ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Kote

[email protected]

Articles
RCB vs GT: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೇಡು ತೀರಿಸಿಕೊಂಡ ಗುಜರಾತ್‌ ಟೈಟನ್ಸ್!

‌IPL 2026: ಆರ್‌ಸಿಬಿ ವಿರುದ್ಧ ಸೇಡು ತೀರಿಸಿಕೊಂಡ ಗುಜರಾತ್‌ ಟೈಟನ್ಸ್!

RCB vs GT Match Highlights: ಬೌಲಿಂಗ್‌ ಹಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 4 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಆರ್‌ಸಿಬಿ ಎದುರು ಬೆಂಗಳೂರಿನಲ್ಲಿನ ಸೋಲಿನ ಸೇಡನ್ನು ಜಿಟಿ ತೀರಿಸಿಕೊಂಡಿತು.

RCB vs GT: ರಜತ್‌ ಪಾಟಿದಾರ್‌ರ ವಿವಾದಾತ್ಮಕ ಕ್ಯಾಚ್‌, ಅಂಪೈರ್‌ ವಿರುದ್ಧ ವಿರಾಟ್ ಕೊಹ್ಲಿ ಕಿಡಿ!

‌ರಜತ್‌ ಪಾಟಿದಾರ್‌ರ ವಿವಾದಾತ್ಮಕ ಕ್ಯಾಚ್‌, ವಿರಾಟ್‌ ಕೊಹ್ಲಿ ಕಿಡಿ!

RCB vs GT: ಗುಜರಾತ್‌ ಟೈಟನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಜತ್‌ ಪಾಟಿದಾರ್‌ ಅವರ ವಿವಾದಾತ್ಮಕ ಕ್ಯಾಚ್‌ ಬಗ್ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂಪೈರ್‌ಗಳ ವಿರುದ್ಧ ಕಿಡಿಕಾರಿದ್ದಾರೆ. ಜೇಸನ್‌ ಹೋಲ್ಡರ್‌ ಕ್ಯಾಚ್‌ ಪಡೆದ ಬಳಿಕ ಚೆಂಡನ್ನು ನೆಲಕ್ಕೆ ತಾಗಿಸಿದ್ದಾರೆಂದು ಹೇಳಿದ್ದಾರೆ.

IPL 206: ವಿರಾಟ್‌ ಕೊಹ್ಲಿ ಅಲ್ಲವೇ ಅಲ್ಲ! ಬೆಸ್ಟ್‌ ಫೀಲ್ಡರ್‌ ಹೆಸರಿಸಿದ ಜಾಂಟಿ ರೋಡ್ಸ್‌!

ಐಪಿಎಲ್‌ ಇತಿಹಾಸದ ಬೆಸ್ಟ್‌ ಫೀಲ್ಡರ್‌ ಹೆಸರಿಸಿದ ಜಾಂಟಿ ರೋಡ್ಸ್‌!

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್‌ಗಳ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್‌ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇದೀಗ ಅವರು ಟೈಮ್ಸ್‌ ನೌ ಜತೆ ಮಾತನಾಡಿದ ಅವರು, ತಮ್ಮ ನೆಚ್ಚಿನ ಅತ್ಯುತ್ತಮ ಫೀಲ್ಡರ್‌ ಅನ್ನು ಆರಿಸಿದ್ದಾರೆ. ವಿರಾಟ್‌ ಕೊಹ್ಲಿಯನ್ನು ಬಿಟ್ಟು, ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರನನ್ನು ಆಯ್ಕೆ ಮಾಡಿದ್ದಾರೆ.

RCB vs GT: ಟಾಸ್‌ ಸೋತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೊದಲ ಬ್ಯಾಟಿಂಗ್‌!

ಆರ್‌ಸಿಬಿ ಎದುರು ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಗುಜರಾತ್‌!

RCB vs GT Match Toss: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಶುಭಮನ್‌ ಗಿಲ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

IPL 2026: ಮುಂಬೈ ಇಂಡಿಯನ್ಸ್‌ ಸೋಲಿನ ಬಳಿಕ ಮುಖ ಮುಚ್ಚಿಕೊಂಡ ರೋಹಿತ್‌ ಶರ್ಮಾ!

ಮುಂಬೈ ಇಂಡಿಯನ್ಸ್‌ ಸೋಲಿನ ಬಳಿಕ ಮುಖ ಮುಚ್ಚಿಕೊಂಡ ರೋಹಿತ್‌ ಶರ್ಮಾ!

