ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಮ

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

ಕನ್ನಡದ ಪ್ರೇಮಕವಿ, ಸಾಹಿತ್ಯ ಜಗತ್ತಿನ ಜಾಲಿ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣ ರಾವ್ ಅವರು ಕನ್ನಡ ಕಾವ್ಯ ಪ್ರಪಂಚದ ಭಾವಗೀತೆಗಳ ಸರದಾರ. ಗಾಢ ಪ್ರೇಮ, ವಿರಹ, ವಿಷಾದ, ಜೀವನತತ್ವ ಹೀಗೆ ಹಲವು ವಿಷಯ ವಸ್ತುಗಳ ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿ ಸಾಹಿತ್ಯ ಜಗತ್ತಿಗೆ ಉತ್ತಮ ಕೃತಿಗಳನ್ನು ಕೈಗಿತ್ತ ಖ್ಯಾತಿ ಅವರದ್ದಾಗಿದೆ. ಚಿರಯವ್ವನಿಗ ಬಿಆರ್‌ಎಲ್ ಇದೇ ಮಂಗಳವಾರ (ಸೆ.9) 80ಕ್ಕೆ ಕಾಲಿಡುತ್ತಿದ್ದಾರೆ

Narayana Yaji Column: ಗೆದ್ದವರ ಕಥೆಗಳು

Narayana Yaji Column: ಗೆದ್ದವರ ಕಥೆಗಳು

ಅಡಕಳ್ಳಿಯವರಿಗೆ ಬರಹ ಎಂದರೆ ಹೊಳ್ಳಿ ಮೇಲೆ ಕುಳಿತು ಕವಳದ ಚಂಚಿ ತೆಗೆದಷ್ಟೆ ಸಲೀಸು. ಯಾವ ವಿಷಯದ ಮೇಲಾದರೂ ಯಾರ ಕುರಿತಾದರೂ ಬರೆಯಬಲ್ಲರು; ಅವರದೇ ಧಾಟಿಯಲ್ಲಿ ಬರೆಯ ಬೇಕೆಂದೆರೆ “ಎಮ್ಮೆಗೆ ಅಕ್ಕೊಚ್ಚು ಹೊಯ್ದಂಗಲ್ಲ, ಒಳ್ಳೇ ಕೇಸರಿ ಹಾಕಿ ಮಾಡಿದ ಗಸ ಗಸೆ ಪಾಯಸದಂತೆ ಇರುತ್ತದೆ".

Harish Kera Column: ಪಾತಾಳಮಲೆಯಲ್ಲಿ ಪತಂಗ !

Harish Kera Column: ಪಾತಾಳಮಲೆಯಲ್ಲಿ ಪತಂಗ !

ಒಂದು ಯಃಕಶ್ಚಿತ್ ಪತಂಗಕ್ಕಾಗಿ ನಾವಿಷ್ಟು ಜನರನ್ನು ಕರೆದು ಕೂರಿಸಿಕೊಂಡಿದ್ದಾರಲ್ಲ ಎಂದು ಆಶ್ಚರ್ಯ, ಕುತೂಹಲ, ಸ್ವಲ್ಪ ಅಸಮಾಧಾನ ಒಟ್ಟಿಗೇ ಮೂಡಿದವು. ಏನೋ ಮಹತ್ವದ ಸಂಶೋ ಧನೆ ಎಂದು ಬಂದರೆ ಈಗ ಬರೀ ಪತಂಗ ಪಾತರಗಿತ್ತಿ ಅಂತಾ ಇದಾರಲ್ಲ. ಇವರಿಗೇನು ಮಂಡೆ ಸಮ ಇದೆಯಾ, ಒಂದು ಚಿಟ್ಟೆ ಹಿಡಿಯಲು ನಾವಿಷ್ಟು ಜನ ಬೇಕಾ ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿ ಮುಳುಗಿದವು.

Surabhi Hudigere Column: ಧಾರ್ಮಿಕ ಪ್ರಜ್ಞೆಗೊಂದು ಆಘಾತ: ಮಹಿಳೆಯರು, ನಂಬಿಕೆ ಮತ್ತು ವದಂತಿಗಳು

