RCB Fans Brutally Troll: ಚೆನ್ನೈ ಮಾಜಿ ಆಟಗಾರನನ್ನು ಟ್ರೋಲ್ ಮಾಡಿದ ಆರ್ಸಿಬಿ ಅಭಿಮಾನಿ
ರಾಯಲ್ ಚಾಲೆಂಜರ್ ಬೆಂಗಳೂರು (ಆರ್ಸಿಬಿ) ಮಾರಾಟವಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದನ್ನು ಆರ್ಸಿಬಿ ಮಾಲಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ನ ಮಾತೃ ಸಂಸ್ಥೆ ಡಿಯಾಜಿಯೊ ತಳ್ಳಿ ಹಾಕಿದೆ. ನಮ್ಮ ತಂಡ ಮಾರಾಟಕ್ಕಿಲ್ಲ ಇವೆಲ್ಲ ಬರೀ ವದಂತಿಗಳಷ್ಟೇ ಎಂದು ಹೇಳಿದೆ.


ಚೆನ್ನೈ: 18ನೇ ಆವೃತ್ತಿಯಲ್ಲಿ ಆರ್ಸಿಬಿ(RCB) ಕಪ್ ಗೆಲ್ಲುವ ಮೂಲಕ ತನ್ನ ಐಪಿಎಲ್ ಟ್ರೋಫಿ ಬರವನ್ನು ನೀಗಿಸಿಕೊಂಡಿತ್ತು. ಇದಾದ ಬಳಿಕ ಈ ಹಿಂದೆ ಆರ್ಸಿಬಿಯನ್ನು ಟ್ರೋಲ್ ಮಾಡಿದ್ದ ಚೆನ್ನೈ ತಂಡದ ಅಭಿಮಾನಿಗಳನ್ನು ಮತ್ತು ಆಟಗಾರರನ್ನು ಆರ್ಸಿಬಿ ಅಭಿಮಾನಿಗಳು(RCB Fans Brutally Troll) ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾಗಿರುವ ಮತ್ತು ಮಾಜಿ ಆಟಗಾರ ಎಸ್ ಬದ್ರಿನಾಥ್(S Badrinath) ಅವರನ್ನು ಆರ್ಸಿಬಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯದ ಸಂದರ್ಭದಲ್ಲಿ ಕಾಮೆಂಟ್ರಿ ಬಾಕ್ಸ್ನಲ್ಲಿದ್ದ ಬದ್ರಿನಾಥ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಆರ್ಸಿಬಿ ಜೆರ್ಸಿ ತೋರಿಸಿ ಜೋರಾಗಿ ಆರ್ಸಿಬಿ...ಆರ್ಸಿಬಿ... ಎಂದು ಕೂಗುವ ಮೂಲಕ ಕೀಚಾಯಿಸಿದ್ದಾರೆ. ಈ ವೇಳೆ ಬದ್ರಿನಾಥ್ ಕಿರುನಗೆ ಬೀರಿ 'ಥಮ್ಸ್ ಅಪ್' ಮಾಡಿದರು. ಆರ್ಸಿಬಿ ಅಭಿಮಾನಿಗಳು ಬದ್ರಿನಾಥ್ ಅವರನ್ನು ಕೆಣಕಲು ಕೂಡ ಒಂದು ಕಾರಣವಿದೆ. ಹೌದು, 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ಐಪಿಎಲ್ ಗೆಲ್ಲಲಿಲ್ಲ ಎಂಬ ಬಗ್ಗೆ ತಮಾಷೆ ಮಾಡಿದ್ದರು. ಇದೇ ಕಾರಣಕ್ಕೆ ಕಪ್ ಗೆದ್ದ ಬಳಿಕ ಅವರನ್ನು ಆರ್ಸಿಬಿ ಅಭಿಮಾನಿಗಳು ಟ್ರೋಲ್ ಮಾಡಿದರು.
Here's the video of his humiliation.😂🤣 https://t.co/ePQ2crclkX pic.twitter.com/HmDbYRROMz
— ꪜ𝐢𝐧𝐨 (@vinoo_96) June 10, 2025
ಬದ್ರಿನಾಥ್ 2010 ಮತ್ತು 2011 ರಲ್ಲಿ ಸಿಎಸ್ಕೆ ಪರ ಎರಡು ಐಪಿಎಲ್ ಪ್ರಶಸ್ತಿಗಳನ್ನು ಮತ್ತು 2010 ರಲ್ಲಿ ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಪ್ರಶಸ್ತಿಯನ್ನು ಗೆದ್ದಿದ್ದರು.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ನಡೆಸುವಾಗ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆರ್ಸಿಬಿಯನ್ನು ಬ್ಯಾನ್ ಮಾಡಲಾಗುವುದು, ಮಾರಾಟ ಮಾಡಲು ಅದರ ಮಾಲಕ ಸಂಸ್ಥೆ ಯೋಚಿಸುತ್ತಿದೆ ಎನ್ನಲಾಗಿತ್ತು. ಇದು ಆರ್ಸಿಬಿ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿತ್ತು. ಆದರೆ ಇದನ್ನು ಆರ್ಸಿಬಿ ಮಾಲಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ನ ಮಾತೃ ಸಂಸ್ಥೆ ಡಿಯಾಜಿಯೊ ತಳ್ಳಿ ಹಾಕಿದೆ. ನಮ್ಮ ತಂಡ ಮಾರಾಟಕ್ಕಿಲ್ಲ ಇವೆಲ್ಲ ಬರೀ ವದಂತಿಗಳಷ್ಟೇ ಎಂದು ಹೇಳಿದೆ.
ಇದನ್ನೂ ಓದಿ 3 ಮೂಳೆ ಮುರಿತಗೊಂಡಿದ್ದರೂ ಐಪಿಎಲ್ ಆಡಿದ್ದ ಚಹಲ್; ವಿಚಾರ ಬಹಿರಂಗಪಡಿಸಿದ ಪ್ರೇಯಸಿ