Santhosh Kumar Mehandale Column: ಸಾಹಿತ್ಯವನ್ನೇ ಧೇನಿಸಿಕೊಂಡು ಬಂದ ಕವಿ
‘ನಾವು ಮಾಡಬೇಕಾದದ್ದನ್ನೆಲ್ಲ ಆಯಾ ಕಾಲಕಾಲಕ್ಕೆ ಮಾಡಿಬಿಡಬೇಕು ನೋಡು. ಇಲ್ಲದಿದ್ದರೆ ಒಂದಲ್ಲ ಒಂದಿನ ಅವು ನಮ್ಮನ್ನು ಕಾಡುತ್ತವೆ’ ಎಂಬ ಅವರ ನುಡಿಯನ್ನು ನಾನು ಮರೆತದ್ದೇ ಇಲ್ಲ. ಕಾರಣ ಅವರ ಮಡದಿ ಇದ್ದಾಗಲೇ ಆಕೆಗೆ ಅರ್ಪಿಸಬಹುದಾದ ಸಾಧ್ಯತೆಯನ್ನು ಅವರು ಮುಂದೂಡುತ್ತಲೇ ಬಂದು ಅದು ಉಳಿದೇ ಹೋದದ್ದು ಅವರಿಗೆ ಅಗಾಗ ಚುಚ್ಚುತ್ತಲೇ ಇದ್ದ ದಾರುಣ ನೋವು ನಂತರ ದಲ್ಲೂ ಅವರನ್ನು ಕಾಡಿತ್ತು


ಸಂತೋಷಕುಮಾರ ಮೆಹೆಂದಳೆ
ಕುಮಾರವ್ಯಾಸನಿಂದ ಪಂಪನವರೆಗೆ ಸತತವಾಗಿ, ಕುವೆಂಪು, ಬೆಂದ್ರೆ, ಪುತಿನ, ಅಡಿಗರು ಸೇರಿದಂತೆ ಹಿರಿಯ ಮತ್ತು ಸಾಹಿತ್ಯದ ನಿಜವಾದ ಪರಿಚಾರಕರ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಾ, ಸ್ಪಷ್ಟ ಕನ್ನಡ, ಅದೆರೆಡೆಗಿನ ಪಾವಿತ್ರ್ಯತೆಗೆ ಕುತ್ತುಬಾರದಂತೆ ಬದುಕಿದ್ದ ಜೀವ ಎಂದೇನಾದರೂ ಇದ್ದರೆ ಅದು ಎಚ್ಚೆಸ್ವಿ. ‘ಸಾಹಿತ್ಯಕ್ಕಿಂತ ಮೊದಲು ಕನ್ನಡ’ ಎನ್ನುತ್ತಲೇ ಅರಳುತ್ತಿದ್ದ ಅವರ ಜೀವಕ್ಕೆ ಭಾಷೆ ಉಸಿರಾಗಿತ್ತು ಮತ್ತು ಅದು ಕನ್ನಡವಾಗಿತ್ತು ಅವರೊಂದಿಗೆ ಒಡನಾಡಿದ್ದೆ ಮತ್ತು ಅವರ ಕಾಲದಲ್ಲಿ ನಾನೂ ಇದ್ದೆ ಎನ್ನುವುದಷ್ಟೆ ನನ್ನ ಸಾರ್ಥಕತೆ. ಕನ್ನಡ ಸಾಹಿತ್ಯದ ನವಿರು ಭಾವ ಮತ್ತು ಅದಕ್ಕಿಂತಲೂ ಭಾಷೆಯನ್ನು ನವಿರಾಗಿ ಬಳಸಿದ ಅಭಿಜಾತ ಹುಟ್ಟು ಕವಿ ಎಂದರೆ ಎಚ್ಚೆಸ್ವಿ.
