ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಮ

ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !

ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !

ಧುರಂಧರ್ ಬಂದು ಭೇಟಿಯಾದ: ‘ನಮ್ಮ ಪಕ್ಕದ ದೇಶಕ್ಕೆ ಹೋಗೋಣ ಬನ್ನಿ, ಬರೀ ಮೂರೂ ಮುಕ್ಕಾಲು ಗಂಟೆಯೊಳಗೆ ವಾಪಸ್ಸು ಬರೋಣ’ ಅಂದ. ‘ಓ ಗುಡ್ ಡೀಲ್’ ಅಂತ ರಾತ್ರಿ ಒಂಬತ್ತಕ್ಕೆ ಮನೆ ಬಿಟ್ಟೆ. ನಡುರಾತ್ರಿ ಎರಡೂವರೆಗೆ ವಾಪಸ್ಸು ಕರೆದುಕೊಂಡು ಬಂದು ಭಾರತದಲ್ಲಿ ಬಿಟ್ಟು ಹೋದ. ಆಗಿನಿಂದ ಹೊಟ್ಟೇಲಿ, ಎದೇಲಿ, ಮನಸಲ್ಲಿ ಹೇಳಲಾಗದ ಸಂಕಟ.

G Nagendra Kavoor Column: ಬಯಸದೇ ಬಂದ ಭಾಗ್ಯ !

G Nagendra Kavoor Column: ಬಯಸದೇ ಬಂದ ಭಾಗ್ಯ !

ಮರುದಿನ ಬೆಳಿಗ್ಗೆ ಸ್ಥಳೀಯ ಪತ್ರಿಕೆಗಳ ಪುಟಗಳಲ್ಲಿ ನಮ್ಮ ಪ್ರಯಾಣದ ಕಥೆ, ಚಿತ್ರಸಹಿತ ಪ್ರಕಟಗೊಂಡದ್ದನ್ನು ಕಂಡು ಮನಸ್ಸು ಆನಂದದಿಂದ ತುಂಬಿಬಿಟ್ಟಿತು. ಬಯಸದೇ ಬಂದ ಈ ಭಾಗ್ಯವು ನಮ್ಮ ಸರಳ ಬೈಕ್ ಯಾತ್ರೆಗೆ ಅರ್ಥ, ಗೌರವ ಮತ್ತು ಶಾಶ್ವತ ಸ್ಮೃತಿಯನ್ನು ನೀಡಿತು. ಆ ಕ್ಷಣದ ಸಂತೋಷ ಹೃದಯದೊಳಗೆ ಮೌನವಾಗಿ ಅರಳಿದ ಹೂವಿನಂತಿತ್ತು.

Santhoshkumar Mehendale Column: ಜೀವ ಹೆಚ್ಚೋ ? ಸರಂಜಾಮು ಹೆಚ್ಚೋ ?

ಜೀವ ಹೆಚ್ಚೋ ? ಸರಂಜಾಮು ಹೆಚ್ಚೋ ?

ಅಕಸ್ಮಾತ್ ಕಡ್ಡಿ ಗೀರಿದರೆ ಮೂವತ್ತೇ ಸೆಕೆಂಡ್‌ನಲ್ಲಿ ದಾವಾನಲವಾಗಲು ಏನು ಬೇಕೋ ಅದೆಲ್ಲ ಇಲ್ಲಿ ಬೆರಳಂಚಿಗೆ ಲಭ್ಯ. ಜೀವ ಮಾತ್ರ ದಕ್ಕುವುದಿಲ್ಲ. ಇದು ಸಣ್ಣ ಸರಳ ವಿವರಣೆ; ಮೊನ್ನೆ ಚಿತ್ರದುರ್ಗದ ಸನಿಹ ಮತ್ತು ಕಳೆದ ಹತ್ತು ವರ್ಷದಲ್ಲಿ ಹೀಗೆ ಉರಿದು ಬಲಿಯಾದ ಸುಮಾರು ನೂರಾರು ಹೆಚ್ಚು ಜೀವ ಪಡೆದ ಬಸ್ಸುಗಳ ಮಾಹಿತಿ.

