ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Kote

[email protected]

Articles
IND vs WI: ವೆಸ್ಟ್‌ ಇಂಡೀಸ್‌ ವಿರುದ್ಧದ ಒಡಿಐ, ಟಿ20ಐ ಸರಣಿಗಳಿಗೆ ಭಾರತ ತಂಡ ಪ್ರಕಟ!

ವೆಸ್ಟ್‌ ಇಂಡೀಸ್‌ ವೈಟ್‌ಬಾಲ್‌ ಸರಣಿಗಳಿಗೆ ಭಾರತ ತಂಡ ಪ್ರಕಟ!

ವೆಸ್ಟ್‌ ಇಂಡೀಸ್‌ ವಿರುದ್ಧದ ಒಡಿಐ ಹಾಗೂ ಟಿ20ಐ ಸರಣಿಗಳಿಗೆ ಬಿಸಿಸಿಐ ಭಾರತ ತಂಡಗಳನ್ನು ಪ್ರಕಟಿಸಿದೆ. ಏಕದಿನ ತಂಡದಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಒಡಿಐಗೆ ರವೀಂದ್ರ ಜಡೇಜಾ ಮರಳಿದ್ದರೆ, ಜಮ್ಮು ಮತ್ತು ಕಾಶ್ಮೀರ ವೇಗಿ ಆಕಿಬ್‌ ನಬಿಗೆ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಸೆಪ್ಟಂಬರ್‌ 27 ರಂದು ಏಕದಿನ ಸರಣಿ ಆರಂಭವಾಗಲಿದ್ದು, ಅಕ್ಟೋಬರ್‌ 6 ರಂದು ಟಿ20ಐ ಸರಣಿ ಆರಂಭವಾಗಲಿದೆ.

IND vs AFG: ವೈಭವ್‌ ಇನ್‌, ಅಭಿಷೇಕ್‌ ಔಟ್‌; ಮೂರನೇ ಟಿ20ಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ಮೂರನೇ ಟಿ20ಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

India vs Afghanistan 3rd T20I: ಆರಂಭಿಕ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ, ಸೆಪ್ಟಂಬರ್‌ 17 ರಂದು ಗುರುವಾರ ಅಫ್ಘಾನಿಸ್ತಾನ ವಿರುದ್ಧ ಮೂರನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಈಗಾಗಲೇ ಟಿ20ಐ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಭಾರತ, ಮೂರನೇ ಹಣಾಹಣಿಯಲ್ಲಿ ಬೆಂಚ್‌ ಆಟಗಾರರಿಗೆ ಅವಕಾ ನೀಡುವ ಸಾಧ್ಯತೆ ಇದೆ.

ಕೆವಿನ್‌ ಪೀಟರ್ಸನ್‌ಗಿಂತ ಹ್ಯಾರಿ ಬ್ರೂಕ್‌ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಎಂದ ಬೆನ್‌ ಸ್ಟೋಕ್ಸ್!

ಕೆವಿನ್‌ ಪೀಟರ್ಸನ್‌ಗಿಂತ ಹ್ಯಾರಿ ಬ್ರೂಕ್‌ ಪ್ರತಿಭಾವಂತ: ಬೆನ್‌ ಸ್ಟೋಕ್ಸ್!

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಜೇಯ 114 ರನ್‌ಗಳನ್ನು ಕಲೆ ಹಾಕಿದ ಹ್ಯಾರಿ ಬ್ರೂಕ್‌ ಅವರನ್ನು ಹಿರಿಯ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಪ್ರತಿಭೆ ವಿಷಯದಲ್ಲಿ ಕೆವಿನ್‌ ಪೀಟರ್ಸನ್‌ ಅವರಿಗಿಂತ ಹ್ಯಾರಿ ಬ್ರೂಕ್‌ ಮುಂದಿದ್ದಾರೆಂದು ಸ್ಟೋಕ್ಸ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

2026ರ ಏಷ್ಯಾ ಕ್ರೀಡಾಕೂಟದಿಂದಲೂ ವರುಣ್‌ ಚಕ್ರವರ್ತಿ ಔಟ್‌? ವಿಪ್ರಜ್‌ ನಿಗಮ್‌ಗೆ ಸ್ಥಾನ!

