Mohan Vishwa Column: ಮಹಾತ್ಮ ಗಾಂಧಿಯವರಿಗೆ ಮಾದರಿಯಾಗಿದ್ದ ಶ್ರೀರಾಮ
ನರೇಗಾ ಮರುನಾಮಕರಣದಲ್ಲಿ ‘ರಾಮನ’ ಹೆಸರಿರುವ ಬಗ್ಗೆ ಕಾಂಗ್ರೆಸ್ಸಿಗರಿಗೆ ದೊಡ್ಡಮಟ್ಟದ ತಕರಾರಿದೆ. ಕಾಂಗ್ರೆಸ್ಸಿಗರಿಗೆ ನೆಹರು ಕಾಲದಿಂದಲೂ ರಾಮನನ್ನು ಕಂಡರೆ ಆಗುವುದಿಲ್ಲ. ರಾಮನ ಪರವಾಗಿ ನಿಂತರೆ ಮುಸಲ್ಮಾನರ ಮತಗಳು ತಪ್ಪಿ ಹೋಗುತ್ತವೆಯೆಂಬ ಭಯ ಕಾಂಗ್ರೆಸ್ಸಿಗರಿಗಿರು ವುದು ಎಲ್ಲರಿಗೂ ತಿಳಿದಿರುವ ನಗ್ನಸತ್ಯ.
-
ವೀಕೆಂಡ್ ವಿತ್ ಮೋಹನ್
ಜಗತ್ತಿನ ಸರ್ವ ಧರ್ಮದವರಿಗೂ ಒಂದು ದೊಡ್ಡ ಶಕ್ತಿಯಾಗಿ ರಾಮನಾಮ ಕೆಲಸ ಮಾಡುತ್ತದೆಯೆಂಬುದನ್ನು ಮಹಾತ್ಮ ಧಿಯವರು ಪದೇ ಪದೆ ಹೇಳಿದ್ದಾರೆ. ಆದರೆ ಅವರ ಆದರ್ಶಗಳನ್ನು ಪಾಲಿಸುತ್ತೇವೆ ಎನ್ನುವವರು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟು ವುದು ನಿಧಾನವಾಗಲೆಂದೇ ನ್ಯಾಯಾಲಯದಲ್ಲಿ ಹಲವು ದಾವೆಗಳನ್ನು ಹೂಡಿದ್ದರು. ಶ್ರೀರಾಮಚಂದ್ರ ಎಂದಿಗೂ ಯುದ್ಧದ ಸಂಕೇತವಾಗಿರಲಿಲ್ಲ, ಆತ ಧರ್ಮದ ಸಂಕೇತ ವಾಗಿದ್ದ.
ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಪಾಲಿಸದ, ಅವರ ಮಾತುಗಳನ್ನು ಕೇಳದ ಕಾಂಗ್ರೆಸ್ ಪಕ್ಷವು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಯೋಜನೆಯಾಗಿದ್ದ ‘ನರೇಗಾ’ದಲ್ಲಿ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿ ‘ವಿಬಿ- ಜಿ ರಾಮ ಜಿ’ ಎಂಬ ಹೆಸರಿಡಲಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಸ್ವಾತಂತ್ರ್ಯಾ ನಂತರದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಸಂಪೂರ್ಣವಾಗಿ ವಿಸರ್ಜಿಸಬೇಕೆಂದು ಮಹಾತ್ಮ ಗಾಂಧಿ ಸ್ಪಷ್ಟವಾಗಿ ಹೇಳಿದ್ದರು.
ನರೇಗಾ ಮರುನಾಮಕರಣದಲ್ಲಿ ‘ರಾಮನ’ ಹೆಸರಿರುವ ಬಗ್ಗೆ ಕಾಂಗ್ರೆಸ್ಸಿಗರಿಗೆ ದೊಡ್ಡಮಟ್ಟದ ತಕರಾರಿದೆ. ಕಾಂಗ್ರೆಸ್ಸಿಗರಿಗೆ ನೆಹರು ಕಾಲದಿಂದಲೂ ರಾಮನನ್ನು ಕಂಡರೆ ಆಗುವುದಿಲ್ಲ. ರಾಮನ ಪರವಾಗಿ ನಿಂತರೆ ಮುಸಲ್ಮಾನರ ಮತಗಳು ತಪ್ಪಿ ಹೋಗುತ್ತವೆಯೆಂಬ ಭಯ ಕಾಂಗ್ರೆಸ್ಸಿಗರಿಗಿರು ವುದು ಎಲ್ಲರಿಗೂ ತಿಳಿದಿರುವ ನಗ್ನಸತ್ಯ.
