ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಮ

ಕೊಳ್ಳಂಗಿಯ ಜಂಪ ಮಹೋತ್ಸವ

ಕೊಳ್ಳಂಗಿಯ ಜಂಪ ಮಹೋತ್ಸವ

ಧರ್ಮದೇವತೆಯ ಸಾಕ್ಷಿಯಾಗಿ ನಡೆಯುತ್ತಿದ್ದ ಈ ತೀರ್ಪುಗಳಿಗೆ ಎಲ್ಲರೂ ತಲೆಬಾಗು ತ್ತಿದ್ದರು. ಈ ಸಹಬಾಳ್ವೆ ಮತ್ತು ಬುದ್ಧಿವಂತಿಕೆಯ ಫಲವಾಗಿಯೇ ಕೊಳ್ಳಂಗಿಗೆ ಕಟ್ಟೆಮನೆ ಎಂಬ ಗೌರವ ಯುತ ಹೆಸರು ಬಂದಿದೆ. ಇದು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೆ, ಇಡೀ ಪ್ರಾಂತ್ಯದ ಜನರಿಗೆ ಭರವಸೆಯ ತಾಣವಾಗಿತ್ತು.

ಬೇಸಿಗೆಯಲ್ಲಿ ರುಚಿಕರ ನಿರ್ನೇರಳೆ !

ಬೇಸಿಗೆಯಲ್ಲಿ ರುಚಿಕರ ನಿರ್ನೇರಳೆ !

ವಿಟಾಮಿನ್ ಸಿ, ಪೋಟ್ಯಾಶಿಯಮ್ ಹೊಂದಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇಂತಹ ಅಪೂರ್ವ ಗುಣಗಳನ್ನು ಹೊಂದಿರುವ ನೀರ್‌ನೇರಳೆ ಹಣ್ಣನ್ನು ಕೃಷಿ ಮಾಡಲು ಸಹ ಸಾಧ್ಯವಿದೆ. ಇದರಲ್ಲಿ ಕೆಂಪು, ಬಿಳಿ, ಹಸಿರು ವರ್ಣ ಬಣ್ಣದ ಹಣ್ಣು ನೀಡುವ ತಳಿಗಳಿವೆ. ಗಿಡನೆಟ್ಟ ಎರಡರಿಂದ ನಾಲ್ಕುವರ್ಷಗಳಲ್ಲಿ ಫಲ ನೀಡಲು ಪ್ರಾರಂಭವಾಗುವದು.

ಬಾಯಾರಿದಾಗ ಯಾವ ನೀರು ಉತ್ತಮ ?

ಬಾಯಾರಿದಾಗ ಯಾವ ನೀರು ಉತ್ತಮ ?

ಕುಡಿಯುವ ನೀರನ್ನು ಸಂಪೂರ್ಣ ಶುದ್ಧ ಮಾಡುವ ಆಧುನಿಕ ‘ಆರ್‌ಓ’ (ರಿವರ್ಸ್ ಆಸ್ಮೋಸಿಸ್) ಯಂತ್ರಗಳಿಗೆ ಹಲವರು ಮೊರೆ ಹೋಗಿದ್ದೇವೆ. ಬಟನ್ ಒತ್ತಿದ ತಕ್ಷಣ ನೀರು ಸಿಗುತ್ತದೆ ನಿಜ. ಆದರೆ ಅತಿ ಶುದ್ಧವಾದ ನೀರು ಯಾವಾಗಲೂ ಆರೋಗ್ಯಕರವೇ? ಶುದ್ಧತೆಯ ಭರದಲ್ಲಿ ನೀರಿನಲ್ಲಿರುವ ನೈಸರ್ಗಿಕ ಜೀವಸತ್ವಗಳನ್ನೇ ನಾವು ಕೊಲ್ಲುತ್ತಿದ್ದೇವಾ? ಬನ್ನಿ, ಸಾಮಾನ್ಯ ತಪ್ಪು ಕಲ್ಪನೆಗಳನ್ನು ಬದಿಗಿಟ್ಟು ವೈದ್ಯಕೀಯ ಸತ್ಯಗಳನ್ನು ಅರಿಯೋಣ.

Nagaraj Vaidya Colunmn: ತನ್ನನ್ನು ತಾನೇ ನುಂಗಲಿದೆಯೇ ʼಎಐʼ ?

Nagaraj Vaidya Colunmn: ತನ್ನನ್ನು ತಾನೇ ನುಂಗಲಿದೆಯೇ ʼಎಐʼ ?

