ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prof G N Upadhyay Column: ಕ್ಷೇತ್ರ ಕಾನಡೇ ! ದೇವ ಕಾನಡೇ !ತೀರ್ಥ ಕಾನಡೇ !

ಕರ್ನಾಟಕವೂ ಸೇರಿದಂತೆ ಇತರ ರಾಜ್ಯ ಗಳಲ್ಲೂ ಅವನ ಭಕ್ತಾಭಿಮಾನಿಗಳ ಗಡಣ ದೊಡ್ಡದು. ಜ್ಞಾನೇ ಶ್ವರ, ತುಕಾರಾಮ, ಮುಕ್ತಾ ಬಾಯಿ, ಏಕನಾಥರಿಂದ ತೊಡಗಿ ನೀಳೋಬಾವರೆಗಿನ ಎಲ್ಲ ಸಂತ ಕವಿಗಳು ವಿಠ್ಠಲನ ಚರಣ ಕಮಲದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರೆ ಆಗಿದ್ದಾರೆ. ಅವರು ವಿಠ್ಠಲನನ್ನು ಮಾತೆಯಾಗಿ ಸ್ವೀಕಾರ ಮಾಡಿಕೊಂಡರು.

ಲಕ್ಷಾಂತರ ಜನರು ಪಾಲ್ಗೊಳ್ಳುವ ವಾರಕರಿ ಸಂಪ್ರದಾಯ

Profile Ashok Nayak Jun 29, 2025 11:15 AM

ಲಕ್ಷಾಂತರ ಜನರು ಪಾಲ್ಗೊಳ್ಳುವ ವಾರಕರಿ ಸಂಪ್ರದಾಯ

ಪ್ರೊ.ಜಿ.ಎನ್.ಉಪಾಧ್ಯ, ಮುಂಬೈ

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಎರಡು ಸಾವಿರ ವರ್ಷಗಳಿಗೂ ಮೀರಿದ ಸಂಬಂಧವಿದೆ. ದೇವಾಲಯ ರಚನೆ ಕರ್ನಾಟಕ ಸಂಸ್ಕೃತಿಯ ಪ್ರಧಾನ ಲಕ್ಷಣಗಳಲ್ಲಿ ಒಂದು. ವಿಶಾಲ ಕರ್ನಾಟಕದಲ್ಲಿ ಕನ್ನಡ ರಾಜವಂಶಗಳು ಕಟ್ಟಿಸಿದ ದೇವಾಲಯಗಳ ಸಂಖ್ಯೆ ಸಾವಿರಾರು. ಕರ್ನಾಟಕ ಮೂಲದ ಅನೇಕ ದೇವರು ಇತರ ರಾಜ್ಯಗಳಲ್ಲೂ ಪ್ರಮುಖ ದೇವತೆಗಳಾಗಿ ಕುಲದೇವ ರಾಗಿ ಆರಾಧನೆಗೊಳ್ಳುತ್ತಿರುವುದು ವಿಶೇಷ.

ಅವರಲ್ಲಿ ಪಂಢರಾಪುರದ ವಿಠ್ಠಲನೂ ಸೇರಿದ್ದಾನೆ. ಆಷಾಢ ಏಕಾದಶಿ ಮಹಾ ರಾಷ್ಟ್ರದ ಮಹಾ ಸಾಂಸ್ಕೃತಿಕ ವೈಭವಗಳಲ್ಲಿ ಒಂದು. ಕರ್ನಾಟಕ ಮೂಲದ ವಿಠ್ಠಲನ ವೃತ್ತಾಂತ ಹಾಗೂ ವಾರಕರಿ ಸಂಪ್ರದಾಯವು ಬಹಳ ಕುತೂಹಲಕಾರಿ ವಿಷಯಗಳನ್ನು ಒಳಗೊಂಡಿವೆ.

ವಾರಕರಿ ಸಂಪ್ರದಾಯವನ್ನು ಆಚರಿಸುವವರ ಸಂಖ್ಯೆ ಲಕ್ಷ ಲಕ್ಷಗಳು ಎಂಬುದು ಒಂದು ವಿಸ್ಮಯ! ‘ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ’ ಎಂಬುದಾಗಿ ಪುರಂದರದಾಸರು ಕೃಷ್ಣನನ್ನು ಪರಿ ಪರಿಯಾಗಿ ಕೊಂಡಾಡಿದ್ದಾರೆ. ಈ ಮಾತು ಪಂಡರಾಪುರದ ವಿಠ್ಠಲನಿಗೂ ಚೆನ್ನಾಗಿ ಅನ್ವಯಿಸುತ್ತದೆ. ವಿಠ್ಠಲ ಅಖಂಡ ಮಹಾರಾಷ್ಟ್ರದ ಜನಪ್ರಿಯ ದೇವರು.

ಕರ್ನಾಟಕವೂ ಸೇರಿದಂತೆ ಇತರ ರಾಜ್ಯ ಗಳಲ್ಲೂ ಅವನ ಭಕ್ತಾಭಿಮಾನಿಗಳ ಗಡಣ ದೊಡ್ಡದು. ಜ್ಞಾನೇಶ್ವರ, ತುಕಾರಾಮ, ಮುಕ್ತಾ ಬಾಯಿ, ಏಕನಾಥರಿಂದ ತೊಡಗಿ ನೀಳೋಬಾವ ರೆಗಿನ ಎಲ್ಲ ಸಂತ ಕವಿಗಳು ವಿಠ್ಠಲನ ಚರಣ ಕಮಲ ದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡ ವರೆ ಆಗಿದ್ದಾರೆ. ಅವರು ವಿಠ್ಠಲನನ್ನು ಮಾತೆಯಾಗಿ ಸ್ವೀಕಾರ ಮಾಡಿಕೊಂಡರು.

ಇದನ್ನೂ ಓದಿ: B S Shivanna Column: ಮಂದಿರ, ಮಸೀದಿ, ಚರ್ಚ್‌ಗಳಲ್ಲೂ ಅಂಬೇಡ್ಕರ್ ಭಾವಚಿತ್ರ ಬರಲಿ

ನೀನು ನನ್ನ ತಾಯಿ/ (ಮಾವುಲಿ) ನಾನು ನಿನ್ನ ಕೂಸು/ಪ್ರೇಮದ ತೊರೆಯನು ಹರಿಸೋ ಪಾಂಡು ರಂಗ ಎಂಬುದು ಎಲ್ಲ ಮರಾಠಿ ಸಂತರ ಆರ್ತನಾದ, ಆಗ್ರಹ. ಅವರು ವಿಠ್ಠಲನನ್ನು ಬೌದ್ಧ, ಜಿನ ಪುತ್ರ, ವಿಷ್ಣುಸಹಿತ ಶಿವ, ದಿಗಂಬರ, ಕಾನಡಾ, ಕರ್ನಾಟಕೂ ಎಂದೆಲ್ಲ ಕರೆದು ಸ್ತುತಿಸಿ ಸಮಾಧಾನ ಪಟ್ಟಿದ್ದಾರೆ.

ವಿಠ್ಠಲ ಸಂಪ್ರದಾಯದ ಪ್ರಧಾನ ಆಚರಣೆಗಳಲ್ಲಿ ‘ವಾರಿ’ಯೂ ಒಂದು. ಭಕ್ತಿ ಹಾಗೂ ಪ್ರೇಮದ ಅನುಭೂತಿಯನ್ನು, ಸದಾಚಾರ ಜೀವನದ ಪ್ರವಾಸವನ್ನು ತೆರೆದು ತೋರುವ ಈ ‘ವಾರಿ’ ಸಂಪ್ರ ದಾಯ ಮಹಾರಾಷ್ಟ್ರದ ಲೋಕ ಧರ್ಮವಾಗಿದೆ. ಜಯ ಜಯ ರಾಮಕೃಷ್ಣ ಹರಿ ಎಂಬ ಮಹಾ ಮಂತ್ರದೊಂದಿಗೆ ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ತಮ್ಮ ಆರಾಧ್ಯ ದೈವ ವಿಠ್ಠಲನ ಭೇಟಿಗಾಗಿ ಕುಣಿದು ಕುಪ್ಪಳಿಸಿ ಬಂದು ಮಾವುಲಿಯ ಚರಣಕಮಲಗಳಲ್ಲಿ ಜೀವನದ ಪರಮಾರ್ಥವನ್ನು ಕಾಣುತ್ತಾರೆ. ಇಂದಿಗೂ ವಿಠ್ಠಲ ಭಕ್ತಿಯ ಧಾರೆ ಓತಪ್ರೋತವಾಗಿ ಅಖಂಡ ಮಹಾ ರಾಷ್ಟ್ರದ ತುಂಬೆಲ್ಲ ಹರಿದು ಬಂದಿದೆ!

