ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

dhyapaa@gmail.com

ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಬೆಳೆದದ್ದು, ಓದಿದ್ದು ಶಿರಸಿಯಲ್ಲಿ. ಐದು ವರ್ಷ ಗ್ಯಾನನ್ ಡಂಕರ್ಲಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ರಿಲಾಯನ್ಸ್ ಇಂಡಸ್ಟ್ರೀಸ್, ಫ್ಲೋಟ್ ಗ್ಲಾಸ್, ಮ್ಯಾರಿಕೋ ಇಂಡಸ್ಟ್ರೀಸ್, ಹೆಸ್ಟ್ ಫಾರ್ಮಾದಲ್ಲಿ ಕೆಲಸ. ಕಳೆದ ಮೂರು ದಶಕಗಳಿಂದ ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಬಹ್ರೈನ್ನಲ್ಲಿ ಕೆಲಸ ಮತ್ತು ವಾಸ. ಒಟ್ಟೂ ಆರು ಪುಸ್ತಕಗಳ ಕೃತಿಕಾರರು. ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ ‘ಆಸ್ತಿಕತೆ’ ಮೊದಲ ಕೃತಿ. ‘ವಿಶ್ವತೋಮುಖ’, ‘ವಿದೇಶವಾಸಿ’, ‘ಪರದೇಶವಾಸಿ’, ‘ಹೊರದೇಶವಾಸಿ’ಮತ್ತು ‘ದೂರದೇಶವಾಸಿ’ ನಂತರದ ಕೃತಿಗಳು. ವಿಶ್ವವಾಣಿ ದಿನಪತ್ರಿಕೆಯ ಅಂತಾರಾಷ್ಟ್ರೀಯ ವರದಿಗಾರರು. ರಾಜ್ಯಪ್ರಶಸ್ತಿ ವಿಜೇತ ’ಹಾಡು ಹಕ್ಕಿ ಹಾಡು’ ಮತ್ತು ’ವೆರಿಗುಡ್’ ಮಕ್ಕಳ ಚಲನಚಿತ್ರದ ಸಹನಿರ್ಮಾಪಕರು. ಬಹ್ರೈನ್ನ ‘ಸಾರ್ಥ ಫೌಂಡೇಷನ್’, ಶಿರಸಿಯ ’ಅಧ್ಯಾಯ ಟ್ರಸ್ಟ್’ ಮತ್ತು ‘ವಿಕಿ ಬುಕ್ಸ್’ ಪ್ರಕಾಶನದ ನಿರ್ದೇಶಕರು. ಕುಮಟಾದ ‘ಸಾರ್ಥ ಪ್ರತಿಷ್ಠಾನ’ದ ಉಪಾಧ್ಯಕ್ಷರು. ಒಮ್ಮೆ ಬೆಂಗಳೂರಿನಲ್ಲಿ, ಇನ್ನೊಮ್ಮೆ ಮಂಗಳೂರಿನಲ್ಲಿ ‘ಬಹ್ರೈನ್ ಕನ್ನಡೋತ್ಸವ’ವನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತ ‘ಕನ್ನಡ ಸಂಘ ಬಹ್ರೈನ್’ನಲ್ಲಿ ಎರಡು ವರ್ಷ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಒಂಬತ್ತು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ಭಾರತದಿಂದ ಆಚೆ ನಿರ್ಮಾಣಗೊಂಡ ಪ್ರಥಮ ‘ಕನ್ನಡ ಭವನ’ ಕಟ್ಟಡ ನಿರ್ಮಾಣ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಕನ್ನಡ ಸಂಘ ಬಹ್ರೈನ್ ಜಂಟಿಯಾಗಿ ಆಯೋಜಿಸಿದ ‘ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ’, ‘ಗಲ್ಫ್ ಯಕ್ಷ ವೈಭವ’ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೇತೃತ್ವವಹಿಸಿಕೊಂಡವರಲ್ಲಿ ಒಬ್ಬರು. ಕನ್ನಡ ಸಂಘ ಬಹ್ರೈನ್ ನಡೆಸುತ್ತಿರುವ ಕನ್ನಡ ತರಗತಿಯಲ್ಲಿ ಮಕ್ಕಳಿಗೆ ಉಚಿತವಾಗಿ ಕನ್ನಡ ಬೋಧನೆ ಮಾಡುತ್ತಿದ್ದಾರೆ. ನಾಟಕ, ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಆಗಾಗ ಅಭಿನಯಿಸುತ್ತಿರುತ್ತಾರೆ.

Articles
Kiran Upadhyay Column: ಇದು ಪಾಸ್‌ ಪೋರ್ಟ್‌ ಸ್ಥಾನ ಪುರಾಣ..

Kiran Upadhyay Column: ಇದು ಪಾಸ್‌ ಪೋರ್ಟ್‌ ಸ್ಥಾನ ಪುರಾಣ..

