ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಕೇಶವ ಪ್ರಸಾದ್​ ಬಿ

Columnist

keshavaprasadb@gmail.com

ಕೇಶವ ಪ್ರಸಾದ್‌ ಬಿ ಅವರಿಗೆ ಪತ್ರಿಕೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಪರ ಅನುಭವ ಇದೆ. ಈ ಹಿಂದೆ ವಿಜಯ ಕರ್ನಾಟಕ ದೈನಿಕದ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ದೇಶೀಯ- ಅಂತಾರಾಷ್ಟ್ರೀಯ ವಿದ್ಯಮಾನಗಳು, ವಾಣಿಜ್ಯ- ಉದ್ದಿಮೆ, ಸಾಧಕರ ಸಂದರ್ಶನ ಹೀಗೆ ವೈವಿಧ್ಯಮಯ ಲೇಖನ, ವಿಶೇಷ ವರದಿ, ಮೇಕಿಂಗ್‌ ಇಂಡಿಯಾ ಅಂಕಣ ಬರೆದಿದ್ದಾರೆ. ವಿಸ್ತಾರ ನ್ಯೂಸ್‌ ಚಾನೆಲ್‌ನ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಪರ್ಸನಲ್ ಫೈನಾನ್ಸ್‌, ಬಿಸಿನೆಸ್‌, ಕೃಷಿಗೆ ಸಂಬಂಧಿಸಿ ಹಲವಾರು ವಿಡಿಯೊ ಸಂದರ್ಶನಗಳನ್ನು ನಡೆಸಿದ್ದಾರೆ. ಪತ್ರಿಕೆ ಮತ್ತು ಡಿಜಿಟಲ್‌ ಮೀಡಿಯಾ ಎರಡರಲ್ಲೂ ಅನುಭವ ಗಳಿಸಿದ್ದಾರೆ. ಲೈಫ್‌ ಈಸ್‌ ವಂಡರ್‌ಫುಲ್‌, ಸಿರಿವಂತಿಕೆಗೆ 100% ಸೂತ್ರಗಳು ಕೃತಿಯನ್ನು ಬರೆದಿದ್ದಾರೆ.

Articles
Keshava Prasad B Column: ಇತರರನ್ನು ಶ್ರೀಮಂತರನ್ನಾಗಿಸಿದ ಭಾರತೀಯ ಉದ್ಯಮಿಗಳು !

ಇತರರನ್ನು ಶ್ರೀಮಂತರನ್ನಾಗಿಸಿದ ಭಾರತೀಯ ಉದ್ಯಮಿಗಳು !

ಟಾಟಾ ಸಮೂಹವನ್ನೇ ತೆಗೆದುಕೊಳ್ಳಿ. ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 28 ಲಕ್ಷ ಕೋಟಿ ರುಪಾಯಿ. ಇದರಲ್ಲಿ ೧೪ ಲಕ್ಷ ಕೋಟಿ ಸಂಪತ್ತು ಹೂಡಿಕೆದಾರರ ಪಾಲಾಗಿದೆ. ಅದೇ ರೀತಿ ರಿಲಾ ಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯ ೨೩ ಲಕ್ಷ ಕೋಟಿ. ಇದರಲ್ಲಿ ೧೨ ಲಕ್ಷ ಕೋಟಿ ರುಪಾಯಿಗಳು ಹೂಡಿಕೆದಾರರಿಗೆ ಸೇರಿವೆ.

India's GDP: ಅಮೆರಿಕಕ್ಕೆ ರಫ್ತು ಕುಸಿತಕ್ಕೀಡಾಗಿದ್ದರೂ, ಭಾರತದ ಎರಡನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ 8.2% ಕ್ಕೆ ಏರಿಕೆ!

ಭಾರತದ ಎರಡನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ 8.2% ಕ್ಕೆ ಏರಿಕೆ!

GDP Rate: ಅಮೆರಿಕಕ್ಕೆ ರಫ್ತು ಕುಸಿದಿದ್ದರೂ, ಚಿನ್ನದ ಆಮದು ಜಾಸ್ತಿಯಾಗಿದ್ದರೂ, ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ನಿರೀಕ್ಷೆಗೂ ಮೀರಿ ಬೆಳೆದು ಅಚ್ಚರಿ ಮೂಡಿಸಿದೆ. ಭಾರತದ ಜಿಡಿಪಿ 8 ಪರ್ಸೆಂಟ್‌ ಗೂ ಹೆಚ್ಚು ಆಗಿರುವುದು ಅನಿರೀಕ್ಷಿತ.

