ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಆರ್‌.ಟಿ. ವಿಠ್ಠಲಮೂರ್ತಿ‌

columnist

info71@vishwavani.news

ವಿಶ್ವವಾಣಿ ಪತ್ರಿಕೆಯ ಅಂಕಣಕಾರ ಆರ್.ಟಿ.ವಿಠ್ಠಲಮೂರ್ತಿ ಅವರು 1985 ರಿಂದ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆಂದೋಲನ, ಹಾಯ್ ಬೆಂಗಳೂರ್, ತರಂಗ, ಸುದ್ದಿಸಂಗಾತಿ, ಅಭಿಮಾನಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆಂದೋಲನ ಪತ್ರಿಕೆಯಲ್ಲಿ ಸತತ 30 ವರ್ಷಗಳಿಂದ ರಾಜಕೀಯ ಅಂಕಣ 'ಬೆಂಗಳೂರು ಡೈರಿ' ಬರೆಯುತ್ತಿರುವ ಆರ್.ಟಿ.ವಿಠ್ಠಲಮೂರ್ತಿ ಅವರು, ರಾಜಕೀಯ ವಿಶ್ಲೇಷಕರಾಗಿ ಗಮನ ಸೆಳೆದವರು. ಪ್ರಸ್ತುತ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ʼಅಂಕಣಗಳ ಪತ್ರಿಕೆʼ ಎಂದು ಹೆಸರುವಾಸಿಯಾದ ವಿಶ್ವವಾಣಿಯಲ್ಲಿ ಅವರು ಬರೆಯುತ್ತಿರುವ ಮೂರ್ತಿ ಪೂಜೆ ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತಿದ್ದು, ರಾಜ್ಯ ರಾಜಕಾರಣದ ನೈಜ ಪ್ರತಿಬಿಂಬವಾಗಿದೆ

Articles
R T Vittalmurthy Column: ವಿಜಯೇಂದ್ರ ಇಳೀತಿಲ್ಲ, ಭಿನ್ನರು ಬಿಡ್ತಿಲ್ಲ

R T Vittalmurthy Column: ವಿಜಯೇಂದ್ರ ಇಳೀತಿಲ್ಲ, ಭಿನ್ನರು ಬಿಡ್ತಿಲ್ಲ

ಇವತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಮಿತಿಮೀರಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾ ಗಿದ್ದು ಇದರ ಪರಿಣಾಮವಾಗಿ ಹಿಂದೂ ಮತಬ್ಯಾಂಕಿನ ಕ್ರೋಡೀಕರಣವಾಗಬೇಕಿದೆ. ಇವತ್ತಿನ ಸ್ಥಿತಿ ಯಲ್ಲಿ ರಾಜ್ಯ ಬಿಜೆಪಿಯ ಯಾವುದೇ ನಾಯಕರಿಗಿಂತ ಬಲವಾಗಿ ಈ ಕೆಲಸ ಮಾಡಬಲ್ಲವರು ಬಸನಗೌಡ ಪಾಟೀಲ್ ಯತ್ನಾಳ್.

R T Vittalmurthy Column: ರಾಹುಲ್‌ ಗಾಂಧಿಯವರಿಗೆ ಒಪ್ಪಂದದ ಕತೆ ಬೇಕಿಲ್ಲ

R T Vittalmurthy Column: ರಾಹುಲ್‌ ಗಾಂಧಿಯವರಿಗೆ ಒಪ್ಪಂದದ ಕತೆ ಬೇಕಿಲ್ಲ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕಳೆದ ವಾರ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ, ಕರ್ನಾಟಕದಲ್ಲಿ ಸಿಎಂ ಹುದ್ದೆಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ, ಸಿಎಂ ಸಿದ್ದರಾಮಯ್ಯ ಕನಲಿ ಕೂತಿದ್ದಾರೆ.

R T Vittalmurthy Column: 'ಕೂಲ್‌ ಆಗಿರಿ ಡಿಕೆʼ ಅಂದ್ರಾ ಖರ್ಗೆ ಸಾಹೇಬರು ?

'ಕೂಲ್‌ ಆಗಿರಿ ಡಿಕೆʼ ಅಂದ್ರಾ ಖರ್ಗೆ ಸಾಹೇಬರು ?