Shashidhara Halady Column: ಇವೆಲ್ಲಾ ಬೇಕಿಲ್ಲವೇ ನಮ್ಮ ಮುಂದಿನ ತಲೆಮಾರಿಗೆ !

ಇವೆಲ್ಲಾ ಬೇಕಿಲ್ಲವೇ ನಮ್ಮ ಮುಂದಿನ ತಲೆಮಾರಿಗೆ !

ನಮ್ಮ ಮನೆಯ ಮೇಲ್ಭಾಗದಲ್ಲಿ ಹಲಸಿನ ಮರವೊಂದಿತ್ತು; ಅದರ ನೆರಳಿನಿಂದಾಗಿ, ಬೇಸಗೆಯಲ್ಲಿ ಸೆಕೆ ಕಡಿಮೆಯಾಗುತ್ತಿತ್ತು. ನಮ್ಮ ಹಳ್ಳಿಯಿಂದ ಕೆಲವು ಕಿ.ಮೀ. ಪೂರ್ವ ದಿಕ್ಕಿಗೆ ಸಾಗಿದರೆ, ಪಶ್ಚಿಮ ಘಟ್ಟ ಸಾಲಿನ ಗರ್ಭದಲ್ಲೇ ಎಂಬಂತೆ ಇರುವ ಕೆಲವು ಹಳ್ಳಿಗಳಲ್ಲಂತೂ, ಮನೆಗಳನ್ನೇ ತಮ್ಮ ಗರ್ಭದಲ್ಲಿ ಅಡಗಿಸಿಕೊಂಡಂತೆ ಮರ, ಗಿಡ, ಬಳ್ಳಿಗಳು ಬೆಳೆದಿರುತ್ತಿದ್ದವು.

Surendra Pai Column: ಇಪ್ಪತ್ತು ರೂಪಾಯಿ ಡಾಕ್ಟರ್‌ !

Surendra Pai Column: ಇಪ್ಪತ್ತು ರೂಪಾಯಿ ಡಾಕ್ಟರ್‌ !

ಅವರೇ ಹೊಸದುರ್ಗ ತಾಲೂಕಿನ ಡಾ.ಇ ಎಸ್. ಬ್ರಹ್ಮರಾಜು. ಇಂದಿನ ದುಬಾರಿ ಜಗತ್ತಿನಲ್ಲೂ ಕೇವಲ ಇಪ್ಪತ್ತು ರೂಪಾಯಿ ಪಡೆದು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಬಡವರಿಗೆ ಆರೋಗ್ಯ ಸೇವೆ ಯನ್ನು ನೀಡುತ್ತಾ ಎಲ್ಲರಿಂದಲ್ಲೂ ‘ಇಪ್ಪತ್ತು ರೂಪಾಯಿ ಡಾಕ್ಟರ್’ ಎಂದು ಜನಮನ್ನಣೆಯನ್ನು ಪಡೆದ ಸರಳ, ಸಜ್ಜನ ಪ್ರತಿಭಾನ್ವಿತ ವೈದ್ಯರು ಇವರು.

Narayan Yaji Column: ಭಯೋತ್ಪಾದನೆಯ ಕರಾಳ ಕೃತ್ಯಕ್ಕೆ ಒಂದು ಸಾಕ್ಷಿ

ಭಯೋತ್ಪಾದನೆಯ ಕರಾಳ ಕೃತ್ಯಕ್ಕೆ ಒಂದು ಸಾಕ್ಷಿ

ಮಾನವೀಯತೆಯ ಯಾವ ಅಂಶವನ್ನೂ ಹುಡುಕಲಾಗದ ಭಯೋತ್ಪಾದಕರು ಅಮಾಯಕ ನಾಗರಿಕರ ಮೇಲೆ ಅಂದು ನಡೆಸಿದ ಹಿಂಸೆಯು ಮನಸ್ಸನ್ನು ಕಲಕುತ್ತದೆ. ಗಾಜಾ ಗಡಿಗೆ ಸಮೀಪ ನಡೆದ ಯುವಕರ ಸಂಗೀತ ಮಹೋತ್ಸವ (ಫೆಸ್ಟಿವಲ್) ನಡೆದ ಜಾಗವನ್ನು ಗುರಿಯಾಗಿಸಿಕೊಂಡು 2023ರ ಅಕ್ಟೋಬರ್ ೭ರ ಬೆಳಗಿನ ಜಾವ, ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿಯನ್ನು ನಡೆಸಿದರು.