Meesho IPO: ಸ್ಟಾಕ್‌ ಮಾರ್ಕೆಟ್‌ನಲ್ಲಿ ಬೆಂಗಳೂರಿನ ಮೀಶೊ IPO ಹವಾ

ಸ್ಟಾಕ್‌ ಮಾರ್ಕೆಟ್‌ನಲ್ಲಿ ಬೆಂಗಳೂರಿನ ಮೀಶೊ IPO ಹವಾ

ಬೆಂಗಳೂರು ಮೂಲದ ಇ-ಕಾಮರ್ಸ್‌ ಕಂಪನಿಯಾದ ಮೀಶೊ ಲಿಮಿಟೆಡ್‌ ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಪ್ರವೇಶಿಸುತ್ತಿದೆ.‌ ಫ್ಯಾಷನ್‌, ಕಿಚನ್‌, ಹೋಮ್‌ ಗೂಡ್ಸ್‌, ಬ್ಯೂಟಿ, ಪರ್ಸನಲ್‌ ಕೇರ್‌ , ಎಲೆಕ್ಟ್ರಾನಿಕ್‌ ಅಸ್ಸೆಸರೀಸ್ ಉತ್ಪನ್ನಗಳನ್ನು ವಿತರಿಸುತ್ತದೆ. ಜಪಾನ್‌ ಮೂಲದ ಸಾಫ್ಟ್‌ ಬ್ಯಾಂಕ್‌ ಬೆಂಬಲಿತ ಮೀಶೊ, 5,421 ಕೋಟಿ ರುಪಾಯಿ ಗಾತ್ರದ ಐಪಿಒ ನಡೆಸಲು ಉದ್ದೇಶಿಸಿದೆ. ಸಾರ್ವಜನಿಕರು ಡಿಸೆಂಬರ್‌ 3 ರಿಂದ ಬಿಡ್‌ ಸಲ್ಲಿಸಬಹುದು.

Keshava Prasad B Column: ವಾರಕ್ಕೆ 48 ಗಂಟೆ ಕೆಲಸ ಸಾಕೆಂದ ಹೊಸ ಕಾರ್ಮಿಕ ನೀತಿ !

ವಾರಕ್ಕೆ 48 ಗಂಟೆ ಕೆಲಸ ಸಾಕೆಂದ ಹೊಸ ಕಾರ್ಮಿಕ ನೀತಿ !

ಹೊಸ ಕಾರ್ಮಿಕ ನೀತಿ ಸಂಹಿತೆ ನಿರೀಕ್ಷೆಯಂತೆ ಸಂಚಲನ ಮೂಡಿಸಿದೆ. ಟ್ಯಾಕ್ಸಿ ಕ್ಯಾಬ್ ಚಾಲಕರು, ಡೆಲಿವರಿ ಬಾಯ್ಸ್ ಮತ್ತು ದಿನಗೂಲಿ ಕಾರ್ಮಿಕರಿಗೆ ಅದು ಸಿಹಿ ಸುದ್ದಿ ನೀಡಿದೆ. ಜತೆಗೆ ಕೆಲವು ಬಗೆಯ ಆತಂಕ, ಗೊಂದಲಗಳನ್ನೂ ಸೃಷ್ಟಿಸಿದೆ. ಹೀಗಿದ್ದರೂ ಇದು ಹಲವು ಆಯಾಮಗಳಿಂದ ಕಾರ್ಮಿಕ ಸ್ನೇಹಿಯಾಗಿದೆ ಎನ್ನಲು ಕಾರಣಗಳೂ ಇವೆ. ‌

Keshava Prasad B Column: ವಾರಕ್ಕೆ 72 ಗಂಟೆ ಕೆಲಸ ಮಾಡಿ ಎಂದು ಅವರೆಲ್ಲ ಹೇಳುತ್ತಿರುವುದೇಕೆ ?

ವಾರಕ್ಕೆ 72 ಗಂಟೆ ಕೆಲಸ ಮಾಡಿ ಎಂದು ಅವರೆಲ್ಲ ಹೇಳುತ್ತಿರುವುದೇಕೆ ?

ಭಾರತದಲ್ಲಿ ವಾರಕ್ಕೆ 70 ಗಂಟೆಗಳ ಕಾಲ ಎಲ್ಲರಿಗೂ ಕೆಲಸ ಮಾಡಲು ಸಾಧ್ಯವೇ? ಇಲ್ಲವೇ? ಎಂಬುದು ಬೇರೆ ವಿಚಾರ. ಆದರೆ ಮೂರ್ತಿಯವರ ದೂರದೃಷ್ಟಿ, ಆಶಯ, ಕಾಳಜಿಯಲ್ಲಿ ಸ್ವಾರ್ಥವಿಲ್ಲ. ಮೂರ್ತಿಯವರಿಗಿಂತಲೂ ಕಠೋರ ಪರಿಶ್ರಮಿಗಳನ್ನು ನೋಡಬಹುದು! ಜಪಾನಿನ ನೂತನ ಪ್ರಧಾನಿ ಸನಾಯ್ ಟಕಾಯಿಚಿ, ಅಲ್ಲಿನ ಮೊದಲ ಮಹಿಳಾ ಪ್ರಧಾನಿ. ಅವರ ಕೆಲಸ ಶೈಲಿ ಬೇರೆಯವರ ನಿದ್ದೆಗೆಡಿಸಿದೆ!