ಯಾವ ಇಸಮ್ಮು ಮತ್ತು ಯಾವ ರೀತಿಯ ಸಾಹಿತ್ಯದ ಪ್ರಭಾವಳಿಗೂ ತಾಕದಂತೆ, ತಾಕಿಸಲು ಯತ್ನಿಸಿದರೂ ನಯವಾಗಿಯೇ ತಮ್ಮ ಒಲವು ಏನಿದ್ದರೂ ನವಿರಾದ ಸಾಹಿತ್ಯದೆಡೆಗೆ ಎಂದು ಅದೇ ನಡಿಗೆಯನ್ನು ಮುಂದುವರೆಸುತ್ತಾ, ಹಳೆಯ ಮತ್ತು ಹೊಸ ತಲೆಮಾರಿನ ಸಾಹಿತ್ಯದ ಸಾಕ್ಷಿಪ್ರಜ್ಞೆ ಯಾಗಿ ಬದುಕಿದ್ದ ಎಚ್ಚೆಸ್ವಿ ಮತ್ತು ನನಗೆ ಒಂದೂವರೆ ದಶಕಗಳ ನಿರಂತರ ಸಾಂಗತ್ಯವಿತ್ತು.
‘ನಾವು ಮಾಡಬೇಕಾದದ್ದನ್ನೆಲ್ಲ ಆಯಾ ಕಾಲಕಾಲಕ್ಕೆ ಮಾಡಿಬಿಡಬೇಕು ನೋಡು. ಇಲ್ಲದಿದ್ದರೆ ಒಂದಲ್ಲ ಒಂದಿನ ಅವು ನಮ್ಮನ್ನು ಕಾಡುತ್ತವೆ’ ಎಂಬ ಅವರ ನುಡಿಯನ್ನು ನಾನು ಮರೆತದ್ದೇ ಇಲ್ಲ. ಕಾರಣ ಅವರ ಮಡದಿ ಇದ್ದಾಗಲೇ ಆಕೆಗೆ ಅರ್ಪಿಸಬಹುದಾದ ಸಾಧ್ಯತೆಯನ್ನು ಅವರು ಮುಂದೂಡುತ್ತಲೇ ಬಂದು ಅದು ಉಳಿದೇ ಹೋದದ್ದು ಅವರಿಗೆ ಅಗಾಗ ಚುಚ್ಚುತ್ತಲೇ ಇದ್ದ ದಾರುಣ ನೋವು ನಂತರದಲ್ಲೂ ಅವರನ್ನು ಕಾಡಿತ್ತು. ಉಳಿದೆಲ್ಲರಂತೆ ಬದುಕಿ ಬಿಡುತ್ತಿದ್ದರೆ, ಇದ್ದಾಗಲೂ, ಅಮರರಾದ ಮೇಲೂ ಪಂಥಾಧಾರಿತ ಕಮೆಂಟುಗಳಿಗೆ ತುತ್ತಾಗುತ್ತಿದ್ದರೇನೋ. ಆದರೆ ಅದಾವುದೇ ಪದರಗಳು ತಮ್ಮ ಉಸಿರಿಗೆ ಮತ್ತು ಸಾಹಿತ್ಯಕ್ಕೆ ತಾಕದಂತೆ ಸಾಹಿತ್ಯ ಮತ್ತು ನಿಸ್ಪ್ರಹತೆ ಎರಡನ್ನೇ ಉಸಿರಾಗಿಸಿಕೊಂಡು, ಜೀವಿಸಿದ ಎಚ್ಚೆಸ್ವಿ ಹೊಸ ತಲೆಮಾರಿಗೆ ನಿಜವಾದ ಆದರ್ಶ ಪ್ರಾಯ ಸಾಹಿತಿ.
ಇದನ್ನೂ ಓದಿ: Hari Paraak Column: ಕಮಲ್ ಹಸನ್ ಹಂಗೆಲ್ಲ ಮಾತಾಡಿದ್ರೆ ʼಶಿವʼ ಮೆಚ್ತಾನಾ ?
