾಪಟುಗಳಿಗೆ ದಂತ ಆರೋಗ್ಯದ ಮಹತ್ವ ತಿಳಿಸಿದ ರಾಹುಲ್ ದ್ರಾವಿಡ್

ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ರಾಹುಲ್ ದ್ರಾವಿಡ್, ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಕ್ರೀಡೆ ಮತ್ತು ಕೋಲ್ಗೇಟ್ ಟೋಟಲ್ ಎರಡರ ಸಿದ್ಧಾಂತವಾಗಿರುವ ಶಿಸ್ತು ಮತ್ತು ಶ್ರೇಷ್ಠತೆಯ ಮೌಲ್ಯಗಳ ಬಗ್ಗೆ ಅವರು ಮಾತನಾಡಿದರು.

ಕೋಲ್ಗೇಟ್ ಟೋಟಲ್‌ನ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿರುವ ದ್ರಾವಿಡ್, "ಯಾವುದೇ ಕ್ರೀಡೆಯಾಗಲಿ, ಅಲ್ಲಿ ಶಿಸ್ತು ಬಹಳ ಮುಖ್ಯ. ವೇಗವಾಗಿ ಸಾಗುವ ಹಾಕಿ ಪಂದ್ಯಗಳಲ್ಲಿ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ ಮತ್ತು ರಿಕವರಿ ಗೆಲುವನ್ನು ನಿರ್ಧರಿಸುತ್ತದೆ. ಹಾಗಾಗಿ, ಆಧುನಿಕ ಕ್ರೀಡಾಪಟುಗಳಿಗೆ ದಂತ ಆರೋಗ್ಯ ಅತ್ಯಗತ್ಯ. ಬಾಯಿಯ ಸೂಕ್ಷ್ಮಾಣುಗಳು ದೇಹವನ್ನು ಪ್ರವೇಶಿಸಿ ಹೇಗೆ ಉರಿಯೂತವನ್ನು ಉಂಟುಮಾಡುತ್ತವೆ ಮತ್ತು ಅದು ಕ್ರೀಡಾಪಟುವಿನ ಶಕ್ತಿ ಹಾಗೂ ರಿಕವರಿಯ ಮೇಲೆ ಹೇಗೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ವಿಜ್ಞಾನವೇ ಸಾಬೀತುಪಡಿಸಿದೆ. ಉನ್ನತ ಮಟ್ಟದ ಕ್ರೀಡಾಪಟುಗಳಿಗೆ ಇದು ಚೆನ್ನಾಗಿ ತಿಳಿದಿದೆ. ಅದೇ 'ರಹಸ್ಯ ಶಕ್ತಿ'ಯನ್ನು ಕೋಲ್ಗೇಟ್ ಟೋಟಲ್ ಯುವ ಕ್ರೀಡಾಪಟುಗಳಿಗೆ ನೀಡುತ್ತಿದೆ," ಎಂದು ತಿಳಿಸಿದರು.

IND vs ZIM: ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ ಹಾದಿಯ ಬಗ್ಗೆ ಪ್ರತಿಕ್ರಿಯಿಸಿದ ಮಯಾಂಕ್‌ ಯಾದವ್!

ಮುನ್ನೆಚ್ಚರಿಕೆ ವಹಿಸಲು 'ಕೋಲ್ಗೇಟ್' ಜಾಗೃತಿ

ದಂತ ಆರೋಗ್ಯವು ಕೇವಲ ಹಲ್ಲುಗಳಿಗೆ ಮಾತ್ರ ಸೀಮಿತವಲ್ಲ, ಅದು ಒಬ್ಬ ಕ್ರೀಡಾಪಟುವಿನ ಒಟ್ಟಾರೆ ಆರೋಗ್ಯ ಹಾಗೂ ಅತ್ಯುತ್ತಮ ಸಾಧನೆಗೆ ತಳಪಾಯವಾಗಿದೆ ಎಂಬುದು ಕೋಲ್ಗೇಟ್ ಟೋಟಲ್‌ನ ನಂಬಿಕೆಯಾಗಿದೆ. ಎಸ್‌ಜೆಸಿಸಿಯೊಂದಿಗಿನ ಈ ಸಹಭಾಗಿತ್ವದ ಮೂಲಕ, ಯುವ ಕ್ರೀಡಾಪಟುಗಳಲ್ಲಿ ದಂತ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಸಂಸ್ಥೆ ಮುಂದಾಗಿದೆ.

