ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

dhyapaa@gmail.com

ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಬೆಳೆದದ್ದು, ಓದಿದ್ದು ಶಿರಸಿಯಲ್ಲಿ. ಐದು ವರ್ಷ ಗ್ಯಾನನ್ ಡಂಕರ್ಲಿ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ರಿಲಾಯನ್ಸ್ ಇಂಡಸ್ಟ್ರೀಸ್, ಫ್ಲೋಟ್ ಗ್ಲಾಸ್, ಮ್ಯಾರಿಕೋ ಇಂಡಸ್ಟ್ರೀಸ್, ಹೆಸ್ಟ್ ಫಾರ್ಮಾದಲ್ಲಿ ಕೆಲಸ. ಕಳೆದ ಮೂರು ದಶಕಗಳಿಂದ ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಬಹ್ರೈನ್ನಲ್ಲಿ ಕೆಲಸ ಮತ್ತು ವಾಸ. ಒಟ್ಟೂ ಆರು ಪುಸ್ತಕಗಳ ಕೃತಿಕಾರರು. ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ ‘ಆಸ್ತಿಕತೆ’ ಮೊದಲ ಕೃತಿ. ‘ವಿಶ್ವತೋಮುಖ’, ‘ವಿದೇಶವಾಸಿ’, ‘ಪರದೇಶವಾಸಿ’, ‘ಹೊರದೇಶವಾಸಿ’ಮತ್ತು ‘ದೂರದೇಶವಾಸಿ’ ನಂತರದ ಕೃತಿಗಳು. ವಿಶ್ವವಾಣಿ ದಿನಪತ್ರಿಕೆಯ ಅಂತಾರಾಷ್ಟ್ರೀಯ ವರದಿಗಾರರು. ರಾಜ್ಯಪ್ರಶಸ್ತಿ ವಿಜೇತ ’ಹಾಡು ಹಕ್ಕಿ ಹಾಡು’ ಮತ್ತು ’ವೆರಿಗುಡ್’ ಮಕ್ಕಳ ಚಲನಚಿತ್ರದ ಸಹನಿರ್ಮಾಪಕರು. ಬಹ್ರೈನ್ನ ‘ಸಾರ್ಥ ಫೌಂಡೇಷನ್’, ಶಿರಸಿಯ ’ಅಧ್ಯಾಯ ಟ್ರಸ್ಟ್’ ಮತ್ತು ‘ವಿಕಿ ಬುಕ್ಸ್’ ಪ್ರಕಾಶನದ ನಿರ್ದೇಶಕರು. ಕುಮಟಾದ ‘ಸಾರ್ಥ ಪ್ರತಿಷ್ಠಾನ’ದ ಉಪಾಧ್ಯಕ್ಷರು. ಒಮ್ಮೆ ಬೆಂಗಳೂರಿನಲ್ಲಿ, ಇನ್ನೊಮ್ಮೆ ಮಂಗಳೂರಿನಲ್ಲಿ ‘ಬಹ್ರೈನ್ ಕನ್ನಡೋತ್ಸವ’ವನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತ ‘ಕನ್ನಡ ಸಂಘ ಬಹ್ರೈನ್’ನಲ್ಲಿ ಎರಡು ವರ್ಷ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಒಂಬತ್ತು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ಭಾರತದಿಂದ ಆಚೆ ನಿರ್ಮಾಣಗೊಂಡ ಪ್ರಥಮ ‘ಕನ್ನಡ ಭವನ’ ಕಟ್ಟಡ ನಿರ್ಮಾಣ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಮತ್ತು ಕನ್ನಡ ಸಂಘ ಬಹ್ರೈನ್ ಜಂಟಿಯಾಗಿ ಆಯೋಜಿಸಿದ ‘ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ’, ‘ಗಲ್ಫ್ ಯಕ್ಷ ವೈಭವ’ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ನೇತೃತ್ವವಹಿಸಿಕೊಂಡವರಲ್ಲಿ ಒಬ್ಬರು. ಕನ್ನಡ ಸಂಘ ಬಹ್ರೈನ್ ನಡೆಸುತ್ತಿರುವ ಕನ್ನಡ ತರಗತಿಯಲ್ಲಿ ಮಕ್ಕಳಿಗೆ ಉಚಿತವಾಗಿ ಕನ್ನಡ ಬೋಧನೆ ಮಾಡುತ್ತಿದ್ದಾರೆ. ನಾಟಕ, ಯಕ್ಷಗಾನ ಕಲೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಆಗಾಗ ಅಭಿನಯಿಸುತ್ತಿರುತ್ತಾರೆ.

