ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಕೇಶವ ಪ್ರಸಾದ್​ ಬಿ

Columnist

keshavaprasadb@gmail.com

ಕೇಶವ ಪ್ರಸಾದ್‌ ಬಿ ಅವರಿಗೆ ಪತ್ರಿಕೋದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಪರ ಅನುಭವ ಇದೆ. ಈ ಹಿಂದೆ ವಿಜಯ ಕರ್ನಾಟಕ ದೈನಿಕದ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ದೇಶೀಯ- ಅಂತಾರಾಷ್ಟ್ರೀಯ ವಿದ್ಯಮಾನಗಳು, ವಾಣಿಜ್ಯ- ಉದ್ದಿಮೆ, ಸಾಧಕರ ಸಂದರ್ಶನ ಹೀಗೆ ವೈವಿಧ್ಯಮಯ ಲೇಖನ, ವಿಶೇಷ ವರದಿ, ಮೇಕಿಂಗ್‌ ಇಂಡಿಯಾ ಅಂಕಣ ಬರೆದಿದ್ದಾರೆ. ವಿಸ್ತಾರ ನ್ಯೂಸ್‌ ಚಾನೆಲ್‌ನ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಪರ್ಸನಲ್ ಫೈನಾನ್ಸ್‌, ಬಿಸಿನೆಸ್‌, ಕೃಷಿಗೆ ಸಂಬಂಧಿಸಿ ಹಲವಾರು ವಿಡಿಯೊ ಸಂದರ್ಶನಗಳನ್ನು ನಡೆಸಿದ್ದಾರೆ. ಪತ್ರಿಕೆ ಮತ್ತು ಡಿಜಿಟಲ್‌ ಮೀಡಿಯಾ ಎರಡರಲ್ಲೂ ಅನುಭವ ಗಳಿಸಿದ್ದಾರೆ. ಲೈಫ್‌ ಈಸ್‌ ವಂಡರ್‌ಫುಲ್‌, ಸಿರಿವಂತಿಕೆಗೆ 100% ಸೂತ್ರಗಳು ಕೃತಿಯನ್ನು ಬರೆದಿದ್ದಾರೆ.

Articles
Keshava Prasad B Column: ಮೇಕ್‌ ಇನ್‌ ಕುಂದಾಪುರ, ಗ್ಲೋಬಲ್‌ ಕಾಂತಾರ !

Keshava Prasad B Column: ಮೇಕ್‌ ಇನ್‌ ಕುಂದಾಪುರ, ಗ್ಲೋಬಲ್‌ ಕಾಂತಾರ !

ಇಲ್ಲಿ ಮೇಕ್ ಇನ್ ಇಂಡಿಯಾ, ಲೋಕಲ್ ಫಾರ್ ಗ್ಲೋಬಲ್ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ತಮ್ಮ ಚಿತ್ರದಲ್ಲಿ ಅಳವಡಿಸಿ ಅದ್ಭುತ ಯಶಸ್ಸು ಕಂಡಿರುವುದು ಇತರರಿಗೆ ಮರೆಯಲಾಗದ ಪಾಠ. ಏನಿದು ಲೋಕಲ್ ಫಾರ್ ಗ್ಲೋಬಲ್? ಭಾರತದ ಸ್ಥಳೀಯ ಉತ್ಪನ್ನ, ಸೇವೆಗಳನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವುದು. ‌

ಟ್ರಂಪ್‌ ರಂಪಕ್ಕೆ ಸಿಗಲಿದೆಯೇ ನೊಬೆಲ್‌ ?

ಟ್ರಂಪ್‌ ರಂಪಕ್ಕೆ ಸಿಗಲಿದೆಯೇ ನೊಬೆಲ್‌ ?

ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ಸಿಗಬೇಕು ಎಂಬುದನ್ನು ಅದರ ಸ್ಥಾಪಕ, ಇಂಡಸ್ಟ್ರಿಯಲಿಸ್ಟ್ ಅಲ್ರೆಡ್ ನೊಬೆಲ್ ತಮ್ಮ 1895ರ ವಿಲ್‌ನಲ್ಲಿ ಬರೆದಿದ್ದರು. ರಾಷ್ಟ್ರಗಳ ನಡುವೆ ಶಸ್ತ್ರಾಸ್ತ್ರ ಪ್ರಸರಣವನ್ನು ನಿರ್ಮೂಲನೆ ಮಾಡುವವರು ಮತ್ತು ಕಡಿಮೆ ಮಾಡುವ ವ್ಯಕ್ತಿಗಳಿಗೆ, ಶಾಂತಿ ಸ್ಥಾಪನೆಗೆ ಯತ್ನಿಸುವವರಿಗೆ ನೀಡಬೇಕು ಎಂದಿದ್ದರು.

