ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

[email protected]

ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಬೆಳೆದದ್ದು, ಓದಿದ್ದು ಶಿರಸಿಯಲ್ಲಿ. ಐದು ವರ್ಷ ಗ್ಯಾನನ್ ಡಂಕರ್ಲಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ರಿಲಾಯನ್ಸ್ ಇಂಡಸ್ಟ್ರೀಸ್, ಫ್ಲೋಟ್ ಗ್ಲಾಸ್, ಮ್ಯಾರಿಕೋ ಇಂಡಸ್ಟ್ರೀಸ್, ಹೆಸ್ಟ್ ಫಾರ್ಮಾದಲ್ಲಿ ಕೆಲಸ. ಕಳೆದ ಮೂರು ದಶಕಗಳಿಂದ ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಬಹ್ರೈನ್ನಲ್ಲಿ ಕೆಲಸ ಮತ್ತು ವಾಸ. ಒಟ್ಟೂ ಆರು ಪುಸ್ತಕಗಳ ಕೃತಿಕಾರರು. ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ ‘ಆಸ್ತಿಕತೆ’ ಮೊದಲ ಕೃತಿ. ‘ವಿಶ್ವತೋಮುಖ’, ‘ವಿದೇಶವಾಸಿ’, ‘ಪರದೇಶವಾಸಿ’, ‘ಹೊರದೇಶವಾಸಿ’ಮತ್ತು ‘ದೂರದೇಶವಾಸಿ’ ನಂತರದ ಕೃತಿಗಳು. ವಿಶ್ವವಾಣಿ ದಿನಪತ್ರಿಕೆಯ ಅಂತಾರಾಷ್ಟ್ರೀಯ ವರದಿಗಾರರು. ರಾಜ್ಯಪ್ರಶಸ್ತಿ ವಿಜೇತ ’ಹಾಡು ಹಕ್ಕಿ ಹಾಡು’ ಮತ್ತು ’ವೆರಿಗುಡ್’ ಮಕ್ಕಳ ಚಲನಚಿತ್ರದ ಸಹನಿರ್ಮಾಪಕರು. ಬಹ್ರೈನ್ನ ‘ಸಾರ್ಥ ಫೌಂಡೇಷನ್’, ಶಿರಸಿಯ ’ಅಧ್ಯಾಯ ಟ್ರಸ್ಟ್’ ಮತ್ತು ‘ವಿಕಿ ಬುಕ್ಸ್’ ಪ್ರಕಾಶನದ ನಿರ್ದೇಶಕರು. ಕುಮಟಾದ ‘ಸಾರ್ಥ ಪ್ರತಿಷ್ಠಾನ’ದ ಉಪಾಧ್ಯಕ್ಷರು. ಒಮ್ಮೆ ಬೆಂಗಳೂರಿನಲ್ಲಿ, ಇನ್ನೊಮ್ಮೆ ಮಂಗಳೂರಿನಲ್ಲಿ ‘ಬಹ್ರೈನ್ ಕನ್ನಡೋತ್ಸವ’ವನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತ ‘ಕನ್ನಡ ಸಂಘ ಬಹ್ರೈನ್’ನಲ್ಲಿ ಎರಡು ವರ್ಷ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಒಂಬತ್ತು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ಭಾರತದಿಂದ ಆಚೆ ನಿರ್ಮಾಣಗೊಂಡ ಪ್ರಥಮ ‘ಕನ್ನಡ ಭವನ’ ಕಟ್ಟಡ ನಿರ್ಮಾಣ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಕನ್ನಡ ಸಂಘ ಬಹ್ರೈನ್ ಜಂಟಿಯಾಗಿ ಆಯೋಜಿಸಿದ ‘ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ’, ‘ಗಲ್ಫ್ ಯಕ್ಷ ವೈಭವ’ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೇತೃತ್ವವಹಿಸಿಕೊಂಡವರಲ್ಲಿ ಒಬ್ಬರು. ಕನ್ನಡ ಸಂಘ ಬಹ್ರೈನ್ ನಡೆಸುತ್ತಿರುವ ಕನ್ನಡ ತರಗತಿಯಲ್ಲಿ ಮಕ್ಕಳಿಗೆ ಉಚಿತವಾಗಿ ಕನ್ನಡ ಬೋಧನೆ ಮಾಡುತ್ತಿದ್ದಾರೆ. ನಾಟಕ, ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಆಗಾಗ ಅಭಿನಯಿಸುತ್ತಿರುತ್ತಾರೆ.

Articles
Kiran Upadhyay Column: ಹೆಣವನ್ನೂ ಬಿಡದ ಇವರ ಹಾಸ್ಯ...

Kiran Upadhyay Column: ಹೆಣವನ್ನೂ ಬಿಡದ ಇವರ ಹಾಸ್ಯ...

ಇತ್ತೀಚೆಗೆ ರಾಷ್ಟ್ರದಾದ್ಯಂತ ಸುದ್ದಿಯಾದ ಒಂದು ಹಾಸ್ಯಾಸ್ಪದ ಘಟನೆ ನಿಮಗೆ ತಿಳಿದಿರಬಹುದು. ಅವರ ಹೆಸರು ಹೇಳದೆಯೇ, ವಿಷಯದ ಕುರಿತು ಹೇಳಿ ಮುಂದುವರಿಯುತ್ತೇನೆ. ಹಾಸ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡವರ ಹೆಸರು ಹೇಳಿ, ನಮ್ಮ ಪಾವಿತ್ಯ್ರತೆಯನ್ನು ಕೆಡಿಸಿಕೊಳ್ಳುವುದು ಬೇಡ. ಹಾಗೆಯೇ, ಅಂಥವರ ಹೆಸರು ಹೇಳಿ ಅವರಿಗೆ ಇನ್ನಷ್ಟು ಪ್ರಚಾರ ಕೊಡು ವುದೂ ಬೇಡ.

