K Srinivas Rao Column: ಟರ್ನಿಂಗ್ ಪಾಯಿಂಟ್ ಆದ ಪೋಸ್ಟ್ ಕಾರ್ಡ್ !
ನನ್ನದು ಯಥಾಪ್ರಕಾರ ಮೌನೇನ ಕಲಹಂ ನಾಸ್ತಿ! ಪೇಪರ್ ಏಜೆನ್ಸಿ ಕಷ್ಟ; ನಿತ್ಯ ಬೆಳಿಗ್ಗೆ 4ಕ್ಕೇ ಏಳಬೇಕು. ಮನೆಗಳಿಗೆ ಹಂಚಲು ಹುಡುಗರು ಅವಶ್ಯ. ಅವರಿಗೆ ಕಾಫಿ ತಿಂಡಿ, ಜೊತೆಗೆ ಸೈಕಲ್ ಒದಗಿಸುವುದು ಸಾಧ್ಯವೇ? ಅಷ್ಟಕ್ಕೂ ಅವರು ಕೈಕೊಟ್ಟರೆ ನಾನೇ ಮನೆ ಮನೆಗೆ ಪತ್ರಿಕೆ ಕೊಟ್ಟು ಬರಬೇಕು. ಈ ಉಸಾ ಬರಿಯೇ ಬೇಡ. ನನ್ನ ನಿರುತ್ತರದಿಂದ ಅವರಿಗೆ ಕೋಪ ಬಂದಿತೆಂದು ಕಾಣು ತ್ತದೆ. ದುರ್ದಾನ ತೆಗೆದು ಕೊಂಡವರಂತೆ ಎದ್ದು ಬಿರಬಿರನೆ ಹೊರ ಹೊರಟರು. ಊರಿಗೆ ಹೋಗಿ, ಉಡುಪಿಯಿಂದ ಅಂಚೆ ಕಾರ್ಡ್ ಬರೆದಿದ್ದರು. ಒಕ್ಕಣೆ ಹೀಗಿತ್ತು.