Stock Market: ಸೆನ್ಸೆಕ್ಸ್‌ 389 ಅಂಕ ಏರಿಕೆ;  ನಿಫ್ಟಿ 26,013ಕ್ಕೆ ಜಿಗಿತ

ಸೆನ್ಸೆಕ್ಸ್‌ 389 ಅಂಕ ಏರಿಕೆ; ನಿಫ್ಟಿ 26,013ಕ್ಕೆ ಜಿಗಿತ

ಸೆನ್ಸೆಕ್ಸ್‌ (SENSEX) ಮತ್ತು ನಿಫ್ಟಿ (Nifty) ಇವತ್ತು ಗಣನೀಯ ಚೇತರಿಕೆ ದಾಖಲಿಸಿತು. ಸೆನ್ಸೆಕ್ಸ್‌ 389 ಅಂಕ ಹೆಚ್ಚಳವಾಗಿ 84,950ಕ್ಕೆ ಸ್ಥಿರವಾಯಿತು. ನಿಫ್ಟಿ 104 ಅಂಕ ಚೇತರಿಸಿಕೊಂಡು 26,013ಕ್ಕೆ ಸ್ಥಿರವಾಯಿತು. ಎಟರ್ನಲ್‌ ಮತ್ತು ಟಾಟಾ ಕನ್‌ಸ್ಯೂಮರ್‌ ತಲಾರ ಎರಡು ಪರ್ಸೆಂಟ್‌ ಹೆಚ್ಚಳ ದಾಖಲಿಸಿತು.

Stock Market: ಬಿದ್ದು ಎದ್ದ ಸೆನ್ಸೆಕ್ಸ್, ಬಿಹಾರ ರಿಸಲ್ಟ್‌ ಎಫೆಕ್ಟ್‌

ಬಿದ್ದು ಎದ್ದ ಸೆನ್ಸೆಕ್ಸ್, ಬಿಹಾರ ರಿಸಲ್ಟ್‌ ಎಫೆಕ್ಟ್‌

Share Market: ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ಬಿದ್ದು ಎದ್ದು ಚೇತರಿಸಿತು. ಬೆಳಗ್ಗಿನ ವಹಿವಾಟಿನಲ್ಲಿ ಪ್ರಾಫಿಟ್‌ ಬುಕಿಂಗ್‌ ಪರಿಣಾಮ ಕುಸಿತಕ್ಕೀಡಾಗಿದ್ದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಬಳಿಕ ಗಣನೀಯ ಚೇತರಿಸಿತು. ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್‌ 500 ಮತ್ತು ನಿಫ್ಟಿ 175 ಅಂಕ ಕುಸಿದಿತ್ತು. ಆದರೆ ನಂತರ ಚೇತರಿಕೆ ಕಂಡು ಬಂದಿತು ಅಂತಿಮವಾಗಿ ಸೆನ್ಸೆಕ್ಸ್‌ 84 ಅಂಕ ಏರಿಕೆಯಾಗಿ 84,562ಕ್ಕೆ ಸ್ಥಿರವಾಯಿತು. ನಿಫ್ಟಿ 36 ಅಂಕ ಹೆಚ್ಚಳವಾಗಿ 25,916ಕ್ಕೆ ದಿನದ ವಹಿವಾಟು ಮುಕ್ತಾಯಗಳಿಸಿತು.

‌Keshava Prasad B Column: ವಾರೆನ್‌ ಬಫೆಟ್‌ ಬರೆದ ಕೊನೆಯ ಪತ್ರದಲ್ಲಿ ಏನಿದೆ?

ವಾರೆನ್‌ ಬಫೆಟ್‌ ಬರೆದ ಕೊನೆಯ ಪತ್ರದಲ್ಲಿ ಏನಿದೆ?

ಷೇರುದಾರರಿಗೆ ಕಿವಿಮಾತುಗಳನ್ನೂ ಹೇಳಿದ್ದಾರೆ. “ಹಳೆಯ ಪ್ರಮಾದಗಳನ್ನೇ ನೆನಪಿಸಿಕೊಂಡು ಕೊರಗದಿರಿ. ಅವುಗಳಿಂದ ಪಾಠಗಳನ್ನು ಕಲಿತುಕೊಂಡು ಮಂದುವರಿ ಯಿರಿ. ಹಣ ಅಥವಾ ಖ್ಯಾತಿಗಿಂತಲೂ ದಯೆ, ಸೌಜನ್ಯ, ಸಮಗ್ರತೆಯೇ ವ್ಯಕ್ತಿತ್ವವನ್ನು ರೂಪಿಸುತ್ತವೆ. ನಿಜವಾದ ಯಶಸ್ಸು ಸಾವಿರಾರು ಜನರಿಗೆ ಸಹಾಯ ಮಾಡುವುದರಿಂದ ಸಿಗುತ್ತದೆಯೇ, ಹೊರತು ಅಧಿಕಾರದ ಹಿಂದೆ ಬೀಳುವುದರಿಂದ ಅಲ್ಲ.