2022ರವರೆಗೆ ಇಂಟರ್ನೆಟ್ ಎನ್ನುವುದು ಮಾನವ ಸೃಷ್ಟಿತ ಮಾಹಿತಿಯ ಕೆರೆಯಾಗಿತ್ತು. ಆದರೆ ಎಐ ಕ್ರಾಂತಿ ಶುರುವಾದ ಮೇಲೆ ಕಥೆ ಬದಲಾಯಿತು. ಈಗ ಇಂಟರ್ನೆಟ್‌ನಲ್ಲಿರುವ ಶೇ.70ರಷ್ಟು ಕಂಟೆಂಟ್ ಅನ್ನು ಎಐ ಮೂಲಕವೇ ಸೃಷ್ಟಿಸಲಾಗುತ್ತಿದೆ. ಅಂದರೆ, ಹೊಸ ಎಐ ಮಾಡೆಲ್‌ಗಳಿಗೆ ತರಬೇತಿ ನೀಡಲು ಈಗ ‘ಮನುಷ್ಯ ಸಹಜ’ ಡೇಟಾ ಸಿಗುತ್ತಿಲ್ಲ. ಅದರ ಬದಲಿಗೆ ಎಐ ಸೃಷ್ಟಿಸಿದ ಹಳೆಯ ಡೇಟಾವನ್ನೇ ಬಳಸಲಾಗುತ್ತಿದೆ.

Harish Kera Column: ಜಗದ ಜೀವಿಗಳ ಸಖ ಅಟೆನ್‌ ಬರೋ

Harish Kera Column: ಜಗದ ಜೀವಿಗಳ ಸಖ ಅಟೆನ್‌ ಬರೋ

1926 ಮೇ 8 ರಂದು ಇಂಗ್ಲೆಂಡ್‌ನಲ್ಲಿ ಜನಿಸಿದ ಡೇವಿಡ್ ಆಂಗ್ಲರ ಕ್ಲಾಸಿಕ್ ಸಭ್ಯತೆಯನ್ನು ಮನುಷ್ಯರಲ್ಲೂ ಪ್ರಾಣಿಗಳ ಜೊತೆಗೂ ರೂಢಿಸಿಕೊಂಡವರು. ಕಲಿತದ್ದೆಲ್ಲ ಕೇಂಬ್ರಿಜ್‌ನಲ್ಲಿ. ನೈಸರ್ಗಿಕ ವಿಜ್ಞಾನದ ಅಧ್ಯಯನ. 1947ರಿಂದ 1949ರವರೆಗೆ ರಾಯಲ್ ನೇವಿಯಲ್ಲಿ ಸೇವೆ. ಆದರೆ ಮನಸ್ಸೆಲ್ಲ ಹಸಿರು ಕಾಡು ವನ್ಯಜೀವಿಗಳತ್ತ. ನಂತರ ಬಿಬಿಸಿಗೆ ಸೇರಿ ಏಳು ದಶಕ ಪ್ರಸಾರ ವೃತ್ತಿಜೀವನ.

K Srinivas Rao Column: ಟರ್ನಿಂಗ್‌ ಪಾಯಿಂಟ್‌ ಆದ ಪೋಸ್ಟ್‌ ಕಾರ್ಡ್‌ !

K Srinivas Rao Column: ಟರ್ನಿಂಗ್‌ ಪಾಯಿಂಟ್‌ ಆದ ಪೋಸ್ಟ್‌ ಕಾರ್ಡ್‌ !

ನನ್ನದು ಯಥಾಪ್ರಕಾರ ಮೌನೇನ ಕಲಹಂ ನಾಸ್ತಿ! ಪೇಪರ್ ಏಜೆನ್ಸಿ ಕಷ್ಟ; ನಿತ್ಯ ಬೆಳಿಗ್ಗೆ 4ಕ್ಕೇ ಏಳಬೇಕು. ಮನೆಗಳಿಗೆ ಹಂಚಲು ಹುಡುಗರು ಅವಶ್ಯ. ಅವರಿಗೆ ಕಾಫಿ ತಿಂಡಿ, ಜೊತೆಗೆ ಸೈಕಲ್ ಒದಗಿಸುವುದು ಸಾಧ್ಯವೇ? ಅಷ್ಟಕ್ಕೂ ಅವರು ಕೈಕೊಟ್ಟರೆ ನಾನೇ ಮನೆ ಮನೆಗೆ ಪತ್ರಿಕೆ ಕೊಟ್ಟು ಬರಬೇಕು. ಈ ಉಸಾ ಬರಿಯೇ ಬೇಡ. ನನ್ನ ನಿರುತ್ತರದಿಂದ ಅವರಿಗೆ ಕೋಪ ಬಂದಿತೆಂದು ಕಾಣು ತ್ತದೆ. ದುರ್ದಾನ ತೆಗೆದು ಕೊಂಡವರಂತೆ ಎದ್ದು ಬಿರಬಿರನೆ ಹೊರ ಹೊರಟರು. ಊರಿಗೆ ಹೋಗಿ, ಉಡುಪಿಯಿಂದ ಅಂಚೆ ಕಾರ್ಡ್ ಬರೆದಿದ್ದರು. ಒಕ್ಕಣೆ ಹೀಗಿತ್ತು.

