Hari Paraak Column: ಡಾಟ್ ಬಾಲ್ ಆಡಿ ಧೋನಿ ನಿರ್ಮಿಸಿದ ಮರಗಳ ಕಾಡು: ತಲಕಾಡು
ಕನಿಷ್ಠ ಪಕ್ಷ ಕಮಲ್ ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಡಿಸ್ಟ್ರಿಬ್ಯೂಟ್ ಮಾಡಿ ದವರು ಈ ಸಿನಿಮಾದ ಬಿಡುಗಡೆಯ ವಿಚಾರವನ್ನು ಪ್ರಚಾರ ಮಾಡಿದ್ದಿದ್ದರೆ ಡಿಸ್ಟ್ರಿಬ್ಯೂಟರ್ಗಳು ಸಿಗುತ್ತಿದ್ದರೇನೋ. ಆದರೆ ಎಲ್ಲೂ ‘ಥಗ್ ಲೈಫ್’ ಸದ್ದೇ ಇಲ್ಲ. ಮಾಡೋಕೆ ಕ್ಯಾಮೆ ಇಲ್ಲದೆ ಕಮಲ್ ಹಾಸನ್ ಕೊಟ್ಟ ಸಷ್ಟನೆಯನ್ನೇ ಕ್ಷಮೆ ಎಂದವರೂ ‘ಥಗ್ ಲೈಫ್’ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿಲ್ಲ.


ತುಂಟರಗಾಳಿ
ಸಿನಿಗನ್ನಡ
ಅಂತೂ ಇಂತೂ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾಗೆ ಮುಕ್ತಿ ಸಿಕ್ಕಿದೆ. ಅಂದ್ರೆ ಸಿನಿಮಾ ಇಷ್ಟ ಆಗದೆ ತಮಿಳುನಾಡ ಅದು ಫ್ಲಾಪ್ ಆದ ಕಾರಣಕ್ಕೆ ಚಿತ್ರಕ್ಕೆ ಮುಕ್ತಿ ಸಿಕ್ಕಿದೆ ಅಂತ ಹೇಳ್ತಾ ಇಲ್ಲ. ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಇಲ್ಲಿನ ಕೋರ್ಟ್ ಸೇರಿದಂತೆ ಕನ್ನಡಿಗರು ಅಡ್ಡಿಪಡಿಸಿದ್ದರಿಂದ ‘ಥಗ್ ಲೈಫ್’ ಬಿಡುಗಡೆ ಕೋರಿ ಕಮಲ್ ಹಾಸನ್ ಸುಪ್ರೀಂ ಕೋರ್ಟ್ನ ಮೊರೆ ಹೋಗಿದ್ದರು. ಅಲ್ಲಿ ಅವರಿಗೆ ಜಯ ಸಿಕ್ಕಿದೆ. ಅಂದರೆ ಕರ್ನಾಟಕ ದಲ್ಲಿ ‘ಥಗ್ ಲೈಫ್’ ಬಿಡುಗಡೆ ಮಾಡಬಹುದು.
ಅದಕ್ಕೆ ಯಾರೂ ಅಡ್ಡಿ ಮಾಡುವಂತಿಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಸಿನಿಮಾ ರಿಲೀಸ್ಗೆ ಅವಕಾಶ ಸಿಕ್ಕರೂ ಕಮಲ್ಗೆ ರಿಲೀಫ್ ಸಿಕ್ಕಿದೆ ಅಂತ ಹೇಳೋಕೆ ಆಗಲ್ಲ. ಯಾಕಂದ್ರೆ ಕಮಲ್ ಅವರ ಕನ್ನಡ ವಿರೋಧಿ ಮಾತಿನ ಕಾರಣಕ್ಕೆ ಕನ್ನಡಿಗರು ಹಂಚಿಕೆ ಹೂಡಿ ಅವರ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿದ ಮೇಲೆ ಈಗ ಸಿನಿಮಾ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಅದಕ್ಕೆ ಹಂಚಿಕೆದಾರರು ಸಿಗುತ್ತಿಲ್ಲವಂತೆ.