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ ಸೋಲು ಅನುಭವಿಸಿದ ಬಳಿಕ ಡಗೌಟ್‌ನಲ್ಲಿ ಕುಳಿತಿದ್ದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರು ತಮ್ಮ ಕೈನಿಂದ ಮುಖವನ್ನು ಮುಚ್ಚಿಕೊಂಡ ಪ್ರಸಂಗ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

IPL 2026: ಮುಂಬೈ ಇಂಡಿಯನ್ಸ್‌ ನಾಯಕನಾಗಿ ಹಾರ್ದಿಕ್‌ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಮೂವರು!

ಮುಂಬೈ ಇಂಡಿಯನ್ಸ್‌ಗೆ ನಾಯಕರಾಗಬಲ್ಲ ಮೂವರು ಆಟಗಾರರು!

ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದೆ. ಆಡಿದ 8 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು,ಇನ್ನುಳಿದ ಆರರಲ್ಲಿ ಸೋಲು ಅನುಭವಿಸಿದೆ. ಒಂದು ವೇಳೆ ಹಾರ್ದಿಕ್‌ರನ್ನು ನಾಯಕತ್ವದಿಂದ ತೆಗೆದರೆ, ಅವರ ಸ್ಥಾನಕ್ಕೆ ಮೂವರು ಆಟಗಾರರಲ್ಲಿ ಒಬ್ಬರನ್ನು ಪರಿಗಣಿಸಬಹುದು.

ಭಾರತ ಏಕದಿನ ತಂಡದಿಂದ ರಿಷಭ್‌ ಪಂತ್‌ಗೆ ಕೊಕ್‌? ಸಂಜು ಸ್ಯಾಮ್ಸನ್‌ಗೆ ಅವಕಾಶ!

ಭಾರತ ಏಕದಿನ ತಂಡದಿಂದ ರಿಷಭ್‌ ಪಂತ್‌ಗೆ ಕೊಕ್‌?

ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗುತ್ತಿರುವ ರಿಷಭ್‌ ಪಂತ್‌ಗೆ ಭಾರತ ತಂಡದಲ್ಲಿ ಕೊಕ್‌ ನೀಡಲು ಬಿಸಿಸಿಐ ಎದುರು ನೋಡುತ್ತಿದೆ. ಇವರ ಜಾಗಕ್ಕೆ ಇನ್‌ಫಾರ್ಮ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ಧ್ರುವ್‌ ಜುರೆಲ್‌ ಅವರನ್ನು ಪರಿಗಣಿಸಬಹುದು.

ಐಪಿಎಲ್‌ ಪಂದ್ಯದ ವೇಳೆ ವ್ಯಾಪಿಂಗ್‌: ನಿಷೇಧದಿಂದ ಪಾರಾದಾರೂ ರಿಯಾನ್‌ ಪರಾಗ್‌ಗೆ ಭಾರಿ ದಂಡ!

Vaping: ರಿಯಾನ್‌ ಪರಾಗ್‌ಗೆ ಭಾರಿ ದಂಡ ವಿಧಿಸಿದ ಬಿಸಿಸಿಐ!

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ಕೋಣೆಯಲ್ಲಿ ವ್ಯಾಪಿಂಗ್ ಮಾಡುತ್ತಿದ್ದರು. ಇದೀಗ ಅವರಿಗೆ ಐಪಿಎಲ್ ದಂಡ ವಿಧಿಸಿದೆ. ಹೆಚ್ಚುವರಿಯಾಗಿ, ರಾಜಸ್ಥಾನ್ ರಾಯಲ್ಸ್ ಕೂಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ 25 ರಷ್ಟು ದಂಡ ಹಾಗೂ ಡೀಮೆರಿಟ್‌ ಅಂಕವನ್ನು ನೀಡಿದೆ.

IPL 2026ರಲ್ಲಿ ರನ್‌ ಹೊಳೆ ಹರಿಯಲು ಬಲವಾದ ಕಾರಣ ತಿಳಿಸಿದ  ಮುತ್ತಯ್ಯ ಮುರಳಿಧರನ್‌!

IPL 2026ರಲ್ಲಿ ಬೌಲರ್‌ಗಳ ವೈಫಲ್ಯಕ್ಕೆ ಕಾರಣ ತಿಳಿಸಿದ ಮುರಳಿಧರನ್‌!