Articles
Kiran Upadhyay Column: ಮೂರು ಅನಾರ್ಕಲಿಯಲ್ಲಿ ನಟಿಸಿದ ವಿದೇಶಿ ಮಹಿಳೆ

ಮೂರು ಅನಾರ್ಕಲಿಯಲ್ಲಿ ನಟಿಸಿದ ವಿದೇಶಿ ಮಹಿಳೆ

ರೂಬಿ ಮಾಯರ್ಸ್ ಹೆಸರು ಕೇಳಿದ್ದೀರಾ? ಇಲ್ಲವಾದರೆ ಸುಲೋಚನಾ ಹೆಸರಂತೂ ನೀವು ಕೇಳಿರ ಬಹುದು. ಈಗಂತೂ ಯಾವ ನ್ಯೂಸ್ ಚಾನೆಲ್ ನೋಡಿದರೂ ಕರ್ಣಪಟಲ ಹರಿದು ಹೋಗುವಷ್ಟು ಜೋರಾಗಿ ಕಿರುಚುವ, ನೇರ ಮಿದುಳಿಗೇ ಕೈಹಾಕಿ ಕಿವುಚುವ ನಿರೂಪಕರ ಹಾವಳಿ. ಎಲ್ಲವನ್ನೂ ಬಿಟ್ಟು ಸಿನಿಮಾ ನೋಡೋಣವೆಂದು ಕುಳಿತರೆ, ಹೊಸ ಸಿನಿಮಾಗಳ ಪಾಡೂ ಅಷ್ಟೇ.

Kiran Upadhyay Column: ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ

ಶಿರಸಿಯ ಸಿರಿ: ಯುಗಾದಿಯ ಶೋಭಾಯಾತ್ರೆ

ಹಬ್ಬವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಹಬ್ಬವೆಂದರೆ ಸಂಭ್ರಮ, ಸಡಗರ. ಆದರೆ ಒಪ್ಪಬೇಕಾದ ಮಾತೆಂದರೆ, ಈಗ ಹಬ್ಬಗಳು ಮುಂಚಿನಂತಿಲ್ಲ, ದಿನದಿಂದ ದಿನಕ್ಕೆ ಆಚರಣೆಗಳು ಮೊಟಕುಗೊಳ್ಳುತ್ತಿವೆ, ಸಡಗರ ಕ್ಷೀಣಿಸುತ್ತಿದೆ. ಇದಕ್ಕೆ ಅಪವಾದ ಎಂಬಂತೆ ದೇಶದ ಕೆಲವು ಕಡೆಗಳಲ್ಲಿ ಕೆಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುವುದೂ ಇದೆ.

Kiran Upadhyay Column: ಗಗನದಲ್ಲಿ ಸಖಿ; ಬದುಕಿನಲ್ಲಿ ಅಸುಖಿ

ಗಗನದಲ್ಲಿ ಸಖಿ; ಬದುಕಿನಲ್ಲಿ ಅಸುಖಿ

ನಾನು ಹೇಳುತ್ತಿರುವುದು ದೂರದ ಪ್ರಯಾಣದ ಬಗ್ಗೆ ಮಾತ್ರ. ಸಣ್ಣ ಅವಧಿಯ ವಿಮಾನಯಾನ ವನ್ನು ಆರಾಮಾಗಿ ಕಳೆದುಬಿಡಬಹುದು. ಅದಕ್ಕಿಂತ ಹೆಚ್ಚಾದರೆ ಮಾತ್ರ ತೊಂದರೆ. ಕೆಲವು ವಿಮಾನ ನಿಲ್ದಾಣ ಗಳಂತೂ ಸಮಯ ಕಳೆಯಲು ಅದ್ಭುತ ತಾಣ. ಅಲ್ಲಿ ಮೂರು-ನಾಲ್ಕು ಗಂಟೆ ಕಳೆದು ಹೋಗಿದ್ದು ಗೊತ್ತೇ ಆಗುವುದಿಲ್ಲ.

Kiran Upadhyay Column: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ: ಬಲ ಸುಮ್ಮನೆ ಬರಲಿಲ್ಲ !

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ: ಬಲ ಸುಮ್ಮನೆ ಬರಲಿಲ್ಲ !

