ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Plane Crash
Viral Video: ವಿಮಾನ ದುರಂತದ ನೋವಿನ್ನೂ ಮಾಸಿಲ್ಲ; ಡಿಜೆ ಪಾರ್ಟಿ ಮಾಡಿ ಕುಣಿದ ಸಿಬ್ಬಂದಿ: ಏನಿದು ವೈರಲ್‌ ಸ್ಟೋರಿ?

ವಿಮಾನ ದುರಂತದ ನೋವು ಮಾಸುವ ಮೊದಲೇ ಡಿಜೆ ಪಾರ್ಟಿ

ಏರ್‌ ಇಂಡಿಯಾ ವಿಮಾನ AI171 ದುರಂತ ನಡೆದ ಎಂಟು ದಿನಗಳ ನಂತರ ಏರ್ ಇಂಡಿಯಾ SATS (AISATS)ನ ಹಿರಿಯ ಕಾರ್ಯನಿರ್ವಾಹಕರು ಗುರುಗ್ರಾಮ ಕಚೇರಿಯಲ್ಲಿ ಡಿಜೆ ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಗುರಿಯಾಗಿದೆ.

Ahmedabad Plane Crash: ಅಹಮದಾಬಾದ್ ವಿಮಾನ ದುರಂತ; ಸಮಗ್ರ ಪರಿಶೀಲನೆಗೆ ವಿಶೇಷ ತನಿಖಾ ಬ್ಯೂರೋ ರಚನೆ

ಅಹಮದಾಬಾದ್ ವಿಮಾನ ದುರಂತ; ವಿಶೇಷ ತನಿಖಾ ಬ್ಯೂರೋ ರಚನೆ

ಅಹಮದಾಬಾದ್‌ನಲ್ಲಿ ಪತನಗೊಂಡ (Ahmedabad Plane Crash ) ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪರಿಶೀಲಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಹೇಳಿದ್ದಾರೆ.

Ahmedabad Plane Crash: ಹಾಸ್ಟೆಲ್‌ ಕಟ್ಟಡಕ್ಕೆ ವಿಮಾನ ಅಪ್ಪಳಿಸುತ್ತಿದ್ದಂತೆ ಕಿಟಕಿಯಿಂದ ಜಿಗಿದ ವಿದ್ಯಾರ್ಥಿ; ವಿಡಿಯೊ ವೈರಲ್‌

ಹಾಸ್ಟೆಲ್‌ಗೆ ವಿಮಾನ ಅಪ್ಪಳಿಸುತ್ತಿದ್ದಂತೆ ಕಿಟಕಿಯಿಂದ ಜಿಗಿದ ವಿದ್ಯಾರ್ಥಿ

Viral Video: ಜೂ. 12ರಂದು ಗುಜರಾತ್‌ನ ಅಹಮದಾಬಾದ್‌ ಹಾಸ್ಟೆಲ್‌ ಕಟ್ಟಡಕ್ಕೆ ಏರ್‌ ಇಂಡಿಯಾ ವಿಮಾನ ಅಪ್ಪಳಿಸಿದ ಘಟನೆಗೆ ಸಂಬಂಧಿಸಿದ ಹೊಸ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಟ್ಟಡಕ್ಕೆ ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳು ಕಿಟಿಕಿಯಿಂದ ಜಿಗಿದಿದ್ದಾರೆ.

Ahmedabad Plane Crash: ವಿಮಾನ ದುರಂತದ ಆ ಒಂದೇ ಒಂದು ವಿಡಿಯೋ ತೆಗೆದವನು ಇವನೇ!

ವಿಮಾನ ದುರಂತದ ಆ ಒಂದೇ ಒಂದು ವಿಡಿಯೋ ತೆಗೆದವನು ಇವನೇ!

