"ರಣಕಹಳೆʼಯಾದೀತೇ ʼಬಣ್ಣದ ತಗಡಿನ ತುತ್ತೂರಿʼ ?
ರಾಜ್ಯದ ಮೊದಲ ಮುಖ್ಯಮಂತ್ರಿ ಸಿ.ಎನ್.ಅಣ್ಣಾದೊರೈ ಮತ್ತು ಕಾಲಾನಂತರದಲ್ಲಿ ಸಿಎಂ ಆದ ಎಂ.ಕರುಣಾನಿಧಿ, ಸಿನಿಮಾ ಕಥೆ-ಚಿತ್ರಕಥೆ-ಸಂಭಾಷಣೆಯ ರಚನೆಯಲ್ಲಿ ‘ಪಂಟರ್’ ಗಳಾಗಿದ್ದರು. ಕೆ.ಆರ್.ರಾಮಸ್ವಾಮಿ, ಶಿವಾಜಿ ಗಣೇಶನ್, ಎನ್.ಎಸ್.ಕೃಷ್ಣನ್, ಎಸ್.ಎಸ್. ರಾಜೇಂ ದ್ರನ್, ಎಂ.ಆರ್. ರಾಧಾ, ವಿಜಯಕಾಂತ್ ಕೂಡ ಬೆಳ್ಳಿತೆರೆಯ ಹಿನ್ನೆಲೆಯವರೇ. ಕಮಲಹಾಸನ್ ಕೂಡ ರಾಜಕೀಯ ಪಕ್ಷ ವೊಂದನ್ನು ಹುಟ್ಟು ಹಾಕಿದ್ದು ಅದಿನ್ನೂ ಸ್ಪಷ್ಟ ಛಾಪು ಮೂಡಿಸುವುದು ಬಾಕಿಯಿದೆ.