ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಮ

Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !

Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !

ನಮ್ಮ ದೇಹದ ರಕ್ಷಣಾ ವ್ಯವಸ್ಥೆಯೇ (ಇಮ್ಯು ನಿಟಿ) ದಾರಿ ತಪ್ಪಿ, ಈ ಇನ್ಸುಲಿನ್ ಕಾರ್ಖಾನೆಯ ಮೇಲೆ ದಾಳಿ ಮಾಡಿ, ಅದನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ಕಾರ್ಖಾನೆಗೆ ಶಾಶ್ವತ ಬೀಗಮುದ್ರೆ! ಒಂದು ಹನಿ ಇನ್ಸುಲಿನ್ ಕೂಡ ಉತ್ಪಾದನೆಯಾಗುವುದಿಲ್ಲ. ಕಾರ್ಮಿಕರೆಲ್ಲಾ ಖಾಯಂ ಮುಷ್ಕರ ಹೂಡಿದ ಹಾಗೆ ಇದು.

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

ಸಾಮಾನ್ಯವಾಗಿ ಎಷ್ಟೋ ಸಾಫ್ಟ್‌ʼವೇರ್ ಇಂಜಿನಿಯರ್‌ಗಳು ವಾರಾಂತ್ಯದ ಬೇಸರ ಕಳೆಯಲು ಬೇರೆ ಬೇರೆ ಜಾಗಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಾರೆ. ಅದಾದ ಮೇಲೆ ಆ ಗಿಡಗಳು ಏನಾದವು ಎಂದು ತಿರುಗಿ ನೋಡುವುದು ಕಡಿಮೆ. ಆದರೆ ಇಲ್ಲಿ ಹತ್ತಾರು ಜನ ಇಂಜಿನಿಯರ್‌ಗಳು ತಾವು ನೆಟ್ಟ ಗಿಡಗಳನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕಾಪಾಡಿಕೊಂಡು ಬಂದು, ಈಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳು ತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು.

Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ

Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ

ಇತ್ತೀಚೆಗಷ್ಟೇ ಅವರ ಸಾಧನೆಯನ್ನು ಗುರುತಿಸಿ ‘ಶ್ರೀ ವಿದ್ಯಾ ವೇದ ವಿಜ್ಞಾನ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯ, ಫ್ಲೋರಿಡಾ (ಅಮೇರಿಕಾ) ಹಾಗೂ ಶ್ರೀ ವಿದ್ಯಾ ವಿಶ್ವ ಸಂಶೋಧನಾ ಪ್ರತಿಷ್ಠಾನಂ, ಬೆಂಗಳೂರು’ ಇವರು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಇದು ಯಕ್ಷಗಾನ ಕಲೆಗೆ ಸಂದ ಗೌರವ. ಎರಡು ತಿಂಗಳ ಹಿಂದೆ ಯಕ್ಷಗಾನಕ್ಕೆ ಮೀಸಲಾದ ‘ಯಕ್ಷರಂಗ’ ಪತ್ರಿಕೆಯ ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಇವರಿಗೆ ‘ಯಕ್ಷ ಸಂಘಟಕ’ ಪ್ರಶಸ್ತಿಯನ್ನು ಪುರಸ್ಕರಿಸಿ ಗೌರವಿಸಿತ್ತು.

ಬ್ಯಾಟ್‌ʼಬಾಲ್‌ ಆಚೆಗಿಡಿ ಫುಟ್‌ ಬಾಲ್‌ ನೋಡಿ !

ಬ್ಯಾಟ್‌ʼಬಾಲ್‌ ಆಚೆಗಿಡಿ ಫುಟ್‌ ಬಾಲ್‌ ನೋಡಿ !

ಕೇರಳದ ಕಾಲ್ಚೆಂಡು ಕ್ರೇಜ್ ಅಂಥದು. ಕೋಲ್ಕತಾ, ಗೋವಾಗಳಿಗೆ ಹೋದರೂ ಈ ದೃಶ್ಯ ನೋಡ ಬಹುದು. ಇವರೆಲ್ಲರ ಪಾಲಿಗೆ, ಫಿಫಾ (FIFA) ಎಂಬುದು ಮನೆ ಹಬ್ಬದಂತೆ. ಕೇರಳದಲ್ಲಿ ಕ್ರಿಕೆಟ್‌ಗಿಂತ ಮನಸ್ಸು ಗೆದ್ದಿರುವುದು ಫುಟ್‌ಬಾಲ್. ಅದು ಅಲ್ಲಿನವರ ಸಂಸ್ಕೃತಿಯ ಒಂದು ಭಾಗ. ಕೇರಳದ ಹಳ್ಳಿ ಗಳಿಂದ ನಗರಗಳವರೆಗೆ ಫುಟ್‌ಬಾಲ್ ಹಬ್ಬದ ವಾತಾವರಣ ಕಾಣ ಸಿಗುತ್ತದೆ.