Ahmedabad Plane Crash: ಉತ್ತರ ಗುಜರಾತ್‌ನ ಇಡಾರ್‌ನ 17 ವರ್ಷದ ಆರ್ಯನ್, ಪುಸ್ತಕಗಳನ್ನು ಖರೀದಿಸಲು ಮೊದಲ ಬಾರಿಗೆ ಅಹಮದಾಬಾದ್‌ಗೆ ಬಂದಿದ್ದ. ಅಲ್ಲಿ, ತನ್ನ ತಂದೆಯ ಬಾಡಿಗೆ ಮನೆಯ ಟೆರೇಸ್‌‌ನಿಂದ, ಇದ್ದಕ್ಕಿದ್ದಂತೆ ವಿಮಾನವು ತುಂಬಾ ಹತ್ತಿರದಿಂದ ಹಾದುಹೋಗುತ್ತಿರುವುದನ್ನು ನೋಡಿದ. ತಕ್ಷಣ ಮೊಬೈಲ್‌ ತೆಗೆದು ವಿಡಿಯೋ ರೆಕಾರ್ಡ್‌ ಮಾಡಲು ಮುಂದಾದ.

Ahmedabad Plane Crash: ಮಾಜಿ ಸಿಎಂ ರೂಪಾನಿ ಡಿಎನ್‌ಎ ಹೊಂದಾಣಿಕೆ; ಅಪಘಾತದಲ್ಲಿ ಮೃತಪಟ್ಟವರ ದೇಹ ಹಸ್ತಾಂತರ ಪ್ರಕ್ರಿಯೆ ಶುರು

ವಿಮಾನ ದುರಂತ; ಮಾಜಿ ಸಿಎಂ ರೂಪಾನಿ ಡಿಎನ್‌ಎ ಹೊಂದಾಣಿಕೆ

ಅಹಮದಾಬಾದ್ ವಿಮಾನ ಅಪಘಾತದಲ್ಲಿ (Ahmedabad Plane Crash) ಸಾವನ್ನಪ್ಪಿದ 274 ಜನರ ಗುರುತು ಪತ್ತೆಯಾಗಿದ್ದು, ಅವರ ಮೃತದೇಹಗಳನ್ನು ಗುಜರಾತ್ ಸರ್ಕಾರ ಭಾನುವಾರ ಅವರ ಕುಟುಂಬಗಳಿಗೆ ಹಸ್ತಾಂತರಿಸಲಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತವಾದ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಕೂಡ ಇದ್ದರು ಎಂದು ಹೇಳಲಾಗಿತ್ತು. ಇದೀಗ ಅವರ ಡಿನ್‌ಎನ್‌ಎ ಪರೀಕ್ಷೆಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.

Ahmedabad Plane Crash: ಅಹಮದಾಬಾದ್ ವಿಮಾನ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ಏರ್ ಇಂಡಿಯಾ ವಿಮಾನ ದುರಂತ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಜನರಲ್ ಆಸ್ಪತ್ರೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ, ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ನಾಸಿರ್ ಹುಸೇನ್, ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ಘಟಕದ ಅಧ್ಯಕ್ಷ ಪವನ್ ಖೇರಾ ಮತ್ತಿತರರು ಶನಿವಾರ ಸಂಜೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

Viral Video: ಪುರಿ ಜಗನ್ನಾಥ ದೇವಾಲಯದಲ್ಲಿ ನಡೆದ ಈ ಘಟನೆಗೂ ಏರ್ ಇಂಡಿಯಾ ವಿಮಾನ ಪತನಕ್ಕೂ ಏನು ಸಂಬಂಧ? ನೆಟ್ಟಿಗರ ವಾದವೇನು?

ಏರ್ ಇಂಡಿಯಾ ಪತನಕ್ಕೂ ಪುರಿ ಜಗನ್ನಾಥದ ಈ ಘಟನೆಗೂ ಏನು ಸಂಬಂಧ?

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತವನ್ನು ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆದ ಘಟನೆಗೆ ಜನರು ಲಿಂಕ್ ಮಾಡಿದ್ದಾರೆ. ಇತ್ತೀಚೆಗೆ ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಿಂದ ಹದ್ದೊಂದು ಧ್ವಜದ ಬಟ್ಟೆಯೊಂದನ್ನು ತೆಗೆದುಕೊಂಡು ಹೋಗಿದ್ದು 'ದುರದೃಷ್ಟ'ದ ಸಂಕೇತವೆಂದು ಹೇಳಿದ್ದಾರೆ.