ನಾನು ಪಾಸ್‌ಪೋರ್ಟ್ ಮಾಡಿಸಿದ್ದೇನೆ. ಇನ್ನು ಯಾವ ದೇಶಕ್ಕಾದರೂ ಹೋಗಬಹುದು" ಎಂದು ಕೆಲವರು ಹೇಳುವುದಿದೆ. ಅಂಥವರು ಪಾಸ್‌ಪೋರ್ಟ್ ಇದ್ದರೆ ತಾವು ಎಲ್ಲಿ ಬೇಕಾದರೂ ಹೋಗಬಹುದು ಎಂದು ತಿಳಿದಿರುತ್ತಾರೆ. ಕೇವಲ ಪಾಸ್‌ಪೋರ್ಟ್ ಇದ್ದರೆ ಸಾಲದು, ಯಾವುದೇ ಒಂದು ದೇಶಕ್ಕೆ ಹೋಗಬೇಕು ಎಂದಾದರೆ ಆ ದೇಶದ ವೀಸಾ ಕೂಡ ಬೇಕಾಗುತ್ತದೆ ಎಂದು ಅವರಿಗೆ ತಿಳಿದಿರುವುದಿಲ್ಲ. ಈ ವಿಷಯದಲ್ಲಿ ನಮ್ಮ ಶಾಲೆಗಳ ಲ್ಲಿಯೂ ಯಾವುದೇ ಪಾಠ ಇದ್ದಂತಿಲ್ಲ.

Kiran Upadhyay Column: ನಿಸರ್ಗ ಎಂದಾಕ್ಷಣ ಮನುಷ್ಯ ನೆನಪಾಗುತ್ತಾನಾ ?

Kiran Upadhyay Column: ನಿಸರ್ಗ ಎಂದಾಕ್ಷಣ ಮನುಷ್ಯ ನೆನಪಾಗುತ್ತಾನಾ ?

ಪ್ರಕೃತಿಯೊಂದಿಗೆ ಕ್ಷಿಪ್ತವಾದ ಪ್ರತಿಯೊಂದು ವಸ್ತುವೂ, ಕಾರ್ಯವೂ ಪರಮಪವಿತ್ರ. ಆದರೆ ಆ ಪಾವಿತ್ರ್ಯದ ಕೀಲು ಕಳಚುತ್ತಿರುವುದು ಮನುಷ್ಯ. ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿತ್ಯ ವೂ ಅತ್ಯಾಚಾರಗೈಯುತ್ತಿರುವ ಮನುಷ್ಯ, ಬದುಕಲು ಅತ್ಯವಶ್ಯವಾದ ಪ್ರಾಣವಾಯುವನ್ನು ನೀಡುವ ಮರವನ್ನು ಕಡಿಯುವುದರಲ್ಲೂ ದಾಕ್ಷಿಣ್ಯ ತೋರುತ್ತಿಲ್ಲ.

Kiran Upadhyay Column: ರಾಜ್ಯ ಪ್ರಶಸ್ತಿ: ಅರ್ಹರಿಗೆ ಮುಂದಿನ ದಾರಿ...!

Kiran Upadhyay Column: ರಾಜ್ಯ ಪ್ರಶಸ್ತಿ: ಅರ್ಹರಿಗೆ ಮುಂದಿನ ದಾರಿ...!

ನನ್ನ ಪ್ರಕಾರ, ಈ ರೀತಿಯ ರಾಜ್ಯೋತ್ಸವ ಪ್ರಶಸ್ತಿ ಎಂಬುದು ವರ್ಷಕ್ಕೆ ಒಂದು ಬಾರಿ ಮಾತ್ರ ಆಗಬಾರದು. ಇದು ಪ್ರತಿ ತಿಂಗಳೂ ನಡೆಯಬೇಕು. ಪ್ರಶಸ್ತಿಯ ಸಂಖ್ಯೆಯನ್ನು ಎಪ್ಪತ್ತು-ಎಂಬತ್ತಕ್ಕೆ ಸೀಮಿತಗೊಳಿಸಬಾರದು. ಅದನ್ನು ಇನ್ನೂರು, ಮುನ್ನೂರಕ್ಕೆ ಏರಿಸಬೇಕು. ಏಳು ಕೋಟಿ ಜನಸಂಖ್ಯೆ ಇರುವ ನಾಡಿನಲ್ಲಿ ತಿಂಗಳಿಗೆ ಇನ್ನೂರು-ಮುನ್ನೂರು ಸಾಧಕರು ಸಿಗುವುದು, ಅಥವಾ ಅವರನ್ನು ಹುಡುಕುವುದು ಕಷ್ಟವೇನಲ್ಲ.

Kiran Upadhyay Column: ಹೀಗೊಂದು ದಾಖಲೆಯ ಯೋಗಾಯೋಗ...

Kiran Upadhyay Column: ಹೀಗೊಂದು ದಾಖಲೆಯ ಯೋಗಾಯೋಗ...