ವಿಠ್ಠಲ ಬಹುರೂಪಿ, ಪ್ರೇಮ ಸ್ವರೂಪಿ. ಆತ ನಾದಪ್ರಿಯ, ದೀನಬಂಧು. ಅವನು ಲೋಕಸಖ. ಕೃಷ್ಣನೇ ವಿಠ್ಠಲನ ರೂಪದಲ್ಲಿ ಬಂದು ಪಂಢರಾಪುರದಲ್ಲಿ ನೆಲೆಸಿದ್ದಾನೆ ಎಂಬುದು ಸಂತರ ಬಲವಾದ ನಂಬಿಕೆ. ಇವತ್ತಿನ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಢರಾಪುರದ ಚಂದ್ರ ಭಾಗಾ ನದಿ ತೀರದಲ್ಲಿ ಭಕ್ತರಿಗಾಗಿ ಕಟಿಯಲ್ಲಿ ಕರವಿಟ್ಟು ಇಟ್ಟಂಗಿ ಮೇಲೆ ನಿಂತ ಪಾಂಡುರಂಗನ ಕಥೆ, ಮಹಾತ್ಮೆ, ಮಹಿಮೆ ಬಹು ರೋಚಕ.

ಕನ್ನಡನಾಡಿನ ವಿಠ್ಠಲ

ವಿಠ್ಠಲ ಮೂಲತಃ ಕರ್ನಾಟಕದವನು, ಅನಂತರ ಅವನು ಪಂಢರಾಪುರಕ್ಕೆ ಬಂದು ನೆಲೆ ನಿಂತ ಎಂಬುದಾಗಿ ಮರಾಠಿ ಸಂತರೇ ಹೇಳಿದ್ದಾರೆ. ಕಾನಡಾ ಹೋ ವಿಠ್ಠಲ ಕರ್ನಾಟಕೂ, ತ್ಯಾನೇ ಮಜ ಲಾವಿಲಾ ವೇಧು.. ಕನ್ನಡದ ಈ ವಿಠ್ಠಲ ನನ್ನ ಮನಸ್ಸನ್ನು ಸೆಳೆದುಕೊಂಡನು ಎಂಬುದಾಗಿ ಜ್ಞಾನ ದೇವರು ಗಟ್ಟಿ ಧ್ವನಿಯಲ್ಲಿ ಅರುಹಿದ್ದಾರೆ.

ಸಂತ ಏಕನಾಥರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ತೀರ್ಥ ಕಾನಡೇ, ದೇವ ಕಾನಡೇ, ಕ್ಷೇತ್ರ ಕಾನಡೆ, ವಿಠ್ಠಲ ಕಾನಡೇ’ ಎಂದು ಉದ್ಗಾರವೆತ್ತಿದ್ದಾರೆ. ರಾಷ್ಟ್ರಕೂಟರ ಕಾಲದಲ್ಲಿ ಈ ವಿಠ್ಠಲ ಮಂದಿರ ಸ್ಥಾಪನೆಯಾದಂತೆ ತಿಳಿಯಲಾಗಿದೆ. ಕ್ರಿ.ಶ. 1236ರ ಸೋಮೇಶ್ವರನ ಶಾಸನದಲ್ಲಿ ‘ಪಂಢರಗೆ ಯ ಶ್ರೀ ವಿಠ್ಠಲ ದೇವರ’ ಉಲ್ಲೇಖವಿದೆ. ಇಲ್ಲಿನ ಕನ್ನಡ ಶಾಸನಗಳಲ್ಲಿ ಪಂಢರಾಪುರವನ್ನು ‘ಪಂಢರಗೆ’ ಎಂದೇ ಕರೆಯಲಾಗಿದೆ.

ಇವತ್ತಿಗೂ ಕರ್ನಾಟಕದ ಎಲ್ಲೆಡೆಗಳಿಂದ ಭಕ್ತರು ತಮ್ಮ ಪರಮಪ್ರಿಯ ಪಾಂಡುರಂಗನ ದರ್ಶನಕ್ಕೆ ಧಾವಿಸಿ ಬರುವುದನ್ನು ಕಾಣಬಹುದು. ಕರ್ನಾಟಕದ ಹರಿದಾಸರು ವಿಠಲಭಕ್ತರು. ಪಂಢರಾಪುರ ವಿಠಲ ಭಕ್ತರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಮಹಾಕ್ಷೇತ್ರವಾಗಿತ್ತು. ಕರ್ನಾಟಕದಂತೆ ಮಹಾರಾಷ್ಟ್ರ ದಲ್ಲಿಯೂ ಜ್ಞಾನೇಶ್ವರನಿಂದ ಮೊದಲುಗೊಂಡು ಸಂತರೆಲ್ಲ ಪಂಡರಪುರದ ಕಡೆಗೆ ಆಕರ್ಷಿತ ರಾಗಿದ್ದರು. ‘ಜ್ಞಾನೇಶ್ವರ ಮೊದಲಾದ ಸಂತರ ವರ್ಣನೆಯ ಮೇರೆಗೆ ಈ ಕ್ಷೇತ್ರ ಆ ಕಾಲಕ್ಕೆ ಕರ್ನಾಟಕ ದಲ್ಲಿತ್ತೆಂದು ಕಾಣುತ್ತದೆ’ ಎಂಬುದು ಸಂಶೋಧಕ ಜೋಶಿ, ಶಂಬಾ ಅವರ ನಿಲುವು.

ಪುರಾತನ ಪಂಡರಗೆ ಈಗಿನ ಪಂಢರಪುರವು ವಿಠಲದೇವತೆಯ ಗ್ರಾಮ. ಇದಕ್ಕೆ ಶಾಸನಗಳಲ್ಲಿ ಪಂಡರಗೆ ಎಂದು ಕರೆಯಲಾಗಿದೆ. ಮಂಡರಗೆ, ಚಟ್ಟರಗೆ, ಎಂಬಂತೆ ಪಂಡರಗೆ ಎಂಬುದು ಆ ಕಾಲದ ಗ್ರಾಮನಾಮ ನಿರ್ದೇಶನ ಪದ್ಧತಿಗೆ ಸರಿಯಾಗಿಯೇ ಇದೆ.

ಮುಂಡರು, ಚಟ್ಟರುಗಳ ಹಾಗೆ ಪಂಡರು ಹೆಸರಿನ ಜನಾಂಗದ ನೆಲೆಯೇ ಪಂಡರಗೆ ಇಂದಿನ ಪಂಡರಪುರ ಎಂಬುದು ಸಂಶೋಧಕ ಕಲಬುರ್ಗಿ ಅವರ ಅಭಿಪ್ರಾಯ. ಮಹಾರಾಷ್ಟ್ರದ ಕನ್ನಡ ಶಾಸನಗಳಲ್ಲಿ ನಿಂಬರಗಿ, ನಾಗರಹಾಳ, ಉಂಬರವಾಣಿ ಮೊದಲಾದ ಸ್ಥಳನಾಮಗಳು ದಾಖಲಾಗಿವೆ. ಇವು ಜನಾಂಗ ವಾಚಿಗಳಿಂದ ರೂಪುಗೊಂಡವು ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ.

ಹಂಪಿಯಲ್ಲಿ ಹದಿನಾರನೆಯ ಶತಮಾನದಲ್ಲೇ ವಿಠ್ಠಲ ದೇವಾಲಯ ಸ್ಥಾಪನೆಯಾದುದಕ್ಕೆ ಖಚಿತ ಪುರಾವೆಗಳು ಸಿಗುತ್ತವೆ. ವಿಜಯನಗರದ ಅರಸರಿಗೂ ವಿಠ್ಠಲ ಪ್ರಿಯನಾದ ದೈವ. ಪುರಂದರ ಮೊದಲಾದ ದಾಸವರೇಣ್ಯರು ವಿಠ್ಠಲ ಎಂಬ ಅಂಕಿತವನ್ನು, ಈ ದೇವರನ್ನು ಮನೆ ಮನಕ್ಕೆ ಮುಟ್ಟಿಸಿದರು. ತುಂಗಾತೀರದ ಈ ದೇವರು ಚಂದ್ರಭಾಗಾ ತೀರದಲ್ಲಿ ಬಂದು ನೆಲೆನಿಂತು ಮಾಡಿದ ಪವಾಡಗಳ ಬಗೆಗೆ ಭರಪೂರ ಕಥೆಗಳು ಐತಿಹ್ಯಗಳು ಚಾಲ್ತಿಯಲ್ಲಿವೆ.

