ಕರುಣಾಶರಧಿ ಶ್ರೀ ರಾಮಾನಂದ ಅವಧೂತರು
ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಮ್ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರ ವೇನಮಃ ಶ್ರೀ ರಾಮಾನಂದ ಅವಧೂತರ (ನಮ್ಮ ಗುರುಗಳ) ಗುಣರಾಶಿಗಳಲ್ಲಿ ಕೆಲವನ್ನಾದರೂ ನಾವು ಇಲ್ಲಿ ಅನುಭವಿಸುವ ಪ್ರಯತ್ನ ಮಾಡೋಣ. ನಮ್ಮ ಗುರುಗಳ ಗುಣಗಳ ಕುರಿತು ಹೊಸದಾಗಿ ನಾನು ಹೇಳುವುದೇನೂ ಇಲ್ಲ, ನಮ್ಮ ಗುರುಗಳನ್ನು ಸಂದರ್ಶಿಸಿದ ಯಾರಿಗಾ ದರೂ ನನ್ನ ಗುರು ಗುಣ ವರ್ಣನೆ ಎನ್ನುವುದು ಅನುಭವಕ್ಕೆ ಬಂದಿರುವುದೇ ಆಗಿರುತ್ತದೆ.