ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

dhyapaa@gmail.com

ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಬೆಳೆದದ್ದು, ಓದಿದ್ದು ಶಿರಸಿಯಲ್ಲಿ. ಐದು ವರ್ಷ ಗ್ಯಾನನ್ ಡಂಕರ್ಲಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ರಿಲಾಯನ್ಸ್ ಇಂಡಸ್ಟ್ರೀಸ್, ಫ್ಲೋಟ್ ಗ್ಲಾಸ್, ಮ್ಯಾರಿಕೋ ಇಂಡಸ್ಟ್ರೀಸ್, ಹೆಸ್ಟ್ ಫಾರ್ಮಾದಲ್ಲಿ ಕೆಲಸ. ಕಳೆದ ಮೂರು ದಶಕಗಳಿಂದ ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಬಹ್ರೈನ್ನಲ್ಲಿ ಕೆಲಸ ಮತ್ತು ವಾಸ. ಒಟ್ಟೂ ಆರು ಪುಸ್ತಕಗಳ ಕೃತಿಕಾರರು. ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ ‘ಆಸ್ತಿಕತೆ’ ಮೊದಲ ಕೃತಿ. ‘ವಿಶ್ವತೋಮುಖ’, ‘ವಿದೇಶವಾಸಿ’, ‘ಪರದೇಶವಾಸಿ’, ‘ಹೊರದೇಶವಾಸಿ’ಮತ್ತು ‘ದೂರದೇಶವಾಸಿ’ ನಂತರದ ಕೃತಿಗಳು. ವಿಶ್ವವಾಣಿ ದಿನಪತ್ರಿಕೆಯ ಅಂತಾರಾಷ್ಟ್ರೀಯ ವರದಿಗಾರರು. ರಾಜ್ಯಪ್ರಶಸ್ತಿ ವಿಜೇತ ’ಹಾಡು ಹಕ್ಕಿ ಹಾಡು’ ಮತ್ತು ’ವೆರಿಗುಡ್’ ಮಕ್ಕಳ ಚಲನಚಿತ್ರದ ಸಹನಿರ್ಮಾಪಕರು. ಬಹ್ರೈನ್ನ ‘ಸಾರ್ಥ ಫೌಂಡೇಷನ್’, ಶಿರಸಿಯ ’ಅಧ್ಯಾಯ ಟ್ರಸ್ಟ್’ ಮತ್ತು ‘ವಿಕಿ ಬುಕ್ಸ್’ ಪ್ರಕಾಶನದ ನಿರ್ದೇಶಕರು. ಕುಮಟಾದ ‘ಸಾರ್ಥ ಪ್ರತಿಷ್ಠಾನ’ದ ಉಪಾಧ್ಯಕ್ಷರು. ಒಮ್ಮೆ ಬೆಂಗಳೂರಿನಲ್ಲಿ, ಇನ್ನೊಮ್ಮೆ ಮಂಗಳೂರಿನಲ್ಲಿ ‘ಬಹ್ರೈನ್ ಕನ್ನಡೋತ್ಸವ’ವನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತ ‘ಕನ್ನಡ ಸಂಘ ಬಹ್ರೈನ್’ನಲ್ಲಿ ಎರಡು ವರ್ಷ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಒಂಬತ್ತು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ಭಾರತದಿಂದ ಆಚೆ ನಿರ್ಮಾಣಗೊಂಡ ಪ್ರಥಮ ‘ಕನ್ನಡ ಭವನ’ ಕಟ್ಟಡ ನಿರ್ಮಾಣ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಕನ್ನಡ ಸಂಘ ಬಹ್ರೈನ್ ಜಂಟಿಯಾಗಿ ಆಯೋಜಿಸಿದ ‘ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ’, ‘ಗಲ್ಫ್ ಯಕ್ಷ ವೈಭವ’ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೇತೃತ್ವವಹಿಸಿಕೊಂಡವರಲ್ಲಿ ಒಬ್ಬರು. ಕನ್ನಡ ಸಂಘ ಬಹ್ರೈನ್ ನಡೆಸುತ್ತಿರುವ ಕನ್ನಡ ತರಗತಿಯಲ್ಲಿ ಮಕ್ಕಳಿಗೆ ಉಚಿತವಾಗಿ ಕನ್ನಡ ಬೋಧನೆ ಮಾಡುತ್ತಿದ್ದಾರೆ. ನಾಟಕ, ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಆಗಾಗ ಅಭಿನಯಿಸುತ್ತಿರುತ್ತಾರೆ.

Articles
Kiran Upadhyay Column: ದಯಾಮಯಿ ದೇವರೇ, ಈ ದೇಶಕ್ಕೆ ದಯಮಾಡಿ ಆನೆ ಕೊಡು...

ದಯಾಮಯಿ ದೇವರೇ, ಈ ದೇಶಕ್ಕೆ ದಯಮಾಡಿ ಆನೆ ಕೊಡು...