ಭೈರಪ್ಪನವರ ಬದುಕಿನ ಒಳನೋಟಗಳು

ಭೈರಪ್ಪನವರ ಬದುಕಿನ ಒಳನೋಟಗಳು

ಭೈರಪ್ಪನವರ ಬರವಣಿಗೆಯಷ್ಟೇ ಬದುಕೂ ಚೊಕ್ಕವಾದದ್ದು. ನಾಡು ಮಾತ್ರವಲ್ಲದೇ ಭಾಷೆ-ಗಡಿ ಗಳನ್ನೂ ಮೀರಿ ವಿಶ್ವಸಾಹಿತ್ಯವೂ ಮೆಚ್ಚಿಕೊಂಡ ಭೈರಪ್ಪನವರ ಖಾಸಗಿ ಬದುಕು ಹಾಗೂ ವ್ಯಕ್ತಿತ್ವದ ಬಗೆಗೆ ಅನೇಕರಿಗೆ ಅಷ್ಟಾಗಿ ತಿಳಿದಿಲ್ಲ. ಇಂತದ್ದೇ ವಿಚಾರಗಳನ್ನು ಓದುಗನಿಗೆ ಮೊಗೆದು ಕೊಡುವ ಕೃತಿ ಲೇಖಕ ದೀಕ್ಷಿತ್ ನಾಯರ್ ಅವರು ಬರೆದಿರುವ ‘ಎತ್ತರೆತ್ತರ ಭೈರಪ್ಪ-ಅಗೆದಷ್ಟೂ ಆಳ ಮೊಗೆದಷ್ಟೂ ಬೆರಗು’.

Shashidhara Halady Column: ಬಾ ಎನ್ನ ಓದುಗನೇ, ಇಲ್ಲಿದೆ ಜ್ಞಾನವಿಧಿ !

Shashidhara Halady Column: ಬಾ ಎನ್ನ ಓದುಗನೇ, ಇಲ್ಲಿದೆ ಜ್ಞಾನವಿಧಿ !

ನಮ್ಮ ವಸತಿ ಸಂಕೀರ್ಣದ ಮುಂಭಾಗದ ವಿಶಾಲವಾದ ರಸ್ತೆಯಲ್ಲಿ ಬಸ್ಸುಗಳು ಬರುತ್ತವಾದರೂ, ಕೆಲವೇ ಕೆಲವು; ಅಂದರೆ ದಿನಕ್ಕೆ ನಾಲ್ಕಾರು ಮಾತ್ರ. ಆದ್ದರಿಂದ, ನಮ್ಮ ಮಗಳು ಕಚೇರಿಯಿಂದ ವಾಪಸು ಬರುವುದನ್ನೇ ಕಾದು ಕುಳಿತಿದ್ದು, ಸಂಜೆಯ ಹೊತ್ತಿನಲ್ಲಿ ವಾರಕ್ಕೆ ಒಂದೆರಡು ಬಾರಿಯಾದರೂ ವಾಚನಾಲಯಕ್ಕೆ ಭೇಟಿ ನೀಡುವುದು, ಅಲ್ಲಿನ ಸೋಜಿಗಳನ್ನು ಗಮನಿಸುವುದು ನಮ್ಮ ಹವ್ಯಾಸ ಎನಿಸಿತು.

Shashidhara Halady Column: ಮರಗಳೇ ಎನ್ನ ಮಕ್ಕಳು !

Shashidhara Halady Column: ಮರಗಳೇ ಎನ್ನ ಮಕ್ಕಳು !