ಸಂತ ಕಬೀರ ಸಹ ನಾಮದೇವನ ಕರೆಯ ಮೇರೆಗೆ ಪಂಢರಾಪುರಕ್ಕೆ ಭೇಟಿ ನೀಡಿ ದರ್ಶನ ಪಡೆದು ವಿಠ್ಠಲನ ಗುಣಗಾನ ಮಾಡಿದ್ದು ವಿಶೇಷ. ವಿಠ್ಠಲ ರುಕುಮಾ ಯಿಯೇ ತಂದೆ ತಾಯಿ. ಪಂಢರಾ ಪುರವೇ ತವರು ಮನೆ. ಪ್ರತಿ ವರ್ಷವೂ ಅಲ್ಲಿಗೆ ಹೋಗಿ ತವರು ಮನೆಯ ಸುಖವನ್ನು ಪಡೆಯ ಬೇಕು ಎಂಬ ಪ್ರಬಲ ವಾಂಛೆ ‘ವಾರಕರಿ’ ಗಳದು. ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ, ಜನಾಬಾಯಿ, ಚೋಕಾಮೇಳ ಮೊದಲಾದ ಸಂತ ಕವಿಗಳು ಅಭಂಗವಾಣಿಯ ಮೂಲಕ ವಿಠ್ಠಲ ನಾಮ ಸಂಕೀರ್ತನೆ ಮಾಡಿ ದೇವತಾಸ್ವರೂಪ ಪಡೆದಿದ್ದಾರೆ.

ಪಂಢರಾಪುರದ ವಿಠ್ಠಲ ಭಕ್ತ ವತ್ಸಲ. ಆತ ಬಡವರ ದೇವರು. ಭಕ್ತ ಮಂಡಳಿ ಆತನನ್ನು ಮುಟ್ಟಿ ಮುದ್ದಾಡ ಬಹುದು. ಅವನ ಸನ್ನಿಽಯಲ್ಲಿ ಎಲ್ಲರೂ ಸಮಾನರು. ಆತನಿಗೆ ಮಡಿಮೈಲಿಗೆಯ ಗೊಡವೆಯಿಲ್ಲ. ಭೂಪತಿ ವಿಠ್ಠಲರು ತಮ್ಮ ಒಂದು ಕೀರ್ತನೆಯಲ್ಲಿ, ‘ಈ ಪರಿಯ ಸುಲಭ ಇನ್ನಾವ ದೇವರುಂಟು, ಗೋಪಾಲಕೃಷ್ಣ ಪಂಢರೀನಾಥನಲ್ಲದೇ, ದುಡ್ಡಿನವ ತಿಮ್ಮಪ್ಪ ದೊಡ್ಡ ಗುಡ್ಡದಿ ನಿಂತ, ಕಡಲ ದಡದಲಿ ನಿಂತ ಮಡಿವಂತ ಕೃಷ್ಣ, ಬಡವರೊಡೆಯನು ನಡದ ಮೇಲೆ ಕೈಇಟ್ಟು ನಿಂತ’ ಎಂಬುದಾಗಿ ಪಾಂಡುರಂಗ ವಿಠ್ಠಲನ ಮಹಿಮೆಯನ್ನು ಜಗಜ್ಜಾಹೀರು ಗೊಳಿಸಿದ್ದಾರೆ. ಕರ್ನಾಟಕದ ಹರಿದಾಸರಿಗೆ ಪಾಂಡುರಂಗ ವಿಠಲ ಅತಿ ಪ್ರೀತಿಯ ದೈವ. ವಿಷ್ಣು ಪಾರಮ್ಯವನ್ನು ಸಾರುವ, ದ್ವೈತ ಮತನಿಷ್ಠೆಯ ಹರಿದಾಸರಿಗೆ ಪಂಢರಿರಾಯ ಆರಾಧ್ಯ ದೈವ.

ಹೀಗಾಗಿಯೇ ಕನ್ನಡದ ಅನೇಕ ದಾಸರು ತಮ್ಮಅಂಕಿತವಾಗಿ ವಿಠ್ಠಲ ನನ್ನು ಆರಿಸಿಕೊಂಡರು. ಪಂಢರಪುರದ ವಿಠ್ಠಲನ ಕಥೆ ರೋಚಕವಾದುದು. ‘ಒಂದು ಕಾಲದಲ್ಲಿ ಕನ್ನಡದ ನೆಲದೊಳಗಿನ ‘ಕಾನಡಿ ವಿಠಲ’ ಕನ್ನಡ ಮರಾಠಿ ಭಕ್ತರೆಲ್ಲರಿಗೂ ತಂದೆ-ತಾಯಿ-ಬಂಧು- ಬಳಗ. ಕನ್ನಡದ ಹರಿದಾಸರ ಆರಾಧ್ಯ ದೈವ, ವಿಠಲನ ಅಂಕಿತ ಬಳಸುವ ಮೂಲಕ, ಅವನ ಅಂಕೆಗೆ ಒಳಗಾದವರಾಗಿ ದ್ದಾರೆ’ ಎಂಬುದಾಗಿ ಪ್ರೊ. ಎ. ವಿ.ನಾವಡ ಅವರು ಸರಿಯಾಗಿಯೇ ಗುರುತಿಸಿದ್ದಾರೆ.

ವಾರಕರಿ ಸಂಪ್ರದಾಯ

ವಿಠ್ಠಲ ಪಂಢರಾಪುರದ ಅಧಿಪತಿ. ಅವನು ಜನಮಾನಸದಲ್ಲಿ ಪಡೆದ ಜನಪ್ರಿಯತೆ ಬಲು ದೊಡ್ಡದು. ದೇವತಾ ಸಾಕ್ಷಿಯಾಗಿ ಭಕ್ತ ಭಕ್ತರನ್ನು ಭೇಟಿಯಾಗುವ ಮಂಗಳಸ್ಥಾನವೆಂದರೆ ‘ವಾರಿ’. ವಿಠ್ಠಲ ಪರಂಪರೆಯಲ್ಲಿ ವಾರಿಗೆ ಮೊದಲ ಆದ್ಯತೆ. ಮಹಾರಾಷ್ಟ್ರದ ‘ವಾರಕರಿ’ ಪರಂಪರೆಗೆ ಏಳು ಎಂಟು ಶತಮಾನಗಳ ಇತಿಹಾಸವಿದೆ. ಪಂಡರಾಪುರದ ದೇವರ ‘ವಾರಿ’ ಮತ್ತು ಆಳಂದಿಯ ಸಂತರ ‘ವಾರಿ’ ಇವೆರಡು ಪ್ರಮುಖವಾದವು.

ಅಳಂದಿಯಿಂದ ಜ್ಞಾನೇಶ್ವರ, ದೇಹೂದಿಂದ ತುಕಾರಾಮ, ಪೈಠಣದಿಂದ ಏಕನಾಥ, ತ್ರಿಯಂಬ ಕೇಶ್ವರದಿಂದ ನಿವೃತ್ತಿನಾಥ, ಸಾಸವಾಡದಿಂದ ಸೋಪಾನದೇವ, ಜಳಗಾಂವದಿಂದ ಮುಕ್ತಾಬಾಯಿ, ತೇರದಿಂದ ಗೋರ ಕುಂಬಾರ , ಅಂಬೆಜೋಗಾಯಿಯಿಂದ ಚಾಂಗದೇವ, ಭಾನುದಾಸ, ಸಜ್ಜನಗಡ ದಿಂದ ರಾಮದಾಸ ಮೊದಲಾದ ‘ಪಾಲ್ಕಿ’ಗಳು ವಿಜೃಂಭಣೆಯಿಂದ ಜಾತ್ರೆಯೋಪಾದಿಯಲ್ಲಿ ಸಾಗುವ ಪರಿಯನ್ನು ನೋಡಲು ಎರಡು ಕಣ್ಣು ಸಾಲದು.

ಮುಗಿಲು ಮುಟ್ಟುವ ವಿಠ್ಠಲನ ಭಜನಾ ಲಹರಿ, ಲೋಕ ನೃತ್ಯಗಳೊಡನೆ ಸಾಗಿ ಬರುವ ಜನ ಸಾಗರ, ಭಕ್ತಿ ಪ್ರವಾಹದ ವಿರಾಟ್ ದರ್ಶನ ಮನಮೋಹಕವಾದುದು. ಇದು ಉದಾತ್ತ ವೈಷ್ಣವ ಸಂಪ್ರದಾಯ.

‘ವಾರಿ’ ಎಂದರೆ ಪಂಢರಾಪುರಕ್ಕೆ ಹೋಗುವ ಯಾತ್ರೆ. ಭಾಗವತ ಸಿದ್ಧಾಂತದ ವಿಚಾರಗಳನ್ನು ಬದುಕಿನ ಸಾರ್ಥಕತೆಯನ್ನು ಜನಮನಕ್ಕೆ ಮುಟ್ಟಿಸುವುದು ‘ವಾರಕರಿ ಸಂಪ್ರದಾಯ’ದ ಮುಖ್ಯ ಮನೀಷೆಗಳಲ್ಲಿ ಒಂದು. ಇಪ್ಪತ್ತು ದಿನಗಳವರೆಗೆ ಅಖಂಡವಾಗಿ ಹರಿನಾಮ ಸ್ಮರಣೆ ಮಾಡುತ್ತಾ ಸಾಗುವ ವಾರಿ ಭಕ್ತಿ, ಪ್ರೀತಿ, ಸಂಯಮ, ಶಾಂತಿ, ಶ್ರದ್ಧೆ, ಅಹಿಂಸೆ ಮೊದಲಾದ ಸದ್ಗುಣಗಳ ಉಪಾಸನೆಯೂ ಆಗಿದೆ. ವಿಠ್ಠಲ ಚೈತನ್ಯರೂಪಿ.