Keshava Prasad B Column: ಸೈಕಲ್‌ ತುಳಿದು ಮೈಕ್ರೋಸಾಫ್ಟ್‌ʼಗೇ ಸವಾಲೆಸೆದ ಟೆಕ್‌ ಉದ್ಯಮಿ

ಸೈಕಲ್‌ ತುಳಿದು ಮೈಕ್ರೋಸಾಫ್ಟ್‌ʼಗೇ ಸವಾಲೆಸೆದ ಟೆಕ್‌ ಉದ್ಯಮಿ

ಅರಟ್ಟೈ ಎಂಬ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಈಗ ಸುದ್ದಿಯಲ್ಲಿದೆ. ವಾಟ್ಸಾಪ್‌ಗೆ ಇದು ಭಾರತದ ಪರ್ಯಾಯವಾಗಬಲ್ಲದೇ? ಎಂಬ ಬಗ್ಗೆ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಕೆಲ ದಿನಗಳಿಂದ ಅರಟ್ಟೈನ ಟ್ರಾಫಿಕ್ ನೂರು ಪಟ್ಟು ವೃದ್ಧಿಸಿದೆ. ಸೈನ್ ಅಪ್‌ಗಳು ದಿನಕ್ಕೆ ಸರಾಸರಿ 3500ರಿಂದ 350000ಕ್ಕೆ ಜಿಗಿದಿವೆ!

Keshava Prasad B Column: ಸೆನ್ಸೆಕ್ಸ್‌ ಶೂನ್ಯ ಸಂಪಾದನೆಗೆ ಚಿಂತೆ ಏಕೆ ? ಬಫೆಟ್‌ ಸೂತ್ರ ಓದಿ

ಸೆನ್ಸೆಕ್ಸ್‌ ಶೂನ್ಯ ಸಂಪಾದನೆಗೆ ಚಿಂತೆ ಏಕೆ ? ಬಫೆಟ್‌ ಸೂತ್ರ ಓದಿ

‘ಎನ್‌ಆರ್‌ಐ ಮನಿ ಕ್ಲಿನಿಕ್’ ಯುಟ್ಯೂಬ್ ಚಾನಲ್‌ನ ಸ್ಥಾಪಕ ಮತ್ತು ಹಣಕಾಸು ತಜ್ಞರಾದ ಡಾ. ಚಂದ್ರಕಾತ ಭಟ್ ಹೀಗೆನ್ನುತ್ತಾರೆ- “ನೋಡಿ, ಸೆನ್ಸೆಕ್ಸ್ ಶುರುವಾದಾಗಿನಿಂದ ಇಲ್ಲಿಯವರೆಗೂ ಅದರ ಏರಿಳಿತವನ್ನು ನಾನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದೇನೆ. ಅದು ಹತ್ತು ವರ್ಷದಲ್ಲಿ ಒಮ್ಮೆ ಮಾತ್ರ ನೊರೆಯುಕ್ಕುವಂತೆ ಏರುತ್ತದೆ.

Keshava Prasad B Column: ಮೋದಿಯುಗದಲ್ಲಿ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ !

ಮೋದಿಯುಗದಲ್ಲಿ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ !

ಅಮೆರಿಕ,‌ ಯುಎಇ, ಸೌದಿ ಅರೇಬಿಯಾ, ಜರ್ಮನಿ, ಇಟಲಿ, ನೆದರ್ಲೆಂಡ್ಸ್ ಸೇರಿದಂತೆ ಇನ್ನೂರಕ್ಕೂ ಹೆಚ್ಚು ದೇಶಗಳಿಗೆ ಭಾರತ ನಾನಾ ವಸ್ತುಗಳನ್ನು ರಫ್ತು ಮಾಡುತ್ತದೆ. ಮೂರನೆಯದಾಗಿ ಸ್ಟಾಕ್ ಮಾರ್ಕೆಟ್ ಬೆಳವಣಿಗೆ. 2014ರಲ್ಲಿ ನಿಫ್ಟಿ 7360ರಲ್ಲಿತ್ತು. ಈಗ 25100ಕ್ಕೆ ಏರಿದೆ. 240 ಪರ್ಸೆಂಟ್ ಹೆಚ್ಚಳ ವಾಗಿದೆ. ಸೆನ್ಸೆಕ್ಸ್ 24690‌ ರಿಂದ 82000ಕ್ಕೆ ಏರಿದೆ, ಶೇ. 235ರಷ್ಟು ವೃದ್ಧಿಸಿದೆ. ಹಣದುಬ್ಬರ ಶೇ. 4ರಿಂದ 6ರ ಮಟ್ಟದಲ್ಲಿದೆ.

‌Keshava Prasad B Column: ಅಮೆರಿಕದ ಸಾಲದ ಬೆಟ್ಟವನ್ನು ಕರಗಿಸಲಿದೆಯೇ ಬಿಟ್‌ ಕಾಯಿನ್‌ ?!

ಅಮೆರಿಕದ ಸಾಲದ ಬೆಟ್ಟವನ್ನು ಕರಗಿಸಲಿದೆಯೇ ಬಿಟ್‌ ಕಾಯಿನ್‌ ?!