ಸುರೇಶ್ ಅವರ ಮಾತು ಕೇಳಿದ ಮಲ್ಲಿಕಾರ್ಜುನ ಖರ್ಗೆ ಅವರು, “ರೀ, ಸ್ವಲ್ಪ ದಿನ ಸುಮ್ಮನಿರ್ರೀ. ಮುಂದಿನ ತಿಂಗಳು ಸಂಸತ್ ಅಧಿವೇಶನ ಪ್ರಾರಂಭವಾಗುತ್ತದೆ. ಆಗ ಬನ್ರೀ. ಏನೇ ವಿಷಯ ಇದ್ದರೂ ರಾಹುಲ್ ಗಾಂಧಿ ಅವರ ಮುಂದೆ ಮಾತನಾಡೋಣ. ಆಗ ಸಿದ್ದರಾಮಯ್ಯ ಅವರೂ ಬರಲಿ. ಒಟ್ಟಿನಲ್ಲಿ ಏನೇ ಇದ್ರೂ ಅಮೈಕಬಲ್ ಆಗಿ ಸೆಟ್ಲ್ ಮಾಡೋಣ" ಎಂದಿದ್ದಾರೆ.

R T Vittalmurthy Column: ಸಿದ್ದು ಸೇಫ್‌ ಆಗಿದ್ದೇ ಬಿಜೆಪಿಗೆ ಚಿಂತೆ

R T Vittalmurthy Column: ಸಿದ್ದು ಸೇಫ್‌ ಆಗಿದ್ದೇ ಬಿಜೆಪಿಗೆ ಚಿಂತೆ

ಇನ್ನು ಬಿಹಾರದ ರಾಜಕಾರಣದಲ್ಲಿ ದೊಡ್ಡ ಮಟ್ಟದ ಆಟ ಅಡುವ ಕನಸು ಕಂಡಿದ್ದ ಕಾಂಗ್ರೆಸ್ ಯಗಾದಿಗಾ ಹೊಡೆತ ತಿಂದು ಮೂಲೆ ಸೇರಿದೆ. ಯಾವಾಗ ಅದು ಇಂಥ ದಯನೀಯ ಸ್ಥಿತಿಗೆ ತಲುಪಿತೋ, ಆಗ ಕಾಂಗ್ರೆಸ್ ವರಿಷ್ಠರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಸಿಎಂ ಬದಲಾವಣೆಗೆ ಕೈ ಹಾಕುವ ಆಟದಿಂದ ಗಪ್ಪನೆ ಹಿಂದೆ ಸರಿದಿದ್ದಾರೆ.

R T Vittalmurthy Column: ಬಿಜೆಪಿ ನಾಯಕರು ʼಭಾಗವತʼ ಓದಬೇಕು

R T Vittalmurthy Column: ಬಿಜೆಪಿ ನಾಯಕರು ʼಭಾಗವತʼ ಓದಬೇಕು

ಇವತ್ತು ಸಿದ್ದರಾಮಯ್ಯ ಸಿಎಂ ಆಗಿ ಉಳಿಯಲಿ, ಇಲ್ಲವೇ ಅವರ ಜಾಗಕ್ಕೆ ಡಿ.ಕೆ. ಶಿವಕುಮಾರ್ ಬರಲಿ ಅಥವಾ ದಲಿತರೊಬ್ಬರು ಸಿಎಂ ಆಗಲಿ. ಅದರಿಂದ ನಮಗೇನಾಗಬೇಕು?" ಎಂದು ಗುಡು ಗಿದ್ದಾರೆ. ಹೀಗೆ ಮೋಹನ್ ಭಾಗವತ್ ಅವರು ಗುಡುಗಿ ಹೋದ ಮೇಲೆ ರಾಜ್ಯದ ಬಿಜೆಪಿ ನಾಯಕ ರು ತಣ್ಣಗಾಗಿದ್ದಾರೆ. ಅಷ್ಟೇ ಅಲ್ಲ, ದಿನ ಬೆಳಗಾದರೆ ಕಾಂಗ್ರೆಸ್ ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾರೆ.

R T Vittalmurthy Column: ಅಧಿಕಾರ ಸಂಘರ್ಷಕ್ಕೆ ರಾಹುಲ್‌ ಬ್ರೇಕ್‌ ?