IPL 2026: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಹೆಚ್ಚೂ-ಕಡಿಮೆ 200 ರನ್‌ಗಳು ದಾಖಲಾಗಿವೆ ಹಾಗೂ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಈ ಬಗ್ಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸ್ಪಿನ್‌ ಬೌಲಿಂಗ್‌ ಕೋಚ್‌ ಮುತ್ತಯ್ಯ ಮುರಳಿಧರನ್‌ ಪ್ರತಿಕ್ರಿಯೆ ನೀಡಿದ್ದಾರೆ.

MI vs SRH: ಮುಂಬೈ ಇಂಡಿಯನ್ಸ್‌ ಎದುರು ಸನ್‌ರೈಸರ್ಸ್‌ ಹೈದರಾಬಾದ್‌ಗೆ ಅಧಿಕಾರಯುತ ಜಯ!

IPL 2026: ಮುಂಬೈಗೆ ಆಘಾತ ನೀಡಿದ ಸನ್‌ರೈಸರ್ಸ್‌ ಹೈದರಾಬಾದ್‌!

MI vs SRH match Highlights: ಟ್ರಾವಿಸ್‌ ಹೆಡ್‌ ಹಾಗೂ ಹೆನ್ರಿಕ್‌ ಕ್ಲಾಸೆನ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಎದುರಾಳಿ ಮುಂಬೈ ಇಂಡಿಯನ್ಸ್‌ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಆರನೇ ಸೋಲು ಅನುಭವಿಸಿದ ಮುಂಬೈ ತಂಡದ ಪ್ಲೇಆಫ್ಸ್‌ ಹಾದಿ ಕಠಿಣವಾಗಿದೆ.

IPL 2026: ಮುಂಬೈ ಇಂಡಿಯನ್ಸ್‌ ಪರ ಅತ್ಯಂತ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು!

IPL: ಮುಂಬೈ ಇಂಡಿಯನ್ಸ್‌ ಪರ ವೇಗದ ಶತಕ ಸಿಡಿಸಿದ ಬ್ಯಾಟರ್ಸ್‌!

ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ತಂಡದ ರಯಾನ್‌ ರಿಕೆಲ್ಟನ್‌ ಅವರು 44ಎಸೆತಗಳಲ್ಲಿ ಶತಕವನ್ನು ಸಿಡಿಸಿದರು. ಆ ಮೂಲಕ ಮುಂಬೈ ಪರ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

MI vs SRH: 44 ಬಾಲ್‌ಗಳಲ್ಲಿ ಶತಕ ಬಾರಿಸಿ ಸನತ್‌ ಜಯಸೂರ್ಯ ದಾಖಲೆ ಮುರಿದ ರಯಾನ್‌ ರಿಕೆಲ್ಟನ್!

‌IPL 2026: ಸೆಂಚುರಿ ಬಾರಿಸಿ ಸನತ್‌ ಜಯಸೂರ್ಯ ದಾಖಲೆ ಮುರಿದ ರಿಕೆಲ್ಟನ್!

Ryan Rickelton Century: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ರಯಾನ್‌ ರಿಕೆಲ್ಟನ್‌ ಅವರು ಕೇವಲ 44 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಆ ಮೂಲಕ ಮುಂಬೈ ಇಂಡಿಯನ್ಸ್‌ ಪರ ವೇಗದ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ʻಯಶಸ್ವಿ ಜೈಸ್ವಾಲ್‌ ಕೊಡುಗೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲʼ: ಆಕಾಶ ಚೋಪ್ರಾ ಬೇಸರ!

ಯಶಸ್ವಿ ಜೈಸ್ವಾಲ್‌ ಬಗ್ಗೆ ಯಾರೂ ಮಾತನಾಡುತ್ತಿಲ್ಲ: ಆಕಾಶ್‌ ಚೋಪ್ರಾ!

IPL 2026: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಎಲ್ಲರೂ ವೈಭವ್‌ ಸೂರ್ಯವಂಶಿಯನ್ನು ಹೊಗಳುತ್ತಿದ್ದಾರೆ. ಆದರೆ, ಇವರ ಸಹ ಆಟಗಾರ ಯಶಸ್ವಿ ಜೈಸ್ವಾಲ್‌ ಅವರ ಕೊಡುಗೆಯನ್ನು ಯಾರೂ ಮಾತನಾಡುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

MI vs SRH: ಸತತ ನಾಲ್ಕನೇ ಪಂದ್ಯದಿಂದಲೂ ರೋಹಿತ್‌ ಶರ್ಮಾ ಔಟ್‌! ಹಿಟ್‌ಮ್ಯಾನ್‌ ಕೆರಿಯರ್‌ ಅಂತ್ಯ?