ಮಕ್ಕಳಿಲ್ಲದ ಆ ದಂಪತಿಗೆ, ಆ ರಸ್ತೆಯುದ್ದಕ್ಕೂ ಬೆಳೆದು ನಿಂತ ಮರಗಳೇ ಮಕ್ಕಳು ಎನಿಸಿ ದವು. ಅವುಗಳು ಬೆಳೆಯುವುದನ್ನು ನೋಡುತ್ತಾ, ಅವುಗಳ ಪಾಲನೆ ಪೋಷಣೆ ಮಾಡುತ್ತಾ, ಬದುಕಿ ನಲ್ಲಿ ಪ್ರೀತಿಯನ್ನು ಕಂಡುಕೊಂಡರು ಆ ದಂಪತಿ. ಈ ನಡುವೆ, 1991ರಲ್ಲಿ ತಿಮ್ಮಕ್ಕ ನವರ ಪತಿ ಬಿಕ್ಕಲು ಚಿಕ್ಕಯ್ಯ ತೀರಿ ಹೋದಾಗ, ತಿಮ್ಮಕ್ಕ ಏಕಾಂಗಿಯಾದರು.

Narayana Yaaji Column: ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು

Narayana Yaaji Column: ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಸ್ ಬಾಬು ಎನ್ನುವ ಸುದ್ಧಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಈ ಇಬ್ಬರ ನಡುವೆ ಸಂಬಂಧಗಳು ಹೇಗಿತ್ತು ಎನ್ನುವುದಕ್ಕೆ ಈ ಎರಡೂ ಕೃತಿಗಳು ಸಹಾಯಕಾರಿ. ಇದು ಕೇವಲ ಅನುವಾದ ಮಾತ್ರವಲ್ಲ

Surendra Pai Column: ಸಾವಿರದ ಸಾಲುಮರಗಳು !

Surendra Pai Column: ಸಾವಿರದ ಸಾಲುಮರಗಳು !

ಬಹುಶಃ ಅಂದು ಆಕೆಗೆ ತಾನು ಮಾಡ ಹೊರಟಿದ್ದ ಕೆಲಸ ಮುಂದೊಂದು ದಿನ ಮನು ಕುಲಕ್ಕೆ ಆದರ್ಶಪ್ರಾಯವಾಗಲಿದೆ ಎಂಬ ಅರಿವು ಇರಲಿಕ್ಕಿಲ್ಲ. ಮರಗಳೇ ತನ್ನ ಮಕ್ಕಳೆಂದು ಭಾವಿಸಿ ತನ್ನೂರಿನ ಹಳ್ಳಿಯ ರಸ್ತೆ ಅಂಚಿನಲ್ಲೊಂದು ಸಸಿ ನೆಡಲು ಪ್ರಾರಂಭಿಸಿದವಳು ಪರಿಸರಪ್ರೇಮಿ ತಿಮ್ಮಕ್ಕ.

ಕೆಲಸದವರ ಕಷ್ಟ ಅಷ್ಟಿಷ್ಟಲ್ಲ

ಕೆಲಸದವರ ಕಷ್ಟ ಅಷ್ಟಿಷ್ಟಲ್ಲ

ತಮಾಶೆಗಳು, ಒಬ್ಬರನ್ನೊಬ್ಬರು ಕಾಲೆಳೆಯುವುದು, ಏನಾದ್ರೂ ವರ್ಚುವಲ್ ಗೇಮ್ ಆಡುವುದು ಎಲ್ಲ ಬಹಳ ರೋಚಕವಾಗಿಯೇ ನಡೆಯಿತು. ಮೊದಲ ಮೀಟಿಂಗ್‌ನಲ್ಲಿಯೇ, “ಇಡೀ ದಿನ ಮನೇಲೆ ಇರ್ತೀವಲ್ಲ, ಯಾವುದು ನ್ಯೂ ನಾರ್ಮಲ್ಸಿ ಆಗಿದೆ ನಿಮಗೆ" ಎಂದೇನೋ ಕೇಳಿದ್ದು ಯಾರದು... ಬೀನಾ... ಹೌದು ಅವಳೇ.

