ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Kote

[email protected]

Articles
IPL 2027: ಎಲ್ಲಾ 10 ಫ್ರಾಂಚೈಸಿಗಳನ್ನು ಹಿಂದಿಕ್ಕಿ ತನ್ನ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಂಡ ಆರ್‌ಸಿಬಿ!

ತನ್ನ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಂಡು ದಾಖಲೆ ಬರೆದ ಆರ್‌ಸಿಬಿ!

IPL 2026: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಒಟ್ಟು ವ್ಯವಹಾರ ಮೌಲ್ಯ ಶೇ.11.4 ರಷ್ಟು ಏರಿಕೆಯಾಗಿ 1.96 ಲಕ್ಷ ಕೋಟಿಗೆ ತಲುಪಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅತ್ಯಂತ ಮೌಲ್ಯಯುತ ಐಪಿಎಲ್ ತಂಡವಾಗಿದ್ದು, 2,982 ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ.

ICC Rankings: ಶುಭಮನ್‌ ಗಿಲ್‌ ನಂ 1 ಒಡಿಐ ಬ್ಯಾಟ್ಸ್‌ಮನ್‌;  230ರ ಸ್ಥಾನಗಳಲ್ಲಿ ಏರಿಕೆ ಕಂಡ ವೈಭವ್‌ ಸೂರ್ಯವಂಶಿ!

ಶುಭಮನ್‌ ಗಿಲ್‌ ನಂ 1 ಒಡಿಐ ಬ್ಯಾಟ್ಸ್‌ಮನ್‌, ವೈಭವ್‌ಗೆ ಜಾಕ್‌ಪಾಟ್‌!

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿನ ಅಮೋಘ ಪ್ರದರ್ಶನದ ಬಳಿಕ ಶುಭಮನ್ ಗಿಲ್ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ, 15ರ ವಯಸ್ಸಿನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡಿದ್ದಾರೆ. ಅವರು ಬರೋಬ್ಬರಿ 230 ಸ್ಥಾನಗಳ ಏರಿಕೆಯೊಂದಿಗೆ 48ನೇ ಸ್ಥಾನಕ್ಕೆ ತಲುಪಿದ್ದಾರೆ. ಇಶಾನ್ ಕಿಶನ್ ತಮ್ಮ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಬಾಬರ್‌ ಆಝಮ್‌ ನಾಯಕನಾಗಿ ಮರಳಿದರೂ ಪಾಕಿಸ್ತಾನ ತಂಡದ ಹಣೆ ಬರಹ ಬದಲಾಗಲಿಲ್ಲ!

ವೆಸ್ಟ್‌ ಇಂಡೀಸ್‌ ಎದುರು ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲು!

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ 90 ರನ್‌ಗಳಿಂದ ಸೋಲು ಅನುಭವಿಸಿದೆ. ಇದರೊಂದಿಗೆ ವಿದೇಶಿ ನೆಲದಲ್ಲಿ ಪಾಕಿಸ್ತಾನಕ್ಕೆ ಇದು ಸತತ ಎಂಟನೇ ಟೆಸ್ಟ್ ಸೋಲಾಗಿದೆ. 2023ರ ಬಳಿಕ ಪಾಕಿಸ್ತಾನ ತಂಡ ವಿದೇಶದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ವಿದೇಶಿ ನೆಲದಲ್ಲಿ ತಂಡದ ನೀರಸ ಪ್ರದರ್ಶನ ಮುಂದುವರಿದಿದೆ.

ಭಾರತ ತಂಡವನ್ನು ತೊರೆದ ಬೆನ್ನಲ್ಲೆ ಕೆಕೆಆರ್‌ ತಂಡದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿದ ರಯಾನ್‌ ಟೆನ್‌ ಡಶ್ಕಾಟೆ!

ಕೆಕೆಆರ್‌ನಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿದ ರಯಾನ್‌ ಟೆನ್‌ ಡಶ್ಕಾಟೆ!

