ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG Test: ಇಂಗ್ಲೆಂಡ್‌-ಭಾರತ ಟೆಸ್ಟ್‌ ಸರಣಿಗೆ ನನ್ನ ಹೆಸರು ಬೇಡ ಎಂದ ಸಚಿನ್‌

ಇತ್ತೀಚೆಗೆಷ್ಟೇ ಬಿಸಿಸಿಐ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಮನ್ಸೂರ್‌ ಅಲಿ ಖಾನ್‌ ಪಟೌಡಿ ಓರ್ವ ದಿಗ್ಗಜ ಕ್ರಿಕೆಟರ್‌. ಅವರ ಹೆಸರಿನ ಸರಣಿಯನ್ನು ಬದಲಾಯಿಸುವುದು ಸರಿಯಲ್ಲ ಎಂದು ಇಸಿಬಿಯನ್ನು ವಿನಂತಿಸಿತ್ತು. ಇದೀಗ ಸಚಿನ್‌ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಇಂಗ್ಲೆಂಡ್‌-ಭಾರತ ಟೆಸ್ಟ್‌ ಸರಣಿಗೆ ನನ್ನ ಹೆಸರು ಬೇಡ ಎಂದ ಸಚಿನ್‌

Profile Abhilash BC Jun 17, 2025 8:46 AM

ಮುಂಬಯಿ: ಜೂನ್‌ 20 ರಿಂದ ಆರಂಭವಾಗಲಿರುವ ಭಾರತ-ಇಂಗ್ಲೆಂಡ್‌(IND vs ENG Test) ನಡುವಿನ ಟೆಸ್ಟ್‌ ಸರಣಿಗೆ 'ಆ್ಯಂಡರ್ಸನ್‌-ತೆಂಡೂಲ್ಕರ್‌'(Anderson-Tendulkar Trophy) ಟ್ರೋಫಿ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದನ್ನು ಸಚಿನ್‌ ತೆಂಡೂಲ್ಕರ್‌(Sachin Tendulkar) ವಿರೋಧಿಸಿದ್ದಾರೆ. ಟ್ರೋಫಿಗೆ ನನ್ನ ಹೆಸರು ಬೇಡ, ದಿಗ್ಗಜ ಆಟಗಾರ ಪಟೌಡಿ(Pataudi Trophy) ಹೆಸರಲ್ಲೇ ಇದು ಮುಂದುವರಿಯಲಿ ಎಂದು ಇಸಿಬಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆಷ್ಟೇ ಬಿಸಿಸಿಐ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಮನ್ಸೂರ್‌ ಅಲಿ ಖಾನ್‌ ಪಟೌಡಿ ಓರ್ವ ದಿಗ್ಗಜ ಕ್ರಿಕೆಟರ್‌. ಅವರ ಹೆಸರಿನ ಸರಣಿಯನ್ನು ಬದಲಾಯಿಸುವುದು ಸರಿಯಲ್ಲ ಎಂದು ಇಸಿಬಿಯನ್ನು ವಿನಂತಿಸಿತ್ತು. ಇದೀಗ ಸಚಿನ್‌ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

2007ರಲ್ಲಿ ಭಾರತ ಮತ್ತು ಇಂಗ್ಲೆಂಡ್‌ ದೇಶಗಳ ನಡುವಿನ ಟೆಸ್ಟ್‌ಗೆ 75 ವರ್ಷ ಪೂರ್ಣಗೊಂಡಾಗ ಪಟೌಡಿ ಟ್ರೋಫಿ ಎಂಬ ಹೆಸರನ್ನು ಇಡಲಾಗಿತ್ತು. ಆದರೆ ಈ ಬಾರಿಯಿಂದ ಸರಣಿಯನ್ನು ಆ್ಯಂಡರ್ಸನ್‌-ತೆಂಡುಲ್ಕರ್‌ ಹೆಸರಲ್ಲಿ ನಡೆಸಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಬೋರ್ಡ್‌ (ಇಡಬ್ಲ್ಯುಸಿ) ನಿರ್ಧರಿಸಿದೆ. ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ.

ಇಂಗ್ಲೆಂಡ್‌ ತಂಡ

ಬೆನ್ ಸ್ಟೋಕ್ಸ್ (ನಾಯಕ), ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಂಗ್, ಕ್ರಿಸ್ ವೋಕ್ಸ್.

ಇದನ್ನೂ ಓದಿ IND vs ENG: ವಾಷಿಂಗ್ಟನ್‌ ಸುಂದರ್‌ ನನಗೆ ಸ್ಫೂರ್ತಿ ಎಂದ ಸಾಯಿ ಸುದರ್ಶನ್‌!

ಭಾರತ ಟೆಸ್ಟ್ ತಂಡ

ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್(ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್‌ ಬುಮ್ರಾ(ಕೆಲವು ಪಂದ್ಯಕ್ಕೆ ಮಾತ್ರ), ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.