‘ಪಂದ್ಯ ಆಡಲು ಭಾರತ ಮಂಡಿಯೂರಿ ನಡೆದುಕೊಂಡು ಬರುತ್ತದೆ’ ಎಂಬ ಪಾಕಿಸ್ತಾನದ ಅಹಂಕಾರದ ಮಾತಿಗೆ, ಒಂದೂ ಪಂದ್ಯವನ್ನೂ ಆಡದೆ, ಕೊನೆಗೆ ಸೆಮಿಫೈನ್, ಫೈನಲ್ ಪಂದ್ಯ ವನ್ನೂ ಪಾಕಿಸ್ತಾನದಿಂದ ಭಾರತ ಕಸಿದುಕೊಂಡಿತು. ಅವಮಾನದ ಪರಮಾವಧಿ ಹೇಗಿತ್ತು ಎಂದರೆ, ಅಂತಿಮ ಪಂದ್ಯದಲ್ಲಿ ಜಯಿಸಿದ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಆತಿಥೇಯ ಪಾಕಿಸ್ತಾನದ ಒಬ್ಬೇ ಒಬ್ಬ ಪದಾಧಿಕಾರಿಯೂ ವೇದಿಕೆಯಲ್ಲಿರಲಿಲ್ಲ!

Kiran Upadhyay Column: ವಿನಾಕಾರಣ ಜೈಲಿನಲ್ಲಿ ಬಾಡಿದ ಸ್ನೇಹಲತೆ

ವಿನಾಕಾರಣ ಜೈಲಿನಲ್ಲಿ ಬಾಡಿದ ಸ್ನೇಹಲತೆ

1932ರಲ್ಲಿ ಅವಳು ಹುಟ್ಟಿದಾಗ ಭಾರತ ದೇಶ ಇನ್ನೂ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಸಾಲದು ಎಂಬಂತೆ, ಮನೆಯಲ್ಲಿ ಬೇಕಾದಷ್ಟು ಬಡತನವೂ ಇತ್ತು. ದೊಡ್ಡವಳಾಗುತ್ತಿದ್ದಂತೆ, ಬ್ರಿಟಿಷರು ಭಾರತೀಯರಿಗೆ ನೀಡುವ ಕಿರುಕುಳ, ಅದರಿಂದ ತನ್ನ ಸುತ್ತಮುತ್ತಲಿನ ಜನರು ಪಡುತ್ತಿರುವ ಕಷ್ಟ, ಆಪ್ತರ ನೋವು, ದುಃಖ ಇತ್ಯಾದಿ ಸಂಗತಿಗಳನ್ನೆಲ್ಲ ನೋಡುತ್ತಾ-ನೋಡುತ್ತಾ ಅವಳ ಮನಸ್ಸು ಕೂಡ ದಿನದಿನವೂ ಕಲ್ಲಾಗತೊಡಗಿತ್ತು

Kiran Upadhyay Column: ದುಡ್ಡೇ ದೊಡ್ಡಪ್ಪ; ಜಾಹೀರಾತು ಅದರಪ್ಪ !

ದುಡ್ಡೇ ದೊಡ್ಡಪ್ಪ; ಜಾಹೀರಾತು ಅದರಪ್ಪ !

ಯಾವುದೇ ಸಿನಿಮಾಕ್ಕೆ ಹೋದರೂ, ಸಿನಿಮಾ ಆರಂಭವಾಗುವುದಕ್ಕಿಂತ ಮೊದಲು ಬರುವ ಕಾಯಂ ಜಾಹೀರಾತುಗಳು ಇವಾಗಿದ್ದವು. ಬಾಲ್ಯದಲ್ಲಿ ಕಂಡ ಈ ಜಾಹೀರಾತುಗಳು ಇಂದಿಗೂ ನಮ್ಮ ಮನದ ಮೂಲೆಯಲ್ಲಿ ಮನೆ ಮಾಡಿಕೊಂಡು ಬೆಚ್ಚಗೆ ಕುಳಿತಿವೆ. ನಾವು ಪ್ರತಿನಿತ್ಯ ನೂ ರಾರು ಜಾಹೀರಾತು ನೋಡು ತ್ತೇವೆ. ‌

Kiran Upadhyay Column: ಕ್ರಿಕೆಟ್‌ ದುಡ್ಡು; ದುಬೈನಲ್ಲಿ ಜಾತ್ರೆ !