ಧಾರ್ಮಿಕ ಪ್ರಜ್ಞೆಗೊಂದು ಆಘಾತ: ಮಹಿಳೆಯರು, ನಂಬಿಕೆ ಮತ್ತು ವದಂತಿಗಳು

ಸೇವೆ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾದ ದೇವಾಲಯದ ಈ ಪಟ್ಟಣವನ್ನು ಅನ್ಯಾಯವಾಗಿ ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಲಾಯಿತು. ವಿದೇಶದಲ್ಲಿರುವ ಕನ್ನಡಿಗರು ಅವಮಾನಕರ ಪ್ರಶ್ನೆಗಳನ್ನು ಕೇಳಬೇಕಾಯಿತು: ಅವರ ರಾಜ್ಯವು ಸಾಮೂಹಿಕ ಸಮಾಧಿಗಳನ್ನು ಮರೆಮಾಚಿದೆಯೇ, ಅವರ ಧರ್ಮವು ಈ ಭಯಾನಕ ಅತ್ಯಾಚಾರಗಳಿಗೆ ಸಮ್ಮತಿ ನೀಡಿತ್ತೇ? ಮತ್ತೊಮ್ಮೆ, ರಾಜ್ಯ ಸರ್ಕಾರದ ಬಳಿ ಯಾವುದೇ ಕಾರ್ಯತಂತ್ರವಿರಲಿಲ್ಲ, ಸುಸಂಬದ್ಧ ಸಂವಹನ ವಿರಲಿಲ್ಲ, ಅಕಾಲಿಕ ತೀರ್ಪಿನ ವಿರುದ್ಧ ತನ್ನದೇ ಜನರನ್ನು ರಕ್ಷಿಸಲು ಯಾವುದೇ ಯೋಜನೆಗಳಿರ ಲಿಲ್ಲ.

Sudha Murty: ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳ ಚಿತ್ರ ಹಂಚಿಕೊಂಡ ಸುಧಾಮೂರ್ತಿ

ಪುರಾತನ ಕಿಲಾದಲ್ಲಿ ಸುಧಾಮೂರ್ತಿ

ಯಾವುದೇ ಪ್ರದೇಶಕ್ಕೆ ಹೋಗಬೇಕಾದರೂ ಲೇಖಕಿ, ಇನ್ಫೋಸಿಸ್‌ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ಸಾಕಷ್ಟು ಅಧ್ಯಯನ ಮಾಡುತ್ತಾರೆ. ಇತ್ತೀಚೆಗೆ ಇವರು ಸಿಂಧೂ ಕಣಿವೆ ನಾಗರಿಕತೆಯ ಪ್ರಮುಖ ನಗರವಾದ ಲೋಥಲ್‌ನಿಂದ ಉತ್ಖನನ ಮಾಡಲಾದ ಸಾಂಪ್ರದಾಯಿಕ ಕಲಾಕೃತಿಗಳನ್ನು ನೋಡಲು ದೆಹಲಿಯ ಪುರಾತನ ಕಿಲಾಕ್ಕೆ ಭೇಟಿ ನೀಡಿದರು.

ನಿಸ್ಸಾನ್ ಮ್ಯಾಗ್ನೈಟ್‌ಗೆ 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆ ಪರಿಚಯಿಸಿದ ನಿಸ್ಸಾನ್

10 ವರ್ಷಗಳ ವಿಸ್ತೃತ ವಾರಂಟಿ ಯೋಜನೆ ಪರಿಚಯಿಸಿದ ನಿಸ್ಸಾನ್

ಈ ಯೋಜನೆಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ಹೊಂದಿದ್ದು, ಇದನ್ನು 10 ವರ್ಷಗಳ ವಿಸ್ತೃತ ವಾರಂಟಿ ಯೋಜನೆಯವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ 10 ವರ್ಷಗಳು/2 ಲಕ್ಷ ಕಿಮೀ ವರೆಗಿನ ರಕ್ಷಣೆಯನ್ನು ಒದಗಿಸಲಾಗುತ್ತಿದ್ದು, ಕೇವಲ ಕಿಮೀಗೆ 22 ಪೈಸೆ ಅಥವಾ ಪ್ರತಿ ದಿನಕ್ಕೆ 12 ರೂ. ಬೆಲೆಯಲ್ಲಿ ಸಂಪೂರ್ಣ ರಕ್ಷಣೆ ದೊರೆಯುತ್ತದೆ.

Narayana Yaji Column: ಭಾರತದ ಮೇಲೇಕೆ ಅಧಿಕ ಸುಂಕ ?

ಭಾರತದ ಮೇಲೇಕೆ ಅಧಿಕ ಸುಂಕ ?