ನಿಮ್ಮದೇ ದಾಖಲೆಯನ್ನು ನೀವು ಮುರಿಯಬೇಕೆಂದರೆ ಏನು ಮಾಡಬೇಕು? ಮೊದಲು ಒಂದು ದಾಖಲೆ ಮಾಡಬೇಕು! ಜೀವಮಾನದಲ್ಲಿ ಯಾವುದೇ ವಿಷಯದಲ್ಲಿ ಒಂದೇ ದಾಖಲೆ ಮಾಡಿದರೂ ಜೀವನ ಸಾರ್ಥಕ. ಆ ಒಂದೇ ದಾಖಲೆ ಮಾಡಬೇಕೆಂದಾದರೂ ಸತತ, ಕಠಿಣ ಪರಿಶ್ರಮ ಬೇಕು. ನಿಮ್ಮ ದಾಖಲೆ ಯನ್ನು ನೀವು ಮತ್ತೆ ಮತ್ತೆ ಮುರಿಯಬೇಕೆಂದರೆ ಏನು ಮಾಡಬೇಕು? ಮತ್ತೆ ಮತ್ತೆ ದಾಖಲೆಯನ್ನು ಮಾಡುತ್ತಿರಬೇಕು!

Kiran Upadhyay Column: ಇರುವಲ್ಲಿಯೇ ಆನಂದ ಕಾಣುವ ಒಳಿತಲ್ಲವೇ ?

ಇರುವಲ್ಲಿಯೇ ಆನಂದ ಕಾಣುವ ಒಳಿತಲ್ಲವೇ ?

ಭಾರತವು 2011ರ ವಿಶ್ವಕಪ್ ಗೆದ್ದಾಗ ಸರಣಿ ಪುರುಷ ಪ್ರಶಸ್ತಿಗೆ ಭಾಜನರಾದವರು. ಇವೆಲ್ಲಕ್ಕಿಂತ ಹೆಚ್ಚಾಗಿ ಯುವರಾಜ್ ನೆನಪಿನಲ್ಲಿರುವುದು ಒಂದೇ ಓವರಿನ ೬ ಎಸೆತದಲ್ಲಿ ೬ ಸಿಕ್ಸರ್ ಬಾರಿಸಿದ್ದಕ್ಕಾಗಿ ಎಂದರೂ ತಪ್ಪಾಗಲಿಕ್ಕಿಲ್ಲ. ನನ್ನ ದೃಷ್ಟಿಯಲ್ಲಿ ಯುವರಾಜ್ ಒಬ್ಬ ಮಹಾನ್ ಕ್ರೀಡಾಪಟು ಅಷ್ಟೇ ಅಲ್ಲ, ಮಹಾನ್ ಹೋರಾಟಗಾರ ಕೂಡ. ಅದರಲ್ಲೂ ಸಾವಿನೊಂದಿಗೆ ಹೋರಾಡಿ ಜಯಸಿ ದವರು.

Kiran Upadhyay Column: ನಾವು ನೆಟ್ಟ ಗಿಡದ ಫಲ ಕೆಲವೊಮ್ಮೆ ನಮಗೆ ಸಿಗದು

ನಾವು ನೆಟ್ಟ ಗಿಡದ ಫಲ ಕೆಲವೊಮ್ಮೆ ನಮಗೆ ಸಿಗದು

ಮ್ಯಾಕ್ಸ್ ವಿನ್ಯಾಸಗೊಳಿಸಿದ ಯಂತ್ರ ಎಷ್ಟು ಜನಪ್ರಿಯವಾಗತೊಡಗಿತ್ತೆಂದರೆ, ಆತ ವಿನ್ಯಾಸ‌ ಗೊಳಿಸಿದ ಆರು ನೂರು ಯಂತ್ರಗಳನ್ನು ಖರೀದಿಸಲು ಪ್ರಶ್ಯನ್ ಸೇನೆ ಮುಂದಾಯಿತು. ಅದೇ ಸಂದರ್ಭದಲ್ಲಿ ಕಾರ್ಲ್ ರಾಪ್ ಆರೋಗ್ಯವೂ ಕೈ ಕೊಡುತ್ತಿತ್ತು, ಅವರಿಗೆ ಮೊದಲಿನಷ್ಟು ಬೇಡಿಕೆಯೂ ಇರಲಿಲ್ಲ.

Kiran Upadhyay Column: ಆ ಅಂತಿಮ ಪಂದ್ಯ ಕಲಿಸಿದ ಪಾಠವನ್ನು ಮರೆಯಲಾಗದು

ಆ ಅಂತಿಮ ಪಂದ್ಯ ಕಲಿಸಿದ ಪಾಠವನ್ನು ಮರೆಯಲಾಗದು

ಕ್ರಿಕೆಟ್‌ನಲ್ಲಿ ರಾಜಕೀಯ ಸೇರಿಕೊಂಡಿದೆ ಎಂಬ ಮಾತು ಅತಿಯಾಗಿ ಕೇಳಿ ಬರುತ್ತಿದೆ. ಆಟದಲ್ಲಿ ರಾಜಕೀಯ ಯಾವಾಗ ಇರಲಿಲ್ಲ ಹೇಳಿ? ಇತ್ತೀಚೆಗೆ ಹೆಚ್ಚಾಗಿದೆ ಎಂದರೆ ಒಪ್ಪಿಕೊಳ್ಳೋಣ, ಆದರೆ ಆಟದಲ್ಲಿ ರಾಜಕೀಯ ಇರಲೇ ಇಲ್ಲ ಎಂದರೆ ಯಾರೂ ಒಪ್ಪಬೇಕಾಗಿಲ್ಲ.