“ಅಮೆರಿಕವು ಬಿಟ್ ಕಾಯಿನ್ ಮತ್ತು ಬಂಗಾರವನ್ನು ಬಳಸಿಕೊಂಡು ಸಾಲದ ಬೆಟ್ಟವನ್ನು ಕರಗಿಸಲಿದೆ. ಇದು ಹಣಕಾಸು ಜಗತ್ತಿನ ರೂಪುರೇಷೆಗಳನ್ನೇ ಬದಲಿಸಲಿದೆ. ಕ್ರಿಪ್ಟೊ ಕರೆನ್ಸಿಯ ಮೂಲಕ ಸಾಂಪ್ರದಾ ಯಿಕ ಕರೆನ್ಸಿ ವ್ಯವಸ್ಥೆಗೆ ಪರ್ಯಾಯವನ್ನು ಅಳವಡಿಸಲಿದೆ" ಎನ್ನುತ್ತಾರೆ ಕೊಬ್ಯಾ ಕೋವ್. ಆದರೆ ಈ ಪ್ರಯತ್ನದಿಂದ ಜಾಗತಿಕ ಹಣಕಾಸು ವ್ಯವಸ್ಥೆ ಅಸ್ಥಿರವಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.

GST 2.0 Effect: ಆಲ್ಟೊ, ಥಾರ್‌, ಕ್ರೆಟಾ, ಸ್ಕಾರ್ಪಿಯೊ, ಬೆನ್ಜ್‌ ಕಾರುಗಳ ದರ ಇಳಿಕೆ, ಬೈಕ್‌ ದರವೂ ಅಗ್ಗ!

ಆಲ್ಟೊ, ಥಾರ್‌, ಕ್ರೆಟಾ, ಸ್ಕಾರ್ಪಿಯೊ, ಬೆನ್ಜ್‌ ದರ ಇಳಿಕೆ

ಜಿಎಸ್‌ಟಿಯ ಸ್ಲ್ಯಾಬ್‌ಗಳಲ್ಲಿ ಇಳಿಕೆ ಆಗಿರುವ ಹಿನ್ನೆಲೆಯಲ್ಲಿ ಹೊಸ ಕಾರು, ಬೈಕ್‌, ಸ್ಕೂಟರ್‌ ಖರೀದಿಸುವವರಿಗೆ ಸಿಹಿ ಸುದ್ದಿ ಲಭಿಸಿದೆ. ಸೆಪ್ಟೆಂಬರ್‌ 22ರ ಬಳಿಕ ಜಿಎಸ್‌ಟಿ ದರಗಳು ಇಳಿಯುತ್ತಿದ್ದು, ಇದರ ಪರಿಣಾಮ ಜನಪ್ರಿಯ ಕಾರುಗಳ ದರದಲ್ಲಿ ಕೂಡ ಇಳಿಕೆಯಾಗಲಿದೆ.

Keshava Prasad B Column: ಜಿಎಸ್ʼಟಿ ಇಳಿಕೆಯಿಂದ ರಾಜ್ಯಗಳಿಗೆ ನಷ್ಟವೇ- ಲಾಭವೇ ?!

ಜಿಎಸ್ʼಟಿ ಇಳಿಕೆಯಿಂದ ರಾಜ್ಯಗಳಿಗೆ ನಷ್ಟವೇ-ಲಾಭವೇ ?!

ನಮ್ಮೆಲ್ಲರ ಗುರಿ- ಜನಸಾಮಾನ್ಯರಿಗೆ ದಿನಬಳಕೆಯ ವಸ್ತುಗಳು‌ ಬೆಲೆ ಇಳಿಯಬೇಕು ಎಂಬುದು. ಕಾರ್ಮಿಕ ಕೇಂದ್ರಿತ ಉದ್ದಿಮೆಗಳಿಗೆ ಇಲ್ಲಿ ಪ್ರೋತ್ಸಾಹ ನೀಡಲಾಗಿದೆ. ರೈತರಿಗೂ ಅನುಕೂಲ ಸಿಗಲಿದೆ. ಆರೋಗ್ಯ ವಲಯಕ್ಕೂ ಲಾಭವಾಗಲಿದೆ. ಪ್ರತಿಯೊಂದು ರಾಜ್ಯದ ಹಣಕಾಸು ಸಚಿವರೂ ಜಿಎಸ್‌ಟಿ ಕೌನ್ಸಿಲ್ ಸಭೆ ಯಲ್ಲಿ ಭಾಗವಹಿಸಿದ್ದಾರೆ. ದಿನವಿಡೀ ಚರ್ಚೆ ನಡೆದಿದೆ.

Gold Rate: ಲಕ್ಷದ ಗಡಿ ದಾಟಿದ ಚಿನ್ನ-ಬೆಳ್ಳಿ 1.20 ಲಕ್ಷಕ್ಕೆ ಏರಿಕೆಯಾಗುತ್ತಾ? ಖರೀದಿಗೆ ಇದೇ ಸಕಾಲ?

ಲಕ್ಷದ ಗಡಿ ದಾಟಿದ ಚಿನ್ನ-ಬೆಳ್ಳಿ 1.20 ಲಕ್ಷಕ್ಕೆ ಏರಿಕೆಯಾಗುತ್ತಾ?

ಭಾರತದ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಜಾಗತಿಕ ಅನಿಶ್ಚಿತತೆಯ ಪರಿಣಾಮ ಚಿನ್ನದ ದರ ದಿನೇದಿನೆ ಏರುತ್ತಿದೆ. ಹೂಡಿಕೆಗೆ ಸುರಕ್ಷಿತ ತಾಣವಾಗಿ ಬೇಡಿಕೆ ಪಡೆದಿದೆ. ಇದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನದ 3,578 ಡಾಲರ್‌ಗೆ ಏರಿಕೆಯಾಗಿದೆ.