ಭಾರತ ಮತ್ತು ಅಮೆರಿಕಗಳ ನಡುವಿನ ವ್ಯಾಪಾರದ ಪಾಲುದಾರಿಕೆಯನ್ನು ಒಮ್ಮೆ ಗಮನಿಸೋಣ. ಅಮೆರಿಕದ ಒಟ್ಟೂ ಆಮದಿನಲ್ಲಿ ಸಿಂಹಪಾಲು ಯುರೋಪಿಯನ್ ಯೂನಿಯನ್ ಮತ್ತು ಚೈನಾ ದಿಂದ ಕ್ರಮವಾಗಿ 605.76 ಮತ್ತು 438.95 ಬಿಲಿಯನ್ ಡಾಲರಗಳಷ್ಟಾದರೆ, ಭಾರತದಿಂದ ಕೇವಲ 129.02 ಬಿಲಿಯನ್ ಡಾಲರಗಳಷ್ಟಾಗಿದೆ. ಅದರಲ್ಲಿ ರಪ್ತು 87.4 ಬಿಲಿಯ ಡಾಲರ್ ಆದರೆ ಆಮದು 41.08 ಡಾಲರ ಗಳು.

ನಮ್ಮ ನಾಡಿನ ಹೆಮ್ಮೆ ಈ ಅಭಿನಯ ಸರಸ್ವತಿ !

ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೆ ?

ಹೊನ್ನಪ್ಪ ಭಾಗವತರ್ ಅವರ ತಂಡದಲ್ಲಿದ್ದ ಕು.ರ.ಸೀತಾರಾಮ ಶಾಸ್ತ್ರಿಗಳು, ಪರಮೇಶ್, ರಾಮನಾಥ್ ಎಲ್ಲರೂ ಮೇಕಪ್ ಟೆಸ್ಟ್ ನಂತರ ‘ಕಣ್ಣಿನಲ್ಲಿ ಒಂದು ಮಚ್ಚೆ ಇದೆ, ಸಣ್ಣ ಅಪರೇಷನ್ ಮಾಡಿ ಅದನ್ನು ತೆಗೆದರೆ ಪಾತ್ರ ಮಾಡಬಹುದು’ ಎಂದು ರೇಗಿಸಿದರು. ಚಿಕ್ಕ ಹುಡುಗಿ ಭಯದಿಂದ ‘ಈಗಲೇ ಬೆಂಗಳೂರಿಗೆ ಹೋಗೋಣ’ ಎಂದು ಅಳಲು ಆರಂಭಿಸಿದಳು.

K Janardhana Thunga Column: ಮಗ ಬರೆದ ಅಪ್ಪನ ಆತ್ಮಕಥೆ

ಮಗ ಬರೆದ ಅಪ್ಪನ ಆತ್ಮಕಥೆ

ಅಪ್ಪ, ಮಕ್ಕಳು ತಮ್ಮ ಕೌಟುಂಬಿಕ ನೆಲೆಯ ವಾಸ್ತವ ಪ್ರಪಂಚದಲ್ಲಿ ಮಾತ್ರವಲ್ಲದೆ, ಭಾವನಾ ಪ್ರಪಂಚ ದಲ್ಲಿಯೂ ಇರುತ್ತಾರೆ. ಅಪ್ಪನ ಬಗ್ಗೆ ಪ್ರಾಮಾಣಿಕವಾಗಿ ಬರೆಯಿರಿ ಎಂದರೆ, ಮಕ್ಕಳಿಗೆ ಬಲು ಕಷ್ಟ. ತೀರಾ ಪ್ರಾಮಾಣಿಕವಾಗಿ ಬರೆಯುವಾಗ ಅದೆಲ್ಲಿಯೋ ತನ್ನನ್ನೂ ಪ್ರತಿನಿಧಿಸುತ್ತದೆ ಎಂಬ ಹಿಂಜರಿಕೆಯೂ ಇರುತ್ತದೆ. ಈ ಸಂದಿಗ್ಧತೆಯು, ಕೆ.ಎಸ್.ನ. ಅವರ ಮಗ ಮಹಾಬಲ ರನ್ನೂ ಕಾಡಿರಬೇಕು.

Prof G N Upadhyay Column: ಕ್ಷೇತ್ರ ಕಾನಡೇ ! ದೇವ ಕಾನಡೇ !ತೀರ್ಥ ಕಾನಡೇ !

ಲಕ್ಷಾಂತರ ಜನರು ಪಾಲ್ಗೊಳ್ಳುವ ವಾರಕರಿ ಸಂಪ್ರದಾಯ

ಕರ್ನಾಟಕವೂ ಸೇರಿದಂತೆ ಇತರ ರಾಜ್ಯ ಗಳಲ್ಲೂ ಅವನ ಭಕ್ತಾಭಿಮಾನಿಗಳ ಗಡಣ ದೊಡ್ಡದು. ಜ್ಞಾನೇ ಶ್ವರ, ತುಕಾರಾಮ, ಮುಕ್ತಾ ಬಾಯಿ, ಏಕನಾಥರಿಂದ ತೊಡಗಿ ನೀಳೋಬಾವರೆಗಿನ ಎಲ್ಲ ಸಂತ ಕವಿಗಳು ವಿಠ್ಠಲನ ಚರಣ ಕಮಲದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರೆ ಆಗಿದ್ದಾರೆ. ಅವರು ವಿಠ್ಠಲನನ್ನು ಮಾತೆಯಾಗಿ ಸ್ವೀಕಾರ ಮಾಡಿಕೊಂಡರು.