Kiran Upadhyay Column: ನಿಮಗೆ ಜ್ಞಾನಪೀಠವಲ್ಲ, ಸುಜ್ಞಾನಪೀಠವೂ ಕಡಿಮೆಯೇ

ನಿಮಗೆ ಜ್ಞಾನಪೀಠವಲ್ಲ, ಸುಜ್ಞಾನಪೀಠವೂ ಕಡಿಮೆಯೇ

ನೀವು ಬರೆದದ್ದೆಲ್ಲ ಅರ್ಥವಾಯಿತೇ? ಇಲ್ಲ. ಏನೂ ಅರ್ಥವಾಗಲಿಲ್ಲವೇ? ಹಾಗೂ ಅಲ್ಲ, ಒಂದು ರೀತಿ ಯಲ್ಲಿ ಅರ್ಥವಾಯಿತು. ಇನ್ನೊಮ್ಮೆ ಓದಿದರೆ ಮತ್ತೊಂದು ರೀತಿಯಲ್ಲಿ ಅರ್ಥವಾಯಿತು. ಯಾಕೋ ಗೊತ್ತಿಲ್ಲ, ನಿಮ್ಮ ಕುರಿತು ಏನೋ ಗೌರವ, ಯಾವುದೋ ಪ್ರೀತಿ, ಅವ್ಯಕ್ತ ಭಾವ. ಅದಕ್ಕೇ ಹೇಳಿದ್ದು, ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂದೇ ತಿಳಿಯುತ್ತಿಲ್ಲ ಎಂದು. ಈ ಸಂಬಂಧಕ್ಕೆ ಬೇರೇನಾದರೂ ಹೆಸರಿದೆಯೇ ಎಂದು ನಿಮ್ಮನ್ನೇ ಕೇಳೋಣವೆಂದರೆ, ಭೇಟಿಯಾದಾಗ ಅದಕ್ಕೂ ಧೈರ್ಯ ಸಾಲು ತ್ತಿರಲಿಲ್ಲ. ನಿಮ್ಮ ಎದುರು ನಿಲ್ಲುವಾಗ ಜಂಘಾಬಲ ಉಡುಗಿ ಹೋಗುತ್ತಿತ್ತು.

Kiran Upadhyay Column: ಇವರು ಎಂಥಾ ಲಾಂ(ಗಲೀ)ಜು ಜನ...!!?

Kiran Upadhyay Column: ಇವರು ಎಂಥಾ ಲಾಂ(ಗಲೀ)ಜು ಜನ...!!?

ನಾನು ಈಗ ಹೇಳಲು ಹೊರಟಿರುವುದು ವಿಮಾನ ನಿಲ್ದಾಣದ ಒಳಗೆ ಇರುವ ಲಾಂಜಿಗೆ ಬರುವ ಜನರ ಕುರಿತು. ಎಲ್ಲರೂ ಅಲ್ಲದಿದ್ದರೂ ಇಂಥವರ ಸಂಖ್ಯೆ ಸಾಕಷ್ಟು ಇದೆ ಎಂದೇ ಹೇಳಬಹುದು. ಒಮ್ಮೆ ಅಬುಧಾಬಿಯ ವಿಮಾನ ನಿಲ್ದಾಣದ ಲಾಂಜಿನಲ್ಲಿ ಕುಳಿತುಕೊಂಡಿದ್ದೆ. ನೋಡಿದರೆ ಸುಮಾರು ನಲವತ್ತರಿಂದ ನಲವತ್ತೈದು ವರ್ಷದವನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬ ಒಳಗೆ ಬಂದ. ಅವನೊಂದಿಗೆ ಅಂದಾಜು ಹದಿನಾಲ್ಕೋ-ಹದಿನೈದೋ ವರ್ಷದ ಒಬ್ಬ ಹುಡುಗನೂ ಬಂದಿದ್ದ. ಇಬ್ಬರೂ ನನ್ನ ಪಕ್ಕದ ಟೇಬಲ್‌ನ ಕುಳಿತರು.

Kiran Upadhyay Column: ದಯಾಮಯಿ ದೇವರೇ, ಈ ದೇಶಕ್ಕೆ ದಯಮಾಡಿ ಆನೆ ಕೊಡು...

ದಯಾಮಯಿ ದೇವರೇ, ಈ ದೇಶಕ್ಕೆ ದಯಮಾಡಿ ಆನೆ ಕೊಡು...

