ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಂಪ್ರದಾಯವನ್ನು ಮುರಿದು ತಂದೆಯ ಶವವನ್ನು ಹೊತ್ತು ಅಂತಿಮ ವಿಧಿವಿಧಾನ ನೆರವೇರಿಸಿದ ಹೆಣ್ಣುಮಕ್ಕಳು

ಅನಾದಿಕಾಲದಿಂದಲೂ ಹೆತ್ತವರ ಅಂತಿಮ ವಿಧಿ ವಿಧಾನಗಳು ಮಾಡುತ್ತಾ ಬಂದಿರುವುದು ಗಂಡುಮಕ್ಕಳೇ, ಅದೇ ನಮ್ಮ ಸಂಪ್ರದಾಯ-ವಾಡಿಕೆ ಕೂಡ. ಅಂತ್ಯಸಂಸ್ಕಾರ ಸೇರಿದಂತೆ ಕೆಲವೊಂದು ಸಂಪ್ರದಾಯಗಳ ವಿಷಯ ಬಂದಾಗ ಗಂಡು ಮಕ್ಕಳಿಗೇ ಹೆಚ್ಚು ಪ್ರಾಮುಖ್ಯತೆ ಇದ್ದು, ಅಂತ್ಯಸಂಸ್ಕಾರ ಮಾಡುವುದಕ್ಕಾದರೂ ನಮ್ಮಗೊಂದು ಗಂಡುಮಗ ಬೇಕು ಎಂದುಕೊಳ್ಳುತ್ತಾರೆ. ಆದ್ರೆ ಬದಲಾದ ಕಾಲಘಟ್ಟ ನಮ್ಮಲ್ಲಿನ ರೀತಿ-ರಿವಾಜುಗಳನ್ನು ಬದಲಾಯಿಸಿದ್ದು, ಮಗನಿಲ್ಲದ ಕುಟುಂಬದಲ್ಲಿ ಹೆಣ್ಣು ಮಕ್ಕಳೇ ಮುಂದೆ ನಿಂತು ಹಿರಿಯರ ಅಂತ್ಯಸಂಸ್ಕಾರ ಮಾಡುತ್ತಿರುವ ಉದಾಹರಣೆಗಳು ಇವೆ. ಇಂತದೇ ಘಟನೆಯೊಂದು ಇದೀಗ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಪ್ಪನ ಅಂತಿಮ ವಿಧಿವಿಧಾನ ನೆರವೇರಿಸಿದ ಹೆಣ್ಣುಮಕ್ಕಳು!

-

Profile Sushmitha Jain Sep 19, 2025 1:10 PM

ಜಬಲ್‌ಪುರ: ಮಧ್ಯಪ್ರದೇಶದ (Madhya Pradesh) ಜಬಲ್‌ಪುರದ (Jabalpur) ಪನಗರ್‌ನಲ್ಲಿ ನಡೆದ ಒಂದು ಹೃದಯಸ್ಪರ್ಶಿ ಘಟನೆಯು ಸಾಂಪ್ರದಾಯಿಕ (Traditional) ಗೋಡೆಗಳನ್ನು ಒಡೆದು, ಸಮಾಜದಲ್ಲಿ ಗಾಢವಾದ ಛಾಪು ಮೂಡಿಸಿದೆ. ಪದ್ಮ ಮೋದಿ ಎಂಬುವವರ ಅಂತ್ಯಕ್ರಿಯೆಯನ್ನು ಅವರ ನಾಲ್ವರು ಹೆಣ್ಣುಮಕ್ಕಳಾದ ಸುಷಿಮಾ, ಮಾನ್ಸಿ, ಮಹಿಮಾ ಮತ್ತು ಪಾರಿ ನೆರವೇರಿಸಿದ್ದಾರೆ. ಈ ನಾಲ್ವರು ತಮ್ಮ ಭುಜದ ಮೇಲೆ ತಂದೆಯ ಮೃತದೇಹ ಹೊತ್ತು ಸಾಗಿದ ದೃಶ್ಯ ಸ್ಥಳದಲ್ಲಿದ್ದವರ ಕಣ್ಣು ತೇವಗೊಳಿಸಿದೆ.