ಬುದ್ಧಚರಣದ ಅರ್ಪಣೆ
ಸಾಹಿತಿಯೊಬ್ಬನು ಸಾಹಿತ್ಯದಲ್ಲಿ ಹೇಗಿರಬೇಕು ಎನ್ನುವ ಉದಾಹರಣೆಗೆ ಎಚ್ಚೆಸ್ವಿಯವರು ಒಂದು ಶ್ರೇಷ್ಠ ಉದಾಹರಣೆ. ಅವರೊಡನೆಯ ಒಂದೂವರೆ ದಶಕದ ಒಡನಾಟದಲ್ಲಿ ನಿರಂತರ ಮತ್ತು ಆಸಕ್ತಿಕರ ಎನ್ನುವ ಹಲವು ಸಾಹಿತ್ಯಕ ಮತ್ತು ಸಾಹಿತ್ಯೇತರ ಸಂಗತಿಗಳಿಗೆ ಮುಖಾಮುಖಿ ಯಾದವನು ನಾನು. ಉಳಿದಂತೆ ಇನ್ನಾವುದೇ ಗೊಡವೆಗೆ ಹೋಗದ ಹಿರಿಯ ಜೀವ.
ಅವರ ಮಹಾಕಾವ್ಯ ‘ಬುದ್ಧಚರಣ’ದ ಹಬ್ಬ ಮುಗಿದ ಮೇಲೆ ಮನೆಗೆ ಹೋಗಿದ್ದಾಗ ಹೇಳಿದ ಮಾತು ನನಗೆ ಸರ್ವಕಾಲಿಕ ವೇದ ವಾಕ್ಯ ಎನ್ನಿಸಿದ್ದು ಸುಳ್ಳಲ್ಲ. “ಇದನ್ನು ನಾನು ಅವಳು ಬದುಕಿದ್ದಾಗಲೇ ಮಾಡಬೇಕಿತ್ತು ನೋಡು. ಕೆಲವೊಮ್ಮೆ ಬದುಕಿನಲ್ಲಿ ತಡ ಆಗ್ತಾವೆ ಆದರೆ ಇಷ್ಟು ತಡ ಆಗ ಬಾರ ದಿತ್ತು.." ಅವರ ಹೆಮ್ಮೆಯ ಕೃತಿ ‘ಬುದ್ಧ ಚರಣ’ ಮಹಾಕಾವ್ಯವನ್ನು ಮಡದಿಗೆ ಅರ್ಪಿಸಿದ ನಂತರ, ಅವರನ್ನು ತಮ್ಮ ಗುಂಪಿನವರು ಎಂದೆಲ್ಲ ಹಳವಂಡಗಳನ್ನು ಮಾಡುವವರ ಹಾತೊರೆ ಯುವವರ ಹೊರತಾಗಿಯೂ ಅದೇ ತಣ್ಣಗಿನ ದನಿ ಮತ್ತು ಕೊನೆಗೂ ಕಾರ್ಯ ಕೈಗೊಂಡ ನೆಮ್ಮದಿಯಲ್ಲಿ ಅರೆಬರೆ ಸಾಲು ನುಂಗಿಕೊಳ್ಳುತ್ತಲೇ ನುಡಿದದ್ದು ಎಚ್ಚೆಸ್ವಿ.
‘ಕಾಫಿ ಕುಡಿತೀಯಾ?’ ಎಂದು ಆದರದಿಂದ, ಮನೆಯ ಯಜಮಾನನೊಬ್ಬನ ಪ್ರೀತಿಯಿಂದ ಆವರಿಸಿ ಕೊಳ್ಳುತ್ತಿದ್ದ ಎಚ್ಚೆಸ್ವಿಯನ್ನು ನಾನು ಒಪ್ಪಿಕೊಂಡದ್ದು ಅವರ ನಿಸ್ಪ್ರ್ರಹತೆ ಮತ್ತು ಮೌಲ್ಯಗಳ ತುಡಿತಕ್ಕಿಂತ ಮಾನವೀಯ ವಿಶ್ವಾಸಗಳಿಗೆ. ಅವರ ಸಾಹಿತ್ಯ ಬದುಕಿನ ಶೈಲಿ ಇತ್ಯಾದಿ ಗಳಾಚೆಗೂ ಅವರು, ಈಗಿನ ಕನ್ನಡದ ಸಾಹಿತ್ಯದಲ್ಲಿ ಆಧಿಪತ್ಯ ಸ್ಥಾಪಿಸಲೆತ್ನಿ ಸುತ್ತಿರುವ ವಾಟ್ಸಾಪ್ ಗುಂಪುಗಳು, ಪ್ರಚಾರಪ್ರಿಯ ಪ್ರಕಾಶಕರು, ಏನಿಲ್ಲ ದಿದ್ದರೂ ಕಾರ್ಯಕ್ರಮಕ್ಕೆ ನೆಪ ಹುಡುಕಿ ಅದನ್ನೇ ಸುದ್ದಿ ಮಾಡಿಕೊಳ್ಳುವ ಶೂರರೆಲ್ಲರ ಒತ್ತಡಗಳಾಚೆಗೆ, ಅವರಾರ ಕೈಗೆ ಸಿಕ್ಕದೆ, ತಮ್ಮ ಅನಿಸಿಕೆಯ ಅವರಿಗೆ ಬೇಕಾದಂತೆ ದಕ್ಕದೇ ಬದುಕಿದ ಹಿರಿಯ ಜೀವ ಅದು. ಹೇಗಿದ್ದರೂ ಎಲ್ಲರನ್ನೂ ಒಪ್ಪುತ್ತಿದ್ದ ಆ ನಿಸ್ಪ್ರಹತೆ ಅವರ ಬಹುದೊಡ್ಡ ಆಸ್ತಿಯಾಗಿತ್ತು.