ಭಾರತದ ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂಬುದು ಮಹಾತ್ಮ ಗಾಂಧಿಯವರ ನಿಲುವಾಗಿತ್ತು. ಅವರ ನಿಲುವಿನಂತೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗೆ ‘ವಿಬಿ- ಜಿ ರಾಮ ಜಿ’ ಹೆಸರನ್ನಿಡಲಾಗಿದೆ. ಮಹಾತ್ಮ ಗಾಂಧಿಯವರು ತಮ್ಮ ಜೀವನ ದಲ್ಲಿ ಶ್ರೀರಾಮನಾಮವನ್ನು ನಿತ್ಯಲೂ ಜಪಿಸುತ್ತಿದ್ದರು. ಆದರೆ ಅವರ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ಸಿಗರಿಗೆ ಮಾತ್ರ ರಾಮನನ್ನು ಕಂಡರೆ ಆಗುವುದಿಲ್ಲ!
‘ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತಾರಾಮ’ ಎಂಬುದು ಮಹಾತ್ಮ ಗಾಂಧಿ ಯವರು ನಿರಂತರವಾಗಿ ಜಪಿಸುತ್ತಿದ್ದ ಶ್ಲೋಕ. ಗಾಂಧಿಯವರ ಜೀವನದಲ್ಲಿ ಪ್ರಭು ಶ್ರೀರಾಮ ದೊಡ್ಡ ಮಟ್ಟದ ಪ್ರಭಾವ ಬೀರಿದ್ದನು. ತಮ್ಮ ಬಾಲ್ಯದಿಂದಲೂ ಮಹಾತ್ಮ ಗಾಂಧಿಯವರು ಶ್ರೀರಾಮನನ್ನು ಆರಾಧಿಸುತ್ತಿದ್ದರು.
ಇದನ್ನೂ ಓದಿ: Mohan Vishwa Column: ದಕ್ಷಿಣ ಭಾರತದ ಸಿನೆಮಾಗಳ ನಾಗಾಲೋಟ
ಮಗುವಾಗಿದ್ದಾಗ ಅವರ ಆರೈಕೆ ಮಾಡುತ್ತಿದ್ದವರು ಅವರಿಗೆ ಭಯ ಅಥವಾ ದುಃಖವಾದಾಗಲೆ ರಾಮನಾಮವನ್ನು ಪುನರಾವರ್ತಿಸಲು ಕಲಿಸಿದ್ದರು. “ರಾಮನಾಮವೆಂಬ ಪದವು ನನ್ನ ತುಟಿ ಗಳಲ್ಲಿ 24 ಗಂಟೆ ಇಲ್ಲದಿದ್ದರು ಸಹ, ದಿನದ 24 ಗಂಟೆಗಳೂ ನನ್ನ ಹೃದಯದಲ್ಲಿವೆ ಎಂದು ನಾನು ಹೇಳುತ್ತೇನೆ" ಅಂತ ಮಹಾತ್ಮ ಗಾಂಧಿ ಹೇಳಿದ್ದರು.
“ಸತ್ಯವು ದೇವರ ಅತ್ಯುನ್ನತ ಗುಣವೆಂದು ನನ್ನ ಹೃದಯವು ಬಹಳ ಹಿಂದೆಯೇ ಅರಿತುಕೊಂಡಿ ದ್ದರೂ, ನಾನು ಆ ಸತ್ಯವನ್ನು ಶ್ರೀರಾಮನ ಹೆಸರಿನಿಂದ ಗುರುತಿಸುತ್ತೇನೆ" ಎಂದು ಮಹಾತ್ಮ ಗಾಂಧಿ ಹೇಳಿದ್ದರು. ನನ್ನ ಬದುಕಿನ ಕರಾಳ ಗಳಿಗೆಗಳಲ್ಲಿ ರಾಮ ಎಂಬ ಆ ಒಂದು ಹೆಸರು ನನ್ನನ್ನು ಉಳಿಸಿದೆ ಮತ್ತು ಇನ್ನೂ ನನ್ನನ್ನು ಉಳಿಸುತ್ತಿದೆ ಎಂಬ ಮಾತುಗಳನ್ನು ಮಹಾತ್ಮ ಗಾಂಧಿ ಹೇಳಿ ದ್ದಾರೆ.