ಈ ವಿವರ ನೀಡಿದ ಕೋಲ್ಗೇಟ್ ಪಾಮೋಲಿವ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ಹಾಗೂ ಸಿಇಒ ಪ್ರಭಾ ನರಸಿಂಹನ್, "ಮೈದಾನದಲ್ಲಿರಲಿ ಅಥವಾ ದೈನಂದಿನ ಜೀವನದಲ್ಲಿರಲಿ, ನಮ್ಮ ಸಣ್ಣ ಮತ್ತು ಶಿಸ್ತಿನ ಅಭ್ಯಾಸಗಳು ನಮ್ಮ ಶ್ರೇಷ್ಠ ಸಾಧನೆಗೆ ಕಾರಣವಾಗುತ್ತವೆ. ದಂತ ಸಮಸ್ಯೆಗಳು ಕಾಣಿಸಿಕೊಳ್ಳುವ ಮುನ್ನವೇ ಅವುಗಳಿಂದ ರಕ್ಷಣೆ ಪಡೆಯಲು ಮುನ್ನೆಚ್ಚರಿಕೆಯ ಆರೈಕೆಗಾಗಿ 'ಕೋಲ್ಗೇಟ್ ಟೋಟಲ್' ಅನ್ನು ರೂಪಿಸಲಾಗಿದೆ. ಈ ಹಾಕಿ ಟೂರ್ನಮೆಂಟ್ ಮೂಲಕ ಈ ಕಾಳಜಿಯನ್ನು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ತಲುಪಿಸಲು ನಮಗೆ ಸಾಧ್ಯವಾಗಿದೆ," ಎಂದು ಸಂತಸ ವ್ಯಕ್ತಪಡಿಸಿದರು.

CWG 2026: ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ತುಲಿಕಾ ಮಾನ್‌, ಭಾರತಕ್ಕೆ ಮತ್ತೊಂದು ಹಿನ್ನಡೆ!

ಭಾರತದ ದಂತ ಆರೈಕೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಗೇಟ್ ಪಾಮೋಲಿವ್, ಗ್ರಾಹಕರ ಆರೋಗ್ಯಕರ ಭವಿಷ್ಯಕ್ಕಾಗಿ ನಿರಂತರವಾಗಿ ನಾವೀನ್ಯತೆಯನ್ನು ಅಳವಡಿಸಿಕೊಳ್ಳುತ್ತಿದೆ. ಬಾಯಿಯ ಆರೋಗ್ಯ ಮತ್ತು ವೈಯಕ್ತಿಕ ಆರೋಗ್ಯ ಉತ್ಪನ್ನಗಳ ಜೊತೆಗೆ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯ ಕಡಿತ ಮತ್ತು ಮಹಿಳಾ ಸಬಲೀಕರಣದಂತಹ ಸಾಮಾಜಿಕ ಕಾರ್ಯಗಳಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ವಿಶೇಷವಾಗಿ 'ಕೋಲ್ಗೇಟ್ ಬ್ರೈಟ್ ಸ್ಮೈಲ್ಸ್, ಬ್ರೈಟ್ ಫ್ಯೂಚರ್ಸ್' ಕಾರ್ಯಕ್ರಮದ ಮೂಲಕ ಲಕ್ಷಾಂತರ ಮಕ್ಕಳ ದಂತ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.