ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ramesh Kote

vishwavani.social@gmail.com

Articles
IND vs SA: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್‌ ಕೊಹ್ಲಿ!

ಸಚಿನ್‌ ದಾಖಲೆ ಮೇಲೆ ವಿರಾಟ್‌ ಕೊಹ್ಲಿ ಕಣ್ಣು!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಒಂದೇ ಒಂದು ಶತಕ ಬಾರಿಸಿದರೆ, ದಕ್ಷಿಣ ಆಫ್ರಿಕಾ ಎದುರು ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ.

IND vs SA: 2027ರ ಏಕದಿನ ವಿಶ್ವಕಪ್‌ ನಿಮಿತ್ತ ರೋಹಿತ್‌ ಶರ್ಮಾಗೆ ಬಿಸಿಸಿಐ ಸಂದೇಶ!

ಏಕದಿನ ವಿಶ್ವಕಪ್‌ ಆಡಬೇಕೆಂದರೆ ನಮ್ಮ ಮಾತು ಕೇಳಿ: ಬಿಸಿಸಿಐ!

BCCI Message to Rohit Sharma: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಈ ಏಕದಿನ ಸರಣಿಯ ಬಳಿಕ ರೋಹಿತ್‌ ಶರ್ಮಾಗೆ ಬಿಸಿಸಿಐ ಸಂದೇಶ ನೀಡಲಿದೆ. ಫಿಟ್‌ನೆಸ್‌ ಬಗ್ಗೆ ಗಮನ ನೀಡುವ ಬಗ್ಗೆ ಊಹಾಪೋಹಗಳನ್ನು ಕೈ ಬಿಟ್ಟು ಮುಂದಿನ ವಿಶ್ವಕಪ್‌ ಟೂರ್ನಿಗೆ ಸಿದ್ದರಾಗಿ ಎಂದು ಬಿಸಿಸಿಐ, ರೋಹಿತ್‌ ಶರ್ಮಾಗೆ ಹೇಳಲಿದೆ.

IND vs SA: ಒಡಿಐ ಸರಣಿಯಲ್ಲಿ ಋತುರಾಜ್‌ ಗಾಯಕ್ವಾಡ್‌ ಆಡಲಿದ್ದಾರೆಂದ ಕೆಎಲ್‌ ರಾಹುಲ್‌!

ಒಡಿಐ ಸರಣಿಯಲ್ಲಿ ಗಾಯಕ್ವಾಡ್‌ ಆಡಲಿದ್ದಾರೆಂದ ಕೆಎಲ್‌ ರಾಹುಲ್‌!

ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಋತುರಾಜ್‌ ಗಾಯಕ್ವಾಡ್‌ ಆಡಲಿದ್ದಾರೆಂದು ಟೀಮ್‌ ಇಂಡಿಯಾದ ಹಂಗಾಮಿ ನಾಯಕ ಕೆಎಲ್‌ ರಾಹುಲ್‌ ಖಚಿತಪಡಿಸಿದ್ದಾರೆ. ಮೊದಲನೇ ಏಕದಿನ ಪಂದ್ಯ ನವೆಂಬರ್‌ 30 ರಂದು ಭಾನುವಾರ ರಾಂಚಿಯಲ್ಲಿ ನಡೆಯಲಿದೆ.

SMAT 2025: ಶತಕ ಬಾರಿಸಿ ರೋಹಿತ್‌ ಶರ್ಮಾರ ವಿಶ್ವ ದಾಖಲೆ ಮುರಿದ ಆಯುಷ್‌ ಮ್ಹಾತ್ರೆ!

ರೋಹಿತ್‌ ಶರ್ಮಾರ ವಿಶ್ವ ದಾಖಲೆ ಮುರಿದ ಆಯುಷ್‌ ಮ್ಹಾತ್ರೆ!

Ayush Mhatre breaks Rohit Sharma Record: ವಿದರ್ಭ ವಿರುದ್ಧದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 49 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಟೀಮ್‌ ಇಂಡಿಯಾ ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ ಸ್ಮೃತಿ ಮಂಧಾನ ಮತ್ತು ಪಲಾಶ್‌ ಮುಚ್ಚಲ್‌ ಇನ್‌ಸ್ಟಾಗ್ರಾಮ್‌ ಬಯೋ!