Stock Market: ಬಿಹಾರ ಚುನಾವಣೆ ಫಲಿತಾಂಶಕ್ಕೆ ಮುನ್ನ ಸೆನ್ಸೆಕ್ಸ್-ನಿಫ್ಟಿ ಫ್ಲಾಟ್‌

ಬಿಹಾರ ಚುನಾವಣೆ ಫಲಿತಾಂಶಕ್ಕೆ ಮುನ್ನ ಸೆನ್ಸೆಕ್ಸ್-ನಿಫ್ಟಿ ಫ್ಲಾಟ್‌

ಬಿಹಾರ ಚುನಾವಣೆಯ ಫಲಿತಾಂಶ (Bihar Assembly Election 2025) ಶುಕ್ರವಾರ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸ್ಟಾಕ್‌ ಮಾರ್ಕೆಟ್‌ನಲ್ಲಿ (Stack Market) ಸೆನ್ಸೆಕ್ಸ್‌ ಮತ್ತು ನಿಫ್ಟಿ ಯಾವುದೇ ಮಹತ್ವದ ಏರಿಳಿತ ದಾಖಲಿಸದೆ ಫ್ಲಾಟ್‌ ಆಗಿತ್ತು.

Rahul Gandhi: ರಾಹುಲ್‌ ಗಾಂಧಿಯವರ "ಮತಗಳ್ಳತನʼ ಆರೋಪದ ಸುತ್ತಮುತ್ತ

ರಾಹುಲ್‌ ಗಾಂಧಿಯವರ "ಮತಗಳ್ಳತನʼ ಆರೋಪದ ಸುತ್ತಮುತ್ತ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಮಹದೇವಪುರ, ಆಳಂದ ಮಾತ್ರವಲ್ಲದೆ ವ್ಯಾಪಕವಾಗಿ ಮತಗಳ್ಳತನ ನಡೆದಿರುವುದರ ಬಗ್ಗೆ ಆರೋಪಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತಗಳ್ಳತನ ಪ್ರಕರಣಗಳು ನಡೆದಿವೆ ಎಂಬುದು ಅವರ ದೂರು. ಮತದಾರರ ಪಟ್ಟಿಯಲ್ಲಿ ಹಳೆಯ ಮಹಿಳೆಯೊಬ್ಬರ ಹೆಸರು 220 ಸಲ ಕಾಣಿಸಿಕೊಂಡಿದೆ ಎಂದು ರಾಹುಲ್‌ ಗಾಂಧಿಯವರು ಹೇಳಿದ್ದಾರೆ. ಆದರೆ ಮೌಲಾನಾ ವಿಧಾನಸಭಾ ಕ್ಷೇತ್ರದಲ್ಲಿ ಆ ಮಹಿಳೆ ಇದ್ದಾರೆ. ಆ ಕ್ಷೇತ್ರವನ್ನು ಸ್ವತಃ ಕಾಂಗ್ರೆಸ್‌ ಪಕ್ಷವೇ ಗೆದ್ದಿರುವುದನ್ನು ಗಮನಿಸಬಹುದು.

Keshava Prasad B Column: ಹಣ ಉಳಿತಾಯ ಒಂದೇ ಸಾಲದು, ಹೂಡಿಕೆ ಮರೆಯದಿರಿ !

ಹಣ ಉಳಿತಾಯ ಒಂದೇ ಸಾಲದು, ಹೂಡಿಕೆ ಮರೆಯದಿರಿ !

ಪ್ರತಿ ತಿಂಗಳೂ ಬ್ಯಾಂಕ್ ಬ್ಯಾಲೆ ಏರಿಕೆಯಾಗುವುದನ್ನು ನೋಡಲು ಖುಷಿಯಾಗಬಹುದು. ಮನಸ್ಸಿಗೆ ಹೆಚ್ಚು ಭದ್ರತೆ ಮತ್ತು ನಿಯಂತ್ರಣದ ಭಾವ ಮೂಡುತ್ತದೆ. ಆದರೂ ಈ ಕಂಫರ್ಟ್‌ನ ಹಿಂದೆ ಸದ್ದಿಲ್ಲದೆ ಅಪಾಯ ಕಾದಿರುತ್ತದೆ. ಹಣದುಬ್ಬರದ ಪರಿಣಾಮವಾಗಿ ನಿಮ್ಮ ಉಳಿತಾಯದ ಹಣದ ಮೌಲ್ಯ ಕಡಿಮೆಯಾಗುತ್ತಿರುತ್ತದೆ. ದಾಖಲೆಯಲ್ಲಿ ಮಾತ್ರ ಉಳಿತಾಯ ಏರುತ್ತಿರುತ್ತದೆ. ಆದರೆ ಅದರ ಮೌಲ್ಯ ಕರಗುತ್ತಿರುತ್ತದೆ.

Keshava Prasad B Column: ಚೀನಾದಲ್ಲಿ ಡಿಗ್ರಿ ಇಲ್ಲದಿದ್ದರೆ ದುಡ್ಡಿನ ಬಗ್ಗೆ ರೀಲ್ಸ್‌ ಮಾಡುವಂತಿಲ್ಲ !