ಒಂದು ಕಾಲದಲ್ಲಿ ಸಾವಿರಕ್ಕೂ ಹೆಚ್ಚು ಆನೆಯನ್ನು ಹೊಂದಿದ್ದ ವಿಯೆಟ್ನಾಂ ನಲ್ಲಿ ಇಂದು ಕೇವಲ ಒಂದು ನೂರು ಆನೆ ಮಾತ್ರ ಉಳಿದುಕೊಂಡಿವೆ. ಥಾಯ್ಲೆಂಡ್‌ನಲ್ಲಿ ಆನೆಗಳ ಸಂಖ್ಯೆ ಇಳಿದಿದೆ, ಕಾಂಬೋ ಡಿಯಾ, ಮ್ಯಾನ್ಮಾರ್‌ನಂಥ ದಟ್ಟ ಅಡವಿ ಇರುವ ದೇಶಗಳಲ್ಲೂ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಲಾವೋಸ್ ದೇಶದ ಕಥೆಯಂತೂ ಇನ್ನೂ ಚಿಂತಾಜನಕ ವಾಗಿದೆ.

Kiran Upadhyay Column: ಬಾಳಬುತ್ತಿ ಕಟ್ಟಿಕೊಡುವ ಗುರುವಿಗೊಂದು ನಮನ

ಬಾಳಬುತ್ತಿ ಕಟ್ಟಿಕೊಡುವ ಗುರುವಿಗೊಂದು ನಮನ

ಇಬ್ಬರಿಗೂ ಮೇಜಿನ ಕಡೆ ಮುಖ ಮಾಡಿ ಈಗ ಚೆಂಡು ಯಾವ ಬಣ್ಣದ್ದೆಂದು ಕೇಳಿದರು. ಈ ಬಾರಿ, ಮೊದಲು ಕಪ್ಪು ಎಂದಿದ್ದ ವಿದ್ಯಾರ್ಥಿ ಚೆಂಡು ಬಿಳಿಯ ಬಣ್ಣದ್ದೆಂದೂ, ಬಿಳಿಯದು ಎಂದಿದ್ದವ ಕಪ್ಪು ಬಣ್ಣದ್ದೆಂದೂ ವಾದ ಆರಂಭಿಸಿದರು. ಗುರುಗಳು ಇಬ್ಬರನ್ನೂ ಶಾಂತವಾಗಿಸಿ, ಚೆಂಡನ್ನು ನಿಧಾನವಾಗಿ ಗೋಲಾಕಾರವಾಗಿ ತಿರುಗಿಸಿದರು.

Kiran Upadhyay Column: ಇಷ್ಟು ಮಾಡಿ ಅಮೆರಿಕ ಸಾಧಿಸಿದ್ದಾದರೂ ಏನು ?

ಇಷ್ಟು ಮಾಡಿ ಅಮೆರಿಕ ಸಾಧಿಸಿದ್ದಾದರೂ ಏನು ?

ದೇಶದ ಆಂತರಿಕ ಗಲಭೆಗಳನ್ನು ಯಾವ ದೇಶವಾದರೂ ಸಹಿಸಿಕೊಳ್ಳುತ್ತದೆ, ಸುಧಾರಿಸಿಕೊಳ್ಳುತ್ತದೆ. ಯಡವಟ್ಟಾಗುವುದು ಬೇರೆ ದೇಶಗಳು ಮೂಗು ತೂರಿಸಿದಾಗ. ವಿಯೆಟ್ನಾಂ ತನ್ನ ಸ್ವಾರ್ಥಕ್ಕಾಗಿ ಲಾವೋಸ್‌ನಲ್ಲಿ ರಸ್ತೆ ನಿರ್ಮಿಸದಿದ್ದಿದ್ದರೆ, ರಷ್ಯಾ, ಚೀನಾ ಅದರ ಬೆಂಬಲಕ್ಕೆ ನಿಲ್ಲದಿದ್ದಿದ್ದರೆ, ಅಮೆರಿಕ ಮಧ್ಯ ಪ್ರವೇಶಿಸದಿದ್ದಿದ್ದರೆ, ಎಲ್ಲಕ್ಕಿಂತ ಹೆಚ್ಚಾಗಿ, ಲಕ್ಷಗಟ್ಟಲೆ ಬಾಂಬ್ ಹಾಕದಿದ್ದಿದ್ದರೆ, ಲಾವೋಸ್‌ನ ಅಮಾಯಕರು ಸಾಯುತ್ತಿರಲಿಲ್ಲ.

Kiran Upadhyay Column: ಕಲ್ಲು ಎಸೆದರೆ ಮನೆ ಕಟ್ಟಬಹುದು, ಬಾಂಬ್‌ ಎಸೆದರೆ... ?

ಕಲ್ಲು ಎಸೆದರೆ ಮನೆ ಕಟ್ಟಬಹುದು, ಬಾಂಬ್‌ ಎಸೆದರೆ... ?