Kiran Upadhyay Column: ಮೋರಿಯಿಂದೆದ್ದು ಗೋರಿ ಸೇರಲಿರುವ ಜೆನ್‌ ಜಿರಳೆ

ಮೋರಿಯಿಂದೆದ್ದು ಗೋರಿ ಸೇರಲಿರುವ ಜೆನ್‌ ಜಿರಳೆ

ಸದ್ಯ ಚಾಲ್ತಿಯಲ್ಲಿರುವುದು ಭಾರತದ ಜೆನ್ ಜಿರಳೆಯ ವಿಷಯ. ದೇಶದ ಸಮಸ್ಯೆಯನ್ನು ಬಗೆಹರಿಸಲು ಪಣತೊಟ್ಟ ಜೆನ್ ಜಿರಳೆ ಕುಲತಿಲಕ, ಭಾರತಕ್ಕೆ ಬಂದು ಕೆಲವೇ ತಾಸಿನಲ್ಲಿ ಅಸ್ವಸ್ಥವಾಯಿತು. ಎರಡು ದಿನ ಮೊದಲಷ್ಟೇ ಪತ್ರಿಕಾ ಗೋಷ್ಠಿ ಕರೆದು, ‘ಪ್ರತಿಭಟನೆ ಮಾಡುವುದಕ್ಕೆ ನಮಗೆ ಸ್ವಾತಂತ್ರ್ಯವಿದೆ, ಅದಕ್ಕೆ ಪೊಲೀಸರಿಂದ ಪರವಾನಿಗೆ ಏಕೆ ಪಡೆಯಬೇಕು?’ ಎಂದು ಕೇಳಿದ್ದ ಜಿರಳೆ ಸಂಘದ ಪ್ರಧಾನ ಕಾರ್ಯದರ್ಶಿ, ದೆಹಲಿಯ ತಾಪ ತಾಳಲಾರದೆ ತಂಪು ಪಾನೀಯ ಹೀರುತ್ತಾ ಕುಳಿತಿತ್ತು.

K‌iran Upadhyay Column: ಪಿಚ್‌ ಮೇಲೆ ಮಲಗುತ್ತಿದ್ದ ಐಪಿಎಲ್‌ ಸ್ಟಾರ್

ಪಿಚ್‌ ಮೇಲೆ ಮಲಗುತ್ತಿದ್ದ ಐಪಿಎಲ್‌ ಸ್ಟಾರ್

ಐಪಿಎಲ್ ಆರಂಭವಾದ ದಿನಗಳಲ್ಲಿ ನಾನು ಇಷ್ಟಪಡುತ್ತಿದ್ದ ಆಟಗಾರರಲ್ಲಿ ಒಬ್ಬರಾಗಿದ್ದ ವರು ಸುರೇಶ್ ರೈನಾ. ರೈನಾ ತಮ್ಮ ಆಟದ ಜತೆಗೆ ಸ್ಟೈಲ್ʼನಿಂದಲೂ ಇಷ್ಟವಾಗುತ್ತಿದ್ದರು. ಒಮ್ಮೆ ಅವರ ಪೂರ್ವಾಪರ, ಬಾಲ್ಯದಲ್ಲಿ ಅವರು ಪಟ್ಟ ಪಾಡು, ಇವನ್ನೆಲ್ಲ ತಿಳಿದ ನಂತರವಂತೂ ನಾನು ಅವರ ಪಕ್ಕಾ ಅಭಿಮಾನಿಯಾದೆ. ರೈನಾ ಕುರಿತು ಎಲ್ಲಿಯೇ, ಏನೇ ಕಂಡರೂ ಒಂದು ಘಳಿಗೆ ನಿಂತು ಅದನ್ನು ನೋಡಿಯೇ ಮುಂದೆ ಹೋಗುತ್ತೇನೆ.

Kiran Updhyay Column: ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...

ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...

ಇಟಲಿ ಪ್ರವಾಸದಲ್ಲಿ ಮೋದಿ ಅವರು ಮೆಲೋನಿಗೆ ಕೇವಲ ಮೆಲೊಡಿ ಮಾತ್ರ ಕೊಡಲಿಲ್ಲ. ಅಸ್ಸಾಂನಲ್ಲಿ ತಯಾರಾಗುವ ‘ಮುಗಾ’ ರೇಷ್ಮೆ ಶಾಲು ಮತ್ತು ಮಣಿಪುರದಲ್ಲಿ ತಯಾರಾಗುವ ‘ಶಿರುಯಿ ಲಿಲಿ’ ರೇಷ್ಮೆ ಶಾಲನ್ನು ಕೂಡ ಕೊಟ್ಟಿದ್ದರು. ಆದರೆ ಅದರ ಬಗ್ಗೆ ಎಲ್ಲಿಯೂ ಹೆಚ್ಚು ಸುದ್ದಿ ಆಗಲಿಲ್ಲ. ಸುದ್ದಿ ಆದದ್ದು ಐವತ್ತು ರೂಪಾಯಿಯ ಮೆಲೊಡಿ ಚಾಕ್ಲೇಟ್ ಮಾತ್ರ.

Kiran Upadhyay Column: ಭಾರತದಲ್ಲಿ ಸೂಟ್‌ʼಕೇಸ್‌ ಸಮರದ ಕತೆ...

Kiran Upadhyay Column: ಭಾರತದಲ್ಲಿ ಸೂಟ್‌ʼಕೇಸ್‌ ಸಮರದ ಕತೆ...