ಅವನ ದರ್ಶನಕ್ಕಾಗಿ ಮಾಡುವ ಉನ್ನತ ಪ್ರವಾಸವೆಂದರೆ ‘ವಾರಿ’. ಆಷಾಢ ಏಕಾದಶಿ, ಕಾರ್ತಿಕ ಏಕಾದಶಿ ಸತ್ರಗಳಲ್ಲಿ, ಲಕ್ಷಾಂತರ ಜನರು ಪಂಡರಾಪುರಕ್ಕೆ ಬಂದು ವಿಠಲನ ದರ್ಶನ ಪಡೆದು ಪುನೀತರಾಗುವ ಪರಿ ವಿಸ್ಮಯ ಹುಟ್ಟಿಸುತ್ತದೆ. ಇದೊಂದು ಆಧ್ಯಾತ್ಮಿಕ ಸಮಾನತೆಯ ಬಹುದೊಡ್ಡ ರೂಪಕವೂ ಹೌದು. ಮನುಷ್ಯರು ಮನುಷ್ಯರ ಜೊತೆ ಸೇರಬೇಕು, ಪರಸ್ಪರ ಆದರ ಗೌರವಗಳಿಂದ ಬಾಳಬೇಕು, ಅದಕ್ಕಾಗಿ ‘ವಾ’ ನಿರ್ಮಾಣವಾಗಿದೆ ಎಂಬುದು ‘ವಾರಕರಿ’ಗಳ ಬಲವಾದ ನಂಬಿಕೆ.

ಜಾತಿ ಪಾತಿ, ಆ ಭಾಷೆ ಈ ಭಾಷೆ, ಪ್ರಾಂತ ಪಂಗಡ ಅದು ಇದು ಅದು ಎನ್ನದೇ ಶ್ರಮಿಕ ರೈತಾಪಿ ವರ್ಗ, ಶ್ರೀಸಾಮಾನ್ಯರು ಮುಂದಾಗಿ ವಿಠ್ಠಲನ ಉಪಾಸನೆಯಲ್ಲಿ ತೊಡಗಿರುವ ಪಂಢರಾಪುರ ಭಾವೈಕ್ಯದ ಮಹಾಸಂಗಮವೂ ಹೌದು

ವಿಠ್ಠಲ ಕರ್ನಾಟಕದವನು !

ವಿಜಯನಗರದಿಂದ ವಿಠ್ಠಲನ ಮೂರ್ತಿಯನ್ನು ಪಂಡರಪುರಕ್ಕೆ ಕೊಂಡೊಯ್ದರು ಎಂಬುದು ಎಲ್ಲರಿಗೂ ಒಪ್ಪಿತವಾದ ಸ್ವೀಕೃತ ವಿದ್ಯಮಾನ. ಪಂಢರಪುರ ಇಂದಿಗೂ ಮಹಾರಾಷ್ಟ್ರ-ಕರ್ನಾಟಕ ಸೀಮೆಯ ಮೇಲಿದೆ. ಪಂಢರಾಪುರ ಸನಿಹದ ಮಂಗಳವೇಡೆಯಂತೂ ಬಸವೇಶ್ವರನ ಆದ್ಯ ಕಾರ್ಯಕ್ಷೇತ್ರವಾಗಿತ್ತು. ಪಂಢರಪುರದ ಪ್ರಾಚೀನ ಹೆಸರಾದ ‘ಪಂಡರಗೆ’ ಎನ್ನುವದು ಸಂಪೂರ್ಣ ಕನ್ನಡವೇ ಆಗಿದೆ. ವಿಠ್ಠಲನ ಬಹಳಷ್ಟು ಹಕ್ಕುದಾರ ಸೇವಕರು ಕರ್ನಾಟಕದವರು. ಅವರ ಮೂಲ ಕುಲದೇವರು ಕರ್ನಾಟಕದಲ್ಲೇ ಇದೆ. ಅಲ್ಲದೆ, ಇನ್ನೆಷ್ಟೋ ಸಣ್ಣ-ಪುಟ್ಟ ಸಂಗತಿಗಳು ಹೇಗಿವೆ ಯೆಂದರೆ, ಅದೆಲ್ಲ ವಿಠ್ಠಲನ ಕನ್ನಡತನವನ್ನು ನಿಸ್ಸಂದೇಹವಾಗಿ ಘೋಷಿಸುತ್ತವೆ ಎಂಬುದಾಗಿ ಮರಾಠಿಯ ಪ್ರಸಿದ್ಧ ಸಂಶೋಧಕ ರಾ.ಚಿ.ಡೇರೆ ಅವರು ಆಧಾರ ಸಹಿತವಾಗಿ ತೋರಿಸಿಕೊಟ್ಟಿದ್ದಾರೆ.

ವಿಜಯನಗರದ ಮೂರ್ತಿ

ಮರಾಠಿ ಸಂತ ಸಾಹಿತ್ಯದಲ್ಲಿ ಭಾನು ದಾಸನು ವಿಠಲ ಮೂರ್ತಿಯನ್ನು ವಿಜಯ ನಗರದಿಂದ ಪಂಡರಾಪುರಕ್ಕೆ ಒಯ್ದನೆಂಬ ವಿವರ ಸಿಗುತ್ತದೆ. ಈ ಮೂರ್ತಿಯ ಸ್ಥಳಾಂತರಕ್ಕೆ ಕಾರಣ ವೇನೆಂಬುದು ಖಚಿತವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ದಂತಕಥೆಗಳೂ ಚಾಲ್ತಿಯಲ್ಲಿ ಇವೆ. ಇದರ ಐತಿಹಾಸಿಕ ಮುಖ ಯಾವುದೆಂಬುದನ್ನು ಕಂಡುಕೊಳ್ಳಬೇಕಾಗಿದೆ. ಕನ್ನಡ ಕವಿ ಚೌಂಡರಸ ಪಾಂಡು ರಂಗನನ್ನು ಅಭಂಗ ವಿಠ್ಠಲ ಎಂದು ಕರೆದು ಅವನ ಮಹಿಮೆಯನ್ನು ಬಣ್ಣಿಸಿದ್ದಾನೆ. ಇವತ್ತಿಗೂ ಪಂಢರಾಪುರ ಕರ್ನಾಟಕ, ಮಹಾರಾಷ್ಟ್ರ ಎಂಬ ಭಾಷಾ ಭೇದವಿಲ್ಲದೇ ಅನುಗಾಲವೂ ಭಕ್ತರನ್ನು ಸೆಳೆಯುವ ಭವ್ಯ ಭಕ್ತಿಧಾಮವೂ ಆಗಿದೆ.

ಆಷಾಢದ ಮಹಾಮೇಳ!