Shashidhara Halady Column: ಚಿತ್ರದಲ್ಲೇ ಕಥೆ ಕೇಳಿದ ರಘುರಾಯ್

Shashidhara Halady Column: ಚಿತ್ರದಲ್ಲೇ ಕಥೆ ಕೇಳಿದ ರಘುರಾಯ್

ಇಂದಿರಾ ಗಾಂಧಿಯವರು, ಅಧಿಕಾರದಲ್ಲಿದ್ದಾಗ, ಅವರ ಪಕ್ಷದ ಇತರ ರಾಜಕಾರಣಿಗಳನ್ನು, ಮಂತ್ರಿ ಗಳನ್ನು ಯಾವ ಸ್ಥಾನದಲ್ಲಿಟ್ಟಿದ್ದರು, ಎಷ್ಟರಮಟ್ಟಿಗೆ ನಿಯಂತ್ರಿಸುತ್ತಿದ್ದರು ಎಂಬುದನ್ನು, ಈ ಒಂದು ಚಿತ್ರವು ಅದೆಷ್ಟು ಮಾರ್ಮಿಕವಾಗಿ ಸೆರೆ ಹಿಡಿದಿದೆ ಎಂದರೆ, ಈ ಚಿತ್ರವನ್ನು ನೋಡಿದಾಗ ಮನಸ್ಸಿನಲ್ಲಿ ಮುಡುವ ಚಿತ್ರಣವು, ಸಾವಿರಾರು ಪದಗಳಲ್ಲಿ ವರ್ಣಿಸಿದರೂ, ದಕ್ಕಲಾರದು!

Vinayaka M Bhat Column: ಕರುಣಾಶರಧಿ ಶ್ರೀ ರಾಮಾನಂದ ಅವಧೂತರು

ಕರುಣಾಶರಧಿ ಶ್ರೀ ರಾಮಾನಂದ ಅವಧೂತರು

ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಮ್ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರ ವೇನಮಃ ಶ್ರೀ ರಾಮಾನಂದ ಅವಧೂತರ (ನಮ್ಮ ಗುರುಗಳ) ಗುಣರಾಶಿಗಳಲ್ಲಿ ಕೆಲವನ್ನಾದರೂ ನಾವು ಇಲ್ಲಿ ಅನುಭವಿಸುವ ಪ್ರಯತ್ನ ಮಾಡೋಣ. ನಮ್ಮ ಗುರುಗಳ ಗುಣಗಳ ಕುರಿತು ಹೊಸದಾಗಿ ನಾನು ಹೇಳುವುದೇನೂ ಇಲ್ಲ, ನಮ್ಮ ಗುರುಗಳನ್ನು ಸಂದರ್ಶಿಸಿದ ಯಾರಿಗಾ ದರೂ ನನ್ನ ಗುರು ಗುಣ ವರ್ಣನೆ ಎನ್ನುವುದು ಅನುಭವಕ್ಕೆ ಬಂದಿರುವುದೇ ಆಗಿರುತ್ತದೆ.

Sandesh H Naik Column: ಸಾಧು ಅಕ್ಕ- ಇವರಿಗೆ ಗೊತ್ತಿರಲಿಲ್ಲ ಕಾರ್ಮಿಕ ದಿನದ ಮಹತ್ವ !

ಸಾಧು ಅಕ್ಕ- ಇವರಿಗೆ ಗೊತ್ತಿರಲಿಲ್ಲ ಕಾರ್ಮಿಕ ದಿನದ ಮಹತ್ವ !