ತಮ್ಮ ಬಾಲ್ಯದಿಂದಲೂ ರಾಮನಾಮವನ್ನು ಜಪಿಸುತ್ತಾ ಬಂದಿದ್ದ ಗಾಂಧಿಯವರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷವು 2007ರಲ್ಲಿ ಪ್ರಭು ಶ್ರೀರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸಿ, ‘ಆತ ಒಬ್ಬ ಕಾಲ್ಪನಿಕ ವ್ಯಕ್ತಿ’ ಎಂದು ನ್ಯಾಯಾಲಯದಲ್ಲಿ ಕಪಿಲ್ ಸಿಬಲ್ ಅವರ ಮೂಲಕ ಅಫಿಡವಿಟ್ ಸಲ್ಲಿಸಿತ್ತು. ಮಹಾತ್ಮ ಗಾಂಧಿಯವರು ತಮ್ಮ ಪೂರ್ವಜರ ಮನೆಯ ಪಕ್ಕದಲ್ಲಿರುವ ರಾಮಮಂದಿರಕ್ಕೆ ಪ್ರತಿದಿನ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ರಾಮನ ಸ್ಮರಣೆಯು ಹೇಗೆ ತಮ್ಮನ್ನು ಪುನರುಜ್ಜೀವನಗೊಳಿಸುತ್ತಿತ್ತು ಎಂಬುದನ್ನು ಹೇಳುತ್ತಾರೆ.
ಮಂದಿರದ ಭೇಟಿಯ ಸಮಯದಲ್ಲಿ, “ನನ್ನ ರಾಮನು ಅಲ್ಲಿ ವಾಸವಾಗಿದ್ದನು, ಅವನು ನನ್ನನ್ನು ಅನೇಕ ಭಯ ಮತ್ತು ಪಾಪಗಳಿಂದ ರಕ್ಷಿಸಿದನು. ಅದು ನನಗೆ ಎಂದಿಗೂ ಮೂಢನಂಬಿಕೆಯಾಗಿರ ಲಿಲ್ಲ" ಎಂಬ ಮಾತುಗಳನ್ನು ಹೇಳಿದ್ದಾರೆ ಗಾಂಧೀಜಿ. “ದೇವಸ್ಥಾನದಲ್ಲಿ ದುಷ್ಕೃತ್ಯಗಳು ನಡೆದಿರ ಬಹುದು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಅವುಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಹೇಳುವ ಮೂಲಕ ರಾಮನಾಮದ ಮಹತ್ವವನ್ನು ಮಹಾತ್ಮ ಗಾಂಧಿ ಸಾರಿದ್ದರು.
ತಮ್ಮ ವಿಷಯದಲ್ಲಿ ಏನಾಗಿತ್ತೋ, ಲಕ್ಷಾಂತರ ಹಿಂದೂಗಳ ವಿಷಯದಲ್ಲಿಯೂ ಅದೇ ನಿಜವಾಗಿ ತ್ತೆಂಬುದನ್ನು ಮಹಾತ್ಮ ಗಾಂಧಿ ಹೇಳುತ್ತಾರೆ. ಆದರೆ ಮಹಾತ್ಮ ಗಾಂಧಿಯವರ ಹೆಸರನ್ನಿಟ್ಟು ಕೊಂಡು ರಾಜಕೀಯ ಮಾಡುವ ಕಾಂಗ್ರೆಸ್ಸಿಗರು ಅಯೋಧ್ಯೆಗೆ ಭೇಟಿ ನೀಡಿಲ್ಲ. ತಾವು ಭೇಟಿ ನೀಡಿ ದರೆ ಮುಸಲ್ಮಾನರಿಗೆ ನೋವಾಗುತ್ತದೆಯೆಂಬ ಭಯ ಮತ್ತು ಓಲೈಕೆ ರಾಜಕೀಯ ಅವರಿಗೆ ಮುಖ್ಯ ವಾಗಿದೆ.
