ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಮ

ಫ್ಯಾಟಿ ಲಿವರ್ ಕಾಡುವುದು ಏಕೆ ?

ಫ್ಯಾಟಿ ಲಿವರ್ ಕಾಡುವುದು ಏಕೆ ?

ದಿನವಿಡೀ ಕುಳಿತೇ ಕೆಲಸ ಮಾಡುವ ನಾವು, ಅವಶ್ಯಕತೆಗಿಂತ ಹೆಚ್ಚು ಕ್ಯಾಲೊರಿ ಇರುವ ಸ್ನ್ಯಾಕ್ಸ್ ಹಾಗೂ ಆಹಾರಗಳನ್ನು ತಿನ್ನುತ್ತಲೇ ಇರುತ್ತೇವೆ. ಆದರೆ ತಿಂದದ್ದನ್ನು ಕರಗಿಸಲು ದೇಹಕ್ಕೆ ಶ್ರಮವೇ ಇರುವುದಿಲ್ಲ. ಆಗ ಈ ಲಿವರ್, ತಾನು ಕೂಡಿಟ್ಟ ಜಾಗದಲ್ಲೇ ಮತ್ತಷ್ಟು ಕೊಬ್ಬನ್ನು ಅನಿವಾರ್ಯವಾಗಿ ತುರುಕಿ ಕೊಳ್ಳುತ್ತಾ ಹೋಗುತ್ತದೆ. ಇದನ್ನೇ ನಾವು ಫ್ಯಾಟಿ ಲಿವರ್ ಎನ್ನುವುದು.

Karthik Krishna Column: ಜೀವಿತಾವಧಿ ಒಂದೇ ವರ್ಷ !

Karthik Krishna Column: ಜೀವಿತಾವಧಿ ಒಂದೇ ವರ್ಷ !

ಆಶ್ಚರ್ಯಕರವಾದ ಇನ್ನೊಂದು ಸಂಗತಿಯೆಂದರೆ, ಈ ಊಸರವಳ್ಳಿಗಳು ತಮ್ಮ ಜೀವಿತಾವಧಿಯ ಬಹುಪಾಲು, ಅಂದರೆ ಬರೋಬ್ಬರಿ 8 ರಿಂದ 9 ತಿಂಗಳುಗಳನ್ನು ಭೂಮಿಯೊಳಗೆ ಮೊಟ್ಟೆಯೊಳಗೆಯೇ ಕಳೆಯುತ್ತವೆ. ಮೊಟ್ಟೆಯಿಂದ ಹೊರ ಬಂದ ಕೂಡಲೇ ಬೇಟೆ ಶುರು ಇವುಗಳು, ಬಕಾಸುರನಂತೆ ತಿಂದು, ಕೇವಲ ಎರಡು ತಿಂಗಳಿನಲ್ಲಿ ಐದು ಪಟ್ಟು ಬೆಳೆಯುತ್ತವೆ!

Narayana Yaji Column: ಉತ್ತರ ಕನ್ನಡದಿಂದ ವಿಶ್ವವೇದಿಕೆಗೆ !

Narayana Yaji Column: ಉತ್ತರ ಕನ್ನಡದಿಂದ ವಿಶ್ವವೇದಿಕೆಗೆ !

ಇಂದು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸಂಪಾದಕರು ಅಥವಾ ಮಹತ್ವದ ವರದಿಗಾರರು ಉತ್ತರ ಕನ್ನಡ ಜಿಲ್ಲೆಯವರೇ; ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನೂರು ವರ್ಷಗಳ ಮೊದಲೇ ವಿಧವಾ ವಿವಾಹವಾಗಿ ಸಮಾಜ ಸುಧಾರಣೆಗೆ ನಾಂದಿ ಹಾಡಿದ ಸಿರಸಿಯ ಅಕ್ಕದಾಸರು, ಇಗ್ಗಪ್ಪ ಹೆಗಡೆ ವಿವಾಹ ಪ್ರಸಂಗ ಬರೆದ ಕರ್ಕಿಯ ಸೂರಿ ವೆಂಕಟ್ರಮಣ ಶಾಸಿ, ಬಾರ್ಡೋಲಿ ಹೋರಾಟವನ್ನು ನೆನಪಿಸಿದ ಅಂಕೋಲೆಯ ಉಪಿನ ಸತ್ಯಾಗ್ರಹ ಇವೆಲ್ಲವೂ ಈ ಜಿಲ್ಲೆಯಲ್ಲಿಯೇ ಅರಳಿದ್ದು.