ಬಹೂಪಯೋಗಿ ಜಾರಿಗೆ ಹಣ್ಣು

ಬಹೂಪಯೋಗಿ ಜಾರಿಗೆ ಹಣ್ಣು

ಹಸಿರು ಮಿಶ್ರಿತ ಬಿಳಿ ಹೂ ಬಿಡುವ ಈ ವೃಕ್ಷದ ಹಸಿರು ಕಾಯಿಗಳು ಬಲಿತು ಕಿತ್ತಳೆ-ಹಳದಿ ಬಣ್ಣಕ್ಕೆ ತಿರುಗಿ ಹಣ್ಣಾಗಿ ಮಾಗಿದಾಗ ತಿನ್ನಲು ಯೋಗ್ಯ. ಹಣ್ಣುಗಳ ಗಾತ್ರವೂ ಕಿತ್ತಳೆಯಷ್ಟೇ ಇರುತ್ತದೆ. ಹಣ್ಣಿನೊಳಗೆ ನಾಲ್ಕೈದು ಬೀಜ ಸಹಿತ ಸೊಳೆಗಳಿದ್ದು ಮಾಂಸಲವಾಗಿರುತ್ತದೆ; ಮಾಂಸಲ ಭಾಗವನ್ನು ತಿನ್ನಬಹುದು.

B K Meenakshi Column: ಪಾಯಸ ಸಿಹಿ ಕಣ್ಣೀರು

B K Meenakshi Column: ಪಾಯಸ ಸಿಹಿ ಕಣ್ಣೀರು

ಮನೆಯನ್ನು ಸ್ವಚ್ಛಗೊಳಿಸಿ, ತಳಿರುತೋರಣ, ನೀರು ನಿಡಿ, ಹೂವು ಹಣ್ಣು ಪೂಜೆ ಅಂತ ಪ್ರಾಥಮಿಕ ಹಂತಗಳನ್ನೇ ಮನೆ ತುಂಬ ಓಡಾಡಿಕೊಂಡು ಮಾಡಲು ಶುರುವಿಟ್ಟರೆ ಸಾಕು, ಸಂತೋಷ, ಸಂಭ್ರಮ, ಉತ್ಸಾಹ ತಂತಾನೇ ಮುಗಿಬಿದ್ದು ಎಲ್ಲರ ಮುಖಗಳೂ ಅರಳಿ ನಿಲ್ಲುತ್ತವೆ. ಅಭ್ಯಂಜನವಾಗಬೇಕಾದರಂತೂ ಮಕ್ಕಳ ಹಠ, ಎಣ್ಣೆ ಹಾಕಬೇಡಿ ಎಂಬ ರಚ್ಚೆ, ಅಯ್ಯೋ ಬಿಸಿ ನೀರು.....ಇಷ್ಟು ಬಿಸೀನಾ ಎಂದು ಕುಣಿದಾಡುವ ಮಕ್ಕಳು!

Ravi Sajangadde Column: ನನ್ನ ದನಿಗೆ ನಿನ್ನ ದನಿಯು...

Ravi Sajangadde Column: ನನ್ನ ದನಿಗೆ ನಿನ್ನ ದನಿಯು...

‘ಕೇಳುಗರು, ನೋಡುಗರು ಮತ್ತು ಗ್ರಾಹಕರ ಮನಸು ಮತ್ತು ಹೃದಯವನ್ನು ತಲುಪುವ ಜಾಹೀರಾತುಗಳು ಮಾತ್ರ ಜನರ ನಡುವೆ ಮೋಡಿ ಮಾಡಬಲ್ಲವು, ಸಂಚಲನ ಸೃಷ್ಟಿಸಬಲ್ಲವು. ಜಾಹೀರಾತು ನೀಡುವ ಸಂಸ್ಥೆಯ ದೃಷ್ಟಿಕೋನದ ಬದಲಾಗಿ, ಜನರ ದೃಷ್ಟಿಕೋನಕ್ಕೆ ಒಪ್ಪುವ ಮತ್ತು ಹೃದಯಕ್ಕೆ ಮುಟ್ಟುವ ಕಂಟೆಂಟ್ ಯಾವತ್ತಿಗೂ ಸೋತ ಉದಾಹರಣೆ ಇಲ್ಲ.’