ಕ್ರಿಕೆಟ್‌ ದುಡ್ಡು; ದುಬೈನಲ್ಲಿ ಜಾತ್ರೆ !

1986ರಲ್ಲಿ ನಡೆದ ಆಸ್ಟ್ರೋ-ಏಷ್ಯಾ ಕಪ್‌ನ ಅಂತಿಮ ಪಂದ್ಯವು ಭಾರತೀಯರ ಮನದಲ್ಲಿ ಸದಾ ಗಾಯವಾಗಿ ಉಳಿಯುವ ಪಂದ್ಯವಾಗಿತ್ತು. ಅದಕ್ಕೂ 3 ವರ್ಷದ ಮೊದಲಷ್ಟೇ ವಿಶ್ವಕಪ್ ಗೆದ್ದು ಬೀಗುತ್ತಿದ್ದ ಭಾರತ ತಂಡ, ಶಾರ್ಜಾದಲ್ಲಿ ನಡೆದ ಮೊದಲ ಆಸ್ಟ್ರೋ-ಏಷ್ಯಾ ಕಪ್‌ನ ಅಂತಿಮ ಪಂದ್ಯದ ಕೊನೆಯ ಎಸೆತದಲ್ಲಿ ಆಘಾತಕಾರಿ ಸೋಲನ್ನು ಅನುಭವಿಸಿತ್ತು. ನಾಲ್ಕು ರಾಷ್ಟ್ರಗಳು ಆಡಿದ ಈ ಪಂದ್ಯಾವಳಿಯಲ್ಲಿ ಭಾರತ ಶ್ರೀಲಂಕಾವನ್ನು, ಪಾಕಿಸ್ತಾನ ನ್ಯೂಜಿಲೆಂಡ್ ತಂಡ ವನ್ನು ಸೋಲಿಸಿ ಅಂತಿಮ ಹಣಾಹಣಿಗೆ ತಲುಪಿದ್ದವು

Kiran Upadhyay Column: ನಮ್ಮ ದೇಶ ಎಚ್ಚೆತ್ತುಕೊಳ್ಳೋದು ಯಾವಾಗ ?

Kiran Upadhyay Column: ನಮ್ಮ ದೇಶ ಎಚ್ಚೆತ್ತುಕೊಳ್ಳೋದು ಯಾವಾಗ ?

ಆ ಕಾರ್ಯಕ್ರಮದಲ್ಲಿ ಕೆಲವು ಯೂಟ್ಯೂಬರ್‌ಗಳು ಆಡಿದ ಮಾತು, ಹೇಳಿದ ಜೋಕು(?), ಅದರ ಪುನರಾವರ್ತನೆ ಸಭ್ಯರ ವೇದಿಕೆಯಾದ ಇಲ್ಲಿ ಬೇಡ. ‘ಮಾಡಿದವರ ಪಾಪ ಆಡಿದವರ ಬಾಯಲ್ಲಿ’ ಅನ್ನುವಂತೆ ಅದು ನಮ್ಮ ಬಾಯಕೆ? ಅಷ್ಟೇ ಅಲ್ಲ, ಅಲ್ಲಿ ಉದುರಿದ ಮುತ್ತುಗಳು ಒಂದೇ ಎರಡೇ? ಅಬ್ಬಬ್ಬಾ... ಅವರ ಮಿದುಳನ್ನು ತೊಳೆದುಕೊಳ್ಳಲು ಬೇಕಾಗುವ ಸೋಪು, ಡೆಟಾಲ್ ಕೊಂಡು ಕೊಳ್ಳಲು ಅವರ ಬಳಿ ಇರುವ ಹಣ ಸಾಲಲಿಕ್ಕಿಲ್ಲ

Kiran Upadhyay Column: ನಿಜಾರ್ಥದಲ್ಲಿ ಮಹಿಳಾ ಸಬಲೀಕರಣ ಎಂದರೆ ಇದು !

ನಿಜಾರ್ಥದಲ್ಲಿ ಮಹಿಳಾ ಸಬಲೀಕರಣ ಎಂದರೆ ಇದು !

