ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Kote

[email protected]

Articles
ಟಿ20 ಕ್ರಿಕೆಟ್‌ ಅನ್ನು ಸ್ಪರ್ಧಾತ್ಮಕವಾಗಿರಿಸಲು ಮೂರು ನಿಯಮಗಳ ಸಲಹೆ ನೀಡಿದ ಗ್ರೇಗ್‌ ಚಾಪೆಲ್‌!

ಟಿ20 ಕ್ರಿಕೆಟ್‌ಗೆ 3 ನಿಯಮಗಳ ಸಲಹೆ ನೀಡಿದ ಗ್ರೇಗ್‌ ಚಾಪೆಲ್‌!

ಪ್ರಸ್ತುತ ಟಿ20 ಕ್ರಿಕೆಟ್ ನಿರ್ಣಾಯಕ ಹಂತದತ್ತ ಸಾಗುತ್ತಿದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೇಗ್‌ ಚಾಪೆಲ್‌ ಎಚ್ಚರಿಕೆ ನೀಡಿದ್ದಾರೆ. ಟಿ20 ಸ್ವರೂಪದ ಆಟ ಇದೀಗ ಅತಿಯಾಗಿ ಬ್ಯಾಟರ್‌ಗಳ ಪರ ವಾಲಿರುವುದರಿಂದ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಟಿ20 ಕ್ರಿಕೆಟ್‌ನಲ್ಲಿ ಮೂರು ಬದಲಾವಣೆಯನ್ನು ಅವರು ಸೂಚಿಸಿದ್ದಾರೆ.

Night club Controversy: ಮೊದಲನೇ ಟೆಸ್ಟ್‌ ಗೆದ್ದ ಬೆನ್ನಲ್ಲೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದ ಬೆನ್‌ ಸ್ಟೋಕ್ಸ್‌!

ಮೊದಲನೇ ಟೆಸ್ಟ್‌ ಜಯದ ಬಳಿಕ ಬೆನ್‌ ಸ್ಟೋಕ್ಸ್‌ಗೆ ದೊಡ್ಡ ಸಂಕಷ್ಟ!

ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದ ಗೆಲುವಿನ ಬಳಿಕ ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಹಾಗೂ ಅವರ ಸಹ ಆಟಗಾರ ಗಸ್‌ ಅಟ್ಕಿನ್ಸನ್‌ ಅವರು ಲಂಡನ್‌ನ ನೈಟ್‌ ಕ್ಲಬ್‌ವೊಂದರಲ್ಲಿ ರಗ್ಬಿ ಆಟಗಾರನ ಜೊತೆಗೆ ಕಿರಿಕ್‌ ಮಾಡಿಕೊಂಡಿದ್ದಾರೆ. ಇದು ವಿವಾದವನ್ನು ಹುಟ್ಟು ಹಾಕಿದ್ದು, ಇದಕ್ಕಾಗಿ ಇಂಗ್ಲೆಂಡ್‌ ನಾಯಕನ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

T20 Mumbai League: ಗಾಯಗೊಂಡ ಬಾಲಕನಿಗೆ ಚೆಂಡು ನೀಡಿ ಫ್ಯಾನ್ಸ್‌ ಹೃದಯ ಗೆದ್ದ ಮರಿ ತೆಂಡೂಲ್ಕರ್‌!

ಬಾಲಕನಿಗೆ ಚೆಂಡು ನೀಡಿ ಫ್ಯಾನ್ಸ್‌ ಹೃದಯ ಗೆದ್ದ ಮರಿ ತೆಂಡೂಲ್ಕರ್‌!