MI vs SRH ಪಂದ್ಯದಲ್ಲಿಯೂ ರೋಹಿತ್‌ ಶರ್ಮಾ ಆಡುತ್ತಿಲ್ಲವೇಕೆ?

Mumbai Indians Playing XI: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ ಬುಧವಾರದ ಪಂದ್ಯದಲ್ಲಿಯೂ ರೋಹಿತ್‌ ಶರ್ಮಾ ಆಡುತ್ತಿಲ್ಲ. ಇದರಿಂದಾಗಿ ರೋಹಿತ್‌ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ಸತತ ನಾಲ್ಕನೇ ಪಂದ್ಯದಲ್ಲಿ ಮುಂಬೈ ಹಿಟ್‌ಮ್ಯಾನ್‌ ಸೇವೆಯನ್ನು ಎಂಐ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.

ʻಈ ಹಡುಗನಿಗೆ 10 ಫೀಲ್ಡರ್‌ಗಳು ಸಾಕಾಗಲ್ಲʼ-ವೈಭವ್‌ ಸೂರ್ಯವಂಶಿ ಬಗ್ಗೆ ಗವಾಸ್ಕರ್‌ ದೊಡ್ಡ ಹೇಳಿಕೆ!

ವೈಭವ್‌ ಸೂರ್ಯವಂಶಿ ಬಗ್ಗೆ ಸುನೀಲ್‌ ಗವಾಸ್ಕರ್‌ ದೊಡ್ಡ ಹೇಳಿಕೆ!

ಪಂಜಾಬ್‌ ಕಿಂಗ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 43 ರನ್‌ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಶ್ಲಾಘಿಸಿದ್ದಾರೆ. 10 ಫೀಲ್ಡರ್‌ಗಳಿಂದಲೂ ವೈಭವ್‌ ಅವರನ್ನು ಹಿಡಿಯಲು ಸಾಧ್ಯವಿಲ್ಲ ಎಂದಿದ್ದಾರೆ.

IPL 2026 ಫೈನಲ್‌ಗೆ ಅರ್ಹತೆ ಪಡೆಯಬಲ್ಲ 2 ತಂಡಗಳನ್ನು ಆರಿಸಿದ ಸೌರವ್‌ ಗಂಗೂಲಿ!

2026ರ ಐಪಿಎಲ್‌ ಫೈನಲ್‌ಗೇರಬಲ್ಲ 2 ತಂಡಗಳನ್ನು ಆರಿಸಿದ ಗಂಗೂಲಿ!

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಬಲ್ಲ ಎರಡು ತಂಡಗಳನ್ನು ಆಯ್ಕೆ ಮಾಡಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಫೈನಲ್‌ಗೆ ಪ್ರವೇಶಿಸುವ ನೆಚ್ಚಿನ ತಂಡಗಳು ಎಂದು ಹೇಳಿದ್ದಾರೆ.

PSL 2026: ಶತಕ ಸಿಡಿಸಿ ವಿರಾಟ್‌ ಕೊಹ್ಲಿ, ಅಭಿಷೇಕ್‌ ಶರ್ಮಾರ ದಾಖಲೆ ಸರಿಗಟ್ಟಿದ ಬಾಬರ್‌ ಆಝಮ್‌!

ಶತಕ ಸಿಡಿಸಿ ವಿರಾಟ್‌ ಕೊಹ್ಲಿ ದಾಖಲೆ ಸರಿಗಟ್ಟಿದ ಬಾಬರ್‌ ಆಝಮ್‌!

Babar Azam scored Century: ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಬಾಬರ್‌ ಆಝಮ್‌ ಶತಕ ಬಾರಿಸಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇವರು ಪೇಶಾವರ್ ಝಲ್ಮಿ ತಂಡದ ಪರ ಆಡುತ್ತಿದ್ದಾರೆ.ʼ

PBKS vs RR: ಟೇಬಲ್‌ ಟಾಪರ್‌ ಪಂಜಾಬ್‌ ಕಿಂಗ್ಸ್‌ಗೆ ಶಾಕ್‌ ನೀಡಿದ ರಾಜಸ್ಥಾನ್‌ ರಾಯಲ್ಸ್‌!

ಪಂಜಾಬ್‌ ಕಿಂಗ್ಸ್‌ಗೆ ಮೊದಲ ಸೋಲುಣಿಸಿದ ರಾಜಸ್ಥಾನ್‌ ರಾಯಲ್ಸ್‌!