ಚೀನಾದಲ್ಲಿ ಡಿಗ್ರಿ ಇಲ್ಲದಿದ್ದರೆ ದುಡ್ಡಿನ ಬಗ್ಗೆ ರೀಲ್ಸ್‌ ಮಾಡುವಂತಿಲ್ಲ !

ಭಾರತದನಾದರೂ ಇಂಥ ಕಾನೂನು ಜಾರಿಯಾದರೆ? ಪರಿಸ್ಥಿತಿಯನ್ನು ಆಲೋಚಿಸುವುದೂ ಕಷ್ಟ ವಾದೀತು. ಏಕೆಂದರೆ ನಮ್ಮಲ್ಲಿ ಜ್ಯೋತಿಷಿಗಳು, ಗುರುಗಳ ಸೋಗಿನಲ್ಲಿ ಯಾರ‍್ಯಾರೋ, ಹಣಕಾಸು-ಸಂಪತ್ತು-ಆರೋಗ್ಯ-ರಾಜಕೀಯ ಭವಿಷ್ಯದ ತನಕ ಬ್ರಹ್ಮಾಂಡವನ್ನೂ ಗಂಟೆಗಟ್ಟಲೆ ಹೇಳಿ‌ ಬಿಡುತ್ತಾರೆ. ಸಕಲ ಸಮಸ್ಯೆಗಳಿಗೂ ಪರಿಹಾರಗಳನ್ನು ಚಿಟಿಕೆ ಹೊಡೆದಂತೆ ಕೊಟ್ಟು ಬಿಡುತ್ತಾರೆ. ಆದರೆ ಅವರಿಗೆ ಆಯಾ ವಿಷಯಗಳಲ್ಲಿ ಪದವಿ ಇದೆಯೇ? ಡಿಗ್ರಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆಯೇ? ಯಾರಿಗೂ ಗೊತ್ತಿಲ್ಲ!

Keshava Prasad B Column: ಮನೆ ಖರೀದಿಸುತ್ತೀರಾ ? ಕೇಂದ್ರವೇ ಕೊಡುತ್ತೆ 1.80 ಲಕ್ಷ ರೂಪಾಯಿ !

ಮನೆ ಖರೀದಿಸುತ್ತೀರಾ ? ಕೇಂದ್ರವೇ ಕೊಡುತ್ತೆ 1.80 ಲಕ್ಷ ರೂಪಾಯಿ !

ಕೇಂದ್ರ ಸರಕಾರ ಪ್ರಾಯೋಜಿತವಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ-(ನಗರ) ( PMAY) ೨.೦ ಅಡಿಯಲ್ಲಿ ೧ ಲಕ್ಷದ ೮೦ ಸಾವಿರ ರುಪಾಯಿ ತನಕ ಬಡ್ಡಿ ಸಬ್ಸಿಡಿ ಪಡೆದು ಹಣವನ್ನು ಉಳಿಸಬಹುದು. ಈ ಕುರಿತ ವಿವರಗಳನ್ನು ನೋಡೋಣ. ಮೊದಲನೆಯದಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ ೨.೦ ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ

‌Keshava Prasad B Column: ಗೂಗಲ್‌ ಮ್ಯಾಪ್‌ʼಗೆ ಪರ್ಯಾಯ ಕಟ್ಟಿದ ರಾಕೇಶ್‌ ವರ್ಮಾ !

ಗೂಗಲ್‌ ಮ್ಯಾಪ್‌ʼಗೆ ಪರ್ಯಾಯ ಕಟ್ಟಿದ ರಾಕೇಶ್‌ ವರ್ಮಾ !

“ದೇಶಕ್ಕಾಗಿ ನೀವು ಏನಾದರೂ ಮಾಡಬೇಕು ಎಂಬ ಭಾವನೆ ಬಲವಾದಾಗ, ಬೇರೆ ಯಾವುದೂ ಮಹತ್ವ ಎನ್ನಿಸುವುದಿಲ್ಲ. ಆದ್ದರಿಂದ ಅಮೆರಿಕವನ್ನು ಬಿಟ್ಟು ಬಂದೆವು" ಎನ್ನುತ್ತಾರೆ ವರ್ಮಾ. ಭಾರತದ 7500ಕ್ಕೂ ಹೆಚ್ಚು ನಗರ ಮತ್ತು ಪಟ್ಟಣಗಳಲ್ಲಿ ಹಾಗೂ 7.5 ಲಕ್ಷ ಹಳ್ಳಿಗಳಲ್ಲಿ ಅವರ ‘ಮ್ಯಾಪ್ ಇಂಡಿಯಾ’ ಕಾರ್ಯನಿರ್ವಹಿಸುತ್ತಿದೆ! ಆಟೊಮೇಟಿವ್, ಲಾಜಿಸ್ಟಿಕ್ಸ್, ಇ-ಕಾಮರ್ಸ್ ಮತ್ತು ಸ್ಮಾರ್ಟ್ ಸಿಟಿಗಳ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.‌

Keshava Prasad B Column: ಮೇಕ್‌ ಇನ್‌ ಕುಂದಾಪುರ, ಗ್ಲೋಬಲ್‌ ಕಾಂತಾರ !