ಲಾವೋಸ್‌ನಲ್ಲಿ 1953ರಿಂದ 1975ರವರೆಗೆ ಹಲವು ವಿಧದಲ್ಲಿ ಭೀಕರವಾದ ಯುದ್ಧಗಳು ನಡೆದವು. ಅದರಲ್ಲೂ 1964ರಿಂದ 1973ರವರೆಗೆ ಅಮೆರಿಕ ಲಾವೋಸ್ ಮೇಲೆ ಭೀಕರವಾದ ಬಾಂಬ್ ದಾಳಿ ಮಾಡಿತ್ತು. ಆ ಕಾಲದಲ್ಲಿ ಪಕ್ಕದಲ್ಲಿಯೇ ಇರುವ ವಿಯಟ್ನಾಂನಲ್ಲಿ ಯುದ್ಧ ನಡೆಯುತ್ತಿದ್ದ ಕಾರಣ, ಲಾವೋಸ್ ಮೇಲೆ ಅಂದು ಅಮೆರಿಕ ಮಾಡಿದ ದಾಳಿ ಆ ಕಾಲದಲ್ಲಿ ಸುದ್ದಿ ಆಗಲೇ ಇಲ್ಲ.

Kiran Upadhyay Column: ಅಡುಗೆಮನೆಯಿಂದ ಅಡಿಯಿಟ್ಟ ಅಡೀಡಸ್

ಅಡುಗೆಮನೆಯಿಂದ ಅಡಿಯಿಟ್ಟ ಅಡೀಡಸ್

‘ADIDAS’ ಹೆಸರು ಕೇಳದವರು ಬಹಳ ಕಡಿಮೆ. ಅದರಲ್ಲೂ ಕ್ರೀಡಾ ವಲಯದಲ್ಲಿ ಇದು ಜನಪ್ರಿಯ ಹೆಸರು. ಮೂಲತಃ ಪಾದರಕ್ಷೆಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಪಟುಗಳಿಗೆ ಬೇಕಾಗುವ ಉಡುಪುಗಳನ್ನೂ, ಕ್ರೀಡಾ ಸಾಮಗ್ರಿಗಳನ್ನೂ ತಯಾರಿಸುವುದಷ್ಟೇ ಅಲ್ಲ, ಅವು ಜನಪ್ರಿಯವೂ ಆಗಿವೆ.

Kiran Upadhyay Column: ಸುಭಾಷಿತ, ನಮ್ಮಲ್ಲಾಗಲಿ ಅಂತರ್ಗತ

Kiran Upadhyay Column: ಸುಭಾಷಿತ, ನಮ್ಮಲ್ಲಾಗಲಿ ಅಂತರ್ಗತ

ಅದು ಕಾಕತಾಳಿಯವೋ, ಭಾಷೆಯನ್ನು ಆಯ್ದುಕೊಂಡ ಮಕ್ಕಳ ಬುದ್ಧಿಮತ್ತೆಯೋ ಅಥವಾ ಆ ಕಾಲ ಘಟ್ಟದಲ್ಲಿನ ಸತ್ಯವೋ ಗೊತ್ತಿಲ್ಲ. ಆದರೆ ಇದರಿಂದಾಗಿ ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಮುಂದೊಂದು ದಿನ ಸಂಸ್ಕೃತವನ್ನು ಸ್ವಲ್ಪ ಮಟ್ಟಿಗಾದರೂ ಓದಬೇಕು ಎನ್ನುವ ಹಂಬಲ ಉಂಟಾಗಿತ್ತು

Kiran Upadhyay Column: ಬಿದಿರಿನಂತೆ ಬೆಳೆದ ಭವ್ಯ ಭಾರತ...

Kiran Upadhyay Column: ಬಿದಿರಿನಂತೆ ಬೆಳೆದ ಭವ್ಯ ಭಾರತ...

6 ತಿಂಗಳು ಆಗುವುದರ ಒಳಗೆ ಬಿದಿರು 50-60 ಅಡಿ ಬೆಳೆದು, ಓಕ್ ಮರಕ್ಕಿಂತಲೂ ಎತ್ತರಕ್ಕೆ ನಿಂತಿ ತಂತೆ. ಹೀಗಿರುವಾಗ ಒಮ್ಮೆ ಕಾಡಿನಲ್ಲಿ ದೊಡ್ಡ ಬಿರುಗಾಳಿ ಬೀಸಿತಂತೆ. ಆ ಬಿರುಗಾಳಿಗೆ ಸಾಕಷ್ಟು ಮರಗಳು ಧರಾಶಾಯಿಯಾದವಂತೆ. ಆದರೆ ಬಿದಿರು ಮಾತ್ರ ಬಗ್ಗಿ ಭೂಸ್ಪರ್ಶ ಮಾಡಿದರೂ, ಬಿರುಗಾಳಿ ನಿಂತ ನಂತರ ಪುನಃ ತಲೆಯೆತ್ತಿ ಮೊದಲಿನಂತೆಯೇ ನಿಂತಿತಂತೆ.