R T Vittalmurthy Column: ಅಧಿಕಾರ ಸಂಘರ್ಷಕ್ಕೆ ರಾಹುಲ್‌ ಬ್ರೇಕ್‌ ?

ಸ್ವತಃ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉತ್ಸುಕತೆ ತೋರಿಸಿದರೂ ರಾಹುಲ್ ಗಾಂಧಿ ಮಾತ್ರ ನಿರಾಸಕ್ತಿ ತೋರಿಸು ತ್ತಿದ್ದಾರೆ. ಅವರಿಗೀಗ ಯಾವುದೇ ಗಂಡಾಂತರ ಎದುರಾಗುವುದು ಬೇಕಿಲ್ಲ. ಯಾಕೆಂದರೆ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಅಂತ ಉಳಿದಿರುವ ಏಕೈಕ ರಾಜ್ಯ ಕರ್ನಾಟಕ.

R T Vittalmurthy Column: ಡಿಸಿಎಂ ಪಟ್ಟಕ್ಕೆ ಪ್ರಿಯಾಂಕ್‌-ಜಮೀರ್‌ ?

R T Vittalmurthy Column: ಡಿಸಿಎಂ ಪಟ್ಟಕ್ಕೆ ಪ್ರಿಯಾಂಕ್‌-ಜಮೀರ್‌ ?

ಆರೆಸ್ಸೆಸ್ ವಿರುದ್ಧದ ಹೋರಾಟದಿಂದ ವರಿಷ್ಠರ ಗಮನ ಸೆಳೆದಿರುವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸಂಪುಟದಲ್ಲಿ ಡಿಸಿಎಂ ಆಗಲಿ ಅಂತ ಸಿದ್ದರಾಮಯ್ಯ ಬಯಸಿದ್ದಾರೆ. ಅವರ ಈ ಬಯಕೆಗೆ ಮತ್ತೊಂದು ಒಳ ಉದ್ದೇಶವೂ ಇದೆ. ಅದೆಂದರೆ ಕರ್ನಾಟಕದಲ್ಲಿ ಪರ್ಯಾಯ ನಾಯಕತ್ವದ ಕೂಗು ಮೇಲೇಳಲು ಕಾರಣವಾಗುತ್ತಿರುವ ಮೂಲವು ‘ಕೂಲ್’ ಆಗುತ್ತದೆ ಎಂಬುದು.

R T Vittalmurthy Column: ಆ ನಿರಾಶ್ರಿತೆಯ ಕಣ್ಣೀರ ಕತೆ ಹಲವರಿಗೆ ಆಶ್ರಯ ದಕ್ಕಿಸಿ ಕೊಟ್ಟಿತು

ಆ ನಿರಾಶ್ರಿತೆಯ ಕಣ್ಣೀರ ಕತೆ ಹಲವರಿಗೆ ಆಶ್ರಯ ದಕ್ಕಿಸಿ ಕೊಟ್ಟಿತು

ಆಶ್ರಯ ಯೋಜನೆ ಜಾರಿಗೆ ತರಲು ನಿಮಗಿದ್ದ ಪ್ರೇರಣೆ ಏನು ಅನ್ನುವುದು ಗೊತ್ತಾಯಿತು. ಆದರೆ ಅದರ ವಿವರ ಗೊತ್ತಾಗಲಿಲ್ಲ ಎಂದೆ. ಅಂದ ಹಾಗೆ ಅವತ್ತು ನನ್ನ ಕುತೂಹಲದ ಪ್ರಶ್ನೆಗೆ ನೀರಿನ ಕಾರಂಜಿಯಂತೆ ಉತ್ತರ ಹೊರ ಹೊಮ್ಮಿಸಿದವರು ಬಂಗಾರಪ್ಪ. ‌ತೊಂಭತ್ತರಿಂದ ತೊಂಭತ್ತೆರಡರ ತನಕ ಕರ್ನಾಟಕದ ಮುಖ್ಯ ಮಂತ್ರಿಯಾಗುವ ಅವಕಾಶ ಅವರಿಗೆ ದಕ್ಕಿತ್ತು.