ಲೋಕಲ್‌ʼನಿಂದ ಗ್ಲೋಬಲ್‌ʼವರೆಗೆ

ಲೋಕಲ್‌ʼನಿಂದ ಗ್ಲೋಬಲ್‌ʼವರೆಗೆ

ತಾವು ತಿರುಗಾಡುವ ಮೂಲಕ ಓದುಗರನ್ನೂ ಕೂಡ ತಮ್ಮೊಂದಿಗೆ ತಿರುಗಾಡಿಸುವವರು, ಲೇಖಕ ಕಿರಣ್ ಉಪಾಧ್ಯಾಯ. ಹೊರದೇಶ, ವಿದೇಶ, ಉಭಯ ದೇಶ, ಪರದೇಶ, ದೂರದೇಶ ಎಂದು ಐದು ವರ್ಷಗಳಿಂದ, ವರ್ಷಕ್ಕೊಂದು ಪುಸ್ತಕದ ಮೂಲಕ, ಕನ್ನಡದ ಓದುಗರನ್ನು ತನ್ನೊಂದಿಗೆ ತಿರುಗಾಡಿಸುತ್ತಲೇ ಇರುವ ಇವರು ಈಗ ಬಹುದೇಶಕ್ಕೆ ಕರೆದೊಯ್ಯುವ ಕೆಲಸ ಮಾಡಿದ್ದಾರೆ.

Harish Kera Column: ʼಆನೆʼ-ಮಾನವನ ಒಪ್ಪಂದದ ಕತೆ

Harish Kera Column: ʼಆನೆʼ-ಮಾನವನ ಒಪ್ಪಂದದ ಕತೆ

ಒಮ್ಮೆ ಕೇರಳದ ತೇಕ್ಕಡಿಯ ಫಾರೆಸ್ಟ್ ಹೌಸೊಂದರಲ್ಲಿ ತಂಗಿದ್ದೆವು. ವಿಶಾಲವಾದ ಹಜಾರ. ಅಮಾವಾಸ್ಯೆ ಯ ಆಸುಪಾಸಿನ ರಾತ್ರಿ. ಕಾಡಿನ ಕತ್ತಲೆ ಹೇಗಿರುತ್ತದೆಂದು ವಿವರಿಸಬೇಕಿಲ್ಲ. ಬಂಗಲೆಯ ಸುತ್ತಲಿನ ಆಕಾಶದಿಂದ ತೂರಿ ಬರುತ್ತಿದ್ದ ನಕ್ಷತ್ರಗಳ ಕ್ಷೀಣ ಬೆಳಕು. ಬಂಗಲೆಯನ್ನು ಸುತ್ತುವರಿದಿದ್ದ ದೊಡ್ಡ ದೊಡ್ಡ ಮರಗಳು. ಕತ್ತಲನ್ನು ನಿರುಕಿಸುತ್ತ ಕುಳಿತಿದ್ದೆವು. ಕೀಟಗಳ ಚೀರು, ಇರುಳು ಹಕ್ಕಿಗಳ ಕೂಗು ಬಿಟ್ಟರೆ ಮತ್ತೆಲ್ಲೂ ಯಾವ ಚಲನೆಯೂ ಇಲ್ಲ, ಯಾವ ಸದ್ದೂ ಇಲ್ಲ.

Karthik Krishna Column: ಸದಾ ಗೆಲ್ಲುವ ಕ್ರೀಡಾಪಟು !

Karthik Krishna Column: ಸದಾ ಗೆಲ್ಲುವ ಕ್ರೀಡಾಪಟು !

ಟೆನಿಸ್ ಕೋರ್ಟ್‌ನಲ್ಲಿ ನೋವಾಕ್ ಜೊಕೊ ವಿಚ್ ಅವರನ್ನು ನೋಡಿದಾಗ, ಇವರೊಬ್ಬ ಸೋಲಿ ಲ್ಲದ ಸರದಾರ, ಇವರ ಲೈಫ್ ಎಷ್ಟೊಂದು ಪರ್ಫೆಕ್ಟ್ ! ಅಬ್ಬಾ ಅದೆಂತಾ ಅಗ್ರೆಶನ್ ಅಂತ ಅನಿಸುತ್ತದೆ. ಮೂವತ್ತೊಂಬತ್ತರ ವಯಸ್ಸಿನಲ್ಲೂ ಅವರು ಇಡೀ ಕೋರ್ಟನ್ನು ಆವರಿಸುವ ರೀತಿ ಕಣ್ಣಿಗೆ ಹಬ್ಬದಂತಿ ರುತ್ತದೆ. ಟೆನ್ನಿಸ್ ಲೋಕವನ್ನು ನಡಾಲ್ ಹಾಗೂ ಫೆಡೆರರ್ ಆಳುತ್ತಿದ್ದ ಕಾಲದಲ್ಲಿ ಕಾಲಿಟ್ಟು, ಇಬ್ಬರಿಗೂ ಸಿಂಹ ಸ್ವಪ್ನವಾಗಿದ್ದ ನೊವಾಕ್ ಈಗ ಮುಂದಿನ ತಲೆಮಾರಿನ ಸಿನ್ನರ್ ಹಾಗೂ ಅಲ್ಕರಾಜ್ ಅವರನ್ನೂ ಕಾಡುತ್ತಿದ್ದಾರೆ

'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !

'ಜಾನಕಿʼ ನಮ್ಮ ಕಾಲದ ಅದ್ಭುತ ಗಾಯಕಿ !

ಮೊನ್ನೆ ತಾನೆ ನಮ್ಮನ್ನು ಅಗಲಿದ ಗಾಯಕಿ, ಎಸ್.ಜಾನಕಿಯವರನ್ನು ನಾನು ಸುಮಾರು ಮೂವತ್ತು ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ, ಅವರ ಕೈ ತುತ್ತು ತಿಂದಿದ್ದೇನೆ, ಅವರ ಅಸದಳ ವಾತ್ಸಲ್ಯ ವನ್ನು ಅನುಭವಿಸಿದ್ದೇನೆ. ಎಸ್.ಜಾನಕಿಯವರು ಸಂಗೀತಕ್ಕಾಗಿಯೇ ಅವತರಿಸಿದವರು. ಹಾಡನ್ನು ಬಿಟ್ಟು ಅವರ ಜೀವನದಲ್ಲಿ ಇನ್ನೇನು ಇರಲಿಲ್ಲ. ದೇವರು ಅವರಿಗಾಗಿಯೇ ಸೃಷ್ಟಿಸಿದಂತಿದ್ದ ರಾಮಪ್ರಸಾದ್ ಅವರಂತಹ ಪತಿ, ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು.

ಗರ್ಭಿಣಿಯರಲ್ಲಿ ಮಧುಮೇಹ !

ಗರ್ಭಿಣಿಯರಲ್ಲಿ ಮಧುಮೇಹ !

ಇದು ಗರ್ಭಕೋಶದಲ್ಲಿರುವ ಮಗುವಿಗೆ ರಕ್ಷಣೆ ಕೊಡುವ ಮಾಯೆ ಮಾಡುವ ಒಂದು ಅದ್ಭುತವಾದ ಆಟ! ಸ್ವಲ್ಪ ಯೋಚನೆ ಮಾಡಿ, ತಾಯಿ ತಿಂದ ಆಹಾರವೆಲ್ಲಾ ಪೂರ್ತಿಯಾಗಿ ಅವಳ ದೇಹವೇ ಬಳಸಿ ಕೊಂಡರೆ, ಒಳಗಿರುವ ಪುಟ್ಟ ಜೀವಕ್ಕೆ ಶಕ್ತಿ ಎಲ್ಲಿಂದ ಬರಬೇಕು? ಅದಕ್ಕೇ ಪ್ರಕೃತಿ ಒಂದು ಚಮತ್ಕಾರ ಮಾಡಿದೆ.

ಉಪವಾಸದ ಹೋರಾಟ ಮುಟ್ಟೀತೇ ಗುರಿ ? ಅಹಿಂಸಾ ಹೋರಾಟ ಇಂದು ಮೊನಚು ಕಳೆದುಕೊಂಡಿದೆಯೇ ?

ಉಪವಾಸದ ಹೋರಾಟ ಮುಟ್ಟೀತೇ ಗುರಿ ?

ವಾಂಗ್ಚುಕ್ ಯಾಕೆ ಉಪವಾಸ ಕುಳಿತಿದ್ದಾರೆ, ಏನವರ ಬೇಡಿಕೆ, ಹಾಗೆ ಹಕ್ಕೊತ್ತಾಯ ಮಾಡಲಿಕ್ಕೆ ಅವರ್ಯಾರು? ಅದನ್ನು ನೋಡುವುದಕ್ಕೆ ಮೊದಲು, ಉಪವಾಸ ಸತ್ಯಾಗ್ರಹದ ಶಕ್ತಿಯನ್ನು ಕಡೆಗಣಿಸು ವುದು ಬೇಡ. ಅದಕ್ಕೆ ಒಂದು ನೈತಿಕ, ಸಾತ್ವಕ ಬಲ ವನ್ನು ತುಂಬಿಕೊಟ್ಟ ಮಹಾತ್ಮ ಗಾಂಧಿಯ ಬಗ್ಗೆ ಎಲ್ಲರಿಗೆ ಗೊತ್ತಿರುವುದೇ. ಆದರೆ ಇನ್ನೊಬ್ಬರೂ ಇದ್ದಾರೆ- ಅವರೇ ಪೊಟ್ಟಿ ಶ್ರೀರಾಮುಲು. ಅವರ 58 ದಿನಗಳ ಉಪವಾಸ ಭಾರತ ದೇಶದ ಭೂಪಟವನ್ನೇ ಬದಲಿಸಿತು.