Narayana Poshitlu Column: ದಾವಣಗೆರೆ ಮಂಡಕ್ಕಿ ಮೆಣಸಿನಕಾಯಿ

ದಾವಣಗೆರೆ ಮಂಡಕ್ಕಿ ಮೆಣಸಿನಕಾಯಿ

ನಮ್ಮ ನಾಡಿನ ಒಂದೊಂದು ಊರಿನಲ್ಲೂ, ಅಲ್ಲಿನ ವಿಶಿಷ್ಟ ತಿಂಡಿ ತಿನಿಸುಗಳು ಜನರ ನಾಲಗೆಗೆ ಹಿತವಾಗಿವೆ, ಪ್ರಸಿದ್ಧಿಯನ್ನೂ ಪಡೆದಿವೆ. ದಾವಣಗೆರೆ ಎಂದಾಕ್ಷಣ ಮಂಡಕ್ಕಿ ಮೆಣಸಿನ ಕಾಯಿ ಮತ್ತು ಬೆಣ್ಣೆ ದೋಸೆ ನೆನಪಾಗುತ್ತದೆ. ಮಂಡಕ್ಕಿ ಮೆಣಸಿನ ಕಾಯಿಯ ತಯಾರಿ, ತಿನ್ನುವ ಅನುಭವದ ಕುರಿತು ಇಲ್ಲೊಂದು ಬರಹವಿದೆ. ನಿಮ್ಮ ಊರಿನ ವಿಶಿಷ್ಟ ತಿನಿಸಿನ ಕುರಿತು ನೀವೂ ಏಕೆ ಬರೆಯಬಾರದು!

ಅಪ್ಪ ಎಂದರೆ ಆಲದ ಮರ !

ಅಪ್ಪ ಎಂದರೆ ಆಲದ ಮರ !

ಅಂತಾರಾಷ್ಟ್ರೀಯ ‘ಅಪ್ಪಂದಿರ ದಿನ’ದ ಆಚರಣೆ ಇಂದು ನಡೆಯುತ್ತಿದೆ. ಕೆಲವೇ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ವಿಶೇಷವಾಗಿ ಆಚರಣೆ ಆರಂಭಿಸಿದ ‘ಫಾದರ್ಸ್ ಡೇ’, ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಇಂತಹ ಹಲವು ವಿದೇಶಿ ಆಚರಣೆಗಳು ಒಂದರ ಹಿಂದೆ ಒಂದರಂತೆ ನಮ್ಮ ದೇಶವನ್ನು ಪ್ರವೇಶಿಸುತ್ತಿವೆ ಮತ್ತು ನಮ್ಮವರು ಸಂಭ್ರಮದಿಂದಲೇ ಅವುಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ!

ಸಂಭ್ರಮಕ್ಕೆ ಇರಲಿ ಮಿತಿ

ಸಂಭ್ರಮಕ್ಕೆ ಇರಲಿ ಮಿತಿ

ಎಂದಿನಂತೆ ವಾಕಿಂಗ್ ಮುಗಿಸಿ ಒಳಹೋಗುವಾಗ, ಥಟ್ ಅಂತ ನಿಲ್ಲಿಸಿ ಬಿಟ್ಟಿತು ಪಕ್ಕದ ಮನೆಯ ಸುಗಂಧಕ್ಕಾನ ಮುಖದ ನೋವು. ‘ಏಕೆ? ಮಗಳು ಸುವ್ವಿ ಮಲಗಿದ್ದಾಳಾ?’ ಎಂದಾಗ ಸುಗಂಧಿ ಕಣ್ಣು ಇನ್ನಷ್ಟು ತೇವಗೊಂಡವು/ ‘ಮೇಡಂ ರಾತ್ರಿಯಿಂದ ಒಂಥರಾ ಸಂಕಟ. ಸ್ಕೂಲಿನಲ್ಲಿ ಫಾದರ್ಸ ಡೇಗೆ ಅಪ್ಪಯ್ಯನ ಕರಕೊಂಡು, ಅವರ ಜೊತೆ ಇರುವ ಫೋಟೋ ತರಲಿಕ್ಕೆ ಸುವ್ವಿಗೆ ಹೇಳಿದಾರಂತೆ.