ಭಾರತ ಕ್ರಿಕೆಟ್‌ ತಂಡದಲ್ಲಿ ಸಹಾಯಕ ಕೋಚ್‌ ಹುದ್ದೆಯನ್ನು ತೊರೆದ ಒಂದು ದಿನದ ಬೆನ್ನಲ್ಲೆ ನೆದರ್ಲೆಂಡ್ಸ್‌ ಮಾಜಿ ಕ್ರಿಕೆಟಿಗ ರಯಾನ್‌ ಟೆನ್‌ ಡಶ್ಕಾಟೆ ಅವರು ಕೋಲ್ಕತಾ ಫ್ರಾಂಚೈಸಿಯ ಕ್ರಿಕೆಟ್‌ ತಾಂತ್ರಿಕ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಹೊಸದಾಗಿ ಸೃಷ್ಟಿಸಲಾದ ಜಾಗತಿಕ ನಾಯಕತ್ವದ ಹುದ್ದೆಯನ್ನು ಅವರು ವಹಿಸಿಕೊಂಡಿದ್ದಾರೆ.

ಶುಭದೀಪ್‌ ಘೋಷ್‌ ಭಾರತ ಕ್ರಿಕೆಟ್‌ ತಂಡಕ್ಕೆ ನೂತನ ಫೀಲ್ಡಿಂಗ್‌ ಕೋಚ್‌?

ಭಾರತ ತಂಡಕ್ಕೆ ಶುಭದೀಪ್‌ ಘೋಷ್‌ ನೂತನ ಫೀಲ್ಡಿಂಗ್‌ ಕೋಚ್‌?

ಭಾರತ ಕ್ರಿಕೆಟ್ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡಶ್ಕಾಟೆ ಹಾಗೂ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಅಧಿಕಾರಾವಧಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಕರೆ ತರಲು ಬಿಸಿಸಿಐ ಪ್ರಯತ್ನ ನಡೆಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಶುಭದೀಪ್‌ ಘೋಷ್‌ ಅವರನ್ನು ಫೀಲ್ಡಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ.

ʻ3 ಗಂಟೆಗಳಲ್ಲಿ 1000 ಎಸೆತಗಳನ್ನು ಎದುರಿಸಿದ ಸ್ಕೈʼ: ಬಿಸಿಸಿಐಗೆ ಸೂರ್ಯಕುಮಾರ್‌ ಯಾದವ್‌ ಸಂದೇಶ!

ಕೇವಲ 3 ಗಂಟೆಗಳಲ್ಲಿ 1000 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್‌!

ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿರುವ ಮಾಜಿ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಕಳೆದುಕೊಂಡಿರುವ ಫಾರ್ಮ್‌ ಅನ್ನು ಮತ್ತೆ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರು ನೆಟ್ಸ್‌ನಲ್ಲಿ ಪ್ರತಿ ದಿನ ಬೆವರು ಸುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೂರ್ಯ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಭಾರತ ಕ್ರಿಕೆಟ್‌ ತಂಡ ಸಹಾಯಕ ಕೋಚ್‌ ಹುದ್ದೆಯಿಂದ ಕೆಳಗಿಳಿದ ರಯಾನ್‌ ಡಿ ಡಶ್ಕಾಟೆ!

ಭಾರತ ತಂಡದ ಕೋಚ್‌ ಹುದ್ದೆಗೆ ರಯಾನ್‌ ಟೆನ್‌ ಡಶ್ಕಾಟೆ ಗುಡ್‌ ಬೈ!

ಭಾರತ ಕ್ರಿಕೆಟ್‌ ತಂಡದ ಸಹಾಯಕ ಕೋಚ್‌ ಹುದ್ದೆಗೆ ರಯಾನ್‌ ಟೆನ್‌ ಡಶ್ಕಾಟೆ ಅವರು ರಾಜೀನಾಮೆ ನೀಡಿದ್ದಾರೆ. ಎರಡು ವರ್ಷಗಳ ಕಾಲ ಭಾರತ ತಂಡದಲ್ಲಿ ಕಾರ್ಯನಿರ್ವಹಿಸಿದ ಬಳಿಕ ಅವರು ಇದೀಗ ದೂರ ಸರಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅವರು ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗುತ್ತಿದೆ.

33ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ ಸಾರಾಂಶ್‌ ಜೈನ್‌ರ ನೋವಿನ ಕಥೆ!

ಟೀಮ್‌ ಇಂಡಿಯಾಗೆ ಆಯ್ಕೆಯಾದ ಸಾರಾಂಶ್‌ ಜೈನ್‌ರ ನೋವಿನ ಕಥೆ!

ಮಧ್ಯಪ್ರದೇಶದ 33ರ ವಯಸ್ಸಿನ ಆಲ್‌ರೌಂಡರ್ ಸಾರಾಂಶ್‌ ಜೈನ್ ಅವರು ಭಾರತ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಂದ ಹಾಗೆ ಸಾರಾಂಶ್‌ ಅವರ ಹಿನ್ನೆಲೆ ಸೇರಿದಂತೆ ಅವರ ಟೀಮ್‌ ಇಂಡಿಯಾಗೆ ಆಯ್ಕೆಯಾದ ಪಯಣದ ಬಗ್ಗೆ ವಿವರಿಸಲಾಗಿದೆ.

ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಯನ್ನು ಡಾನ್‌ ಬ್ರಾಡ್ಮನ್‌ಗೆ ಹೋಲಿಸಿದ ರಾಬಿನ್‌ ಉತ್ತಪ್ಪ!

ವೈಭವ್‌ ಸೂರ್ಯವಂಶಿಯನ್ನು ಡಾನ್‌ ಬ್ರಾಡ್ಮನ್‌ಗೆ ಹೋಲಿಸಿದ ಉತ್ತಪ್ಪ!

ವೈಭವ್ ಸೂರ್ಯವಂಶಿ ಹೇಗೆ ಬ್ಯಾಟ್‌ ಮಾಡುತ್ತಿದ್ದಾರೆ ಎಂಬುದಕ್ಕೆ ಬೌಲರ್‌ಗಳು ಇನ್ನೂ ಸರಿಯಾದ ಪ್ರತಿಕ್ರಿಯೆ ನೀಡಿರುವುದನ್ನು ನಾವು ನೋಡಿಲ್ಲ. ಅವರ ಬ್ಯಾಟಿಂಗ್ ಶೈಲಿಯನ್ನು ಅರ್ಥಮಾಡಿಕೊಳ್ಳುವ ಹಂತದಲ್ಲೇ ಎದುರಾಳಿ ತಂಡಗಳು ಇನ್ನೂ ಇವ ಎಂದು ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.

ʻಒಂದು ವರ್ಷ ಪಾಲೋ ಮಾಡಿದೆʼ: ವಿರಾಟ್‌ ಕೊಹ್ಲಿ ಲೈಫ್‌ ಸ್ಟೈಲ್‌ ಬಗ್ಗೆ ಸಂಜು ಸ್ಯಾಮ್ಸನ್‌ ಹೇಳಿಕೆ!

ವಿರಾಟ್‌ ಕೊಹ್ಲಿ ಲೈಫ್‌ ಸ್ಟೈಲ್‌ ಬಗ್ಗೆ ಪ್ರತಿಕ್ರಿಯಿಸಿದ ಸಂಜು ಸ್ಯಾಮ್ಸನ್‌

ವಿರಾಟ್‌ ಕೊಹ್ಲಿಯ ಜೀವನ ಶೈಲಿಯ ಬಗ್ಗೆ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಸಲಹೆಯಂತೆ ಒಂದೂವರೆ ವರ್ಷ ಅವರ ಜೀವನ ಕ್ರಮವನ್ನು ನಾನು ಪಾಲಿಸಿದೆ, ಆದರೆ ತದ ನಂತರ ಅನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತದ ಪ್ಲೇಯಿಂಗ್‌  XI ಆರಿಸಿದ ವಸೀಮ್‌ ಜಾಫರ್‌!