HariPrasad Nadig Column: ನೈಸರ್ಗಿಕ ಕೃಷಿಯ ಸವಾಲುಗಳು !

HariPrasad Nadig Column: ನೈಸರ್ಗಿಕ ಕೃಷಿಯ ಸವಾಲುಗಳು !

ಕಡಿಮೆ ಪ್ರಮಾಣದ ಇಳುವರಿಯನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆಗೆ ತಲುಪಿಸುವ ಕಲೆ ಗೊತ್ತಿದ್ದರೆ, ಇದು ಉತ್ತಮ ಆದಾಯದ ಮೂಲವಾಗುತ್ತದೆ.ಇಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡುವ ಇಂದಿನ ಮಾರುಕಟ್ಟೆಯ ಚೌಕಟ್ಟೇ ಒಂದು ದೊಡ್ಡ ಚಕ್ರವ್ಯೂಹ. ಇಂದು ಭಾರತದಲ್ಲಿ ರೈತರ ಜಮೀನುಗಳು ಚಿಕ್ಕದಾಗುತ್ತಿದ್ದರೂ, ಕೃಷಿ ಮಾರುಕಟ್ಟೆ ಮಾತ್ರ ಇಂದಿಗೂ ‘ದೊಡ್ಡ ಪ್ರಮಾಣದ ಇಳುವರಿ’ಯನ್ನು (ವಾಲ್ಯೂಮ್) ನೆಚ್ಚಿಕೊಂಡೇ ನಡೆಯುತ್ತಿದೆ.

Shashidhara Halady Column: ವಿಶ್ವದಾಖಲೆ ಬರೆದ ಹಾಸ್ಯನಟನ ಆತ್ಮಕಥೆ

Shashidhara Halady Column: ವಿಶ್ವದಾಖಲೆ ಬರೆದ ಹಾಸ್ಯನಟನ ಆತ್ಮಕಥೆ

ತೆಲುಗು ಹಾಸ್ಯ ನಟ ಬ್ರಹ್ಮಾನಂದಂ, ತಮ್ಮ ಹಾಸ್ಯನಟನೆಯಿಂದ, ಪಡೆದ ಪ್ರಶಸ್ತಿಗಳಿಂದ, ನಟಿಸಿದ ಚಲನಚಿತ್ರಗಳ ಸಂಖ್ಯೆಯಿಂದ ಇಂದು ಒಂದು ಜೀವಂತ ದಂತಕಥೆಯೇ ಆಗಿದ್ದಾರೆ. ಅವರ ಯಶಸ್ಸು ಅದಾವ ಮಟ್ಟದ್ದೆಂದರೆ, ಬ್ರಹ್ಮಾನಂದಂ ಅವರ ಪುಟ್ಟ ಪಾತ್ರವಾದರೂ ತಮ್ಮ ಸಿನಿಮಾ ದಲ್ಲಿರಬೇಕು ಎಂದು ತೆಲುಗು ನಿರ್ಮಾಪಕರು, ನಿರ್ದೇಶಕರು ಅವರ ಕಾಲ್'ಶೀಟ್‌ಗಾಗಿ ಕಾಯುತ್ತಿದ್ದರು! ಹಾಸ್ಯನಟ ನೊಬ್ಬನ ಅಸಾಧಾರಣ ಸಾಧನೆಯಿದು.

Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆಯುವುದು ಎಂದರೆ ಸೂರ್ಯವಂಶಿಗೆ ಬಹಳ ಇಷ್ಟ ಮತ್ತು ಬಹು ಸುಲಭ ಎನಿಸುವಂತೆ ರನ್‌ಗಳ ಹೊಳೆಯನ್ನೇ ಹರಿಸುವುದು ಅವರ ಬ್ಯಾಟಿಂಗ್ ಶೈಲಿ. ಅತಿ ಕಿರಿಯ ವಯಸ್ಸಿನಲ್ಲೇ ಐಪಿಎಲ್ ಪಂದ್ಯ ಗಳನ್ನು ಆರಂಬಿಸಿದ ಈ ಬಾಲಕ, ತಾನು ಐಪಿಎಲ್‌ನ ಮೊದಲ ಪಂದ್ಯದಲ್ಲಿ ಎದುರಿಸಿದ ಮೊದಲ ಬಾಲ್‌ಗೆ ಸಿಕ್ಸರ್ ಹೊಡೆದರು! (2025) ಮತ್ತು ತನ್ನ ಮೂರನೆಯ ಐಪಿಎಲ್ ಪಂದ್ಯದಲ್ಲಿ ಶತಕ ಬಾರಿಸಿದರು.

