ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Kote

[email protected]

Articles
ʻಒಂದು ವರ್ಷ ಪಾಲೋ ಮಾಡಿದೆʼ: ವಿರಾಟ್‌ ಕೊಹ್ಲಿ ಲೈಫ್‌ ಸ್ಟೈಲ್‌ ಬಗ್ಗೆ ಸಂಜು ಸ್ಯಾಮ್ಸನ್‌ ಹೇಳಿಕೆ!

ವಿರಾಟ್‌ ಕೊಹ್ಲಿ ಲೈಫ್‌ ಸ್ಟೈಲ್‌ ಬಗ್ಗೆ ಪ್ರತಿಕ್ರಿಯಿಸಿದ ಸಂಜು ಸ್ಯಾಮ್ಸನ್‌

ವಿರಾಟ್‌ ಕೊಹ್ಲಿಯ ಜೀವನ ಶೈಲಿಯ ಬಗ್ಗೆ ಭಾರತ ತಂಡದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಸಲಹೆಯಂತೆ ಒಂದೂವರೆ ವರ್ಷ ಅವರ ಜೀವನ ಕ್ರಮವನ್ನು ನಾನು ಪಾಲಿಸಿದೆ, ಆದರೆ ತದ ನಂತರ ಅನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತದ ಪ್ಲೇಯಿಂಗ್‌  XI ಆರಿಸಿದ ವಸೀಮ್‌ ಜಾಫರ್‌!

2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆರಿಸಿದ ವಸೀಮ್‌ ಜಾಫರ್‌!

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ತಮ್ಮ ನೆಚ್ಚಿನ ಭಾರತ ತಂಡದ ಪ್ಲೇಯಿಂಗ್ ಇಲೆವೆನ್‌ ಅನ್ನು ಮಾಜಿ ಟೆಸ್ಟ್‌ ಆರಂಭಿಕ ವಸೀಮ್‌ ಜಾಫರ್‌ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಅವರು ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರಿಗೆ ಕೂಡ ಸ್ಥಾನ ನೀಡಿದ್ದಾರೆ. ಪ್ರಸ್ತುತ ಭಾರತ ಏಕದಿನ ತಂಡದಲ್ಲಿ ಈ ಇಬ್ಬರೂ ಆಟಗಾರರು ಆಡುತ್ತಿಲ್ಲ.

PAK vs WI: ರನ್‌ ನೀಡದೆ 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್ಟಿನ್‌ ಗ್ರೀವ್ಸ್‌!

ಸತತ ಮೇಡಿನ್‌ ಓವರ್‌ಗಳ ಮೂಲಕ 5 ವಿಕೆಟ್‌ ಕಬಳಿಸಿದ ಜಸ್ಟಿನ್‌ ಗ್ರೀವ್ಸ್‌!

ಪಾಕಿಸ್ತಾನ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವೇಗಿ ಜಸ್ಟಿನ್‌ ಗ್ರೀವ್ಸ್‌ ಅವರು ಐತಿಹಾಸಿಕ ಬೌಲಿಂಗ್‌ ಸ್ಪೆಲ್‌ ಹಾಕಿದ್ದಾರೆ. ಅವರು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೇಡಿನ್‌ ಓವರ್‌ಗಳ ಐದು ವಿಕೆಟ್‌ ಕಬಳಿಸಿದ ವಿಶ್ವದ ಮೊದಲ ಬೌಲರ್‌ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ. ಅಂತಿಮವಾಗಿ ಇವರು 27ಕ್ಕೆ 5 ಮೂಲಕ ತಮ್ಮ ಬೌಲಿಂಗ್‌ ಮುಗಿಸಿದರು.

IND vs ZIM: ಭಾರತ ಟಿ20ಐ ತಂಡದಿಂದ ಅಭಿಷೇಕ್‌ ಶರ್ಮಾರನ್ನು ಕೈಬಿಡಿ ಎಂದ ಕೆ ಶ್ರೀಕಾಂತ್‌!

ಭಾರತ ಟಿ20 ತಂಡದಿಂದ ಅಭಿಷೇಕ್‌ ಶರ್ಮಾಗೆ ಕೊಕ್‌ ನೀಡಿ: ಶ್ರೀಕಾಂತ್‌!

ಭಾರತದ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್ (ಕ್ರಿಸ್ ಶ್ರೀಕಾಂತ್) ಅವರು, ಕಳಪೆ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ ಕೇವಲ 11 ರನ್‌ಗಳನ್ನು ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.