Kiran Upadhyay Column: ಇವರು ಬಾಲ ಶಾಸ್ತ್ರಿ

Kiran Upadhyay Column: ಇವರು ಬಾಲ ಶಾಸ್ತ್ರಿ

‘ಬಾಲಶಾಸ್ತ್ರಿ’ ಎಂದೇ ಹೆಸರಾಗಿದ್ದ ಬಾಲಗಂಗಾಧರ್ ಶಾಸ್ತ್ರಿ ಜಾಂಭೇಕರ್ ಅವರು ಹುಟ್ಟಿದ್ದು ತಿಲಕರು ಹುಟ್ಟುವುದಕ್ಕಿಂತ ನಲವತ್ತನಾಲ್ಕು ವರ್ಷ ಮೊದಲು, ಶಾಸ್ತ್ರೀಜಿ ಹುಟ್ಟುವುದಕ್ಕಿಂತ ತೊಂಬತ್ತೆರಡು ವರ್ಷ ಮೊದಲು. ಅಲ್ಲದೇ ಇವರಿಬ್ಬರೂ ಹುಟ್ಟುವುದಕ್ಕಿಂತ ಮೊದಲೇ ಅವರು ಈ ಲೋಕ ತ್ಯಜಿಸಿದ್ದರು. ಅವರು ಹುಟ್ಟಿದ್ದು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿರುವ ದೇವಗಡ್ ತಾಲೂಕಿನ ಪೊಂಬುರ್ಲೆ ಎಂಬ ಒಂದು ಕುಗ್ರಾಮದಲ್ಲಿ.

Kiran Upadhyay Column: ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಸಲ್ಲುವ ಸೈಕಲ್

Kiran Upadhyay Column: ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಸಲ್ಲುವ ಸೈಕಲ್

ಸೈಕಲ್‌ನ ವಿಶೇಷತೆಯೆಂದರೆ, ಒಮ್ಮೆ ಕಲಿತರೆ ಮುಗಿಯಿತು, ಜೀವನಪೂರ್ತಿ ನೆನಪಿರುವ ವಿದ್ಯೆ ಅದು. It is one time investment (ಈ ಪಟ್ಟಿಗೆ ಈಜುವುದನ್ನೂ ಸೇರಿಸಿಕೊಳ್ಳಬಹುದು). ಸೈಕಲ್ ತುಳಿಯುವುದು ಬಿಟ್ಟು ದಶಕಗಳೇ ಕಳೆದಿರಲಿ, ಕಲಿಯುವಾಗ ಇದ್ದ 25 ಕಿಲೋ ದೇಹದ ತೂಕಕ್ಕೆ ಇನ್ನೂ ನೂರು ಸೇರಿ 125 ಕಿಲೋ ತೂಕದ ಶರೀರವೇ ಆಗಲಿ, ಸೈಕಲ್ ತಾರತಮ್ಯ ತೋರಿಸುವುದಿಲ್ಲ. ಒಮ್ಮೆ ಸೈಕಲ್ ಮೇಲೆ ನಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳುವುದನ್ನು (ಬ್ಯಾಲೆನ್ಸಿಂಗ್) ಕಲಿತರೆ ಅದು ಜೀವನ ಪರ್ಯಂತ.

Kiran Upadhyay Column: ತೃಪ್ತಿ ಎಂಬುದು ಸಹಜ ಶ್ರೀಮಂತಿಕೆ

Kiran Upadhyay Column: ತೃಪ್ತಿ ಎಂಬುದು ಸಹಜ ಶ್ರೀಮಂತಿಕೆ

ಒಮ್ಮೆ ಯೋಚಿಸಿ, ನಾವು ಜೀವಮಾನದಲ್ಲಿ ಕಾಣದ, ಕೇಳದ ಅದೆಷ್ಟೋ ವಿಷಯಗಳಿವೆ. ಅದು ನಮಗೆ ದೊರೆತರೆ ನಮ್ಮ ಬದುಕು ಇನ್ನಷ್ಟು ಸುಲಭವೂ, ಹಸನೂ ಆಗಬಹುದು. ಆದರೆ ಅದರ ಕುರಿತಾಗಿ ನಮಗೆ ತಿಳಿದಿರುವುದಿಲ್ಲವಾದ್ದರಿಂದ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನಮಗೆ ಬೇಕು ಎಂದು ಅನಿಸುವುದೂ ಇಲ್ಲ.

Kiran Upadhyay Column: ಪಾssssಪ... ಹಿರಣ್ಯಕಶಿಪು...!

ಪಾssssಪ... ಹಿರಣ್ಯಕಶಿಪು...!