Vishweshwar Bhat Column: ಅಳುವ ಕಡಲೊಳು ತೇಲಿಬಂದ ನಗೆಯ ಹಾಯಿದೋಣಿ !

ಅಳುವ ಕಡಲೊಳು ತೇಲಿಬಂದ ನಗೆಯ ಹಾಯಿದೋಣಿ !

ಮನಸ್ಸು ಹಗುರವಾಗಿಸಿಕೊಂಡು ಮುಖದ ಮೇಲೊಂದು ಸಮಾಧಾನದ ನಗೆ ಬೀರಿದೆ. ಹೀಗೆ ಒಂದು ದಿನ ಬರೀ ಯೋಜನೆ ಹಾಕಿಕೊಳ್ಳುವುದರಲ್ಲೇ ಕಳೆದೆ. ಆದರೂ ಸ್ವಲ್ಪಮಟ್ಟಿಗೆ ಏನಾದರೂ ತೊಂದರೆ ಆಗಬಹುದು ಎಂಬ ಅನುಮಾನವಂತೂ ಇದ್ದೇ ಇತ್ತು. ಮಚಲಿ ಪಟ್ಟಣದ ಕಾರ್ಯಕ್ರಮದಲ್ಲಿ ಜನರನ್ನು ನಗೆಗಡಲಿನಲ್ಲಿ ತೇಲಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸುವೆ ಎಂದು ಮಾತು ಕೊಟ್ಟಿದ್ದೇನೆ.

ಜಿಎಸ್‌ʼಎಸ್‌ ನೂರು, ಹಣತೆಗಳ ತೇರು

ಜಿಎಸ್‌ʼಎಸ್‌ ನೂರು, ಹಣತೆಗಳ ತೇರು

ಸೃಷ್ಟಿಯ ರಚನೆಯೇ ಪ್ರೀತಿಯ ಅಸ್ತಿವಾರದ ಮೇಲೆ ನಿಂತಿದೆ. ಮಾನವೀಯ ಪ್ರೇಮದ ಆದರ್ಶ ವನ್ನು ಎತ್ತಿ ಹಿಡಿದು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಣ್ಣ ಬನಿಯನ್ನು ಗಾಢಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯಕ್ಕೆ ಜಿಎಸ್‌ಎಸ್ ಯೋಗದಾನ, ಅವರ ಸಾಹಿತ್ಯದ ಸ್ವರೂಪ, ಕೊಡುಗೆಯ ಸಶಕ್ತ ಅನಾವರಣ, ಅವರ ಸಾಹಿತ್ಯದ ಸಮಗ್ರ ಮುಖಗಳ ಅವಲೋಕನ, ಸೂಕ್ಷ್ಮ ತಲ್ಲಣ, ವೈರುಧ್ಯಗಳ ವಿಶ್ಲೇಷಣೆ ಡಾ.ನರಹಳ್ಳಿ ಬಾಲ ಸುಬ್ರಹ್ಮಣ್ಯ ಅವರ ‘ಹಣತೆಯ ಹಾಡು’ಕೃತಿಯಲ್ಲಿ ನೆಲೆಪಡೆದಿದೆ.