ಪ್ರತಿವರ್ಷ, ಆಷಾಢ ತಿಂಗಳಿನಲ್ಲಿ, ವಾರಿ ಯಾತ್ರೆಯು -ಂಡರಪುರಕ್ಕೆ ಸಾಗುತ್ತದೆ; ಏಕಾದಶಿಯಂದು ಎಲ್ಲರೂ ಅಲ್ಲಿ ಸೇರುವ ಉತ್ಸಾಹ, ಭಕ್ತಿಯ ಮಹಾಪೂರ. ಇದನ್ನು ವಾರಕರಿ ಸಂಪ್ರದಾಯವೆಂದು ಕರೆಯಲಾಗಿದ್ದು, 14ನೆಯ ಶತಮಾನಕ್ಕಿಂತಲೂ ಹಿಂದಿನಿಂದಲೇ ವಾರಿ ಯಾತ್ರೆ ನಡೆಯುತ್ತಿತ್ತೆನ್ನು ವುದಕ್ಕೆ ಖಚಿತ ದಾಖಲೆಗಳಿವೆ. ಮಹಾರಾಷ್ಟ್ರದಲ್ಲಿ ಇಂದಿಗೂ ಈ ಭಕ್ತಿಪಂಥವು ಅದೆಷ್ಟು ಜನಪ್ರಿಯವೆಂದರೆ, ಲಕ್ಷಲಕ್ಷ ಜನರು ಹನ್ನೊಂದಕ್ಕೂ ಹೆಚ್ಚು ದಿನ ಕಾಲ್ನಡಿಗೆಯಲ್ಲೇ ಪಂಡರಪುರ ದತ್ತ ಹೊರಡುತ್ತಾರೆ. ಇದು ಆಷಾಢದ ಬಹುದೊಡ್ಡ ಮೇಳ, ಭಕ್ತಿಯ ಸಮಾಗಮ. ಕಾಲ್ನಡಿಗೆಯಲ್ಲಿ ಸಾಗುವವರ ಕಾಲನ್ನು ಜನಸಾಮಾನ್ಯರು ಪಾದಪೂಜೆ ಮಾಡಿ ಗೌರವಿಸುವುದು ಇನ್ನೊಂದು ವಿಶೇಷ. ವಾರಕರಿಯು ಮಹಾರಾಷ್ಟ್ರದ ಒಂದು ಅದ್ಭುತ ಆಚರಣೆ ಎಂಬುದರಲ್ಲಿ ಅನುಮಾನ ವಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಎರಡು ಸಾವಿರ ವರ್ಷಗಳಿಗೂ ಮೀರಿದ ಸಂಬಂಧವಿದೆ. ದೇವಾಲಯ ರಚನೆ ಕರ್ನಾಟಕ ಸಂಸ್ಕೃತಿಯ ಪ್ರಧಾನ ಲಕ್ಷಣಗಳಲ್ಲಿ ಒಂದು. ವಿಶಾಲ ಕರ್ನಾಟಕದಲ್ಲಿ ಕನ್ನಡ ರಾಜವಂಶಗಳು ಕಟ್ಟಿಸಿದ ದೇವಾಲಯಗಳ ಸಂಖ್ಯೆ ಸಾವಿರಾರು.

ಕರ್ನಾಟಕ ಮೂಲದ ಅನೇಕ ದೇವರು ಇತರ ರಾಜ್ಯಗಳಲ್ಲೂ ಪ್ರಮುಖ ದೇವತೆಗಳಾಗಿ ಕುಲದೇವ ರಾಗಿ ಆರಾಧನೆಗೊಳ್ಳುತ್ತಿರುವುದು ವಿಶೇಷ. ಅವರಲ್ಲಿ ಪಂಢರಾಪುರದ ವಿಠ್ಠಲನೂ ಸೇರಿದ್ದಾನೆ. ಆಷಾಢ ಏಕಾದಶಿ ಮಹಾ ರಾಷ್ಟ್ರದ ಮಹಾ ಸಾಂಸ್ಕೃತಿಕ ವೈಭವಗಳಲ್ಲಿ ಒಂದು. ಕರ್ನಾಟಕ ಮೂಲದ ವಿಠ್ಠಲನ ವೃತ್ತಾಂತ ಹಾಗೂ ವಾರಕರಿ ಸಂಪ್ರದಾಯವು ಬಹಳ ಕುತೂಹಲಕಾರಿ ವಿಷಯ ಗಳನ್ನು ಒಳಗೊಂಡಿವೆ. ವಾರಕರಿ ಸಂಪ್ರದಾಯವನ್ನು ಆಚರಿಸುವವರ ಸಂಖ್ಯೆ ಲಕ್ಷ ಲಕ್ಷಗಳು ಎಂಬುದು ಒಂದು ವಿಸ್ಮಯ!

‘ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ’ ಎಂಬುದಾಗಿ ಪುರಂದರ ದಾಸರು ಕೃಷ್ಣನನ್ನು ಪರಿ ಪರಿಯಾಗಿ ಕೊಂಡಾಡಿದ್ದಾರೆ. ಈ ಮಾತು ಪಂಡರಾಪುರದ ವಿಠ್ಠಲನಿಗೂ ಚೆನ್ನಾಗಿ ಅನ್ವಯಿಸು ತ್ತದೆ. ವಿಠ್ಠಲ ಅಖಂಡ ಮಹಾರಾಷ್ಟ್ರದ ಜನಪ್ರಿಯ ದೇವರು. ಕರ್ನಾಟಕವೂ ಸೇರಿದಂತೆ ಇತರ ರಾಜ್ಯ ಗಳಲ್ಲೂ ಅವನ 0ಭಕ್ತಾಭಿಮಾನಿಗಳ ಗಡಣ ದೊಡ್ಡದು. ಜ್ಞಾನೇಶ್ವರ, ತುಕಾರಾಮ, ಮುಕ್ತಾ ಬಾಯಿ, ಏಕನಾಥರಿಂದ ತೊಡಗಿ ನೀಳೋಬಾವ ರೆಗಿನ ಎಲ್ಲ ಸಂತ ಕವಿಗಳು ವಿಠ್ಠಲನ ಚರಣ ಕಮಲ ದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರೆ ಆಗಿದ್ದಾರೆ. ಅವರು ವಿಠ್ಠಲನನ್ನು ಮಾತೆಯಾಗಿ ಸ್ವೀಕಾರ ಮಾಡಿಕೊಂಡರು.

ನೀನು ನನ್ನ ತಾಯಿ/ (ಮಾವುಲಿ) ನಾನು ನಿನ್ನ ಕೂಸು/ಪ್ರೇಮದ ತೊರೆಯನು ಹರಿಸೋ ಪಾಂಡು ರಂಗ ಎಂಬುದು ಎಲ್ಲ ಮರಾಠಿ ಸಂತರ ಆರ್ತನಾದ, ಆಗ್ರಹ. ಅವರು ವಿಠ್ಠಲನನ್ನು ಬೌದ್ಧ, ಜಿನಪುತ್ರ, ವಿಷ್ಣುಸಹಿತ ಶಿವ, ದಿಗಂಬರ, ಕಾನಡಾ, ಕರ್ನಾಟಕೂ ಎಂದೆಲ್ಲ ಕರೆದು ಸ್ತುತಿಸಿ ಸಮಾಧಾನ ಪಟ್ಟಿದ್ದಾರೆ.

ವಿಠ್ಠಲ ಸಂಪ್ರದಾಯದ ಪ್ರಧಾನ ಆಚರಣೆಗಳಲ್ಲಿ ‘ವಾರಿ’ಯೂ ಒಂದು. ಭಕ್ತಿ ಹಾಗೂ ಪ್ರೇಮದ ಅನುಭೂತಿಯನ್ನು, ಸದಾಚಾರ ಜೀವನದ ಪ್ರವಾಸವನ್ನು ತೆರೆದು ತೋರುವ ಈ ‘ವಾರಿ’ ಸಂಪ್ರದಾಯ ಮಹಾರಾಷ್ಟ್ರದ ಲೋಕ ಧರ್ಮವಾಗಿದೆ. ಜಯ ಜಯ ರಾಮಕೃಷ್ಣ ಹರಿ ಎಂಬ ಮಹಾಮಂತ್ರದೊಂದಿಗೆ ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ತಮ್ಮ ಆರಾಧ್ಯ ದೈವ ವಿಠ್ಠಲನ ಭೇಟಿ ಗಾಗಿ ಕುಣಿದು ಕುಪ್ಪಳಿಸಿ ಬಂದು ಮಾವುಲಿಯ ಚರಣಕಮಲಗಳಲ್ಲಿ ಜೀವನದ ಪರಮಾರ್ಥವನ್ನು ಕಾಣುತ್ತಾರೆ.

ಇಂದಿಗೂ ವಿಠ್ಠಲ ಭಕ್ತಿಯ ಧಾರೆ ಓತಪ್ರೋತವಾಗಿ ಅಖಂಡ ಮಹಾರಾಷ್ಟ್ರದ ತುಂಬೆಲ್ಲ ಹರಿದು ಬಂದಿದೆ! ವಿಠ್ಠಲ ಬಹುರೂಪಿ, ಪ್ರೇಮ ಸ್ವರೂಪಿ. ಆತ ನಾದಪ್ರಿಯ, ದೀನಬಂಧು. ಅವನು ಲೋಕ ಸಖ. ಕೃಷ್ಣನೇ ವಿಠ್ಠಲನ ರೂಪದಲ್ಲಿ ಬಂದು ಪಂಢರಾಪುರದಲ್ಲಿ ನೆಲೆಸಿದ್ದಾನೆ ಎಂಬುದು ಸಂತರ ಬಲವಾದ ನಂಬಿಕೆ. ಇವತ್ತಿನ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಢರಾಪುರದ ಚಂದ್ರ ಭಾಗಾ ನದಿ ತೀರದಲ್ಲಿ ಭಕ್ತರಿಗಾಗಿ ಕಟಿಯಲ್ಲಿ ಕರವಿಟ್ಟು ಇಟ್ಟಂಗಿ ಮೇಲೆ ನಿಂತ ಪಾಂಡುರಂಗನ ಕಥೆ, ಮಹಾತ್ಮೆ, ಮಹಿಮೆ ಬಹು ರೋಚಕ.

