ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಮ

ನನಸಾದ ದಶಕದ ಕನಸು

ನನಸಾದ ದಶಕದ ಕನಸು

ನಾಯಕನಿಗೆ ದೂರದೃಷ್ಟಿ ಆಲೋಚನೆ, ಜನಪರ ಚಿಂತನೆಯಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಈ ಸೇತುವೆ ತಲೆ ಎತ್ತಿ ನಿಂತಿದೆ ಎಂದರೆ ತಪ್ಪಾಗುವುದಿಲ್ಲ. ಅಷ್ಟಕ್ಕೂ ಈ ಸೇತುವೆ ಇರುವುದು ನರಸಿಂಹರಾಜಪುರ (ಎನ್ಆರ್‌ಪುರ)ದಲ್ಲಿ. ಭದ್ರಾ ಜಲಾಶಯದ ನಿರ್ಮಾಣದ ಬಳಿಕ ಹಿನ್ನೀರಿನಲ್ಲಿ ಮುಳುಗಡೆಯಾದ ಬಳಿಕ ಎನ್ಆರ್ ಪುರ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಬೇರೆ ಕಡೆ ವಲಸೆ ಹೋದರು. ಆದರೆ ಎಂಟ್ಹತ್ತು ಗ್ರಾಮದವರು ಅಲ್ಲಿಗೇ ಉಳಿದುಕೊಂಡರು.

N R Pura Bridge: ಮಲೆನಾಡಿನ ಸಂಪರ್ಕ ಕ್ರಾಂತಿ

ನನಸಾದ ಕನಸು; ಎನ್.ಆರ್. ಪುರ ಸೇತುವೆ

ಎಂ.ಶ್ರೀನಿವಾಸ್ ಅವರ ನೇತೃತ್ವ, ಸ್ಥಳೀಯರ ಪರಿಶ್ರಮ ಹಾಗೂ ಶಾಸಕ ಟಿ.ಡಿ ರಾಜೇಗೌಡ ಅವರ ಬೆಂಬಲ ದಿಂದ ಈಗ ಈ ಸೇತುವೆ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆ ಆಗುತ್ತಿದೆ. ಪಶ್ಚಿಮ ಘಟ್ಟಗಳ ದಟ್ಟ ಹಸಿರು ಮತ್ತು ತುಂಗಾ ನದಿಯಂಥ ಸದಾಕಾಲ ಹರಿಯುವ ನದಿಗಳಿಂದ ಆವೃತ ವಾಗಿರುವ ಈ ಪ್ರದೇಶದಲ್ಲಿ ನೈಸರ್ಗಿಕ ಸೌಂದರ್ಯಕ್ಕೇನು ಕೊರತೆಯಿಲ್ಲ. ಇಲ್ಲಿನ ಜನತೆ ದಶಕಗಳ ಕಾಲ ಕಿರಿದಾದ ರಸ್ತೆಗಳು ಮತ್ತು ತಗ್ಗು ಪ್ರದೇಶದ ಸೇತುವೆಗಳನ್ನೇ ಅವಲಂಬಿಸಿದ್ದರು.

ಉದ್ಘಾಟನೆಗೂ ಮೊದಲೇ ಜನಸಾಗರ

ಉದ್ಘಾಟನೆಗೂ ಮೊದಲೇ ಜನಸಾಗರ

ಪಶ್ಚಿಮ ಘಟ್ಟಗಳ ಹಸಿರು ಸಾಲು ಮತ್ತು ಭದ್ರಾ ನದಿಯ ಪ್ರಶಾಂತ ಹಿನ್ನೀರಿನ ಹಿನ್ನೋಟವು ಪ್ರವಾಸಿಗರಿಗೆ ಆಹ್ಲಾದಕರ ಅನುಭವ ನೀಡುತ್ತಿದೆ. ಕೆಲವೇ ದಿನಗಳ ಹಿಂದೆ ಅಪರಿಚಿತ ಎಂಬಂತಿದ್ದ ಈ ಪ್ರದೇಶ ಈಗ ಪ್ರವಾಸಿ ಚಟುವಟಿಕೆಗಳಿಂದ ಗಿಜಿಗುಟ್ಟುತ್ತಿದೆ. ಈ ಸೇತುವೆಯು ಕೇವಲ ಒಂದು ಪ್ರವಾಸಿ ತಾಣವಾಗಿ ಉಳಿಯದೆ, ಸ್ಥಳೀಯರಿಗೆ ಮತ್ತು ರೈತರಿಗೆ ವರದಾನವಾಗಿದೆ.