ಹಿರಣ್ಯಕಶಿಪು, ಹಿರಣ್ಯಾಕ್ಷ, ರಾವಣ, ಕುಂಭಕರ್ಣ, ಇಂದ್ರಜಿತು, ಶುಂಭ, ನಿಶುಂಭ, ಚಂಡ, ಮುಂಡ, ಶೂರ್ಪನಖಿ, ತಾಟಕಿ, ಮಾರೀಚ, ನರಕಾಸುರ, ಪೂತನಿ, ಬಕಾಸುರ ಹೀಗೆ ಸಾವಿರಾರು ದಾನವರ ಹೆಸರುಗಳನ್ನು ನಾವು ಕೇಳಿದ್ದೇವೆ. ಇವರನ್ನು ಅಸುರರು ಎಂದೂ ಕರೆಯುವುದಿದೆ.

Kiran Upadhyay Column: ಅಂದು ಕೃಷ್ಣ ತಾನೇ ರಾಧೆಯಾಗಲು ಬಯಸಿದ್ದನಂತೆ...

ಅಂದು ಕೃಷ್ಣ ತಾನೇ ರಾಧೆಯಾಗಲು ಬಯಸಿದ್ದನಂತೆ...

ರಥದ ಮುಂದೆ ಅಶ್ವಗಳನ್ನು ಕಟ್ಟಿಕೊಂಡು, ಸಾರಥಿ ರಥವನ್ನು ಮುನ್ನಡೆಸುವುದು, ರಥಿಕ ಒಳಗೆ ಕುಳಿತುಕೊಳ್ಳುವುದು, ಕೆಲವೊಮ್ಮೆ ರಥಿಕನೇ ರಥ ನಡೆಸುವುದು, ಈ ರೀತಿಯ ಹಲವಾರು ಘಟನೆಗಳನ್ನು ನಾವು ಕೇಳಿದ್ದೇವೆ. ಸೂರ್ಯನಿಂದ ಹಿಡಿದು, ಇತ್ತೀಚಿನ ರಾಜ-ಮಹಾರಾಜರುಗಳ ಕಾಲದ ವರೆಗೆ ಇಂಥ ಸಾಕಷ್ಟು ಕತೆ ಕೇಳಿದ್ದೇವೆ.

Kiran Upadhyay Column: ಏರುಗತಿಯಲ್ಲೇ ಸಾಗುತ್ತಿರುವ ಏಶಿಯನ್‌ ಪೇಂಟ್ಸ್‌

ಏರುಗತಿಯಲ್ಲೇ ಸಾಗುತ್ತಿರುವ ಏಶಿಯನ್‌ ಪೇಂಟ್ಸ್‌

ಬಾಡಿಗೆಯ ಗ್ಯಾರೇಜಿನಲ್ಲಿ ಆರಂಭವಾದ ಏಶಿಯನ್ ಪೇಂಟ್ಸ್ ಸಂಸ್ಥೆ ಹತ್ತು ವರ್ಷದ ಅವಧಿಯಲ್ಲಿ ವಾರ್ಷಿಕ 23 ಕೋಟಿ ರುಪಾಯಿಯ ವಹಿವಾಟು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತು. ಅಷ್ಟೇ ಅಲ್ಲ, ಆರಂಭಗೊಂಡ 25 ವರ್ಷದ ಅವಧಿಯಲ್ಲಿ ದೇಶದ ಪೇಂಟ್ ತಯಾರಿಸುವ ಕಂಪನಿಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನಕ್ಕೇರಿತು.

Kiran Upadhyay Column: ಏರ್‌ ಇಂಡಿಯಾ, ಫೇರ್‌ ಇಂಡಿಯಾ ಆಗುವುದು ಯಾವಾಗ ?

ಏರ್‌ ಇಂಡಿಯಾ, ಫೇರ್‌ ಇಂಡಿಯಾ ಆಗುವುದು ಯಾವಾಗ ?

ಭೂಮಿ ಬಿಟ್ಟು ಬಾನಿಗೆ ನೆಗೆದು ನಿಮಿಷವಾಗುವುದರ ಒಳಗೆ ವಿಮಾನ ಭಸ್ಮವಾಗಿತ್ತು. ಪೈಲಟ್ ಬೆವರುವುದಕ್ಕಿಂತ ಮೊದಲೇ ಪ್ರಯಾಣಿಕರೂ ಬೆಂಕಿಯಲ್ಲಿ ಬೆಂದು ಹೋದರು. ನೀವು ಲಂಡನ್ನಿಗೇ ಹೊರಡಿ, ಆಕಾಶಕ್ಕೇ ಹಾರಿ, ಕಾಲ ಬಂದಾಗ ತಾನು ಮಾತ್ರ ಬೆನ್ನು ಬಿಡುವುದಿಲ್ಲ ಎಂದು ಕಾಲ ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾನೆ.