Keshava Prasad B Column: ಮೇಕ್‌ ಇನ್‌ ಕುಂದಾಪುರ, ಗ್ಲೋಬಲ್‌ ಕಾಂತಾರ !

ಇಲ್ಲಿ ಮೇಕ್ ಇನ್ ಇಂಡಿಯಾ, ಲೋಕಲ್ ಫಾರ್ ಗ್ಲೋಬಲ್ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ತಮ್ಮ ಚಿತ್ರದಲ್ಲಿ ಅಳವಡಿಸಿ ಅದ್ಭುತ ಯಶಸ್ಸು ಕಂಡಿರುವುದು ಇತರರಿಗೆ ಮರೆಯಲಾಗದ ಪಾಠ. ಏನಿದು ಲೋಕಲ್ ಫಾರ್ ಗ್ಲೋಬಲ್? ಭಾರತದ ಸ್ಥಳೀಯ ಉತ್ಪನ್ನ, ಸೇವೆಗಳನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವುದು. ‌

ಟ್ರಂಪ್‌ ರಂಪಕ್ಕೆ ಸಿಗಲಿದೆಯೇ ನೊಬೆಲ್‌ ?

ಟ್ರಂಪ್‌ ರಂಪಕ್ಕೆ ಸಿಗಲಿದೆಯೇ ನೊಬೆಲ್‌ ?

ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ಸಿಗಬೇಕು ಎಂಬುದನ್ನು ಅದರ ಸ್ಥಾಪಕ, ಇಂಡಸ್ಟ್ರಿಯಲಿಸ್ಟ್ ಅಲ್ರೆಡ್ ನೊಬೆಲ್ ತಮ್ಮ 1895ರ ವಿಲ್‌ನಲ್ಲಿ ಬರೆದಿದ್ದರು. ರಾಷ್ಟ್ರಗಳ ನಡುವೆ ಶಸ್ತ್ರಾಸ್ತ್ರ ಪ್ರಸರಣವನ್ನು ನಿರ್ಮೂಲನೆ ಮಾಡುವವರು ಮತ್ತು ಕಡಿಮೆ ಮಾಡುವ ವ್ಯಕ್ತಿಗಳಿಗೆ, ಶಾಂತಿ ಸ್ಥಾಪನೆಗೆ ಯತ್ನಿಸುವವರಿಗೆ ನೀಡಬೇಕು ಎಂದಿದ್ದರು.

Keshava Prasad B Column: ಸೈಕಲ್‌ ತುಳಿದು ಮೈಕ್ರೋಸಾಫ್ಟ್‌ʼಗೇ ಸವಾಲೆಸೆದ ಟೆಕ್‌ ಉದ್ಯಮಿ

ಸೈಕಲ್‌ ತುಳಿದು ಮೈಕ್ರೋಸಾಫ್ಟ್‌ʼಗೇ ಸವಾಲೆಸೆದ ಟೆಕ್‌ ಉದ್ಯಮಿ

ಅರಟ್ಟೈ ಎಂಬ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಈಗ ಸುದ್ದಿಯಲ್ಲಿದೆ. ವಾಟ್ಸಾಪ್‌ಗೆ ಇದು ಭಾರತದ ಪರ್ಯಾಯವಾಗಬಲ್ಲದೇ? ಎಂಬ ಬಗ್ಗೆ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಕೆಲ ದಿನಗಳಿಂದ ಅರಟ್ಟೈನ ಟ್ರಾಫಿಕ್ ನೂರು ಪಟ್ಟು ವೃದ್ಧಿಸಿದೆ. ಸೈನ್ ಅಪ್‌ಗಳು ದಿನಕ್ಕೆ ಸರಾಸರಿ 3500ರಿಂದ 350000ಕ್ಕೆ ಜಿಗಿದಿವೆ!

Keshava Prasad B Column: ಸೆನ್ಸೆಕ್ಸ್‌ ಶೂನ್ಯ ಸಂಪಾದನೆಗೆ ಚಿಂತೆ ಏಕೆ ? ಬಫೆಟ್‌ ಸೂತ್ರ ಓದಿ

ಸೆನ್ಸೆಕ್ಸ್‌ ಶೂನ್ಯ ಸಂಪಾದನೆಗೆ ಚಿಂತೆ ಏಕೆ ? ಬಫೆಟ್‌ ಸೂತ್ರ ಓದಿ

‘ಎನ್‌ಆರ್‌ಐ ಮನಿ ಕ್ಲಿನಿಕ್’ ಯುಟ್ಯೂಬ್ ಚಾನಲ್‌ನ ಸ್ಥಾಪಕ ಮತ್ತು ಹಣಕಾಸು ತಜ್ಞರಾದ ಡಾ. ಚಂದ್ರಕಾತ ಭಟ್ ಹೀಗೆನ್ನುತ್ತಾರೆ- “ನೋಡಿ, ಸೆನ್ಸೆಕ್ಸ್ ಶುರುವಾದಾಗಿನಿಂದ ಇಲ್ಲಿಯವರೆಗೂ ಅದರ ಏರಿಳಿತವನ್ನು ನಾನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದೇನೆ. ಅದು ಹತ್ತು ವರ್ಷದಲ್ಲಿ ಒಮ್ಮೆ ಮಾತ್ರ ನೊರೆಯುಕ್ಕುವಂತೆ ಏರುತ್ತದೆ.