2026ರ ಏಷ್ಯಾ ಕ್ರೀಡಾಕೂಟದಿಂದಲೂ ವರುಣ್‌ ಚಕ್ರವರ್ತಿ ಔಟ್‌?

ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯ ಇನ್ನುಳಿದ ಎರಡು ಪಂದ್ಯಗಳಿಂದ ಹೊರ ನಡೆದಿರುವ ಭಾರತದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ, 2026ರ ಏಷ್ಯಾ ಕ್ರೀಡಾಕೂಟದಿಂದಲೂ ಹೊರ ನಡೆಯುವ ಸಾಧ್ಯತೆ ಇದೆ. ಅವರು ಹೊರ ನಡೆದರೆ, ಅವರ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಸ್ಟಾರ್‌ ಆಟಗಾರ ವಿಪ್ರಝ್‌ ನಿಗಮ್‌ ಭಾರತ ಟಿ20 ತಂಡದಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ.

2027ರ ಮಹಿಳಾ ಪ್ರೀಮಿಯರ್‌ ಲೀಗ್‌ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಅಕ್ಟೋಬರ್‌ 28ಕ್ಕೆ ಸಾಧ್ಯತೆ!

ಅಕ್ಟೋಬರ್‌ 28ಕ್ಕೆ 2027ರ ಮಹಿಳಾ ಪ್ರೀಮಿಯರ್‌ ಲೀಗ್‌ ಹರಾಜು?

2027ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಅಕ್ಟೋಬರ್‌ 28 ರಂದು ಕೇರಳದ ಕೊಚ್ಚಿಯಲ್ಲಿ ನಡೆಯುವ ಸಾಧ್ಯತೆ ಇದೆ. ಇನ್ನು ಐದನೇ ಆವೃತ್ತಿಯ ಟೂರ್ನಿ ಪಂದ್ಯಗಳನ್ನು ನಡೆಸುವ ಸ್ಥಳಗಳನ್ನು ಅಂತಿಮಗೊಳಿಸುವುದು ಬಾಕಿ ಇದೆ. ಮುಂದಿನ ಕೆಲವೇ ದಿನಗಳಲ್ಲಿ ಬಿಸಿಸಿಐ ಅಂತಿಮಗೊಳಸಲಿದೆ.

ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ನೂತನ ದಾಖಲೆ ಬರೆದ ಶ್ರೀ ಚರಣಿ!

ಟಿ20ಐ ಮಹಿಳಾ ಶ್ರೇಯಾಂಕದಲ್ಲಿ ನೂತನ ದಾಖಲೆ ಬರೆದ ಶ್ರೀ ಚರಣಿ!

ಮಹಿಳಾ ಏಷ್ಯಾ ಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಆಟಗಾರ್ತಿ ಶ್ರೀ ಚರಣಿ, ಐಸಿಸಿ ಮಹಿಳಾ ಟಿ20 ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶ್ರೀ ಚರಣಿ 804 ಅಂಕಗಳನ್ನು ಗಳಿಸುವ ಮೂಲಕ ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ 800 ಅಂಕಗಳ ಗಡಿ ದಾಟಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

IND vs AFG: ಸಂಜು ಸ್ಯಾಮ್ಸನ್‌ ಬಗ್ಗೆ ಆಶಾದಾಯಕ ಹೇಳಿಕೆ ನೀಡಿದ ಸುನೀಲ್‌ ಗವಾಸ್ಕರ್‌!

ಸಂಜು ಸ್ಯಾಮ್ಸನ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಗವಾಸ್ಕರ್‌!

ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ವಿಧಾನವನ್ನು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ. ಸ್ಯಾಮ್ಸನ್ ಇದೇ ರೀತಿಯ ಆಟದ ವಿಧಾನವನ್ನು ಮುಂದುವರಿಸಿದರೆ, ಅವರ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಂಡುಕೊಳ್ಳಲು ಸಹಾಯವಾಗಬಹುದು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಮೂರನೇ ಟಿ20ಐನಲ್ಲಿ ವೈಭವ್‌ ಸೂರ್ಯವಂಶಿ ಆಡ್ತಾರಾ? ಬಿಗ್‌ ಅಪ್‌ಡೇಟ್‌ ನೀಡಿದ ಶ್ರೇಯಸ್‌ ಅಯ್ಯರ್‌!

ವೈಭವ್‌ ಸೂರ್ಯವಂಶಿ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಶ್ರೇಯಸ್‌ ಅಯ್ಯರ್‌!

ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನ ಬಳಿಕ ಮಾತನಾಡಿದ ಟೀಮ್‌ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಇದುವರೆಗೆ ಆಡುವ ಅವಕಾಶ ಪಡೆಯದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ʻವೈಫೈ ಸ್ವಿಚ್‌ ಆಫ್‌ ಮಾಡಿದ್ದೆʼ-ಹೊರಗಡೆ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬಾರದೆಂದ ಸಂಜು ಸ್ಯಾಮ್ಸನ್‌!

IND vs AFG: ಅರ್ಧಶತಕ ಸಿಡಿಸಿದ ಬಳಿಕ ಸಂಜು ಸ್ಯಾಮ್ಸನ್‌ ಹೇಳಿದ್ದಿದು!

ತಮ್ಮ ಸುತ್ತಲಿನ ಹೊರಗಿನ ಶಬ್ದ ಹಾಗೂ ಒತ್ತಡ ಹೆಚ್ಚಾದಾಗ ಅದರಿಂದ ದೂರವಿರಲು ವೈ-ಫೈ ಆಫ್ ಮಾಡಲು ಪ್ರಯತ್ನಿಸುತ್ತೇನೆ ಎಂದು ಟೀಮ್‌ ಇಂಡಿಯಾ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಸ್ಯಾಮ್ಸನ್ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಇವರ ಭರ್ಜರಿ ಅರ್ಧಶತಕದ ನೆರವಿನಿಂದ ಭಾರತ, ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

IND vs AFG: ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ಗೆ ಆಫ್ಘನ್ ತತ್ತರ, ಭಾರತಕ್ಕೆ ಟಿ20ಐ ಸರಣಿ!

ಸಂಜು ಬ್ಯಾಟಿಂಗ್‌ ಅಬ್ಬರಕ್ಕೆ ಆಫ್ಘನ್‌ ಶರಣು, ಭಾರತಕ್ಕೆ ಟಿ20ಐ ಸರಣಿ!

IND vs AFG 2nd T20I Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗದಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ಭಾರತ ತಂಡ, ಅಫ್ಘಾನಿಸ್ತಾನ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ ಟಿ20ಐ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

IND vs AFG: 11 ಪಂದ್ಯಗಳಲ್ಲಿ ಟಾಸ್‌ ಗೆದ್ದು ನಾಯಕನಾಗಿ ವಿಶ್ವ ದಾಖಲೆ ಬರೆದ ಶ್ರೇಯಸ್‌ ಅಯ್ಯರ್‌!

IND vs AFG: ಟಾಸ್‌ ಗೆದ್ದು ವಿಶ್ವ ದಾಖಲೆ ಬರೆದ ಶ್ರೇಯಸ್‌ ಅಯ್ಯರ್‌!