ಬೆನ್ನು ನೋವಿಗೆ ಬಂಗಾರದ ಪುಡಿ !

ಬೆನ್ನು ನೋವಿಗೆ ಬಂಗಾರದ ಪುಡಿ !

ನಂಗೆ ಬೇರೆ ದಾರಿ ಇರಲಿಲ್ಲ. ಸೊಂಟದ ಸಹವಾಸ ತುಂಬಾ ಬೇಕಿತ್ತು. ಸಾರಿ , ಸೊಂಟ ಅಂದೆ. ಡಾಕ್ಟರ್ ಹತ್ರ ಹೋಗೊದು ಅನಿವಾರ್ಯ. ಡಾಕ್ಟರು ಹೇಳಿದ್ರು. ‘ಜಾಸ್ತಿ ತೊಂದರೆ ಇಲ್ಲ. ಸ್ಪಾಸಮ್ ಆಗಿದೆ. ಏಳು ದಿನ ಫಿಸಿಯೋ ಥೆರಪಿ ಮಾಡಿಸ್ಕೊಳಿ. ಸರಿಹೋಗತ್ತೆ’ ‘ಸ್ಪಾಸಮ್ ಅಂದ್ರೇನು ಸಾರ್?’ ನನ್ನ ಮುಖ ನೋಡಿ, ಡಾಕ್ಟರು ಮನಸ್ಸಿನಲ್ಲಿ ’ತಲೆಹರಟೆ’ ಅಂದುಕೊಂಡ್ರು ಅನ್ನಿಸುತ್ತೆ.

Polenahally Ramesh Column: ಮಣ್ಣಿನ ಬೆಲೆಯ ಹೂದಾನಿ

Polenahally Ramesh Column: ಮಣ್ಣಿನ ಬೆಲೆಯ ಹೂದಾನಿ

ನನಗಿಷ್ಟವಾದ ಬೊಂಬೆಯನ್ನು ಕೈಗೆತ್ತಿಕೊಂಡು ಅಮ್ಮನ ಕಡೆ ನೋಡಿ ನಕ್ಕಿದ್ದೆ. ಅಮ್ಮ ‘ನಿನಗೆ ಇಷ್ಟವಾಯಿತಾ?’ ಎಂದಿದ್ದಳು. ನಾನು ಅವಳ ಕೈ ಹಿಡಿದು ಜಗ್ಗಿದ್ದೆ. ‘ಸರಿ ಇರು’ ಎಂದು ಹೇಳಿ ಅದರ ಬೆಲೆ ಕೇಳಿದಳು. ಅಂಗಡಿಯವನು 11 ರುಪಾಯಿ ಎಂದ. ಅಮ್ಮ ತನ್ನ ಪರ್ಸನ್ನು ತೆಗೆದು ಜಿಪ್ ತೆಗೆದು, ತಡಕಾಡಿ ಅದರಲ್ಲಿ ಕೇವಲ ಒಂಬತ್ತು ರೂಪಾಯಿ ಇರುವುದು ಕಂಡು, ‘ಕಡಿಮೆ ಇಲ್ಲವೇ?’ ಎಂದು ಮೆಲ್ಲನೆ ಕೇಳಿದ್ದಳು.

ಮುಟ್ಟಿದರೆ ಕಪ್ಪಾಗಿಸುವ ಮಸಿವಾಳ !

ಮುಟ್ಟಿದರೆ ಕಪ್ಪಾಗಿಸುವ ಮಸಿವಾಳ !