ನಮ್ಮೂರಿನ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳಿಗೆ, ನನ್ನ ಆಹ್ವಾನದ ಮೇರೆಗೆ ಬಂದರು. ಆಗಷ್ಟೇ ತಯಾರು ಮಾಡಿದ್ದ ಬೆಳ್ಳಿ ಹಬ್ಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಿಕೊಟ್ಟರು; ಹತ್ತಿರದ ಉಳವಿಗೆ ಕರೆದುಕೊಂಡು ಹೋಗಿದ್ದೆ. ಗದ್ದುಗೆ ಮುಂದೆ ಕೂತು, ಶರ್ಟು ಬಿಚ್ಚಿ, ಪಂಚೆ ಉಟ್ಟು ಅಪ್ಪಟ ಭಕ್ತನಾಗಿ ಅಲ್ಲಿ ಹಣೆಯೂರಿ ಮೇಲಕ್ಕೆದ್ದಿದ್ದರು.
ಆವತ್ತು ರಾತ್ರಿವರೆಗೂ ಹರಟುತ್ತಲೇ ಇದ್ದ ಎಚ್ಚೆಸ್ವಿ, ಕೇವಲ ಭಾವಗೀತೆಯ ಕವಿಯಾಗಿರಲಿಲ್ಲ. ಅವರಲ್ಲಿ ಮನುಷತ್ವ ಮತ್ತು ಬರಹಗಳ ಮಧ್ಯ ಮೌಲ್ಯಗಳ ಬಗ್ಗೆ ಚಿಂತನೆಗಳು ಯಾವಾಗಲೂ ನಿಸ್ಪ್ರಹವಾಗಿ ಹರಿಯಲು ತವಕಿಸುತ್ತಿದ್ದವು.
ನಿದ್ದೆಯನ್ನೇ ಕದ್ದ ಪುಸ್ತಕ!
‘ನಾನು ಅಘೋರಿಗಳ ಲೋಕದಲ್ಲಿ ಓದಿಕೊಂಡು ಬರುತ್ತೇನೆ, ಪ್ರಿಂಟ್ ಕಾಪಿ ಕಳಸು’ ಎಂದಾಗ, ಮೊದಲ ಡ್ರಾಫ್ಟ್ ಕಳಿಸಿಕೊಟ್ಟಿದ್ದೆ. ಆ ಪುಸ್ತಕವನ್ನು ಬಿಡುಗಡೆ ಮಾಡಿ ಮಾತಾಡುವಾಗ ಆಡಿದ ಮೊದಲ ಮಾತೇ ‘ಇದು ಪುಸ್ತಕ ಅಲ್ಲ, ನನ್ನ ಒಂದು ವಾರದ ನೆಮ್ಮದಿ ಕದ್ದ, ನಿದ್ದೆಗೆಡಿಸಿದ ಭಯಾ ನಕ ಕಥಾನಕ..’ ಎನುತ್ತಾ ಪುಸ್ತಕದ ಸಂಪೂರ್ಣ ಹೂರಣದ ಬಗ್ಗೆ ನಿರರ್ಗಳವಾಗಿ ಮಾತಾಡಿದ್ದರು. ಎಚ್ಚೆಸ್ವಿ ತನಗೆ ಗೊತ್ತಿಲ್ಲದ, ಓದದ ವಿಷಯದ ಬಗ್ಗೆ ಮಾತಾನಾಡುತ್ತಿರಲಿಲ್ಲ.