ಕನ್ನಡನಾಡಿನ ವಿಠ್ಠಲ

ವಿಠ್ಠಲ ಮೂಲತಃ ಕರ್ನಾಟಕದವನು, ಅನಂತರ ಅವನು ಪಂಢರಾಪುರಕ್ಕೆ ಬಂದು ನೆಲೆ ನಿಂತ ಎಂಬುದಾಗಿ ಮರಾಠಿ ಸಂತರೇ ಹೇಳಿದ್ದಾರೆ. ಕಾನಡಾ ಹೋ ವಿಠ್ಠಲ ಕರ್ನಾಟಕೂ, ತ್ಯಾನೇ ಮಜ ಲಾವಿಲಾ ವೇಧು.. ಕನ್ನಡದ ಈ ವಿಠ್ಠಲ ನನ್ನ ಮನಸ್ಸನ್ನು ಸೆಳೆದುಕೊಂಡನು ಎಂಬುದಾಗಿ ಜ್ಞಾನದೇವರು ಗಟ್ಟಿ ಧ್ವನಿಯಲ್ಲಿ ಅರುಹಿದ್ದಾರೆ. ಸಂತ ಏಕನಾಥರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ತೀರ್ಥ ಕಾನಡೇ, ದೇವ ಕಾನಡೇ, ಕ್ಷೇತ್ರ ಕಾನಡೆ, ವಿಠ್ಠಲ ಕಾನಡೇ’ ಎಂದು ಉದ್ಗಾರವೆತ್ತಿದ್ದಾರೆ.

ರಾಷ್ಟ್ರಕೂಟರ ಕಾಲದಲ್ಲಿ ಈ ವಿಠ್ಠಲ ಮಂದಿರ ಸ್ಥಾಪನೆಯಾದಂತೆ ತಿಳಿಯಲಾಗಿದೆ. ಕ್ರಿ.ಶ 1236ರ ಸೋಮೇಶ್ವರನ ಶಾಸನದಲ್ಲಿ ‘ಪಂಢರಗೆಯ ಶ್ರೀ ವಿಠ್ಠಲ ದೇವರ’ ಉಲ್ಲೇಖವಿದೆ. ಇಲ್ಲಿನ ಕನ್ನಡ ಶಾಸನಗಳಲ್ಲಿ ಪಂಢರಾಪುರವನ್ನು ‘ಪಂಢರಗೆ’ ಎಂದೇ ಕರೆಯಲಾಗಿದೆ. ಇವತ್ತಿಗೂ ಕರ್ನಾಟಕದ ಎಲ್ಲೆಡೆಗಳಿಂದ ಭಕ್ತರು ತಮ್ಮ ಪರಮಪ್ರಿಯ ಪಾಂಡುರಂಗನ ದರ್ಶನಕ್ಕೆ ಧಾವಿಸಿ ಬರುವುದನ್ನು ಕಾಣಬಹುದು.

ಕರ್ನಾಟಕದ ಹರಿದಾಸರು ವಿಠಲಭಕ್ತರು. ಪಂಢರಾಪುರ ವಿಠಲ ಭಕ್ತರನ್ನು ತನ್ನೆಡೆಗೆ ಸೆಳೆದು ಕೊಳ್ಳುವ ಮಹಾಕ್ಷೇತ್ರವಾಗಿತ್ತು. ಕರ್ನಾಟಕದಂತೆ ಮಹಾರಾಷ್ಟ್ರದಲ್ಲಿಯೂ ಜ್ಞಾನೇಶ್ವರ ನಿಂದ ಮೊದಲುಗೊಂಡು ಸಂತರೆಲ್ಲ ಪಂಡರಪುರದ ಕಡೆಗೆ ಆಕರ್ಷಿತರಾಗಿದ್ದರು. ‘ಜ್ಞಾನೇಶ್ವರ ಮೊದಲಾದ ಸಂತರ ವರ್ಣನೆಯ ಮೇರೆಗೆ ಈ ಕ್ಷೇತ್ರ ಆ ಕಾಲಕ್ಕೆ ಕರ್ನಾಟಕದಲ್ಲಿತ್ತೆಂದು ಕಾಣುತ್ತದೆ’ ಎಂಬುದು ಸಂಶೋಧಕ ಜೋಶಿ, ಶಂಬಾ ಅವರ ನಿಲುವು.

ಪುರಾತನ ಪಂಡರಗೆ

ಈಗಿನ ಪಂಢರಪುರವು ವಿಠಲದೇವತೆಯ ಗ್ರಾಮ. ಇದಕ್ಕೆ ಶಾಸನಗಳಲ್ಲಿ ಪಂಡರಗೆ ಎಂದು ಕರೆಯ ಲಾಗಿದೆ. ಮಂಡರಗೆ, ಚಟ್ಟರಗೆ, ಎಂಬಂತೆ ಪಂಡರಗೆ ಎಂಬುದು ಆ ಕಾಲದ ಗ್ರಾಮನಾಮ ನಿರ್ದೇಶನ ಪದ್ಧತಿಗೆ ಸರಿಯಾಗಿಯೇ ಇದೆ. ಮುಂಡರು, ಚಟ್ಟರುಗಳ ಹಾಗೆ ಪಂಡರು ಹೆಸರಿನ ಜನಾಂಗದ ನೆಲೆಯೇ ಪಂಡರಗೆ ಇಂದಿನ ಪಂಡರಪುರ ಎಂಬುದು ಸಂಶೋಧಕ ಕಲಬುರ್ಗಿ ಅವರ ಅಭಿಪ್ರಾಯ. ಮಹಾರಾಷ್ಟ್ರದ ಕನ್ನಡ ಶಾಸನಗಳಲ್ಲಿ ನಿಂಬರಗಿ, ನಾಗರಹಾಳ, ಉಂಬರವಾಣಿ ಮೊದಲಾದ ಸ್ಥಳನಾಮಗಳು ದಾಖಲಾಗಿವೆ. ಇವು ಜನಾಂಗ ವಾಚಿಗಳಿಂದ ರೂಪುಗೊಂಡವು ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ.

ಹಂಪಿಯಲ್ಲಿ ಹದಿನಾರನೆಯ ಶತಮಾನದಲ್ಲೇ ವಿಠ್ಠಲ ದೇವಾಲಯ ಸ್ಥಾಪನೆಯಾದುದಕ್ಕೆ ಖಚಿತ ಪುರಾವೆಗಳು ಸಿಗುತ್ತವೆ. ವಿಜಯನಗರದ ಅರಸರಿಗೂ ವಿಠ್ಠಲ ಪ್ರಿಯನಾದ ದೈವ. ಪುರಂದರ ಮೊದಲಾದ ದಾಸವರೇಣ್ಯರು ವಿಠ್ಠಲ ಎಂಬ ಅಂಕಿತವನ್ನು, ಈ ದೇವರನ್ನು ಮನೆ ಮನಕ್ಕೆ ಮುಟ್ಟಿಸಿದರು. ತುಂಗಾತೀರದ ಈ ದೇವರು ಚಂದ್ರಭಾಗಾ ತೀರದಲ್ಲಿ ಬಂದು ನೆಲೆ ನಿಂತು ಮಾಡಿದ ಪವಾಡಗಳ ಬಗೆಗೆ ಭರಪೂರ ಕಥೆಗಳು ಐತಿಹ್ಯಗಳು ಚಾಲ್ತಿಯಲ್ಲಿವೆ.

ಸಂತ ಕಬೀರ

ಸಹ ನಾಮ ದೇವನ ಕರೆಯ ಮೇರೆಗೆ ಪಂಢರಾಪುರಕ್ಕೆ ಭೇಟಿ ನೀಡಿ ದರ್ಶನ ಪಡೆದು ವಿಠ್ಠಲನ ಗುಣಗಾನ ಮಾಡಿದ್ದು ವಿಶೇಷ. ವಿಠ್ಠಲ ರುಕುಮಾ ಯಿಯೇ ತಂದೆ ತಾಯಿ. ಪಂಢರಾಪುರವೇ ತವರು ಮನೆ. ಪ್ರತಿ ವರ್ಷವೂ ಅಲ್ಲಿಗೆ ಹೋಗಿ ತವರು ಮನೆಯ ಸುಖವನ್ನು ಪಡೆಯಬೇಕು ಎಂಬ ಪ್ರಬಲ ವಾಂಛೆ ‘ವಾರಕರಿ’ ಗಳದು.

ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ, ಜನಾಬಾಯಿ, ಚೋಕಾಮೇಳ ಮೊದಲಾದ ಸಂತ ಕವಿಗಳು ಅಭಂಗವಾಣಿಯ ಮೂಲಕ ವಿಠ್ಠಲನಾಮ ಸಂಕೀರ್ತನೆ ಮಾಡಿ ದೇವತಾ ಸ್ವರೂಪ ಪಡೆದಿದ್ದಾರೆ. ಪಂಢರಾಪುರದ ವಿಠ್ಠಲ ಭಕ್ತ ವತ್ಸಲ. ಆತ ಬಡವರ ದೇವರು. ಭಕ್ತ ಮಂಡಳಿ ಆತನನ್ನು ಮುಟ್ಟಿ ಮುದ್ದಾಡಬಹುದು. ಅವನ ಸನ್ನಿಧಿಯಲ್ಲಿ ಎಲ್ಲರೂ ಸಮಾನರು. ಆತನಿಗೆ ಮಡಿಮೈಲಿಗೆಯ ಗೊಡವೆಯಿಲ್ಲ. ಭೂಪತಿ ವಿಠ್ಠಲರು ತಮ್ಮ ಒಂದು ಕೀರ್ತನೆಯಲ್ಲಿ, ‘ಈ ಪರಿಯ ಸುಲಭ ಇನ್ನಾವ ದೇವರುಂಟು, ಗೋಪಾಲಕೃಷ್ಣ ಪಂಢರೀನಾಥನಲ್ಲದೇ, ದುಡ್ಡಿನವ ತಿಮ್ಮಪ್ಪ ದೊಡ್ಡ ಗುಡ್ಡದಿ ನಿಂತ, ಕಡಲ ದಡದಲಿ ನಿಂತ ಮಡಿವಂತ ಕೃಷ್ಣ, ಬಡವರೊಡೆಯನು ನಡದ ಮೇಲೆ ಕೈಇಟ್ಟು ನಿಂತ’ ಎಂಬುದಾಗಿ ಪಾಂಡುರಂಗ ವಿಠ್ಠಲನ ಮಹಿಮೆಯನ್ನು ಜಗಜ್ಜಾಹೀರು ಗೊಳಿಸಿದ್ದಾರೆ. ಕರ್ನಾಟಕದ ಹರಿದಾಸರಿಗೆ ಪಾಂಡುರಂಗ ವಿಠಲ ಅತಿ ಪ್ರೀತಿಯ ದೈವ. ವಿಷ್ಣು ಪಾರಮ್ಯವನ್ನು ಸಾರುವ, ದ್ವೈತ ಮತನಿಷ್ಠೆಯ ಹರಿದಾಸರಿಗೆ ಪಂಢರಿರಾಯ ಆರಾಧ್ಯ ದೈವ.

ಹೀಗಾಗಿಯೇ ಕನ್ನಡದ ಅನೇಕ ದಾಸರು ತಮ್ಮಅಂಕಿತವಾಗಿ ವಿಠ್ಠಲ ನನ್ನು ಆರಿಸಿಕೊಂಡರು. ಪಂಢರಪುರದ ವಿಠ್ಠಲನ ಕಥೆ ರೋಚಕವಾದುದು. ‘ಒಂದು ಕಾಲದಲ್ಲಿ ಕನ್ನಡದ ನೆಲದೊಳಗಿನ ‘ಕಾನಡಿ ವಿಠಲ’ ಕನ್ನಡ ಮರಾಠಿ ಭಕ್ತರೆಲ್ಲರಿಗೂ ತಂದೆ-ತಾಯಿ-ಬಂಧು- ಬಳಗ. ಕನ್ನಡದ ಹರಿದಾಸರ ಆರಾಧ್ಯ ದೈವ, ವಿಠಲನ ಅಂಕಿತ ಬಳಸುವ ಮೂಲಕ, ಅವನ ಅಂಕೆಗೆ ಒಳಗಾದವ ರಾಗಿದ್ದಾರೆ’ ಎಂಬುದಾಗಿ ಪ್ರೊ. ಎ. ವಿ.ನಾವಡ ಅವರು ಸರಿಯಾಗಿಯೇ ಗುರುತಿಸಿದ್ದಾರೆ.

ವಾರಕರಿ ಸಂಪ್ರದಾಯ

ವಿಠ್ಠಲ ಪಂಢರಾಪುರದ ಅಧಿಪತಿ. ಅವನು ಜನಮಾನಸದಲ್ಲಿ ಪಡೆದ ಜನಪ್ರಿಯತೆ ಬಲು ದೊಡ್ಡದು. ದೇವತಾ ಸಾಕ್ಷಿಯಾಗಿ ಭಕ್ತ ಭಕ್ತರನ್ನು ಭೇಟಿಯಾಗುವ ಮಂಗಳ ಸ್ಥಾನವೆಂದರೆ ‘ವಾರಿ’. ವಿಠ್ಠಲ ಪರಂಪರೆಯಲ್ಲಿ ವಾರಿಗೆ ಮೊದಲ ಆದ್ಯತೆ. ಮಹಾರಾಷ್ಟ್ರದ ‘ವಾರಕರಿ’ ಪರಂಪರೆಗೆ ಏಳು ಎಂಟು ಶತಮಾನಗಳ ಇತಿಹಾಸವಿದೆ. ಪಂಡರಾಪುರದ ದೇವರ ‘ವಾರಿ’ ಮತ್ತು ಆಳಂದಿಯ ಸಂತರ ‘ವಾರಿ’ ಇವೆರಡು ಪ್ರಮುಖವಾದವು.

ಅಳಂದಿಯಿಂದ ಜ್ಞಾನೇಶ್ವರ, ದೇಹೂದಿಂದ ತುಕಾರಾಮ, ಪೈಠಣದಿಂದ ಏಕನಾಥ, ತ್ರಿಯಂಬಕೇಶ್ವರದಿಂದ ನಿವೃತ್ತಿನಾಥ, ಸಾಸವಾಡದಿಂದ ಸೋಪಾನದೇವ, ಜಳಗಾಂವ ದಿಂದ ಮುಕ್ತಾಬಾಯಿ, ತೇರದಿಂದ ಗೋರ ಕುಂಬಾರ , ಅಂಬೆಜೋಗಾಯಿಯಿಂದ ಚಾಂಗದೇವ, ಭಾನುದಾಸ, ಸಜ್ಜನಗಡದಿಂದ ರಾಮದಾಸ ಮೊದಲಾದ ‘ಪಾಲ್ಕಿ’ಗಳು ವಿಜೃಂಭಣೆಯಿಂದ ಜಾತ್ರೆಯೋಪಾದಿಯಲ್ಲಿ ಸಾಗುವ ಪರಿಯನ್ನು ನೋಡಲು ಎರಡು ಕಣ್ಣು ಸಾಲದು.

ಮುಗಿಲು ಮುಟ್ಟುವ ವಿಠ್ಠಲನ ಭಜನಾ ಲಹರಿ, ಲೋಕನೃತ್ಯಗಳೊಡನೆ ಸಾಗಿ ಬರುವ ಜನ ಸಾಗರ, ಭಕ್ತಿ ಪ್ರವಾಹದ ವಿರಾಟ್ ದರ್ಶನ ಮನಮೋಹಕವಾದುದು. ಇದು ಉದಾತ್ತ ವೈಷ್ಣವ ಸಂಪ್ರ ದಾಯ. ‘ವಾರಿ’ ಎಂದರೆ ಪಂಢರಾಪುರಕ್ಕೆ ಹೋಗುವ ಯಾತ್ರೆ. ಭಾಗವತ ಸಿದ್ಧಾಂತದ ವಿಚಾರ ಗಳನ್ನು ಬದುಕಿನ ಸಾರ್ಥಕತೆಯನ್ನು ಜನಮನಕ್ಕೆ ಮುಟ್ಟಿಸುವುದು ‘ವಾರಕರಿ ಸಂಪ್ರದಾಯ’ದ ಮುಖ್ಯ ಮನೀಷೆಗಳಲ್ಲಿ ಒಂದು.

ಇಪ್ಪತ್ತು ದಿನಗಳವರೆಗೆ ಅಖಂಡವಾಗಿ ಹರಿನಾಮ ಸ್ಮರಣೆ ಮಾಡುತ್ತಾ ಸಾಗುವ ವಾರಿ ಭಕ್ತಿ, ಪ್ರೀತಿ, ಸಂಯಮ, ಶಾಂತಿ, ಶ್ರದ್ಧೆ, ಅಹಿಂಸೆ ಮೊದಲಾದ ಸದ್ಗುಣಗಳ ಉಪಾಸನೆಯೂ ಆಗಿದೆ. ವಿಠ್ಠಲ ಚೈತನ್ಯರೂಪಿ. ಅವನ ದರ್ಶನಕ್ಕಾಗಿ ಮಾಡುವ ಉನ್ನತ ಪ್ರವಾಸವೆಂದರೆ ‘ವಾರಿ’. ಆಷಾಢ ಏಕಾದಶಿ, ಕಾರ್ತಿಕ ಏಕಾದಶಿ ಸತ್ರಗಳಲ್ಲಿ, ಲಕ್ಷಾಂತರ ಜನರು ಪಂಡರಾಪುರಕ್ಕೆ ಬಂದು ವಿಠಲನ ದರ್ಶನ ಪಡೆದು ಪುನೀತರಾಗುವ ಪರಿ ವಿಸ್ಮಯ ಹುಟ್ಟಿಸುತ್ತದೆ.