ಸಂಡೂರು ಭಾಗದ ಗುಡ್ಡ ಮತ್ತು ಕಾಡುಗಳಲ್ಲಿ ಒಂದು ಪ್ರಭೇದದ ಮರವಿದೆ; ಇದರ ಹೆಸರು ‘ಮಸಿವಾಳ’! ಮನುಷ್ಯರು ಮುಟ್ಟಿದರೆ, ಅವರ ಕೈ ಕಪ್ಪಾಗಿಸುವ ಗುಣದಿಂದಲೇ ಈ ಮರ ಜನರಲ್ಲಿ ಕುತೂಹಲ ಮೂಡಿಸುತ್ತದೆ. ಕಪ್ಪು ತೊಗಟೆಯ ವಿಚಿತ್ರ ಸ್ವಭಾವ ಸುಮಾರು 15 ಅಡಿ ಎತ್ತರದವರೆಗೆ ಬೆಳೆಯುವ ಮಸಿವಾಳ ಮರದ ತೊಗಟೆ ಕಪ್ಪು ಬಣ್ಣದ್ದಾಗಿದ್ದು ಕಾರ್ಕ್‌ನಂತೆ ದಪ್ಪವಾಗಿರುತ್ತದೆ.

Narayan Yaji Column: ಮಕ್ಕಳ ಲೇಖನಿಯಲ್ಲಿ ಅರಳಿದ ಮಹಾನ್ ಸಾಹಿತಿ!

Narayan Yaji Column: ಮಕ್ಕಳ ಲೇಖನಿಯಲ್ಲಿ ಅರಳಿದ ಮಹಾನ್ ಸಾಹಿತಿ!

ಜಾಗತಿಕ ಸಾಂಸ್ಕೃತಿಕ ರಂಗದಲ್ಲಿ ಲಿಯೋನಾರ್ಡ್ ಡ ವಿನ್ಸಿ ಅಥವಾ ರವೀಂದ್ರನಾಥ ಟ್ಯಾಗೋ ರರಂತವರ ಜೊತೆ ಹೋಲಿಸಬಹುದಾದ ಮಹಾನ್ ವ್ಯಕ್ತಿತ್ವ ಕಾರಂತರದ್ದು. ಮೂಲ ಇಂಗ್ಲಿಷ್ ಕೃತಿಯ ಕುರಿತು ಡಿಸೆಂಬರ್ ತಿಂಗಳಲ್ಲಿ ನಡೆದ ಬೆಂಗಳೂರು ಲಿಟ್-ಫೆಸ್ಟಿನಲ್ಲಿ ಕಾರಂತ ಮೂವ ರೂ ಮಕ್ಕಳ ಜೊತೆ ವಿಮರ್ಶಕ ಎಸ್.ಆರ್.ವಿಜಯಶಂಕರ ಅವರು ಸಂವಾದ ನಡೆಸಿದ್ದರು

Shashidhara Halady Column: ಸ್ಪೂರ್ತಿ ತುಂಬುವ ಶಿಕ್ಷಕರಿವರು !

Shashidhara Halady Column: ಸ್ಪೂರ್ತಿ ತುಂಬುವ ಶಿಕ್ಷಕರಿವರು !

ಸಾಹಿತ್ಯ ಪರಿಚಾರಿಕೆಯೂ ಸೇರಿದಂತೆ, ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ, ಸಮಾಜ ಸೇವೆ ಮಾಡಿರುವ, ಶಿಕ್ಷಕ ವೃತ್ತಿಯ ನ.ಭ.ನೆಂಪು ಅವರು 11 ಪುಸ್ತಕಗಳನ್ನೂ ರಚಿಸಿದ್ದಾರೆ. ಶಿಕ್ಷಕರಾಗಿ ಅವರು ಮಾಡಿದ ಸಾಧನೆ ಬಹುದೊಡ್ಡದು. ಹಲವು ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡಿದ ಹಿರಿಮೆ ಅವರದು.

ರಾಮನವಮಿಯ ಸಂಭ್ರಮ!

ರಾಮನವಮಿಯ ಸಂಭ್ರಮ!