Chandrashekher Hegde Badami Column: ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಕನ್ನಡಿಗರ ಹೃದಯದಲ್ಲಿ ಪ್ರೀತಿ, ಪ್ರಣಯ, ಕರುಣೆ, ಅಂತಃಕರಣ, ಭಾವದೀಪ್ತಿಯನ್ನು ಬೆಳಗಿಸಿದ ಅಪೂರ್ವ ಕವಿ ಎಚೆಸ್ವಿಯವರು, ನಮ್ಮಂತಹ ಸಹೃದಯರ ಎದೆಯ ಕಡಲಿನಲ್ಲಿ ಕೇವಲ ಕಾವ್ಯದ ಹಾಯಿದೋಣಿಯಾಗಿ ತೇಲದೇ, ಅದರ ಜಗದಗಲದ ಮುಗಿಲಗಲ ಮಿಗೆಯಗಲದ ಆಳವನ್ನರಿತು ಮಾನವೀಯ ಸಂಬಂಧಗಳ ನೆಲೆ ಬೆಲೆಗಳನ್ನು ಲೋಕಕ್ಕೆ ತಿಳಿಸಿದವರು. ಅಳಿಮನದವರಾಗಿ ಮನುಷ್ಯ ಪ್ರೇಮವನ್ನು ಲಾಭನಷ್ಟದ ವ್ಯವಹಾರಿಕ ತಕ್ಕಡಿಯಲ್ಲಿಟ್ಟು ತೂಗುವ ನಮ್ಮಂತಹ ಆಧುನಿಕರಿಗೆ ಎಚೆಸ್ವಿಯರ ಕಾವ್ಯ ಮನುಷ್ಯತ್ವದ ಚಿಕಿತ್ಸೆ ನೀಡುವಂತಿದೆ. ಸ್ವಾರ್ಥದ ಬಯಕೆ ಯೆಂದಿಗೂ ಶರಣಾ ಗತಿಯ ಭಾವವನ್ನು ರೂಪಿಸುವುದಿಲ್ಲ; ಹಾಗೆ ಪ್ರೀತಿಯನ್ನೂ. ಆಸೆಗಳ ಸುಳಿಯಿಂದ ಪ್ರೀತಿಯನ್ನು ಕಾಪಾಡಿಕೊಳ್ಳಬೇಕಾದ ಜರೂರತ್ತು ವಿಶ್ವಕ್ಕಿದೆ.

Narayana Yaji Column: ಜೀವನದ ಭಿನ್ನಮುಖಿ ಅಂಶಗಳ ಕಥಾನಕ

ಜೀವನದ ಭಿನ್ನಮುಖಿ ಅಂಶಗಳ ಕಥಾನಕ

ಲೇಖಕ ತಮ್ಮದೇ ಆದ ಸಂಸಾ ರದ ನೋವುಗಳನ್ನು, ಸಾಮಾಜಿಕ ಶೋಷಣೆಯ ಘಟಕಗಳನ್ನು ಮತ್ತು ಸಾಂಸ್ಕೃತಿಕ ವಿನ್ಯಾಸದ ಭ್ರಷ್ಟ ರೂಪವನ್ನೇ ತನ್ನ ನಿರೂಪಣೆಯಲ್ಲಿ ಧೈರ್ಯದಿಂದ ಎದುರುಗೊಳ್ಳು ತ್ತಾರೆ. ಅವರ ಶಬ್ದಗಳು ನಾಟಕೀಯತೆಯ ಅಲಂಕಾರವನ್ನು ತಿರಸ್ಕರಿಸಿ, ಸತ್ಯಾನುಭವದ ನಿಜತೆಯನ್ನು ಹಿಡಿದು ನಿಲ್ಲುತ್ತವೆ. ಈ ಶುದ್ಧ ಅನುಭವವೇ ಕಾದಂಬರಿಯ ಪ್ರಭಾವಶೀಲತೆಯ ಮೂಲವಾಗಿದೆ.

N S SridharMurthy Column: ಹಾಡು ಮುಗಿಯುವುದಿಲ್ಲ, ಮುಗಿದರದು ಹಾಡಲ್ಲ !

ಹಾಡು ಮುಗಿಯುವುದಿಲ್ಲ, ಮುಗಿದರದು ಹಾಡಲ್ಲ !