ಮಧುಮೇಹಕ್ಕೆ ಅನುವಂಶೀಯತೆ ಕಾರಣವೇ? ?

ಮಧುಮೇಹಕ್ಕೆ ಅನುವಂಶೀಯತೆ ಕಾರಣವೇ? ?

ವೈದ್ಯಕೀಯ ವಿಜ್ಞಾನದಲ್ಲಿ ಟೈಪ್ 2 ಡಯಾಬಿಟಿಸ್ ಅನ್ನು ಒಂದು ‘ಮಲ್ಟಿ-ಫ್ಯಾಕ್ಟೋರಿಯಲ್’ ಸಮಸ್ಯೆ ಎಂದು ಕರೆಯುತ್ತೇವೆ. ಅಂದರೆ, ಇದು ಕೇವಲ ಒಂದೇ ಒಂದು ಕಾರಣದಿಂದ ಬರುವಂಥ ದ್ದಲ್ಲ; ಬದಲಾಗಿ ಹಲವಾರು ಕಾರಣಗಳು ಒಟ್ಟಾಗಿ ಸೇರಿ ಸೃಷ್ಟಿಸುವ ಚಕ್ರವ್ಯೂಹವಿದು! ವಯಸ್ಸು, ಅತಿಯಾದ ತೂಕ, ದೈಹಿಕ ಶ್ರಮವಿಲ್ಲದ ಜೀವನಶೈಲಿ, ಮಾನಸಿಕ ಒತ್ತಡ ಮತ್ತು ಅನುವಂಶೀಯತೆ ಇವೆಲ್ಲವೂ ಅಥವಾ ಇವುಗಳಲ್ಲಿ ಕೆಲವು ಒಟ್ಟಾಗಿ ಸೇರಿ ಮಾಡುವ ಕಿತಾಪತಿ ಇದು.

ಓದುವಾಗ ಆನಂದ ಓದಿದ ನಂತರ ಬೆರಗು !

ಓದುವಾಗ ಆನಂದ ಓದಿದ ನಂತರ ಬೆರಗು !

ಶಶಿಧರ ಹಾಲಾಡಿ ಅವರದು ಪರಿಸರ ಪ್ರತಿಭೆ. ಇದಕೆ ಹಲವು ಅರ್ಥಗಳಿವೆ. ಪರಿಸರದ ಬಗ್ಗೆ, ಹಕ್ಕಿ ಮರ ಗಿಡ ಹೂವು ಹಣ್ಣು ಗುಡ್ಡ ಬೆಟ್ಟಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ ಎಂಬುದೊಂದು. ಪರಿಸರದ ಬಗ್ಗೆ ಅದಮ್ಯ ಕಾಳಜಿಯ ಬರಹಗಾರ ಎಂಬುದು ಇನ್ನೊಂದು. ಟ್ರೆಕ್ಕಿಂಗ್‌ನಲ್ಲಿ ಆಸಕ್ತರು ಎಂಬುದೂ ನಿಜ. ಇನ್ನೂ ಒಂದು ಆಯಾಮವಿದೆ. ತಮ್ಮ ಒಂದು ಅಂಕಣದಲ್ಲಿ ಅವರು, ತಾವು ಟ್ರೆಕ್ಕಿಂಗ್ ಹೋದಾಗ ಕಂಡ ಒಂದು ಬಳ್ಳಿಯ ಬಗ್ಗೆ ಬರೆದಿದ್ದರು

Shashidhara Halady Column: ಸಿಮೆಂಟ್‌ ಪೈಪ್‌ʼಗೆ ದಾರಿ ಮಾಡಿಕೊಟ್ಟ ಮರ !

Shashidhara Halady Column: ಸಿಮೆಂಟ್‌ ಪೈಪ್‌ʼಗೆ ದಾರಿ ಮಾಡಿಕೊಟ್ಟ ಮರ !