ಹಸಿರು ಬಣ್ಣದ ಟ್ರಂಕುಗಳು ಮದುಮಗನಿಗೆ ಬಳುವಳಿ ಪ್ರತೀಕವಾಗಿ ಉಳಿದುಕೊಂಡಿತು. ಈಗ ಅದೂ ಸೂಟ್‌ಕೇಸ್‌ಗೆ ಬದಲಾಗಿ, ಟ್ರಂಕ್ ಸ್ಥಾನ ವಸ್ತುಸಂಗ್ರಹಾಲಯಕ್ಕೆ ಸೀಮಿತವಾಗಿದೆ. ಈಗ ಸ್ಯಾಮ್ಸೊನೈಟ, ಡೆಲ್ಸಿ, ಅಮೆರಿಕನ್ ಟೂರಿಸ್ಟರ್, ಲೂಯಿ ವಿಟ್ಟೋ, ಹಾರ್ಟ್ಮನ್ ಇತ್ಯಾದಿ ಇಪ್ಪತ್ತಕ್ಕೂ ಹೆಚ್ಚು ಸೂಟ್‌ ಕೇಸ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರೂ, ಭಾರತದಲ್ಲಿ ಹೆಚ್ಚು ನಡೆಯುವುದು ವಿಐಪಿ, ಅರಿಸ್ಟೊಕ್ರಾಟ್ ಮತ್ತು ಸಫಾರಿ ಸೂಟ್‌ಕೇಸ್ ಗಳೇ.

Kiran Upadhyay Column: ತಮಿಳುನಾಡಿನಲ್ಲಿ ನಟರು ಸಿಎಂ ಆಗುವುದು ಏಕೆ ?

ತಮಿಳುನಾಡಿನಲ್ಲಿ ನಟರು ಸಿಎಂ ಆಗುವುದು ಏಕೆ ?

ಕರ್ನಾಟಕದಾದಿಯಾಗಿ ಹೆಚ್ಚು ಕಮ್ಮಿ ಪ್ರತಿ ರಾಜ್ಯದಲ್ಲೂ ಸಿನಿಮಾದಿಂದ ರಾಜಕೀಯಕ್ಕೆ ಬಂದು, ಜನಪ್ರತಿನಿಧಿಗಳಾಗಿ, ಮಂತ್ರಿಗಳಾದವರಿದ್ದಾರೆ. ಆದರೆ ಈ ರಾಜ್ಯಗಳಲ್ಲಿ ಆರಾಧ್ಯರಾಗಿ, ಮುಖ್ಯಮಂತ್ರಿಗಳಾದವರು ಇಲ್ಲ ಎಂದೇ ಹೇಳಬಹುದು. ವಿಚಿತ್ರ ಎಂದರೆ, ದೇಶದಾದ್ಯಂತ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ಧರ್ಮೇಂದ್ರಗೆ ಕೂಡ ಮಂತ್ರಿಯಾಗುವ ಅವಕಾಶ ದೊರಕಲಿಲ್ಲ.

Kiran Upadhyay Column: ಅಲ್ಲಿ ಖರೀದಿಸದಿದ್ದರೆ ಅವರಿಗೆ ಏನೂ ನಷ್ಟವಿಲ್ಲ !

ಅಲ್ಲಿ ಖರೀದಿಸದಿದ್ದರೆ ಅವರಿಗೆ ಏನೂ ನಷ್ಟವಿಲ್ಲ !

ವಿಮಾನ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿರುವ ಅಂಗಡಿಯಲ್ಲಿ 10-20 ರೂಪಾಯಿಗೆ ಸಿಗುವ ಚಹಾ-ಕಾಫಿ, ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ 10-20 ರೂಪಾಯಿಯಾಗುತ್ತದೆ. ಆಚೆ 20-30 ರೂಪಾಯಿಗೆ ಸಿಗುವ ಸಮೋಸಾ, ಇಡ್ಲಿ, ವಡೆ, ಏರ್ ಪೋರ್ಟ್ ಒಳಗೆ ತಲುಪುತ್ತಿದ್ದಂತೆ 350-400 ರೂಪಾಯಿ ಆಗುತ್ತದೆ.

Kiran Upadhyay Column: ತನ್ನ ಹೆಸರನ್ನೇ ದ್ವೇಷಿಸಿದ್ದ ಫುಟ್ಬಾಲ್‌ ದಂತಕತೆ ಪೀಲೆ

ತನ್ನ ಹೆಸರನ್ನೇ ದ್ವೇಷಿಸಿದ್ದ ಫುಟ್ಬಾಲ್‌ ದಂತಕತೆ ಪೀಲೆ

ರಾಜ ಸತ್ತರೆ ಪ್ರಜೆಗಳು ತಬ್ಬಲಿಯಾಗುತ್ತಾರೆ ಎಂಬ ಮಾತಿದೆ. ಅದಕ್ಕೆ ತಾಯಿಯೂ ಹೊರತಲ್ಲ. ಅಂದ ಹಾಗೆ ಅಭಿಮಾನಿಗಳು ಪೀಲೆಯನ್ನು ‘ಪೆರೋಲಾ ನೆಗ್ರಾ’ (ಕಪ್ಪು ಮುತ್ತು) ಎಂದೂ ಕರೆಯುತ್ತಿದ್ದರು. ಪೀಲೆಯನ್ನು ಜನ ‘ರಾಜ’ ಎಂದರೆ ತಪ್ಪೇನಿಲ್ಲ ಬಿಡಿ. ಕೇವಲ ಯುದ್ಧ ಗೆದ್ದು, ರಾಜ್ಯ ಕಟ್ಟಿ, ಆಡಳಿತ ನಡೆಸಿದವ ಮಾತ್ರ ರಾಜನಾಗಬೇಕಿಲ್ಲ. ಆಧುನಿಕ ಯುಗದಲ್ಲಿ, ಕೇವಲ ಭೂಪಟಕ್ಕೆ ಮಾತ್ರ ಸೀಮಿತವಾಗಿದ್ದ ಒಂದು ದೇಶವನ್ನು ವಿಶ್ವವೇ ಗುರುತಿಸಿ, ಅದರೆಡೆಗೆ ತಿರುಗಿ ನೋಡುವಂತೆ ಮಾಡಿದವ ಯಾವ ರಾಜನಿಗೂ ಕಮ್ಮಿಯಲ್ಲ.

