ನನಸಾದ ದಶಕದ ಕನಸು
ನಾಯಕನಿಗೆ ದೂರದೃಷ್ಟಿ ಆಲೋಚನೆ, ಜನಪರ ಚಿಂತನೆಯಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಈ ಸೇತುವೆ ತಲೆ ಎತ್ತಿ ನಿಂತಿದೆ ಎಂದರೆ ತಪ್ಪಾಗುವುದಿಲ್ಲ. ಅಷ್ಟಕ್ಕೂ ಈ ಸೇತುವೆ ಇರುವುದು ನರಸಿಂಹರಾಜಪುರ (ಎನ್ಆರ್ಪುರ)ದಲ್ಲಿ. ಭದ್ರಾ ಜಲಾಶಯದ ನಿರ್ಮಾಣದ ಬಳಿಕ ಹಿನ್ನೀರಿನಲ್ಲಿ ಮುಳುಗಡೆಯಾದ ಬಳಿಕ ಎನ್ಆರ್ ಪುರ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಬೇರೆ ಕಡೆ ವಲಸೆ ಹೋದರು. ಆದರೆ ಎಂಟ್ಹತ್ತು ಗ್ರಾಮದವರು ಅಲ್ಲಿಗೇ ಉಳಿದುಕೊಂಡರು.