ಸ್ಮೃತಿ -ಪಲಾಶ್‌ ಇನ್‌ಸ್ಟಾಗ್ರಾಮ್‌ ಬಯೋ ಬದಲಾವಣೆ!

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸಂಗೀತ ನಿರ್ದೇಶಕ ಪಲಾಶ್‌ ಮುಚ್ಚಲ್‌ ಅವರ ವಿವಾಹ ಮಹೋತ್ಸವದ ಕುರಿತು ವದಂತಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಜೋಡಿಯ ಬಗ್ಗೆ ಇದೀಗ ಮತ್ತೊಂದು ಸಂಗತಿ ಬಹಿರಂಗವಾಗಿದೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಬಯೋದಲ್ಲಿ ನಜರ್‌ ಇಮೋಜಿಯನ್ನು ಬಳಸಿರುವುದು ತೀವ್ರ ಕುತೂಹಲ ಕೆರಳಿಸುತ್ತಿದೆ.

IND vs SA: ಟೆಸ್ಟ್‌ ಸರಣಿ ಸೋತ ಭಾರತ ತಂಡದ ವಿರುದ್ಧ ಕಪಿಲ್‌ ದೇವ್ ಆಕ್ರೋಶ!

ಟೆಸ್ಟ್‌ ಸರಣಿ ಸೋತ ಭಾರತದ ವಿರುದ್ಧ ಕಪಿಲ್‌ ದೇವ್‌ ಕಿಡಿ!

ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಆಘಾತ ಅನುಭವಿಸಿದ ಹಿನ್ನೆಲೆ ಟೀಮ್‌ ಇಂಡಿಯಾ ಮಾಜಿ ನಾಯಕ ಕಪಿಲ್‌ ದೇವ್‌ ಬೇಸರ ವ್ಯಕ್ತಪಡಿಸಿದ್ದಾರೆ. ತವರು ನೆಲದ ಟೆಸ್ಟ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ದೇಶಿ ಕ್ರಿಕೆಟ್‌ ಆಡಬೇಕು ಎಂದು ಕಪಿಲ್‌ ದೇವ್‌ ಅಭಿಪ್ರಾಯಪಟ್ಟಿದ್ದಾರೆ.

IND vs SA: ಮೊದಲನೇ ಒಡಿಐನಲ್ಲಿ ರೋಹಿತ್‌ ಶರ್ಮಾ ಜೊತೆ  ಯಶಸ್ವಿ ಜೈಸ್ವಾಲ್‌ ಓಪನರ್‌!

IND vs SA: ರೋಹಿತ್‌ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್‌ ಓಪನರ್‌!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿ ಸೋತಿರುವ ಭಾರತ ತಂಡ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಕುತ್ತಿಗೆ ನೋವಿಗೆ ತುತ್ತಾಗಿರುವ ನಾಯಕ ಶುಭ್‌ಮನ್‌ ಗಿಲ್‌ ಅನುಪಸ್ಥಿತಿಯಲ್ಲಿ ಕೆ ಎಲ್‌ ರಾಹುಲ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಹಿನ್ನೆಲೆ ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸುವವರು ಯಾರು ಎನ್ನುವ ಗೊಂದಲ ಶುರುವಾಗಿದೆ. ಈ ಮಧ್ಯೆ ಯಶಸ್ವಿ ಜೈಸ್ವಾಲ್‌ ಮತ್ತು ಋತುರಾಜ್‌ ಗಾಯಕ್ವಾಡ್‌ ನಡುವೆ ಪೈಪೋಟಿ ನಡೆಯುತ್ತಿದೆ.

IND vs SA: ಶಾಹಿದ್ ಅಫ್ರಿದಿಯ ಸಿಕ್ಸರ್ ಗಳ ವಿಶ್ವ ದಾಖಲೆ ಮುರಿಯಲು ಸನಿಹದಲ್ಲಿ ರೋಹಿತ್ ಶರ್ಮಾ!