ರಾಮಾಯಣವು ಎಲ್ಲರಿಗೂ ತಿಳಿದದ್ದೇ ಆದರೂ, ಶಾಸ್ತ್ರಿಗಳು ಪ್ರತಿ ಪಾತ್ರಗಳ ವಿವರಣೆ ಯನ್ನು ಮಾಡುತ್ತಾ ಹೋದಂತೆ ಕುಳಿತ ಎಲ್ಲರಿಗೂ ಆ ದಿನದ ಕಂತಿನ ಪ್ರಮುಖ ಪಾತ್ರಗಳಾದ ಮಾರೀಚ, ಸುಬಾಹು, ಅಹಲ್ಯೆ, ಮಂಥರೆ, ಗುಹ, ಜಟಾಯು, ಸಂಪಾತಿ, ಕಬಂಧ, ಸುಗ್ರೀವ, ವಾಲಿ, ಜಾಂಬ ವಂತ, ವಿಭೀಷಣ ಇವರೆಲ್ಲರ ಮುಖವೂ ಕಣ್ಣ ಮುಂದೆ ಕಟ್ಟುತ್ತಿತ್ತು.

Dr T N Vasudevamurthy Column: ಕೃತಕ ಬುದ್ಧಿಮತ್ತೆ: ದ್ವಿತೀಯ ದರ್ಜೆಯ ಸ್ವೋಪಜ್ಞತೆ

ಕೃತಕ ಬುದ್ಧಿಮತ್ತೆ: ದ್ವಿತೀಯ ದರ್ಜೆಯ ಸ್ವೋಪಜ್ಞತೆ

ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ಮೂಲಕ, ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸ ಲಾದ ಒಂದು ಕೃತಿಯನ್ನು ಬಿಡುಗಡೆ ಮಾಡಲಾಯಿತು; ಈ ಕೃತಿಯು ಎಐನಿಂದ ಅನುವಾದಗೊಂಡ ಪ್ರಪ್ರಥಮ ಭಾರತೀಯ ಪುಸ್ತಕವೆಂದು ಪ್ರಚಾರ ಪಡೆಯಿತು. ದೆಹಲಿಯಲ್ಲಿ ನಡೆದ ಎಐ ಸಮಾವೇಶದಲ್ಲೂ ಸಹ ಈ ಎಐ ಅನುವಾದಿತ ಕೃತಿ ಸದ್ದು ಮಾಡಿತು.

Narendra Pai Column: ಆರುನೂರು ತಳಿಗಳ ಸಂರಕ್ಷಕ !

Narendra Pai Column: ಆರುನೂರು ತಳಿಗಳ ಸಂರಕ್ಷಕ !

ಮನೆಮಾತು ಮಲೆಯಾಳಂ ಆದರೂ ಕನ್ನಡದಲ್ಲಿ ಓದಲು ಬರೆಯಲು ಬರುವುದರಿಂದ ಈ ಎರಡು ರಾಜ್ಯಗಳ ಕೃಷಿ ವಲಯದೊಂದಿಗೆ ಅವರಿಗೆ ನಿಕಟ ಸಂಪರ್ಕವಿದೆ. ಹಲವಾರು ತಳಿ ಸಂರಕ್ಷಕರು ಅವರಿಗೆ ಪರಿಚಿತರಾದರೂ ಈ ಕ್ಷೇತ್ರಕ್ಕೆ ಅವರನ್ನು ಕೈಹಿಡಿದು ಕರೆತಂದವರು : ಇಬ್ಬರು ಮಹನೀಯರು - ಅವರೇ ಉಡುಪಿಯ ಚೇರ್ಕಾಡಿ ರಾಮಚಂದ್ರ ರಾಯರು ಮತ್ತು ಬೆಳ್ತಂಗಡಿಯ ದೇವರಾಯರು.

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಚಂದ್ರದರ್ಶನ ʼಹಿರಿಯರಿಗೆ ನಮಸ್ಕಾರʼ !

ಮಾವಿನ ಮರದಲ್ಲಿರುವ ಎಲೆಯನ್ನು ನೀಂಟಿ ನೀಂಟಿ ತಿಂದು ಧ್ವನಿಯ ಮಾಧುರ್ಯ ವನ್ನು ಹೆಚ್ಟಿಸಿಕೊಂಡು ಇಂಪಾದ ದ್ವನಿಯನ್ನು ಹೊರಡಿಸುವದರಲ್ಲಿ ಕೋಗಿಲೆ ತೃಪ್ತಿಯನ್ನು ಕಾಣುತ್ತದೆ. ಇದೇ ಸಮಯದಲ್ಲಿ ಮರ-ಗಿಡ- ಬಳ್ಳಿಗಳು ಹಚ್ಚ ಹಸುರಿನಿಂದ ಕೂಡಿ ಕೊಂಡು ಮೈ-ಮನ ದುಂಬಿರುತ್ತವೆ.