2026ರ ಟಿ20 ಮುಂಬೈ ಲೀಗ್‌ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಆಲ್‌ರೌಂಡ್ ಪ್ರದರ್ಶನವನ್ನು ತೋರಿದರು. ಅವರು ಮೊದಲು ಬೌಲಿಂಗ್‌ನಲ್ಲಿ 11 ರನ್‌ಗೆ 3 ವಿಕೆಟ್‌ ಕಿತ್ತ ಬಳಿಕ, ಬ್ಯಾಟಿಂಗ್‌ನಲ್ಲಿ 34 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದರು. ಅವರು ಮುಶೀರ್ ಖಾನ್ ಅವರೊಂದಿಗೆ 116 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು, ಇದರಿಂದಾಗಿ ಆರ್ಕ್ಸ್ ಅಂಧೇರಿ ತಂಡ, ಬಾಂದ್ರಾ ಬ್ಲಾಸ್ಟರ್ಸ್ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿತು.

ಋತುರಾಜ್‌ ಗಾಯಕ್ವಾಡ್‌ ಶತಕದ ಬಲದಿಂದ ಶ್ರೀಲಂಕಾ ಎ ತಂಡವನ್ನು ಮಣಿಸಿದ ಭಾರತ -ಎ!

ಶ್ರೀಲಂಕಾ ʻಎʼ ವಿರುದ್ಧ ಭಾರತ ʻಎʼ ತಂಡಕ್ಕೆ 8 ರನ್‌ ಜಯ!

IND-A vs SL-A Match Highlights: ಋತುರಾಜ್‌ ಗಾಯಕ್ವಾಡ್‌ ಅವರ ಶತಕದ ಬಲದಿಂದ ಭಾರತ ಎ ತಂಡ, ಆತಿಥೇಯ ಶ್ರೀಲಂಕಾ ಎ ತಂಡದ ವಿರುದ್ಧ 8 ರನ್‌ಗಳ ಜಯ ಸಾಧಿಸಿತು. ಆ ಮೂಲಕ ಮೂರು ರಾಷ್ಟ್ರಗಳ ತ್ರಿಕೋನ ಎ ಸರಣಿಯಲ್ಲಿ ಭಾರತ ಎ ತಂಡ ಶುಭಾರಂಭ ಕಂಡಿದೆ. 101 ರನ್‌ ಗಳಿಸಿದ ಗಾಯಕ್ವಾಡ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಶುಭಮನ್‌ ಗಿಲ್‌, ಕೆಎಲ್‌ ರಾಹುಲ್‌ ಅಲ್ಲವೇ ಅಲ್ಲ! ಭಾರತದ ಬೆಸ್ಟ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಹೆಸರಿಸಿದ ಆರ್‌ ಅಶ್ವಿನ್‌

ಭಾರತದ ಬೆಸ್ಟ್‌ ಟೆಸ್ಟ್‌ ಬ್ಯಾಟರ್‌ ಆರಿಸಿದ ಆರ್‌ ಅಶ್ವಿನ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಹೊರತಾಗಿಯೂ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟಸ್ಟ್‌ ಪಂದ್ಯದಲ್ಲಿ ರಿಷಭ್‌ ಪಂತ್‌ 81 ರನ್‌ ಗಳಿಸಿದರು. ಆ ಮೂಲಕ ತಮ್ಮ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ತಮ್ಮ ಫಾರ್ಮ್‌ ಅನ್ನು ಮುಂದುವರಿಸಿದ್ದಾರೆ. ಹಾಗಾಗಿ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಗುಣಗಾನ ಮಾಡಿದ್ದಾರೆ.

ʻಆರ್‌ಸಿಬಿಗೆ ಸೇರ್ಪಡೆಯಾಗಲು ನನಗೆ ಇಷ್ಟವಿರಲಿಲ್ಲʼ:‌ ಹಳೆಯ ದಿನಗಳನ್ನು ಮೆಲುಕು ಹಾಕಿದ ರಜತ್‌ ಪಾಟಿದಾರ್!