ಕನಿಷ್ಠ ಪಕ್ಷ ಕಮಲ್ ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಡಿಸ್ಟ್ರಿಬ್ಯೂಟ್ ಮಾಡಿ ದವರು ಈ ಸಿನಿಮಾದ ಬಿಡುಗಡೆಯ ವಿಚಾರವನ್ನು ಪ್ರಚಾರ ಮಾಡಿದ್ದಿದ್ದರೆ ಡಿಸ್ಟ್ರಿಬ್ಯೂಟರ್ಗಳು ಸಿಗುತ್ತಿದ್ದರೇನೋ. ಆದರೆ ಎಲ್ಲೂ ‘ಥಗ್ ಲೈಫ್’ ಸದ್ದೇ ಇಲ್ಲ. ಮಾಡೋಕೆ ಕ್ಯಾಮೆ ಇಲ್ಲದೆ ಕಮಲ್ ಹಾಸನ್ ಕೊಟ್ಟ ಸಷ್ಟನೆಯನ್ನೇ ಕ್ಷಮೆ ಎಂದವರೂ ‘ಥಗ್ ಲೈಫ್’ ವಿಚಾರದಲ್ಲಿ ಆಸಕ್ತಿ ತೋರಿಸು ತ್ತಿಲ್ಲ.
ಹಾಗಾಗಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋ ಕಥೆ ಕಮಲ್ ಹಾಸನ್ ಅವರದ್ದು. ಆದರೆ ‘ಗಂಡ-ಹೆಂಡಿರ ಜಗಳದ ನಡುವೆ ಕೂಸು ಬಡವಾಯ್ತು’ ಅನ್ನೋ ಹಾಗೆ ಕಮಲ್ ಮತ್ತು ಕನ್ನಡಿಗರ ಜಗಳದ ನಡುವೆ ಮಣಿರತ್ನಂ ಅವರಂಥ ನಿರ್ದೇಶಕರ ಚಿತ್ರ ಕಣ್ಮರೆಯಾಗಿದ್ದು ಮಾತ್ರ ವಿಪರ್ಯಾಸ.
ಇದನ್ನೂ ಓದಿ: Hari Paraak Column: ಡಿ ಆರ್ ಎಸ್ ಅಂದ್ರೆ ಡ್ರೋನ್ ರಿವ್ಯೂ ಸಿಸ್ಟಮ್
ಲೂಸ್ ಟಾಕ್- ಕಾಮನ್ಮ್ಯಾನ್,
ಮಿಸ್ಟರ್ ಕಾಮನ್ಮ್ಯಾನ್, ನಿಮ್ಮದೊಂದು ಸಂದರ್ಶನ ಬೇಕಿತ್ತಲ್ಲ?
- ಕಮಾನ್ ಮ್ಯಾನ್, ನನ್ ಸಂದರ್ಶನನಾ? ಯಾಕೆ ಏನ್ಸಮಾಚಾರ?
ಏನಿಲ್ಲ ಸರ್, ಈ ವಾರ ಯಾರನ್ನ ಸಂದರ್ಶನ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಅದಕ್ಕೇ...
-ನಾನ್ ನಿಮ್ ಜತೆ ಮಾತಾಡಲ್ಲರೀ, ನಿಮ್ಮ ಇಂಟರ್ವ್ಯೂ ಎಲ್ಲ ಸುದೀಪ್ ಸ್ಟೈಲು.. ನಿಮ್ಮದೇ ಪ್ರಶ್ನೆ, ನಿಮ್ಮದೇ ಉತ್ರ. ಅದ್ಸರಿ, ನಿಮ್ ಇಂಟರ್ವ್ಯೂ ನೀವೇ ಮಾಡ್ಕೋಬಹುದಲ್ಲ?