2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆರಿಸಿದ ವಸೀಮ್‌ ಜಾಫರ್‌!

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ತಮ್ಮ ನೆಚ್ಚಿನ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ ಅನ್ನು ಮಾಜಿ ಟೆಸ್ಟ್‌ ಆರಂಭಿಕ ವಸೀಮ್‌ ಜಾಫರ್‌ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಅವರು ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರಿಗೆ ಕೂಡ ಸ್ಥಾನ ನೀಡಿದ್ದಾರೆ. ಪ್ರಸ್ತುತ ಭಾರತ ಏಕದಿನ ತಂಡದಲ್ಲಿ ಈ ಇಬ್ಬರೂ ಆಟಗಾರರು ಆಡುತ್ತಿಲ್ಲ.

PAK vs WI: ರನ್‌ ನೀಡದೆ 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್ಟಿನ್‌ ಗ್ರೀವ್ಸ್‌!

ಸತತ ಮೇಡಿನ್‌ ಓವರ್‌ಗಳ ಮೂಲಕ 5 ವಿಕೆಟ್‌ ಕಬಳಿಸಿದ ಜಸ್ಟಿನ್‌ ಗ್ರೀವ್ಸ್‌!

ಪಾಕಿಸ್ತಾನ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವೇಗಿ ಜಸ್ಟಿನ್‌ ಗ್ರೀವ್ಸ್‌ ಅವರು ಐತಿಹಾಸಿಕ ಬೌಲಿಂಗ್‌ ಸ್ಪೆಲ್‌ ಹಾಕಿದ್ದಾರೆ. ಅವರು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೇಡಿನ್‌ ಓವರ್‌ಗಳ ಐದು ವಿಕೆಟ್‌ ಕಬಳಿಸಿದ ವಿಶ್ವದ ಮೊದಲ ಬೌಲರ್‌ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ. ಅಂತಿಮವಾಗಿ ಇವರು 27ಕ್ಕೆ 5 ಮೂಲಕ ತಮ್ಮ ಬೌಲಿಂಗ್‌ ಮುಗಿಸಿದರು.

IND vs ZIM: ಭಾರತ ಟಿ20ಐ ತಂಡದಿಂದ ಅಭಿಷೇಕ್‌ ಶರ್ಮಾರನ್ನು ಕೈಬಿಡಿ ಎಂದ ಕೆ ಶ್ರೀಕಾಂತ್‌!

ಭಾರತ ಟಿ20 ತಂಡದಿಂದ ಅಭಿಷೇಕ್‌ ಶರ್ಮಾಗೆ ಕೊಕ್‌ ನೀಡಿ: ಶ್ರೀಕಾಂತ್‌!

ಭಾರತದ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್ (ಕ್ರಿಸ್ ಶ್ರೀಕಾಂತ್) ಅವರು, ಕಳಪೆ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ ಕೇವಲ 11 ರನ್‌ಗಳನ್ನು ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.

CWG 2026: ತಮ್ಮ ವೃತ್ತಿ ಜೀವನದ ಎರಡನೇ ಪದಕ ಗೆದ್ದ ಬಿಂದ್ಯಾರಾಣಿ ದೇವಿ, ಭಾರತಕ್ಕೆ ಆರನೇ ಪದಕ!

ಭಾರತಕ್ಕೆ ಆರನೇ ಪದಕ ಗೆದ್ದುಕೊಟ್ಟ ಬಿಂದ್ಯಾರಾಣಿ ದೇವಿ!

CWG 2026: ಪ್ರಸ್ತುತ ನಡೆಯುತ್ತಿರುವ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಆರನೇ ಪದಕ ಬಂದಿದೆ. ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತದ ಬಿಂದ್ಯಾರಾಣಿ ದೇವಿ ಅವರು 58 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅಂದ ಹಾಗೆ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ಇದು 5ನೇ ಪದಕವಾಗಿದೆ.