CWG 2026: ತಮ್ಮ ವೃತ್ತಿ ಜೀವನದ ಎರಡನೇ ಪದಕ ಗೆದ್ದ ಬಿಂದ್ಯಾರಾಣಿ ದೇವಿ, ಭಾರತಕ್ಕೆ ಆರನೇ ಪದಕ!

ಭಾರತಕ್ಕೆ ಆರನೇ ಪದಕ ಗೆದ್ದುಕೊಟ್ಟ ಬಿಂದ್ಯಾರಾಣಿ ದೇವಿ!

CWG 2026: ಪ್ರಸ್ತುತ ನಡೆಯುತ್ತಿರುವ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಆರನೇ ಪದಕ ಬಂದಿದೆ. ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತದ ಬಿಂದ್ಯಾರಾಣಿ ದೇವಿ ಅವರು 58 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅಂದ ಹಾಗೆ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ಇದು 5ನೇ ಪದಕವಾಗಿದೆ.

IND vs ZIM: ವೈಭವ್‌ ಸೂರ್ಯವಂಶಿ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ತಿಳಿಸಿದ ವಿವಿಎಸ್‌ ಲಕ್ಷ್ಮಣ್‌!

ವೈಭವ್‌ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ತಿಳಿಸಿದ ವಿವಿಎಸ್‌ ಲಕ್ಷ್ಮಣ್‌!

IND vs ZIM: ಭಾರತ ಕ್ರಿಕೆಟ್‌ ತಂಡದ ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಆರಂಭ ಪಡೆದಿದ್ದರೂ ವೈಭವ್ ಸೂರ್ಯವಂಶಿ ಇನ್ನೂ ಒಂದು ಪ್ರಮುಖ ಅಂಶದಲ್ಲಿ ಸುಧಾರಿಸಬೇಕಿದೆ ಎಂದು ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸೂರ್ಯವಂಶಿ ತಮ್ಮ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು.

Commonwealth Games ‌2026: ಐತಿಹಾಸಿಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಜ್ಞಾನೇಶ್ವರಿ ಯಾದವ್!

CWG 2026: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಜ್ಞಾನೇಶ್ವರಿ ಯಾದವ್‌!

CWG 2026: ಛತ್ತೀಸ್‌ಗಢದ ಜ್ಞಾನೇಶ್ವರಿ ಯಾದವ್ ಅವರು 2026ರ ಕಾಮನ್‌ವೆಲ್ತ್ ಕ್ರೀಡಾಕೂಡದಲ್ಲಿ 111 ಕೆಜಿ ಭಾರ ಎತ್ತಿ ಹೊಸ ದಾಖಲೆ ಬರೆಯುವ ಜೊತೆಗೆ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಟಾಟಿಯಾಲಾದಲ್ಲಿ ತರಬೇತಿ ಪಡೆಯುತ್ತಿರುವ ಜ್ಞಾನೇಶ್ವರಿ ಅವರು ಸರ್ಕಾರದಿಂದ ದೊರೆತ ಸಹಾಯ ಹಾಗೂ ತಮ್ಮ ನಿರಂತರ ಪರಿಶ್ರಮದ ಬಲದಿಂದ ಇಂದು ಈ ಮಹತ್ವದ ಸಾಧನೆ ಮಾಡಿದ್ದಾರೆ.

IND vs ZIM: ಟಿ20ಐ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡು ವಿವಿಎಸ್‌ ಲಕ್ಷ್ಮಣ್‌ಗೆ ಸಂದೇಶ ರವಾನಿಸಿದ ಶ್ರೇಯಸ್‌ ಅಯ್ಯರ್‌!

IND vs ZIM: ವಿವಿಎಸ್‌ ಲಕ್ಷ್ಮಣ್‌ಗೆ ಸಂದೇಶ ರವಾನಿಸಿದ ಶ್ರೇಯಸ್‌ ಅಯ್ಯರ್‌!

IND vs ZIM: ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅನುಪಸ್ಥಿತಿಯಲ್ಲಿ ತಂಡದ ಜವಾಬ್ದಾರಿ ನಿರ್ವಹಿಸಿದ ವಿವಿಎಸ್ ಲಕ್ಷ್ಮಣ್ ಅವರಿಗೆ ನಾಯಕ ಶ್ರೇಯಸ್‌ ಅಯ್ಯರ್ ಧನ್ಯವಾದ ಅರ್ಪಿಸಿದರು. ಯುಕೆಯ ಕಠಿಣ ಪ್ರವಾಸದ ಬಳಿಕ ಗಂಭೀರ್ ವಿರಾಮ ಪಡೆದಿದ್ದರೆ, ಆಗಸ್ಟ್‌ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ಮತ್ತೆ ಭಾರತ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ.