ವಿಧಿಯ ಲೆಕ್ಕಾಚಾರವೇ ಬೇರೆ ಇತ್ತೆನಿಸುತ್ತದೆ. ಬದುಕಿನ ಕೊನೆಯ ದಿನಗಳಲ್ಲಿ ಸಾಧಕ್ಕ ಹಾಸಿಗೆ ಹಿಡಿಯುವಂತೆ ಮಾಡಿ, ತನ್ನ ಆಶಯದಲ್ಲಿ ಆಕೆ ಸೋಲೊಪ್ಪಿಕೊಳ್ಳುವಂತೆ ಮಾಡಿತ್ತು. ಮೊನ್ನೆ ಮೊನ್ನೆ ಹೋಗಿ ನೋಡಿದ್ದಾಗ ಸಾಧಕ್ಕನ ಎಂದಿನ ನಗು ಮಾಸಿತ್ತು, ದೇಹ ಬಳಲಿತ್ತು, ಕೈಗಳು ಸೋತಿದ್ದವು, ನೋಟದಲ್ಲಿ ಅಸಹಾಯಕತೆ ಮಡುಗಟ್ಟಿತ್ತು.

Shashidhara Halady Column: ಬೇಸಿಗೆ ಎದುರಿಸಲು ಹೊಸದೊಂದು ಪಾನೀಯ !

ಬೇಸಿಗೆ ಎದುರಿಸಲು ಹೊಸದೊಂದು ಪಾನೀಯ !

ನಮ್ಮ ರಾಜ್ಯದ ಕರಾವಳಿಯ ಜಿಲ್ಲೆಗಳಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ ಓಡಾಡಿದರೆ, ‘ಗೇರು ಹಣ್ಣು’ಗಳು (ಅಲ್ಲಿ ಗೋಡಂಬಿ ಹಣ್ಣನ್ನು ಹೀಗೆಂದೇ ಕರೆಯುವುದು) ರಾಶಿ ರಾಶಿಯಾಗಿ ಮರ ಗಳಲ್ಲಿ ಬಿಟ್ಟಿರುವುದನ್ನು ಕಾಣಬಹುದು. ಕೆಂಪು, ಹಳದಿ ಬಣ್ಣದ ವಿವಿಧ ಗಾತ್ರದ ಗೇರು ಹಣ್ಣು ಗಳನ್ನು ಕಂಡಾಕ್ಷಣ, ತಿನ್ನುವ ಆಸೆ ಹುಟ್ಟುವುದು ಸಹಜ. ಆದರೆ, ಅದರಲ್ಲಿರುವ ಟ್ಯಾನಿನ್ ಅಂಶದಿಂದಾಗಿ, ಹಣ್ಣನ್ನು ತಿಂದ ನಂತರ ಸಣ್ಣಗೆ ಗಂಟಲು ಕೆರೆಯುವುದರಿಂದ, ಜಾಸ್ತಿ ತಿನ್ನಲು ಆಗುವುದಿಲ್ಲ.

K Janardhan Thunga Column: ಆರೂಡುವ ಸೌರಯುಗಾದಿ

K Janardhan Thunga Column: ಆರೂಡುವ ಸೌರಯುಗಾದಿ

ನಮ್ಮ ಹಳ್ಳಿಯಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆ ತುಂಬಾ ಕಡಿಮೆ, ಸೌರಮಾನ ಯುಗಾದಿ ಯ ಆಚರಣೆ ಇದೆ. ಈ ಆಚರಣೆಯು ಕೃಷಿ ಚಟುವಟಿಕೆಗೆ ಪೂರಕವಾಗಿರುವುದು ವಿಶೇಷ!ಯುಗಾದಿ ಯ ಮುನ್ನಾದಿನ ಒಂದು ಹೆಡಿಗೆಯ ತುಂಬಾ ಭತ್ತದ ಹುಲ್ಲಿನ ಚೆಂಡೆ ತಯಾರಿಸುತ್ತಾರೆ. ಇದನ್ನು ‘ಚಪ್ಲ’ ಎನ್ನುತ್ತೇವೆ. ಇದು ಆಕಾರದಲ್ಲಿ ಫೇಣಿಯ ರೀತಿ ಇರುತ್ತದೆ!

Olive Oil : ಆಲಿವ್‌ ಎಣ್ಣೆಯ ದೌರ್ಬಲ್ಯಗಳು !

Olive Oil : ಆಲಿವ್‌ ಎಣ್ಣೆಯ ದೌರ್ಬಲ್ಯಗಳು !

ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್ ಒಂದು ಉತ್ತಮ ಸೂಪರ್ ಫುಡ್, ಸಂಶಯವಿಲ್ಲ. ಇದರಲ್ಲಿ ‘ಫಿನಾಲ್ಸ್’ ಎಂಬ ಸೂಕ್ಷ್ಮವಾದ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಆದರೆ ಇವು ಉಷ್ಣತೆಯನ್ನು ತಾಳಲಾ ರದೇ ನಮ್ಮ ಒಗ್ಗರಣೆಯ ಕಟು ಶಾಖಕ್ಕೆ ನಾಶವಾಗುತ್ತವೆ. ಅಂದರೆ, ಸಾವಿರ ರೂಪಾಯಿ ಕೊಟ್ಟು ತಂದ ಎಣ್ಣೆಯ ಸತ್ವವೆಲ್ಲಾ ಬೂದಿಯಾದಂತೆ. ಅಷ್ಟೇ ಅಲ್ಲ, ಹೆಚ್ಚು ಕಾಯಿಸಿದರೆ ಇದು ಬೇಗನೆ ಹೊಗೆ ಯಾಡಲು ಶುರುವಾಗಿ, ಕಹಿ ಮತ್ತು ವಿಷಕಾರಿಯಾಗಿ ಬದಲಾಗುತ್ತದೆ.

Prabhamani Nagaraj Column: ಕದನ ಕುತೂಹಲ !

Prabhamani Nagaraj Column: ಕದನ ಕುತೂಹಲ !

ಬೆಳಗಿನಿಂದ ರಾತ್ರಿಯವರೆಗೂ ಸುತ್ತಮುತ್ತಾ ಒಂದಲ್ಲಾ ಒಂದು ಜಗಳವಾಗುತ್ತಿದ್ದರೂ ಅದರಿಂದ ಸ್ವಲ್ಪವೂ ವಿಚಲಿತವಾಗದಂತೆ ನಮ್ಮ ಬಾಲ್ಯ ಮುನ್ನಡೆಯುತ್ತಿತ್ತು. ಆದರೂ ನಮ್ಮನಮ್ಮ ನಡುವೆ ಆಗಾಗ ನಡೆಯುತ್ತಿದ್ದ ಕೋಳಿಜಗಳಗಳನ್ನು ಬಿಡಿಸುವುದರಲ್ಲೇ ಮನೆಯವರಿಗೆ ಸಾಕುಸಾಕಾಗಿ ಮಕ್ಕಳೂ ಎಲ್ಲಿ ಜಗಳಗಂಟರಾಗುತ್ತಾರೋ ಎಂದು ಪರಿತಪಿಸುವಂತಾಗುತ್ತಿತ್ತು.

Suresh Gudaganavar Column: ಇಲ್ಲಿದೆ ಮಂಗ್ಯಾನ ಮಹಲ್‌ !

Suresh Gudaganavar Column: ಇಲ್ಲಿದೆ ಮಂಗ್ಯಾನ ಮಹಲ್‌ !

ಧಾರವಾಡವು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಪ್ರಮುಖ ನಗರ ಎಂದು ಪ್ರಸಿದ್ಧಿ ಪಡೆದಿದೆ. ವಿದ್ಯಾಕಾಶಿ ಎಂಬುದು ಇಲ್ಲಿಗೆ ಅನ್ವರ್ಥ ನಾಮ. ಈ ವಿದ್ಯಾಕಾಶಿಯ ಪಾರಂಪರಿಕ ಇತಿಹಾಸ ತಿಳಿಯುವ ಆಸಕ್ತಿ ಇದ್ದರೂ ತಿಳಿಸುವವರು ಯಾರು, ಮಾರ್ಗದರ್ಶನ ನೀಡುವವರು ಯಾರು ಎಂಬ ಸಮಸ್ಯೆ.

Somalinganna Benni Column: ʼಮುಳ್ಳುಗಳೇ ಹೂʼವಾಗುವ ಗ್ರಾಮೀಣ ಯುಗಾದಿ

ʼಮುಳ್ಳುಗಳೇ ಹೂʼವಾಗುವ ಗ್ರಾಮೀಣ ಯುಗಾದಿ

ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಪ್ರತಿವರ್ಷ ಯುಗಾದಿ ಹಾಗೂ ಕಾರ್ತಿಕ ಮಾಸದ ಹಬ್ಬ ಗಳಲ್ಲಿ ಮುಳ್ಳು ಹಬ್ಬವೂ ವಿಶೇಷವಾಗಿ ಚಾಲ್ತಿಯಲ್ಲಿದೆ. ಆಯಾ ಗ್ರಾಮದ ಮಾರುತೇಶ್ವರ, ಗ್ರಾಮದೇವತೆ ಹಾಗೂ ನಾನಾ ದೇವರ ಹೆಸರಿನ ಮೇಲೆ ನಡೆಯುವ ಈ ಸಾಹಸಮಯ ಹಬ್ಬವು ನೋಡಲು ಒಂದು ರೋಮಾಂಚಕ ಅನುಭವ. ಭಕ್ತಿ ಮತ್ತು ಸಾಹಸ ಬೆರೆತಿರುವ ಈ ಆಚರಣೆಯು, ಯುಗಾದಿಯ ಸಂಭ್ರಮ ವನ್ನು ನೂರ್ಮಡಿಗೊಳಿಸುತ್ತದೆ, ನೆರೆದವರನ್ನು ಬೆರಗಾಗಿಸುತ್ತದೆ.