Poornima kamalashile Column: ನಮ್ಮ ಹಳ್ಳಿಯ ವೀರ ವನಿತೆ !

ನಮ್ಮ ಹಳ್ಳಿಯ ವೀರ ವನಿತೆ !

ಆಕೆಗೆ ಮಕ್ಕಳ ಡ್ಯಾನ್ಸ್, ಮತ್ತಿನ್ನೇನೊ ನೋಡುವುದಕ್ಕಿಂತ, ಅವರನ್ನು ಸಭೆ ಮೇಲೆ ಕಳುಹಿಸು ವುದೇ ಮಹಾ ಸಂಭ್ರಮ. ಜೊತೆಗೆ ಕೆಲವು ಶಾಲೆಯಲ್ಲಿ, ಅಕಸ್ಮಾತ್ ಆಗಿ ಕೆಲವು ಶಿಕ್ಷಕರ ಕಾಮುಕತನ ಗೊತ್ತಾದರೆ ಆಕೆ ಮಹಾಕಾಳಿಯಾಗಿದ್ದೂ ಇದೆ. ಜೊತೆಗೆ, ನಮ್ಮೂರ ಹೆಣ್ಮಕ್ಕಳಿಗೆಲ್ಲ ಅಂತ ಕಾಮಪಿಪಾಸುಗಳಿಂದ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆಯ ಪಾಠ ಮಾಡಿದ ದಿಟ್ಟ ಹೆಂಗಸಾಕೆ.

ಅಪೂರ್ವ ಒಳನೋಟಗಳು

ಅಪೂರ್ವ ಒಳನೋಟಗಳು

ಒಂದು ಉದಾಹರಣೆಯನ್ನು ನೋಡುವುದಾದರೆ, ‘ಸಂಕೀರ್ಣ ಸಂರಚನೆಯ ವದರಿಂಗ್ ಹೈಟ್ಸ್’ ಲೇಖನದಲ್ಲಿ ಬಂದಿರುವ ಆರಂಭದ ಸಾಲುಗಳಿವು: “ಕನ್ನಡದ ನವೋದಯ ಸಾಹಿತ್ಯ ಸಂದರ್ಭ ದಲ್ಲಿ ಇಂಗ್ಲಿಷ್ ಸಾಹಿತ್ಯಾಭ್ಯಾಸದ ಫಲವಾಗಿ ಕಾವ್ಯ, ಸಣ್ಣಕತೆ, ಕಾದಂಬರಿ, ಲಲಿತ ಪ್ರಬಂಧ ಹೀಗೆ ಹೊಸ ಸಾಹಿತ್ಯದ ವಿವಿಧ ಪ್ರಕಾರಗಳು ಹುಟ್ಟಿಕೊಂಡವು.

Pragati Shetty Interview: ಸವಾಲಿನ ಕೆಲಸದಲ್ಲಿ ಮಿಂಚಿದ ಮಹಿಳೆ !

Pragati Shetty Interview: ಸವಾಲಿನ ಕೆಲಸದಲ್ಲಿ ಮಿಂಚಿದ ಮಹಿಳೆ !

ಚಾರ್ಲಿ, ಬೆಲ್ ಬಾಟಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರ, ಕಾಂತಾರ ಚಾಪ್ಟರ್ 1 ಹೀಗೆ ಸಾಲು ಸಾಲು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದವರು ಇವರೇ! ಖ್ಯಾತ ನಟ ರಿಷಬ್ ಶೆಟ್ಟಿಯವರ ಅವರ ಮುದ್ದಿನ ಮಡದಿ ಯಾಗಿ, ಅವರ ಪ್ರತಿ ಸಿನಿಮಾಗಳಿಗೂ ಬೆನ್ನೆಲುಬಾಗಿ ನಿಂತು ಹೊಸತನಕ್ಕೆ ನಾಂದಿ ಹಾಡಿದವರು.

Rajashree T Rai Column : ರಾಗಿ ಮತ್ತು ಭತ್ತದ ಗೆಳೆತನ !