IND vs ZIM: ಅಭಿಷೇಕ್‌ ಶರ್ಮಾಗೆ ಒಂದು ನ್ಯಾಯ, ಸಂಜುಗ ಒಂದ್ಯ ನ್ಯಾಯವೇ? ಹನುಮ ವಿಹಾರಿ ಪ್ರಶ್ನೆ!

ಅಭಿಷೇಕ್‌ಗೆ ಒಂದು ನ್ಯಾಯ, ಸಂಜುಗೆ ಒಂದು ನ್ಯಾಯವೇ? ಹನುಮ ವಿಹಾರಿ ಪ್ರಶ್ನೆ!

ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರ. ಅವರು ಒಂದೇ ಒಂದು ಅರ್ಧಶತಕವನ್ನು ಈ ಸರಣಿಯಲ್ಲಿ ಗಳಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಪ್ರತಿಕ್ರಿಯೆ ನೀಡಿದ್ದಾರೆ.

IND vs ZIM: ವೈಭವ್‌ ಸೂರ್ಯವಂಶಿಯಿಂದ ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾ ಸ್ಥಾನಕ್ಕೆ ಕುತ್ತು?

ವೈಭವ್‌ ಸೂರ್ಯವಂಶಿಯಿಂದ ಅಭಿಷೇಕ್‌ ಶರ್ಮಾಗೆ ಆತಂಕ!

IND vs ZIM: ಭಾರತ ಹಾಗೂ ಜಿಂಬಾಬ್ವೆ ನಡುವಣ ಮೂರು ಪಂದ್ಯಗಳ ಟಿ20ಐ ಸರಣಿ ಮುಕ್ತಾಯವಾಗಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡ 3-0 ಅಂತರದಲ್ಲಿ ಟಿ20ಐ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ಈ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರು ಬ್ಯಾಟಿಂಗ್‌ ವೈಫಲ್ಯವನ್ನು ಅನುಭವಿಸಿದ್ದರು. ಅವರು ಮೂರೂ ಪಂದ್ಯಗಳಲ್ಲಿ ಬ್ಲೆಸಿಂಗ್‌ ಮುಝರಾಬಾನಿಗೆ ವಿಕೆಟ್‌ ಒಪ್ಪಿಸಿದ್ದರು.

ಶುಭಮನ್‌ ಗಿಲ್‌ ಬೇಡ, ರೋಹಿತ್‌ ಶರ್ಮಾ ಜೊತೆ ವೈಭವ್‌ ಸೂರ್ಯವಂಶಿ ಇನಿಂಗ್ಸ್‌ ಆರಂಭಿಸಬೇಕೆಂದ ಫಾರೂಖ್‌ ಇಂಜಿನಿಯರ್‌!

ರೋಹಿತ್‌ ಜೊತೆ ವೈಭವ್‌ ಇನಿಂಗ್ಸ್‌ ಆರಂಭಿಸಬೇಕು: ಫಾರೂಕ್‌ ಇಂಜಿನಿಯರ್‌!

ಭಾರತ ಏಕದಿನ ಕ್ರಿಕೆಟ್‌ ತಂಡದಲ್ಲಿ ವೈಭವ್‌ ಸೂರ್ಯವಂಶಿ ಅವರು ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಬೇಕೆಂದು ಮಾಜಿ ವಿಕೆಟ್‌ ಕೀಪರ್‌ ಫಾರೂಖ್‌ ಇಂಜಿನಿಯರ್‌ ಅವರು ಸಲಹೆ ನೀಡಿದ್ದಾರೆ. ಆ ಮೂಲಕ ನಾಯಕ ಶುಭಮನ್‌ ಗಿಲ್‌ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಹೇಳಿದ್ದಾರೆ. ಭಾರತ ತಂಡ, ಮುಂದಿನ ಏಕದಿನ ಸರಣಿಯನ್ನು ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಿದೆ.

IND vs ZIM:29 ಎಸೆತಗಳಲ್ಲಿ 60 ರನ್‌ ಸಿಡಿಸಿ ಎಂಎಸ್‌ ಧೋನಿಯ ದಾಖಲೆಯನ್ನು ಮುರಿದ ತಿಲಕ್‌ ವರ್ಮಾ!