IND vs ZIM: ವೈಭವ್‌ ಸೂರ್ಯವಂಶಿ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ತಿಳಿಸಿದ ವಿವಿಎಸ್‌ ಲಕ್ಷ್ಮಣ್‌!

ವೈಭವ್‌ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ತಿಳಿಸಿದ ವಿವಿಎಸ್‌ ಲಕ್ಷ್ಮಣ್‌!

IND vs ZIM: ಭಾರತ ಕ್ರಿಕೆಟ್‌ ತಂಡದ ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಆರಂಭ ಪಡೆದಿದ್ದರೂ ವೈಭವ್ ಸೂರ್ಯವಂಶಿ ಇನ್ನೂ ಒಂದು ಪ್ರಮುಖ ಅಂಶದಲ್ಲಿ ಸುಧಾರಿಸಬೇಕಿದೆ ಎಂದು ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸೂರ್ಯವಂಶಿ ತಮ್ಮ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು.

Commonwealth Games ‌2026: ಐತಿಹಾಸಿಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಜ್ಞಾನೇಶ್ವರಿ ಯಾದವ್!

CWG 2026: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಜ್ಞಾನೇಶ್ವರಿ ಯಾದವ್‌!

CWG 2026: ಛತ್ತೀಸ್‌ಗಢದ ಜ್ಞಾನೇಶ್ವರಿ ಯಾದವ್ ಅವರು 2026ರ ಕಾಮನ್‌ವೆಲ್ತ್ ಕ್ರೀಡಾಕೂಡದಲ್ಲಿ 111 ಕೆಜಿ ಭಾರ ಎತ್ತಿ ಹೊಸ ದಾಖಲೆ ಬರೆಯುವ ಜೊತೆಗೆ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಟಾಟಿಯಾಲಾದಲ್ಲಿ ತರಬೇತಿ ಪಡೆಯುತ್ತಿರುವ ಜ್ಞಾನೇಶ್ವರಿ ಅವರು ಸರ್ಕಾರದಿಂದ ದೊರೆತ ಸಹಾಯ ಹಾಗೂ ತಮ್ಮ ನಿರಂತರ ಪರಿಶ್ರಮದ ಬಲದಿಂದ ಇಂದು ಈ ಮಹತ್ವದ ಸಾಧನೆ ಮಾಡಿದ್ದಾರೆ.

IND vs ZIM: ಟಿ20ಐ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡು ವಿವಿಎಸ್‌ ಲಕ್ಷ್ಮಣ್‌ಗೆ ಸಂದೇಶ ರವಾನಿಸಿದ ಶ್ರೇಯಸ್‌ ಅಯ್ಯರ್‌!

IND vs ZIM: ವಿವಿಎಸ್‌ ಲಕ್ಷ್ಮಣ್‌ಗೆ ಸಂದೇಶ ರವಾನಿಸಿದ ಶ್ರೇಯಸ್‌ ಅಯ್ಯರ್‌!

IND vs ZIM: ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅನುಪಸ್ಥಿತಿಯಲ್ಲಿ ತಂಡದ ಜವಾಬ್ದಾರಿ ನಿರ್ವಹಿಸಿದ ವಿವಿಎಸ್ ಲಕ್ಷ್ಮಣ್ ಅವರಿಗೆ ನಾಯಕ ಶ್ರೇಯಸ್‌ ಅಯ್ಯರ್ ಧನ್ಯವಾದ ಅರ್ಪಿಸಿದರು. ಯುಕೆಯ ಕಠಿಣ ಪ್ರವಾಸದ ಬಳಿಕ ಗಂಭೀರ್ ವಿರಾಮ ಪಡೆದಿದ್ದರೆ, ಆಗಸ್ಟ್‌ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ಮತ್ತೆ ಭಾರತ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ.

IND vs ZIM: ಅಭಿಷೇಕ್‌ ಶರ್ಮಾಗೆ ಒಂದು ನ್ಯಾಯ, ಸಂಜುಗ ಒಂದ್ಯ ನ್ಯಾಯವೇ? ಹನುಮ ವಿಹಾರಿ ಪ್ರಶ್ನೆ!