Keshava Prasad B Column: ಮೋದಿಯುಗದಲ್ಲಿ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ !

ಮೋದಿಯುಗದಲ್ಲಿ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ !

ಅಮೆರಿಕ,‌ ಯುಎಇ, ಸೌದಿ ಅರೇಬಿಯಾ, ಜರ್ಮನಿ, ಇಟಲಿ, ನೆದರ್ಲೆಂಡ್ಸ್ ಸೇರಿದಂತೆ ಇನ್ನೂರಕ್ಕೂ ಹೆಚ್ಚು ದೇಶಗಳಿಗೆ ಭಾರತ ನಾನಾ ವಸ್ತುಗಳನ್ನು ರಫ್ತು ಮಾಡುತ್ತದೆ. ಮೂರನೆಯದಾಗಿ ಸ್ಟಾಕ್ ಮಾರ್ಕೆಟ್ ಬೆಳವಣಿಗೆ. 2014ರಲ್ಲಿ ನಿಫ್ಟಿ 7360ರಲ್ಲಿತ್ತು. ಈಗ 25100ಕ್ಕೆ ಏರಿದೆ. 240 ಪರ್ಸೆಂಟ್ ಹೆಚ್ಚಳ ವಾಗಿದೆ. ಸೆನ್ಸೆಕ್ಸ್ 24690‌ ರಿಂದ 82000ಕ್ಕೆ ಏರಿದೆ, ಶೇ. 235ರಷ್ಟು ವೃದ್ಧಿಸಿದೆ. ಹಣದುಬ್ಬರ ಶೇ. 4ರಿಂದ 6ರ ಮಟ್ಟದಲ್ಲಿದೆ.

‌Keshava Prasad B Column: ಅಮೆರಿಕದ ಸಾಲದ ಬೆಟ್ಟವನ್ನು ಕರಗಿಸಲಿದೆಯೇ ಬಿಟ್‌ ಕಾಯಿನ್‌ ?!

ಅಮೆರಿಕದ ಸಾಲದ ಬೆಟ್ಟವನ್ನು ಕರಗಿಸಲಿದೆಯೇ ಬಿಟ್‌ ಕಾಯಿನ್‌ ?!

“ಅಮೆರಿಕವು ಬಿಟ್ ಕಾಯಿನ್ ಮತ್ತು ಬಂಗಾರವನ್ನು ಬಳಸಿಕೊಂಡು ಸಾಲದ ಬೆಟ್ಟವನ್ನು ಕರಗಿಸಲಿದೆ. ಇದು ಹಣಕಾಸು ಜಗತ್ತಿನ ರೂಪುರೇಷೆಗಳನ್ನೇ ಬದಲಿಸಲಿದೆ. ಕ್ರಿಪ್ಟೊ ಕರೆನ್ಸಿಯ ಮೂಲಕ ಸಾಂಪ್ರದಾ ಯಿಕ ಕರೆನ್ಸಿ ವ್ಯವಸ್ಥೆಗೆ ಪರ್ಯಾಯವನ್ನು ಅಳವಡಿಸಲಿದೆ" ಎನ್ನುತ್ತಾರೆ ಕೊಬ್ಯಾ ಕೋವ್. ಆದರೆ ಈ ಪ್ರಯತ್ನದಿಂದ ಜಾಗತಿಕ ಹಣಕಾಸು ವ್ಯವಸ್ಥೆ ಅಸ್ಥಿರವಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.

GST 2.0 Effect: ಆಲ್ಟೊ, ಥಾರ್‌, ಕ್ರೆಟಾ, ಸ್ಕಾರ್ಪಿಯೊ, ಬೆನ್ಜ್‌ ಕಾರುಗಳ ದರ ಇಳಿಕೆ, ಬೈಕ್‌ ದರವೂ ಅಗ್ಗ!

ಆಲ್ಟೊ, ಥಾರ್‌, ಕ್ರೆಟಾ, ಸ್ಕಾರ್ಪಿಯೊ, ಬೆನ್ಜ್‌ ದರ ಇಳಿಕೆ

ಜಿಎಸ್‌ಟಿಯ ಸ್ಲ್ಯಾಬ್‌ಗಳಲ್ಲಿ ಇಳಿಕೆ ಆಗಿರುವ ಹಿನ್ನೆಲೆಯಲ್ಲಿ ಹೊಸ ಕಾರು, ಬೈಕ್‌, ಸ್ಕೂಟರ್‌ ಖರೀದಿಸುವವರಿಗೆ ಸಿಹಿ ಸುದ್ದಿ ಲಭಿಸಿದೆ. ಸೆಪ್ಟೆಂಬರ್‌ 22ರ ಬಳಿಕ ಜಿಎಸ್‌ಟಿ ದರಗಳು ಇಳಿಯುತ್ತಿದ್ದು, ಇದರ ಪರಿಣಾಮ ಜನಪ್ರಿಯ ಕಾರುಗಳ ದರದಲ್ಲಿ ಕೂಡ ಇಳಿಕೆಯಾಗಲಿದೆ.