R T Vittalmurthy Column: ಜೆಡಿಎಸ್‌ ರಥ ಹತ್ತಲು ಈಗ ಕುಮಾರಣ್ಣ ರೆಡಿ

R T Vittalmurthy Column: ಜೆಡಿಎಸ್‌ ರಥ ಹತ್ತಲು ಈಗ ಕುಮಾರಣ್ಣ ರೆಡಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ‘ಆಂಗ್ರಿ ಯಂಗ್‌ಮ್ಯಾನ್’ ತರಹ ಮುಗಿ ಬಿದ್ದ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಮೌನವಾದ ರೀತಿ ಜೆಡಿಎಸ್ ಪಾಳಯ ಮಂಕಾಗುವಂತೆ ಮಾಡಿತ್ತು. ಹೀಗಾಗಿ ಕರ್ನಾಟಕದಿಂದ ದೂರವೇ ಉಳಿದು, ದಿಲ್ಲಿಯಲ್ಲಿ ಸೆಟ್ಲಾಗಿದ್ದ ಕುಮಾರಸ್ವಾಮಿ ಅವರನ್ನು ಕರ್ನಾಟಕದ ನೆಲಕ್ಕೆ ಸೆಳೆಯಲು ಜೆಡಿಎಸ್‌ನ ಕೆಲ ಶಾಸಕರು ಯತ್ನಿಸಿದ್ದಾರೆ.

R T Vittalmurthy Column: ರಾಹುಲ್‌ ಗಾಂಧಿಯವರಿಗೆ ಸಿದ್ದು ಹೇಳಿದ್ದೇನು ?

R T Vittalmurthy Column: ರಾಹುಲ್‌ ಗಾಂಧಿಯವರಿಗೆ ಸಿದ್ದು ಹೇಳಿದ್ದೇನು ?

ಸಿದ್ದರಾಮಯ್ಯ ಅವರ ಈ ಮಾತಿಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ರಣತಂತ್ರ ನಿಪುಣರು ನೀಡಿರುವ ಸಲಹೆಯ ಪ್ರಕಾರ ಕೆಲ ಹಿರಿಯ ಸಚಿವರನ್ನು ಸಂಪುಟ ದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸಬೇಕು ಎಂದಿದ್ದಾರೆ. ಯಾವಾಗ ಸಿದ್ದು-ರಾಹುಲ್ ಮಧ್ಯೆ ಇಂಥ ಮಾತುಕತೆ ನಡೆದಿದೆ ಎಂಬುದು ಸಾಬೀತಾಯಿತೋ, ಆಗ ಅವರ ಆಪ್ತರ ಪಡೆ ಹೊಸ ಉತ್ಸಾಹದಿಂದ ತಿರುಗಾಡುತ್ತಿದೆ.

R T Vittalmurthy Column: ಸುರ್ಜೇವಾಲ ಬೆಚ್ಚಿ ಬಿದ್ದಿದ್ದು ಏಕೆ ?

R T Vittalmurthy Column: ಸುರ್ಜೇವಾಲ ಬೆಚ್ಚಿ ಬಿದ್ದಿದ್ದು ಏಕೆ ?

ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಪಕ್ಷದ ಕಾರ್ಯಕರ್ತರು ಹವಣಿಸುತ್ತಿದ್ದರೆ, ಪಕ್ಷದ ಟಾಪ್ ಲೆವೆಲ್ ನಾಯಕರು ಬಿಜೆಪಿ ಜತೆ ಒಳಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾದರೆ ನಾವು ಬಿಬಿಎಂಪಿ ಗದ್ದುಗೆಯ ಮೇಲೆ ಕೂರುವುದು ಹೇಗೆ? ಎಂಬುದು ಎಲ್.ಶ್ರೀನಿವಾಸ್ ಆಂಡ್ ಗ್ಯಾಂಗಿನ ವರಾತ. ‌

R T Vittalmurthy Column: ಸಿದ್ದು ಸಂಪುಟಕ್ಕೆ ಇವರೆಲ್ಲ ಸೇರಲಿದ್ದಾರೆ

R T Vittalmurthy Column: ಸಿದ್ದು ಸಂಪುಟಕ್ಕೆ ಇವರೆಲ್ಲ ಸೇರಲಿದ್ದಾರೆ

ಇನ್ನು ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರಲಿರುವ ಹಿರಿಯ ಶಾಸಕರಲ್ಲಿ ಅಪ್ಪಾಜಿ ನಾಡಗೌಡ ಒಬ್ಬರು. ಹಲವು ಬಾರಿ ಶಾಸಕರಾಗಿ ಆರಿಸಿ ಬಂದರೂ ಮಂತ್ರಿಗಿರಿಯಿಂದ ದೂರವೇ ಉಳಿಯುತ್ತಿರುವ ನಾಡಗೌಡರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವುದು ಸಿದ್ದರಾಮಯ್ಯ ಅವರ ಕನಸಾಗಿತ್ತಾದರೂ ಅದು ನನಸಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ನಾಡಗೌಡರು ಸಂಪುಟಕ್ಕೆ ಸೇರಲಿ ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ.