Narayan Yaji Column: ʼಶಂಕರ ಭಗವತ್ಫಾದʼರ ಕಾಲ ಯಾವುದು ?

Narayan Yaji Column: ʼಶಂಕರ ಭಗವತ್ಫಾದʼರ ಕಾಲ ಯಾವುದು ?

ಗೋವರ್ಧನ ಪೀಠದ ಪೀಠವಂಶಾವಳಿ ಅಂದರೆ ಗುರುಗಳ ಅಖಂಡ ಹೆಸರನ್ನು ಗಮನಿಸಿದರೆ, ಶಂಕರಾ ಚಾರ್ಯರಿಂದ ಇಂದಿನವರೆಗೂ ಬಂದಿರುವ ಪೀಠಾಧಿಪತಿಗಳ ಸಂಖ್ಯೆ ಸುಮಾರು 140 ರಿಂದ 150 ಪೀಠಾಧಿಪತಿಗಳು ಆಗಿಹೋಗಿದ್ದಾರೆ. ಒಂದು ಗುರುಗೆ ಸರಾಸರಿ 15 - 20 ವರ್ಷಗಳ ಕಾಲಾವಧಿ ತೆಗೆದು ಕೊಂಡರೂ 140 ಗುರುಗಳು ಎಂದರೆ ಸುಮಾರು 2000- 2500 ವರ್ಷಗಳ ಅವಧಿಗಳಾಗುತ್ತವೆ.

ನನಸಾದ ದಶಕದ ಕನಸು

ನನಸಾದ ದಶಕದ ಕನಸು

ನಾಯಕನಿಗೆ ದೂರದೃಷ್ಟಿ ಆಲೋಚನೆ, ಜನಪರ ಚಿಂತನೆಯಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಈ ಸೇತುವೆ ತಲೆ ಎತ್ತಿ ನಿಂತಿದೆ ಎಂದರೆ ತಪ್ಪಾಗುವುದಿಲ್ಲ. ಅಷ್ಟಕ್ಕೂ ಈ ಸೇತುವೆ ಇರುವುದು ನರಸಿಂಹರಾಜಪುರ (ಎನ್ಆರ್‌ಪುರ)ದಲ್ಲಿ. ಭದ್ರಾ ಜಲಾಶಯದ ನಿರ್ಮಾಣದ ಬಳಿಕ ಹಿನ್ನೀರಿನಲ್ಲಿ ಮುಳುಗಡೆಯಾದ ಬಳಿಕ ಎನ್ಆರ್ ಪುರ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಬೇರೆ ಕಡೆ ವಲಸೆ ಹೋದರು. ಆದರೆ ಎಂಟ್ಹತ್ತು ಗ್ರಾಮದವರು ಅಲ್ಲಿಗೇ ಉಳಿದುಕೊಂಡರು.

N R Pura Bridge: ಮಲೆನಾಡಿನ ಸಂಪರ್ಕ ಕ್ರಾಂತಿ

ನನಸಾದ ಕನಸು; ಎನ್.ಆರ್. ಪುರ ಸೇತುವೆ

ಎಂ.ಶ್ರೀನಿವಾಸ್ ಅವರ ನೇತೃತ್ವ, ಸ್ಥಳೀಯರ ಪರಿಶ್ರಮ ಹಾಗೂ ಶಾಸಕ ಟಿ.ಡಿ ರಾಜೇಗೌಡ ಅವರ ಬೆಂಬಲ ದಿಂದ ಈಗ ಈ ಸೇತುವೆ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆ ಆಗುತ್ತಿದೆ. ಪಶ್ಚಿಮ ಘಟ್ಟಗಳ ದಟ್ಟ ಹಸಿರು ಮತ್ತು ತುಂಗಾ ನದಿಯಂಥ ಸದಾಕಾಲ ಹರಿಯುವ ನದಿಗಳಿಂದ ಆವೃತ ವಾಗಿರುವ ಈ ಪ್ರದೇಶದಲ್ಲಿ ನೈಸರ್ಗಿಕ ಸೌಂದರ್ಯಕ್ಕೇನು ಕೊರತೆಯಿಲ್ಲ. ಇಲ್ಲಿನ ಜನತೆ ದಶಕಗಳ ಕಾಲ ಕಿರಿದಾದ ರಸ್ತೆಗಳು ಮತ್ತು ತಗ್ಗು ಪ್ರದೇಶದ ಸೇತುವೆಗಳನ್ನೇ ಅವಲಂಬಿಸಿದ್ದರು.