ಅದು ನಮ್ಮ ಬಾಲ್ಯದ ದಿನಗಳ ಆಕರ್ಷಣೆಯಾಗಿದ್ದ ಚಿತ್ರದುರ್ಗದ ಕೋಟೆಯ ರಹಸ್ಯಗಳ ಕುರಿತೇ ಇತ್ತು. ಅದನ್ನು ಹತ್ತಾರು ಸಲ ಓದಿದ್ದಷ್ಟೇ ಅಲ್ಲ ಪಾರಾಯಣ ಮಾಡಿದ್ದೂ ಆಯಿತು. ಮುಂದಿನ ಸಲ ಚಿತ್ರದುರ್ಗಕ್ಕೆ ಹೋದಾಗ ಚಂದ್ರವಳ್ಳಿಗೆ ಹೋಗಿ ಅಲ್ಲಿ ಧವಳಗಿರಿ, ನಾಮದ ಜಲಪಾತ, ಶಿಲಾದುರ್ಗ ಗಳನ್ನು ಹುಡುಕಿದ್ದೂ ಆಯಿತು. ಅವು ಕವಿಯ ಕಲ್ಪನೆ ಎಂಬ ತಿಳಿವಳಿಕೆ ಇರುವ ವಯಸ್ಸಲ್ಲವಾದ್ದ ರಿಂದ ನಿರಾಶರಾಗಿದ್ದೂ ಆಯಿತು

Santhosh Kumar Mehandale Column: ಸಾಹಿತ್ಯವನ್ನೇ ಧೇನಿಸಿಕೊಂಡು ಬಂದ ಕವಿ

ಎರಡು ತಲೆಮಾರುಗಳ ಸಾಹಿತ್ಯ ಕೊಂಡಿ

‘ನಾವು ಮಾಡಬೇಕಾದದ್ದನ್ನೆಲ್ಲ ಆಯಾ ಕಾಲಕಾಲಕ್ಕೆ ಮಾಡಿಬಿಡಬೇಕು ನೋಡು. ಇಲ್ಲದಿದ್ದರೆ ಒಂದಲ್ಲ ಒಂದಿನ ಅವು ನಮ್ಮನ್ನು ಕಾಡುತ್ತವೆ’ ಎಂಬ ಅವರ ನುಡಿಯನ್ನು ನಾನು ಮರೆತದ್ದೇ ಇಲ್ಲ. ಕಾರಣ ಅವರ ಮಡದಿ ಇದ್ದಾಗಲೇ ಆಕೆಗೆ ಅರ್ಪಿಸಬಹುದಾದ ಸಾಧ್ಯತೆಯನ್ನು ಅವರು ಮುಂದೂಡುತ್ತಲೇ ಬಂದು ಅದು ಉಳಿದೇ ಹೋದದ್ದು ಅವರಿಗೆ ಅಗಾಗ ಚುಚ್ಚುತ್ತಲೇ ಇದ್ದ ದಾರುಣ ನೋವು ನಂತರ ದಲ್ಲೂ ಅವರನ್ನು ಕಾಡಿತ್ತು

Shashidhara Halady Column: ಸ್ಪೂರ್ತಿ ತುಂಬುವ ಬರಹಗಳು

ಸ್ಪೂರ್ತಿ ತುಂಬುವ ಬರಹಗಳು

ನಮ್ಮೊಳಗೆ ಇರುವ ಬುದ್ಧ ಅದೆಷ್ಟೋ ಬಾರಿ ಸುಶುಪ್ತನಾಗಿರಬಹುದು; ಇಂದಿನ ಒತ್ತಡದ ಬದುಕಿನ ಧಾವಂತದಲ್ಲಿ, ನಾಗಾಲೋಟದಲ್ಲಿ, ಆತನ ಮಾತುಗಳನ್ನು ನಾವು ಕೇಳಿಸಿಕೊಳ್ಳದೇ ಇರಬಹುದು; ಆದರೆ ನಿಜವಾದ ಬದುಕಿನ ಗುರಿಯ ದಾರಿಯಲ್ಲಿ ಸಾಗಲು ನಮ್ಮೊಳಗಿರುವ ಬುದ್ಧನ ಮಾತುಗಳನ್ನು ಆಲಿಸ ಬೇಕು, ಆತನ ಯೋಚನೆಗಳನ್ನು ನಮ್ಮದಾಗಿಸಿಕೊಳ್ಳಬೇಕು.

Basavaraj M Yaraguppi Column: ಮೇ ಫ್ಲವರ್‌ನ ಕೆಂಬಣ್ಣ !

ಮೇ ಫ್ಲವರ್‌ನ ಕೆಂಬಣ್ಣ !