Keshava Prasad B Column: ಟ್ರಂಪ್‌, ಭಾರತ ಈಗ ಬಡರಾಷ್ಟ್ರವಲ್ಲ, ಯಾರಿಗೂ ಮಂಡಿಯೂರಲ್ಲ !

ಟ್ರಂಪ್‌, ಭಾರತ ಈಗ ಬಡರಾಷ್ಟ್ರವಲ್ಲ, ಯಾರಿಗೂ ಮಂಡಿಯೂರಲ್ಲ !

ಈಗ ‘ಬಡವನ ಸಿಟ್ಟು ದವಡೆಗೆ ಮೂಲ’ ಎಂಬಂತೆ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮುನಿಸಿ ಕೊಂಡರೆ, ಅದನ್ನು ಎದುರಿಸಲು ಭಾರತಕ್ಕೆ ಸಾಧ್ಯವೇ? ಎಂಬ ಪ್ರಶ್ನೆಯಿದೆ. ಯುರೋಪಿನ ರಾಷ್ಟ್ರಗಳೆಲ್ಲ ಟ್ರಂಪ್ ಎದುರು ಕಮಕ್ ಕಿಮಕ್ ಎನ್ನುತ್ತಿಲ್ಲ. ಚೀನಾ ಕ್ಯಾರೇ ಎನ್ನುತ್ತಿಲ್ಲ. ಆದರೆ ಭಾರತವೂ ಮಂಡಿಯೂರಿಲ್ಲ. ಅದು ಸಾಧ್ಯವೂ ಇಲ್ಲ.

Keshava Prasad B Column: ಕೋಳಿ ಅಂಕವೇ ಆದರೂ, ದುಡ್ಡು ಇಟ್ಟರೆ ಜೂಜಾಟವೇ !

ಕೋಳಿ ಅಂಕವೇ ಆದರೂ, ದುಡ್ಡು ಇಟ್ಟರೆ ಜೂಜಾಟವೇ !

ಗೇಮಿಂಗ್ ಇಂಡಸ್ಟ್ರಿಯ ಬಿಸಿನೆಸ್ ಹಿತಾಸಕ್ತಿಯ ವಾದವೇ ಬೇರೆ. “ನೋಡಿ, ರಿಯಲ್ ಮನಿ ಗೇಮಿಂಗ್ ಅನ್ನು ನಿಷೇಧಿಸಿದರೆ ದೇಶದಲ್ಲಿ 2 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. 400 ಕಂಪನಿಗಳು ಬಾಗಿಲು ಮುಚ್ಚಬೇಕಾಗುತ್ತದೆ. 25000 ಕೋಟಿ ರುಪಾಯಿ ಹೂಡಿಕೆ ನಷ್ಟವಾಗುತ್ತದೆ. ಈ ಸೆಕ್ಟರ್‌ಗೆ ವಿದೇಶಿ ಹೂಡಿಕೆಗಳೂ ಸ್ಥಗಿತವಾಗುತ್ತವೆ. ಈಗ ಆನ್ ಲೈನ್ ಗೇಮಿಂಗ್ ಮಾರುಕಟ್ಟೆಯಲ್ಲಿ ವರ್ಷಕ್ಕೆ 31000 ಕೋಟಿ ರುಪಾಯಿ ಆದಾಯ ಸಿಗುತ್ತದೆ.

Keshava Prasad B Column: ಟ್ರಂಪ್‌ ಹುಚ್ಚಾಟಕ್ಕೆ ಮೋದಿ ಬ್ರೇಕ್, ರಷ್ಯಾ-ಚೀನಾ-ಬ್ರೆಜಿಲ್‌ ಸಾಥ್‌ !

ಟ್ರಂಪ್‌ ಹುಚ್ಚಾಟಕ್ಕೆ ಮೋದಿ ಬ್ರೇಕ್, ರಷ್ಯಾ-ಚೀನಾ-ಬ್ರೆಜಿಲ್‌ ಸಾಥ್‌ !

ಭಾರತ ಕೂಡ ಅಮೆರಿಕದಿಂದ ಇಲ್ಲಿಗೆ ಬರುವ ಎಲ್ಲ ಉತ್ಪನ್ನಗಳಿಗೂ ಸಾರಾಸಗಟಾಗಿ ಭಾರಿ ತೆರಿಗೆ ಯನ್ನು ವಿಧಿಸಿಲ್ಲ. ಕಚ್ಚಾ ತೈಲ, ಎಲ್‌ಎನ್‌ಜಿ, ಕಲ್ಲಿದ್ದಲು, ವಜ್ರ ಮತ್ತು ಏರೋಪ್ಲೇನ್ ಸೇರಿದಂತೆ 30 ವಸ್ತುಗಳಿಗೆ ಆಮದು ಸುಂಕವು ಕೇವಲ 7.5 ಪರ್ಸೆಂಟ್‌ಗಿಂತ ಕಡಿಮೆ ಇದೆ ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ ಚೇರ್‌ಮನ್ ಆಗಿರುವ ಸಂಜಯ್ ಕುಮಾರ್ ಅಗರ್‌ವಾಲ್ ಹೇಳಿzರೆ. ಸರಾಸರಿ ಕಸ್ಟಮ್ಸ್ ಶುಲ್ಕವನ್ನೂ 11.65 ಪರ್ಸೆಂಟ್‌ನಿಂದ 10.55 ಕ್ಕೆ ಇಳಿಸಿದೆ.