ಉದ್ಘಾಟನೆಗೂ ಮೊದಲೇ ಜನಸಾಗರ

ಉದ್ಘಾಟನೆಗೂ ಮೊದಲೇ ಜನಸಾಗರ

ಪಶ್ಚಿಮ ಘಟ್ಟಗಳ ಹಸಿರು ಸಾಲು ಮತ್ತು ಭದ್ರಾ ನದಿಯ ಪ್ರಶಾಂತ ಹಿನ್ನೀರಿನ ಹಿನ್ನೋಟವು ಪ್ರವಾಸಿಗರಿಗೆ ಆಹ್ಲಾದಕರ ಅನುಭವ ನೀಡುತ್ತಿದೆ. ಕೆಲವೇ ದಿನಗಳ ಹಿಂದೆ ಅಪರಿಚಿತ ಎಂಬಂತಿದ್ದ ಈ ಪ್ರದೇಶ ಈಗ ಪ್ರವಾಸಿ ಚಟುವಟಿಕೆಗಳಿಂದ ಗಿಜಿಗುಟ್ಟುತ್ತಿದೆ. ಈ ಸೇತುವೆಯು ಕೇವಲ ಒಂದು ಪ್ರವಾಸಿ ತಾಣವಾಗಿ ಉಳಿಯದೆ, ಸ್ಥಳೀಯರಿಗೆ ಮತ್ತು ರೈತರಿಗೆ ವರದಾನವಾಗಿದೆ.

ಬೆನ್ನು ನೋವಿಗೆ ಬಂಗಾರದ ಪುಡಿ !

ಬೆನ್ನು ನೋವಿಗೆ ಬಂಗಾರದ ಪುಡಿ !

ನಂಗೆ ಬೇರೆ ದಾರಿ ಇರಲಿಲ್ಲ. ಸೊಂಟದ ಸಹವಾಸ ತುಂಬಾ ಬೇಕಿತ್ತು. ಸಾರಿ , ಸೊಂಟ ಅಂದೆ. ಡಾಕ್ಟರ್ ಹತ್ರ ಹೋಗೊದು ಅನಿವಾರ್ಯ. ಡಾಕ್ಟರು ಹೇಳಿದ್ರು. ‘ಜಾಸ್ತಿ ತೊಂದರೆ ಇಲ್ಲ. ಸ್ಪಾಸಮ್ ಆಗಿದೆ. ಏಳು ದಿನ ಫಿಸಿಯೋ ಥೆರಪಿ ಮಾಡಿಸ್ಕೊಳಿ. ಸರಿಹೋಗತ್ತೆ’ ‘ಸ್ಪಾಸಮ್ ಅಂದ್ರೇನು ಸಾರ್?’ ನನ್ನ ಮುಖ ನೋಡಿ, ಡಾಕ್ಟರು ಮನಸ್ಸಿನಲ್ಲಿ ’ತಲೆಹರಟೆ’ ಅಂದುಕೊಂಡ್ರು ಅನ್ನಿಸುತ್ತೆ.

Polenahally Ramesh Column: ಮಣ್ಣಿನ ಬೆಲೆಯ ಹೂದಾನಿ

Polenahally Ramesh Column: ಮಣ್ಣಿನ ಬೆಲೆಯ ಹೂದಾನಿ

ನನಗಿಷ್ಟವಾದ ಬೊಂಬೆಯನ್ನು ಕೈಗೆತ್ತಿಕೊಂಡು ಅಮ್ಮನ ಕಡೆ ನೋಡಿ ನಕ್ಕಿದ್ದೆ. ಅಮ್ಮ ‘ನಿನಗೆ ಇಷ್ಟವಾಯಿತಾ?’ ಎಂದಿದ್ದಳು. ನಾನು ಅವಳ ಕೈ ಹಿಡಿದು ಜಗ್ಗಿದ್ದೆ. ‘ಸರಿ ಇರು’ ಎಂದು ಹೇಳಿ ಅದರ ಬೆಲೆ ಕೇಳಿದಳು. ಅಂಗಡಿಯವನು 11 ರುಪಾಯಿ ಎಂದ. ಅಮ್ಮ ತನ್ನ ಪರ್ಸನ್ನು ತೆಗೆದು ಜಿಪ್ ತೆಗೆದು, ತಡಕಾಡಿ ಅದರಲ್ಲಿ ಕೇವಲ ಒಂಬತ್ತು ರೂಪಾಯಿ ಇರುವುದು ಕಂಡು, ‘ಕಡಿಮೆ ಇಲ್ಲವೇ?’ ಎಂದು ಮೆಲ್ಲನೆ ಕೇಳಿದ್ದಳು.