IND vs ZIM: ಎಂಎಸ್‌ ಧೋನಿಯ ದಾಖಲೆ ಮುರಿದ ತಿಲಕ್‌ ವರ್ಮಾ!

ಜಿಂಬಾಬ್ವೆ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ ಆಡುವ ಮೂಲಕ ಭಾರತ ತಂಡದ ಉಪ ನಾಯಕ ತಿಲಕ್‌ ವರ್ಮಾ ಅವರು, ಮಾಜಿ ನಾಯಕ ಎಂಎಸ್‌ ಧೋನಿಯ ದಾಖಲೆಯನ್ನು ಮುರಿದಿದ್ದಾರೆ. ಅವರು ಆಡಿದ ಕೇವಲ 29 ಎಸೆತಗಳಲ್ಲಿ 200ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿ ಅಜೇಯ 60 ರನ್‌ಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 90 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು.

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ ಬೆನ್ನಲ್ಲೆ ಯುವ ಸಮುದಾಯಕ್ಕೆ ದಿನೇಶ್‌ ಕಾರ್ತಿಕ್‌ ವಿಶೇಷ ಸಂದೇಶ!

ಭಾರತದ ಯುವ ಸಮುದಾಯಕ್ಕೆ ವಿಶೇಷ ಸಂದೇಶ ರವಾನಿಸಿದ ದಿನೇಶ್‌ ಕಾರ್ತಿಕ್‌!

2026ರ ನೀಟ್‌-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಸಂಬಂಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌, ಯುವ ಸಮುದಾಯವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತದ ಯುವ ಸಮುದಾಯಕ್ಕೆ ಸ್ಪಷ್ಟ ದೃಷ್ಟಿಕೋನ, ಪರಸ್ಪರ ಸಹಕಾರ ಮತ್ತು ನಿರಂತರ ಹೋರಾಟದ ಮನೋಭಾವವನ್ನು ದಿನೇಶ್ ಕಾರ್ತಿಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

IND vs ZIM: ಕಿಶನ್‌, ತಿಲಕ್‌ ಅಬ್ಬರಕ್ಕೆ ನಡುಗಿದ ಜಿಂಬಾಬ್ವೆ, ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!

ಜಿಂಬಾಬ್ವೆ ಎದುರು 2ನೇ ಪಂದ್ಯ ಗೆದ್ದು, ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!

IND vs ZIM 2nd T20I Highlights: ಇಶಾನ್‌ ಕಿಶನ್‌ ಹಾಗೂ ತಿಲಕ್‌ ವರ್ಮಾ ಅವರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಭಾರತ ತಂಡ, ಎರಡನೇ ಪಂದ್ಯದಲ್ಲಿಯೂ ಜಿಂಬಾಬ್ವೆ ಎದುರು 90 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್‌ ಇಂಡಿಯಾ 2-0 ಅಂತರದಲ್ಲಿ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿತು. 44 ಎಸೆತಗಳಲ್ಲಿ 81 ರನ್‌ ಸಿಡಿಸಿದ ಇಶಾನ್‌ ಕಿಶನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IND vs ZIM: ಭಾರತದ ಪರ ಎರಡನೇ ಪಂದ್ಯದಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶ್‌ ಠಾಕೂರ್‌ ಯಾರು?

ಭಾರತದ ಪರ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶ್‌ ಠಾಕೂರ್‌ ಯಾರು?

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಜುಲೈ 25 ರಂದು ಶನಿವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತದ ಪರ ಯುವ ವೇಗಿ ಯಶ್‌ ಠಾಕೂರ್‌ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಮೊದಲನೇ ಪಂದ್ಯದಲ್ಲಿ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಶೋಕ್‌ ಶರ್ಮಾ ಅವರ ಸ್ಥಾನದಲ್ಲಿ ಎರಡನೇ ಪಂದ್ಯವನ್ನು ಆಡುವ ಅವಕಾಶವನ್ನು ಯಶ್‌ ಠಾಕೂರ್‌ ಪಡೆದರು.

Jhandu Kumar: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ತರಕಾರಿ ವ್ಯಾಪಾರಿ!

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ತರಕಾರಿ ವ್ಯಾಪಾರಿ!