ವರ್ಷದ ಹಿಂದೆ ವಿಮಾನ ದುರಂತದಲ್ಲಿ ಮಗ ಸಾವು; ಈಗ ಏರ್ ಇಂಡಿಯಾ ಅಪಘಾತದಲ್ಲಿ ತಂದೆ-ತಾಯಿ ಬಲಿ

ಮಗನಂತೆ ತಂದೆ-ತಾಯಿಯೂ ವಿಮಾನ ಅಪಘಾತಕ್ಕೆ ಬಲಿ

Ahmedabad Plane Crash: ಜೂ. 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಗುಜರಾತ್‌ ಮೂಲದ ದಂಪತಿ ಬಲಿಯಾಗಿದ್ದಾರೆ. ವಿಶೇಷ ಎಂದರೆ ಕಳೆದ ವರ್ಷ ನಡೆದ ವಿಮಾನ ಅಪಘಾತದಲ್ಲಿ ಈ ದಂಪತಿಯ ಪುತ್ರ ಮೃತಪಟ್ಟಿದ್ದರು.

ವಿಮಾನ ದುರಂತ: ತಾಯಿಗಾಗಿ ಟಿಫನ್‌ ತಂದಿದ್ದ ಬಾಲಕ ಸಜೀವ ದಹನ; ಮಗನನ್ನು ಉಳಿಸಲು ಯತ್ನಿಸಿದ ತಾಯಿಯ ವಿಡಿಯೊ ವೈರಲ್‌

ಮಗನನ್ನು ಉಳಿಸಲು ಯತ್ನಿಸಿದ ತಾಯಿಯ ವಿಡಿಯೊ ವೈರಲ್‌

Ahmedabad Plane Crash: ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂ. 12ರಂದು ಏರ್‌ ಇಂಡಿಯಾ ವಿಮಾನ ಪತನವಾಗಿ ಒಟ್ಟು ಸಾವಿನ ಸಂಖ್ಯೆ 265ಕ್ಕೆ ತಲುಪಿದೆ. ಲಂಡನ್‌ಗೆ ಹೊರಟಿದ್ದ ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದ ಮೇಘನಿನಗರದ ಜನವಸತಿ ಪ್ರದೇಶದತ್ತ ನುಗ್ಗಿದ್ದು, ಬಿಜೆ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಅಪ್ಪಳಿಸಿ ಹೊತ್ತಿ ಉರಿದಿದೆ. ಇದರಿಂದಾಗಿ ಹಾಸ್ಟೆಲ್‌ ಹೊರಗೆ ಟೀ ಅಂಗಡಿ ನಡೆಸುತ್ತಿದ್ದ ಸೀತಾ ಪಟ್ನಿ ಎನ್ನುವವರ ಪುತ್ರ 15 ವರ್ಷದ ಆಕಾಶ್‌ ಪಟ್ನಿ ಕೂಡ ಮೃತಪಟ್ಟಿದ್ದಾನೆ.

ಇನ್ನು ಮುಂದೆ ಏರ್‌ ಇಂಡಿಯಾ ವಿಮಾನ ಹತ್ತಲ್ಲ: ಆಸೀಸ್‌ ಮಾಜಿ ಕ್ರಿಕೆಟಿಗನ ಶ‍ಪಥ

ಏರ್‌ ಇಂಡಿಯಾ ವಿಮಾನ ಹತ್ತಲ್ಲ: ಆಸೀಸ್‌ ಮಾಜಿ ಕ್ರಿಕೆಟಿಗನ ಶ‍ಪಥ

Ahmedabad Plane Crash: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಕೇಂದ್ರದ ಇತರ ಸಂಸ್ಥೆಗಳ ಅಧಿಕಾರಿಗಳ ತಂಡ ಗುಜರಾತ್‌ ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Vijay Rupani: 12 ಸ್ನೇಹಿತರು, ಜೂನ್ 12, ಸೀಟ್ ಸಂಖ್ಯೆ 12: ವಿಜಯ್ ರೂಪಾನಿಗೆ ಕಾಲೇಜು ಸ್ನೇಹಿತರಿಂದ ಕ‍ಣ್ಣೀರ ವಿದಾಯ