ನಿಜವಾಗಲೂ ಆರ್‌ಸಿಬಿಗೆ ಸೇರಲು ಇಷ್ಟವಿರಲಿಲ್ಲ: ರಜತ್‌ ಪಾಟಿದಾರ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸತತ ಎರಡನೇ ಪ್ರಶಸ್ತಿ ಗೆದ್ದುಕೊಟ್ಟು 10 ದಿನಗಳ ಬಳಿಕ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅವರು 2022ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿಗೆ ಸೇರಲು ಇಷ್ಟವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಐರ್ಲೆಂಡ್‌, ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗಳಿಂದ ಮೊಹಮ್ಮದ್‌ ಸಿರಾಜ್‌ ವಿಶ್ರಾಂತಿ!

ಐರ್ಲೆಂಡ್‌, ಇಂಗ್ಲೆಂಡ್‌ ಟಿ20ಐ ಸರಣಿಗಳಿಂದ ಸಿರಾಜ್‌ಗೆ ವಿಶ್ರಾಂತಿ!

ಮೊಹಮ್ಮದ್‌ ಸಿರಾಜ್‌ ಅವರನ್ನು ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಯೋಜನೆಯ ಭಾಗವಾಗಿ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಭಾರತದ ಟಿ20 ಸರಣಿಗಳಿಂದ ವಿಶ್ರಾಂತಿ ನೀಡಲಾಗಿದೆ. ಮುಂದಿರುವ ದೀರ್ಘ ಸೀಮಿತ ಓವರ್‌ಗಳ ಕ್ರಿಕೆಟ್ ಋತುವನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ತನ್ನ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಸಿರಾಜ್ ಅವರ ಸ್ಥಾನಕ್ಕೆ ಪ್ರಸಿಧ್‌ ಕೃಷ್ಣ ಅವರನ್ನು ಟಿ20 ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಅಫ್ಘಾನಿಸ್ತಾನ ಏಕದಿನ ಸರಣಿಯನ್ನು ಆಡಲು ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯಗೆ ಗ್ರೀನ್‌ ಸಿಗ್ನಲ್‌!

ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿದ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ!

IND vs AFG: ರೋಹಿತ್‌ ಶರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ ಅವರು ಫಿಟ್‌ನೆಸ್‌ ಪಾಸ್‌ ಮಾಡಿದ್ದಾರೆ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದಾರೆ. ಆದರೆ, ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ವಿರಾಟ್‌ ಕೊಹ್ಲಿ ಈ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಜೂನ್‌ 13 ರಂದು ಏಕದಿನ ಸರಣಿ ಆರಂಭವಾಗಲಿದೆ.

IND vs AFG:‌ ʻ80 ರನ್‌ ಸಾಕಾ?ʼ: ರಿಷಭ್‌ ಪಂತ್‌ಗೆ ಉಪಯುಕ್ತ ಸಲಹೆ ನೀಡಿದ ಆರ್‌ ಅಶ್ವಿನ್!

ರಿಷಭ್‌ ಪಂತ್‌ಗೆ ಉಪಯುಕ್ತ ಸಲಹೆ ನೀಡಿದ ಆರ್‌ ಅಶ್ವಿನ್‌!

ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯದಲ್ಲಿ 81 ರನ್‌ ಗಳಿಸಿದ ಹೊರತಾಗಿಯೂ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌, ರಿಷಭ್‌ ಪಂತ್‌ ಅವರ ಪ್ರದರ್ಶನದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರು 80 ರನ್‌ ಗಳಿಸುವುದಲ್ಲ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಬೇಕೆಂದು ಸಲಹೆ ನೀಡಿದ್ದಾರೆ. ಅಂದ ಹಾಗೆ ಈ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್‌ ಹಾಗೂ 300 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು.

ವೈಭವ್‌ ಸೂರ್ಯವಂಶಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಕ್ಸಸ್‌ ಆಗುವುದು ಅನುಮಾನ ಎಂದ ಎಬಿ ಡಿ ವಿಲಿಯರ್ಸ್‌!