Kiran Upadhyay Column: ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ನಾವು ಗೋಡೆ ಕಟ್ಟುತ್ತಿದ್ದೇವೆ, ಸೇತುವೆಯನ್ನಲ್ಲ

ಭೌತಿಕವಾದ ಸೇತುವೆ ಕಣ್ಣಿಗೆ ಕಾಣಿಸುತ್ತದೆ, ಭಾವನೆಯ ಸೇತುವೆ ಕಣ್ಣಿಗೆ ಕಾಣುವುದಿಲ್ಲ. ಕಣ್ಣಿಗೆ ಕಾಣುವ ಸೇತುವೆ ಸ್ಥಳಗಳನ್ನು ಜೋಡಿಸಿದರೆ ಕಾಣದಿದ್ದದ್ದು ಮನಸ್ಸನ್ನು, ಭಾವನೆಯನ್ನು ಬೆಸೆಯುತ್ತದೆ. ಗೋಚರಿಸುವ ಸೇತುವೆ ಸ್ಥಿರವಾಗಿದ್ದರೆ ಭೂಮಿಯೊಂದಿಗೆ ಬಂಧ, ಅಗೋಚರ ಸೇತು ಗಟ್ಟಿಯಾಗಿದ್ದರೆ ಭಾವದೊಂದಿಗೆ ಬಂಧನ ಬಲಿಷ್ಠವಾಗಿರುತ್ತದೆ.

Kiran Upadhyay Column: ಕೊನೆಗೂ ಅವರಿಗೆ ಪದ್ಮಶ್ರೀ ಬರಲಿಲ್ಲ...

ಕೊನೆಗೂ ಅವರಿಗೆ ಪದ್ಮಶ್ರೀ ಬರಲಿಲ್ಲ...

ಅನಂತ ನಾಗ್ ಕೇವಲ ಒಳ್ಳೆಯ ನಟ, ಅಭಿನಯವನ್ನು ಮಾತ್ರ ಮಾಡಬಲ್ಲರು ಎಂದರೆ ಅದು ತಪ್ಪು. ಅವರು ಹಾಡಬಲ್ಲರು, ತಬಲಾ ನುಡಿಸಬಲ್ಲರು, ಸಂಸ್ಕೃತ ಶ್ಲೋಕಗಳನ್ನು ಹೇಳಬಲ್ಲರು, ರುದ್ರ, ಅಥರ್ವಶೀರ್ಷ, ಮಂತ್ರಪುಷ್ಪವನ್ನು ಪಠಿಸಬಲ್ಲರು. ಭಗವದ್ಗೀತೆಯ ಶ್ಲೋಕಗಳು ಅವರಿಗೆ ಕಂಠಪಾಠ.

Kiran Upadhyay Column: ಅವಳ ಕುರಿತು ಆತ ಆಡಿದ ಓಪನ್‌ ಮಾತುಗಳು...

ಅವಳ ಕುರಿತು ಆತ ಆಡಿದ ಓಪನ್‌ ಮಾತುಗಳು...

ಟೆನಿಸ್ ಆಟದ ಅಂಗಳ ನಿನ್ನಲ್ಲಿರುವ ಗುಣಗಳನ್ನು ಇನ್ನಷ್ಟು ಪರಿಷ್ಕರಿಸಿಕೊಳ್ಳಲು ವೇದಿಕೆ ಯಾಯಿತು. ನಿನ್ನ ವ್ಯವಹಾರ ಏನಿದ್ದರೂ ಕೃತಿಯಲ್ಲಿಯೇ ವಿನಾ ಮಾತಿನಲ್ಲಲ್ಲ. ನಿನ್ನ ಸಾಧನೆ ಯನ್ನು ಎಂದೂ ನಿರೂಪಿಸಿಕೊಂಡವಳಲ್ಲ, ಬದಲಾಗಿ ಏನೆಲ್ಲ ನಿರೂಪಿಸಿಕೊಂಡಿದ್ದೀಯೋ ಅದನ್ನೆಲ್ಲ ಸಾಽಸಿದವಳು. ಸದ್ದಿಲ್ಲದೇ ರಾಕೆಟ್ ಕೆಳಗಿಟ್ಟು, ಅಂದು ಟೆನಿಸ್ ಆಟದಲ್ಲಿ ತೋರಿಸುತ್ತಿದ್ದ ಉತ್ಸಾಹವನ್ನೇ ಇಂದು ಪ್ರೀತಿ ಮತ್ತು ತಾಯ್ತನದಲ್ಲಿ ತೋರಿಸುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗುತ್ತಿದೆ.

Kiran Upadhyay Column: ಕಣ್ಣುಕಟ್ಟುವ ವಿದ್ಯೆಯೇ ಇಂದು ಕೆಲಸಕ್ಕೆ ಬಂದಿದೆ !

ಕಣ್ಣುಕಟ್ಟುವ ವಿದ್ಯೆಯೇ ಇಂದು ಕೆಲಸಕ್ಕೆ ಬಂದಿದೆ !