IND vs AFG 2nd T20I: ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿಯೂ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಟಾಸ್‌ ಗೆದ್ದಿದ್ದಾರೆ. ಆ ಮೂಲಕ ಟಿ20ಐ ಕ್ರಿಕೆಟ್‌ ಇತಿಹಾಸದಲ್ಲಿ ಆರಂಭಿಕ 12 ಪಂದ್ಯಗಳಲ್ಲಿ 11 ರಲ್ಲಿ ಟಾಸ್‌ ಗೆದ್ದ ಮೊದಲ ನಾಯಕ ಎಂಬ ಖ್ಯಾತಿಗೆ ಶ್ರೇಯಸ್‌ ಅಯ್ಯರ್‌ ಭಾಜನರಾಗಿದ್ದಾರೆ.

IND vs AFG 2nd T20I: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ, ಅಫ್ಘಾನಿಸ್ತಾನ ಮೊದಲ ಬ್ಯಾಟಿಂಗ್!

‌IND vs AFG 2nd T20I: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ!

IND vs AFG 2ndT20I Match Toss, Playing XI's: ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ದುಕೊಂಡಿದೆ.

IND vs AFG: ಭಾರತ ತಂಡಕ್ಕೆ ಆಘಾತ; ಆಫ್ಘನ್‌ ಟಿ20ಐ ಸರಣಿಯಿಂದ ವರುಣ್‌ ಚಕ್ರವರ್ತಿ ಔಟ್‌?

ಅಫ್ಘಾನಿಸ್ತಾನ ಟಿ20ಐ ಸರಣಿಯಿಂದ ವರುಣ್‌ ಚಕ್ರವರ್ತಿ ಔಟ್‌?

IND vs AFG: ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾಗೆ ಭಾರಿ ಹಿನ್ನಡೆಯಾಗಿದೆ. ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಮೊದಲನೇ ಟಿ20ಐ ಪಂದ್ಯದ ಬಳಿಕ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ಅವರು ಇನ್ನುಳಿದ ಎರಡು ಪಂದ್ಯಗಳಿಂದ ಹೊರ ನಡೆದಿದ್ದಾರೆ. ಅಂದ ಹಾಗೆ ಮೊದಲನೇ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ʻಮುಂದಿನ ಆಷಸ್‌ ಆಡುವುದು ಡೌಟ್ʼ: ತಮ್ಮ ಕ್ರಿಕೆಟ್‌ ಭವಿಷ್ಯದ ಬಗ್ಗೆ ಸ್ಟೀವನ್‌ ಸ್ಮಿತ್‌ ದೊಡ್ಡ ಹೇಳಿಕೆ!

ತಮ್ಮ ಕ್ರಿಕೆಟ್‌ ಭವಿಷ್ಯದ ಬಗ್ಗೆ ಸ್ಟೀವನ್‌ ಸ್ಮಿತ್‌ ದೊಡ್ಡ ಹೇಳಿಕೆ!

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 2027ರ ಆಷಸ್‌ ಟ್ರೋಫಿ ಟೆಸ್ಟ್‌ ಸರಣಿಗೆ ತಾವು ಲಭ್ಯರಾಗುವ ಬಗ್ಗೆ ಆಸೀಸ್‌ ಮಾಜಿ ನಾಯಕ ಅನುಮಾನ ವ್ಯಕ್ತಪಡಿಸಿದ್ದಾರೆ. ಏಕ ಕಾಲದಲ್ಲಿ ಒಂದೊಂದು ಸರಣಿಯನ್ನು ಗಮನದಲ್ಲಿಟ್ಟುಕೊಂಡು ಲಭ್ಯತೆ ಬಗ್ಗೆ ಖಚಿತಪಡಿಸುವುದಾಗಿ ತಿಳಿಸಿದ್ದಾರೆ.

MS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮುಂದಿನ ಹೆಡ್‌ ಕೋಚ್‌ ಅನ್ನು ಆರಿಸಿದ ಕೆ ಶ್ರೀಕಾಂತ್‌!