ಎಲ್ಲಿ ಮರೆಯಾಯಿತು ಅಂದಿನ ಸಂಭ್ರಮ ?

ಎಲ್ಲಿ ಮರೆಯಾಯಿತು ಅಂದಿನ ಸಂಭ್ರಮ ?

ಹೃದಯದಲ್ಲಿ ಬೆಳಕಿನ ಸೆಲೆಯನ್ನು ಕಾಪಿಟ್ಟುಕೊಂಡು, ಸುತ್ತಲಿನ ಸಮಾಜಕ್ಕೆ ಒಳಿತು ಮಾಡುವ ಕೈಂಕರ್ಯವನ್ನು ಕೈಗೊಳ್ಳಲು ಈ ಹಬ್ಬವೇ ಸ್ಪೂರ್ತಿ. ಕೆಲ ದಶಕಗಳ ಹಿಂದೆ ಹಬ್ಬಗಳನ್ನು ಜನರು ಸಂತೋಷದಿಂದ ಇದಿರು ನೋಡುತ್ತಿದ್ದರು. ಮುಕ್ತ ಮನಸ್ಸಿನಿಂದ, ಖುಷಿಯಿಂದ ಆಚರಿಸುತ್ತಿದ್ದರು.

Shashidhara Halady Column: ಹಾವನ್ನು ಕಂಡು ಬೆದರಿದ ಹಕ್ಕಿ !

ಹಾವನ್ನು ಕಂಡು ಬೆದರಿದ ಹಕ್ಕಿ !

ನಮ್ಮ ನಾಡಿನಲ್ಲಿ ನಾಲ್ಕಾರು ಪ್ರಭೇದದ ಸೂರಕ್ಕಿಗಳು ಇವೆ. ಇವುಗಳ ಪೈಕಿ ನೇರಳೆ ಬಣ್ಣದ ಸೂರಕ್ಕಿ, ನೇರಳೆ ಪ್ರಷ್ಠದ ಸೂರಕ್ಕಿ, ಲೋಟೆನ್ಸ್ ಸೂರಕ್ಕಿಗಳು ನಮ್ಮ ಹಾಲಾಡಿಯಲ್ಲಿ ಸಾಮಾನ್ಯ. ನಮ್ಮ ಹಳ್ಳಿಯ ಮನೆಯಲ್ಲಿ ಸೂರಕ್ಕಿಯೊಂದು ಗೂಡುಕಟ್ಟಿ, ಮರಿ ಮಾಡುವುದನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ದೊರಕಿತ್ತು

Narayana Yaji Column: ಸುಭಾಷ್‌ ಬೋಸರ ಆತ್ಮಕಥೆ

Narayana Yaji Column: ಸುಭಾಷ್‌ ಬೋಸರ ಆತ್ಮಕಥೆ

ತನ್ನ ರಾಜಕೀಯದ ಬದುಕಿನಲ್ಲಿ ಎಡಪಂಥೀಯ ಧೋರಣೆಗಳನ್ನು ನೇತಾಜಿ ಹೊಂದಿದ್ದರು. ಜತೆ ಯಲ್ಲೇ, ರಾಮಕೃಷ್ಣ ಪರಮಹಂಸರಿಂದ, ವಿವೇಕಾನಂದರಿಂದ ಪ್ರಭಾವಿತರಾಗಿದ್ದರು. ಬದುಕಿರು ವಾಗಲೇ ದಂತಕಥೆಯಾಗಿದ್ದ ನೇತಾಜಿ ಈಗಲೂ ಸಹ ಅಷ್ಟೇ ಗೂಢವಾಗಿದ್ದಾರೆ. ಅವರ ಬದುಕಿನ ಅನೇಕ ಮಹತ್ವದ ಘಟ್ಟಗಳು ಇನ್ನೂ ಅಪರಿಚಿತವಾಗಿಯೇ ಇವೆ.

Shashidhara Halady Column: ಮಳೆಹಾತೆಗಳ ಮಾಯಾಲೋಕ !

ಮಳೆಹಾತೆಗಳ ಮಾಯಾಲೋಕ !