Kiran Upadhyay Column: ಈ ಕೃಷ್ಣಸುಂದರಿ ಮುಂದೆ ವಿಶ್ವಸುಂದರಿಯರೂ ಫೇಲ್‌ !

ಈ ಕೃಷ್ಣಸುಂದರಿ ಮುಂದೆ ವಿಶ್ವಸುಂದರಿಯರೂ ಫೇಲ್‌ !

ಬಣ್ಣ ನೋಡಿದರೆ ಕಪ್ಪು, ಹತ್ತಿರ ಹೋದರೆ ಕೆಟ್ಟ ವಾಸನೆ ಬೇರೆ. ಆದರೂ ಜನಸಾಮಾನ್ಯರು ನಿತ್ಯ ಬಯಸುವ, ಕೆಲವರು ಆರಾಧಿಸುವ, ಇಡೀ ವಿಶ್ವಕ್ಕೇ ಅವಶ್ಯಕವಾಗಿರುವ ಕೃಷ್ಣಸುಂದರಿಯ ಮಹಿಮೆ ಮಾತ್ರ ಅಪಾರ. ಈ ಸುಂದರಿಯ ಇತಿಹಾಸ ತುಂಬಾ ಹಳೆಯದು. ಲಕ್ಷಾಂತರ ವರ್ಷಗಳ ಹಿಂದೆ, ಪ್ರಾಣಿ ಪಕ್ಷಿ ಗಿಡ, ಇತ್ಯಾದಿ ಸಾವಯವ ಪದಾರ್ಥಗಳು ಭೂಮಿಯ ಅಡಿಯಲ್ಲಿ ಹೂತು ಹೋಗಿ, ಹೈಡ್ರೋ ಕಾರ್ಬನ್‌ಗಳಾಗಿ ರೂಪಾಂತರ ಗೊಳ್ಳುವುದರಿಂದ ಈ ಕೃಷ್ಣಸುಂದರಿ ಜನ್ಮತಾಳುತ್ತಾಳೆ.

Kiran Upadhyay Column: ಎಣ್ಣೆ ನಮ್ದು...ಸುಂಕ ನಿಮ್ದು...!

Kiran Upadhyay Column: ಎಣ್ಣೆ ನಮ್ದು...ಸುಂಕ ನಿಮ್ದು...!

ಪ್ರಪಂಚದ ಭೂಪಟದಲ್ಲಿ ಸುಮಾರು ಇನ್ನೂರು ದೇಶಗಳಿರುವಾಗ, ಆರೋ-ಏಳೋ ದೇಶಗಳಿಗೆ ಸೀಮಿತ ವಾಗಿರುವ ಈ ಜಲಸಂಧಿಗೆ ಇಷ್ಟು ಪ್ರಾಮುಖ್ಯತೆ ಏಕೆ? ಇಂದು ವಿಶ್ವದಾದ್ಯಂತ ಚಲಿಸುವ ಒಟ್ಟೂ ಹಡಗುಗಳಲ್ಲಿ ಶೇಕಡಾ ಇಪ್ಪತ್ತರಷ್ಟು ಹಡಗುಗಳು ನಲವತ್ತು ಕಿಲೋಮೀಟರ್‌ಗಿಂತ ಕಮ್ಮಿ ಅಗಲವಿರುವ ಇದೇ ಹರ್ಮುಜ್ ಜಲಸಂಧಿಯನ್ನು ದಾಟಿಯೇ ಹೋಗಬೇಕು.

Kiran Upadhyay Column: ಇದು ಟ್ರಂಪ್‌ ಮುಖವನ್ನು ಕೆಂಪಾಗಿಸಿದ ಯುದ್ಧ

Kiran Upadhyay Column: ಇದು ಟ್ರಂಪ್‌ ಮುಖವನ್ನು ಕೆಂಪಾಗಿಸಿದ ಯುದ್ಧ

ಒಂದಂತೂ ಸತ್ಯ, ಇರಾನ್ ಈ ಮಟ್ಟಿನ ಪ್ರತಿರೋಧ ಒಡ್ಡುತ್ತದೆ ಎಂದು ಅಮೆರಿಕ ಅಥವಾ ಇಸ್ರೇಲ್ ಎಣಿಸಿರಲಿಕ್ಕಿಲ್ಲ. ಇಸ್ರೇಲ್ ಒಂದೇ ಆಗಿದ್ದರೆ ಯುದ್ಧ ಇಷ್ಟು ದಿನ ಮುಂದುವರಿಯು ತ್ತಿರಲಿಲ್ಲ ಅಥವಾ ಈ ಪ್ರಮಾಣದಲ್ಲಿ ಮುಂದುವರಿಯುತ್ತಿರಲಿಲ್ಲ. ಈ ಯುದ್ಧಕ್ಕೆ ಇಷ್ಟು ಪ್ರಾಮುಖ್ಯತೆ ಬಂದಿರುವುದು ಅಮೆರಿಕ ಭಾಗವಹಿಸುತ್ತಿರುವುದರಿಂದ.