IPL 2027: ಸಿಎಸ್‌ಕೆಗೆ ಮಂದಿನ ಕೋಚ್‌ ಅನ್ನು ಆರಿಸಿದ ಕೆ ಶ್ರೀಕಾಂತ್‌!

IPL 2027: ಹೆಮಾಂಗ್ ಬದಾನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ಎಂಬ ವದಂತಿಗಳನ್ನು ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತಳ್ಳಿಹಾಕಿದ್ದಾರೆ. ಮುಖ್ಯ ಕೋಚ್ ಹುದ್ದೆ ನಿಭಾಯಿಸಲು ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಸಂಪೂರ್ಣ ಅರ್ಹರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಸಿಸಿಐನಲ್ಲಿ ಸಚಿನ್‌, ಗಂಗೂಲಿ, ದ್ರಾವಿಡ್‌ ಕಾರ್ಯನಿರ್ವಹಿಸಬೇಕೆಂದ ಸುನೀಲ್‌ ಗವಾಸ್ಕರ್‌!

ಬಿಸಿಸಿಐಗೆ ಸಚಿನ್‌, ಗಂಗೂಲಿ, ದ್ರಾವಿಡ್‌ ಸೇರಬೇಕೆಂದ ಗವಾಸ್ಕರ್‌!

ಭಾರತೀಯ ಮಾಜಿ ಕ್ರಿಕೆಟಿಗರ ಅನುಭವ ಮತ್ತು ಪರಿಣತಿಯನ್ನು ಬಿಸಿಸಿಐ ಬಳಸಿಕೊಳ್ಳಬೇಕು ಎಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ. ಅಲ್ಲದೆ, ಕ್ರಿಕೆಟ್‌ ಸಲಹಾ ಸಮಿತಿಯ ಪಾತ್ರವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ. ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ಆಟಗಾರರ ಅನುಭವವನ್ನು ಬಿಸಿಸಿಐ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.

Indian Racing Festival: ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಅರಿಸ್ ಕಿರಿಯಾಕೌಗೆ ಭರ್ಜರಿ ಜಯ!

ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಅರಿಸ್ ಕಿರಿಯಾಕೌಗೆ ಭರ್ಜರಿ ಜಯ!

The Indian Racing Festival 2026: ಜೆಕೆ ಟೈರ್ ಪ್ರಾಯೋಜಿತ ಭಾರತೀಯ ರೇಸಿಂಗ್ ಉತ್ಸವ 2026ಕ್ಕೆ ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್‌ವೇಯಲ್ಲಿ ಭರ್ಜರಿ ಚಾಲನೆ ದೊರೆತಿದೆ. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಪರವಾಗಿ ಸ್ಪರ್ಧಿಸಿದ ಆಸ್ಟ್ರೇಲಿಯಾದ ಅರಿಸ್ ಕಿರಿಯಾಕೌ ಮೊದಲ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

7 ವರ್ಷಗಳ ಬಳಿಕ ಪಾಕಿಸ್ತಾನ ದೇಶಿ ಕ್ರಿಕೆಟ್‌ಗೆ ಮರಳಲು ಸಜ್ಜಾದ ಬಾಬರ್‌ ಆಝಮ್‌!

ಪಾಕಿಸ್ತಾನ ದೇಶಿ ಕ್ರಿಕೆಟ್‌ಗೆ ಮರಳಲು ಬಾಬರ್‌ ಆಝಮ್‌ ಸಜ್ಜು!

ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಮ್‌ 2019ರ ಬಳಿಕ ಇದೇ ಮೊದಲ ಬಾರಿ ದೇಶಿ ರೆಡ್-ಬಾಲ್ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ಕಳಪೆ ಫಾರ್ಮ್ ಎದುರಿಸುತ್ತಿರುವ ಬಾಬರ್, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 3-0 ಅಂತರದಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದ ಬಳಿಕ ದೇಶಿ ಕ್ರಿಕೆಟ್‌ಗೆ ಮರಳುವ ನಿರ್ಧಾರ ಕೈಗೊಂಡಿದ್ದಾರೆ.