ಕೈಗೆಟಕುವಷ್ಟು ಎತ್ತರದ ಗಿಡಗಳ ರೆಂಬೆಗಳ ಮೇಲೆ, ಹುಲ್ಲುಗಿಡಗಳ ಕಡ್ಡಿಯಂತಹ ತುದಿಯಲ್ಲಿ ಕುಳಿತಿರುವುದು ಅವುಗಳ ವಿಶ್ರಾಮದ ಭಂಗಿ. ನೆಲದ ಮೇಲೆ ಬೆಳೆದ ಹುಲ್ಲುಕಡ್ಡಿಯೊಂದರ ತುದಿಯಲ್ಲಿ ಮೌನವಾಗಿ ಕುಳಿತಿರುವ ಮಳೆಹಾತೆಯ ‘ಧ್ಯಾನಸ್ಥ ಸ್ಥಿತಿ’ಯನ್ನು ಕಂಡರೆ, ಕುತೂಹಲಗೊಳ್ಳದ ಮಕ್ಕಳೇ ಇಲ್ಲವೆನ್ನಬಹುದು!

Narayana Yaaji Column: ಅಗೋಚರ ಪತಂಗದ ಅನ್ವೇಷಣೆಯ ಚಾರಣ

ಅಗೋಚರ ಪತಂಗದ ಅನ್ವೇಷಣೆಯ ಚಾರಣ

“ಕರ್ವಾಲೋ" ಮತ್ತು ತೇಜಸ್ವಿಯವರಿಂದ ಪ್ರಭಾವ ಇಲ್ಲಿದೆ ಎಂದರೂ, ಅದರ ಜೊತೆ ಚಾರ್ಮಾಡಿ ಯ ಚಾರಣಗಳ ಅನುಭವ ಹದವಾಗಿ ಸೇರಿಕೊಂಡು “ಕರ್ವಾಲೋ" ದ ಹಾರುವ ಓತಿಯಂತೆ, ಇಲ್ಲಿ ಮಡಗಾಸ್ಕರ ಕಾಮೆಟ್ ಎನ್ನುವ ಹಳದೀ ಬಣ್ಣದ ಪತಂಗವನ್ನು ಹುಡುಕಿಕೊಂಡು ಹೋಗುವ ಘಟನೆಗಳ ಸುತ್ತ ನಡೆಯುತ್ತದೆ.

Narayana Yaji Column: ಸರಳತೆ ನ್ಯಾಯ...ಅಭಿವೃದ್ದಿ !

ಹೊಸ ಜಿಎಸ್‌ ಟಿ ಈ ವಾರದಿಂದ ಜಾರಿ !

ಹೊಸ ಪದ್ಧತಿ ಇದೇ ಸೆಪ್ಟಂಬರ್ ತಿಂಗಳ 22ರಿಂದ ಜಾರಿಗೆ ಬರಲಿದೆ. ಅದರ ಪ್ರಕಾರ ಇನ್ನು ಮುಂದೆ ಮುಖ್ಯವಾಗಿ ಕೇವಲ ಎರಡೇ ಸ್ತರದ ಶೇ 5, ಮತ್ತು 18 ರ ವ್ಯಾಪ್ತಿಯಲ್ಲಿ ಹೆಚ್ಚಿನ ವ್ಯಾಪಾರಗಳು ಬರಲಿವೆ. ಇನ್ನೊಂದು ಶೇ 40 ರ ವ್ಯಾಪ್ತಿಯಲ್ಲಿ ಪಾಪಪೂರಿತ (ಸಿನ್ ಅಂಡ್ ಲಕ್ಷುರಿ ಗೂಡ್ಸ್) ಮತ್ತು ಐಶಾರಾಮಿ ವಸ್ತುಗಳು ಬರಲಿವೆ. ರಾಜ್ಯಗಳಿಗೆ ಇದು ತನಕ ಇದ್ದ ಪರಿಹಾರದ ಸುಂಕ ಇನ್ನು ಮುಂದೆ ಇರುವುದಿಲ್ಲ. ವಿಶೇಷವಾಗಿ ಯಾವುದೇ ವಿಮಾ ಪಾಲಿಸಿಗೆ ಇನ್ನು ಮುಂದೆ ಕರಗಳಿರುವುದಿಲ್ಲ. ಈ ತನಕ ಅವುಗಳು ಶೇ.18 ವ್ಯಾಪ್ತಿಯಲ್ಲಿದ್ದವು