ಶಾಹಿದ್‌ ಅಫ್ರಿದಿ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್‌ ಶರ್ಮಾ!

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಪಾಕಿಸ್ತಾನದ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ. ನವೆಂಬರ್ 30 ರಂದು ರಾಂಚಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ. ಮೊದಲನೇ ಏಕದಿನ ಪಂದ್ಯ ನಡೆಯಲಿದೆ.

ಗಾಯದಿಂದ ಗುಣಮುಖರಾಗುತ್ತಿರುವ ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ಬಗ್ಗೆ ಮಾಹಿತಿ ನೀಡಿದ ಮಾರ್ನೆ ಮಾರ್ಕೆಲ್‌!

ಗಿಲ್, ಶ್ರೇಯಸ್‌ ಅಯ್ಯರ್‌ ಬಗ್ಗೆ ಮಾರ್ನೆ ಮಾರ್ಕೆಲ್‌ ಬಿಗ್‌ ಅಪ್‌ಡೇಟ್!

Morne Morkel on Gill, Iyer's Injury Updates: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್‌ 30ರಂದು ಆರಂಭವಾಗಲಿದೆ. ಸರಣಿ ಆರಂಭಕ್ಕೂ ಮುನ್ನ ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್‌, ನಾಯಕ ಶುಭಮನ್‌ ಗಿಲ್ ಮತ್ತು ಉಪ ನಾಯಕ ಶ್ರೇಯಸ್ ಅಯ್ಯರ್ ಅವರ ಗಾಯಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

SMAT 2025: ಅನುಕುಲ್‌ ರಾಯ್‌ ಆಲ್‌ರೌಂಡರ್‌ ಆಟದ ಎದುರು ಸೋಲೊಪ್ಪಿಕೊಂಡ ಕರ್ನಾಟಕ!

KAR vs JHKD: ಕರ್ನಾಟಕ ತಂಡಕ್ಕೆ ಜಾರ್ಖಂಡ್‌ ವಿರುದ್ಧ 2 ವಿಕೆಟ್‌ ಸೋಲು!

ಕರ್ನಾಟಕ ತಂಡ, ಸೈಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿ ಟೂರ್ನಿಯ ಎಲೈಟ್‌ ಡಿ ಪಂದ್ಯದಲ್ಲಿ ಜಾರ್ಖಂಡ್‌ ವಿರುದ್ಧ ಎರಡು ವಿಕೆಟ್‌ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕರ್ನಾಟಕ, ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 157 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿದಿದ ಜಾರ್ಖಂಡ್‌, 19.4 ಓವರ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು 158 ರನ್‌ ಗಳಿಸಿ ಗೆಲುವು ಪಡೆಯಿತು.

ಚಂಡೀಗಢ ವಿರುದ್ಧ 3 ವಿಕೆಟ್‌ ಕಿತ್ತು ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆದ ಅರ್ಜುನ್‌ ತೆಂಡೂಲ್ಕರ್‌!

SMAT: ಚಂಡೀಗಢ ವಿರುದ್ಧ 3 ವಿಕೆಟ್‌ ಕಿತ್ತ ಮರಿ ತೆಂಡೂಲ್ಕರ್‌!

SMAT 2025: ಚಂಡೀಗಢ ವಿರುದ್ಧದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಗೋವಾರ ತಂಡದ ಆಲ್‌ರೌಂಡರ್‌ ಹಾಗೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಅವರು ಬೌಲಿಂಗ್‌ನಲ್ಲಿ ಮಿಂಚಿದರು. ಅವರು ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IND vs SA: ರೋಹಿತ್-ಜೈಸ್ವಾಲ್‌ ಓಪನರ್ಸ್‌, ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

India's Playing XI for 1st ODI: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನವೆಂಬರ್‌ 30 ರಂದು ಮೊದಲನೇ ಏಕದಿನ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಶುಭಮನ್‌ ಗಿಲ್‌ ಅವರ ಅನುಪಸ್ಥಿತಿಯಲ್ಲಿ ಕೆಎಲ್‌ ರಾಹುಲ್‌ ಅವರು ತಂಡವನ್ನು ಮುನ್ನೆಡಸಲಿದ್ದಾರೆ.