ಮುಟ್ಟಿದರೆ ಕಪ್ಪಾಗಿಸುವ ಮಸಿವಾಳ !

ಮುಟ್ಟಿದರೆ ಕಪ್ಪಾಗಿಸುವ ಮಸಿವಾಳ !

ಸಂಡೂರು ಭಾಗದ ಗುಡ್ಡ ಮತ್ತು ಕಾಡುಗಳಲ್ಲಿ ಒಂದು ಪ್ರಭೇದದ ಮರವಿದೆ; ಇದರ ಹೆಸರು ‘ಮಸಿವಾಳ’! ಮನುಷ್ಯರು ಮುಟ್ಟಿದರೆ, ಅವರ ಕೈ ಕಪ್ಪಾಗಿಸುವ ಗುಣದಿಂದಲೇ ಈ ಮರ ಜನರಲ್ಲಿ ಕುತೂಹಲ ಮೂಡಿಸುತ್ತದೆ. ಕಪ್ಪು ತೊಗಟೆಯ ವಿಚಿತ್ರ ಸ್ವಭಾವ ಸುಮಾರು 15 ಅಡಿ ಎತ್ತರದವರೆಗೆ ಬೆಳೆಯುವ ಮಸಿವಾಳ ಮರದ ತೊಗಟೆ ಕಪ್ಪು ಬಣ್ಣದ್ದಾಗಿದ್ದು ಕಾರ್ಕ್‌ನಂತೆ ದಪ್ಪವಾಗಿರುತ್ತದೆ.

Narayan Yaji Column: ಮಕ್ಕಳ ಲೇಖನಿಯಲ್ಲಿ ಅರಳಿದ ಮಹಾನ್ ಸಾಹಿತಿ!

Narayan Yaji Column: ಮಕ್ಕಳ ಲೇಖನಿಯಲ್ಲಿ ಅರಳಿದ ಮಹಾನ್ ಸಾಹಿತಿ!

ಜಾಗತಿಕ ಸಾಂಸ್ಕೃತಿಕ ರಂಗದಲ್ಲಿ ಲಿಯೋನಾರ್ಡ್ ಡ ವಿನ್ಸಿ ಅಥವಾ ರವೀಂದ್ರನಾಥ ಟ್ಯಾಗೋ ರರಂತವರ ಜೊತೆ ಹೋಲಿಸಬಹುದಾದ ಮಹಾನ್ ವ್ಯಕ್ತಿತ್ವ ಕಾರಂತರದ್ದು. ಮೂಲ ಇಂಗ್ಲಿಷ್ ಕೃತಿಯ ಕುರಿತು ಡಿಸೆಂಬರ್ ತಿಂಗಳಲ್ಲಿ ನಡೆದ ಬೆಂಗಳೂರು ಲಿಟ್-ಫೆಸ್ಟಿನಲ್ಲಿ ಕಾರಂತ ಮೂವ ರೂ ಮಕ್ಕಳ ಜೊತೆ ವಿಮರ್ಶಕ ಎಸ್.ಆರ್.ವಿಜಯಶಂಕರ ಅವರು ಸಂವಾದ ನಡೆಸಿದ್ದರು

Shashidhara Halady Column: ಸ್ಪೂರ್ತಿ ತುಂಬುವ ಶಿಕ್ಷಕರಿವರು !

Shashidhara Halady Column: ಸ್ಪೂರ್ತಿ ತುಂಬುವ ಶಿಕ್ಷಕರಿವರು !

ಸಾಹಿತ್ಯ ಪರಿಚಾರಿಕೆಯೂ ಸೇರಿದಂತೆ, ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ, ಸಮಾಜ ಸೇವೆ ಮಾಡಿರುವ, ಶಿಕ್ಷಕ ವೃತ್ತಿಯ ನ.ಭ.ನೆಂಪು ಅವರು 11 ಪುಸ್ತಕಗಳನ್ನೂ ರಚಿಸಿದ್ದಾರೆ. ಶಿಕ್ಷಕರಾಗಿ ಅವರು ಮಾಡಿದ ಸಾಧನೆ ಬಹುದೊಡ್ಡದು. ಹಲವು ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡಿದ ಹಿರಿಮೆ ಅವರದು.

Loading...