ಇಲ್ಲಿ ಹೇಳ ಹೊರಟಿರುವುದು ಉಜ್ವಲ ಕೆಂಬಣ್ಣದ ಹೂ ಬಿಡುವ ಗುಲ್ಮೊಹರ್ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ ಲಕ್ಷ್ಮೇಶ್ವರದ ಇಟ್ಟಿಗೆರೆ, ಬಟ್ಟೂರ ಹಾಗೂ ಗೊಜನೂರ ಮಾರ್ಗದ ರಸ್ತೆ ಬದಿಯಲ್ಲಿ ಮೇ ತಿಂಗಳಲ್ಲಿ ಕೆಂಪು ಹೂಗಳ ಸಂಭ್ರಮ ಈಗ ಹೇಳತೀರದು! ಹಸಿರು ಎಲೆಗಳಿಗೆ ಒಂಚೂರೂ ಜಾಗ ನೀಡದೇ ಅರಳುವ ಹೂವು!

S N SridharMurthy Column: ಬೇಂದ್ರ ಸಂಗೀತ: ಒಂದು ವಿಶ್ಲೇಷಣೆ: ರವೀಂದ್ರ ಸಂಗೀತ ಇದ್ದಂತೆ ಬೇಂದ್ರೆ ಸಂಗೀತ ಸಾಧ್ಯವೆ ?

ರವೀಂದ್ರ ಸಂಗೀತ ಇದ್ದಂತೆ ಬೇಂದ್ರೆ ಸಂಗೀತ ಸಾಧ್ಯವೆ ?

ಕವಿತೆಗೆ ಹಾಡುವ ಗುಣ ಕೊಡುವುದು ಬಹಳ ಸರಳ ಸಂಗತಿ. ಆದರೆ ಸಂಗೀತದ ಬೇರೆ ಸಾಧ್ಯತೆಗಳ ಕುರಿತು ಬೇಂದ್ರೆ ಅವರಿಗೆ ಕುತೂಹಲವಿತ್ತು. ಶಬ್ದ ಮತ್ತು ಅರ್ಥ ಎರಡನ್ನೂ ದಾಟಿದ ನಾದದ ಕುರಿತು ಅವರಿಗೆ ಕುತೂಹಲವಿತ್ತು. ಭಾರತೀಯ ಸಂಗೀತ ಎಂದರೆ ೨೨/೭ ಎಂದರು ಬೇಂದ್ರೆ; ಈ ಸಂಖ್ಯಾಶೇಷವು ಪೈ ಯನ್ನು ಸೂಚಿಸುತ್ತದೆ; ಹೀಗೆ ಚಿಂತಿಸಿದವರಲ್ಲಿ ಬೇಂದ್ರೆಯವರೇ ಮೊದಲಿಗರು ಎನ್ನುತ್ತಾರೆ ಭಾಸ್ಕರ್ ಚಂದಾವರ್ಕರ್. ನಮಗೆ ಸ್ವರಗಳನ್ನು ಹಿಡಿಯಲು ಕಷ್ಟವಾಗುವುದು ರಾಗಗಳ ಸೂತ್ರದಿಂದ. ರಾಗಗ ಳನ್ನೇ ಬಿಟ್ಟು ಸ್ವರದ ನೆಲೆಯಲ್ಲಿ ಹೋದರೆ.. ಬೇಂದ್ರೆ ಇಂತಹ ಸಾಧ್ಯತೆ ಯೋಚಿಸಿದ್ದರೆ? ಹೀಗೆ ಊಹಿಸಲು ಸಾಕಷ್ಟು ಕಾರಣಗಳಿವೆ.

Dr Bharathi Maravanthe Column: ವೀರು

ವೀರು

ಭಯೋತ್ಪಾದಕರನ್ನು, ಬಂದೂಕು ಹಿಡಿದು ಅಮಾಯಕ ಜನರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿ ಸಾಯಿಸಿದವರನ್ನು ಸೇನೆಯು ಬೇಟೆಯಾಡಿದೆ. ಆದರೆ, ನಮ್ಮಲ್ಲೇ ಸುತ್ತ ಮುತ್ತ ವಾಸಿಸುತ್ತಿರುವ ಸೋಗು ವೇಷದ ಭಯೋತ್ಪಾದಕರನ್ನು ಹೇಗೆ ಶಿಕ್ಷಿಸುವುದು? ಇದೇ ಪ್ರಶ್ನೆ ವೀರುವಿನ ಮನದಲ್ಲಿ ಕಾಡುತ್ತಿತ್ತು.