Kiran Upadhyay Column: ಹೆಸರು ಬಿಟ್ಟರೆ ಅವರ ಕೊಡುಗೆ ಏನೂ ಇಲ್ಲ

Kiran Upadhyay Column: ಹೆಸರು ಬಿಟ್ಟರೆ ಅವರ ಕೊಡುಗೆ ಏನೂ ಇಲ್ಲ

ಹೊಸ ಅನ್ವೇಷಣೆ ಮಾಡುವುದಕ್ಕೂ, ಹಳೆಯ ತಂತ್ರಜ್ಞಾನವನ್ನು ಉತ್ತಮಪಡಿಸಿ ಕೊಳ್ಳುವು ದಕ್ಕೂ ಅವಕಾಶ ಒದಗಿತು. ಅವರು ನೂತನ ಮತ್ತು ಸುಧಾರಿತ ಆಟೋ ಮೊಬೈಲನ್ನು ವಿನ್ಯಾಸ ಗೊಳಿಸಿ, ಅದಕ್ಕೆ ಪೇಟೆಂಟ್ ಕೂಡ ಪಡೆದರು. ಆ ಕಾಲದಲ್ಲಿ ಬೆನ್ಜ್ ವಿಕ್ಟೋರಿಯಾ ಎಂಬ ಹೆಸರಿನಲ್ಲಿ ತಯಾರಾದ ಮೂರು ಅಶ್ವಶಕ್ತಿಯ (ಹಾರ್ಸ್ ಪವರ್) ಎಂಜಿನ್ ಗಂಟೆಗೆ ಹನ್ನೊಂದು ಮೈಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿತ್ತು.

Kiran Upadhyay Column: ವಿದೇಶವಾಸಿಗೆ ಆರು ವರುಷ, ಚರ್ಚಾವಾಸಿಗೆ ಒಂದು ನಿಮಿಷ...!

ವಿದೇಶವಾಸಿಗೆ ಆರು ವರುಷ, ಚರ್ಚಾವಾಸಿಗೆ ಒಂದು ನಿಮಿಷ...!

ಇತ್ತೀಚೆಗೆ ಕೆಲವು ಚರ್ಚೆಗಳನ್ನು ನೀವು ನೋಡಬೇಕು, ಚರ್ಚೆಯ ವಿಷಯವೇ ಒಂದು, ಚರ್ಚೆ ಸಾಗುವುದೇ ಇನ್ನೊಂದು ದಿಕ್ಕಿನಲ್ಲಿ. ಗಂಟೆಗಟ್ಟಲೆ ನಡೆಯುವ ಚರ್ಚೆಯ ನಂತರ ಫಲಿತಾಂಶ ಏನು ಎಂದರೆ, ದೊಡ್ಡ ಸೊನ್ನೆ. ಚರ್ಚೆಯ ಕೊನೆಯಲ್ಲಿ ಯಾವುದೇ ನಿರ್ಣಯವಾಗದಿದ್ದರೂ, ಚರ್ಚೆಯಲ್ಲಿ ಭಾಗವಹಿಸಿದವರೆಲ್ಲ ‘ನಾವೇ ಗೆದ್ದೆವು’ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿ ಕೊಂಡು ಸಮಾಧಾನಪಟ್ಟುಕೊಳ್ಳುತ್ತಾರೆ.

Kiran Upadhyay Column: ಅನ್ವೇಷಕರು ಯಾರೋ, ಅನುಭವಿಸೋರು ಯಾರೋ...

ಅನ್ವೇಷಕರು ಯಾರೋ, ಅನುಭವಿಸೋರು ಯಾರೋ...

ನಮ್ಮ ಆಯ್ಕೆ ಎರಡನೆಯದಾಗಿತ್ತು. ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದು, ಬವೇರಿಯನ್ ಪ್ರಾಂತ್ಯದಲ್ಲಿರುವ ಮ್ಯೂನಿಕ್ ನಗರ ಅಕ್ಟೋಬರ್ ಫೆಸ್ಟ್ ನಡೆಯುವ ಸ್ಥಳಕ್ಕೆ ಸಮೀಪದಲ್ಲಿದ್ದರೆ, ಎರಡನೆಯದು, ಬಿಎಮ್‌ಡಬ್ಲ್ಯೂ ಕಾರುಗಳು ನಮ್ಮ ಹೃದಯಕ್ಕೆ ಹತ್ತಿರವಾಗಿದ್ದವು. ಏಕೋ-ಏನೋ, ಮೊದಲಿನಿಂದಲೂ ನನಗೆ ಬಿಎಮ್‌ಡಬ್ಲ್ಯೂ ಎಂದರೆ ಏನೋ ಮೋಹ... ಏಕೋ ದಾಹ...

Kiran Upadhyay Column: ಸುಳ್ಳೇ ಸುಳ್ಳು...ಈ ಯುದ್ಧದಲ್ಲಿ ಸುಳ್ಳೇ ಸುಳ್ಳು...

ಸುಳ್ಳೇ ಸುಳ್ಳು...ಈ ಯುದ್ಧದಲ್ಲಿ ಸುಳ್ಳೇ ಸುಳ್ಳು...