ಮೌನವಾಗಿ ಆ ಮರದ ಪಕ್ಕದಲ್ಲೇ ತುಸು ಮುಂದಕ್ಕೆ ಸಾಗಿ, ಪುನಃ ವಾಪಸಾಗಿ, ಅದೇ ತಿರುವು ರಸ್ತೆಯಲ್ಲಿ ಬಂದೆ. ಈಗ ಆ ಎತ್ತರವಾದ ಮರದ ಕಾಂಡವನ್ನು ಕತ್ತರಿಸುವ ಮತ್ತು ಕತ್ತರಿಸಿದ ಕಾಂಡದ ಚೂರು ಗಳನ್ನು ದೂರ ಸರಿಸುವ ಕೆಲಸ ಭರದಿಂದ ಸಾಗುತ್ತಿತ್ತು. ಮರದ ನೆರಳಿನಲ್ಲಿ ಇರುತ್ತಿದ್ದ ಹಣ್ಣಿನ ಅಂಗಡಿ ಗಳ ಗಾಡಿಗಳು, ಅಲ್ಲೇ ಎದುರು ಭಾಗದ, ರಸ್ತೆಯಂಚಿನ ಖಾಲಿ ಜಾಗದಲ್ಲಿದ್ದ ಪ್ಲಾಸ್ಟಿಕ್ ಕಸದ ರಾಶಿಯ ಪಕ್ಕ ನಿಂತಿದ್ದವು.

N S Sridharmurthy Column: ಎಲ್ಲವೂ ಉಲ್ಟಾಪಲ್ಟಾ ಆಗಿಬಿಟ್ಟಿತು ! ದೇವರು ರಾಂಗ್‌ʼನಂಬರ್‌ʼಗೆ ಡಯಲ್‌ ಮಾಡಿದ್ದಾನೆ !

ದೇವರು ರಾಂಗ್‌ʼನಂಬರ್‌ʼಗೆ ಡಯಲ್‌ ಮಾಡಿದ್ದಾನೆ !

ಎನ್.ಎಸ್.ಶ್ರೀಧರ ಮೂರ್ತಿ ಕಳೆದ ತಿಂಗಳಷ್ಟೇ ನಮ್ಮ ‘ಇನ್ಸ್‌ʼಟ್ಯೂಟ್ ಆಫ್ ಟ್ರಾನ್ಸಲೇಷನ್ ಸ್ಡಡೀಸ್’ ಏರ್ಪಡಿಸಿದ್ದ ‘ಅನುವಾದದ ಸವಾಲುಗಳ’ ಕುರಿತ ಕಾರ್ಯಕ್ರಮಕ್ಕೆ ಬಂದು ಚಿಂತನಶೀಲ ಉಪನ್ಯಾಸ ನೀಡಿ, ಇಡೀ ದಿವಸ ಸಂಭ್ರಮದಿಂದ ನಮ್ಮ ಜೊತೆ ಕಳೆದಿದ್ದ ಗೆಳೆಯ ಎನ್.ಎಸ್.ಶಂಕರ್ ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲಿನಿಂತೆ ಬಂದೆರಗಿದೆ.

ಸಹ್ಯಾದ್ರಿಯ ಮಡಿಲಲ್ಲಿ ಸಿಂಹಸ್ಥ ಕುಂಭಮೇಳ !: ನಾಸಿಕ್‌ʼನಲ್ಲಿ ಆರಂಭವಾಗಲಿದೆ ಸ್ನಾನ ಪರ್ವ

ನಾಸಿಕ್‌ʼನಲ್ಲಿ ಆರಂಭವಾಗಲಿದೆ ಸ್ನಾನ ಪರ್ವ

ಗಂಗಾನದಿ ನಮ್ಮ ರಾಷ್ಟ್ರದ ಬಹುದೊಡ್ಡ ನದಿ. ದೇವನದಿ ಎಂಬ ಕೀರ್ತಿಗೂ ಇದು ಭಾಜನವಾಗಿದೆ. ಗಂಗಾನದಿಯ ಬಳಿಕ ಬರುವ ದೊಡ್ಡ ನದಿ ಗೋದಾವರಿ. ಇದರ ಉದ್ದ ಅಂದಾಜು ಸು.1465 ಕಿಲೋ ಮೀಟರ್. ಮಹಾರಾಷ್ಟ್ರ ರಾಜ್ಯದ ತ್ರ್ಯಂಬಕೇಶ್ವರದಲ್ಲಿ ಹುಟ್ಟುವ ಗೋದಾವರಿ ನದಿ ಆಂಧ್ರ- ತೆಲಂಗಾಣ ಗಳಲ್ಲಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ.

Sudhakar D Column: ಹಲಸೂರು ಕೆರೆಯಲ್ಲಿ ನೀರುಹಕ್ಕಿಗಳು !

Sudhakar D Column: ಹಲಸೂರು ಕೆರೆಯಲ್ಲಿ ನೀರುಹಕ್ಕಿಗಳು !