ಇದೊಂದು ಆಧ್ಯಾತ್ಮಿಕ ಸಮಾನತೆಯ ಬಹುದೊಡ್ಡ ರೂಪಕವೂ ಹೌದು. ಮನುಷ್ಯರು ಮನುಷ್ಯರ ಜೊತೆ ಸೇರಬೇಕು, ಪರಸ್ಪರ ಆದರ ಗೌರವಗಳಿಂದ ಬಾಳಬೇಕು, ಅದಕ್ಕಾಗಿ ‘ವಾ’ ನಿರ್ಮಾಣವಾಗಿದೆ ಎಂಬುದು ‘ವಾರಕರಿ’ಗಳ ಬಲವಾದ ನಂಬಿಕೆ. ಜಾತಿ ಪಾತಿ, ಆ ಭಾಷೆ ಈ ಭಾಷೆ, ಪ್ರಾಂತ ಪಂಗಡ ಅದು ಇದು ಅದು ಎನ್ನದೇ ಶ್ರಮಿಕ ರೈತಾಪಿ ವರ್ಗ, ಶ್ರೀಸಾಮಾನ್ಯರು ಮುಂದಾಗಿ ವಿಠ್ಠಲನ ಉಪಾಸನೆಯಲ್ಲಿ ತೊಡಗಿರುವ ಪಂಢರಾಪುರ ಭಾವೈಕ್ಯದ ಮಹಾಸಂಗಮವೂ ಹೌದು

*

ವಿಠ್ಠಲ ಕರ್ನಾಟಕದವನು !

ವಿಜಯನಗರದಿಂದ ವಿಠ್ಠಲನ ಮೂರ್ತಿಯನ್ನು -ಂಡರಪುರಕ್ಕೆ ಕೊಂಡೊಯ್ದರು ಎಂಬುದು ಎಲ್ಲರಿಗೂ ಒಪ್ಪಿತವಾದ ಸ್ವೀಕೃತ ವಿದ್ಯಮಾನ. ಪಂಢರಪುರ ಇಂದಿಗೂ ಮಹಾರಾಷ್ಟ್ರ-ಕರ್ನಾಟಕ ಸೀಮೆಯ ಮೇಲಿದೆ. ಪಂಢರಾಪುರ ಸನಿಹದ ಮಂಗಳವೇಡೆಯಂತೂ ಬಸವೇಶ್ವರನ ಆದ್ಯ ಕಾರ್ಯಕ್ಷೇತ್ರವಾಗಿತ್ತು. ಪಂಢರಪುರದ ಪ್ರಾಚೀನ ಹೆಸರಾದ ‘ಪಂಡರಗೆ’ ಎನ್ನುವದು ಸಂಪೂರ್ಣ ಕನ್ನಡವೇ ಆಗಿದೆ. ವಿಠ್ಠಲನ ಬಹಳಷ್ಟು ಹಕ್ಕುದಾರ ಸೇವಕರು ಕರ್ನಾಟಕದವರು. ಅವರ ಮೂಲ ಕುಲದೇವರು ಕರ್ನಾಟಕದಲ್ಲೇ ಇದೆ. ಅಲ್ಲದೆ, ಇನ್ನೆಷ್ಟೋ ಸಣ್ಣ-ಪುಟ್ಟ ಸಂಗತಿಗಳು ಹೇಗಿವೆ ಯೆಂದರೆ, ಅದೆಲ್ಲ ವಿಠ್ಠಲನ ಕನ್ನಡತನವನ್ನು ನಿಸ್ಸಂದೇಹವಾಗಿ ಘೋಷಿಸುತ್ತವೆ ಎಂಬುದಾಗಿ ಮರಾಠಿಯ ಪ್ರಸಿದ್ಧ ಸಂಶೋಧಕ ರಾ. ಚಿ. ಡೇರೆ ಅವರು ಆಧಾರ ಸಹಿತವಾಗಿ ತೋರಿಸಿಕೊಟ್ಟಿದ್ದಾರೆ.

ವಿಜಯನಗರದ ಮೂರ್ತಿ

ಮರಾಠಿ ಸಂತ ಸಾಹಿತ್ಯದಲ್ಲಿ ಭಾನು ದಾಸನು ವಿಠಲ ಮೂರ್ತಿಯನ್ನು ವಿಜಯ ನಗರದಿಂದ ಪಂಡರಾಪುರಕ್ಕೆ ಒಯ್ದನೆಂಬ ವಿವರ ಸಿಗುತ್ತದೆ. ಈ ಮೂರ್ತಿಯ ಸ್ಥಳಾಂತರಕ್ಕೆ ಕಾರಣವೇ ನೆಂಬುದು ಖಚಿತವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ದಂತಕಥೆಗಳೂ ಚಾಲ್ತಿಯಲ್ಲಿ ಇವೆ. ಇದರ ಐತಿಹಾಸಿಕ ಮುಖ ಯಾವುದೆಂಬುದನ್ನು ಕಂಡುಕೊಳ್ಳಬೇಕಾಗಿದೆ. ಕನ್ನಡ ಕವಿ ಚೌಂಡರಸ ಪಾಂಡು ರಂಗನನ್ನು ಅಭಂಗ ವಿಠ್ಠಲ ಎಂದು ಕರೆದು ಅವನ ಮಹಿಮೆಯನ್ನು ಬಣ್ಣಿಸಿದ್ದಾನೆ. ಇವತ್ತಿಗೂ ಪಂಢರಾಪುರ ಕರ್ನಾಟಕ, ಮಹಾರಾಷ್ಟ್ರ ಎಂಬ ಭಾಷಾ ಭೇದವಿಲ್ಲದೇ ಅನುಗಾಲವೂ ಭಕ್ತರನ್ನು ಸೆಳೆಯುವ ಭವ್ಯ ಭಕ್ತಿಧಾಮವೂ ಆಗಿದೆ.

ಆಷಾಢದ ಮಹಾಮೇಳ!

ಪ್ರತಿವರ್ಷ, ಆಷಾಢ ತಿಂಗಳಿನಲ್ಲಿ, ವಾರಿ ಯಾತ್ರೆಯು -ಂಡರಪುರಕ್ಕೆ ಸಾಗುತ್ತದೆ; ಏಕಾದಶಿಯಂದು ಎಲ್ಲರೂ ಅಲ್ಲಿ ಸೇರುವ ಉತ್ಸಾಹ, ಭಕ್ತಿಯ ಮಹಾಪೂರ. ಇದನ್ನು ವಾರಕರಿ ಸಂಪ್ರದಾಯವೆಂದು ಕರೆಯಲಾಗಿದ್ದು, 14ನೆಯ ಶತಮಾನಕ್ಕಿಂತಲೂ ಹಿಂದಿನಿಂದಲೇ ವಾರಿ ಯಾತ್ರೆ ನಡೆಯುತ್ತಿತ್ತೆ ನ್ನುವುದಕ್ಕೆ ಖಚಿತ ದಾಖಲೆಗಳಿವೆ. ಮಹಾರಾಷ್ಟ್ರದಲ್ಲಿ ಇಂದಿಗೂ ಈ ಭಕ್ತಿಪಂಥವು ಅದೆಷ್ಟು ಜನ ಪ್ರಿಯವೆಂದರೆ, ಲಕ್ಷಲಕ್ಷ ಜನರು ಹನ್ನೊಂದಕ್ಕೂ ಹೆಚ್ಚು ದಿನ ಕಾಲ್ನಡಿಗೆಯಲ್ಲೇ ಪಂಡರಪುರದತ್ತ ಹೊರಡುತ್ತಾರೆ. ಇದು ಆಷಾಢದ ಬಹುದೊಡ್ಡ ಮೇಳ, ಭಕ್ತಿಯ ಸಮಾಗಮ. ಕಾಲ್ನಡಿಗೆಯಲ್ಲಿ ಸಾಗುವವರ ಕಾಲನ್ನು ಜನಸಾಮಾನ್ಯರು ಪಾದಪೂಜೆ ಮಾಡಿ ಗೌರವಿಸುವುದು ಇನ್ನೊಂದು ವಿಶೇಷ. ವಾರಕರಿಯು ಮಹಾರಾಷ್ಟ್ರದ ಒಂದು ಅದ್ಭುತ ಆಚರಣೆ ಎಂಬುದರಲ್ಲಿ ಅನುಮಾನ ವಿಲ್ಲ.