70ರ ದಶಕದ ಅಂತ್ಯದಲ್ಲಿ ಇರಾನಿ ನಲ್ಲಿ ಇಸ್ಲಾಮಿಕ್ ಕ್ರಾಂತಿ ಆರಂಭವಾಗಿ ರಾಜಕೀಯ ಬದಲಾವಣೆಗಳಾದ ನಂತರ ಪರಿಸ್ಥಿತಿ ಬೇರೆಯಾಗತೊಡಗಿತು. ಇತ್ತೀಚೆಗೆ ವೆನಿಜುವೆಲಾ ಅಧ್ಯಕ್ಷ ರನ್ನು ಅಪಹರಿಸಿದ ಕಾರಣ ಮತ್ತು ರೀತಿ, ಮೊನ್ನೆಯಷ್ಟೇ ನೀಡಿದ ‘ಇರಾನಿನ ಹೊಸ ನಾಯಕ ನನ್ನು ಆರಿಸಲು ನಾವು ಸಹಾಯ ಮಾಡುತ್ತೇವೆ’ ಎಂಬ ಅರ್ಥದ ಹೇಳಿಕೆ ಇತ್ಯಾದಿಗಳು ಯುದ್ಧದ ಕಾರಣ ಬೇರೆಯದೇ ಎಂದು ಹೇಳುತ್ತವೆ.

Kiran Upadhyay Column: ಒಲುಮೆ ಸಿಹಿಯ ಉಂಡು, ಬಯಕೆ ಸಿರಿಯ ಕಂಡು...

ಒಲುಮೆ ಸಿಹಿಯ ಉಂಡು, ಬಯಕೆ ಸಿರಿಯ ಕಂಡು...

ಒಬ್ಬ ಬರಹಗಾರ ತನ್ನ ಕೃತಿ ಜನಪ್ರಿಯವಾಗಬೇಕು ಎಂದು ಬಯಸಿದರೆ, ಕಲಾವಿದ ತನಗೆ ಪ್ರಶಸ್ತಿ ಬರಬೇಕು ಎಂದು ಬಯಸುತ್ತಾನೆ. ಹಾಗಾದರೆ ಆಟಿಕೆಯನ್ನು ಆರಿಸಿಕೊಳ್ಳುವ ಮಗುವಿನ ಬಯಕೆ ಶಾಶ್ವತ ವಲ್ಲ. ಮಗುವಿzಗ ತಾನು ಆಡಲು ಬಯಸಿದ ಆಟಿಕೆಯನ್ನು ಪಡೆಯಲು ಅದು ಏನೆಲ್ಲ ಕಸರತ್ತು ಮಾಡುತ್ತದೆ. ಆ ಕ್ಷಣದಲ್ಲಿ ಮಗುವಿಗೆ ಅದು ಪ್ರಮುಖವಾಗಿರುತ್ತದೆ.

Kiran Upadhyay Column: ಬವಣೆಯ ಬೆಂಕಿಯಲ್ಲಿ ಬೆಂದು ಬಳಲಿ ಬಂದ ಬೆನ್ಜ್‌ ಕಾರು

ಬವಣೆಯ ಬೆಂಕಿಯಲ್ಲಿ ಬೆಂದು ಬಳಲಿ ಬಂದ ಬೆನ್ಜ್‌ ಕಾರು

Carl Benz ಹುಟ್ಟಿದ್ದು 1844ರ ನವೆಂಬರ್‌ನಲ್ಲಿ, ಜರ್ಮನಿಯ ಮ್ಯುಲ್ಬರ್ಗ್‌ನಲ್ಲಿ. ಆರ್ಥಿಕ ವಾಗಿ ಅಷ್ಟೇನೂ ಸದೃಢವಾಗಿರದ ಕುಟುಂಬದಲ್ಲಿ. ತಂದೆ ರೈಲ್ವೆ ಚಾಲಕರಾಗಿದ್ದರಿಂದ ಸಂಸಾರ ವೇನೋ ನಡೆಯುತ್ತಿತ್ತು. ಆದರೆ ಕಾರ್ಲ್ ಬೆನ್ಜ್‌ಗೆ ಎರಡು ವರ್ಷ ತುಂಬುತ್ತಿದ್ದಂತೆ ತಂದೆ ತೀರಿ ಹೋದರು, ತಾಯಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

Kiran Upadhyay Column: ಅತಾ, ಪತಾ, ಲಾಪತಾ...ಹೀಗಾಯ್ತಾ ರಾಜಪಾಲ್‌ ಯಾದವ್‌ ಕಥೆ ?

ಅತಾ, ಪತಾ, ಲಾಪತಾ...ಹೀಗಾಯ್ತಾ ರಾಜಪಾಲ್‌ ಯಾದವ್‌ ಕಥೆ ?

‘ಭೂಲ್ ಭುಲಯ್ಯಾ’ ಚಿತ್ರದಲ್ಲಿನ ಅವರ ಅಭಿನಯವಂತೂ ಮರೆಯುವಂತೆಯೇ ಇಲ್ಲ ಅನ್ನಿ. ಕೇವಲ ಹಾಸ್ಯವಷ್ಟೇ ಅಲ್ಲದೆ, ‘ಮೈ ಮಾಧುರಿ ದೀಕ್ಷಿತ್ ಬನನಾ ಚಾಹತೀ ಹೂ’, ‘ಮೈ ಮೆರಿ ಪತ್ನಿ ಔರ್ ವೋ’ ಇತ್ಯಾದಿ ನಾಲ್ಕು-ಐದು ಚಿತ್ರಗಳಲ್ಲಿ ಅವರು ಪ್ರಧಾನ ಭೂಮಿಕೆಯಲ್ಲೂ, ಗಂಭೀರ ಪಾತ್ರದಲ್ಲೂ ಅಭಿನಯಿಸಿದ್ದಿದೆ. ಆದರೆ ಒಂದಂತೂ ಹೇಳಬಲ್ಲೆ, ನಾನು ಕಂಡ ಯಾವ ಸಿನಿಮಾದಲ್ಲೂ ಅವರ ಅಭಿನಯವನ್ನು ತೆಗೆದುಹಾಕುವಂತಿಲ್ಲ.