ಪ್ರಸ್ತುತ ನಡೆಯುತ್ತಿರುವ 2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ತನ್ನ ಖಾತೆಯನ್ನು ತೆರೆದಿದೆ. ಜುಲೈ 24 ರಂದು ಪುರುಷರ ಹೆವೀವೇಟ್‌ ವಿಭಾಗದಲ್ಲಿ ಪ್ಯಾರಾ ಪವರ್‌ ಲಿಫ್ಟರ್‌ ಝಂಡು ಕುಮಾರ್‌ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅಂದಹಾಗೆ ಝಂಡು ಕುಮಾರ್‌ ಅವರ ಬಗ್ಗೆ ಇಲ್ಲಿ ಆಸಕ್ತದಾಯಕ ಅಂಶಗಳನ್ನು ಇಲ್ಲಿ ವಿವರಿಸಿದ್ದಾರೆ.

ʻ3 ವೈಫಲ್ಯದ ಬಳಿಕ ವೈಭವ್‌ ಸೂರ್ಯವಂಶಿಗೆ ಕೊಕ್‌ʼ-ಕೋಚ್‌ ಗಂಭೀರ್‌ ಮೇಲೆ ರೇಗಿದ ಕೆ ಶ್ರೀಕಾಂತ್!

ವೈಭವ್‌ ವಿಚಾರವಾಗಿ ಗೌತಮ್‌ ಗಂಭೀರ್‌ ವಿರುದ್ಧ ಕೆ ಶ್ರೀಕಾಂತ್‌ ಕಿಡಿ!

ಇಂಗ್ಲೆಂಡ್‌ನಲ್ಲಿ ಮೂರು ಟಿ20ಐ ಪಂದ್ಯಗಳ ವೈಫಲ್ಯದ ಬಳಿಕ ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಯನ್ನು ಕೈ ಬಿಟ್ಟ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವಿರುದ್ದ ಮಾಜಿ ಸೆಲೆಕ್ಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ ಕಿಡಿಕಾರಿದ್ದಾರೆ. ಕೇವಲ 3 ಪಂದ್ಯಗಳ ವೈಫಲ್ಯದ ಬಳಿಕ ಕೈ ಬಿಟ್ಟಿರುವುದು ಅವರ ವಿಶ್ವಾಸವನ್ನು ಕುಗ್ಗಿಸಿದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

IND vs ZIM 2nd T20I: ಟಾಸ್‌ ಗೆದ್ದು ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ ಜಿಂಬಾಬ್ವೆ!

IND vs ZIM 2nd T20I: ಟಾಸ್‌ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್!

IND vs ZIM 2nd T20I Match Toss, Playing XI: ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಇದೀಗ ನಡೆಯುತ್ತಿರುವ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಜಿಂಬಾಬ್ವೆ ನಾಯಕ ಸಿಕಂದರ್‌ ರಾಝಾ ಅವರು ಮೊದಲು ಬೌಲಿಂಗ್‌ ಆರಿಸಿಕೊಂಡಿದ್ದಾರೆ. ಆ ಮೂಲಕ ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.

IND vs ZIM: ಮೊದಲನೇ ಟಿ20ಐ ಗೆದ್ದರೂ ಭಾರತ ತಂಡವನ್ನು ಪ್ರಶ್ನಿಸಿದ ಆಕಾಶ್‌ ಚೋಪ್ರಾ!

ಮೊದಲನೇ ಟಿ20ಐ ಗೆದ್ದರೂ ಭಾರತ ತಂಡವನ್ನು ಪ್ರಶ್ನಿಸಿದ ಆಕಾಶ್‌ ಚೋಪ್ರಾ!

IND vs ZIM: ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದರೂ, ಮಾಜಿ ಭಾರತದ ಟೆಸ್ಟ್‌ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ನ ಪ್ಲೇಯಿಂಗ್‌ XI ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ರೋಹಿತ್‌ ಶರ್ಮಾ ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ!

ರೋಹಿತ್‌ ಶರ್ಮಾ ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ ಉಪಾಧ್ಯಕ್ಷ!