Keshava Prasad B Column: ಜಿಎಸ್ʼಟಿ ಇಳಿಕೆಯಿಂದ ರಾಜ್ಯಗಳಿಗೆ ನಷ್ಟವೇ- ಲಾಭವೇ ?!

ಜಿಎಸ್ʼಟಿ ಇಳಿಕೆಯಿಂದ ರಾಜ್ಯಗಳಿಗೆ ನಷ್ಟವೇ-ಲಾಭವೇ ?!

ನಮ್ಮೆಲ್ಲರ ಗುರಿ- ಜನಸಾಮಾನ್ಯರಿಗೆ ದಿನಬಳಕೆಯ ವಸ್ತುಗಳು‌ ಬೆಲೆ ಇಳಿಯಬೇಕು ಎಂಬುದು. ಕಾರ್ಮಿಕ ಕೇಂದ್ರಿತ ಉದ್ದಿಮೆಗಳಿಗೆ ಇಲ್ಲಿ ಪ್ರೋತ್ಸಾಹ ನೀಡಲಾಗಿದೆ. ರೈತರಿಗೂ ಅನುಕೂಲ ಸಿಗಲಿದೆ. ಆರೋಗ್ಯ ವಲಯಕ್ಕೂ ಲಾಭವಾಗಲಿದೆ. ಪ್ರತಿಯೊಂದು ರಾಜ್ಯದ ಹಣಕಾಸು ಸಚಿವರೂ ಜಿಎಸ್‌ಟಿ ಕೌನ್ಸಿಲ್ ಸಭೆ ಯಲ್ಲಿ ಭಾಗವಹಿಸಿದ್ದಾರೆ. ದಿನವಿಡೀ ಚರ್ಚೆ ನಡೆದಿದೆ.

Gold Rate: ಲಕ್ಷದ ಗಡಿ ದಾಟಿದ ಚಿನ್ನ-ಬೆಳ್ಳಿ 1.20 ಲಕ್ಷಕ್ಕೆ ಏರಿಕೆಯಾಗುತ್ತಾ? ಖರೀದಿಗೆ ಇದೇ ಸಕಾಲ?

ಲಕ್ಷದ ಗಡಿ ದಾಟಿದ ಚಿನ್ನ-ಬೆಳ್ಳಿ 1.20 ಲಕ್ಷಕ್ಕೆ ಏರಿಕೆಯಾಗುತ್ತಾ?

ಭಾರತದ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಜಾಗತಿಕ ಅನಿಶ್ಚಿತತೆಯ ಪರಿಣಾಮ ಚಿನ್ನದ ದರ ದಿನೇದಿನೆ ಏರುತ್ತಿದೆ. ಹೂಡಿಕೆಗೆ ಸುರಕ್ಷಿತ ತಾಣವಾಗಿ ಬೇಡಿಕೆ ಪಡೆದಿದೆ. ಇದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನದ 3,578 ಡಾಲರ್‌ಗೆ ಏರಿಕೆಯಾಗಿದೆ.

Keshava Prasad B Column: ಟ್ರಂಪ್‌, ಭಾರತ ಈಗ ಬಡರಾಷ್ಟ್ರವಲ್ಲ, ಯಾರಿಗೂ ಮಂಡಿಯೂರಲ್ಲ !

ಟ್ರಂಪ್‌, ಭಾರತ ಈಗ ಬಡರಾಷ್ಟ್ರವಲ್ಲ, ಯಾರಿಗೂ ಮಂಡಿಯೂರಲ್ಲ !

ಈಗ ‘ಬಡವನ ಸಿಟ್ಟು ದವಡೆಗೆ ಮೂಲ’ ಎಂಬಂತೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮುನಿಸಿ ಕೊಂಡರೆ, ಅದನ್ನು ಎದುರಿಸಲು ಭಾರತಕ್ಕೆ ಸಾಧ್ಯವೇ? ಎಂಬ ಪ್ರಶ್ನೆಯಿದೆ. ಯುರೋಪಿನ ರಾಷ್ಟ್ರಗಳೆಲ್ಲ ಟ್ರಂಪ್ ಎದುರು ಕಮಕ್ ಕಿಮಕ್ ಎನ್ನುತ್ತಿಲ್ಲ. ಚೀನಾ ಕ್ಯಾರೇ ಎನ್ನುತ್ತಿಲ್ಲ. ಆದರೆ ಭಾರತವೂ ಮಂಡಿಯೂರಿಲ್ಲ. ಅದು ಸಾಧ್ಯವೂ ಇಲ್ಲ.

Loading...