ಒಂದು ಕಾಲವಿತ್ತು. ಭಾರತ ಎಂದರೆ, ‘ಹಾವಾಡಿಗರ ದೇಶ’, ‘ಬಡವರ, ಭಿಕ್ಷುಕರ ದೇಶ’ ಎಂಬ ಚಿತ್ರಣ ವನ್ನು ಜಗತ್ತಿಗೆ ತೋರಿಸಲಾಗುತ್ತಿತ್ತು. ಜತೆಗೆ, ಭಾರತದಲ್ಲಿ ನಡೆಯುವ ಹೋಮ, ಹವನ, ಮಾಟ, ಮೋಡಿ, ಮಂತ್ರ, ಯಂತ್ರ, ತಂತ್ರ, ಸಮ್ಮೋಹಿನಿ, ಕಣ್ಣುಕಟ್ಟುವ ವಿದ್ಯೆ ಇತ್ಯಾದಿಗಳೇ ಹೆಚ್ಚು ಪ್ರಚಾರ ಪಡೆಯುತ್ತಿದ್ದವು. ದಿನ ಕಳೆದಂತೆ ಹಾವಾಡಿಗರ ದೇಶ ಎನ್ನುವ ಹಣೆಪಟ್ಟಿಯನ್ನು ಭಾರತ ಕಳಚಿ ಕೊಂಡಿತು. ಮಾಟ, ಮಂತ್ರ, ಮೋಡಿ, ತಂತ್ರ ಇತ್ಯಾದಿಗಳು ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆ ಯಾಗತೊಡಗಿದವು.

Kiran Upadhyay Column: ಕದನ ಇಲ್ಲದೇ ಕದನವಿರಾಮ ಹೇಗೆ ?

ಕದನ ಇಲ್ಲದೇ ಕದನವಿರಾಮ ಹೇಗೆ ?

ಇಂದು ಜನರ ಮನಃಸ್ಥಿತಿ ಹೇಗಾಗಿದೆಯೆಂದರೆ, ಯಾವುದೇ ಘಟನೆ ನಡೆದರೂ, ಕ್ಷಣಾರ್ಧದಲ್ಲಿ ಪ್ರತ್ಯುತ್ತರ ನೀಡಬೇಕು ಎಂಬಂತಾಗಿದೆ. ಉತ್ತರಿಸಲು ವಿಳಂಬವಾದರೆ ಸೋತಂತೆ ಎಂಬ ವಾತಾವರಣ ನಿರ್ಮಾಣ ವಾಗುತ್ತಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಹಮಾಸ್ ಉಗ್ರರು ಇಸ್ರೇಲ್ ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಮಾಯಕರನ್ನು ಹತ್ಯೆಗೈದಿದ್ದು ಎಲ್ಲರಿಗೂ ನೆನಪಿರಬಹುದು.

Kiran Upadhyay Column: ಹಾಂಗ್‌ ಕಾಂಗ್ ನಲ್ಲಿ ಹರಿಶ್ಚಂದ್ರ...!

ಹಾಂಗ್‌ ಕಾಂಗ್ ನಲ್ಲಿ ಹರಿಶ್ಚಂದ್ರ...!

ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಬಸ್ ಅಥವಾ ಕಾರಿನಲ್ಲಿ ಹೋದರೆ ಐದರಿಂದ ಆರು ನಿಮಿಷದ ದಾರಿಯಾಗಿತ್ತು. ನಮ್ಮ ಜತೆ ಬಂದವರಬ್ಬರಿಗೆ ತುರ್ತಾಗಿ ಏನೋ ಖರೀದಿಸಬೇಕಾಗಿತ್ತು. “ಇಲ್ಲಿ ಹತ್ತಿರ ದಲ್ಲಿ ಪೇಟೆಯಾಗಲಿ, ಅಂಗಡಿಯಾಗಲಿ ಇದೆಯೇ?" ಎಂದು ಕೇಳಿದರು. “ಹತ್ತಿರದಲ್ಲಿ ಇರುವುದೆಲ್ಲ ಈಗ ಮುಚ್ಚಿರುತ್ತದೆ. ನಿಮಗೆ ತೀರಾ ಅವಶ್ಯಕತೆ ಇದ್ದರೆ ವಿಮಾನ ನಿಲ್ದಾಣದಲ್ಲಿ ಅಂಗಡಿಗಳಿವೆ, ಅಲ್ಲಿಗೇ ಹೋಗುವುದು ಒಳಿತು" ಎಂದು ಹೇಳಿದೆ

Kiran Upadhyay Column: ಇವರೆಲ್ಲ ಒಂದೇ ಸುಳ್ಳಿನ ಮಾರಾಟಗಾರರೇ !

ಇವರೆಲ್ಲ ಒಂದೇ ಸುಳ್ಳಿನ ಮಾರಾಟಗಾರರೇ !