ರಾಮನಾಮವನ್ನು ಹಿಂದೂಗಳು ಮಾತ್ರವಲ್ಲ ಇತರೆ ಧರ್ಮದವರೂ ಜಪಿಸಿದರೆ ತಪ್ಪಿಲ್ಲವೆಂದು ಮಹಾತ್ಮ ಗಾಂಧಿ ಹೇಳುತ್ತಾರೆ. ‘ದೇವನೊಬ್ಬ ನಾಮ ಹಲವು’ ಎಂಬ ಸ್ಪಷ್ಟತೆ ಅವರಿಗಿತ್ತು. ಇತರೆ ಧರ್ಮದವರು ಬೇರೆ ಬೇರೆ ಹೆಸರುಗಳಿಂದ ದೇವರನ್ನು ಕರೆಯಬಹುದು. ಆದರೆ ಜಗತ್ತಿಗೆ ಒಬ್ಬನೇ ದೇವರು ಎಂದು ಅವರು ಹೇಳಿದ್ದರು. “ನನಗೆ ದಶರಥನ ಮಗ ಮತ್ತು ಸೀತಾಮಾತೆಗೆ ಭಗವಂತ ನಾಗಿದ್ದ ರಾಮನು ಹೃದಯದಲ್ಲಿ ಕೆತ್ತಲಾದ ಹೆಸರು.
ರಾಮನು ಮಾನಸಿಕ, ನೈತಿಕ ಮತ್ತು ದೈಹಿಕ ದುಃಖಗಳನ್ನು ತೆಗೆದು ಹಾಕುವ ಸರ್ವಶಕ್ತ ಭಗವಂತ" ಎಂದು ಮಹಾತ್ಮ ಗಾಂಧಿ ಹೇಳಿದ್ದರು. “ಭಾರತವು ಏಳು ಲಕ್ಷ ಹಳ್ಳಿಗಳಲ್ಲಿ ವಾಸಿಸುತ್ತಿದೆ (ಅಂದಿನ ಕಾಲಘಟ್ಟದಲ್ಲಿ). ಚಿಕ್ಕ ಹಳ್ಳಿಗಳಲ್ಲಿ ಕೆಲವು ಸಂದರ್ಭಗಳಲ್ಲಿ ಜನಸಂಖ್ಯೆಯು ಕೆಲವು ನೂರು ಗಳನ್ನು ಮೀರುವುದಿಲ್ಲ. ನಾನು ಅಂಥ ಹಳ್ಳಿಗೆ ಹೋಗಿ ನೆಲೆಸಲು ಬಯಸುತ್ತೇನೆ. ಅದು ನಿಜವಾದ ಭಾರತ. ಈ ಜನರ ಬಳಿ ನೀವು ಹೆಚ್ಚು ವೈದ್ಯರು ಮತ್ತು ಆಸ್ಪತ್ರೆಯ ಉಪಕರಣಗಳನ್ನು ತೆಗೆದು ಕೊಂಡು ಹೋಗಲು ಸಾಧ್ಯವಿಲ್ಲ.
ಸರಳ, ನೈಸರ್ಗಿಕ ಪರಿಹಾರಗಳು ಮತ್ತು ರಾಮನಾಮ ಅವರ ಏಕೈಕ ಭರವಸೆ" ಎಂಬ ಮಾತು ಗಳನ್ನು ಮಹಾತ್ಮ ಗಾಂಧಿ ಹೇಳಿದ್ದರು. ಕರೋನ ಸಂದರ್ಭದಲ್ಲಿ ದೇಶದ ಮೂಲೆಮೂಲೆಗಳ ಜನರ ಮನಸ್ಸಿನಲ್ಲಿ ಆತ್ಮವಿಶ್ವಾಸ ತುಂಬಲು ನರೇಂದ್ರ ಮೋದಿಯವರು ತಟ್ಟೆ ಬಾರಿಸಲು ಹೇಳಿದ್ದನ್ನು ಅಣಕಿಸುವವರು, ಅರೋಗ್ಯ ಸಮಸ್ಯೆಗಳು ಬಂದಾಗ ಮಹಾತ್ಮ ಗಾಂಧಿಯವರು ರಾಮನಾಮ ಜಪದ ಮಹತ್ವವನ್ನು ಹೇಳಿದ್ದನ್ನು ಮರೆಯಬಾರದು.