ಬದಲಾಗುತ್ತಿದ್ದ ಸಾಹಿತ್ಯಿಕ ಮೌಲ್ಯ ಮತ್ತು ಪ್ರಸ್ತುತ ಪತ್ರಿಕೋದ್ಯಮದ ಬಗ್ಗೆ ಮಾತು ಬಂದಾಗಲೆಲ್ಲ ಯಾವ ಮತ್ತು ಯಾರ ಬಗ್ಗೆಯೂ ಮಾತನಾಡದೇ, ತಮ್ಮ ನೋವು ಮತ್ತು ವಿಷಾದವನ್ನು ಮಾತ್ರ ವ್ಯಕ್ತಪಡಿಸುತ್ತಿದ್ದರು. ಸರಿ ಸುಮಾರು ಕೊನೆ ಐದು ವರ್ಷಗಳ ಕಾಲ ವಯೋಸಹಜ ಕಾಯಿಲೆ, ಅವರನ್ನು ಕಾಡುವಾಗ, ಮಾನಸಿಕವಾಗಿ ಕೂಡಾ ಸಾಹಿತ್ಯವನ್ನೇ ಧೇನಿಸುತ್ತಿದ್ದ ಜೀವ ಅದು.
ನಮ್ಮ ಮನೆಯಲ್ಲಿ, ಕೂತು ನಡೆಸಿದ್ದ ಸಂದರ್ಶನದಲ್ಲಿ, ಆಗೀಗ ಕೇಳಿ ಪಡೆದ ಕಾಫಿ ಜೊತೆಗೆ ಹರಟುತ್ತಿದ್ದ ಎಚ್ಚೆಸ್ವಿ, “ನಿನ್ನ ಪುಸ್ತಕ ಓದಲು ಕೂತ್ರೆ ಹಗಲು ರಾತ್ರಿ ಗೊತ್ತಾಗಲ್ಲ, ಬೇಕಿತ್ತು ನಿನ್ನಂಥ ವನೊಬ್ಬ. ಅದರೆ ನನ್ನ ನೆಮ್ಮದಿ ನಿದ್ದೆ ಎರಡೂ ಕಸಿದ ಪುಸ್ತಕ ಇದು" ಎಂದು ಹೇಳಿದ್ದರು; ಸಮಯಕ್ಕೆ ಸರಿಯಾಗಿ ವಾಡಿಯಾ ಹಾಲ್ನಲ್ಲಿ ಹಾಜರಿದ್ದು ಅರ್ಧ ದಿನಪೂರ್ತಿ ಪುಸ್ತಕದ ಬಗ್ಗೆಯೇ ಮಾತಾಡಿ ಹರಸಿದ ಪುಸ್ತಕ ‘ಅಘೋರಿಗಳ ಲೋಕದಲ್ಲಿ’.
‘ಕನ್ನಡದಲ್ಲಿ ಈ ವಿಷಯದ ಕುರಿತು ನಾನು ನೋಡಿದ ಮೊದಲ ಮಾಹಿತಿಯ ಪುಸ್ತಕ ಎನ್ನುವು ದಕ್ಕಿಂತ ಈ ಅನುಭವ ಕಥನವೇ ಭಯಾನಕ. ಇವನು ಅದೆಂಗೆ ಬರೆದನೋ, ಅಲ್ಲೆಲ್ಲ ಹೋಗಿ ಅದೆಂಗೆ ಸಂತೋಷಾ ವಾಪಸ್ಸು ಬಂದನೋ .. ದೇವರಿಗೇ ಗೊತ್ತು’ ಎಂದಿದ್ದ ಆ ವೇದಿಕೆಯ ದನಿಗೆ ನಾನು ಧನ್ಯ. ಎಲ್ಲದಕ್ಕೂ ಎರಡು ಮುಖ ಇದೆ !