ಅಯ್ಯೋ ಸುಮ್ನಿರಿ, ನನ್ ಜತೆ ನಾನೇ ಮಾತಾಡ್ಕೊಂಡ್ರೆ ಒಬ್ಬೊಬ್ನೇ ಮಾತಾಡ್ಕೋತಿದಾನೆ ಅಂತ ಜನ ‘ಹುಚ್ಚ’ ಅಂದ್ಕೊಂಡ್ ಬಿಡ್ತಾರೆ.
-‘ಹುಚ್ಚ’ ಅಂದ್ರಾ? ಅದನ್ನೇ ನಾನೂ ಹೇಳಿದ್ದು ಸುದೀಪ್ ಸ್ಟೈಲು ಅಂತ.
ರೀ, ಏನ್ ಸುದೀಪ್ ಒಬ್ರೇ ಹುಚ್ರಾ? ಹಿಂಗೆ ಅಂದ್ರೆ ರೋಡಲ್ ಹೋಗೋ ಹುಚ್ರೆ ಕಲ್ ತಗೊಂಡ್ ಹೊಡೀತಾರೆ ಅಷ್ಟೇ..
-ಸರಿ, ನೀವೂ ಮೊದಲು ನಿಮ್ಮ ಕಾಲಂನಲ್ಲಿ ನಿಮ್ಮ ಮಿನಿ ಕಟೌಟ್ ನಿಲ್ಲಿಸಿಕೊಳ್ತಾ ಇದ್ರಲ್ಲ? ಅದ್ರಲ್ಲೂ ಸುದೀಪ್ನ ಕಾಪಿ ಮಾಡಿದ್ರಿ ಅಲ್ವಾ?
ಮುಖ ನೋಡಿ ಮೊಳ ಹಾಕಬಾರದು ಅಂತಾರೆ. ಮೊಳ ಹಾಕಬೇಕು ಅಂದ್ರೆ ಸ್ವಲ್ಪ ದೊಡ್ಡ ಫೋಟೋ ಬೇಕಲ್ಲ, ಅದಕ್ಕೇ. ಅದಿರ್ಲಿ ಸ್ವಾಮಿ, ಅವಾಗಿಂದ ನೋಡ್ತಾ ಇದೀನಿ, ನಾನ್ ನಿಮ್ಮನ್ನ ಇಂಟರ್ವ್ಯೂ ಮಾಡ್ತಾ ಇದ್ದೀನಾ? ಅಥವಾ ನೀವು ನನ್ನ ಇಂಟರ್ವ್ಯೂ ಮಾಡ್ತಾ ಇದೀರಾ? ಅಂತ ಡೌಟು
- ಏನ್ ಮಾಡೋದು, ನಿಮ್ಗೇ ಗೊತ್ತಲ್ಲ, ನಮ್ಮಂಥ ಕಾಮನ್ ಮ್ಯಾನ್ಗಳ ಹತ್ರ ಬರೀ ಪ್ರಶ್ನೆಗಳಿರುತ್ತೆ ಉತ್ತರಗಳು ಕಡಿಮೆ. ಹಂಗಾಗಿ ಸ್ವಲ್ಪ ‘ಲಕ್ಷ್ಮಣ್’ ರೇಖೆ ದಾಟಿಬಿಟ್ಟೆ ಅನ್ನಿಸಿದ್ರೆ ಸಾರಿ..