Minimum Balance Rules: ICICI ಬ್ಯಾಂಕ್‌ ಕನಿಷ್ಠ ಬ್ಯಾಲೆನ್ಸ್ 50,000, ಆದ್ರೆ ಈ ಬ್ಯಾಂಕ್‌ಗಳಲ್ಲಿ ಝೀರೊ ಆದ್ರೂ ದಂಡ ಇಲ್ಲ!

ಈ ಬ್ಯಾಂಕ್‌ಗಳಲ್ಲಿ ಝೀರೊ ಬ್ಯಾಲೆನ್ಸ್‌ ಇದ್ರೂ ದಂಡ ಇಲ್ಲ!

ಐಸಿಐಸಿಐ ಬ್ಯಾಂಕಿಂಗ್‌ ಇಂಡಸ್ಟ್ರಿಯಲ್ಲಿಯೇ ಅತಿ ಹೆಚ್ಚು ಮಿನಿಮಮ್‌ ಬ್ಯಾಲೆನ್ಸ್‌ ಅಗತ್ಯವನ್ನು ಜಾರಿಗೊಳಿಸಿದ ಬ್ಯಾಂಕ್‌ ಆಗಿದೆ. ಇದಕ್ಕೆ ಕೆಲವರು ಟೀಕೆಗಳನ್ನೂ ಮಾಡಿದ್ದಾರೆ. ಮುಖ್ಯವಾಗಿ ಜನ ಸಾಮಾನ್ಯರಿಗೆ ಇದರಿಂದ ಐಸಿಐಸಿಐ ಬ್ಯಾಂಕ್‌ನ ಸೇವೆಗಳನ್ನು ಪಡೆಯಲು ಸಾಧ್ಯವಾಗದು ಎಂಬ ಆರೋಪ ಇದೆ. ಈ ಕನಿಷ್ಠ ಬ್ಯಾಲೆನ್ಸ್‌ ತಪ್ಪಿದರೆ 500/- ದಂಡ ಇರಲಿದೆ.

Keshava Prasad B Column: ಕಸ ಗುಡಿಸುವವರಿಗೂ ಕಂಪನಿಯ ಷೇರು ಕೊಟ್ಟ ಆನಂದ್ ಮಹೀಂದ್ರಾ!

ಕಸ ಗುಡಿಸುವವರಿಗೂ ಕಂಪನಿಯ ಷೇರು ಕೊಟ್ಟ ಆನಂದ್ ಮಹೀಂದ್ರಾ!

ಮೊದಲನೆಯದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನಲ್ಲಿ ಈ ವರ್ಷ 12000 ಉದ್ಯೋಗಿಗಳನ್ನು ವಜಾ ಗೊಳಿಸಲಾಗುತ್ತಿದೆ ಎನ್ನುವ ಆಘಾತಕಾರಿ ಬೆಳವಣಿಗೆಯ ಕುರಿತಾದ ಸುದ್ದಿ. ಎರಡನೆಯದ್ದು, ಮಹೀಂದ್ರಾ ಗ್ರೂಪ್‌ನಲ್ಲಿ 14000 ಮಂದಿ ಕೆಲಸಗಾರರಿಗೆ ಕಂಪನಿಯು 400 ಕೋಟಿ ರುಪಾಯಿ ಮೌಲ್ಯ ದಷ್ಟು ಷೇರುಗಳನ್ನು ತಾನಾಗಿಯೇ ವಿತರಿಸಲಿದೆ ಎನ್ನುವ ಸಿಹಿ ಸುದ್ದಿ! ಟಿಸಿಎಸ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದು, ಎರಡು ಪರ್ಸೆಂಟ್ ಮಂದಿಗೆ ಮಾತ್ರ ಗೇಟ್‌ಪಾಸ್ ನೀಡಲಾಗುತ್ತಿದೆ ಎನ್ನ ಬಹು‌ದಾದರೂ, 12 ಸಾವಿರ ಎನ್ನುವುದು ದೊಡ್ಡ ಸಂಖ್ಯೆಯೇ.

Monetary Policy Decisions: ಟ್ರಂಪ್‌ ಟಾರಿಫ್‌ ಭವಿಷ್ಯ ಹೇಳೋದು ಕಷ್ಟ ಎಂದ RBI- ಬಡ್ಡಿ ದರ ಇಳಿಸಿಲ್ಲ ಏಕೆ?

RBI ರೆಪೊ ರೇಟ್‌ ಇಳಿಸಿಲ್ಲ ಏಕೆ?