Kiran Upadhyay Column: ಮೌನಕ್ರಾಂತಿಯಲ್ಲಿ ತೊಡಗಿಸಿಕೊಂಡ ಡಬ್ಬಾವಾಲಾಗಳು

ಮೌನಕ್ರಾಂತಿಯಲ್ಲಿ ತೊಡಗಿಸಿಕೊಂಡ ಡಬ್ಬಾವಾಲಾಗಳು

ಮನೆಯ ಊಟ ಬಯಸುವವರು, ಹೊರಗಿನ ತಿಂಡಿ ಅಥವಾ ಊಟವನ್ನು ತಿನ್ನಲು ಬಯಸದ ಜನರಿಗೆ ಮನೆಯ ತಯಾರಿಸಿದ ಮಧ್ಯಾಹ್ನದ ಊಟ ತಲುಪಿಸುವ ಉಪಾಯವನ್ನು ಹುಡುಕಿದವರು ಮಹಾದೇವ ಬಚ್ಚೆ. ಆ ದಿನಗಳಲ್ಲಿ ಕಚೇರಿಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದ ಬ್ರಿಟಿಷರು ಮತ್ತು ಪಾರ್ಸಿ ಜನರಿಗೆ ಅವರವರ ಮನೆಯಿಂದ ಊಟವನ್ನು ತೆಗೆದುಕೊಂಡು ಹೋಗಿ ಕಚೇರಿಗೆ ತಲುಪಿಸುವ ಕೆಲಸವನ್ನು ಬಚ್ಚೆ ಆರಂಭಿಸಿದರು.

Kiran Upadhyay Column: ದಯಮಾಡಿ ಟ್ರೇಲರ್‌ ರಿಲೀಸ್‌ ಮಾಡಬೇಡಿ...

Kiran Upadhyay Column: ದಯಮಾಡಿ ಟ್ರೇಲರ್‌ ರಿಲೀಸ್‌ ಮಾಡಬೇಡಿ...

ಟ್ರೇಲರ್ ನೋಡಿಯೇ ‘ಸಾಕಪ್ಪಾ ಸಾಕು’ ಎನ್ನುವಂತಿರಬಾರದು ಅಲ್ಲವೇ? ಇತ್ತೀಚಿನ ಸಿನಿಮಾಗಳ ಟ್ರೇಲರ್ ನೋಡಿ, ಮುಕ್ಕಾಲು ಭಾಗ ಕತ್ತಲೆ. ಸಿನಿಮಾವೂ ಕತ್ತಲೆಯೇ. ಎಷ್ಟಾದರೂ ಟ್ರೇಲರ್ ಎನ್ನುವುದು ಸಿನಿಮಾದ ಒಂದು ಝಲಕ್ ತಾನೆ? ಇನ್ನುಳಿದ ಬೆಳಕಿನ ಭಾಗದಲ್ಲಿ ಬೆಂಕಿ, ಬಾಂಬು, ಕಾರುಗಳನ್ನು ಸ್ಫೋಟಿಸುವುದು, ಹೆಲಿಕಾಪ್ಟರ್ ಉಡಾಯಿಸುವುದು ಇತ್ಯಾದಿ, ಇತ್ಯಾದಿ.

Kiran Upadhyay Column: ಜೋಕರ್‌ ಆಗಿ ಒಂದಿಡೀ ಜಗವನ್ನೇ ಗೆದ್ದ ರಾಜ ಇವನು !

ಜೋಕರ್‌ ಆಗಿ ಒಂದಿಡೀ ಜಗವನ್ನೇ ಗೆದ್ದ ರಾಜ ಇವನು !

ರಾಜ್ ಕಪೂರ್ ಹನ್ನೆರಡನೆಯ ವಯಸ್ಸಿನಲ್ಲಿಯೇ ಬಾಲನಟನಾಗಿ ಹಿಂದಿ ಚಿತ್ರೋದ್ಯಮ ವನ್ನು ಪ್ರವೇಶಿಸಿದರು. ಮುಂದಿನ ಹನ್ನೆರಡು ವರ್ಷಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ, 1947ರಲ್ಲಿ ಮಧುಬಾಲಾ ಜತೆಗೆ ಅಭಿನಯಿಸಿದ ‘ನೀಲ್‌ಕಮಲ’ ಚಿತ್ರದಿಂದ ದೊಡ್ಡ ಹೆಸರು ಮಾಡಿದರು. ಅದಾಗಿ ಒಂದು ವರ್ಷದಲ್ಲಿ, 24ನೆಯ ವಯಸ್ಸಿನಲ್ಲಿ ಅವರು ತಮ್ಮದೇ ಆದ ‘ಆರ್ಕೆ’ ಸ್ಟುಡಿಯೋ ಸ್ಥಾಪಿಸಿ, ಅವರ ಕಾಲದ ಅತ್ಯಂತ ಕಿರಿಯ ನಿರ್ಮಾಪಕ ಮತ್ತು ನಿರ್ದೇಶಕ ಎಂಬ ಕೀರ್ತಿಗೆ ಪಾತ್ರರಾದರು.

Kiran Upadhyay Column: ಸೈಕಲ್‌ ಸಂಸ್ಕೃತಿಯ ಸೊಬಗಿನ ನಾಡಿದು ಗೊತ್ತೇ ?

Kiran Upadhyay Column: ಸೈಕಲ್‌ ಸಂಸ್ಕೃತಿಯ ಸೊಬಗಿನ ನಾಡಿದು ಗೊತ್ತೇ ?