ವಿಜಯ್ ರೂಪಾನಿಗೆ ಕಾಲೇಜು ಸ್ನೇಹಿತರಿಂದ ಕ‍ಣ್ಣೀರ ವಿದಾಯ

ಅಹಮದಾಬಾದ್ ವಿಮಾನ ದುರಂತದಲ್ಲಿ (Ahmedabad Plane Crash) ನಿಧನರಾದ ವಿಜಯ್‌ ರೂಪಾನಿ ಅವರಿಗೆ ಕಾಲೇಜು ಸ್ನೇಹಿತರಾದ ಜ್ಯೋತಿಂದ್ರ ಮೆಹತಾ, ಮನ್ಸೂರ್‌ಭಾಯ್ ಜಸ್ದಾನ್‌ವಾಲಾ, ಮತ್ತು ಹರಿಶ್ಚಂದ್ರ ಜಡೇಜಾ, ರೂಪಾನಿಯೊಂದಿಗಿನ ಆತ್ಮೀಯ ಕ್ಷಣಗಳನ್ನು ಭಾವನಾತ್ಮಕವಾಗಿ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ರೂಪಾನಿ ಅವರ 12ಜನರ ಸ್ನೇಹಿತರ ತಂಡವನ್ನು ‘ಡರ್ಟಿ ಡಜನ್’ ಎಂದು ಕರೆಯಲಾಗಿತ್ತಂತೆ.

Ahmedabad Plane Crash: ಅಹಮದಾಬಾದ್ ವಿಮಾನ ದುರಂತ: ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ

ವಿಮಾನ ದುರಂತ: ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖಾ ಸಮಿತಿ

ಏರ್ ಇಂಡಿಯಾ ವಿಮಾನ ದುರಂತದಲ್ಲಿ (Air India Plane Crash) 241 ಮಂದಿ ಸಾವನ್ನಪ್ಪಿದ ಘಟನೆಯ ತನಿಖೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಪ್ರಮಾಣಿತ ಕಾರ್ಯವಿಧಾನಗಳು (SOPs) ಮತ್ತು ಇಂತಹ ಘಟನೆಗಳನ್ನು ತಡೆಗಟ್ಟಲು ಹಾಗೂ ನಿರ್ವಹಿಸಲು ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಪರಿಶೀಲಿಸಿ, ಭವಿಷ್ಯದಲ್ಲಿ ಇಂತಹ ಸಂದರ್ಭಗಳಿಗೆ ಸಮಗ್ರ ಮಾರ್ಗಸೂಚಿಗಳನ್ನು ಸೂಚಿಸಲಿದೆ.

Air India plane crash: ಇಡೀ ವಿಮಾನ ಸುಟ್ಟು ಕರಕಲಾದ್ರೂ ಭಗವದ್ಗೀತೆ ಮಾತ್ರ ಫುಲ್‌ ಸೇಫ್‌; ವಿಡಿಯೊ ವೈರಲ್‌

ಇಡೀ ವಿಮಾನ ಸುಟ್ಟು ಕರಕಲಾದ್ರೂ ಭಗವದ್ಗೀತೆ ಮಾತ್ರ ಫುಲ್‌ ಸೇಫ್‌!

ಅಹ್ಮದಾಬಾದ್‌ ವಿಮಾನ ದುರಂತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿದ್ದು, ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಅಪಘಾತ ಸಂಭವಿಸಿದ ಸ್ಥಳದಲ್ಲಿನ ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯೊಂದು (Bhagavad gita) ಸಿಕ್ಕಿದ್ದು, ಎಲ್ಲವೂ ಸುಟ್ಟುಕರಕಲಾದರೂ ಈ ಭಗವದ್ಗೀತೆಯ ಪುಸ್ತಕ ಮಾತ್ರ ಏನು ಆಗದೆಯೇ ಇದೆ.