ನನ್ನ ಇತ್ತೀಚೆಗಿನ ಕಾದಂಬರಿ ‘ಮಹಾಪತನ’ ಬೆನ್ನುಡಿ ಬರೆಯಲು ಹಗಲು ರಾತ್ರಿ ಓದಿ, ರಾತ್ರೋ ರಾತ್ರಿ ಕರೆ ಮಾಡಿದ್ದ ಎಚ್ಚೆಸ್ವಿ, ‘ಇದು ನಂಬಿಕೆಗಳನ್ನು ಅಲ್ಲಾಡಿಸುವ ಚಿಂತನೆ ಎನ್ನುವುದಕ್ಕಿಂತ ನಮ್ಮನ್ನು ಚಿಂತನೆಗೆ ಪ್ರೇರೇಪಿಸುವಂತೆ ಮಾಡುತ್ತದೆ. ಎಲ್ಲದಕ್ಕೂ ಎರಡು ಮುಖ ಇವೆ ಎನ್ನೋದಕ್ಕೆ ಇದಕಿಂದ ಚೆಂದದ ಪುಸ್ತಕ ಬರಲ್ಲ. ನಿಜಕ್ಕೂ ನನಗೆ ಇಷ್ಟದ ಸುಯೋಧನನಿಗೆ ನೀನು ನ್ಯಾಯ ಕೊಡಿಸಿದ್ದಿ.. ನೆಮ್ಮದಿ ಯಾಯಿತು ಭಾಳ ಸಂತೋಷ’ ಎಂದಿದ್ದರು.
ಕಾರಣ ಎಚ್ಚೆಸ್ವಿ ಯಾವತ್ತೂ ಮಹಾಭಾರತ ನಮ್ಮ ದೇಶದ ಕಥಾನಿಧಿ ಎನ್ನುತ್ತಲೇ, ಅವರು ಇಷ್ಟ ಪಟ್ಟ ಎರಡೇ ಎರಡು ಪಾತ್ರಗಳು ಎಂದರೆ ಮೊದಲು ದುರ್ಯೋಧನ, ಅವನ ಹಿಂದೆ ಭೀಷ್ಮ. ಅವರ ಲೆಕ್ಕದಲ್ಲಿ ಜಗತ್ತು ಗೆಲ್ಲಬಲ್ಲ ಎರಡು ಸಶಕ್ತ ಪಾತ್ರಗಳನ್ನು ಸೋಲಿಸಬಲ್ಲ ಹಿರಿಮೆ ಎಂದಿದ್ದರೆ ಅದು ಲೇಖಕನಿಗೆ ಮಾತ್ರ. ಆದರೆ ಇವರಿಬ್ಬರ ಚಿತ್ರಣ ಯಾವತ್ತೂ ಮರೆಯದ ಭಾರತ ಎಂದೇ ವ್ಯಾಖ್ಯಾ ನಿಸುತ್ತಿದ್ದರು. ನನ್ನ ಪುಸ್ತಕಕ್ಕೆ ಅವರೇ ಬೆನ್ನುಡಿ ಬರೆದಿದ್ದು ಮಾತ್ರವಲ್ಲ, ಬಿಡುಗಡೆಗೂ ಮೊದಲು ವಿಡಿಯೋ ಮಾಡಲು ಹೋದಾಗ, ಅವರೇ ಮೊದಲ ಬೈಟ್ ಕೊಟ್ಟಿದ್ದರು.
‘ಮಹಾಪತನ’ ಓದಿದ ಮೇಲೆ, ‘ನನಗೆ ಇನ್ನು ಬೇರೆ ಭಾರತ ಓದಬೇಕು ಎನ್ನುವ ಹುಚ್ಚು ಬಿಟ್ಟಿದ್ದು ನಿಜ’ ಎಂದಿದ್ದು ಈಗಲೂ ಕಿವಿಯಲ್ಲಿದೆ. ಇವತ್ತಿನ ಈ ನುಡಿ ನಮನದಲ್ಲಿ ನಾನು ಅವರ ಗೀತೆಗಳು, ಬರಹ, ಪುಸ್ತಕಗಳು ಯಾವುದರ ಬಗ್ಗೆಯೂ ಪ್ರಸ್ತಾಪಿಸುತ್ತಿಲ್ಲ. ಕಾರಣ ಅವೆಲ್ಲ ಬೌದ್ಧಿಕವಾಗಿ ಹೊರ ಜಗತ್ತಿಗೆ ಯಾವ ಕಾಲಕ್ಕೂ ಲಭ್ಯವಿರುವಂಥವುಗಳು ಮತ್ತು ಅವೆಲ್ಲ ಮರೆಲಾರದಷ್ಟು ಸಾರಿ ಎಲ್ಲೆಡೆ ಉಪಯೋಗವಾಗುತ್ತಲೇ ಇವೆ.