ಸುಮಾರು 80 ರಿಂದ 100 ದೊಡ್ಡ ಗಾತ್ರದ ಹಕ್ಕಿಗಳು ಕೆರೆಯಲ್ಲಿನ ಲಭ್ಯ ನೀರಿನಲ್ಲಿ ಆಹಾರಾ ನ್ವೇಷಣೆ ನಡೆಸಿದ್ದವು. ಅವುಗಳ ಆಹಾರ, ಗೊತ್ತಲ್ಲ, ಮೀನು ಮತ್ತು ಇತರ ಜಲಚರಗಳು! ಅದೆಲ್ಲಿಂದಲೋ ಬಂದ ಈ ಹಕ್ಕಿಗಳು, ಇರುವ ಸ್ವಲ್ಪ ನೀರಿನಲ್ಲೇ ತಮ್ಮ ಆಹಾರ ಹುಡುಕುತ್ತಾ, ಅತ್ತಿತ್ತ ಹಾರಾಡುತ್ತಿರುವ ದೃಶ್ಯ ಸುಂದರವಾಗಿತ್ತು.

Shashidhara Halady Column: ಅಲ್ಲೂ ಇದೆ ಮೂಢನಂಬಿಕೆ !

Shashidhara Halady Column: ಅಲ್ಲೂ ಇದೆ ಮೂಢನಂಬಿಕೆ !

ನ್ಯೂಯಾರ್ಕ್‌ನ ಈ ಪ್ರಸಿದ್ಧ ಬ್ರೂಕ್‌ಲಿನ್‌ನ ಬ್ರಿಜ್ ಕುರಿತು ಸಾಕಷ್ಟು ಬರಹಗಳು ಬಂದಿವೆ; ಅಲ್ಲಿನ ಈಸ್ಟ್ ರಿವರ್‌ಗೆ ಅಡ್ಡಲಾಗಿ 1883ರಲ್ಲಿ ನಿರ್ಮಿಸಿರುವ ಈ ತೂಗುಸೇತುವೆಯ ಮಧ್ಯಭಾಗವು 1595 ಅಡಿ ಉದ್ದವಿದ್ದು (ಒಟ್ಟು ಉದ್ದ 6016 ಅಡಿ), ಆಗಿನ ಕಾಲದಲ್ಲಿ ಜಗತ್ತಿನ ಅತಿ ಉದ್ದನೆಯ ತೂಗು ಸೇತುವೆ ಎಂದು ಹೆಸರಾಗಿತ್ತು

ಪ್ರಿ ಡಯಾಬಿಟಿಸ್'ಗೆ ಸರಳ ಮದ್ದು !

ಪ್ರಿ ಡಯಾಬಿಟಿಸ್'ಗೆ ಸರಳ ಮದ್ದು !

ನನ್ನ ಪ್ರಾಕ್ಟೀಸಿನಲ್ಲಿ ದಿನಕ್ಕೊಮ್ಮೆಯಾದರೂ ಕೇಳಿ ಬರುವ ಅತಿ ರೋಚಕವಾದ ಮತ್ತು ಅಷ್ಟೇ ಅಪಾಯಕಾರಿಯಾದ ಡೈಲಾಗ್ ಇದು: ರಕ್ತಪರೀಕ್ಷೆಯ ವರದಿಯನ್ನು ನನ್ನ ಮುಂದಿಟ್ಟು, ಮುಖದಲ್ಲಿ ಒಂದು ವಿಜಯದ ನಗೆ ಬೀರುತ್ತಾ ಹೇಳ್ತಾರೆ ‘ನೋಡಿ ಡಾಕ್ಟ್ರೇ, ನನಗೇನೂ ಶುಗರ್ ಇಲ್ಲ! ರಿಪೋರ್ಟ್‌ ನಲ್ಲಿ ಶುಗರ್ ಬರೀ ‘ಬಾರ್ಡರ್’ನಲ್ಲಿದೆ ಅಂತ ಲ್ಯಾಬ್‌ನವರು ಹೇಳಿದ್ರು

ಭೈರಪ್ಪನವರು ವಿಚಾರವಾದಿಯೂ ಹೌದು !

ಭೈರಪ್ಪನವರು ವಿಚಾರವಾದಿಯೂ ಹೌದು !