Rajashree T Rai Column : ರಾಗಿ ಮತ್ತು ಭತ್ತದ ಗೆಳೆತನ !

ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ರಾಗಿ ಅಕ್ಕಿಯ ಕುರಿತು ಜನಪದ ಕಥೆಯ ಬೇರೆ ಬೇರೆ ಅವತರಣಿಕೆಗಳು ಲಭ್ಯವಿವೆ. ಒಂದು ಪಠ್ಯದಲ್ಲಿ ಇದು ತುಳುನಾಡಿನಲ್ಲಿ ಬೆಳೆಯುತ್ತಿದ್ದ ‘ಅತಿಕಾರೆ’ ಎನ್ನುವ ಭತ್ತದ ತಳಿಯು ದೈವತ್ವಕ್ಕೆ ಏರಿದ ಕಥೆ ಆದರೆ ಇನ್ನೊಂದು ಪಠ್ಯದಲ್ಲಿ ಇದು ಭತ್ತ ರಾಗಿಗೆ ಬುದ್ಧಿ ಹೇಳುವ ಕಥೆ, ಹಾಗೆಯೇ ಮತ್ತೊಂದು ಅವತರಣಿಕೆಯಲ್ಲಿ ರಾಗಿ ಭತ್ತಕ್ಕೆ ಸಮಾಧಾನ ಹೇಳುವ ಕತೆ. ಹೀಗೆ ಬೇರೆ ಬೇರೆ ರೀತಿಯ ಕಥನಗಳು ಲಭ್ಯವಿವೆ.

Dr N Bhaskar Acharya Column: ವೈದ್ಯರ ದ್ವಂದ್ವ

Dr N Bhaskar Acharya Column: ವೈದ್ಯರ ದ್ವಂದ್ವ

ಹೊಟ್ಟೆಯೊಳಗೆ ಮಗುವಿನ ಕೈಕಾಲುಗಳ ಚಲನೆ, ಹೃದಯ ಬಡಿತ ಸರಿಯಾದ ಮಿತಿಯೊಳಗೇ ಇತ್ತು. ಹದಿನೈದು ದಿನಗಳ ಹಿಂದೆ ಅದೇ ಆಸ್ಪತ್ರೆಯಲ್ಲಿ ಮಾಡಿದ ಹೊಟ್ಟೆಯ ಅಲ್ಟ್ರಾಸೌಂಡ್ ವರದಿ ಕೂಡಾ ಈತ ಕಂಡುಕೊಂಡ ಅಂಶಗಳನ್ನೇ ಪುಷ್ಟೀ ಕರಿಸುತ್ತಿತ್ತು. ಅದರ ಪ್ರಕಾರ ಮಗುವಿನ ತೂಕ ಸಾಧಾರಣ ಎರಡೂವರೆ ಕೆಜಿಯಷ್ಟಿದ್ದು, ಈ ನಂತರದ ಹತ್ತು ಹದಿನೈದು ದಿನಗಳಲ್ಲಿ ಐನೂರು ಗ್ರಾಂಗಳಷ್ಟಾದರೂ ಹೆಚ್ಚಾಗಿರಬೇಕೆಂದುಕೊಂಡನು ಡಾ. ಎಸ್. ಮಗು ಸಸೂತ್ರವಾಗಿ ಎಡಕ್ಕೆ ತಿರುಗಿ ಬಂದರೆ ಸರಿ.

Shashidhara Halady Column: ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !

ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !

ಪಶ್ಚಿಮ ಘಟ್ಟಗಳು ಮತ್ತು ಅದರ ಆಶ್ರಯದಲ್ಲಿ ಬೆಳೆದಿರುವ ವನಸಿರಿ - ಇದನ್ನು ಪಡೆದಿರುವ ನಮ್ಮ ರಾಜ್ಯವು ನಿಜಕ್ಕೂ ಅದೃಷ್ಟವಂತ ರಾಜ್ಯ! ಇಂತಹದೊಂದು ಅಪರೂಪದ ಕಾಡು ಪ್ರದೇಶವನ್ನು ಪಡೆದಿರುವ ನಮ್ಮ ರಾಜ್ಯದ ಜನರು ಸಹ ಅದೃಷ್ಟ ವಂತರು. ಇಂತಹ ಅಪರೂಪದ ಕಾಡು, ವನಸಿರಿ, ಜೀವ ವೈವಿಧ್ಯ ನಮ್ಮ ದೇಶದ ಅವೆಷ್ಟೋ ರಾಜ್ಯಗಳಲ್ಲಿ ಕಾಣ ಸಿಗದು!