ಕರೋನ ಎರಡನೇ ಅಲೆಯ ಸಂದರ್ಭದಲ್ಲಿ ಸಂಜೆಯ ವೇಳೆ ದೀಪ ಹಚ್ಚಲು ಪ್ರಧಾನಮಂತ್ರಿಗಳು ಕರೆ ಕೊಟ್ಟಾಗಲೂ ವಿರೋಧಪಕ್ಷಗಳು ಟೀಕಿಸಿದ್ದವು. ಆದರೆ ಮಹಾತ್ಮ ಗಾಂಧಿಯವರೇ, ರಾಮ ನಾಮ ಜಪದಿಂದ ಮನಸ್ಸಿನ ಮೇಲಾಗುವ ಧನಾತ್ಮಕ ಪರಿಣಾಮಗಳಿಂದ ರೋಗಗಳು ವಾಸಿ ಯಾಗುತ್ತವೆ ಎಂಬುದನ್ನು ನಂಬಿದ್ದರು.
ಸೋಮನಾಥ ದೇವಾಲಯದ ಉದ್ಘಾಟನೆಯ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಅಹ್ವಾನ ನೀಡಲಾಗಿತ್ತು. ಆಗ ಪ್ರಧಾನಮಂತ್ರಿಯಾಗಿದ್ದ ನೆಹರು ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದು, ಮಂದಿರದ ಉದ್ಘಾಟನೆಗೆ ಹೋಗಬಾರದೆಂದು ಹೇಳಿದ್ದರು. ನೆಹರು ಮಾತನ್ನು ಪರಿಗಣಿಸದ ಬಾಬು ರಾಜೇಂದ್ರ ಪ್ರಸಾದರು ಮಂದಿರದ ಉದ್ಘಾಟನೆಗೆ ಹೋಗಿ ದ್ದರು.
ದಾಳಿಕೋರ ಮೊಹಮ್ಮದ್ ಘಜ್ನಿಯು ನಾಶಪಡಿಸಿದ ಸೋಮನಾಥ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಮುಂದಾದಾಗ, ನೆಹರು ಅದನ್ನು ವಿರೋಧಿಸಿದ್ದರು. ಸೋಮನಾಥ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದರೆ ಮುಸಲ್ಮಾನ ರಿಗೆ ನೋವಾಗುತ್ತದೆಯೆಂಬ ಓಲೈಕೆಯ ರಾಜಕಾರಣ ನೆಹರುರಲ್ಲಿ ಕಾಣುತ್ತಿತ್ತು. ಆದರೆ, ಪಟೇಲರ ಬಲವಾದ ಶ್ರದ್ಧೆಯು ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ ಕಾರಣವಾಯಿತು.
ಅಂದು ಸೋಮನಾಥ ದೇವಾಲಯದ ಪುನರ್ನಿರ್ಮಾಣ ಕಾರ್ಯವನ್ನು ವಿರೋಧಿಸಿದ್ದ ರೀತಿ ಯಲ್ಲಿಯೇ ಅವರ ಕುಟುಂಬಸ್ಥರು ಅಯೋಧ್ಯೆಯಲ್ಲಿನ ರಾಮನ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಾ ಬಂದರು. ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ಸಿ ಗರಿಗೆ ಗಾಂಧಿಯವರಿಗೆ ಶ್ರೀರಾಮನಲ್ಲಿದ್ದಂಥ ಭಕ್ತಿ ಇಲ್ಲವೇ ಇಲ್ಲ.
ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತೇವೆ ಎಂದು ಹೇಳಿಕೊಳ್ಳುವವರು, ರಾಮನಾಮ ಜಪಿಸುತ್ತಿದ್ದ ಮಹಾತ್ಮನ ಆದರ್ಶಗಳನ್ನು ರಾಮನ ವಿಷಯದಲ್ಲಿ ಅನುಸರಿಸುವುದಿಲ್ಲ. ಮಹಾತ್ಮ ಗಾಂಧಿಯವರು ಭಗವದ್ಗೀತೆಗೆ ಕೊಟ್ಟಷ್ಟು ಪ್ರಾಮುಖ್ಯವನ್ನು ಕಾಂಗ್ರೆಸ್ಸಿಗರು ಕೊಡುವುದಿಲ್ಲ. ಮಕ್ಕಳಿಗೆ ಶಾಲೆಯಲ್ಲಿ ಭಗವದ್ಗೀತೆ ಹೇಳಿಕೊಡಲು ಹೊರಟರೆ ಕೋಮುವಾದವೆಂದು ವಿರೋಧಿಸು ವವರು ಕಾಂಗ್ರೆಸ್ಸಿಗರು.