‘ಶ್ರೀ ಮಹಿಳಾ ಗೃಹ ಉದ್ಯೋಗ’ ಸಂಸ್ಥೆಯು ಇಂದು ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಉದ್ಯೋಗ ಎನ್ನುವ ಪದ ಬಳಕೆಯೂ ತಪ್ಪು. ಏಕೆಂದರೆ ಸಂಸ್ಥೆ ತನ್ನೊಂದಿಗೆ ಕೆಲಸ ಮಾಡುವ ಪ್ರತಿಯೊಬ್ಬರನ್ನೂ ಭಾಗೀದಾರರು ಎಂದೇ ಹೇಳುತ್ತದೆ. ಲಾಭಾಂಶವನ್ನು ಎಲ್ಲರಲ್ಲೂ ಹಂಚುತ್ತದೆ. ಅಲ್ಲಿ ಕೆಲಸಮಾಡುವ ಪ್ರತಿಯೊಬ್ಬ ಮಹಿಳೆಯನ್ನೂ ‘ಸಹೋದರಿ’ ಎಂದು ಪರಿಗಣಿಸಲಾಗುತ್ತದೆ. ಒಬ್ಬ ಮಹಿಳೆಗೆ ಇದಕ್ಕಿಂತ ಇನ್ನೇನು ಬೇಕು?

Kiran Upadhyay Column: ದೂರಕೆ ಹಕ್ಕಿಯು ಹಾರುತಿದೆ, ನೋಡಿದಿರಾ ?

Kiran Upadhyay Column: ದೂರಕೆ ಹಕ್ಕಿಯು ಹಾರುತಿದೆ, ನೋಡಿದಿರಾ ?

ವಿಮಾನದ ಮಹಿಮೆಯೇ ಹಾಗೆ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬನಿಗೂ ವಿಮಾನ ವೆಂದರೆ ಕೌತುಕ, ಉಸ, ಸಂತಸ. ಆದ್ದರಿಂದಲೇ ದೂರದ ಬಾನಿನಲ್ಲಿ ವಿಮಾನದ ಸದ್ದು ಕೇಳಿದರೆ ಸಾಕು, ಮನೆಯಿಂದ ಹೊರಗೆ ಓಡಿ ಬಂದು ಕಣ್ಣಿಗೆ ಕಾಣುವ ಸಣ್ಣ ವಿಮಾನದೆಡೆಗೆ ಕೈಬೀಸುವ ಮಕ್ಕಳನ್ನು ಇಂದಿಗೂ ಕಾಣಬಹುದು

Kiran Upadhyay Column: ಬಹರೇನ್‌ ದೇಶದಲ್ಲಿ ಬೀದಿ ನಾಟಕ

Kiran Upadhyay Column: ಬಹರೇನ್‌ ದೇಶದಲ್ಲಿ ಬೀದಿ ನಾಟಕ

ಬಸವ ತತ್ತ್ವದ ಪ್ರಮುಖ ಕಂಬಗಳಲ್ಲಿ ಒಂದಾದ ದಾಸೋಹವೂ ನಡೆಯುತ್ತದೆ. ಸಮಿತಿಯ ಮಹಿಳೆ ಯರು ತಮ್ಮ ಮನೆಯಲ್ಲಿಯೇ ಒಂದೊಂದು ಅಡುಗೆಯನ್ನು ಮಾಡಿಕೊಂಡು ಮಹಾಮನೆಗೆ ತರುತ್ತಾರೆ

Kiran Upadhyay Column: ರಾಮ ರಾಮಾ...ಇದೆಂಥ ಅವಸ್ಥೆ...!

Kiran Upadhyay Column: ರಾಮ ರಾಮಾ...ಇದೆಂಥ ಅವಸ್ಥೆ...!

ನಿರ್ಮಾಪಕರಾಗಿದ್ದ ರಮಾನಂದ ಸಾಗರ್ ರಾಮಾಯಣದ ಆ ದಿನಗಳಲ್ಲಿ ಧಾರಾವಾಹಿಯ ಪ್ರತಿ ಸಂಚಿಕೆಗೆ 9 ಲಕ್ಷ ರುಪಾಯಿ ಪಡೆದಿದ್ದರು. ಆ ಕಾಲದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಟಿವಿ ಕಾರ್ಯಕ್ರಮ ಎಂದು ಅದನ್ನು

Kiran Upadhyay Column: ಅಹಂ ಅನಂತಕುಮಾರ್‌ ಹೆಗಡೆ...

Kiran Upadhyay Column: ಅಹಂ ಅನಂತಕುಮಾರ್‌ ಹೆಗಡೆ...

Kiran Upadhyay Column: ಅಹಂ ಅನಂತಕುಮಾರ್‌ ಹೆಗಡೆ...