PBKS vs RR Highlights: ಯಶಸ್ವಿ ಜೈಸ್ವಾಲ್‌ ಹಾಗೂ ಡೊನೊವಾನ್‌ ಫೆರೆರಾ ಅವರ ಅರ್ಧಶತಕಗಳ ಬಲದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಅಜೇಯ ಓಟಕ್ಕೆ ಬ್ರೇಕ್‌ ಹಾಕಿದೆ. ಈ ಪಂದ್ಯದಲ್ಲಿ ಆರ್‌ಆರ್‌ ಆರು ವಿಕೆಟ್‌ಗಳಿಂದ ಗೆದ್ದು ಬೀಗಿತು. ಈ ಪಂದ್ಯದ ಫಲಿತಾಂಶದ ಹೊರತಾಗಿಯೂ ಪಾಯಿಂಟ್ಸ್‌ ಟೇಬಲ್‌ನಲ್ಲಿ ಈ ಎರಡೂ ತಂಡಗಳು ತಮ್ಮ-ತಮ್ಮ ಸ್ಥಾನದಲ್ಲಿಯೇ ಉಳಿದಿವೆ.

ʻಹೇ.. ಹೇಮಾಂಗ್‌, ಮೈಂಡ್‌ ಯುವರ್‌ ಬ್ಯುಸಿನೆಸ್‌ʼ: ಡಿಸಿ ಕೋಚ್‌ ಜನ್ಮ ಜಾಲಾಡಿದ ಶ್ರೀಕಾಂತ್‌!

IPL 2026: ಡಿಸಿ ಕೋಚ್‌ ಹೇಮಾಂಗ್‌ ಬದಾನಿಗೆ ಕೆ ಶ್ರೀಕಾಂತ್‌ ತಿರುಗೇಟು!

ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಹೆಡ್‌ ಕೋಚ್‌ ಸ್ಟೀಫನ್‌ ಫ್ಲೇಮಿಂಗ್‌ ಅವರನ್ನು ಟೀಕಿಸಿದ್ದ ಈಗಿನ ಡೆಲ್ಲಿ ಕ್ಯಾಪಿಟಲ್ಸ್‌ ಕೋಚ್‌ ಹೇಮಾಂಗ್‌ ಬದಾನಿ ಅವರನ್ನು ಭಾರತ ತಂಡದ ಮಾಜಿ ಆಟಗಾರ ಕೆ ಶ್ರೀಕಾಂತ್‌ ತಿರುಗೇಟು ನೀಡಿದ್ದಾರೆ. ನೀವು ಬೇರೆಯವರ ಬಗ್ಗೆ ಕಾಮೆಂಟ್‌ ಹಾಕುವ ಬದಲು ನಿಮ್ಮ ಬಗ್ಗೆ ನೀವು ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

RCB vs DC ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ ಜತೆ ಆತ್ಮೀಯ ಸಂಭಾಷಣೆ ನಡೆಸಿದ್ದ ಅಂಪೈರ್‌ ಯಾರು ಗೊತ್ತೆ?

ಕೊಹ್ಲಿಯ ಅಂಡರ್‌-19 ಭಾರತದ ಸಹ ಆಟಗಾರ ಇದೀಗ ಅಂಪೈರ್‌!

ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆಲುವು ಪಡೆದ ಬಳಿಕ ವಿರಾಟ್‌ ಕೊಹ್ಲಿ ಹಾಗೂ ಅಂಪೈರ್‌ ನಡುವೆ ತುಸು ಹೊತ್ತು ಆತ್ಮೀಯ ಸಂಭಾಷಣೆ ನಡೆದಿತ್ತು. ಆ ಫೀಲ್ಡ್‌ ಅಂಪೈರ್‌ ಯಾರೆಂದು ತಿಳಿದದರೆ ನೀವು ಖಂಡಿತಾ ಅಚ್ಚರಿ ಪಡುತ್ತೀರಿ!

IPL 2206: ಪರಿಪರಿಯಾಗಿ ಕೇಳಿಕೊಂಡರೂ ಆಟೋಗ್ರಾಫ್‌ ನೀಡದ ವಿರಾಟ್‌ ಕೊಹ್ಲಿ, ಕಣ್ಣೀರಿಟ್ಟ ಪುಟಾಣಿ ಅಭಿಮಾನಿ! ವಿಡಿಯೊ

ವಿರಾಟ್‌ ಕೊಹ್ಲಿ ಪುಟಾಣಿ ಅಭಿಮಾನಿಯ ಕನಸು ಕಣ್ಣಿರಿನಲ್ಲಿ ಅಂತ್ಯ!