ʻರನ್‌ ಗಳಿಸಿಲ್ಲವಾದ್ರೆ, ಸದ್ಯದಲ್ಲಿಯೇ ನಿಮಗೆ ಗೇಟ್‌ಪಾಸ್‌ʼ: ಕೆಎಲ್‌ ರಾಹುಲ್‌ಗೆ ರಾಬಿನ್‌ ಉತ್ತಪ್ಪ ವಾರ್ನಿಂಗ್‌!

ಔಟ್‌ ಆಫ್‌ ಫಾರ್ಮ್‌ ಕೆಎಲ್‌ ರಾಹುಲ್‌ಗೆ ರಾಬಿನ್‌ ಉತ್ತಪ್ಪ ವಾರ್ನಿಂಗ್‌!

Robin Uthappa warns KL Rahul: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ಗೆ ಟೀಮ್‌ ಇಂಡಿಯಾ ಮಾಜಿ ಬ್ಯಾಟರ್‌ ಹಾಗೂ ಕನ್ನಡಿಗ ರಾಬಿನ್‌ ಉತ್ತಪ್ಪ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ನೀವು ಉತ್ತಮ ಪ್ರದರ್ಶನದಲ್ಲಿ ತೋರಿಲ್ಲವಾದರೆ, ತಂಡದಿಂದ ಹೊರ ಬೀಳಬಹುದು ಎಂದಿದ್ದಾರೆ.

ʻಟಿ20 ವಿಶ್ವಕಪ್‌ ಗೆಲ್ಲಿ, ಇಲ್ಲಾಂದ್ರೆ ಮನೆಗೆ ನಡೆಯಿರಿʼ: ಗೌತಮ್‌ ಗಂಭಿರ್‌ಗೆ ಬಿಸಿಸಿಐ ವಾರ್ನಿಂಗ್‌!

ಟಿ20 ವಿಶ್ವಕಪ್‌ ಗೆಲ್ಲುವಂತೆ ಗಂಭೀರ್‌ಗೆ ಟಾರ್ಗೆಟ್‌ ಕೊಟ್ಟಿರುವ ಬಿಸಿಸಿಐ!

ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 0-2 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ಬಗ್ಗೆ ಬಿಸಿಸಿಐ ಅಸಮಾಧಾನವನ್ನು ಹೊಂದಿದೆ. ಹಾಗಾಗಿ ಅವರಿಗೆ ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂದು ಗಂಭೀರ್‌ಗೆ ಗುರಿಯನ್ನು ನೀಡಲಾಗಿದೆ. ಒಂದು ವೇಳೆ ಇಲ್ಲಿ ಸೋತರೆ ಅವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳಬಹುದು.

ಭಾರತ ಟೆಸ್ಟ್‌ ತಂಡದ ಮೂರನೇ ಕ್ರಮಾಂಕದ ರೇಸ್‌ನಲ್ಲಿರುವ ಮೂವರು ಬ್ಯಾಟ್ಸ್‌ಮನ್‌ಗಳು!

ಭಾರತ ತಂಡದ 3ನೇ ಕ್ರಮಾಂಕದ ರೇಸ್‌ನಲ್ಲಿರುವ ಮೂವರು ಬ್ಯಾಟರ್ಸ್‌!

ಚೇತೇಶ್ವರ್‌ ಪೂಜಾರ ಭಾರತ ಟೆಸ್ಟ್‌ ತಂಡದಿಂದ ಹೊರಬಿದ್ದ ಬಳಿಕ ಅವರ ಮೂರನೇ ಕ್ರಮಾಂಕಕ್ಕೆ ಇನ್ನೂ ಸೂಕ್ತ ಬ್ಯಾಟ್ಸ್‌ಮನ್‌ ಸಿಕ್ಕಿಲ್ಲ. ಇಲ್ಲಿಯವರೆಗೆ 7 ಮಂದಿ ಆಟಗಾರರನ್ನು ಮೂರನೇ ಕ್ರಮಾಂಕದಲ್ಲಿ ಪ್ರಯತ್ನಿಸಲಾಗಿದೆ. ಆದರೂ ಯಾವುದೇ ಬ್ಯಾಟ್ಸ್‌ಮನ್‌ ಈ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿಲ್ಲ. ಅಂದ ಹಾಗೆ ಈ ಮೂರನೇ ಕ್ರಮಾಂಕದ ರೇಸ್‌ನಲ್ಲಿ ಇದೀಗ ಮೂವರು ಬ್ಯಾಟ್ಸ್‌ಮನ್‌ ಇದ್ದಾರೆ.