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ವಿದೇಶದಲ್ಲಿ ಕೆಲಸ ಹುಡುಕಿಕೊಂಡು ಹೋದ, ಅಲ್ಲಿ ಅವನಿಗೆ ಒಂದು ಹೋಟೆಲ್ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. ಸರಿ, ಪಾಲಿಗೆ ಬಂದಿದ್ದು ಪಂಚಾಮೃತ ಅಂತಲೋ ಮಾಡಿದ್ದು ಣ್ಣೋ ಮಾರಾ ಅಂತಲೋ ಅಂದುಕೊಂಡು ಕೆಲಸಕ್ಕೆ ಜಾಯಿನ್ ಆದ. ಮೊದಲ ದಿನ ಆ ದೊಡ್ಡ ಹೋಟೆಲ್ನಲ್ಲಿ ಕೆಲಸ ಮಾಡುವ ಎಲ್ಲರ ಪರಿಚಯ ಮಾಡಿಕೊಂಡು ಬಂದ. ನಂತರ ಅಲ್ಲಿ ಕೆಲಸ ಮಾಡಲು ಇರುವ ವ್ಯವಸ್ಥೆ ಮತ್ತು ಉಪಕರಣಗಳನ್ನು ಚೆಕ್ ಮಾಡಿದ. ಅಲ್ಲಿನ ವಿಷಯ ಗಳನ್ನು ಗೆಳೆಯ ಸೋಮುಗೆ ಖೇಮು ಪ್ರತಿದಿನ ಹೇಳುತ್ತಿದ್ದ. ಒಂದು ದಿನ ಸೋಮು ಬಳಿ ಖೇಮು ಹೇಳಿದ- “ನಾನು ಇತ್ತೀಚೆಗೆ ಏನೋ ವಿಚಿತ್ರವಾಗಿ ಆಡುತ್ತಿದ್ದೇನೆ. ನಮ್ಮ ಹೋಟೆಲ್ ನಲ್ಲಿರುವ ವೆಜಿಟಬಲ್ ಕಟ್ಟರ್ ಅನ್ನು ನೋಡಿದಾಗಲೆ ಮುತ್ತು ಕೊಟ್ಟು ತುಟಿ ಗಾಯ ಮಾಡಿಕೊಳ್ಳಬೇಕು ಎಂಬ ವಿಚಿತ್ರ ಆಸೆ ಆಗುತ್ತದೆ". ಯಾರಾದರೂ ವೆಜಿಟಬಲ್ ಕಟ್ಟರ್ ಒಳಗೆ ತುಟಿ ಇಟ್ಟು ಗಾಯ ಮಾಡಿಕೊ ಳ್ತಾರಾ ಎಂದುಕೊಂಡ ಸೋಮು, “ನಿನಗೇನು ತಲೆಕೆಟ್ಟಿದೆಯಾ, ನಿನ್ನನ್ನು ನೀನು ಕಂಟ್ರೋಲ್ ಮಾಡಿಕೋ. ಇಲ್ಲದಿದ್ದರೆ, ಯಾರಾದರೂ ಡಾಕ್ಟರ್ ಬಳಿ ತೋರಿಸಿಕೋ" ಎಂದ. ಇದು ಕೆಲವು ದಿನ ಹೀಗೆಯೇ ಮುಂದುವರಿಯಿತು.
ಆದರೆ ಖೇಮುವಿನ ವಿಚಿತ್ರ ಆಸೆ ಮಾತ್ರ ಕಡಿಮೆ ಆಗಲಿಲ್ಲ. ಬದಲಾಗಿ ಅದು ದಿನದಿನಕ್ಕೂ ಹೆಚ್ಚು ತ್ತಲೇ ಹೋಯಿತು. ಒಂದು ದಿನ ಖೇಮು ತನ್ನ ವಿಚಿತ್ರ ಬಯಕೆಯನ್ನು ಕಂಟ್ರೋಲ್ ಮಾಡಿಕೊಳ್ಳ ಲಾಗದೇ ತಾನು ಏನಂದುಕೊಂಡಿದ್ದನೋ ಅದನ್ನು ಮಾಡಿಯೇಬಿಟ್ಟ, ಖೇಮುವಿನ ತುಟಿಯೆ ಗಾಯ ಆಗಿತ್ತು. ವೆಜಿಟಬಲ್ ಕಟ್ಟರ್ ಮೇಲೂ ರಕ್ತದ ಕಲೆ ಇತ್ತು. ಅದನ್ನು ಅಲ್ಲಿನ ಸೀನಿಯರ್ ಮ್ಯಾನೇಜರ್ ಒಬ್ಬ ನೋಡಿಬಿಟ್ಟ.