ಒಂದು ಕಾಲದಲ್ಲಿ ಸಾವಿರಕ್ಕೂ ಹೆಚ್ಚು ಆನೆಯನ್ನು ಹೊಂದಿದ್ದ ವಿಯೆಟ್ನಾಂ ನಲ್ಲಿ ಇಂದು ಕೇವಲ ಒಂದು ನೂರು ಆನೆ ಮಾತ್ರ ಉಳಿದುಕೊಂಡಿವೆ. ಥಾಯ್ಲೆಂಡ್‌ನಲ್ಲಿ ಆನೆಗಳ ಸಂಖ್ಯೆ ಇಳಿದಿದೆ, ಕಾಂಬೋ ಡಿಯಾ, ಮ್ಯಾನ್ಮಾರ್‌ನಂಥ ದಟ್ಟ ಅಡವಿ ಇರುವ ದೇಶಗಳಲ್ಲೂ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಲಾವೋಸ್ ದೇಶದ ಕಥೆಯಂತೂ ಇನ್ನೂ ಚಿಂತಾಜನಕ ವಾಗಿದೆ.

Kiran Upadhyay Column: ಬಾಳಬುತ್ತಿ ಕಟ್ಟಿಕೊಡುವ ಗುರುವಿಗೊಂದು ನಮನ

ಬಾಳಬುತ್ತಿ ಕಟ್ಟಿಕೊಡುವ ಗುರುವಿಗೊಂದು ನಮನ

ಇಬ್ಬರಿಗೂ ಮೇಜಿನ ಕಡೆ ಮುಖ ಮಾಡಿ ಈಗ ಚೆಂಡು ಯಾವ ಬಣ್ಣದ್ದೆಂದು ಕೇಳಿದರು. ಈ ಬಾರಿ, ಮೊದಲು ಕಪ್ಪು ಎಂದಿದ್ದ ವಿದ್ಯಾರ್ಥಿ ಚೆಂಡು ಬಿಳಿಯ ಬಣ್ಣದ್ದೆಂದೂ, ಬಿಳಿಯದು ಎಂದಿದ್ದವ ಕಪ್ಪು ಬಣ್ಣದ್ದೆಂದೂ ವಾದ ಆರಂಭಿಸಿದರು. ಗುರುಗಳು ಇಬ್ಬರನ್ನೂ ಶಾಂತವಾಗಿಸಿ, ಚೆಂಡನ್ನು ನಿಧಾನವಾಗಿ ಗೋಲಾಕಾರವಾಗಿ ತಿರುಗಿಸಿದರು.

Kiran Upadhyay Column: ಇಷ್ಟು ಮಾಡಿ ಅಮೆರಿಕ ಸಾಧಿಸಿದ್ದಾದರೂ ಏನು ?

ಇಷ್ಟು ಮಾಡಿ ಅಮೆರಿಕ ಸಾಧಿಸಿದ್ದಾದರೂ ಏನು ?

ದೇಶದ ಆಂತರಿಕ ಗಲಭೆಗಳನ್ನು ಯಾವ ದೇಶವಾದರೂ ಸಹಿಸಿಕೊಳ್ಳುತ್ತದೆ, ಸುಧಾರಿಸಿಕೊಳ್ಳುತ್ತದೆ. ಯಡವಟ್ಟಾಗುವುದು ಬೇರೆ ದೇಶಗಳು ಮೂಗು ತೂರಿಸಿದಾಗ. ವಿಯೆಟ್ನಾಂ ತನ್ನ ಸ್ವಾರ್ಥಕ್ಕಾಗಿ ಲಾವೋಸ್‌ನಲ್ಲಿ ರಸ್ತೆ ನಿರ್ಮಿಸದಿದ್ದಿದ್ದರೆ, ರಷ್ಯಾ, ಚೀನಾ ಅದರ ಬೆಂಬಲಕ್ಕೆ ನಿಲ್ಲದಿದ್ದಿದ್ದರೆ, ಅಮೆರಿಕ ಮಧ್ಯ ಪ್ರವೇಶಿಸದಿದ್ದಿದ್ದರೆ, ಎಲ್ಲಕ್ಕಿಂತ ಹೆಚ್ಚಾಗಿ, ಲಕ್ಷಗಟ್ಟಲೆ ಬಾಂಬ್ ಹಾಕದಿದ್ದಿದ್ದರೆ, ಲಾವೋಸ್‌ನ ಅಮಾಯಕರು ಸಾಯುತ್ತಿರಲಿಲ್ಲ.

Kiran Upadhyay Column: ಕಲ್ಲು ಎಸೆದರೆ ಮನೆ ಕಟ್ಟಬಹುದು, ಬಾಂಬ್‌ ಎಸೆದರೆ... ?

ಕಲ್ಲು ಎಸೆದರೆ ಮನೆ ಕಟ್ಟಬಹುದು, ಬಾಂಬ್‌ ಎಸೆದರೆ... ?