50 ವರ್ಷಗಳ ಹಿಂದೆ..

50 ವರ್ಷಗಳ ಹಿಂದೆ..

ನಮ್ಮ ಬಾಲ್ಯದಲ್ಲಿ ಅಂದರೆ 50-60 ವರ್ಷಗಳ ಹಿಂದೆ ಮಲೆನಾಡಿನ ಮೂಲೆಯಲ್ಲಿದ್ದ ನಮ್ಮ ಮನೆಯಲ್ಲಿ ಶಿವರಾತ್ರಿಗೆ ಸುಮಾರು ಒಂದು ತಿಂಗಳ ಮೊದಲೇ ಸಿದ್ಧತೆ ಆರಂಭ ವಾಗುತ್ತಿತ್ತು. ಶಿವರಾತ್ರಿಯ ದಿನ ಬೆರಣಿ ಸುಟ್ಟು ಇಡೀ ವರ್ಷಕ್ಕಾಗುವಷ್ಟು ವಿಭೂತಿ ತಯಾರಿಸಿ, ಅದನ್ನು ಮುಂದಿನ ಶಿವರಾತ್ರಿಯ ತನಕ ಬಳಸುತ್ತಿದ್ದೆವು!

Keshav Prasad Column: ಸಂಯೋಜಿತ ಚಿಕಿತ್ಸೆಯ ಹರಿಕಾರ

ಸಂಯೋಜಿತ ಚಿಕಿತ್ಸೆಯ ಹರಿಕಾರ

ಭಾರತದಲ್ಲಿ ಬಿಹಾರ, ಉತ್ತರಪ್ರದೇಶ, ಕೇರಳ, ಆಂಧ್ರಪ್ರದೇಶದಲ್ಲಿ ಆನೆಕಾಲು ರೋಗ ಹೆಚ್ಚಾಗಿ ಕಾಡುತ್ತಿದೆ. ಜಗತ್ತಿನ ಶೇಕಡಾ 40ರಷ್ಟು ರೋಗಪೀಡಿತರು ಭಾರತದಲ್ಲಿ ಇರುವುದು ಕಳವಳಕಾರಿ. ಗಡಿನಾಡು ಕಾಸರಗೋಡಿನ ಕನ್ನಡಿಗ ವೈದ್ಯ ಡಾ.ಎಸ್.ಆರ್.ನರಹರಿ ಅವರು ಸಂಯೋಜಿತ ವಿಧಾನದಲ್ಲಿ ಆನೆಕಾಲು ರೋಗದ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದಿ ನಾಯಿಯೊಂದರ ಆಧ್ಯಾತ್ಮಿಕ ಪಯಣ

ಬೀದಿ ನಾಯಿಯೊಂದರ ಆಧ್ಯಾತ್ಮಿಕ ಪಯಣ

ಇದು ಕೇವಲ ಒಂದು ನಾಯಿಯ ಬದುಕಿನ ಕಥೆಯಲ್ಲ; ಬೀದಿ ನಾಯಿಯಾಗಿ ಹುಟ್ಟಿ, ನಂಬಿಕೆ, ಕರುಣೆ ಮತ್ತು ಅಧ್ಯಾತ್ಮದ ಶಕ್ತಿಯನ್ನು ಜಗತ್ತಿಗೆ ಸಾರಿ, ಶಾಂತಿಯ ಸಂದೇಶ ಸಾರುತ್ತಿರುವ ಒಂದು ಮೌನ ಯಾತ್ರಿಕನ ಪಯಣವಾಗಿದೆ. ಅಲೋಕ ಎಂಬ ಹೆಸರು ಹೊತ್ತ ಈ ನಾಯಿ ಈಗ ಅಮೆರಿಕದಲ್ಲಿದೆ!