ರೋಹಿತ್‌ ಶರ್ಮಾ ಅವರ ಏಕದಿನ ಕ್ರಿಕೆಟ್‌ ನಿವೃತ್ತಿಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ತೆರೆ ಎಳೆದಿದ್ದಾರೆ. ರೋಹಿತ್‌ ಶರ್ಮಾ ಅವರು ಭಾರತ ತಂಡದ ಭಾಗವಾಗಿ ಉಳಿಯಲಿದ್ದಾರೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವುದನ್ನು ಮುಂದುವರಿಸಲಿದ್ದಾರೆಂದು ಅವರು ತಿಳಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯೇ ರೋಹಿತ್‌ ಪಾಲಿಗೆ ಕೊನೆ ಎಂದು ಹೇಳಲಾಗುತ್ತಿತ್ತು. ಆದರೆ, ಅವರು ಆ ಪಂದ್ಯದಲ್ಲಿ ಶತಕ ಸಿಡಿಸಿ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದರು.

Breaking News: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಧರ್ಮೇಂದ್ರ ಪ್ರಧಾನ್‌!

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಧರ್ಮೇಂದ್ರ ಪ್ರಧಾನ್‌!

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್‌ ಅವರು ಜುಲೈ 25 ರಂದು ಶನಿವಾರಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಹೆಚ್ಚುತ್ತಿರುವ ರಾಜಕೀಯ ಒತ್ತಡದ ನಡುವೆ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

IND vs ZIM: ಮಯಾಂಕ್‌ ಯಾದವ್‌, ಅಶೋಕ ಶರ್ಮಾ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸುನೀಲ್‌ ಜೋಶಿ!

ಮಯಾಂಕ್‌ ಯಾದವ್‌, ಅಶೋಕ ಶರ್ಮಾ ಬಗ್ಗೆ ದೊಡ್ಡ ಭವಿಷ್ಯ ನುಡಿದ ಜೋಶಿ!

ಯುವ ವೇಗದ ಬೌಲರ್‌ಗಳಾದ ಮಯಾಂಕ್ ಯಾದವ್ ಮತ್ತು ಅಶೋಕ್ ಶರ್ಮಾ ಅವರು ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ಪ್ರಮುಖ ಸೇರ್ಪಡೆಗಳು ಎಂದು ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಭಾರತ ತಂಡದ ಹಂಗಾಮಿ ಬೌಲಿಂಗ್ ಕೋಚ್ ಸುನಿಲ್ ಜೋಶಿ ಬಣ್ಣಿಸಿದ್ದಾರೆ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ದೃಷ್ಟಿಯಿಂದ ವೇಗದ ಬೌಲರ್‌ಗಳ ಹೆಚ್ಚಿನ ಆಯ್ಕೆಗಳನ್ನು ಹೊಂದುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಇಬ್ಬರು ಹೊಸಬರಿಗೆ ಚೊಚ್ಚಲ ಸ್ಥಾನ? ಶ್ರೀಲಂಕಾ ಟೆಸ್ಟ್‌ ಸರಣಿಗೆ ಭಾರತ ಸಂಭಾವ್ಯ ಆಟಗಾರರ ತಂಡ!

ಶ್ರೀಲಂಕಾ ಟೆಸ್ಟ್‌ ಸರಣಿಗೆ ಭಾರತ ಸಂಭಾವ್ಯ ಆಟಗಾರರ ತಂಡದ ವಿವರ!

India's Likely Test Squad for Sri lanka series: 2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಋತುವಿನಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲು ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ, ಶ್ರೀಲಂಕಕ್ಕೆ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ಅತಿ ಶೀರ್ಘದಲ್ಲಿ ಭಾರತ ಟೆಸ್ಟ್‌ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಸರಣಿಯಲ್ಲಿ ಭಾರತ ತಂಡದ ಪರ ಇಬ್ಬರು ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಬೆನ್‌ ಸ್ಟೋಕ್ಸ್‌ ನಿವೃತ್ತಿ ಬೆನ್ನಲ್ಲೆ ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕತ್ವಕ್ಕೆ ಜೋ ರೂಟ್‌ ಮರಳಲು ಸಜ್ಜು!

ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕತ್ವಕ್ಕೆ ಮರಳಲು ಜೋ ರೂಟ್‌ ಸಜ್ಜು!

Joe Root Likely to retun England Test Captaincy: ಬೆನ್‌ ಸ್ಟೋಕ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕತ್ವಕ್ಕೆ ಜೋ ರೂಟ್‌ ಮರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಸೋಲಿನ ಬಳಿಕ ಇಂಗ್ಲೆಂಡ್‌ ಟೆಸ್ಟ್‌ ತಂಡದಲ್ಲಿ ಈ ಬೆಳವಣಿಗೆಗೆಳು ನಡೆದಿವೆ.

Loading...