ಲಾವೋಸ್‌ನಲ್ಲಿ 1953ರಿಂದ 1975ರವರೆಗೆ ಹಲವು ವಿಧದಲ್ಲಿ ಭೀಕರವಾದ ಯುದ್ಧಗಳು ನಡೆದವು. ಅದರಲ್ಲೂ 1964ರಿಂದ 1973ರವರೆಗೆ ಅಮೆರಿಕ ಲಾವೋಸ್ ಮೇಲೆ ಭೀಕರವಾದ ಬಾಂಬ್ ದಾಳಿ ಮಾಡಿತ್ತು. ಆ ಕಾಲದಲ್ಲಿ ಪಕ್ಕದಲ್ಲಿಯೇ ಇರುವ ವಿಯಟ್ನಾಂನಲ್ಲಿ ಯುದ್ಧ ನಡೆಯುತ್ತಿದ್ದ ಕಾರಣ, ಲಾವೋಸ್ ಮೇಲೆ ಅಂದು ಅಮೆರಿಕ ಮಾಡಿದ ದಾಳಿ ಆ ಕಾಲದಲ್ಲಿ ಸುದ್ದಿ ಆಗಲೇ ಇಲ್ಲ.

Kiran Upadhyay Column: ಅಡುಗೆಮನೆಯಿಂದ ಅಡಿಯಿಟ್ಟ ಅಡೀಡಸ್

ಅಡುಗೆಮನೆಯಿಂದ ಅಡಿಯಿಟ್ಟ ಅಡೀಡಸ್

‘ADIDAS’ ಹೆಸರು ಕೇಳದವರು ಬಹಳ ಕಡಿಮೆ. ಅದರಲ್ಲೂ ಕ್ರೀಡಾ ವಲಯದಲ್ಲಿ ಇದು ಜನಪ್ರಿಯ ಹೆಸರು. ಮೂಲತಃ ಪಾದರಕ್ಷೆಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಪಟುಗಳಿಗೆ ಬೇಕಾಗುವ ಉಡುಪುಗಳನ್ನೂ, ಕ್ರೀಡಾ ಸಾಮಗ್ರಿಗಳನ್ನೂ ತಯಾರಿಸುವುದಷ್ಟೇ ಅಲ್ಲ, ಅವು ಜನಪ್ರಿಯವೂ ಆಗಿವೆ.

Kiran Upadhyay Column: ಸುಭಾಷಿತ, ನಮ್ಮಲ್ಲಾಗಲಿ ಅಂತರ್ಗತ

Kiran Upadhyay Column: ಸುಭಾಷಿತ, ನಮ್ಮಲ್ಲಾಗಲಿ ಅಂತರ್ಗತ

ಅದು ಕಾಕತಾಳಿಯವೋ, ಭಾಷೆಯನ್ನು ಆಯ್ದುಕೊಂಡ ಮಕ್ಕಳ ಬುದ್ಧಿಮತ್ತೆಯೋ ಅಥವಾ ಆ ಕಾಲ ಘಟ್ಟದಲ್ಲಿನ ಸತ್ಯವೋ ಗೊತ್ತಿಲ್ಲ. ಆದರೆ ಇದರಿಂದಾಗಿ ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಮುಂದೊಂದು ದಿನ ಸಂಸ್ಕೃತವನ್ನು ಸ್ವಲ್ಪ ಮಟ್ಟಿಗಾದರೂ ಓದಬೇಕು ಎನ್ನುವ ಹಂಬಲ ಉಂಟಾಗಿತ್ತು

Kiran Upadhyay Column: ಬಿದಿರಿನಂತೆ ಬೆಳೆದ ಭವ್ಯ ಭಾರತ...

Kiran Upadhyay Column: ಬಿದಿರಿನಂತೆ ಬೆಳೆದ ಭವ್ಯ ಭಾರತ...

6 ತಿಂಗಳು ಆಗುವುದರ ಒಳಗೆ ಬಿದಿರು 50-60 ಅಡಿ ಬೆಳೆದು, ಓಕ್ ಮರಕ್ಕಿಂತಲೂ ಎತ್ತರಕ್ಕೆ ನಿಂತಿ ತಂತೆ. ಹೀಗಿರುವಾಗ ಒಮ್ಮೆ ಕಾಡಿನಲ್ಲಿ ದೊಡ್ಡ ಬಿರುಗಾಳಿ ಬೀಸಿತಂತೆ. ಆ ಬಿರುಗಾಳಿಗೆ ಸಾಕಷ್ಟು ಮರಗಳು ಧರಾಶಾಯಿಯಾದವಂತೆ. ಆದರೆ ಬಿದಿರು ಮಾತ್ರ ಬಗ್ಗಿ ಭೂಸ್ಪರ್ಶ ಮಾಡಿದರೂ, ಬಿರುಗಾಳಿ ನಿಂತ ನಂತರ ಪುನಃ ತಲೆಯೆತ್ತಿ ಮೊದಲಿನಂತೆಯೇ ನಿಂತಿತಂತೆ.