IND vs SA: ‌ʻಭಾರತ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದಾರೆ, ಚಿಂತಿಸುವ ಅಗತ್ಯವಿಲ್ಲʼ-ಎಬಿ ಡಿವಿಲಿಯರ್ಸ್!

IND vs SA: ʻಟೆಸ್ಟ್‌ ಸರಣಿ ಸೋತರೂ ಚಿಂತಿಸಬೇಡಿʼ-ಎಬಿ ಡಿ ವಿಲಿಯರ್ಸ್‌!

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ವೈಟ್‌ವಾಷ್‌ ಆಘಾತ ಅನುಭವಿಸಿದೆ. ಇದರ ಬೆನ್ನಲ್ಲೇ ಭಾರತ ತಂಡದ ಬ್ಯಾಟ್ಸ್‌ಮನ್‌ಗಳ ಪರ ಬ್ಯಾಟ್‌ ಬೀಸಿರುವ ಕ್ರಿಕೆಟ್‌ ದಿಗ್ಗಜ ಎಬಿ ಡಿವಿಲಿಯರ್ಸ್‌, ಭಾರತ ತಂಡದಲ್ಲಿ ಉತ್ತಮ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

IND vs SA: ಭಾರತ ತಂಡದ ಹೆಡ್‌ ಕೋಚ್‌ ಸ್ಥಾನದಿಂದ ಗೌತಮ್‌ ಗಂಭೀರ್‌ರನ್ನು ಕಿತ್ತಾಕಿ ಎಂದ ಮನೋಜ್‌ ತಿವಾರಿ!

ಹೆಡ್‌ ಕೋಚ್‌ ಸ್ಥಾನದಿಂದ ವಜಾ ಮಾಡಿ: ಗಂಭೀರ್‌ ವಿರುದ್ದ ತಿವಾರಿ ಕಿಡಿ!

ಭಾರತ ತಂಡದ ಹೆಡ್‌ ಕೋಚ್‌ ಹುದ್ದೆಯಿಂದ ಗೌತಮ್‌ ಗಂಭೀರ್‌ ಅವರನ್ನು ತೆಗೆದು ಹಾಕಬೇಕೆಂದು ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ ಆಗ್ರಹಿಸಿದ್ದಾರೆ. ಗಂಭೀರ್‌ ಹೆಡ್‌ ಕೋಚ್‌ ಅವಧಿಯಲ್ಲಿ ಭಾರತ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದರೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರದರ್ಶನ ಕುಸಿದಿದೆ. ನ್ಯೂಜಿಲೆಂಡ್‌ ಬಳಿಕ ಇದೀಹ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್‌ವಾಷ್‌ ಆಘಾತ ಅನುಭವಿಸಿದೆ.

IND vs SA: ʻಭಾರತ ಟೆಸ್ಟ್‌ ತಂಡಕ್ಕೆ ಹೊಸ ಕೋಚ್‌ ನೇಮಿಸಬೇಕುʼ-ಬಿಸಿಸಿಐಗೆ ಡಿ.ಸಿ ಮಾಲೀಕ ಮನವಿ!

ಭಾರತ ಟೆಸ್ಟ್‌ ತಂಡಕ್ಕೆ ಹೊಸ ಕೋಚ್‌ ನೇಮಿಸಬೇಕೆಂದ ಪಾರ್ಥ್‌ ಜಿಂದಾಲ್‌!