R T Vittalmurthy Column: ವಿಜಯೇಂದ್ರ ಬೆನ್ನಿಗೆ ಈಗ ಸಂತೋಷ್‌ ನಿಂತಿದ್ದಾರೆ

ವಿಜಯೇಂದ್ರ ಬೆನ್ನಿಗೆ ಈಗ ಸಂತೋಷ್‌ ನಿಂತಿದ್ದಾರೆ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಅವರು ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿಕೊಂಡಾಗ ಅವರಿಗೆ ಬರೀ ಇಪ್ಪತ್ತೊಂಬತ್ತು ವರ್ಷ. ಹೀಗಾಗಿ ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ವಿಜಯೇಂದ್ರ ಸಮರ್ಥವಾಗಿ ಹೊರಬಲ್ಲರು" ಅಂತ ಸಂತೋಷ್ ಅವರು ಸರ್ಟಿಫಿಕೇಟು ಕೊಟ್ಟಾಗ ಸಭೆಯಲ್ಲಿದ್ದ ವಿಜಯೇಂದ್ರ ವಿರೋಧಿ ಪಡೆ ಮೌನವಾಗಿದೆ.

R T Vittalmurthy Column: ಅರಸು. ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

ಅರಸು. ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

ಎಷ್ಟೇ ಆದರೂ ಮದ್ಯದ ದೊರೆಗಳು ಪಾರ್ಟಿ ಫಂಡು ಕೊಡುವವರು. ಅಂಥವರು ಬಂದು ರಾಜಶೇಖರ ಮೂರ್ತಿಯವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ಸೋನಿಯಾ ಗಾಂಧಿ ಸುಮ್ಮನಿರಲು ಸಾಧ್ಯವೇ? ಹಾಗಂತಲೇ ರಾಜಶೇಖರಮೂರ್ತಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಪ್ರಪೋ ಸಲ್ಲನ್ನು ಅವರು ಕೈಬಿಟ್ಟರು. ಪರಿಣಾಮ? ನೋಡನೋಡುತ್ತಿದ್ದಂತೆಯೇ ರಾಜಶೇಖರಮೂರ್ತಿ ಅವರ ಜಾಗಕ್ಕೆ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಬಂದು ಕುಳಿತರು.

R T Vittalmurthy Column: ವಿಜಯೇಂದ್ರ-ನಿಖಿಲ್‌ ಈಗ ಜೋಡೆತ್ತುಗಳು

R T Vittalmurthy Column: ವಿಜಯೇಂದ್ರ-ನಿಖಿಲ್‌ ಈಗ ಜೋಡೆತ್ತುಗಳು

“ಈ ಹಿಂದೆ ಮೈಸೂರು ಚಲೋ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ಯಾವ ಒಗ್ಗಟ್ಟು ಕಾಣಿಸಿತ್ತೋ?‌ ಅದು ಮುಂದುವರಿಯಲಿ. ನೀವು ಮತ್ತು ನಿಖಿಲ್ ಕುಮಾರಸ್ವಾಮಿ ಒಗ್ಗೂಡಿ ಅಶ್ವಮೇಧ ಯಾತ್ರೆ ಶುರು ಮಾಡಿ. ಸಕ್ಸಸ್ ಆಗುತ್ತೀರಿ" ಎಂಬುದು. ಯಾವಾಗ ದೇವೇಗೌಡರು ಈ ಟಿಪ್ಸ್ ನೀಡಿದರೋ, ತರುವಾಯದಲ್ಲಿ ವಿಜಯೇಂದ್ರ ಖುಷಿಯಾಗಿದ್ದಾರೆ.