ವಾರದಿಂದ ವಾರಕ್ಕೆ ನಿಮ್ಮ ತ್ವಚೆಯಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆ ಎಂದು ಪ್ಯಾಕೆಟ್ ಮೇಲೆ ಮುದ್ರಿಸುವ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಬಳಸಿ ಇದುವರೆಗೆ ಬೆಳ್ಳಗಾದ ವರ ಲೆಕ್ಕ ಕೊಟ್ಟಿಲ್ಲ. ಜೂಹಿ ಚಾವ್ಲಾ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಶಾಹಿದ್ ಕಪೂರ್‌ರನ್ನು ಜಾಹೀರಾತಿನಲ್ಲಿ ತೋರಿಸಿದರೇ ವಿನಾ ಸದಾಶಿವ ಅಮ್ರಪೂರ್ಕರ್, ನಾನಾ ಪಾಟೇಕರ್‌ ರನ್ನು ತೋರಿಸಲಿಲ್ಲ.

Kiran Upadhyay Column: ವಿಮಾನಯಾನದಲ್ಲಿ ಘನತೆ ಕಾಯ್ದುಕೊಳ್ಳದಿದ್ದರೆ ಹೇಗೆ ?

ವಿಮಾನಯಾನದಲ್ಲಿ ಘನತೆ ಕಾಯ್ದುಕೊಳ್ಳದಿದ್ದರೆ ಹೇಗೆ ?

ವಿಮಾನಯಾನ ಎಂದರೆ ಅಲ್ಲಿ ಸ್ವಲ್ಪ ಗಂಭೀರವಾಗಿರಬೇಕು, ಘನತೆ ಕಾಯ್ದುಕೊಳ್ಳಬೇಕು, ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು ಎಂಬ ಎಲ್ಲ ಪಾಠಗಳ ನಡುವೆಯೂ ಕೆಲವೊಮ್ಮೆ ವಿಚಿತ್ರ ಘಟನೆ ಗಳು ನಡೆದುಹೋಗುತ್ತವೆ. ಯಾವ ಕಾರಣಕ್ಕೂ ಪ್ರಯಾಣಿಕ ತನ್ನ ಜವಾಬ್ದಾರಿಯನ್ನು ಮರೆಯ ಬಾರದು, ಅಸಭ್ಯವಾಗಿ ವರ್ತಿಸಬಾರದು.

Kiran Upadhyay Column: ಮೂರು ಅನಾರ್ಕಲಿಯಲ್ಲಿ ನಟಿಸಿದ ವಿದೇಶಿ ಮಹಿಳೆ

ಮೂರು ಅನಾರ್ಕಲಿಯಲ್ಲಿ ನಟಿಸಿದ ವಿದೇಶಿ ಮಹಿಳೆ

ರೂಬಿ ಮಾಯರ್ಸ್ ಹೆಸರು ಕೇಳಿದ್ದೀರಾ? ಇಲ್ಲವಾದರೆ ಸುಲೋಚನಾ ಹೆಸರಂತೂ ನೀವು ಕೇಳಿರ ಬಹುದು. ಈಗಂತೂ ಯಾವ ನ್ಯೂಸ್ ಚಾನೆಲ್ ನೋಡಿದರೂ ಕರ್ಣಪಟಲ ಹರಿದು ಹೋಗುವಷ್ಟು ಜೋರಾಗಿ ಕಿರುಚುವ, ನೇರ ಮಿದುಳಿಗೇ ಕೈಹಾಕಿ ಕಿವುಚುವ ನಿರೂಪಕರ ಹಾವಳಿ. ಎಲ್ಲವನ್ನೂ ಬಿಟ್ಟು ಸಿನಿಮಾ ನೋಡೋಣವೆಂದು ಕುಳಿತರೆ, ಹೊಸ ಸಿನಿಮಾಗಳ ಪಾಡೂ ಅಷ್ಟೇ.

Kiran Upadhyay Column: ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ

ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ

ಹಬ್ಬವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಹಬ್ಬವೆಂದರೆ ಸಂಭ್ರಮ, ಸಡಗರ. ಆದರೆ ಒಪ್ಪಬೇಕಾದ ಮಾತೆಂದರೆ, ಈಗ ಹಬ್ಬಗಳು ಮುಂಚಿನಂತಿಲ್ಲ, ದಿನದಿಂದ ದಿನಕ್ಕೆ ಆಚರಣೆಗಳು ಮೊಟಕುಗೊಳ್ಳುತ್ತಿವೆ, ಸಡಗರ ಕ್ಷೀಣಿಸುತ್ತಿದೆ. ಇದಕ್ಕೆ ಅಪವಾದ ಎಂಬಂತೆ ದೇಶದ ಕೆಲವು ಕಡೆಗಳಲ್ಲಿ ಕೆಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುವುದೂ ಇದೆ.

Loading...