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಸೋತ ಬೆನ್ನಲ್ಲೇ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಭಾರತೀಯ ಟೆಸ್ಟ್‌ ತಂಡದ ಕಳಪೆ ಪ್ರದರ್ಶನ ದಿಗ್ಗಜರ ಅಸಮಧಾನಕ್ಕೆ ಕಾರಣವಾಗಿದೆ. ಈ ಕುರಿತು ಪೋಸ್ಟ್‌ ಹಂಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯ ಮಾಲೀಕ ಪಾರ್ಥ್‌ ಜಿಂದಾಲ್‌, ಭಾರತ ಟೆಸ್ಟ್‌ ತಂಡಕ್ಕೆ ಹೊಸ ಕೋಚ್‌ ನೇಮಿಸಬೇಕೆಂದು ಆಗ್ರಹಿಸಿದ್ದಾರೆ.

WTC Rankings: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ ಕುಸಿದ ಟೀಮ್‌ ಇಂಡಿಯಾ!‌

ಟೆಸ್ಟ್‌ ಚಾಂಪಿಯನ್‌ಷಿಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕುಸಿದ ಭಾರತ!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಸೋಲಿನೆ ಬೆನ್ನಲ್ಲೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಂಕ ಪಟ್ಟಿ ಬಿಡುಗಡೆಯಾಗಿದ್ದು, ಟೀಮ್‌ ಇಂಡಿಯಾ ಐದನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಪಾಕಿಸ್ತಾನ ತಂಡ ನಾಲ್ಕನೇ ಸ್ಥಾನದಲ್ಲಿಕ್ಕೇರಿದೆ. ಭಾರತದಲ್ಲಿ ದಾಖಲೆಯ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನದಲ್ಲಿದೆ.

ʻಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದು ಯಾರು?ʼ: ಗೌತಮ್‌ ಗಂಭೀರ್‌ ವಿರುದ್ಧ ಮಾತನಾಡಿದವರಿಗೆ ಸುನೀಲ್‌ ಗವಾಸ್ಕರ್‌ ತರಾಟೆ!

ಗೌತಮ್‌ ಗಂಭೀರ್‌ಗೆ ಬೆಂಬಲವಾಗಿ ನಿಂತ ಸುನೀಲ್‌ ಗವಾಸ್ಕರ್!

Sunil Gavaskat Backs Gautam Gambhir: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿ ಸೋಲಿನ ಬಳಿಕ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯ ತರಬೇತುದಾರ ಹುದ್ದೆಯಿಂದ ಇವರನ್ನು ಕೆಳಗೆ ಇಳಿಸಬೇಕೆಂದು ಆಗ್ರಹಗಳು ಕೂಡ ಕೇಳಿ ಬರುತ್ತಿವೆ. ಆದರೆ, ಗಂಭೀರ್‌ ಅವರನ್ನು ಟೀಕಿಸುತ್ತಿರುವವರನ್ನು ಸುನೀಲ್‌ ಗವಾಸ್ಕರ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ʻಇದು ಕೆಟ್ಟ ಅನುಭವʼ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿರುದ್ದ ಮೊಹಮ್ಮದ್‌ ಸಿರಾಜ್‌ ಕಿಡಿ!

ಏರ್‌ ಇಂಡಿಯಾ ಏರ್‌ಲೈನ್‌ ವಿರುದ್ಧ ಮೊಹಮ್ಮದ್‌ ಸಿರಾಜ್‌ ಕಿಡಿ!

ಗುವಾಹಟಿ ಟೆಸ್ಟ್‌ ಮುಗಿಸಿ ಹೈದರಾಬಾದ್‌ಗೆ ಹೊರಟಿದ್ದ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳ ಕಾರಣ ವಿಮಾನ ಹೊರಡುವುದು ವಿಳಂಬವಾಗಿದೆ. ಈ ಕುರಿತು ಬೇಸರ ಹೊರಹಾಕಿರುವ ಸಿರಾಜ್‌ ನನಗೆ ಇದು ಅತ್ಯಂತ ಕೆಟ್ಟ ಅನುಭವ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

IND vs SA: ಭಾರತದ ಬ್ಯಾಟ್ಸ್‌ಮನ್‌ಗಳ ಸ್ಪಿನ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಆರ್‌ ಅಶ್ವಿನ್‌!