ಬಡ್ಡಿ ದರ ಇಳಿಕೆಯ ಟ್ರೆಂಡ್‌ ಮುಂದುವರಿಯಲಿದೆಯೇ ಎಂಬ ಕುತೂಹಕ ಜನರಲ್ಲಿ ಇತ್ತು. ಆದರೆ ಇದೀಗ ಆರ್‌ಬಿಐ ನ್ಯೂಟ್ರಲ್‌ ನಿಲುವು ತೆಗೆದುಕೊಂಡಿದೆ. ಈ ಸಲ ಬಡ್ಡಿ ದರ ಇಳಿಸಿಲ್ಲ. ಏಕೆ ಎಂಬುದು ಹಲವರ ಪ್ರಶ್ನೆ. ಇದಕ್ಕೂ ಆರ್‌ಬಿಐ ಉತ್ತರಿಸಿದೆ. ಈ ವರ್ಷ ಕೇವಲ 4 ತಿಂಗಳಿನಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ಇದರ ಪ್ರಕ್ರಿಯೆ ಈಗಲೂ ನಡೆಯುತ್ತಿದೆ.

Keshava Prasad B Column: ಟ್ರಂಪ್‌ ಹುಚ್ಚಾಟಕ್ಕೆ ಸೊಪ್ಪು ಹಾಕದ ಬಲಿಷ್ಠ ಭಾರತ !

ಟ್ರಂಪ್‌ ಹುಚ್ಚಾಟಕ್ಕೆ ಸೊಪ್ಪು ಹಾಕದ ಬಲಿಷ್ಠ ಭಾರತ !

ಯಾವುದೇ ದೇಶ ಮುಕ್ತ ವ್ಯಾಪಾರ ಮಾಡುವುದರಿಂದ ಆರ್ಥಿಕ ಬೆಳವಣಿಗೆಯನ್ನು ಹೊಂದು ತ್ತದೆಯೇ ಹೊರತು ನಾಶವಾಗುವುದಿಲ್ಲ. ಅದಕ್ಕೆ ಭಾರತವೇ ನಿದರ್ಶನ. ತೊಂಬತ್ತರ ದಶಕದಲ್ಲಿ ಉದಾರೀಕರಣಕ್ಕೆ ತೆರೆದುಕೊಂಡ ಬಳಿಕದ ದೇಶದ ಆರ್ಥಿಕತೆಯ ಇತಿಹಾಸ ಅತ್ಯಂತ ರೋಚಕ. ಈಗ ಅಮೆರಿಕ, ಯುರೋ ಪ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತವನ್ನು ಕಡೆಗಣಿಸಿದರೆ, ಅದರ ಬಿಸಿ ಮರುಗಳಿಗೆ ಯಲ್ಲಿಯೇ ಅವುಗಳಿಗೂ ತಟ್ಟದೆ ಇರುವುದಿಲ್ಲ!

Keshava Prasad B Column: ನೋಟಿಸ್‌ ಗದ್ದಲಕ್ಕೆ ತೆರೆ, ಯುಪಿಐ ನಿರಾಕರಿಸದಿರಿ ಪ್ಲೀಸ್‌ !

ನೋಟಿಸ್‌ ಗದ್ದಲಕ್ಕೆ ತೆರೆ, ಯುಪಿಐ ನಿರಾಕರಿಸದಿರಿ ಪ್ಲೀಸ್‌ !

‘ಯುಪಿಐ ಬೇಡ, ಕ್ಯಾಶ್ ಕೊಡ್ರಪ್ಪಾ’ ಎಂದು ವ್ಯಾಪಾರಿಗಳು ಹೊಸ ರಗಳೆಯನ್ನು ಸೃಷ್ಟಿಸಿದರೆ ಏನಾಗಲಿದೆ? ಕ್ರಮೇಣ ಅವರ ಬಿಸಿನೆಸ್‌ಗೇ ಹೊಡೆತ ಬೀಳುವುದು ಪಕ್ಕಾ. ಏಕೆಂದರೆ ಗ್ರಾಹಕರಿಗೆ ಬೇರೆ ಆಯ್ಕೆಗಳು ಸಾಕಷ್ಟಿವೆ. ನಾವೀಗ ನಗದುರಹಿತ ಆರ್ಥಿಕ ವ್ಯವಸ್ಥೆಯತ್ತ ಭರದಿಂದ ಸಾಗುತ್ತಿದ್ದೇವೆ. ಇಲ್ಲಿ ನಗದನ್ನು ಹೆಚ್ಚು ದಿನ ಕದ್ದುಮುಚ್ಚಿ ಬಳಸುವುದು ಕಷ್ಟಕರವಾಗಲಿದೆ.

Keshava Prasad B Column: 40 ಲಕ್ಷಕ್ಕೂ ಹೆಚ್ಚು ವ್ಯಾಪಾರ ಸಣ್ಣದೇ? ಯುಪಿಐ, ಜಿಎಸ್‌ಟಿ ಬೇಡವೇ?!

40 ಲಕ್ಷಕ್ಕೂ ಹೆಚ್ಚು ವ್ಯಾಪಾರ ಸಣ್ಣದೇ? ಯುಪಿಐ, ಜಿಎಸ್‌ಟಿ ಬೇಡವೇ?!