ಮಹಾತ್ಮ ಗಾಂಧಿಯವರು ಗೋವುಗಳನ್ನು ಪ್ರೀತಿಸುತ್ತಿದ್ದರು, ಭಾರತದಲ್ಲಿ ಗೋಹತ್ಯೆ ಯಾಗುವು ದನ್ನು ವಿರೋಧಿಸಿದ್ದರು. ಅವರ ಆದರ್ಶಗಳನ್ನು ಪಾಲಿಸಲು ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತಂದರೆ ಕಾಂಗ್ರೆಸ್ಸಿಗರು ಅದರಲ್ಲೂ ಕೋಮುವಾದವನ್ನು ಹುಡುಕಿ ವಿರೋಧಿಸುತ್ತಾರೆ.
ಮಹಾತ್ಮ ಗಾಂಧಿಯವರ ಹೆಸರನ್ನು ತಮ್ಮ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುವಲ್ಲಿ ಸೀಮಿತ ರಾಗಿರುವವರು ಅವರ ಆದರ್ಶಗಳನ್ನು ಮಾತ್ರ ಅಳವಡಿಸಿಕೊಂಡಿಲ್ಲ. ಗಾಂಧಿಯವರ ಹೆಸರನ್ನಿಟ್ಟು ಕೊಂಡು, ಅವರು ಜೀವನದಲ್ಲಿ ಪಾಲಿಸುತ್ತಿದ್ದಂಥ ತತ್ವಗಳ ವಿರುದ್ಧವಾಗಿ ನಡೆದುಕೊಂಡು ಬಂದದ್ದು ಕಾಂಗ್ರೆಸ್ಸಿಗರ ಸಂಸ್ಕೃತಿ.
ಮಹಾತ್ಮ ಗಾಂಧಿಯವರು ತಮ್ಮ ರಾಮನಾಮ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ: “ಹಿಂದೂ ಧರ್ಮವು ಅಮೂಲ್ಯವಾದ ರತ್ನಗಳಿಂದ ತುಂಬಿರುವ ಮಿತಿಯಿಲ್ಲದ ಸಾಗರದಂತೆ. ನೀವು ಅದರ ಆಳಕ್ಕೆ ಇಳಿದರೆ ಹೆಚ್ಚು ಸಂಪತ್ತನ್ನು ಕಂಡುಕೊಳ್ಳುತ್ತೀರಿ. ಹಿಂದೂ ಧರ್ಮದಲ್ಲಿ ದೇವರನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಸಾವಿರಾರು ಜನರು ರಾಮ ಮತ್ತು ಕೃಷ್ಣರನ್ನು ಐತಿಹಾಸಿಕ ವ್ಯಕ್ತಿಗಳೆಂದು ನಿಸ್ಸಂದೇಹವಾಗಿ ನೋಡುತ್ತಾರೆ ಮತ್ತು ದಶರಥನ ಮಗನಾದ ರಾಮನ ರೂಪದಲ್ಲಿ ದೇವರು ಭೂಮಿಗೆ ಪ್ರತ್ಯಕ್ಷವಾಗಿ ಬಂದಿದ್ದಾನೆ ಮತ್ತು ಅವನನ್ನು ಆರಾಧಿಸುವ ಮೂಲಕ ಮೋಕ್ಷ ವನ್ನು ಪಡೆಯಬಹುದು ಎಂದು ಅಕ್ಷರಶಃ ನಂಬುತ್ತಾರೆ.
ರಾಮ ಮತ್ತು ಕೃಷ್ಣನ ವಿಷಯದಲ್ಲಿ ಇತಿಹಾಸ ಮತ್ತು ಸತ್ಯವು ಬೇರ್ಪಡಿಸಲಾಗದಂತೆ ಬೆರೆತಿವೆ. ಅವುಗಳನ್ನು ಬೇರ್ಪಡಿಸುವುದು ಅಸಾಧ್ಯ. ದೇವರಿಗೆ ಹೇಳಲಾದ ಎಲ್ಲಾ ಹೆಸರುಗಳು ಮತ್ತು ರೂಪಗಳನ್ನು ನಾನು ಸರ್ವವ್ಯಾಪಿಯಾದ ರಾಮನನ್ನು ಸೂಚಿಸುವ ಸಂಕೇತಗಳಾಗಿ ಸ್ವೀಕರಿಸಿ ದ್ದೇನೆ.