Sanjay Gubbi Column: ಚಿರತೆಯ ಅಪರೂಪದ ಬೇಟೆ

Sanjay Gubbi Column: ಚಿರತೆಯ ಅಪರೂಪದ ಬೇಟೆ

ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ನಾನು ವನ್ಯಜೀವಿಗಳ ಹಲವಾರು ವಿಚಾರ ಗಳನ್ನು ಕಲಿತದ್ದು, ಈ ನಂಟಷ್ಟೇ ಅಲ್ಲದೇ ನಮ್ಮ ಅಧ್ಯಯನಕ್ಕೂ ಅದು ಸೂಕ್ತ ಪ್ರದೇಶವಾದು ದರಿಂದ ಅಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದೇವೆ. ದೇವರಾಯನದುರ್ಗದ ಕಾಯ್ದಿಟ್ಟ ಅರಣ್ಯ 41.8 ಚದರ ಕಿಲೋಮೀಟರ್ ವಿಸ್ತೀರ್ಣದ ಕಾಡು. 2023ರಲ್ಲಿ ಮೂರನೇ ಬಾರಿ ಇಲ್ಲಿ ಕ್ಯಾಮರಾ ಟ್ರ್ಯಾಪ್ ಇದನ್ನು 1906ರಲ್ಲೇ ಮೈಸೂರು ಸಂಸ್ಥಾನ, ರಕ್ಷಿತಾರಣ್ಯ ವಾಗಿ ಘೋಷಣೆ ಮಾಡಿತ್ತು

Narayana yaji Column: ರಾಧಾಮಾಧವ ವಿಲಾಸ ವಿರಹ

Naayana yaji Column: ರಾಧಾಮಾಧವ ವಿಲಾಸ ವಿರಹ

ಇತ್ತೀಚಿನ ಕವನ ಸಂಕಲನ ‘ಧ್ಯಾನ’ ದ 46 ಕವನಗಳು ನವೋದಯದ ಚೌಪದಿಯನ್ನು ನೆನಪಿಗೆ ತರುತ್ತವೆ. ಕೃಷ್ಣ ಮತ್ತು ರಾಧೆ ಕಮಲಾ ಅವರನ್ನು ಸದಾ ಕಾಡುತ್ತಿರುತ್ತಾರೆ. ಕೃಷ್ಣ ಮತ್ತು ರಾಧೆ ಯ ಒಲುಮೆಯ ವಿಷಬಂದಾಗ ನೆನಪಾಗುವುದು ಪುತಿನ ಅವರ ‘ಗೋಕುಲ ನಿರ್ಗಮನ’. ಭಾಗವ ತಾದ ರಾಸಲೀಲೆ ಸಹ ಪ್ರಸಿದ್ಧವಾದುದು.

ಕೊಳ್ಳಂಗಿಯ ಜಂಪ ಮಹೋತ್ಸವ

ಕೊಳ್ಳಂಗಿಯ ಜಂಪ ಮಹೋತ್ಸವ

ಧರ್ಮದೇವತೆಯ ಸಾಕ್ಷಿಯಾಗಿ ನಡೆಯುತ್ತಿದ್ದ ಈ ತೀರ್ಪುಗಳಿಗೆ ಎಲ್ಲರೂ ತಲೆಬಾಗು ತ್ತಿದ್ದರು. ಈ ಸಹಬಾಳ್ವೆ ಮತ್ತು ಬುದ್ಧಿವಂತಿಕೆಯ ಫಲವಾಗಿಯೇ ಕೊಳ್ಳಂಗಿಗೆ ಕಟ್ಟೆಮನೆ ಎಂಬ ಗೌರವ ಯುತ ಹೆಸರು ಬಂದಿದೆ. ಇದು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೆ, ಇಡೀ ಪ್ರಾಂತ್ಯದ ಜನರಿಗೆ ಭರವಸೆಯ ತಾಣವಾಗಿತ್ತು.

ಬೇಸಿಗೆಯಲ್ಲಿ ರುಚಿಕರ ನಿರ್ನೇರಳೆ !

ಬೇಸಿಗೆಯಲ್ಲಿ ರುಚಿಕರ ನಿರ್ನೇರಳೆ !

ವಿಟಾಮಿನ್ ಸಿ, ಪೋಟ್ಯಾಶಿಯಮ್ ಹೊಂದಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇಂತಹ ಅಪೂರ್ವ ಗುಣಗಳನ್ನು ಹೊಂದಿರುವ ನೀರ್‌ನೇರಳೆ ಹಣ್ಣನ್ನು ಕೃಷಿ ಮಾಡಲು ಸಹ ಸಾಧ್ಯವಿದೆ. ಇದರಲ್ಲಿ ಕೆಂಪು, ಬಿಳಿ, ಹಸಿರು ವರ್ಣ ಬಣ್ಣದ ಹಣ್ಣು ನೀಡುವ ತಳಿಗಳಿವೆ. ಗಿಡನೆಟ್ಟ ಎರಡರಿಂದ ನಾಲ್ಕುವರ್ಷಗಳಲ್ಲಿ ಫಲ ನೀಡಲು ಪ್ರಾರಂಭವಾಗುವದು.

ಬಾಯಾರಿದಾಗ ಯಾವ ನೀರು ಉತ್ತಮ ?