ಅಭಿಷೇಕ್‌ಗೆ ಒಂದು ನ್ಯಾಯ, ಸಂಜುಗೆ ಒಂದು ನ್ಯಾಯವೇ? ಹನುಮ ವಿಹಾರಿ ಪ್ರಶ್ನೆ!

ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರ. ಅವರು ಒಂದೇ ಒಂದು ಅರ್ಧಶತಕವನ್ನು ಈ ಸರಣಿಯಲ್ಲಿ ಗಳಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಪ್ರತಿಕ್ರಿಯೆ ನೀಡಿದ್ದಾರೆ.

IND vs ZIM: ವೈಭವ್‌ ಸೂರ್ಯವಂಶಿಯಿಂದ ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾ ಸ್ಥಾನಕ್ಕೆ ಕುತ್ತು?

ವೈಭವ್‌ ಸೂರ್ಯವಂಶಿಯಿಂದ ಅಭಿಷೇಕ್‌ ಶರ್ಮಾಗೆ ಆತಂಕ!

IND vs ZIM: ಭಾರತ ಹಾಗೂ ಜಿಂಬಾಬ್ವೆ ನಡುವಣ ಮೂರು ಪಂದ್ಯಗಳ ಟಿ20ಐ ಸರಣಿ ಮುಕ್ತಾಯವಾಗಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡ 3-0 ಅಂತರದಲ್ಲಿ ಟಿ20ಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ಈ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರು ಬ್ಯಾಟಿಂಗ್‌ ವೈಫಲ್ಯವನ್ನು ಅನುಭವಿಸಿದ್ದರು. ಅವರು ಮೂರೂ ಪಂದ್ಯಗಳಲ್ಲಿ ಬ್ಲೆಸಿಂಗ್‌ ಮುಝರಾಬಾನಿಗೆ ವಿಕೆಟ್‌ ಒಪ್ಪಿಸಿದ್ದರು.

ಶುಭಮನ್‌ ಗಿಲ್‌ ಬೇಡ, ರೋಹಿತ್‌ ಶರ್ಮಾ ಜೊತೆ ವೈಭವ್‌ ಸೂರ್ಯವಂಶಿ ಇನಿಂಗ್ಸ್‌ ಆರಂಭಿಸಬೇಕೆಂದ ಫಾರೂಖ್‌ ಇಂಜಿನಿಯರ್‌!

ರೋಹಿತ್‌ ಜೊತೆ ವೈಭವ್‌ ಇನಿಂಗ್ಸ್‌ ಆರಂಭಿಸಬೇಕು: ಫಾರೂಕ್‌ ಇಂಜಿನಿಯರ್‌!

ಭಾರತ ಏಕದಿನ ಕ್ರಿಕೆಟ್‌ ತಂಡದಲ್ಲಿ ವೈಭವ್‌ ಸೂರ್ಯವಂಶಿ ಅವರು ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಬೇಕೆಂದು ಮಾಜಿ ವಿಕೆಟ್‌ ಕೀಪರ್‌ ಫಾರೂಖ್‌ ಇಂಜಿನಿಯರ್‌ ಅವರು ಸಲಹೆ ನೀಡಿದ್ದಾರೆ. ಆ ಮೂಲಕ ನಾಯಕ ಶುಭಮನ್‌ ಗಿಲ್‌ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಹೇಳಿದ್ದಾರೆ. ಭಾರತ ತಂಡ, ಮುಂದಿನ ಏಕದಿನ ಸರಣಿಯನ್ನು ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಿದೆ.

IND vs ZIM:29 ಎಸೆತಗಳಲ್ಲಿ 60 ರನ್‌ ಸಿಡಿಸಿ ಎಂಎಸ್‌ ಧೋನಿಯ ದಾಖಲೆಯನ್ನು ಮುರಿದ ತಿಲಕ್‌ ವರ್ಮಾ!

