ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara: ಪಾತಾಳದಲ್ಲಿದ್ರೂ ಬಿಡಲ್ಲ!

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಲಘಟ್ಟದಲ್ಲಿ ಸೇವೆ ಸಲ್ಲಿಸಿದ್ದ ಪ್ರಭಾಕರ ರಾವ್ ಅವರು, ಸಂಭಾವ್ಯ ಬಂಧನದಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ ಒಂದು ವರ್ಷದವರೆಗೆ ಅಮೆರಿಕದಲ್ಲಿ ಠಿಕಾಣಿ ಹೂಡಿದ್ದರಂತೆ. ಈಗ ತನಿಖೆಯನ್ನು ಎದುರಿಸಲೇ ಬೇಕು ದೇಶದ ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವುದರಿಂದ ಪ್ರಭಾಕರ ರಾವ್ ಅವರು ತಲೆಬಾಗಲೇಬೇಕಾಗಿ ಬಂದಿದೆ

Narada Sanchara: ಪಾತಾಳದಲ್ಲಿದ್ರೂ ಬಿಡಲ್ಲ!

‘ಗುಪ್ತಚರ ವಿಭಾಗದ ಮುಖ್ಯಸ್ಥರ ಸ್ಥಾನವು ಲಾಭದಾಯಕವೂ ಪ್ರತಿಷ್ಠಿತವೂ ಆಗಿರುವ ಹುದ್ದೆ ಯಾಗಿದ್ದು, ಇದು ಸರಕಾರದ ಕಣ್ಣೂ ಆಗಿರುತ್ತದೆ, ಕಿವಿಯೂ ಆಗಿರುತ್ತದೆ’ ಎಂದು ಬಲ್ಲವರು ಹೇಳುವುದುಂಟು. ಆದರೆ ತೆಲುಗು ಭಾಷಿಕ ರಾಜ್ಯಗಳಲ್ಲಿ ಈ ಪಾತ್ರದ ನಿರ್ವಹಣೆಯು ಅಂದು ಕೊಂಡಷ್ಟು ಸುಲಭವಲ್ಲ, ಕೊಂಚ ಮೈಮರೆತರೂ ಅದು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಈ ಗ್ರಹಿಕೆಗೆ ಪುರಾವೆ ಬೇಕೇ, ಇಲ್ಲಿದೆ ನೋಡಿ: ತೆಲಂಗಾಣ ರಾಜ್ಯದ ವಿಶೇಷ ಗುಪ್ತಚರ ಬ್ಯೂರೋದ (ಎಸ್‌ಐಬಿ) ಮಾಜಿ ಮುಖ್ಯಸ್ಥ, ನಿವೃತ್ತ ಐಪಿಎಸ್ ಅಧಿಕಾರಿ ಪ್ರಭಾಕರ ರಾವ್ ಅವರು, ದೂರವಾಣಿ ಕದ್ದಾಲಿಕೆ ಪ್ರಕರಣ ವೊಂದರಲ್ಲಿ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಲು ಸಜ್ಜಾಗಬೇಕಾಗಿ ಬಂದಿದೆ.

ಹಿಂದೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಲಘಟ್ಟದಲ್ಲಿ ಸೇವೆ ಸಲ್ಲಿಸಿದ್ದ ಪ್ರಭಾಕರ ರಾವ್ ಅವರು, ಸಂಭಾವ್ಯ ಬಂಧನದಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ ಒಂದು ವರ್ಷದವರೆಗೆ ಅಮೆರಿಕದಲ್ಲಿ ಠಿಕಾಣಿ ಹೂಡಿದ್ದರಂತೆ. ಈಗ ತನಿಖೆಯನ್ನು ಎದುರಿಸಲೇ ಬೇಕು ದೇಶದ ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವುದರಿಂದ ಪ್ರಭಾಕರ ರಾವ್ ಅವರು ತಲೆಬಾಗಲೇಬೇಕಾಗಿ ಬಂದಿದೆ.

ಇದನ್ನೂ ಓದಿ: Health Tips: ಫಲವಂತಿಕೆ ಹೆಚ್ಚಿಸಲು ಯೋಗ ನೆರವಾಗಬಲ್ಲದು; ಗೊತ್ತೇ?