ಬಾಯಾರಿದಾಗ ಯಾವ ನೀರು ಉತ್ತಮ ?

ಕುಡಿಯುವ ನೀರನ್ನು ಸಂಪೂರ್ಣ ಶುದ್ಧ ಮಾಡುವ ಆಧುನಿಕ ‘ಆರ್‌ಓ’ (ರಿವರ್ಸ್ ಆಸ್ಮೋಸಿಸ್) ಯಂತ್ರಗಳಿಗೆ ಹಲವರು ಮೊರೆ ಹೋಗಿದ್ದೇವೆ. ಬಟನ್ ಒತ್ತಿದ ತಕ್ಷಣ ನೀರು ಸಿಗುತ್ತದೆ ನಿಜ. ಆದರೆ ಅತಿ ಶುದ್ಧವಾದ ನೀರು ಯಾವಾಗಲೂ ಆರೋಗ್ಯಕರವೇ? ಶುದ್ಧತೆಯ ಭರದಲ್ಲಿ ನೀರಿನಲ್ಲಿರುವ ನೈಸರ್ಗಿಕ ಜೀವಸತ್ವಗಳನ್ನೇ ನಾವು ಕೊಲ್ಲುತ್ತಿದ್ದೇವಾ? ಬನ್ನಿ, ಸಾಮಾನ್ಯ ತಪ್ಪು ಕಲ್ಪನೆಗಳನ್ನು ಬದಿಗಿಟ್ಟು ವೈದ್ಯಕೀಯ ಸತ್ಯಗಳನ್ನು ಅರಿಯೋಣ.

Nagaraj Vaidya Colunmn: ತನ್ನನ್ನು ತಾನೇ ನುಂಗಲಿದೆಯೇ ʼಎಐʼ ?

Nagaraj Vaidya Colunmn: ತನ್ನನ್ನು ತಾನೇ ನುಂಗಲಿದೆಯೇ ʼಎಐʼ ?

2022ರವರೆಗೆ ಇಂಟರ್ನೆಟ್ ಎನ್ನುವುದು ಮಾನವ ಸೃಷ್ಟಿತ ಮಾಹಿತಿಯ ಕೆರೆಯಾಗಿತ್ತು. ಆದರೆ ಎಐ ಕ್ರಾಂತಿ ಶುರುವಾದ ಮೇಲೆ ಕಥೆ ಬದಲಾಯಿತು. ಈಗ ಇಂಟರ್ನೆಟ್‌ನಲ್ಲಿರುವ ಶೇ.70ರಷ್ಟು ಕಂಟೆಂಟ್ ಅನ್ನು ಎಐ ಮೂಲಕವೇ ಸೃಷ್ಟಿಸಲಾಗುತ್ತಿದೆ. ಅಂದರೆ, ಹೊಸ ಎಐ ಮಾಡೆಲ್‌ಗಳಿಗೆ ತರಬೇತಿ ನೀಡಲು ಈಗ ‘ಮನುಷ್ಯ ಸಹಜ’ ಡೇಟಾ ಸಿಗುತ್ತಿಲ್ಲ. ಅದರ ಬದಲಿಗೆ ಎಐ ಸೃಷ್ಟಿಸಿದ ಹಳೆಯ ಡೇಟಾವನ್ನೇ ಬಳಸಲಾಗುತ್ತಿದೆ.

Harish Kera Column: ಜಗದ ಜೀವಿಗಳ ಸಖ ಅಟೆನ್‌ ಬರೋ

Harish Kera Column: ಜಗದ ಜೀವಿಗಳ ಸಖ ಅಟೆನ್‌ ಬರೋ

1926 ಮೇ 8 ರಂದು ಇಂಗ್ಲೆಂಡ್‌ನಲ್ಲಿ ಜನಿಸಿದ ಡೇವಿಡ್ ಆಂಗ್ಲರ ಕ್ಲಾಸಿಕ್ ಸಭ್ಯತೆಯನ್ನು ಮನುಷ್ಯರಲ್ಲೂ ಪ್ರಾಣಿಗಳ ಜೊತೆಗೂ ರೂಢಿಸಿಕೊಂಡವರು. ಕಲಿತದ್ದೆಲ್ಲ ಕೇಂಬ್ರಿಜ್‌ನಲ್ಲಿ. ನೈಸರ್ಗಿಕ ವಿಜ್ಞಾನದ ಅಧ್ಯಯನ. 1947ರಿಂದ 1949ರವರೆಗೆ ರಾಯಲ್ ನೇವಿಯಲ್ಲಿ ಸೇವೆ. ಆದರೆ ಮನಸ್ಸೆಲ್ಲ ಹಸಿರು ಕಾಡು ವನ್ಯಜೀವಿಗಳತ್ತ. ನಂತರ ಬಿಬಿಸಿಗೆ ಸೇರಿ ಏಳು ದಶಕ ಪ್ರಸಾರ ವೃತ್ತಿಜೀವನ.