ವೈಭವ್‌ ಸೂರ್ಯವಂಶಿ ಟೆಸ್ಟ್‌ನಲ್ಲಿ ಸಕ್ಸಸ್‌ ಆಗುವುದು ಅನುಮಾನ: ಎಬಿಡಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಮೂಲಕ 776 ರನ್‌ಗಳನ್ನು ಸಿಡಿಸಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಅವರ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ 15ನೇ ವಯಸ್ಸಿನ ಆಟಗಾರ ಟೆಸ್ಟ್‌ ಭವಿಷ್ಯದ ಬಗ್ಗೆ ಎಬಿಡಿ ಮಾತನಾಡಿದ್ದಾರೆ.

ಭಾರತ ಟಿ20 ತಂಡದಿಂದ ಹೊರಬಿದ್ದ ಬೆನ್ನಲ್ಲೆ 72 ರನ್‌ ಸಿಡಿಸಿದ ಸೂರ್ಯಕುಮಾರ್‌ ಯಾದವ್‌!

36 ಎಸೆತಗಳಲ್ಲಿ 72 ರನ್‌ ಸಿಡಿಸಿದ ಸೂರ್ಯಕುಮಾರ್‌ ಯಾದವ್‌!

ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡ ಬೆನ್ನಲ್ಲೆ ಮಾಜಿ ನಾಯಕ ಸೂರ್ಯಕುಮಾರ್‌ ಯಾದವ್‌ ತಮ್ಮ ಬ್ಯಾಟ್‌ ಮೂಲಕವೇ ಬಿಸಿಸಿಐಗೆ ತಿರುಗೇಟು ನೀಡಿದ್ದಾರೆ, ಅವರು ಟಿ20 ಮುಬೈ ಲೀಗ್‌ ಟೂರ್ನಿಯ ಪಂದ್ಯವೊಂದರಲ್ಲಿ ಕೇವಲ 36 ಎಸೆತಗಳಲ್ಲಿ 72 ರನ್‌ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಸೀಸನ್‌ನಲ್ಲಿ ಸೂರ್ಯ ಪಾಲಿಗೆ ಇದು ಮೊದಲನೇ ಅರ್ಧಶತಕವಾಗಿದೆ.

Women's T20 World Cup: ವೆಸ್ಟ್‌ ಇಂಡೀಸ್‌ ಎದುರು ಭಾರತ ಮಹಿಳಾ ತಂಡಕ್ಕೆ 26 ರನ್‌ ಜಯ!

ವಿಂಡೀಸ್‌ ಎದುರು ಅಭ್ಯಾಸ ಪಂದ್ಯ ಗೆದ್ದ ಭಾರತ ವನಿತೆಯರು!

ಭಾರತಿ ಫುಲ್ಮಾಲಿ ಅರ್ಧಶತಕ ಹಾಗೂ ಶ್ರೇಯಾಂಕ ಪಾಟೀಲ್‌ ಸ್ಪಿನ್‌ ಮೋಡಿಯ ನೆರವಿನಿಂದ ಭಾರತ ಮಹಿಳಾ ತಂಡ, 2026ರ ಮಹಿಳಾ ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ 26 ರನ್‌ಗಳ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, 179 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ವಿಂಡೀಸ್‌ ಮಹಿಳಾ ತಂಡ 153 ರನ್‌ಗಳಿಗೆ ಸೀಮಿತವಾಯಿತು.

IPL 2027: ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಎಂಎಸ್‌ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

ಸಿಎಸ್‌ಕೆಯಲ್ಲಿ ಎಂಎಸ್‌ಡಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಒಂದೇ ಒಂದು ಪ೦ದ್ಯವನ್ನು ಕೂಡ ಆಡಲಿಲ್ಲ. ಅವರು ಗಾಯಗಳ ಸಮಸ್ಯೆಯಿಂದ ಸೀಸನ್‌ ಪೂರ್ತಿ ಬೆಂಚ್‌ನಲ್ಲಿಯೇ ಕಾಲ ಕಳೆಯಬೇಕಾಯಿತು. ಇದೀಗ ಅವರು 2027ರ ಟೂರ್ನಿಯಲ್ಲಿ ಆಡುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ.

