ಟ್ರಾಫಿಕ್ ನಿಯಮ ಜನಸಾಮಾನ್ಯರಿಗೆ ಮಾತ್ರನಾ? ಹೆಲ್ಮೆಟ್ ಧರಿಸದೆ ಬುಲೆಟ್ ಓಡಿಸಿದ ಇಂದೋರ್ ಶಾಸಕನ ವಿರುದ್ಧ ಮುಗಿಬಿದ್ದ ನೆಟ್ಟಿಗರು
Viral Video: ಮಧ್ಯ ಪ್ರದೇಶದ ಬಿಜೆಪಿ ನಾಯಕ, ಶಾಸಕ ಮಹೇಂದ್ರ ಹರ್ದಿಯಾ ಇಂದೋರ್ನ ಬೀದಿಗಳಲ್ಲಿ ಹೆಲ್ಮೆಟ್ ಧರಿಸದೆ ರಾಯಲ್ ಎನ್ಫೀಲ್ಡ್ ಸವಾರಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಬೈಕು ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಒಂದು ನ್ಯಾಯ? ಜನಸಾಮಾನ್ಯರಿಗೆ ಒಂದು ನಿಯಮವೇ? ಎಂದು ಹಲವರು ಪ್ರಶ್ನಿಸಿದ್ದಾರೆ.
ಇಂದೋರ್ ಶಾಸಕನ ಹೆಲ್ಮೆಟ್ ರಹಿತ ಬುಲೆಟ್ ಸವಾರಿ -
ಭೋಪಾಲ್, ಮೇ 22: ರಸ್ತೆಯಲ್ಲಿ ಪ್ರಯಾಣಿಸುವಾಗ ಸುರಕ್ಷತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿ. ಪ್ರತಿಯೊಬ್ಬನೂ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಇತ್ತೀಚೆಗೆ ಅಪಘಾತ ಪ್ರಕರಣ ಹೆಚ್ಚಾಗಿದ್ದು ಸಾರಿಗೆ ಇಲಾಖೆ ನಿಯಮವನ್ನು ಬಿಗಿಗೊಳಿಸಿದೆ. ಹೆಲ್ಮೆಟ್ ಧರಿಸಲು, ಸೀಟ್ ಬೆಲ್ಟ್ ಹಾಕಲು ಹೀಗೆ ಪದೇ ಪದೆ ಸೂಚನೆ ನೀಡುತ್ತದೆ. ಆದರೆ ಇದೀಗ ಪ್ರಮುಖ ರಾಜಕೀಯ ನಾಯಕ, ಮಧ್ಯ ಪ್ರದೇಶದ ಇಂದೋರ್ನ ಬಿಜೆಪಿ ಶಾಸಕ ಹೆಲ್ಮೆಟ್ ಧರಿಸದೆ ಬುಲೆಟ್ ಸವಾರಿ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.ಈ ನಿಯಮ ಜನಸಾಮಾನ್ಯರಿಗೆ ಮಾತ್ರವೇ? ಎಂದು ಹಲವು ಮಂದಿ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕ ಮಹೇಂದ್ರ ಹರ್ದಿಯಾ ಇಂದೋರ್ನ ಬೀದಿಗಳಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಬೈಕ್ ಸವಾರಿ ಮಾಡುವಾಗ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ರಾಜಕೀಯ ವ್ಯಕ್ತಿಗಳಿಗೆ ಒಂದು ನ್ಯಾಯ? ಜನಸಾಮಾನ್ಯರಿಗೆ ಒಂದು ನಿಯಮವೇ? ಎಂಬ ಪ್ರಶ್ನೆ ಮೂಡಿದೆ.
ವಿಡಿಯೊ ನೋಡಿ:
इंदौर विधानसभा 5 के विधायक महेंद्र हार्डियाजी, बिना हेलमेट।
— SanjayGupta_Journalist (@sanjaygupta1304) May 22, 2026
अब इनका चालान कौन बनाए।
कुछ दिन पहले बिना हेलमेट एक्टिवा सवार लड़की को ट्रैफिक पुलिस ने सख्ती दिखाई जिसमें गिरकर घायल हुई थी। एक नेता जी को पकड़ा गया तो तीन पुलिसकर्मी लाइन अटैच हो गए।
नियम हमेशा प्रजा के लिए pic.twitter.com/w8pPAxq0o7
ಹೆಚ್ಚಾಗಿ ಸರಳ ಉಡುಪಿನಲ್ಲಿಗಮನ ಸೆಳೆಯುತ್ತಿದ್ದ ಶಾಸಕ ಈ ಭಾರಿ ಶಾರ್ಟ್ಸ್ ಮತ್ತು ಟಿ-ಶರ್ಟ್ ಧರಿಸಿ, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬುಲೆಟ್ ಸವಾರಿ ಮಾಡಿದ್ದಾರೆ. ಅದರಲ್ಲೂ ಹೆಲ್ಮೆಟ್ ಹಾಕದೇ ಇರುವುದು ಹೈಲೆಟ್ ಆಗಿದೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಸಂಚಾರ ನಿಯಮಗಳನ್ನು ಸಾಮಾನ್ಯ ನಾಗರಿಕರ ಮೇಲೆ ಮಾತ್ರ ಜಾರಿಗೊಳಿಸಲಾಗುತ್ತದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ
ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ವಿಡಿಯೊ ವೈರಲ್
ಇಂದೋರ್ನಲ್ಲಿ ಇತ್ತೀಚೆಗಷ್ಟೇ ಹೆಲ್ಮೆಟ್ ಧರಿಸದೆ ಸ್ಕೂಟರ್ ಚಲಾಯಿಸುತ್ತಿದ್ದ ಯುವತಿಯೊಬ್ಬಳನ್ನು ತಡೆದು ಟ್ರಾಫಿಕ್ ಪೋಲೀಸರು ದಂಡ ಹಾಕುವಾಗ ಆಕೆ ಬಿದ್ದು ಗಾಯಗೊಂಡಿದ್ದಳು. ಸಾಮಾನ್ಯ ಜನರ ಸಣ್ಣಪುಟ್ಟ ತಪ್ಪುಗಳಿಗೆ ನೂರಾರು ರುಪಾಯಿ ದಂಡ ವಿಧಿಸುವ ಇಂದೋರ್ ಟ್ರಾಫಿಕ್ ಪೊಲೀಸರು ಇದಕ್ಕೆ ಉತ್ತರ ನೀಡಲಿ. ದೇಶದ ರಾಜಕೀಯ ನಾಯಕರೇ ಈ ನಿಯಮ ಪಾಲಿಸದಿದ್ದರೆ ಜನಸಾಮಾನ್ಯರು ಹೇಗೆ ಪಾಲಿಸುತ್ತಾರೆ? ಎಂದು ಕೆಲವರು ಪ್ರಶ್ನಿಸಿದ್ದಾರೆ.