K Srinivas Rao Column: ಟರ್ನಿಂಗ್‌ ಪಾಯಿಂಟ್‌ ಆದ ಪೋಸ್ಟ್‌ ಕಾರ್ಡ್‌ !

K Srinivas Rao Column: ಟರ್ನಿಂಗ್‌ ಪಾಯಿಂಟ್‌ ಆದ ಪೋಸ್ಟ್‌ ಕಾರ್ಡ್‌ !

ನನ್ನದು ಯಥಾಪ್ರಕಾರ ಮೌನೇನ ಕಲಹಂ ನಾಸ್ತಿ! ಪೇಪರ್ ಏಜೆನ್ಸಿ ಕಷ್ಟ; ನಿತ್ಯ ಬೆಳಿಗ್ಗೆ 4ಕ್ಕೇ ಏಳಬೇಕು. ಮನೆಗಳಿಗೆ ಹಂಚಲು ಹುಡುಗರು ಅವಶ್ಯ. ಅವರಿಗೆ ಕಾಫಿ ತಿಂಡಿ, ಜೊತೆಗೆ ಸೈಕಲ್ ಒದಗಿಸುವುದು ಸಾಧ್ಯವೇ? ಅಷ್ಟಕ್ಕೂ ಅವರು ಕೈಕೊಟ್ಟರೆ ನಾನೇ ಮನೆ ಮನೆಗೆ ಪತ್ರಿಕೆ ಕೊಟ್ಟು ಬರಬೇಕು. ಈ ಉಸಾ ಬರಿಯೇ ಬೇಡ. ನನ್ನ ನಿರುತ್ತರದಿಂದ ಅವರಿಗೆ ಕೋಪ ಬಂದಿತೆಂದು ಕಾಣು ತ್ತದೆ. ದುರ್ದಾನ ತೆಗೆದು ಕೊಂಡವರಂತೆ ಎದ್ದು ಬಿರಬಿರನೆ ಹೊರ ಹೊರಟರು. ಊರಿಗೆ ಹೋಗಿ, ಉಡುಪಿಯಿಂದ ಅಂಚೆ ಕಾರ್ಡ್ ಬರೆದಿದ್ದರು. ಒಕ್ಕಣೆ ಹೀಗಿತ್ತು.

Shashidhara Halady Column: ಚಿತ್ರದಲ್ಲೇ ಕಥೆ ಕೇಳಿದ ರಘುರಾಯ್

Shashidhara Halady Column: ಚಿತ್ರದಲ್ಲೇ ಕಥೆ ಕೇಳಿದ ರಘುರಾಯ್

ಇಂದಿರಾ ಗಾಂಧಿಯವರು, ಅಧಿಕಾರದಲ್ಲಿದ್ದಾಗ, ಅವರ ಪಕ್ಷದ ಇತರ ರಾಜಕಾರಣಿಗಳನ್ನು, ಮಂತ್ರಿ ಗಳನ್ನು ಯಾವ ಸ್ಥಾನದಲ್ಲಿಟ್ಟಿದ್ದರು, ಎಷ್ಟರಮಟ್ಟಿಗೆ ನಿಯಂತ್ರಿಸುತ್ತಿದ್ದರು ಎಂಬುದನ್ನು, ಈ ಒಂದು ಚಿತ್ರವು ಅದೆಷ್ಟು ಮಾರ್ಮಿಕವಾಗಿ ಸೆರೆ ಹಿಡಿದಿದೆ ಎಂದರೆ, ಈ ಚಿತ್ರವನ್ನು ನೋಡಿದಾಗ ಮನಸ್ಸಿನಲ್ಲಿ ಮುಡುವ ಚಿತ್ರಣವು, ಸಾವಿರಾರು ಪದಗಳಲ್ಲಿ ವರ್ಣಿಸಿದರೂ, ದಕ್ಕಲಾರದು!