ʻಟೆಸ್ಟ್‌ ಕ್ರಿಕೆಟ್‌ಗೆ ಅಪಾರ ಗೌರವ, ಕಠಿಣ ಪರಿಶ್ರಮದ ಅಗತ್ಯವಿದೆʼ: ಮಾನವ್‌ ಸುತಾರ್‌!

ತಮ್ಮ ಚೊಚ್ಚಲ‌ ಟೆಸ್ಟ್ ಪಂದ್ಯದ ಸಾಧನೆ ಬಗ್ಗೆ ಮಾನವ್‌ ಸುತಾರ್‌ ಪ್ರತಿಕ್ರಿಯೆ

ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿಯೇ 6 ವಿಕೆಟ್‌ ಸಾಧನೆ ಮಾಡಿ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡದ ದಾಖಲೆಯ ಗೆಲುವಿಗೆ ನೆರವು ನೀಡಿದ ಮಾನವ್‌ ಸುತಾರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಅವರು ಟೆಸ್ಟ್‌ ಕ್ರಿಕೆಟ್‌ನ ಮೌಲ್ಯದ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs AFG: 6 ವಿಕೆಟ್‌ ಸಾಧನೆ ಮಾಡಿದ ಮಾನವ್‌ ಸುತಾರ್‌ ಬಗ್ಗೆ ಸುನೀಲ್‌ ಗವಾಸ್ಕರ್‌ ದೊಡ್ಡ ಭವಿಷ್ಯ!

6 ವಿಕೆಟ್‌ ಕಿತ್ತ ಮಾನವ್‌ ಸುತಾರ್‌ ಬಗ್ಗೆ ಗವಾಸ್ಕರ್‌ ದೊಡ್ಡ ಹೇಳಿಕೆ!

ಮುಲ್ಲಾನ್‌ಪುರ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ ಡೆಬ್ಯೂಟಂಟ್‌ ಮಾನವ್ ಸುತಾರ್ ಅವರ ಬೌಲಿಂಗ್ ನಿಯಂತ್ರಣ ಮತ್ತು ಸರಳವಾದ ಕ್ರಮವನ್ನು ಭಾರತದ ಮಾಜಿ ನಾಯಕ ಹಾಗೂ ಬ್ಯಾಟಿಂಗ್‌ ದಂತಕಥೆ ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.

IND vs IRE: ಜಸ್‌ಪ್ರೀತ್‌ ಬುಮ್ರಾ ಭವಿಷ್ಯದ ಪಾತ್ರದ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಪ್ರಶ್ನೆ!

ಜಸ್‌ಪ್ರೀತ್‌ ಬುಮ್ರಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಮಾಂಜ್ರೇಕರ್‌!

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಮುಂಬರುವ ಟಿ20ಐ ಸರಣಿಗಳ ಭಾರತ ತಂಡದಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಪ್ರಶ್ನೆ ಮಾಡಿದ್ದಾರೆ. ಹಿರಿಯ ವೇಗಿಯ ಭವಿಷ್ಯದ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ʻಅವರಿಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲʼ: ಸೂರ್ಯಕುಮಾರ್‌ಗೆ ಕೊಕ್‌ ನೀಡಿದ ಬಗ್ಗೆ ರೋಹಿತ್‌ ಶರ್ಮಾ ಪ್ರತಿಕ್ರಿಯೆ!

ʻಸೂರ್ಯಕುಮಾರ್‌ಗೆ ಯಾವುದೂ ಸುಲಭವಾಗಿ ಲಭಿಸಿಲ್ಲʼ: ರೋಹಿತ್‌ ಶರ್ಮಾ!