ಭೈರಪ್ಪ ಹಾಗೆ ದೀಪ ಹಿಡಿದು ಮಂಚದಡಿಯ ಹಾವು ಮಾತ್ರವಲ್ಲದೆ ಅಲ್ಲಿರುವ ಇತರ ವಸ್ತು, ಪದಾರ್ಥ ಗಳ ಮೇಲೂ ಪಂಜಿನಂತೆ ಬೆಳಕು ಬೀರಿ ಆ ಪ್ರದೇಶ ಝಗ್ಗನೆ ಬೆಳಗುವಂತೆ ಮಾಡಬಲ್ಲರು. ಹಾಗೆಯೇ ಬೆರಗನ್ನೂ ಕವಿಸಬಲ್ಲರು. ಅವರೊಬ್ಬ ಶುದ್ಧ ಸಾಹಿತಿ. ಶುದ್ಧ ಸಾಹಿತಿಯೆಂದರೆ ಭಾರತೀಯ ಕಾವ್ಯ ಮೀಮಾಂಸೆಯ ಮುಖ್ಯ ತಿರುಳಾದ ರಸತತ್ತ್ವವನ್ನು ಆಧರಿಸಿ ಬರೆಯುವವನು.

R Ramaradhya Column: ಯೋಗ ಅಭ್ಯಾಸವೇ ಡಾ.ರಾಜ್‌ ಯಶಸ್ಸಿನ ಕೀಲಿಕೈ !

ಯೋಗ ಅಭ್ಯಾಸವೇ ಡಾ.ರಾಜ್‌ ಯಶಸ್ಸಿನ ಕೀಲಿಕೈ !

ಕ್ಲಿಷ್ಟವಾದ ಹಲವು ಯೋಗಾಸನಗಳನ್ನು ಸುಲಭವಾಗಿ ಮಾಡಿ, ಇಂತಹ ಅದ್ವಿತೀಯ ಸಾಧನೆ ಗೈದವರು ನಮ್ಮ ಡಾ. ರಾಜ್‌ಕುಮಾರ್. ಆ ಚಲನಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅಳವಡಿಸಿದ್ದ ಯೋಗಾಭ್ಯಾಸ ಭಂಗಿಗಳನ್ನು ಪ್ರದರ್ಶಿಸಲು, ಅಪಾರ ಅಭ್ಯಾಸ, ಸಾಧನೆ ಮತ್ತು ಏಕಾಗ್ರತೆ ಬೇಕು! ಅಂದು ಅವರ ಯೋಗಾಸನವು ಉನ್ನತ ಮಟ್ಟದಲ್ಲಿತ್ತು; ಅದನ್ನು ಮೂವಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಅಂದಿನ ಆ ಸಾಹಸ ಅನುಕರಣಾರ್ಹ

ಯೋಗ ಲೋಕಹಿತಾರ್ಥಾಯ

ಯೋಗ ಲೋಕಹಿತಾರ್ಥಾಯ

ನಾವು ಇಂದು ವಿಶ್ವ ಯೋಗ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಯೋಗ ದಿನದ ಮಹತ್ವ ಮತ್ತು ಯೋಗ ನಮ್ಮ ಜೀವನದಲ್ಲಿ ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕುರಿತು ಚಿಂತಿಸುವುದಕ್ಕೆ ಸಕಾಲ. ಭಾರತ ದೇಶವು ಪ್ರಾಚೀನ ಕಾಲಗಳಿಂದಲೂ ಜ್ಞಾನ ವಿಜ್ಞಾನ ಗಳ ತವರೂರು. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದು ಜ್ಞಾನ ಸಂಪಾದನೆಯನ್ನು ಮಾಡಿ ತೆರಳುತ್ತಿದ್ದ ಐತಿಹಾಸಿಕ ಘಟನೆಗಳನ್ನು ನಾವು ಕೇಳಿದ್ದೇವೆ.

Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !

Dr Shashikaran Umakanth Column: ಮಧುಮೇಹದ ಅವಳಿ ಜವಳಿಗಳು !

ನಮ್ಮ ದೇಹದ ರಕ್ಷಣಾ ವ್ಯವಸ್ಥೆಯೇ (ಇಮ್ಯು ನಿಟಿ) ದಾರಿ ತಪ್ಪಿ, ಈ ಇನ್ಸುಲಿನ್ ಕಾರ್ಖಾನೆಯ ಮೇಲೆ ದಾಳಿ ಮಾಡಿ, ಅದನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುತ್ತದೆ. ಕಾರ್ಖಾನೆಗೆ ಶಾಶ್ವತ ಬೀಗಮುದ್ರೆ! ಒಂದು ಹನಿ ಇನ್ಸುಲಿನ್ ಕೂಡ ಉತ್ಪಾದನೆಯಾಗುವುದಿಲ್ಲ. ಕಾರ್ಮಿಕರೆಲ್ಲಾ ಖಾಯಂ ಮುಷ್ಕರ ಹೂಡಿದ ಹಾಗೆ ಇದು.