Vinayaka M Bhat Column: ಕರುಣಾಶರಧಿ ಶ್ರೀ ರಾಮಾನಂದ ಅವಧೂತರು

ಕರುಣಾಶರಧಿ ಶ್ರೀ ರಾಮಾನಂದ ಅವಧೂತರು

ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಮ್ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರ ವೇನಮಃ ಶ್ರೀ ರಾಮಾನಂದ ಅವಧೂತರ (ನಮ್ಮ ಗುರುಗಳ) ಗುಣರಾಶಿಗಳಲ್ಲಿ ಕೆಲವನ್ನಾದರೂ ನಾವು ಇಲ್ಲಿ ಅನುಭವಿಸುವ ಪ್ರಯತ್ನ ಮಾಡೋಣ. ನಮ್ಮ ಗುರುಗಳ ಗುಣಗಳ ಕುರಿತು ಹೊಸದಾಗಿ ನಾನು ಹೇಳುವುದೇನೂ ಇಲ್ಲ, ನಮ್ಮ ಗುರುಗಳನ್ನು ಸಂದರ್ಶಿಸಿದ ಯಾರಿಗಾ ದರೂ ನನ್ನ ಗುರು ಗುಣ ವರ್ಣನೆ ಎನ್ನುವುದು ಅನುಭವಕ್ಕೆ ಬಂದಿರುವುದೇ ಆಗಿರುತ್ತದೆ.

Sandesh H Naik Column: ಸಾಧು ಅಕ್ಕ- ಇವರಿಗೆ ಗೊತ್ತಿರಲಿಲ್ಲ ಕಾರ್ಮಿಕ ದಿನದ ಮಹತ್ವ !

ಸಾಧು ಅಕ್ಕ- ಇವರಿಗೆ ಗೊತ್ತಿರಲಿಲ್ಲ ಕಾರ್ಮಿಕ ದಿನದ ಮಹತ್ವ !

ವಿಧಿಯ ಲೆಕ್ಕಾಚಾರವೇ ಬೇರೆ ಇತ್ತೆನಿಸುತ್ತದೆ. ಬದುಕಿನ ಕೊನೆಯ ದಿನಗಳಲ್ಲಿ ಸಾಧಕ್ಕ ಹಾಸಿಗೆ ಹಿಡಿಯುವಂತೆ ಮಾಡಿ, ತನ್ನ ಆಶಯದಲ್ಲಿ ಆಕೆ ಸೋಲೊಪ್ಪಿಕೊಳ್ಳುವಂತೆ ಮಾಡಿತ್ತು. ಮೊನ್ನೆ ಮೊನ್ನೆ ಹೋಗಿ ನೋಡಿದ್ದಾಗ ಸಾಧಕ್ಕನ ಎಂದಿನ ನಗು ಮಾಸಿತ್ತು, ದೇಹ ಬಳಲಿತ್ತು, ಕೈಗಳು ಸೋತಿದ್ದವು, ನೋಟದಲ್ಲಿ ಅಸಹಾಯಕತೆ ಮಡುಗಟ್ಟಿತ್ತು.

Shashidhara Halady Column: ಬೇಸಿಗೆ ಎದುರಿಸಲು ಹೊಸದೊಂದು ಪಾನೀಯ !

ಬೇಸಿಗೆ ಎದುರಿಸಲು ಹೊಸದೊಂದು ಪಾನೀಯ !

ನಮ್ಮ ರಾಜ್ಯದ ಕರಾವಳಿಯ ಜಿಲ್ಲೆಗಳಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ ಓಡಾಡಿದರೆ, ‘ಗೇರು ಹಣ್ಣು’ಗಳು (ಅಲ್ಲಿ ಗೋಡಂಬಿ ಹಣ್ಣನ್ನು ಹೀಗೆಂದೇ ಕರೆಯುವುದು) ರಾಶಿ ರಾಶಿಯಾಗಿ ಮರ ಗಳಲ್ಲಿ ಬಿಟ್ಟಿರುವುದನ್ನು ಕಾಣಬಹುದು. ಕೆಂಪು, ಹಳದಿ ಬಣ್ಣದ ವಿವಿಧ ಗಾತ್ರದ ಗೇರು ಹಣ್ಣು ಗಳನ್ನು ಕಂಡಾಕ್ಷಣ, ತಿನ್ನುವ ಆಸೆ ಹುಟ್ಟುವುದು ಸಹಜ. ಆದರೆ, ಅದರಲ್ಲಿರುವ ಟ್ಯಾನಿನ್ ಅಂಶದಿಂದಾಗಿ, ಹಣ್ಣನ್ನು ತಿಂದ ನಂತರ ಸಣ್ಣಗೆ ಗಂಟಲು ಕೆರೆಯುವುದರಿಂದ, ಜಾಸ್ತಿ ತಿನ್ನಲು ಆಗುವುದಿಲ್ಲ.