ಭಾರತ ಬ್ಯಾಟ್ಸ್‌ಮನ್‌ಗಳ ಸ್ಪಿನ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಅಶ್ವಿನ್‌!

ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಸೈಮನ್‌ ಹಾರ್ಮರ್‌ ಸ್ಪಿನ್‌ ಮೋಡಿಯ ಪರಿಣಾಮವಾಗಿ ಕೋಲ್ಕತಾ ಮತ್ತು ಗುವಾಹಟಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡಿದ್ದರು. ದಕ್ಷಿಣ ಆಫ್ರಿಕಾ ನಿರಂತರವಾಗಿ ಭಾರತ ತಂಡದ ಮೇಲೆ ಒತ್ತಡ ಹೇರಿತು. ಮುಖ್ಯವಾಗಿ ಭಾರತ ತಂಡದ ಬ್ಯಾಟರ್‌ಗಳು ದಕ್ಷಿಣ ಆಫ್ರಿಕಾದ ಸ್ಪಿನ್‌ ಬೌಲಿಂಗ್‌ ಸಮರ್ಥವಾಗಿ ಎದುರಿಸದ ಪರಿಣಾಮ ಭಾರತ ಸರಣಿ ಕಳೆದುಕೊಂಡಿತು ಎಂದು ಹೇಳಿದ್ದಾರೆ.

ಹಿರಿಯ ಕ್ರಿಕೆಟಿಗ ಚೇತೇಶ್ವರ್‌ ಪೂಜಾರ ಬಾಮೈದ ಜೀತ್‌ ಪಬಾರಿ ಆತ್ಮಹತ್ಯೆ!

ಚೇತೇಶ್ವರ್‌ ಪೂಜಾರರ ಬಾಮೈದ ಜೀತ್‌ ಪಬಾರಿ ಆತ್ಮಹತ್ಯೆ!

ಚೇತೇಶ್ವರ ಪೂಜಾರ ಅವರ ಬಾಮೈದ ಜೀತ್ ರಸಿಕ್‌ಭಾಯ್ ಪಬಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ, ತನ್ನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅತ್ಯಚಾರದ ದೂರು ನೀಡಿದ್ದರು ಹಾಗೂ ಇದಾದ ಒಂದು ವರ್ಷದ ಬಳಿಕ ಬುಧವಾರ ಜೀತ್‌ ಪಬಾರಿ ರಾಜ್‌ಕೋಟ್‌ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ʻಭಾರತಕ್ಕೆ ಬರಲು ತಂಡಗಳು ಭಯಪಡುತ್ತಿದ್ದವು, ಈಗ....?ʼ: ಗೌತಮ್‌ ಗಂಭೀರ್‌ ವಿರುದ್ಧ ದಿನೇಶ್‌ ಕಾರ್ತಿಕ್‌ ಕಿಡಿ!

ಟೆಸ್ಟ್‌ ಸರಣಿ ಸೋಲಿನ ಬೆನ್ನಲ್ಲೆ ಭಾರತ ತಂಡದ ವಿರುದ್ಧ ಕಾರ್ತಿಕ್‌ ಕಿಡಿ!

Dinesh karthik on India's Test series loss: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಹೀನಾಯ ಸೋಲಿನ ಬಳಿಕ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌, ಭಾರತ ಟೆಸ್ಟ್‌ ತಂಡವನ್ನು ಕಟುವಾಗಿ ಟೀಕಿಸಿದ್ದಾರೆ. ಈ ಹಿಂದೆ ಭಾರತಕ್ಕೆ ಪ್ರವಾಸ ಮಾಡಲು ಎದುರಾಳಿ ತಂಡಗಳು ಭುಪಡುತ್ತಿದ್ದವು, ಆದರೆ, ಅವರು ತಮ್ಮ ತುಟಿಗಳನ್ನು ನೆಕ್ಕುತ್ತಿದ್ದಾರೆ ಎಂದು ಹೇಳಿದ್ದಾರೆ.

Loading...