Kiran Upadhyay Column: ಇದು ಸೈಕಲ್‌ ಸಂಸ್ಕೃತಿಯ ಸೊಬಗಿನ ನಾಡು

Kiran Upadhyay Column: ಇದು ಸೈಕಲ್‌ ಸಂಸ್ಕೃತಿಯ ಸೊಬಗಿನ ನಾಡು

ಇತ್ತೀಚೆಗೆ ಜರ್ಮನಿಯ ಹ್ಯಾಂಬರ್ಗ್‌ನಿಂದ ಆಮ್‌ಸ್ಟರ್‌ಡಾಮ್‌ಗೆ ಪ್ರಯಾಣ ಮಾಡುತ್ತಿದೆ. ತೀರಾ ಅಪರೂಪಕ್ಕೆ ಎಂಬಂತೆ, ಈ ಬಾರಿ ರೈಲು ಪ್ರಯಾಣವನ್ನು ಆರಿಸಿಕೊಂಡಿದ್ದೆ

Kiran Upadhyay Column: ಅನಿವಾಸಿಗಳನ್ನು ಮನಃವಾಸಿಗಳನ್ನಾಗಿಸಿದ ಸಮ್ಮೇಳನ

Kiran Upadhyay Column: ಅನಿವಾಸಿಗಳನ್ನು ಮನಃವಾಸಿಗಳನ್ನಾಗಿಸಿದ ಸಮ್ಮೇಳನ

ಮನೆಯಲ್ಲಿ ಕೊಡುವ ಹಣದಲ್ಲಿ ತಿಂಡಿ-ತಿನಿಸುಗಳನ್ನು ಕೊಳ್ಳುವ ಬದಲು ಪುಸ್ತಕವನ್ನು ಕೊಂಡು ತಂದರೆ, ಮರು ದಿನ ಶಾಲೆಯಲ್ಲಿ ಸ್ನೇಹಿತರ ಎದುರು ಒಂದಷ್ಟು ಪುಸ್ತಕ ಖರೀದಿಸಿದ

Kiran Upadhyay Column: ಜೋಕರ್‌ ಆಗಿ ಜಗವ ಗೆದ್ದ ರಾಜ !

Kiran Upadhyay Column: ಜೋಕರ್‌ ಆಗಿ ಜಗವ ಗೆದ್ದ ರಾಜ !

ಆ ಹೋಟೆಲಿನಲ್ಲಿ ಸುಮಾರು 65-70 ವರ್ಷ ಪ್ರಾಯದವನೊಬ್ಬ ಗಿಟಾರ್ ಮತ್ತು ಪಿಯಾನೋ ನುಡಿಸುತ್ತ ಹಾಡು ಹಾಡುತ್ತಿದ್ದ. ನಾವು ಒಳಗೆ ಹೋಗುವಾಗ ಯಾವುದೋ ಭಾಷೆಯ ಹಾಡು ಹಾಡು

Kiran Upadhyay Column: ಕೃಷ್ಣ ಸುಂದರಿಯ ಬೆನ್ನೆತ್ತಿದ್ದರೆ ರೊಕ್ಕವೋ ರೊಕ್ಕ !

Kiran Upadhyay Column: ಕೃಷ್ಣ ಸುಂದರಿಯ ಬೆನ್ನೆತ್ತಿದ್ದರೆ ರೊಕ್ಕವೋ ರೊಕ್ಕ !

Kiran Upadhyay Column: ಕೃಷ್ಣ ಸುಂದರಿಯ ಬೆನ್ನೆತ್ತಿದ್ದರೆ ರೊಕ್ಕವೋ ರೊಕ್ಕ !

Kiran Upadhyay Column: ಇದೊಂಥರಾ ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ !

Kiran Upadhyay Column: ಇದೊಂಥರಾ ಬಿಟ್ಟೆನೆಂದರೂ ಬಿಡದೀ ಮಾಯೆ ಎಂಬಂತೆ !

ತಪ್ಪು ನಡೆಯುತ್ತಿರುವಾಗ ಕಂಡೂ ಕಾಣದಂತೆ ಸೊತ್ತದೆ ಸುಮ್ಮನೆ ಕುಳಿತರೆ ತಪ್ಪು ಮಾಡುತ್ತಿರುವ ರೊಂದಿಗೆ ನಾವೂ ಭಾಗೀದಾರರಾದಂತೆಯೇ ಎಂಬ ಕಾರಣಕ್ಕಾಗಿ ಹೇಳುತ್ತಿದ್ದೇನೆ