IND vs ZIM: ಎಂಎಸ್‌ ಧೋನಿಯ ದಾಖಲೆ ಮುರಿದ ತಿಲಕ್‌ ವರ್ಮಾ!

ಜಿಂಬಾಬ್ವೆ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಆಡುವ ಮೂಲಕ ಭಾರತ ತಂಡದ ಉಪ ನಾಯಕ ತಿಲಕ್‌ ವರ್ಮಾ ಅವರು, ಮಾಜಿ ನಾಯಕ ಎಂಎಸ್‌ ಧೋನಿಯ ದಾಖಲೆಯನ್ನು ಮುರಿದಿದ್ದಾರೆ. ಅವರು ಆಡಿದ ಕೇವಲ 29 ಎಸೆತಗಳಲ್ಲಿ 200ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿ ಅಜೇಯ 60 ರನ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 90 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು.

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ ಬೆನ್ನಲ್ಲೆ ಯುವ ಸಮುದಾಯಕ್ಕೆ ದಿನೇಶ್‌ ಕಾರ್ತಿಕ್‌ ವಿಶೇಷ ಸಂದೇಶ!

ಭಾರತದ ಯುವ ಸಮುದಾಯಕ್ಕೆ ವಿಶೇಷ ಸಂದೇಶ ರವಾನಿಸಿದ ದಿನೇಶ್‌ ಕಾರ್ತಿಕ್‌!

2026ರ ನೀಟ್‌-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಸಂಬಂಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌, ಯುವ ಸಮುದಾಯವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತದ ಯುವ ಸಮುದಾಯಕ್ಕೆ ಸ್ಪಷ್ಟ ದೃಷ್ಟಿಕೋನ, ಪರಸ್ಪರ ಸಹಕಾರ ಮತ್ತು ನಿರಂತರ ಹೋರಾಟದ ಮನೋಭಾವವನ್ನು ದಿನೇಶ್ ಕಾರ್ತಿಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

IND vs ZIM: ಕಿಶನ್‌, ತಿಲಕ್‌ ಅಬ್ಬರಕ್ಕೆ ನಡುಗಿದ ಜಿಂಬಾಬ್ವೆ, ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!

ಜಿಂಬಾಬ್ವೆ ಎದುರು 2ನೇ ಪಂದ್ಯ ಗೆದ್ದು, ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!

IND vs ZIM 2nd T20I Highlights: ಇಶಾನ್‌ ಕಿಶನ್‌ ಹಾಗೂ ತಿಲಕ್‌ ವರ್ಮಾ ಅವರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಭಾರತ ತಂಡ, ಎರಡನೇ ಪಂದ್ಯದಲ್ಲಿಯೂ ಜಿಂಬಾಬ್ವೆ ಎದುರು 90 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್‌ ಇಂಡಿಯಾ 2-0 ಅಂತರದಲ್ಲಿ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿತು. 44 ಎಸೆತಗಳಲ್ಲಿ 81 ರನ್‌ ಸಿಡಿಸಿದ ಇಶಾನ್‌ ಕಿಶನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IND vs ZIM: ಭಾರತದ ಪರ ಎರಡನೇ ಪಂದ್ಯದಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶ್‌ ಠಾಕೂರ್‌ ಯಾರು?

ಭಾರತದ ಪರ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶ್‌ ಠಾಕೂರ್‌ ಯಾರು?

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಜುಲೈ 25 ರಂದು ಶನಿವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತದ ಪರ ಯುವ ವೇಗಿ ಯಶ್‌ ಠಾಕೂರ್‌ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಮೊದಲನೇ ಪಂದ್ಯದಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಶೋಕ್‌ ಶರ್ಮಾ ಅವರ ಸ್ಥಾನದಲ್ಲಿ ಎರಡನೇ ಪಂದ್ಯವನ್ನು ಆಡುವ ಅವಕಾಶವನ್ನು ಯಶ್‌ ಠಾಕೂರ್‌ ಪಡೆದರು.

Loading...