Women's Asia Cup: ಭಾರತ ತಂಡದ ಕ್ರಾಂತಿ ಗೌಡ್‌ಗೆ ದಂಡ ವಿಧಿಸಿದ ಐಸಿಸಿ! ಏಕೆ ಗೊತ್ತೆ?

ಭಾರತದ ವೇಗಿ ಕ್ರಾಂತಿ ಗೌಡ್‌ಗೆ ದಂಡ ವಿಧಿಸಿದ ಐಸಿಸಿ!

ಶ್ರೀಲಂಕಾ ವಿರುದ್ಧದ 2026 ಮಹಿಳಾ ಏಷ್ಯಾಕಪ್ ಫೈನಲ್‌ ಪಂದ್ಯದಲ್ಲಿ ಮೊದಲನೇ ಹಂತದ ನಿಯಮ ಉಲ್ಲಂಘನೆ ಮಾಡಿರುವ ಭಾರತ ತಂಡದ ವೇಗಿ ಕ್ರಾಂತಿ ಗೌಡ್ ಅವರಿಗೆ ಪಂದ್ಯದ ಶುಲ್ಕದ 10% ದಂಡ ವಿಧಿಸಲಾಗಿದ್ದು, ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಶ್ರೀಲಂಕಾ ವಿರುದ್ಧ ಭಾರತ ತಂಡ 72 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಮಹಿಳಾ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

IND vs AFG: ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

ಎರಡನೇ ಟಿ20ಐಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಮೂರು ಪಂದ್ಯಗಳ ಟಿ20ಐ ಸರಣಿ ಈಗಾಗಲೇ ಆರಂಭವಾಗಿದೆ. ಮೊದಲನೇ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದಿದ್ದ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ ಇದೀಗ ಸೆಪ್ಟಂಬರ್‌ 15 ರಂದು ನಡೆಯುವ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ Xiನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ.

ರಿಕರ್ವ್‌ ಆರ್ಚರಿ ವಿಶ್ವಕಪ್‌: ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಭಾರತದ ದೀರಜ್‌ ಬೊಮ್ಮದೇವರ!

ರಿಕರ್ವ್‌ ಅರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಧೀರಜ್‌ ಬೊಮ್ಮದೇವರ!

ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಧೀರಜ್‌ ಬೊಮ್ಮದೇವರ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ರಿಕರ್ವ್‌ ಅರ್ಚರಿ ವಿಶ್ವಕಪ್‌ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷರ ರಿಕರ್ವ್‌ ಅಚ್ಚರಿ ಪಟು ಎಂಬ ಖ್ಯಾತಿಗೆ ಧೀರಜ್‌ ಭಾಜನರಾಗಿದ್ದಾರೆ. ಇವರು ಜಪಾನ್‌ನ ನಕನಿಶಿ ಅವರ ಎದುರು ಪ್ರಾಬಲ್ಯ ಸಾಧಿಸುವ ಮೂಲಕ ಚಾಂಪಿಯನ್‌ ಆಗಿದ್ದಾರೆ.

ಮೊಹ್ಸಿನ್‌ ನಖ್ವಿ ಅವರನ್ನುʻಟ್ರೋಫಿ ಕಳ್ಳ ನಖ್ವಿʼ ಎಂದು ಕರೆದ ಕ್ರಿಕೆಟ್‌ ಫ್ಯಾನ್ಸ್! ವಿಡಿಯೊ

ಮೊಹ್ಸಿನ್‌ ನಖ್ವಿಯನ್ನು ಟ್ರೋಫಿ ಕಳ್ಳ ನಖ್ವಿ ಎಂದು ಕರೆದ ಫ್ಯಾನ್ಸ್!