ಮರುದಿನ ಖೇಮು, ಸೋಮು ಬಳಿ ಬಂದು ಆಗಿzಲ್ಲವನ್ನೂ ಹೇಳಿದ. “ನಾನು ಅಂದುಕೊಂಡಿದ್ದನ್ನು ಇವತ್ತು ಮಾಡಿಯೇಬಿಟ್ಟೆ. ಆದರೆ ನಾನು ಮಾಡಿದ ಕೆಲಸವನ್ನು ನಮ್ಮ ಸೀನಿಯರ್ ಮ್ಯಾನೇಜರ್ ನೋಡಿಬಿಟ್ಟ" ಎಂದ ಖೇಮು. “ಮುಂದೇ ನಾಯ್ತು?" ಅಂತ ಕೇಳಿದ ಸೋಮು. ಅದಕ್ಕೆ ಖೇಮು ಹೇಳಿದ- “ಇನ್ನೇನಾಗುತ್ತೆ? ನನ್ನ ಕೆಲಸ ಹೋಯ್ತು. ಮತ್ತೆ, ಆ ವೆಜಿಟಬಲ್ ಕಟ್ಟರ್ ಇದ್ದಳಲ್ಲ, ಅವಳನ್ನೂ ಕೆಲಸದಿಂದ ತೆಗೆದ್ರು".
ಲೈನ್ ಮ್ಯಾನ್
ಐಪಿಎಲ್ನಲ್ಲಿ ಡಾಟ್ಬಾಲ್ ಆಡಿ ಧೋನಿ ನಿರ್ಮಿಸಿದ ಮರಗಳ ಕಾಡು
- ‘ತಲ’ಕಾಡು
ದೇವೇಗೌಡ್ರು ಯೋಗ ದಿನಾಚರಣೆ ಮಾಡಿದ್ರೆ
- ಅವರು ‘ಆಸನ’ದ ಗೌಡ್ರು
ಮೊಬೈಲ್ ಬಳಕೆ ಬಗೆಗಿನ ಸತ್ಯ
- ಕೆಲವರು ಮೊಬೈಲ್ ಅನ್ನು ಆಗಾಗ ಕಾಲ್ ಮಾಡೋಕೂ ಬಳಸ್ತಾರೆ
ಬಾಲಿವುಡ್ನ ನಟ ಗೋವಿಂದ ಅವರನ್ನು ಅಭಿಮಾನಿಗಳು ಮುತ್ತಿಕೊಂಡರೆ
-ಗುಂಪಲ್ಲಿ ‘ಗೋವಿಂದ’
ಲಂಚ ‘ತಿನ್ನುವ’ ಪೊಲೀಸ್ ಆಫೀಸರ್ ಬಗ್ಗೆ ಸಿನಿಮಾ ಮಾಡಿದರೆ
- ‘ಖಾ’ಕಿ
ಅವಾರ್ಡ್ಗೋಸ್ಕರ ಸಿನಿಮಾ ಮಾಡಿ, ರೂಲ್ ಇದೆ ಅನ್ನೋ ಕಾರಣಕ್ಕಾಗಿ ಥಿಯೇಟರ್ನಲ್ಲಿ ಬರೀ ಒಂದ್ ದಿನ ಶೋ ಹಾಕೋ ಸಿನಿಮಾ?
- ‘ಶೋ’ಕಿ ಸಿನಿಮಾ
ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ನಿಲ್ಲಿಸಿದ ಮೇಲೆ ಅದೇ ಥರ ಜಗ್ಗೇಶ್ ಅವರು ಒಂದು ಕಾಮಿಡಿ ಶೋ ಮಾಡಿದ್ರೆ ಅದಕ್ಕೆ ಹೆಸರು?
- ಮಂಜಾ ಟಾಕೀಸ್ ಅಥವಾ ಮಾಂಜಾ ಟಾಕೀಸ್
ಸಿನಿಮಾಗಳ ಹೆಸರನ್ನೇ ಇಟ್ಟುಕೊಂಡು ಮಾಡಲಾಗಿರುವ ಹಾಡನ್ನು ಏನಂತ ಕರೆಯಬಹುದು?
- ನಾಮ ‘ಪದ’