Kiran Upadhyay Column: ಇವರು ಬಾಲ ಶಾಸ್ತ್ರಿ

Kiran Upadhyay Column: ಇವರು ಬಾಲ ಶಾಸ್ತ್ರಿ

‘ಬಾಲಶಾಸ್ತ್ರಿ’ ಎಂದೇ ಹೆಸರಾಗಿದ್ದ ಬಾಲಗಂಗಾಧರ್ ಶಾಸ್ತ್ರಿ ಜಾಂಭೇಕರ್ ಅವರು ಹುಟ್ಟಿದ್ದು ತಿಲಕರು ಹುಟ್ಟುವುದಕ್ಕಿಂತ ನಲವತ್ತನಾಲ್ಕು ವರ್ಷ ಮೊದಲು, ಶಾಸ್ತ್ರೀಜಿ ಹುಟ್ಟುವುದಕ್ಕಿಂತ ತೊಂಬತ್ತೆರಡು ವರ್ಷ ಮೊದಲು. ಅಲ್ಲದೇ ಇವರಿಬ್ಬರೂ ಹುಟ್ಟುವುದಕ್ಕಿಂತ ಮೊದಲೇ ಅವರು ಈ ಲೋಕ ತ್ಯಜಿಸಿದ್ದರು. ಅವರು ಹುಟ್ಟಿದ್ದು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿರುವ ದೇವಗಡ್ ತಾಲೂಕಿನ ಪೊಂಬುರ್ಲೆ ಎಂಬ ಒಂದು ಕುಗ್ರಾಮದಲ್ಲಿ.

Kiran Upadhyay Column: ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಸಲ್ಲುವ ಸೈಕಲ್

Kiran Upadhyay Column: ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಸಲ್ಲುವ ಸೈಕಲ್

ಸೈಕಲ್‌ನ ವಿಶೇಷತೆಯೆಂದರೆ, ಒಮ್ಮೆ ಕಲಿತರೆ ಮುಗಿಯಿತು, ಜೀವನಪೂರ್ತಿ ನೆನಪಿರುವ ವಿದ್ಯೆ ಅದು. It is one time investment (ಈ ಪಟ್ಟಿಗೆ ಈಜುವುದನ್ನೂ ಸೇರಿಸಿಕೊಳ್ಳಬಹುದು). ಸೈಕಲ್ ತುಳಿಯುವುದು ಬಿಟ್ಟು ದಶಕಗಳೇ ಕಳೆದಿರಲಿ, ಕಲಿಯುವಾಗ ಇದ್ದ 25 ಕಿಲೋ ದೇಹದ ತೂಕಕ್ಕೆ ಇನ್ನೂ ನೂರು ಸೇರಿ 125 ಕಿಲೋ ತೂಕದ ಶರೀರವೇ ಆಗಲಿ, ಸೈಕಲ್ ತಾರತಮ್ಯ ತೋರಿಸುವುದಿಲ್ಲ. ಒಮ್ಮೆ ಸೈಕಲ್ ಮೇಲೆ ನಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳುವುದನ್ನು (ಬ್ಯಾಲೆನ್ಸಿಂಗ್) ಕಲಿತರೆ ಅದು ಜೀವನ ಪರ್ಯಂತ.

Kiran Upadhyay Column: ತೃಪ್ತಿ ಎಂಬುದು ಸಹಜ ಶ್ರೀಮಂತಿಕೆ

Kiran Upadhyay Column: ತೃಪ್ತಿ ಎಂಬುದು ಸಹಜ ಶ್ರೀಮಂತಿಕೆ

ಒಮ್ಮೆ ಯೋಚಿಸಿ, ನಾವು ಜೀವಮಾನದಲ್ಲಿ ಕಾಣದ, ಕೇಳದ ಅದೆಷ್ಟೋ ವಿಷಯಗಳಿವೆ. ಅದು ನಮಗೆ ದೊರೆತರೆ ನಮ್ಮ ಬದುಕು ಇನ್ನಷ್ಟು ಸುಲಭವೂ, ಹಸನೂ ಆಗಬಹುದು. ಆದರೆ ಅದರ ಕುರಿತಾಗಿ ನಮಗೆ ತಿಳಿದಿರುವುದಿಲ್ಲವಾದ್ದರಿಂದ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನಮಗೆ ಬೇಕು ಎಂದು ಅನಿಸುವುದೂ ಇಲ್ಲ.

Kiran Upadhyay Column: ಪಾssssಪ... ಹಿರಣ್ಯಕಶಿಪು...!

ಪಾssssಪ... ಹಿರಣ್ಯಕಶಿಪು...!

ಹಿರಣ್ಯಕಶಿಪು, ಹಿರಣ್ಯಾಕ್ಷ, ರಾವಣ, ಕುಂಭಕರ್ಣ, ಇಂದ್ರಜಿತು, ಶುಂಭ, ನಿಶುಂಭ, ಚಂಡ, ಮುಂಡ, ಶೂರ್ಪನಖಿ, ತಾಟಕಿ, ಮಾರೀಚ, ನರಕಾಸುರ, ಪೂತನಿ, ಬಕಾಸುರ ಹೀಗೆ ಸಾವಿರಾರು ದಾನವರ ಹೆಸರುಗಳನ್ನು ನಾವು ಕೇಳಿದ್ದೇವೆ. ಇವರನ್ನು ಅಸುರರು ಎಂದೂ ಕರೆಯುವುದಿದೆ.

Kiran Upadhyay Column: ಅಂದು ಕೃಷ್ಣ ತಾನೇ ರಾಧೆಯಾಗಲು ಬಯಸಿದ್ದನಂತೆ...