R T Villalmurthy Column: ಕಂಪ್ಲೇಂಟು ಪಟ್ಟಿ ರೆಡಿ ಮಾಡಿದ್ರು ರಾಜಣ್ಣ

R T Villalmurthy Column: ಕಂಪ್ಲೇಂಟು ಪಟ್ಟಿ ರೆಡಿ ಮಾಡಿದ್ರು ರಾಜಣ್ಣ

ರಾಹುಲ್ ಗಾಂಧಿ ಅವರ ಭೇಟಿ ಮಾಡಲು ರಾಜಣ್ಣ ಅವರಿಗೆ ದಿಲ್ಲಿಯಲ್ಲಿರುವ ಮಧ್ಯವರ್ತಿಗಳು ಅವಕಾಶ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆರಳಿರುವ ರಾಜಣ್ಣ ಅವರೀಗ ತಮ್ಮ ಹೇಳಿಕೆಯನ್ನು ಹೇಗೆ ತಿರುಚಲಾಗಿದೆ ಎಂಬುದರಿಂದ ಹಿಡಿದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಂಪ್ಲೇಂಟು ಗಳಿರುವ ಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ.

R T Vittalmurthy Column: ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

ಬಸವಲಿಂಗಪ್ಪನರು ‘ಬೂಸಾ ವಿವಾದ’ದಲ್ಲಿ ಸಿಲುಕಿದಾಗ, ಬಸವಲಿಂಗಪ್ಪ ಅವರ ವಿರುದ್ಧದ ಹೋರಾಟಕ್ಕೆ ಕೆಲ ನಾಯಕರು ತೆರೆಯ ಹಿಂದೆ ಬಲ ತುಂಬಿದ್ದರು. ಈ ಬೆಳವಣಿಗೆಯ ನಂತರ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟ ಬಸವಲಿಂಗಪ್ಪ ಅವರ ಶಕ್ತಿ ಕುಗ್ಗುತ್ತಾ ಹೋಯಿತು. ಮುಂದೆ ಅರಸರು ಸಿಎಂ ಹುದ್ದೆಯಿಂದ ಕೆಳಗಿಳಿಯುವ ವೇಳೆಗೆ ಬಸವಲಿಂಗಪ್ಪ ರೇಸಿಗೆ ಬರುವ ಸ್ಥಿತಿಯಲ್ಲಿರಲಿಲ್ಲ.

R T Vittalmurthy Column: ಪರಮೇಶ್ವರ್‌ ಬೆನ್ನಲ್ಲಿ ಕಾಣುತ್ತಿದೆ ರಾಮಬಾಣ ?

ಪರಮೇಶ್ವರ್‌ ಬೆನ್ನಲ್ಲಿ ಕಾಣುತ್ತಿದೆ ರಾಮಬಾಣ ?

ರಾಜಣ್ಣ ಎಪಿಸೋಡಿನ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರು ಮುನ್ನೆಲೆಗೆ ಬಂದಿದೆ. ಅಂದ ಹಾಗೆ, ಪರ್ಯಾಯ ನಾಯಕತ್ವದ ರೇಸಿನಲ್ಲಿ ಈ ಹಿಂದೆಯೂ ಪರಮೇಶ್ವರ್ ಅವರ ಹೆಸರು ಕೇಳಿ ಬಂದಿತ್ತು ಮತ್ತು ಇದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ಪರಮೇಶ್ವರ್ ಅವರೊಂದಿಗೆ ಸೀಕ್ರೆಟ್ ಮೀಟಿಂಗುಗಳನ್ನು ನಡೆಸುತ್ತಿದ್ದರು.

R T Vittalmurthy Column: ಸುನೀಲ್‌ ಕುಮಾರ್‌ ಎಂಟ್ರಿಯಾಗಿದ್ದು ಹೇಗೆ ?

R T Vittalmurthy Column: ಸುನೀಲ್‌ ಕುಮಾರ್‌ ಎಂಟ್ರಿಯಾಗಿದ್ದು ಹೇಗೆ ?