ಮತ್ತೊಂದೆಡೆ, ಆಂಧ್ರಪ್ರದೇಶದಲ್ಲಿ ಎಸ್‌ಐಬಿಯ ಮಾಜಿ ಮುಖ್ಯಸ್ಥ ಪಿ.ಎಸ್.ಆರ್.ಆಂಜನೇಯುಲು ಅವರು ಈಗ ಸೆರೆವಾಸದಲ್ಲಿದ್ದಾರೆ; ನಟಿಯೊಬ್ಬರಿಗೆ ನೀಡಿದರೆನ್ನಲಾದ ಕಿರುಕುಳ ಹಾಗೂ ರಾಜ್ಯದ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಎಸಗಿದರು ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿ ಆಂಜನೇಯುಲು ಅವರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಒಟ್ಟಿನಲ್ಲಿ, ಲಾಭದಾಯಕ ಮತ್ತು ಪ್ರತಿಷ್ಠಿತ ಎನಿಸಿಕೊಂಡ ಹುದ್ದೆಗಳನ್ನು ನಿರ್ವಹಿಸುವಲ್ಲಿ ಕೊಂಚವೇ ಯಾಮಾರಿದರೂ ಎಡವಟ್ಟು ಖಾತ್ರಿ ಎಂಬುದಕ್ಕೆ ಈ ಎರಡು ನಿದರ್ಶನಗಳೇ ಸಾಕ್ಷಿ..!

ನಾರಾಯಣ ನಾರಾಯಣ!

ಗ್ರಾಹಕರು ಹಣವನ್ನು ಹಿಂಪಡೆಯುವುದು ಸೇರಿದಂತೆ ಒಂದಷ್ಟು ವ್ಯವಹಾರಗಳಿಗೆ ಬ್ಯಾಂಕಿನ ಶಾಖೆಯವರೆಗೆ ಬರುವಷ್ಟು ತ್ರಾಸು ತೆಗೆದುಕೊಳ್ಳುವುದು ಬೇಡ ಎಂಬ ಸದಾಶಯ ದೊಂದಿಗೆ ಪಟ್ಟಣ ಮತ್ತು ನಗರಗಳಲ್ಲಿ, ಸಾಧ್ಯವಾದ ಕಡೆಯಲ್ಲೆಲ್ಲಾ ‘ಎಟಿಎಂ’ ಕೇಂದ್ರಗಳನ್ನು ವಿವಿಧ ಬ್ಯಾಂಕುಗಳು ಸ್ಥಾಪಿಸಿರುತ್ತವೆ ಎಂಬುದು ನಿಮಗೆ ಗೊತ್ತು.

Automated Teller Machine ಎಂಬುದು ‘ಎಟಿಎಂ’ ಎಂಬ ಪ್ರಥಮಾಕ್ಷರಿಗಳ ವಿಸ್ತೃತ ರೂಪ. ಆದರೆ, ಕಳ್ಳಕಾಕರು ಈ ಪರಿಕಲ್ಪನೆಯನ್ನು Any Time Money ಎಂಬ ಪರಿಭಾಷೆಯಾಗಿ ಬದಲಿಸಿ ಕೊಂಡಂತೆ ತೋರುತ್ತದೆ. ಬ್ಯಾಂಕುಗಳನ್ನು ಲೂಟಿ ಮಾಡುವುದಾದರೆ ತುಂಬಾ ರಿಸ್ಕು, ಅದರ ಬದಲು Any Time Money ನೀಡುವ ‘ಎಟಿಎಂ’ಗಳನ್ನು ದೋಚುವುದೇ ಬೆಸ್ಟು ಎಂಬುದು ಕಳ್ಳರ ಗ್ರಹಿಕೆ ಆಗಿರುವಂತೆ ತೋರುತ್ತದೆ.

ಹೀಗಾಗಿ ಕಾಲಾನುಕಾಲಕ್ಕೆ ‘ಎಟಿಎಂ’ ಕೇಂದ್ರಗಳಿಗೆ ಗ್ರಹಚಾರ ವಕ್ಕರಿಸಿಕೊಳ್ಳುವುದಿದೆ. ಕೋಲಾರದ ಸಹಕಾರ ನಗರದ ಎಸ್‌ಬಿಐ ಬ್ಯಾಂಕಿನ ಎಟಿಎಂನಲ್ಲಿದ್ದ ಸುಮಾರು 27 ಲಕ್ಷ ರುಪಾಯಿ ಹಣವನ್ನು ಕಳ್ಳರು ಮೊನ್ನೆ ದೋಚಿರುವುದು ಇಂಥದೊಂದು ಗಟ್ಟಿ ನಂಬಿಕೆಯಿಂದಲೇ ಎನ್ನಬಹುದೇನೋ?!