ಅದರೆ ಸಾಹಿತ್ಯಿಕವಾಗಿ ಕೊನೆಯವರೆಗೂ ಜೀವಂತ ಇದ್ದ ಹಿರಿಯ ಸಾಹಿತಿಯೊಬ್ಬ ಇರಬೇಕಾದುದು ಹೇಗೆ ಎನ್ನುವುದನ್ನು ಅವರ ಒಡನಾಟ ನನ್ನ ಅರಿವಿಗೆ ತಂದಿರಿಸಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಅವರೊಡೆಗಿನ ಕೆಲವು ಅನುಭವಕ್ಕೆ ಅಕ್ಷರ ರೂಪದಲ್ಲಿ ಅವರಿಗೆ ನುಡಿ ನಮನ ಸಲ್ಲಿಸುವ ಕೆಲಸ ಮಾಡಿದ್ದೇನೆಯೇ ಹೊರತಾಗಿ ಅದದೇ ಸಾಹಿತ್ಯವನ್ನು ಉದಾಹರಿಸುವ ಕೆಲಸಕ್ಕೆ ಕೈ ಹಾಕಿಲ್ಲ.
ಅವರು ಯಾವಾಗಲೂ ಹೇಳುತ್ತಿದ್ದ ಮಾತು ‘ಬರೆಯೋವರೆಗೆ ನಮದು, ಬರದಾದ ಮೇಲೆ ಅದು ನಮ್ಮದು ಅನ್ನೋ ಮೋಹ ಇರಬಾರದು!’ ಈ ಮಾತುಗಳಲ್ಲಿ ಎಷ್ಟು ಪ್ರಖರ ದಿವ್ಯ ದರ್ಶನ ಮಾಡಿ ಸಿದ್ದಾರೆಂದರೆ ಈ ಮೂಲಕ ಅವರಿಗೆ ನನ್ನ ನಮನಗಳು.
ಹೋಗಿ ಬನ್ನಿ ಎಚ್ಚೆಸ್ವಿ
ಎಚ್ಚೆಸ್ವಿ ಅವರು ಯಾವಾಗಲೂ ಹೇಳುತ್ತಿದ್ದ ಮಾತು ‘ಬರೆಯೋವರೆಗೆ ನಮ್ಮದು, ಬರೆದಾದ ಮೇಲೆ ಅದು ನಮ್ಮದು ಅನ್ನೋ ಮೋಹ ಇರಬಾರದು!’ ಎಷ್ಟು ಪ್ರಖರವಾದ ದಿವ್ಯ ದರ್ಶನ! ಹೋಗಿ ಬನ್ನಿ ಎಚ್ಚೆಸ್ವಿ
ಪ್ರೀತಿ ಹಂಚಿದ ಕವಿ
ಅಕ್ಷರಗಳ ಸಾಂಗತ್ಯವನ್ನು ಜೀವನ ಪ್ರೀತಿಗಾಗಿ ಬಳಸಿಕೊಳ್ಳಲು ಕೊನೆಯವರೆಗೂ ಪ್ರಯತ್ನಿಸಿದ ಅಕ್ಷರ ಸಂತ ಎಚ್ಚೆಸ್ವಿ. ಯಾವತ್ತೂ ಯಾವ ಲೇಖಕನೂ ಅವರಿಗೆ ಅಪಥ್ಯ ಎಂದಿರಲೇ ಇಲ್ಲ. ಯಾರೇ ಹೋದರೂ ಅವರ ಮನೆ ಬಾಗಿಲುಗಳು, ಬಾಹುಗಳು ತೆರೆದಿರುತ್ತಿದ್ದವು.