ಭಾರತ ಟಿ20 ತಂಡದಿಂದ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೈ ಬಿಟ್ಟಿರುವ ಬಗ್ಗೆ ಟೀಮ್‌ ಇಂಡಿಯಾ ಮಾಜಿ ನಾಯಕ ಹಾಗೂ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈ ಟಿ20 ಲೀಗ್‌ ಪಂದ್ಯದ ವೇಳೆ ಪ್ರತಿಕ್ರಿಯಿಸಿದ ಅವರು, ಸೂರ್ಯಕುಮಾರ್‌ ಯಾದವ್‌ ಅವರಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಯಾವುದೂ ಕೂಡ ಸುಲಭವಾಗಿ ಲಭಿಸಿಲ್ಲ ಎಂದು ಹೇಳಿದ್ದಾರೆ.

ಗೌತಮ್‌ ಗಂಭೀರ್‌ ಇಟ್ಟಿರುವ ನಂಬಿಕೆಯಿಂದ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು: ಸಾಯಿ ಸುದರ್ಶನ್‌!

ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಗಂಭೀರ್‌ ಕಾರಣ ಎಂದ ಸುದರ್ಶನ್!

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಮೊದಲನೇ ದಿನ 81 ರನ್‌ ಗಳಿಸಿದ ಸಾಯಿ ಸುದರ್ಶನ್‌ ಭಾರತ ತಂಡದ ನಂಬಿಕೆಯನ್ನು ಉಳಿಸಿಕೊಂಡರು. ಮೊದಲನೇ ದಿನದಾಟದ ಅಂತ್ಯಕ್ಕೆ ತಮ್ಮ ಬ್ಯಾಟಿಂಗ್‌ ಪ್ರದರ್ಶನದ ಹಿಂದೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ಬೆಂಬಲ ಹಾಗೂ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

15ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ಭಾರತ ತಂಡಕ್ಕೆ ಆಯ್ಕೆಯಾಗಿ ತೆಂಡೂಲ್ಕರ್‌ ದಾಖಲೆ ಮುರಿದ ವೈಭವ್!

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗಳ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ 15ನೇ ವಯಸ್ಸಿನ ವೈಭವ್‌ ಸೂರ್ಯವಂಶಿ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಈ ದಾಖಲೆಯ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ವೈಭವ್‌ಗೆ ಇಷ್ಟು ಬೇಗ ಚಾನ್ಸ್‌ ಏಕೆ? ಸೂರ್ಯಕುಮಾರ್‌ಗೆ ಕೊಕ್‌ ನೀಡಿದ್ದೇಕೆ? ಬಿಸಿಸಿಐಗೆ ಅಶ್ವಿನ್‌ ಪ್ರಶ್ನೆ!

ʻಸೂರ್ಯಕುಮಾರ್‌ಗೆ ಅನ್ಯಾಯವಾಗಿದೆʼ: ಬಿಸಿಸಿಐ ವಿರುದ್ಧ ಅಶ್ವಿನ್‌ ಕಿಡಿ!

ವೈಭವ್‌ ಸೂರ್ಯವಂಶಿ ಇನ್ನೂ ಚಿಕ್ಕ ಹುಡುಗನಾಗಿದ್ದು, ಅವರು ಭಾರತ ತಂಡಕ್ಕೆ ಆಡಲು ಇನ್ನಷ್ಟು ದಿನಗಳ ಕಾಲ ಕಾಯಬಹುದಿತ್ತು ಹಾಗೂ ಸೂರ್ಯಕುಮಾರ್‌ ಯಾದವ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಾಗಿತ್ತು ಎಂದು ಸ್ಪಿನ್‌ ದಿಗ್ಗಜ ವೈಭವ್‌ ಸೂರ್ಯವಂಶಿ ತಿಳಿಸಿದ್ದಾರೆ.

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಗ್ಗೆ ಸೂರ್ಯಕುಮಾರ್‌ ಯಾದವ್‌ ಪ್ರತಿಕ್ರಿಯೆ!

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಗ್ಗೆ ಸೂರ್ಯ ಪ್ರತಿಕ್ರಿಯೆ!