2026ರ ಮಹಿಳಾ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾ ತಂಡವನ್ನು ಮಣಿಸಿ 8ನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫೈನಲ್‌ ಪಂದ್ಯದ ಬಳಿಕ ಭಾರತ ತಂಡ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದಾದ ಬಳಿಕ ಮೈದಾನದಲ್ಲಿ ಹೈಡ್ರಾಮಾ ನಡೆದಿತ್ತು. ಅಭಿಮಾನಿಯೊಬ್ಬರು ಮೊಹ್ಸಿನ್‌ ನಖ್ವಿಯನ್ನು ಟ್ರೋಫಿ ಕಳ್ಳ ಎಂದು ಕೂಗಿದ್ದಾರೆ.

ʻಭಾರತ ಏಷ್ಯಾ ಕಪ್‌ಗೆ ಅರ್ಹ ತಂಡವಲ್ಲʼ: ಪಾಕಿಸ್ತಾನ ಅಭಿಮಾನಿಗಳು ಮೊಹ್ಸಿನ್‌ ನಖ್ವಿಗೆ ಬೆಂಬಲ!

ಭಾರತ ಏಷ್ಯಾ ಕಪ್‌ಗೆ ಅರ್ಹ ತಂಡವಲ್ಲ: ಪಾಕ್‌ ಫ್ಯಾನ್ಸ್‌ ಆಕ್ರೋಶ!

2026ರ ಮಹಿಳಾ ಏಷ್ಯಾಕಪ್ ಟ್ರೋಫಿ ಪ್ರದಾನ ಸಮಾರಂಭಕ್ಕೆ ಸಂಬಂಧಿಸಿದಂತೆ ಅಭಿಮಾನಿಯೊಬ್ಬರು ನೀಡಿರುವ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊಹ್ಸಿನ್ ನಖ್ವಿ ಅವರು ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಟ್ರೋಫಿ ನೀಡಲು ಮುಂದಾದ ನಿಲುವನ್ನು ಅಭಿಮಾನಿಯೊಬ್ಬರು ಬೆಂಬಲಿಸಿದ್ದಾರೆ. ಇದೇ ಕಾರಣಕ್ಕೆ ಭಾರತ ತಂಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿ, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದೆ ಉಳಿಯಿತು ಎಂದು ಅವರು ಹೇಳಿದ್ದಾರೆ.

ಇನ್‌ಫಾರ್ಮ್‌ ಬ್ಯಾಟರ್‌ನ ಹೇಗೆ ಕೈಬಿಡುತ್ತೀರಿ? ವೈಭವ್‌ಗೆ ಕೊಕ್‌ ನೀಡಿದ್ದಕ್ಕೆ ಮೊಹಮ್ಮದ್‌ ಕೈಫ್‌ ಆಕ್ರೋಶ!

ಸಂಜು ಸ್ಯಾಮ್ಸನ್‌ಗೆ ಚಾನ್ಸ್‌ ನೀಡಿದ್ದಕ್ಕೆ ಮೊಹಮ್ಮದ್‌ ಕೈಫ್‌ ಆಕ್ರೋಶ!

Mohammad kaif on Sanju samson's Selection: ಅಫ್ಘಾನಿಸ್ತಾನ ವಿರುದ್ದದ ಮೊದಲನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿ, ವೈಭವ್‌ ಸೂರ್ಯವಂಶಿಗೆ ಸ್ಥಾನ ನೀಡಿದಿದ್ದಕ್ಕೆ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಳೆದ ಸರಣಿಯಲ್ಲಿ ತಂಡದಿಂದ ಹೊರಗೆ ಉಳಿದಿದ್ದ ಸಂಜುಗೆ ನೇರವಾಗಿ ಆಡುವ ಬಳಗದಲ್ಲಿ ಸ್ಥಾನ ನೀಡಿದ್ದರ ಬಗ್ಗೆ ಕೈಫ್‌ ಕಳವಳ ವ್ಯಕ್ತಪಡಿಸಿದ್ದಾರೆ.

Loading...