Plan Crash: ವಿಮಾನ ದುರಂತದ ವೇಳೆ ಪೈಲಟ್ ಕೊನೆಯದಾಗಿ ಹೇಳಿದ ಮಾತುಗಳೇನು ಗೊತ್ತಾ?

ವಿಮಾನ ದುರಂತದ ವೇಳೆ ಪೈಲಟ್ ಕೊನೆಯದಾಗಿ ಹೇಳಿದ ಮಾತುಗಳೇನು?

ವಿಮಾನ ದುರಂತದಲ್ಲಿ, ಪೈಲಟ್ (Pilot) ಸುಮೀತ್ ಸಭಾರ್ವಾಲ್ (Sumeet Sabharwal ) ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ (Clive Kundar), ವಿಮಾನ 625 ಅಡಿ ಎತ್ತರ ತಲುಪಿದ ನಂತರ ಏಕಾಏಕಿ ನಿಮಿಷಕ್ಕೆ 475 ಅಡಿ ವೇಗದಲ್ಲಿ ಇಳಿಯಲಾರಂಭಿಸಿದಾಗ ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ATC) ‘Mayday’ ಕರೆ ಮಾಡಿದ್ದರು.

Ahmedabad Plane Crash: ವಿಮಾನ ದುರಂತಕ್ಕೂ ಮುನ್ನ ಮಗಳ ಭೇಟಿಗೆ ತೆರಳುತ್ತಿದ್ದ ತಾಯಿಯ ಕೊನೆಯ ವಿಡಿಯೊ ವೈರಲ್

ವಿಮಾನ ದುರಂತಕ್ಕೂ ಮುನ್ನ ತಾಯಿಯ ಕೊನೆಯ ವಿಡಿಯೊ ವೈರಲ್

Air India: ಲಂಡನ್‌ಗೆ (London) ತೆರಳುತ್ತಿದ್ದ ವಿಮಾನ, ಟೇಕ್‌ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿಹೊಡೆದು ಬಿದ್ದು, ಬೆಂಕಿಗೆ ಆಹುತಿಯಾಗಿತ್ತು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯೂ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

Ahmadabad Plane Crash: ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ; ಇದರಿಂದ ಏನು ಉಪಯೋಗ? ಇಲ್ಲಿದೆ ಡಿಟೇಲ್ಸ್‌

ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಬ್ಲ್ಯಾಕ್‌ ಬಾಕ್ಸ್‌ ಒಂದು ಎಲೆಕ್ಟ್ರಾನಿಕ್‌ ಸಾಧನ ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂಬ ಎರಡು ಸಾಧನಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (NTSB) ವೆಬ್‌ಸೈಟ್ ಪ್ರಕಾರ, CVR ರೇಡಿಯೋ ಪ್ರಸರಣಗಳು ಮತ್ತು ಪೈಲಟ್‌ನ ಧ್ವನಿಗಳು ಮತ್ತು ಎಂಜಿನ್ ಶಬ್ದಗಳಂತಹ ಶಬ್ದಗಳನ್ನು ಸಂಗ್ರಹಿಸುತ್ತದೆ.

Air India Crash: ವಿಮಾನ ದುರಂತ- ಒಂದಲ್ಲ... ಎರಡಲ್ಲ... ಬರೋಬ್ಬರಿ ₹2,400 ಕೋಟಿ ಇನ್ಶೂರೆನ್ಸ್‌ ಕ್ಲೈಮ್‌

ವಿಮಾನ ದುರಂತ-ಬರೋಬ್ಬರಿ ₹2,400 ಕೋಟಿ ಇನ್ಶೂರೆನ್ಸ್‌ ಕ್ಲೈಮ್‌!

ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್, ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದು, ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:38ಕ್ಕೆ ಟೇಕ್‌ಆಫ್ ಆಗಿತ್ತು. ಆದರೆ, 32 ಸೆಕೆಂಡ್‌ಗಳಲ್ಲಿ ಎತ್ತರಕ್ಕೆ ಏರಲಾಗದೆ ವಿಮಾನ ಅಪಘಾತಕ್ಕೀಡಾಗಿತ್ತು.

Ahmedabad Plane Crash: ವಿಶ್ವಾಸ್‌ ಕುಮಾರ್‌, ವೆಸ್ನಾ, ಬಹಿಯಾ...; ವಿವಿಧ ವಿಮಾನ ಅಪಘಾತಗಳಲ್ಲಿ ಬದುಕುಳಿದ ಏಕೈಕ ಅದೃಷ್ಟಶಾಲಿಗಳಿವರು

ವಿವಿಧ ವಿಮಾನ ಅಪಘಾತಗಳಲ್ಲಿ ಬದುಕುಳಿದ ಏಕೈಕ ಅದೃಷ್ಟಶಾಲಿಗಳಿವರು

Vishwash Kumar Ramesh: ಜೂ. 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನವಾಗಿ 260ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ ಚಿಸ್ವಾಸ್‌ ಕುಮಾರ್‌ ರಮೇಶ್‌ ಒಬ್ಬರೇ ಬದುಕುಳಿದಿದ್ದಾರೆ. ವಿವಿಧ ವಿಮಾನ ಅಪಘಾತಗಳಲ್ಲಿ ಪಾರಾದ ಏಕೈಕ ಪ್ರಯಾಣಿಕರ ವಿವರ ಇಲ್ಲಿದೆ.

Ahmedabad Plane Crash: ಟೆಸ್ಟ್‌ ಫೈನಲ್, ಭಾರತ ಅಭ್ಯಾಸ ಪಂದ್ಯದ ವೇಳೆ ಸಂತಾಪ

ವಿಮಾನ ಅಪಘಾತ: ಟೆಸ್ಟ್‌ ಫೈನಲ್, ಭಾರತ ಅಭ್ಯಾಸ ಪಂದ್ಯದ ವೇಳೆ ಸಂತಾಪ

ಗುರುವಾರ ಮಧ್ಯಾಹ್ನ, 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಪ್ರಯಾಣಿಕ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು.

Narendra Modi: ʼʼಹೃದಯ ವಿದ್ರಾವಕʼʼ; ಅಹಮದಾಬಾದ್‌ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ: ಬದುಕುಳಿದ ಏಕೈಕ ಪ್ರಯಾಣಿಕನಿಗೆ ಸಾಂತ್ವನ

ಅಹಮದಾಬಾದ್‌ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Ahmedabad plane crash: ಜೂ. 12ರಂದು ದೇಶದಲ್ಲೇ 2ನೇ ಅತೋ ದೊಡ್ಡ ವಿಮಾನ ದುರಂತ ಅಹಮದಾಬಾದ್‌ನಲ್ಲಿ ನಡೆದು ಸುಮಾರು 250ಕ್ಕೂ ಹೆಚ್ಚುಮಂದಿಯನ್ನು ಬಲಿ ಪಡೆದಿದೆ. 230 ಪ್ರಯಾಣಿಕರು, 12 ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹಾರಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದು, ಓರ್ವ ಬದುಕುಳಿದಿದ್ದಾನೆ. ಶುಕ್ರವಾರ (ಜೂ. 13) ನರೇಂದ್ರ ಮೋದಿ ದುರಂತ ನಡೆದ ಸ್ಥಳ ಪರಿಶೀಲಿಸಿದರು. ಜತೆಗೆ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್‌ ವಿಶ್ವಕುಮಾರ್‌ಗೆ ಸಾಂತ್ವನ ಹೇಳಿದರು.

Ahmedabad Plane Crash: ಅಹಮದಾಬಾದ್‌ ವಿಮಾನ ದುರಂತ; ಮೃತ ದೇಹದ ಪತ್ತೆಗೆ ಇರುವ ದಾರಿಗಳೇನು?