ಯಾರ ಹೃದಯದಲ್ಲಿ ರಾಮನ ಹೆಸರನ್ನು ಕೆತ್ತಲಾಗುತ್ತದೆಯೋ ಅವರು ಮಾನಸಿಕ, ನೈತಿಕ ಮತ್ತು ದೈಹಿಕ ದುಃಖಗಳಿಂದ ದೂರವಿರುತ್ತಾರೆ". ಜಗತ್ತಿನ ಸರ್ವ ಧರ್ಮದವರಿಗೂ ಒಂದು ದೊಡ್ಡ ಶಕ್ತಿಯಾಗಿ ರಾಮನಾಮ ಕೆಲಸ ಮಾಡುತ್ತದೆ ಎಂಬುದನ್ನು ಮಹಾತ್ಮ ಗಾಂಧಿಯವರು ಪದೇ ಪದೆ ಹೇಳಿದ್ದಾರೆ. ಆದರೆ ಅವರ ಆದರ್ಶಗಳನ್ನು ಪಾಲಿಸುತ್ತೇವೆ ಎಂದು ಹೇಳಿಕೊಳ್ಳುವವರು, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದು ನಿಧಾನವಾಗಲೆಂದೇ ನ್ಯಾಯಾಲಯದಲ್ಲಿ ಹಲವು ದಾವೆಗಳನ್ನು ಹೂಡಿ ತಡ ಮಾಡಿದ್ದರು.
ಶ್ರೀರಾಮಚಂದ್ರ ಎಂದಿಗೂ ಯುದ್ಧದ ಸಂಕೇತವಾಗಿರಲಿಲ್ಲ, ಆತ ಧರ್ಮದ ಸಂಕೇತವಾಗಿದ್ದ. ಧರ್ಮದ ವಿಚಾರದಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಶ್ರೀರಾಮನದ್ದಾಗಿತ್ತು. ಅಧರ್ಮ ವನ್ನು ನಾಶಗೊಳಿಸಲು ಶ್ರೀರಾಮ ತನ್ನ ಬಿಲ್ಲನ್ನು ಬಳಸಿದ್ದನೇ ಹೊರತು, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಅಲ್ಲ.
ಸೀತಾಮಾತೆಯನ್ನು ರಾಕ್ಷಸ ರಾವಣನಿಂದ ರಕ್ಷಿಸುವ ಸಲುವಾಗಿ ಶ್ರೀರಾಮ ಲಂಕೆಗೆ ಲಗ್ಗೆ ಇಟ್ಟು ಯುದ್ಧ ಮಾಡಿದ್ದ, ರಾವಣನ ಸಂಹಾರದ ನಂತರ ವಿಭೀಷಣನಿಗೆ ಲಂಕೆಯನ್ನು ಬಿಟ್ಟುಕೊಟ್ಟಿದ್ದ. ಕೊನೆಯದಾಗಿ ಮಹಾತ್ಮ ಗಾಂಧಿಯವರು ಹೇಳಿದ್ದೇನೆಂದರೆ “ಒಂದೆಡೆ ಬಾಯಿಯಲ್ಲಿ ರಾಮನಾಮ ವನ್ನು ಪುನರಾವರ್ತಿಸುವುದು, ಮತ್ತೊಂದೆಡೆ ನಿಜವಾದ ಆಚರಣೆಯಲ್ಲಿ ರಾವಣನ ಮಾರ್ಗವನ್ನು ಅನುಸರಿಸುವುದು ನಿಷ್ಪ್ರಯೋಜಕತ್ವಕ್ಕಿಂತಲೂ ಕೆಟ್ಟದಾಗಿದೆ.
ಇದು ಬರಿಯ ಬೂಟಾಟಿಕೆ. ಒಬ್ಬನು ತನ್ನನ್ನು ಅಥವಾ ಜಗತ್ತನ್ನು ಮೋಸಗೊಳಿಸಬಹುದು. ಆದರೆ ಸರ್ವಶಕ್ತ ರಾಮನನ್ನು ಮೋಸಗೊಳಿಸಲು ಸಾಧ್ಯವಿಲ್ಲ"