ಬಿಜೆಪಿ ಪಾಳಯದಲ್ಲಿ ತೇಲಿ ಬರುತ್ತಿರುವ ಕುತೂಹಲದ ಸಂಗತಿ ಎಂದರೆ ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್‌ಕುಮಾರ್ ಹೆಸರು ಫೀಲ್ಡಿಗೆ ಬಂದಿರುವುದು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಇತ್ತೀಚೆಗೆ ಆಪ್ತರ ಜತೆ ಪಾರ್ಟಿ ಮಾಡಿದರಲ್ಲ? ಈ ಪಾರ್ಟಿಯ ಸಂದರ್ಭದಲ್ಲಿ ಅಶೋಕ್ ಅವರಾಡಿದ ಒಂದು ಮಾತು ಸುನೀಲ್‌ಕುಮಾರ್ ಹೆಸರು ಫೀಲ್ಡಿಗೆ ಬರುವಂತೆ ಮಾಡಿದೆ.

R T Vittalmurthy Column: ಇದು ಡಿಕೆಶಿ ಕ್ಯಾಂಪಿನ ಲೇಟೆಸ್ಟು ಚಿಂತೆ

R T Vittalmurthy Column: ಇದು ಡಿಕೆಶಿ ಕ್ಯಾಂಪಿನ ಲೇಟೆಸ್ಟು ಚಿಂತೆ

ಇನ್ನು ಮೋದಿ-ಅಮಿತ್ ಶಾ ಹೇಳಿದಂತೆ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಅಧ್ಯಕ್ಷ ಸ್ಥಾನಕ್ಕೆ ಬಂದು ಕೂರುವುದು ಆರೆಸ್ಸೆಸ್ ವರಿಷ್ಠರಿಗೆ ಇಷ್ಟವಿಲ್ಲ. ಯಾಕೆಂದರೆ ಧರ್ಮೇಂದ್ರ ಪ್ರಧಾನ್ ಮತ್ತು ಭೂಪೇಂದ್ರ ಯಾದವ್ ಅವರಿಗೆ ಸಂಘ ನಿಷ್ಠೆಗಿಂತ ಮೋದಿ-ಅಮಿತ್ ಶಾ ಬಗ್ಗೆ ಹೆಚ್ಚು ನಿಷ್ಠೆ. ಹೀಗಾಗಿ ಅನಿವಾರ್ಯ ಸನ್ನಿವೇಶಗಳಲ್ಲಿ ಅವರು ಆ ಕಡೆಗೇ ವಾಲುತ್ತಾರೆ.

R T Vittalmurthy Column: ಸಿದ್ದು ಗುಡುಗಿದ್ರೂ ಸುರ್ಜೇವಾಲ ಉಳಿದಿದ್ದು ಹೇಗೆ ?

ಸಿದ್ದು ಗುಡುಗಿದ್ರೂ ಸುರ್ಜೇವಾಲ ಉಳಿದಿದ್ದು ಹೇಗೆ ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುರ್ಜೇವಾಲಾ ಅವರ ಬಗ್ಗೆ ಸಾಫ್ಟ್‌ ಆಗಿದ್ದಾರೆ. ಹೀಗಾಗಿ ಸುರ್ಜೇವಾಲಾ ಅವರನ್ನು ಕರ್ನಾಟಕದಿಂದ ವಾಪಸ್ ಕರೆಸಿಕೊಳ್ಳುವ ವಿಷಯದಲ್ಲಿ ರಾಹುಲ್ ಗಾಂಧಿ ಖಡಕ್ ಆಗಿ ವರ್ತಿಸುತ್ತಿಲ್ಲ ಎಂಬುದು. ಯಾವಾಗ ಸುರ್ಜೇವಾಲಾ ಬೆನ್ನಿಗೆ ಖರ್ಗೆ ನಿಂತಿದ್ದಾರೆ ಅಂತ ಗೊತ್ತಾಯಿತೋ, ನಂತರ ಸಿದ್ದರಾಮಯ್ಯ ಕೂಡ ಈ ಎಪಿಸೋಡನ್ನು ತಾರ್ಕಿಕ ಅಂತ್ಯಕ್ಕೆ ತೆಗೆದು ಕೊಂಡು ಹೋಗಿಲ್ಲ.