ವಿಮಾನ ದುರಂತ; ಮೃತ ದೇಹದ ಪತ್ತೆಗೆ ಇರುವ ದಾರಿಗಳೇನು?

ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. (Ahmedabad Plane Crash) ಅವರ ಮೃತದೇಹವನ್ನು ಕೂಡ ಗುರುತಿಸಲು ಸಾಧ್ಯವಾಗುತ್ತಿಲ್ಲ. ವಿಧಿವಿಜ್ಞಾನ ತಂಡ ಹಲ್ಲುಗಳ ಮಾದರಿಗಳನ್ನು ಎಚ್ಚರಿಕೆಯಿಂದ ಹೊರತೆಗೆದು ಹೆಚ್ಚಿನ ಭದ್ರತೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.

Ahmedabad Plane Crash: ವಿಮಾನ ದುರಂತ ಪ್ರಕರಣ; 200 ಡಿಎನ್ಎ ಸ್ಯಾಂಪಲ್ಸ್‌ ಸಂಗ್ರಹ, ಹಲವು ಮೃತದೇಹಗಳ ಗುರುತು ಪತ್ತೆ

ವಿಮಾನ ದುರಂತ; 200 ಡಿಎನ್ಎ ಸ್ಯಾಂಪಲ್ಸ್‌ ಸಂಗ್ರಹ

ದೇಶದ ಇತಿಹಾಸದಲ್ಲಿ ಸಂಭವಿಸಿದ ಹಲವು ಭೀಕರ ವಿಮಾನ ಅವಘಡಗಳ ಸಾಲಿಗೆ ಜೂನ್‌ 12ರಂದು ನಡೆದ ವಿಮಾನ ಅವಘಡ ಕೂಡ ಸೇರಿಕೊಂಡಿದೆ. ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ ಕಡೆಗೆ ಹೊರಟ AI171 ವಿಮಾನ, ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ನಾಗರೀಕ ವಿಮಾನಯಾನ ದುರಂತ ಸರಪಣಿ

ನಾಗರೀಕ ವಿಮಾನಯಾನ ದುರಂತ ಸರಪಣಿ

2020ರ ಆಗಸ್ಟ್ 7ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ಏರ್ ಇಂಡಿಯ ಎಕ್ಸ್‌ಪ್ರೆಸ್ 9-1344 ವಿಮಾನ ಅವಘಡಕ್ಕೀಡಾಗಿದ್ದರಿಂದ 21 ಜನರು ಸಾವಿಗೀಡಾದರು, 100 ಮಂದಿ ಗಾಯಗೊಂಡರು. ವಂದೇಭಾರತ್ ಮಿಷನ್‌ನಡಿ ದುಬೈಗೆ ತೆರಳಿ ಬಳಿಕ ವಾಪಸಾಗುತ್ತಿದ್ದ ಎಐ ಎಕ್ಸ್‌ ಪ್ರೆಸ್ ವಿಮಾನ ದಲ್ಲಿ ಪ್ರಯಾಣಿಕರು-ಸಿಬ್ಬಂದಿ ಸೇರಿದಂತೆ ಒಟ್ಟು 190 ಜನರಿದ್ದರು.

Vijay Rupani: ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿಗೆ ಕೈಕೊಟ್ಟ ಲಕ್ಕಿ ನಂಬರ್‌; ಏನಿದು ಸಂಖ್ಯೆಯ ರಹಸ್ಯ?

ಅದೃಷ್ಟದ ಸಂಖ್ಯೆಯೇ ವಿಜಯ್‌ ರೂಪಾನಿ ಪ್ರಾಣಕ್ಕೆ ಮುಳುವಾಯ್ತು

ಗುರುವಾರ (ಜೂನ್ 12) ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ರೂಪಾನಿ ಕೂಡ ಒಬ್ಬರು. ಆದರೆ ಅವರು ಅದೃಷ್ಟ ಎಂದು ತಿಳಿದಿದ್ದ ಸಂಖ್ಯೆಯೇ ಅವರ ಪಾಲಿಗೆ ಮುಳುವಾಗಿದೆ.