ಪದ್ಮ ಮೋದಿಯವರು ತೀರ್ಥರಾಜ್ ಸಮ್ಮೇದ್ ಶಿಖರ್ಜಿಯ ಯಾತ್ರೆಯಿಂದ ವಾಪಸಾಗುತ್ತಿದ್ದಾಗ ಹೃದಯಾಘಾತದಿಂದ ಕೊನೆಯುಸಿರೆಳೆದರು. ಕುಟುಂಬದವರು ಮತ್ತು ಸ್ನೇಹಿತರು ತಕ್ಷಣ ಚಿಕಿತ್ಸೆಗೆ ದಾಖಲಿಸಿದರೂ ಅವರನ್ನು ಉಳಿಸಲಾಗಲಿಲ್ಲ. ಅವರ ಮೃತದೇಹವನ್ನು ಜಬಲ್‌ಪುರಕ್ಕೆ ಕೊಂಡೊಯ್ಯಲಾಯಿತು.

ಈ ಸುದ್ದಿಯನ್ನೂ ಓದಿ: Viral Video: ಒಂದೆಡೆ ಕರುಳಿನ ಕುಡಿ... ಮತ್ತೊಂದೆಡೆ ಕರ್ತವ್ಯದ ಕೂಗು! ಈ ತಾಯಿಯ ವಿಡಿಯೊ ಫುಲ್‌ ವೈರಲ್‌

ಪದ್ಮ ಮೋದಿಯವರು ತಮ್ಮ ನಾಲ್ವರು ಹೆಣ್ಣುಮಕ್ಕಳಿಗೆ ಯಾವಾಗಲೂ ಧೈರ್ಯವಂತ ಶಿಕ್ಷಣ ಮತ್ತು ಸಮಾನತೆಯನ್ನು ಕಲಿಸಿದ್ದರು. “ಅವರು ಎಂದಿಗೂ ಮಗ-ಮಗಳೆಂಬ ತಾರತಮ್ಯ ಮಾಡಿರಲಿಲ್ಲ” ಎಂದು ಕುಟುಂಬದ ಆಪ್ತರೊಬ್ಬರು ತಿಳಿಸಿದ್ದಾರೆ. ಸಂಪ್ರದಾಯದ ಪದ್ಧತಿಯನ್ನು ಒಡೆಯುತ್ತಾ, ನಾಲ್ವರು ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಅಂತಿಮ ಯಾತ್ರೆಯಲ್ಲಿ ಧೈರ್ಯದಿಂದ ನಡೆದರು. ಸ್ಮಶಾನದಲ್ಲಿ ಎಲ್ಲ ಆಚರಣೆಗಳನ್ನೂ ಗೌರವದಿಂದ ನೆರವೇರಿಸಿದರು, ಇದನ್ನು ಕಂ ಸಂಬಂಧಿಕರು ಭಾವುಕರಾಗಿದ್ದರು.

ಅಂತ್ಯಕ್ರಿಯೆಗೆ ಸ್ಥಳೀಯ ಸಾಮಾಜಿಕ ಸಂಸ್ಥೆಗಳು, ವ್ಯಾಪಾರಿಗಳು ಮತ್ತು ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಯುವತಿಯರು ತಂದೆಯ ಅಂತಿಮ ಆಚರಣೆಯನ್ನು ನೆರವೇರಿಸಿದ ದೃಶ್ಯ ಸಾಮಾಜಿಕ ನಿಯಮಗಳಿಂದ ಹೊರಬಂದ ಅಪರೂಪದ ಘಟನೆಯಾಗಿತ್ತು. ಇದು ಜನರನ್ನು ಭಾವುಕರನ್ನಾಗಿ ಮಾಡಿತು ಮತ್ತು ಲಿಂಗ ತಾರತಮ್ಯವನ್ನು ಒಡೆಯುವ ಸಂದೇಶವನ್ನು ರವಾನಿಸಿತು.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹೆಣ್ಣುಮಕ್ಕಳ ಸಾಮರ್ಥ್ಯ ಮತ್ತು ಸಂಪ್ರದಾಯದ ಬಂಧನಗಳಿಂದ ಮುಕ್ತವಾಗುವ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಮಹಿಳಾ ಸಬಲೀಕರಣಕ್ಕೆ ಒಂದು ಮಾದರಿಯಾಗಿದೆ.