Uma Ramanna Column: ಎಳೆ ಮನಸ್ಸಿನ ತಲ್ಲಣಗಳು

ಎಳೆ ಮನಸ್ಸಿನ ತಲ್ಲಣಗಳು

ಇತ್ತೀಚೆಗೆ ಆರನೆಯ ತರಗತಿಯ ಬಾಲಕನೊಬ್ಬ ತನಗಿಂತ ಹಿರಿಯ ವಿದ್ಯಾರ್ಥಿಯನ್ನು ಕೊಲೆ ಮಾಡಿದ ನೋವಿನ ಸುದ್ದಿ ಹುಬ್ಬಳ್ಳಿಯಿಂದ ವರದಿಯಾಗಿದೆ. ಇಂತಹ ದುರಂತಗಳು ನಿಜಕ್ಕೂ ಆಘಾತ ಹುಟ್ಟಿಸು ವಂತಹವು. ಕೆಲವೇ ದಶಕಗಳ ಹಿಂದೆ ಇಂತಹ ದುರ್ಘಟನೆಗಳನ್ನು ಊಹಿಸಲೂ ಅಸಾಧ್ಯ ಎನಿಸು ವಂತಿತ್ತು. ಇಂದಿನ ಅಂತರ್ಜಾಲ ಯುಗ ಮತ್ತು ಆ ಮೂಲಕ ಸುಲಭವಾಗಿ ದೊರೆಯುವ ಹಿಂಸಾಭರಿತ ದೃಶ್ಯಗಳು, ಇಂತಹ ಎಳೆಯ ಮತ್ತು ಯು ತಲೆಮಾರಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆಯೆ?

Raghavendra Rayalapadu Column: ರೇಡಿಯೋ ಕಿಯಾಸ್ಕ್‌ 1940 !

ರೇಡಿಯೋ ಕಿಯಾಸ್ಕ್‌ 1940 !

ರೇಡಿಯೋ ಕಿಯಾಸ್ಕ್ 1940 ಎಂದು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ, ಸಿಮೆಂಟ್ ಗಾರೆ ಯಲ್ಲೇ ಅಕ್ಷರ ರೂಪಿಸಿ, ರೇಡಿಯೋ ಕಿಯೋಸ್ಕ್ ಎಂದು ಇಂಗ್ಲಿಷ್‌ನಲ್ಲಿ ಬರೆದಿರುವ ಬರಹ ವನ್ನೂ ಕಾಣಬಹುದು. ಏನಿದು ‘ರೇಡಿಯೋ ಕಿಯಾಸ್ಕ್’ ಎಂಬ ಕುತೂಹಲದಿಂದ ಫೇಸ್‌ಬುಕ್‌ನಲ್ಲಿ ಬರೆಹವೊಂದನ್ನು ಹಾಕಿದಾಗ ಇದನ್ನು ಕಂಡು ಕೇಳಿದ್ದ ಹಲವರು ತಮಗೆ ಗೊತ್ತಿದ್ದ ಮಾಹಿತಿಯನ್ನು ಆಸ್ಥೆಯಿಂದ ಹಂಚಿ ಕೊಂಡರು!

Prof G N Upadhyay Column: ಮೆಡಿಕಲ್‌ ಕಾಲೇಜು ಆರಂಭಕ್ಕೆ ಕಾರಂತರ ಕೊಡುಗೆ !

ಮೆಡಿಕಲ್‌ ಕಾಲೇಜು ಆರಂಭಕ್ಕೆ ಕಾರಂತರ ಕೊಡುಗೆ !

ಸ್ವತ: ವೈದ್ಯರೂ ಶಿಕ್ಷಣ ಪ್ರೇಮಿಗಳೂ ಆಗಿದ್ದ ಡಾ.ಮಾಧವ ಪೈ ಅವರು ಮಣಿಪಾಲದಲ್ಲಿ ಒಂದು ಮೆಡಿಕಲ್ ಕಾಲೇಜು ಸ್ಥಾಪಿಸಲು ಮುಂದಾಗಿ ಕೊನೆಯ ಕ್ಷಣದಲ್ಲಿ ಅದಕ್ಕೆ ಸರಕಾರದ ಒಪ್ಪಿಗೆ ಸಿಗದೇ ಹೈರಾಣಾಗಿದ್ದರು. ಡಾ.ಪೈ ಅವರ ಆತ್ಮೀಯ ಸ್ನೇಹಿತರಾಗಿದ್ದ ಶಿವರಾಮ ಕಾರಂತರು ಈ ಸಂಗತಿ ಯನ್ನು ತಿಳಿದು ಛಲ ಬಿಡದೆ ಕೇಂದ್ರ ಸಚಿವರೊಬ್ಬರ ಸಹಾಯದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯದ ಮೂಲಕ ಮಣಿಪಾಲ ಮೆಡಿಕಲ್ ಕಾಲೇಜಿಗೆ ಬೇಕಾಗಿದ್ದ ಅನುಮತಿ ಕೊಡಿಸುವುದರಲ್ಲಿ ಯಶಸ್ವಿಯಾದರು.

Loading...