ಆಮ್‌ಸ್ಟರ್‌ಡಾಮ್ ಎಂಬ ಹೆಸರು ಬಂದಾಕ್ಷಣ ಅವರು ಹೇಳಿದ್ದು ಒಂದೇ ವಿಷಯ ಏನೆಂದರೆ, “ಆ ನಗರದಲ್ಲಿ ಸೈಕಲ್‌ಗಳೇ ತುಂಬಿಹೋಗಿವೆ. ಎಲ್ಲಿ ನೋಡಿದರೂ ನಿಮಗೆ ಸೈಕಲ್ ಕಾಣುತ್ತದೆ. ಕೆಲವೊಮ್ಮೆ ಅತಿ ಎನಿಸುವಷ್ಟು ಕಾಣಿಸುತ್ತದೆ. ನನಗೆ ವೈಯಕ್ತಿಕವಾಗಿ ಅದು ಇಷ್ಟವಾಗುವುದಿಲ್ಲ. ಏಕೆಂದರೆ ಸೈಕಲ್ ಹಿಂದುಗಡೆ ದೊಡ್ಡ ಪೆಟ್ಟಿಗೆಗಳನ್ನೂ ಇಟ್ಟುಕೊಂಡು, ಪ್ರಮುಖ ರಸ್ತೆಯ ಪಕ್ಕದ ಚಲಿಸುತ್ತಿರುತ್ತಾರೆ.

Kiran Upadhyay Column: ಇರಾಣ...ಯಾಕಿಷ್ಟು ಹೈರಾಣ...!?

Kiran Upadhyay Column: ಇರಾಣ...ಯಾಕಿಷ್ಟು ಹೈರಾಣ...!?

ಸೌದಿ ಅರೇಬಿಯಾಕ್ಕೆ ಬಂದ ಮೇಲೆ ನಾನು ಇರಾಣದ ರಾಜಕೀಯದ ಕುರಿತು ಹೆಚ್ಚಿನ ಮಾಹಿತಿ ಪಡೆಯ ಲಾರಂಭಿಸಿದೆ. ಅಬ್ಬಾಸ್ ಭಾರತದಲ್ಲಿ ಓದಲು ಬಂದಾಗ ‘ಇಂಪೆರಿಯಲ್ ಸ್ಟೇಟ್ ಆಫ್ ಇರಾಣ’ದಲ್ಲಿ ಶಾ ಮೊಹಮ್ಮದ್ ರೆಜಾ ಪಹಲಾವಿ ರಾಜಾಡಳಿತ ನಡೆಸುತ್ತಿದ್ದ. ಸುಮಾರು 4 ದಶಕಗಳ ಆಡಳಿತ ನಡೆಸಿದ್ದ ಆತ ಇರಾಣಿನ ‘ಶಹನ್ಶಾ’ (ರಾಜರ ರಾಜ) ಎಂದೇ ಖ್ಯಾತನಾಗಿದ್ದ.

K‌iran Upadhyay Column: ಯುದ್ಧ ಮಾಡದೇ ಗೆದ್ದ ಯುನೈಟೆಡ್‌ ಅರಬ್‌ ಎಮಿರೇಟ್ಸ್

ಯುದ್ಧ ಮಾಡದೇ ಗೆದ್ದ ಯುನೈಟೆಡ್‌ ಅರಬ್‌ ಎಮಿರೇಟ್ಸ್

ಯುಎಇಯ ಹಡಗುಗಳು ದಕ್ಷಿಣ ಯಮನ್‌ನಲ್ಲಿರುವ ಎಸ್‌ಟಿಸಿ (ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್) ಪ್ರತ್ಯೇಕತಾವಾದಿಗಳಿಗಾಗಿ ಶಸ್ತ್ರಾಸ್ತ್ರ ಹೊತ್ತು‌ ತಂದಿವೆ ಎಂದು ಆರೋಪಿಸಿದ ಸೌದಿ ಅರೇಬಿಯಾ ಬಾಂಬ್ ಹಾಕಿತ್ತು. ಹಡಗಿನಲ್ಲಿ ತಂದ ವಾಹನಗಳು ತಮ್ಮ ಕೆಲಸಕ್ಕಾಗಿ ಎಂದು ಯುಎಇ ಹೇಳಿದರೂ ಸೌದಿ ಒಪ್ಪಲಿಲ್ಲ. ಅಲ್ಲದೇ, ಇನ್ನು 36 ಗಂಟೆಗಳ ಒಳಗೆ ಯುಎಇ ಪ್ರತ್ಯೇಕತಾವಾದಿಗಳಿಗೆ ನೀಡುವ ಸಹಕಾರವನ್ನು ನಿಲ್ಲಿಸಬೇಕು ಎಂದು ಅಲ್ಲಿಯ ಸರಕಾರದ ಮುಖೇನ ಸಂದೇಶ ಕಳುಹಿಸಿತು. ಅದಕ್ಕೆ ಯುಎಇ ಒಪ್ಪಿತು. ಈ ವಿಷಯದಲ್ಲಿ ತನ್ನ ಪ್ರತಿಷ್ಠೆಗೆ ಧಕ್ಕೆಯುಂಟಾಗುತ್ತದೆ ಎಂದಾಗಲಿ, ಗೌರವ ಕಡಿಮೆಯಾಗುತ್ತದೆ ಎಂದಾಗಲಿ ಅದು ಪರಿಗಣಿಸ ಲಿಲ್ಲ. ಬದಲಾಗಿ, ಇನ್ನೊಂದು ಯುದ್ಧ ಆರಂಭವಾಗುವುದನ್ನು ತಡೆದು, ಈ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿತು.

Loading...