ರಾಜ್ಯ ವಾಣಿಜ್ಯ ಇಲಾಖೆ ಸಾವಿರಾರು ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ಜಾರಿಗೊಳಿಸಿರುವುದು ಸಂಚಲನ ಮೂಡಿಸಿದೆ. ಬೇಕರಿ, ಕಾಂಡಿಮೆಂಟ್ಸ್‌ಗಳಿಗೆ, ಚಹಾ ಮಾರಾಟ ಮಾಡುವವರಿಗೆ 20-30 ಲಕ್ಷ ಕಟ್ಟಿ ಎಂದರೆ ಪಾಪ, ಅವರು ಎಲ್ಲಿಂದ ತಂದಾರು? ಇದು ಅನ್ಯಾಯವಲ್ಲವೇ ಎಂಬ ಕಾಳಜಿ ಸಹಜ. ಆದರೆ ವಾಸ್ತವವೇನು? ಯುಪಿಐ ಮೂಲಕ ನಡೆದಿರುವ ಹಣಕಾಸು ವರ್ಗಾವಣೆಗಳ ಅಧಾರದಲ್ಲಿ ಇಲಾಖೆ ನೋಟಿಸ್ ಕಳಿಸಿದ್ದು, 40 ಲಕ್ಷ ರುಪಾಯಿಗೂ ಹೆಚ್ಚು ಹಣದ ವರ್ಗಾವಣೆಗಳ ಬಗ್ಗೆ ವಿವರ ಗಳನ್ನು ಕೋರಿದೆ.

Keshava Prasad B Column: ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜಕ್ಕೂ ಹಾಗಾಗುತ್ತೀರಾ ?!

ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜಕ್ಕೂ ಹಾಗಾಗುತ್ತೀರಾ ?!

ಇದು ನಿಜವಾಗಿಯೂ, ಕಾಲೇಜುಗಳ ಪದವಿಗೆ ಮುಕ್ತಾಯವಾಗುವ ಶಿಕ್ಷಣವಲ್ಲ, ಜೀವನ ಪರ್ಯಂತ ಕಲಿಕೆ ಅವಶ್ಯವಿರುವ ಕಲಿಕೆಯ ಯುಗ. ನಿತಿನ್ ಕೌಶಿಕ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಹೀಗೆನ್ನು ತ್ತಾರೆ- “25 ಕೋಟಿ ರುಪಾಯಿ ಸಂಪತ್ತಿನ ಒಡೆಯ 10 ಲಕ್ಷ ರುಪಾಯಿ ಮೌಲ್ಯದ ಸಾಧಾರಣ ಕಾರಿನಲ್ಲಿ ಓಡಾಡುತ್ತಾನೆ. ಆದರೆ ಕೇವಲ 1 ಕೋಟಿ 70 ಲಕ್ಷ ರುಪಾಯಿ ಆಸ್ತಿ ಇರುವ ವ್ಯಕ್ತಿ ಮರ್ಸಿಡಿಸ್ ಬ್ರ್ಯಾಂಡ್ ನ್ಯೂ ಲಕ್ಸುರಿ ಕಾರಿನಲ್ಲಿ ಮಿಂಚುತ್ತಾನೆ.

Keshav Prasad B Column: ಭಾರತದ ವಿದೇಶ ವ್ಯಾಪಾರ ನೆಟ್‌ ವರ್ಕ್‌ ಈಗ ಸರ್ವವ್ಯಾಪಿ !

ಭಾರತದ ವಿದೇಶ ವ್ಯಾಪಾರ ನೆಟ್‌ ವರ್ಕ್‌ ಈಗ ಸರ್ವವ್ಯಾಪಿ !

ಎಂಬತ್ತರ ದಶಕದ ಕೊನೆಯ ತನಕ ಹೊರ ಜಗತ್ತಿಗೆ ಮುಚ್ಚಿಕೊಂಡಿದ್ದ ಭಾರತದ ಆರ್ಥಿಕತೆ 90ರ ದಶಕದಲ್ಲಿ ಉದಾರೀಕರಣದ ಹೊಸ್ತಿಲು ದಾಟಿತು. ಬಳಿಕ ಸಂಭವಿಸಿದ ಕ್ರಾಂತಿಕಾರಕ ಪರಿವರ್ತನೆ ಯ ಘಟ್ಟಗಳನ್ನು ನಾವು ನೋಡಿದ್ದೇವೆ. ಇದರ ಹಿಂದೆ ಉದಾರೀಕರಣದ ಫಲಶ್ರುತಿ ನಿಸ್ಸಂದೇಹ ವಾಗಿ ಇದ್ದೇ ಇದೆ.

Keshav Prasad B Column: ಶ್ರೀಮಂತರಾಗಬೇಕೆಂದರೆ ತಾಳ್ಮೆಯೇ ನಿಮ್ಮ ದಿವ್ಯಮಂತ್ರವಾಗಬೇಕು !

ಶ್ರೀಮಂತರಾಗಬೇಕೆಂದರೆ ತಾಳ್ಮೆಯೇ ನಿಮ್ಮ ದಿವ್ಯಮಂತ್ರವಾಗಬೇಕು !