Narayana Yaji Column: ನಗುವಿನೊಳಗಿನ ಬದುಕು

Narayana Yaji Column: ನಗುವಿನೊಳಗಿನ ಬದುಕು

ಶಿರಸಿಯೇ ಇರಲಿ, ತಾಷ್ಕೆಂಟೇ ಇರಲಿ ಮನುಷ್ಯ ತಾನೇ ಸೃಸ್ಟಿಸಿಕೊಂಡ ಬಲೆಯಲ್ಲಿ ಬಿದ್ದು ಗೊಂದಲ ವನ್ನುಂಟುಮಾಡಿಕೊಳ್ಳುತ್ತಾನೆ. ಪನ್ ಮತ್ತು ವಿಟ್‌ಗಳನ್ನು ಇನ್ನೊಬ್ಬರನ್ನು ಹೀಗೆಯೆಳೆಯಲು ಅವರು ಬಳಸಿಕೊಳ್ಳುವುದಿಲ್ಲ; ಅದಕ್ಕೆ ಕಾರಣವನ್ನು “ಪತ್ರಕರ್ತನ ವಿನೋದಾ ವಳಿಯ ಹಾವಳಿ"ಯಲ್ಲಿ ವಿವರಿಸಿದ್ದಾರೆ.

ತುಳುನಾಡಿನ ಬೆರ್ಮರು

ತುಳುನಾಡಿನ ಬೆರ್ಮರು

ದ್ರಾವಿಡ ಮೂಲದ ತುಳು ಶಬ್ದವಾದ ‘ಬೆರ್ಮೆರ್’ ಎನ್ನುವುದರ ಅರ್ಥ ದೇವರು ಎಂದು. ‘ಬೆರ್ಮೆರ್’ ಎನ್ನುವುದು ರೂಢನಾಮವೇ ಹೊರತು ಅಂಕಿತನಾಮವಲ್ಲ. ಅಂದರೆ ಅದು ದೇವರು ಎನ್ನುವ ಅರ್ಥ ಕೊಡುವ ದ್ರಾವಿಡ ಮೂಲದ ತುಳು ಶಬ್ದ. ಇದಕ್ಕೆ ಸಮಾನ ಎನಿಸುವ ತಮಿಳು ಪದ ‘ಪೆರುಮಾನ್; ಅಥವಾ ‘ಪೆರುಮಾಳ್’ ಎನ್ನುವುದು. ವೈದಿಕ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆ ತುಳುನಾಡಿಗೆ ಬರುವ ಮುನ್ನ, ಇಲ್ಲಿ ದೇವತಾ ಸಂಕಲ್ಪಕ್ಕೆ ಇದ್ದಿರಬಹುದಾದ ದ್ರಾವಿಡ ಮೂಲದ ಶಬ್ದವೇ ‘ಬೆರ್ಮೆರ್’.

ಕಪಿಗೆ ʼಚಪಲತೆʼ ಸಹಜಂ !

ಕಪಿಗೆ ʼಚಪಲತೆʼ ಸಹಜಂ !

ಒಮ್ಮೊಮ್ಮೆ ಪ್ರವಾಸಿಗರೊಂದಿಗೆ ಹಲ್ಲು ಮಸಿಯುತ್ತ ಅವರನ್ನು ಹೆದರಿಸುತ್ತ ಅವರ ಮೇಲೆ ಪ್ರಭುತ್ವ ಸಾಧಿಸಲು ಹವಣಿಸುತ್ತವೆ. ಅಷ್ಟರಲ್ಲೇ ಜೊತೆಗಾರರೂ ಹಾಜರೂ! ಅಲ್ಲಿಂದ ಗುಹಾಂತರ ದೇವಾಲಯ, ಮ್ಯೂಸಿಯಂ, ಕಪ್ಪೆ ಆರೆಭಟ್ಟನ ಶಾಸನ, ರಂಗನಾಥ ಮಂದಿರ, ಭೂತನಾಥ ಟೆಂಪಲ್ ಎಂದೆಲ್ಲಾ ಬಂದ ಪ್ರವಾಸಿಗರ ಪ್ರಫುಲ್ಲ ಮನಸಿನಲ್ಲಿ ಈ ಕೋತಿಗಳು ಅವ್ಯಕ್ತ ಭಯವನ್ನಂತೂ ಹುಟ್ಟು ಹಾಕಿ ಬಿಡುತ್ತವೆ.

Loading...