ಭಾರತದ ಟಿ20 ತಂಡದ ನೂತನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಟಿ20ಐ ತಂಡದ ನಾಯಕತ್ವದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ ಅವರಿಗೆ ವಹಿಸಿದೆ. ಡಿಸೆಂಬರ್ 2023ರಿಂದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡದಿದ್ದ ಅಯ್ಯರ್ ಅವರಿಗೆ ಇದೀಗ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಸತತ ಎರಡು ಐಪಿಎಲ್‌ ಗೆದ್ದರೂ ರಜತ್‌ ಪಾಟಿದಾರ್‌ಗೆ ಭಾರತ ಟಿ20 ತಂಡದಲ್ಲಿ ಏಕೆ ಸ್ಥಾನವಿಲ್ಲ?

ರಜತ್‌ ಪಾಟಿದಾರ್‌ಗೆ ಭಾರತ ಟಿ20 ತಂಡದಲ್ಲಿ ಏಕೆ ಸ್ಥಾನವಿಲ್ಲ?

India's T20I Squad: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಸತತ ಎರಡು ಬಾರಿ ಚಾಂಪಿಯನ್‌ ಮಾಡಿದ ಹೊರತಾಗಿಯೂ ರಜತ್‌ ಪಾಟಿದಾರ್‌ ಅವರಿಗೆ ಭಾರತ ಟಿ20ಐ ತಂಡದಲ್ಲಿ ಸ್ಥಾನವನ್ನು ನೀಡಿಲ್ಲ. ಇದಕ್ಕೆ ಕಾರಣವೇನೆಂದು ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ವಿವರಿಸಿದ್ದಾರೆ.

IND vs AFG: ತಮ್ಮ ತವರು ಅಭಿಮಾನಿಗಳ ಎದುರು 11ನೇ ಟೆಸ್ಟ್‌ ಶತಕ ಪೂರೈಸಿದ ಶುಭಮನ್‌ ಗಿಲ್!

IND vs AFG: 11ನೇ ಟೆಸ್ಟ್‌ ಶತಕ ಪೂರೈಸಿದ ಶುಭಮನ್‌ ಗಿಲ್!

Shubman Gill century: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ಫಾರ್ಮ್‌ ಅನ್ನು ಇದೀಗ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿಯೂ ಶುಭಮನ್‌ ಗಿಲ್‌ ಮುಂದುವರಿಸಿದ್ದಾರೆ. ಅವರು ಪಂದ್ಯದ ಮೊದಲನೇ ದಿನ ತಮ್ಮ ಟೆಸ್ಟ್‌ ವೃತ್ತಿ ಜೀವನದ 11ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದಾರೆ.

ಭಾರತ ಟಿ20 ತಂಡದಿಂದ ಸೂರ್ಯಕುಮಾರ್‌ ಯಾದವ್‌ಗೆ ಕೊಕ್‌ ನೀಡಲು ಕಾರಣವೇನು?

ಭಾರತ ತಂಡದಿಂದ ಸೂರ್ಯಕುಮಾರ್‌ಗೆ ಕೊಕ್‌ ನೀಡಲು ಕಾರಣವೇನು?

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಟಿ20ಐ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, 2026ರ ಐಸಿಸಿ ಟಿ20 ವಿಶ್ವಕಪ್‌ ಗೆಲುವಿನ ಹೊರತಾಗಿಯೂ ಸೂರ್ಯಕುಮಾರ್‌ ಯಾದವ್‌ ಅವರನ್ನು ನಾಯಕತ್ವ ಹಾಗೂ ತಂಡದಿಂದ ಕೊಕ್‌ ನೀಡಲಾಗಿದೆ. ಶ್ರೇಯಸ್‌ ಅಯ್ಯರ್‌ಗೆ ನಾಯಕತ್ವ ನೀಡಲಾಗಿದ್ದು, ಸೂರ್ಯಕುಮಾರ್‌ ಅವರನ್ನು ಕೈ ಬಿಡಲು ಕಾರಣವೇನೆಂದು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್‌ ಅಗರ್ಕರ್‌ ತಿಳಿಸಿದ್ದಾರೆ.

Loading...