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

Hari Prasad Naadig Column: ತಬ್ಬಲಿಯು ನೀನಾದೆ ಬೆಟ್ಟವೇ...

ಸಾಮಾನ್ಯವಾಗಿ ಎಷ್ಟೋ ಸಾಫ್ಟ್‌ʼವೇರ್ ಇಂಜಿನಿಯರ್‌ಗಳು ವಾರಾಂತ್ಯದ ಬೇಸರ ಕಳೆಯಲು ಬೇರೆ ಬೇರೆ ಜಾಗಗಳಿಗೆ ಹೋಗಿ ಗಿಡ ನೆಟ್ಟು ಬರುತ್ತಾರೆ. ಅದಾದ ಮೇಲೆ ಆ ಗಿಡಗಳು ಏನಾದವು ಎಂದು ತಿರುಗಿ ನೋಡುವುದು ಕಡಿಮೆ. ಆದರೆ ಇಲ್ಲಿ ಹತ್ತಾರು ಜನ ಇಂಜಿನಿಯರ್‌ಗಳು ತಾವು ನೆಟ್ಟ ಗಿಡಗಳನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಕಾಪಾಡಿಕೊಂಡು ಬಂದು, ಈಗಲೂ ಅದರ ಬಗ್ಗೆ ತಲೆಕೆಡಿಸಿಕೊಳ್ಳು ತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು.

Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ

Narayana Yaji Column: ಕೆರೆಮನೆ ಮನೆತನಕ್ಕೆ 4ನೇ ರಾಷ್ಟ್ರ ಪ್ರಶಸ್ತಿ

ಇತ್ತೀಚೆಗಷ್ಟೇ ಅವರ ಸಾಧನೆಯನ್ನು ಗುರುತಿಸಿ ‘ಶ್ರೀ ವಿದ್ಯಾ ವೇದ ವಿಜ್ಞಾನ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯ, ಫ್ಲೋರಿಡಾ (ಅಮೇರಿಕಾ) ಹಾಗೂ ಶ್ರೀ ವಿದ್ಯಾ ವಿಶ್ವ ಸಂಶೋಧನಾ ಪ್ರತಿಷ್ಠಾನಂ, ಬೆಂಗಳೂರು’ ಇವರು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಇದು ಯಕ್ಷಗಾನ ಕಲೆಗೆ ಸಂದ ಗೌರವ. ಎರಡು ತಿಂಗಳ ಹಿಂದೆ ಯಕ್ಷಗಾನಕ್ಕೆ ಮೀಸಲಾದ ‘ಯಕ್ಷರಂಗ’ ಪತ್ರಿಕೆಯ ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಇವರಿಗೆ ‘ಯಕ್ಷ ಸಂಘಟಕ’ ಪ್ರಶಸ್ತಿಯನ್ನು ಪುರಸ್ಕರಿಸಿ ಗೌರವಿಸಿತ್ತು.

ಬ್ಯಾಟ್‌ʼಬಾಲ್‌ ಆಚೆಗಿಡಿ ಫುಟ್‌ ಬಾಲ್‌ ನೋಡಿ !

ಬ್ಯಾಟ್‌ʼಬಾಲ್‌ ಆಚೆಗಿಡಿ ಫುಟ್‌ ಬಾಲ್‌ ನೋಡಿ !

ಕೇರಳದ ಕಾಲ್ಚೆಂಡು ಕ್ರೇಜ್ ಅಂಥದು. ಕೋಲ್ಕತಾ, ಗೋವಾಗಳಿಗೆ ಹೋದರೂ ಈ ದೃಶ್ಯ ನೋಡ ಬಹುದು. ಇವರೆಲ್ಲರ ಪಾಲಿಗೆ, ಫಿಫಾ (FIFA) ಎಂಬುದು ಮನೆ ಹಬ್ಬದಂತೆ. ಕೇರಳದಲ್ಲಿ ಕ್ರಿಕೆಟ್‌ಗಿಂತ ಮನಸ್ಸು ಗೆದ್ದಿರುವುದು ಫುಟ್‌ಬಾಲ್. ಅದು ಅಲ್ಲಿನವರ ಸಂಸ್ಕೃತಿಯ ಒಂದು ಭಾಗ. ಕೇರಳದ ಹಳ್ಳಿ ಗಳಿಂದ ನಗರಗಳವರೆಗೆ ಫುಟ್‌ಬಾಲ್ ಹಬ್ಬದ ವಾತಾವರಣ ಕಾಣ ಸಿಗುತ್ತದೆ.

Loading...