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

ಕನ್ನಡದ ಪ್ರೇಮಕವಿ, ಸಾಹಿತ್ಯ ಜಗತ್ತಿನ ಜಾಲಿ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣ ರಾವ್ ಅವರು ಕನ್ನಡ ಕಾವ್ಯ ಪ್ರಪಂಚದ ಭಾವಗೀತೆಗಳ ಸರದಾರ. ಗಾಢ ಪ್ರೇಮ, ವಿರಹ, ವಿಷಾದ, ಜೀವನತತ್ವ ಹೀಗೆ ಹಲವು ವಿಷಯ ವಸ್ತುಗಳ ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿ ಸಾಹಿತ್ಯ ಜಗತ್ತಿಗೆ ಉತ್ತಮ ಕೃತಿಗಳನ್ನು ಕೈಗಿತ್ತ ಖ್ಯಾತಿ ಅವರದ್ದಾಗಿದೆ. ಚಿರಯವ್ವನಿಗ ಬಿಆರ್‌ಎಲ್ ಇದೇ ಮಂಗಳವಾರ (ಸೆ.9) 80ಕ್ಕೆ ಕಾಲಿಡುತ್ತಿದ್ದಾರೆ

Narayana Yaji Column: ಗೆದ್ದವರ ಕಥೆಗಳು

Narayana Yaji Column: ಗೆದ್ದವರ ಕಥೆಗಳು

ಅಡಕಳ್ಳಿಯವರಿಗೆ ಬರಹ ಎಂದರೆ ಹೊಳ್ಳಿ ಮೇಲೆ ಕುಳಿತು ಕವಳದ ಚಂಚಿ ತೆಗೆದಷ್ಟೆ ಸಲೀಸು. ಯಾವ ವಿಷಯದ ಮೇಲಾದರೂ ಯಾರ ಕುರಿತಾದರೂ ಬರೆಯಬಲ್ಲರು; ಅವರದೇ ಧಾಟಿಯಲ್ಲಿ ಬರೆಯ ಬೇಕೆಂದೆರೆ “ಎಮ್ಮೆಗೆ ಅಕ್ಕೊಚ್ಚು ಹೊಯ್ದಂಗಲ್ಲ, ಒಳ್ಳೇ ಕೇಸರಿ ಹಾಕಿ ಮಾಡಿದ ಗಸ ಗಸೆ ಪಾಯಸದಂತೆ ಇರುತ್ತದೆ".

Harish Kera Column: ಪಾತಾಳಮಲೆಯಲ್ಲಿ ಪತಂಗ !

Harish Kera Column: ಪಾತಾಳಮಲೆಯಲ್ಲಿ ಪತಂಗ !

ಒಂದು ಯಃಕಶ್ಚಿತ್ ಪತಂಗಕ್ಕಾಗಿ ನಾವಿಷ್ಟು ಜನರನ್ನು ಕರೆದು ಕೂರಿಸಿಕೊಂಡಿದ್ದಾರಲ್ಲ ಎಂದು ಆಶ್ಚರ್ಯ, ಕುತೂಹಲ, ಸ್ವಲ್ಪ ಅಸಮಾಧಾನ ಒಟ್ಟಿಗೇ ಮೂಡಿದವು. ಏನೋ ಮಹತ್ವದ ಸಂಶೋ ಧನೆ ಎಂದು ಬಂದರೆ ಈಗ ಬರೀ ಪತಂಗ ಪಾತರಗಿತ್ತಿ ಅಂತಾ ಇದಾರಲ್ಲ. ಇವರಿಗೇನು ಮಂಡೆ ಸಮ ಇದೆಯಾ, ಒಂದು ಚಿಟ್ಟೆ ಹಿಡಿಯಲು ನಾವಿಷ್ಟು ಜನ ಬೇಕಾ ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿ ಮುಳುಗಿದವು.

Loading...