IPL 2026: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಆಟೋಗ್ರಾಫ್‌ ನೀಡಲು ನಿರಾಕರಿಸಿದ ಕಾರಣ ಪುಟಾಣಿ ಅಭಿಮಾನಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿರಾಟ್‌ ಕೊಹ್ಲಿ ಈ ವರ್ತನೆ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

'ನಾನು ಭಾರತೀಯ ಬೌಲರ್‌ಗಳನ್ನು ದ್ವೇಷಿಸುತ್ತೇನೆ': ವಿವಾದಾತ್ಮಕ ಹೇಳಿಕೆ ನೀಡಿದ ಪಾಕ್‌ ಬ್ಯಾಟ್ಸ್‌ಮನ್‌!

ನಾನು ಭಾರತೀಯ ಬೌಲರ್‌ಗಳನ್ನು ದ್ವೇಷಿಸುತ್ತೇನೆ: ಹಸನ್‌ ನವಾಝ್‌!

ಪಾಕಿಸ್ತಾನ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌ ಹಸನ್‌ ನವಾಝ್‌ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಭಾರತದ ಎಲ್ಲಾ ಬೌಲರ್‌ಗಳನ್ನು ನಾನು ದ್ವೇಷಿಸುತ್ತೇನೆಂದು ಹೇಳಿದ ಅವರು, ಭಾರತದ ವಿರುದ್ಧ ಆಡುವಾಗ ಹೆಚ್ಚಿನ ರನ್‌ಗಳನ್ನು ಗಳಿಸಲು ಪ್ರಯತ್ನಿಸುತ್ತೇನೆಂದು ತಿಳಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ಮನು ಭಾಕರ್‌ ಬಳಿ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಟೀಕಿಸಿದ ನೆಟ್ಟಿಗರು!

ʻವೈಭವ್‌ ಸೂರ್ಯವಂಶಿ ಬಗ್ಗೆ ಮನು ಭಾಕರ್‌ಗೆ ಪ್ರಶ್ನೆʼ-ನೆಟ್ಟಿಗರು ಆಕ್ರೋಶ!

ಒಲಿಂಪಿಕ್‌ ಪದಕ ವಿಜೇತೆ ಶೂಟರ್‌ ಮನು ಭಾಕರ್‌ ಬಳಿ ಯುವ ಕ್ರಿಕೆಟಿಗ ವೈಭವ್‌ ಸೂರ್ಯವಂಶಿ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನನ್ನು ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮನು ಬಾಕರ್‌ ಶೂಟರ್‌ ಆಗಿದ್ದು, ಅವರ ಬಳಿ ಶೂಟಿಂಗ್‌ಗೆ ಸಂಬಂಧಿಸಿದ ಪ್ರಶ್ನೆಯನ್ನು ಮಾತ್ರ ಕೇಳಬೇಕು, ಅದು ಬಿಟ್ಟು ಕ್ರಿಕೆಟ್‌ ಬಗ್ಗೆ ಪ್ರಶ್ನೆ ಕೇಳಿ ಅವಮಾನಿಸುತ್ತಿದ್ದೀರಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

IPL 2026 Points Table: ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾದ ಆರ್‌ಸಿಬಿ, ಸೋತ ಡೆಲ್ಲಿ ಲೆಕ್ಕಾಚಾರ ಹೇಗಿದೆ?

IPL 2026: ಪ್ಲೇಆಫ್ಸ್‌ಗೆ ತಲುಪಲು ಆರ್‌ಸಿಬಿಗೆ ಇನ್ನೂ ಎಷ್ಟು ಗೆಲುವು ಬೇಕು?

IPL 2026 Points Table: ಡೆಲ್ಲಿ ಕ್ಯಾಪಿಟಲ್ಸ್‌ ಎದುರು 9 ವಿಕೆಟ್‌ಗಳ ಗೆಲುವಿನ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ ಹಾದಿ ಇನ್ನಷ್ಟು ಸುಲಭವಾಗಿದೆ. ಭುವನೇಶ್ವರ್‌ ಕುಮಾರ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಅವರ ಮಾರಕ ದಾಳಿಯಿಂದ ಡೆಲ್ಲಿ ಸೋಮವಾರದ ಪಂದ್ಯದಲ್ಲಿ ಕೇವಲ 8 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತ್ತು. ನಂತರ 75 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

Loading...