ಅಂದು ಕೃಷ್ಣ ತಾನೇ ರಾಧೆಯಾಗಲು ಬಯಸಿದ್ದನಂತೆ...

ರಥದ ಮುಂದೆ ಅಶ್ವಗಳನ್ನು ಕಟ್ಟಿಕೊಂಡು, ಸಾರಥಿ ರಥವನ್ನು ಮುನ್ನಡೆಸುವುದು, ರಥಿಕ ಒಳಗೆ ಕುಳಿತುಕೊಳ್ಳುವುದು, ಕೆಲವೊಮ್ಮೆ ರಥಿಕನೇ ರಥ ನಡೆಸುವುದು, ಈ ರೀತಿಯ ಹಲವಾರು ಘಟನೆಗಳನ್ನು ನಾವು ಕೇಳಿದ್ದೇವೆ. ಸೂರ್ಯನಿಂದ ಹಿಡಿದು, ಇತ್ತೀಚಿನ ರಾಜ-ಮಹಾರಾಜರುಗಳ ಕಾಲದ ವರೆಗೆ ಇಂಥ ಸಾಕಷ್ಟು ಕತೆ ಕೇಳಿದ್ದೇವೆ.

Kiran Upadhyay Column: ಏರುಗತಿಯಲ್ಲೇ ಸಾಗುತ್ತಿರುವ ಏಶಿಯನ್‌ ಪೇಂಟ್ಸ್‌

ಏರುಗತಿಯಲ್ಲೇ ಸಾಗುತ್ತಿರುವ ಏಶಿಯನ್‌ ಪೇಂಟ್ಸ್‌

ಬಾಡಿಗೆಯ ಗ್ಯಾರೇಜಿನಲ್ಲಿ ಆರಂಭವಾದ ಏಶಿಯನ್ ಪೇಂಟ್ಸ್ ಸಂಸ್ಥೆ ಹತ್ತು ವರ್ಷದ ಅವಧಿಯಲ್ಲಿ ವಾರ್ಷಿಕ 23 ಕೋಟಿ ರುಪಾಯಿಯ ವಹಿವಾಟು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತು. ಅಷ್ಟೇ ಅಲ್ಲ, ಆರಂಭಗೊಂಡ 25 ವರ್ಷದ ಅವಧಿಯಲ್ಲಿ ದೇಶದ ಪೇಂಟ್ ತಯಾರಿಸುವ ಕಂಪನಿಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನಕ್ಕೇರಿತು.

Kiran Upadhyay Column: ಏರ್‌ ಇಂಡಿಯಾ, ಫೇರ್‌ ಇಂಡಿಯಾ ಆಗುವುದು ಯಾವಾಗ ?

ಏರ್‌ ಇಂಡಿಯಾ, ಫೇರ್‌ ಇಂಡಿಯಾ ಆಗುವುದು ಯಾವಾಗ ?

ಭೂಮಿ ಬಿಟ್ಟು ಬಾನಿಗೆ ನೆಗೆದು ನಿಮಿಷವಾಗುವುದರ ಒಳಗೆ ವಿಮಾನ ಭಸ್ಮವಾಗಿತ್ತು. ಪೈಲಟ್ ಬೆವರುವುದಕ್ಕಿಂತ ಮೊದಲೇ ಪ್ರಯಾಣಿಕರೂ ಬೆಂಕಿಯಲ್ಲಿ ಬೆಂದು ಹೋದರು. ನೀವು ಲಂಡನ್ನಿಗೇ ಹೊರಡಿ, ಆಕಾಶಕ್ಕೇ ಹಾರಿ, ಕಾಲ ಬಂದಾಗ ತಾನು ಮಾತ್ರ ಬೆನ್ನು ಬಿಡುವುದಿಲ್ಲ ಎಂದು ಕಾಲ ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾನೆ.

Kiran Upadhyay Column: ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ಭೌತಿಕವಾದ ಸೇತುವೆ ಕಣ್ಣಿಗೆ ಕಾಣಿಸುತ್ತದೆ, ಭಾವನೆಯ ಸೇತುವೆ ಕಣ್ಣಿಗೆ ಕಾಣುವುದಿಲ್ಲ. ಕಣ್ಣಿಗೆ ಕಾಣುವ ಸೇತುವೆ ಸ್ಥಳಗಳನ್ನು ಜೋಡಿಸಿದರೆ ಕಾಣದಿದ್ದದ್ದು ಮನಸ್ಸನ್ನು, ಭಾವನೆಯನ್ನು ಬೆಸೆಯುತ್ತದೆ. ಗೋಚರಿಸುವ ಸೇತುವೆ ಸ್ಥಿರವಾಗಿದ್ದರೆ ಭೂಮಿಯೊಂದಿಗೆ ಬಂಧ, ಅಗೋಚರ ಸೇತು ಗಟ್ಟಿಯಾಗಿದ್ದರೆ ಭಾವದೊಂದಿಗೆ ಬಂಧನ ಬಲಿಷ್ಠವಾಗಿರುತ್ತದೆ.

Loading...