R T Vittalmurthy Column: ಕುಮಾರಣ್ಣಂಗೂ ಈಗ ವಿಜಯೇಂದ್ರ ಬೇಕಿಲ್ಲ

ಕುಮಾರಣ್ಣಂಗೂ ಈಗ ವಿಜಯೇಂದ್ರ ಬೇಕಿಲ್ಲ

ಜೆಡಿಎಸ್ ನಾಯಕ, ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಖಾತೆಯ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಈಗ ವಿಜಯೇಂದ್ರ ಬೇಕಾಗಿಲ್ಲ. ಕಾರಣ? ವಿಜಯೇಂದ್ರ ಅವರಿಗೆ ಜೆಡಿಎಸ್ ಬಗ್ಗೆ ಇರುವ ನಿರಾಸಕ್ತಿ. ಅಂದ ಹಾಗೆ, ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಅಮಿತ್ ಶಾ ಅವರ ಲೆಕ್ಕಾಚಾರದ ಫಲವಾಗಿ ಬಿಜೆಪಿ -ಜೆಡಿಎಸ್ ಮಧ್ಯೆ ಹೊಂದಾಣಿಕೆ ಸಾಧಿತವಾಗಿತ್ತು.

R T Vittalmurthy Column: ಸಿದ್ದು ದಿಲ್ಲಿಯಲ್ಲಿ ಬಾಂಬ್‌ ಬ್ಲಾಸ್ಟ್‌ ಮಾಡಿದ್ದೇಕೆ ?

ಸಿದ್ದು ದಿಲ್ಲಿಯಲ್ಲಿ ಬಾಂಬ್‌ ಬ್ಲಾಸ್ಟ್‌ ಮಾಡಿದ್ದೇಕೆ ?

1989ರಲ್ಲಿ ವೀರೇಂದ್ರ ಪಾಟೀಲ್ ಕರ್ನಾಟಕದ ಮುಖ್ಯಮಂತ್ರಿಯಾದರೆ, ಅದೇ ಕಾಲಕ್ಕೆ ಆಂಧ್ರಪ್ರದೇಶ ದಲ್ಲಿ ಚೆನ್ನಾರೆಡ್ಡಿ ಮುಖ್ಯಮಂತ್ರಿಯಾಗಿ ಸೆಟ್ಲಾಗಿದ್ದರು. ಆದರೆ ಅವರು ಮುಖ್ಯಮಂತ್ರಿಗಳಾದ ಕೆಲವೇ ಕಾಲದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಭ್ರಮನಿರಸನವಾಗಿದೆ. ಕಾರಣ? ಕಟ್ಟುನಿಟ್ಟಿನ ರಾಜಕೀಯ ಬದುಕಿಗೆ ಅಂಟಿಕೊಂಡಿದ್ದ ವೀರೇಂದ್ರ ಪಾಟೀಲ್ ಮತ್ತು ಚೆನ್ನಾರೆಡ್ಡಿ ಹೈಕಮಾಂಡ್ ಬಯಸಿದಂತೆ ಪಾರ್ಟಿ ಫಂಡ್ ಕೊಡಲು ಒಪ್ಪಿಲ್ಲ

R T Vittalmurthy Column: ಮೋದಿಯವರಿಗೆ ತಲುಪಿದೆಯಾ ಸೀಕ್ರೆಟ್‌ ರಿಪೋರ್ಟು ?

ಮೋದಿಯವರಿಗೆ ತಲುಪಿದೆಯಾ ಸೀಕ್ರೆಟ್‌ ರಿಪೋರ್ಟು ?

ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದ ಗೌಡರು ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಒಂದು ಕೂಲಂಕಷ ವರದಿ ತಯಾರಿಸಿದ್ದಾರೆ. ಮೂಲಗಳ ಪ್ರಕಾರ, ‘ಅಧಿಕಾರ ಹಸ್ತಾಂತರದ ಗೊಂದಲ ದಿಂದ ಒಂದು ಬಣ ಕಾಂಗ್ರೆಸ್ ತೊರೆದು ಬಿಜೆಪಿ ಕಡೆ ಬರಲು ಸಿದ್ಧವಾದರೂ, ನಾವು ಆಸರೆ ನೀಡದಿರು ವುದು ಒಳ್ಳೆಯದು. ಯಾಕೆಂದರೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಬರುವ ಗುಂಪಿಗೆ ನಾವು ಆಸರೆ ನೀಡಿದರೆ ಈಗಾಗಲೇ ನಮ್ಮ ಜತೆ ಮೈತ್ರಿ ಸಾಧಿಸಿರುವ ಜೆಡಿಎಸ್ ಪಕ್ಷ ನಮ್ಮಿಂದ ದೂರ ಸರಿಯಬಹುದು

Loading...