ಕೇವಲ ಹೂಡಿಕೆಗೆ ಮಾತ್ರವಲ್ಲ, ಉದ್ಯೋಗದಲ್ಲಿ ಬೆಳವಣಿಗೆ, ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕೂ ಸಹನೆ ಬೇಕು". ಮೋರ್ಗಾನ್ ಹೌಸೆಲ್ ಇದಕ್ಕಾಗಿ ಹಲವಾರು ಚಾರಿತ್ರಿಕ ಉದಾಹರಣೆಗಳನ್ನು ಕೊಟ್ಟು ಸಮರ್ಥಿಸಿ ದ್ದಾರೆ. ಅನೇಕ ಮಂದಿಗೆ ದೀರ್ಘಾವಧಿಯ ಹೂಡಿಕೆಗೆ ಬೇಕಾಗಿರುವ ತಾಳ್ಮೆ ಇರುವುದಿಲ್ಲ

Keshava Prasad B Column: ರಾಬರ್ಟ್‌ ಕಿಯೊಸಾಕಿ ಹೇಳಿದ ಮನಿ - ಮಂತ್ರಗಳಿಗೆ ಕಿವಿಗೊಡಿ !

ರಾಬರ್ಟ್‌ ಕಿಯೊಸಾಕಿ ಹೇಳಿದ ಮನಿ - ಮಂತ್ರಗಳಿಗೆ ಕಿವಿಗೊಡಿ !

ರಾಬರ್ಟ್ ಕಿಯೊಸಾಕಿ ಇತ್ತೀಚೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಂದು ಪೋಸ್ಟ್ ಮಾಡಿದ್ದರು- “ನೀವು ಈ ಎರಡು ನಿಯಮಗಳನ್ನು ಮುರಿಯುತ್ತಿದ್ದೀರಾ...?" ಬಹುತೇಕ ಜನರು ಈ ಎರಡು ಮಹತ್ವದ ನಿಯಮ ಗಳನ್ನು ಮುರಿಯುವುದರಿಂದ ಬಡವರಾಗಿ ಉಳಿಯುತ್ತಾರೆ. ಮೊದಲ ನಿಯಮ: ಕೆಟ್ಟ ಹಣ ವ್ಯವಸ್ಥೆ ಯನ್ನು ಪ್ರವೇಶಿಸುವಾಗ, ಒಳ್ಳೆಯ ಹಣ ಕಣ್ಮರೆಯಾಗುತ್ತದೆ. ಎರಡನೇ ನಿಯಮ: ನೆಟ್‌ವರ್ಕ್.

‌Keshava Prasad B Column: ಬೇಗನೆ ಶ್ರೀಮಂತರಾಗಲು ಸಾಧ್ಯವಿಲ್ಲ, ಸಂಬಳ ಒಂದೇ ಸಾಲದು !

ಬೇಗನೆ ಶ್ರೀಮಂತರಾಗಲು ಸಾಧ್ಯವಿಲ್ಲ, ಸಂಬಳ ಒಂದೇ ಸಾಲದು !

ಪೂರ್ಣ ಪ್ರಮಾಣದ ಲೇಖಕರಾಗುವುದಕ್ಕೆ ಮೊದಲು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರು 11 ವರ್ಷ ಗಳ ಸೇವೆ ಸಲ್ಲಿಸಿದ್ದರು. ಆದ್ದರಿಂದ ಹಣದ ಬಗ್ಗೆ ಅವರು ಆಗಿಂದಾಗ್ಗೆ ಬರೆಯುವ ಲೇಖನಗಳು ಸ್ವಾರಸ್ಯಕರ ವಾಗಿರುತ್ತವೆ. ಅಮೆರಿಕ ಮೂಲದ ಬಹುರಾಷ್ಟ್ರೀಯ ಬ್ಯಾಂಕಿಂಗ್ ದಿಗ್ಗಜ ‘ಗೋಲ್ಡ್‌ ಮನ್ ಸ್ಯಾಕ್ಸ್’ನ ಹಾಂಕಾಂಗ್ ಕಚೇರಿಯಲ್ಲಿ ದುಡಿದಿದ್ದರು. ಡೊಯೆಚ್ ಬ್ಯಾಂಕ್‌ನ ಮುಂಬಯಿ ಶಾಖೆಯಲ್ಲೂ ಕೆಲ ಕಾಲ ನಿರ್ದೇಶಕರಾಗಿದ್ದರು.

Keshav Prasad B Column: ಐಪಿಎಲ್‌ ಹಣದ ಹೊಳೆಯೂ, ಅಭಿಮಾನಿಗಳ ಅಮಾಯಕತೆಯೂ  !

ಐಪಿಎಲ್‌ ಹಣದ ಹೊಳೆಯೂ, ಅಭಿಮಾನಿಗಳ ಅಮಾಯಕತೆಯೂ !

ರಾಯಲ್ ಚಾಲೆಂಜ್ ಎಂದರೆ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ವಿಸ್ಕಿ ಬ್ರಾಂಡ್‌ನ ಹೆಸರು. ಅದುವೇ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಅಥವಾ ಆರ್‌ಸಿಬಿ ಹೆಸರಾಯಿತು. ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟ್ರೋಫಿ ಗೆದ್ದಿರುವ ತಂಡವಾದರೂ, ಇದು ಅತ್ಯಂತ ಜನಪ್ರಿಯ ತಂಡವಾಗಿ ಹೊರ ಹೊಮ್ಮಿದೆ. 2009, 2011 ಮತ್ತು 2016ರಲ್ಲಿ ಫೈನಲ್ ತನಕ ಅದು ಹೋಗಿತ್ತು.

Loading...