K Janardhan Thunga Column: ಆರೂಡುವ ಸೌರಯುಗಾದಿ

K Janardhan Thunga Column: ಆರೂಡುವ ಸೌರಯುಗಾದಿ

ನಮ್ಮ ಹಳ್ಳಿಯಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆ ತುಂಬಾ ಕಡಿಮೆ, ಸೌರಮಾನ ಯುಗಾದಿ ಯ ಆಚರಣೆ ಇದೆ. ಈ ಆಚರಣೆಯು ಕೃಷಿ ಚಟುವಟಿಕೆಗೆ ಪೂರಕವಾಗಿರುವುದು ವಿಶೇಷ!ಯುಗಾದಿ ಯ ಮುನ್ನಾದಿನ ಒಂದು ಹೆಡಿಗೆಯ ತುಂಬಾ ಭತ್ತದ ಹುಲ್ಲಿನ ಚೆಂಡೆ ತಯಾರಿಸುತ್ತಾರೆ. ಇದನ್ನು ‘ಚಪ್ಲ’ ಎನ್ನುತ್ತೇವೆ. ಇದು ಆಕಾರದಲ್ಲಿ ಫೇಣಿಯ ರೀತಿ ಇರುತ್ತದೆ!

Olive Oil : ಆಲಿವ್‌ ಎಣ್ಣೆಯ ದೌರ್ಬಲ್ಯಗಳು !

Olive Oil : ಆಲಿವ್‌ ಎಣ್ಣೆಯ ದೌರ್ಬಲ್ಯಗಳು !

ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್ ಒಂದು ಉತ್ತಮ ಸೂಪರ್ ಫುಡ್, ಸಂಶಯವಿಲ್ಲ. ಇದರಲ್ಲಿ ‘ಫಿನಾಲ್ಸ್’ ಎಂಬ ಸೂಕ್ಷ್ಮವಾದ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಆದರೆ ಇವು ಉಷ್ಣತೆಯನ್ನು ತಾಳಲಾ ರದೇ ನಮ್ಮ ಒಗ್ಗರಣೆಯ ಕಟು ಶಾಖಕ್ಕೆ ನಾಶವಾಗುತ್ತವೆ. ಅಂದರೆ, ಸಾವಿರ ರೂಪಾಯಿ ಕೊಟ್ಟು ತಂದ ಎಣ್ಣೆಯ ಸತ್ವವೆಲ್ಲಾ ಬೂದಿಯಾದಂತೆ. ಅಷ್ಟೇ ಅಲ್ಲ, ಹೆಚ್ಚು ಕಾಯಿಸಿದರೆ ಇದು ಬೇಗನೆ ಹೊಗೆ ಯಾಡಲು ಶುರುವಾಗಿ, ಕಹಿ ಮತ್ತು ವಿಷಕಾರಿಯಾಗಿ ಬದಲಾಗುತ್ತದೆ.

Prabhamani Nagaraj Column: ಕದನ ಕುತೂಹಲ !

Prabhamani Nagaraj Column: ಕದನ ಕುತೂಹಲ !

ಬೆಳಗಿನಿಂದ ರಾತ್ರಿಯವರೆಗೂ ಸುತ್ತಮುತ್ತಾ ಒಂದಲ್ಲಾ ಒಂದು ಜಗಳವಾಗುತ್ತಿದ್ದರೂ ಅದರಿಂದ ಸ್ವಲ್ಪವೂ ವಿಚಲಿತವಾಗದಂತೆ ನಮ್ಮ ಬಾಲ್ಯ ಮುನ್ನಡೆಯುತ್ತಿತ್ತು. ಆದರೂ ನಮ್ಮನಮ್ಮ ನಡುವೆ ಆಗಾಗ ನಡೆಯುತ್ತಿದ್ದ ಕೋಳಿಜಗಳಗಳನ್ನು ಬಿಡಿಸುವುದರಲ್ಲೇ ಮನೆಯವರಿಗೆ ಸಾಕುಸಾಕಾಗಿ ಮಕ್ಕಳೂ ಎಲ್ಲಿ ಜಗಳಗಂಟರಾಗುತ್ತಾರೋ ಎಂದು ಪರಿತಪಿಸುವಂತಾಗುತ್ತಿತ್ತು.

Loading...