ಜಿಎಸ್ʼಎಸ್ ನೂರು, ಹಣತೆಗಳ ತೇರು
ಸೃಷ್ಟಿಯ ರಚನೆಯೇ ಪ್ರೀತಿಯ ಅಸ್ತಿವಾರದ ಮೇಲೆ ನಿಂತಿದೆ. ಮಾನವೀಯ ಪ್ರೇಮದ ಆದರ್ಶ ವನ್ನು ಎತ್ತಿ ಹಿಡಿದು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಣ್ಣ ಬನಿಯನ್ನು ಗಾಢಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯಕ್ಕೆ ಜಿಎಸ್ಎಸ್ ಯೋಗದಾನ, ಅವರ ಸಾಹಿತ್ಯದ ಸ್ವರೂಪ, ಕೊಡುಗೆಯ ಸಶಕ್ತ ಅನಾವರಣ, ಅವರ ಸಾಹಿತ್ಯದ ಸಮಗ್ರ ಮುಖಗಳ ಅವಲೋಕನ, ಸೂಕ್ಷ್ಮ ತಲ್ಲಣ, ವೈರುಧ್ಯಗಳ ವಿಶ್ಲೇಷಣೆ ಡಾ.ನರಹಳ್ಳಿ ಬಾಲ ಸುಬ್ರಹ್ಮಣ್ಯ ಅವರ ‘ಹಣತೆಯ ಹಾಡು’ಕೃತಿಯಲ್ಲಿ ನೆಲೆಪಡೆದಿದೆ.