ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Profile

ಶ್ರೀವತ್ಸ ಜೋಶಿ

columnist

info4@vishwavani.news

ದಕ್ಷಿಣಕನ್ನಡ (ಈಗಿನ ಉಡುಪಿ) ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಊರಿನವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದು ದಿಲ್ಲಿ, ಹೈದರಾಬಾದ್, ಬೆಂಗಳೂರು ಮುಂತಾದ ಕಡೆ ಉದ್ಯೋಗದ ನಂತರ ಈಗ ಇಪ್ಪತ್ತು ವರ್ಷಗಳಿಂದ ಅಮೆರಿಕದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ರಾಜಧಾನಿ ವಾಷಿಂಗ್ಟನ್‌ನಲ್ಲಿ ಐಬಿ‌ಎಂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ವರ್ಜಿನಿಯಾ ಸಂಸ್ಥಾನದ ರೆಸ್ಟನ್ ನಗರದಲ್ಲಿ ಪತ್ನಿ ಸಹನಾ ಮತ್ತು ಪುತ್ರ ಸೃಜನ್‌ನೊಂದಿಗೆ ವಾಸಿಸುತ್ತಿದ್ದಾರೆ. ಕನ್ನಡ ನಾಡು-ನುಡಿ-ಭಾಷೆ-ಸಂಸ್ಕೃತಿಯ ಕುರಿತು ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆಯೂ ಆಸಕ್ತಿ ಹೊಂದಿರುವ ಶ್ರೀವತ್ಸ ಜೋಶಿ, ೨೦೦೨ರಲ್ಲಿ ಆರಂಭಿಸಿ ಈಗಲೂ ಕನ್ನಡ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದಾರೆ. ಅವರ ‘ವಿಚಿತ್ರಾನ್ನ’, ‘ಪರಾಗಸ್ಪರ್ಶ’, ಮತ್ತು ‘ತಿಳಿರುತೋರಣ’ ಅಂಕಣಬರಹಗಳು ಪುಸ್ತಕಗಳ ರೂಪದಲ್ಲಿಯೂ ಪ್ರಕಟವಾಗಿವೆ. 2016ರಿಂದ ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ‘ತಿಳಿರುತೋರಣ’ ಅಂಕಣದ ಪ್ರತಿಯೊಂದು ಲೇಖನವನ್ನು ಧ್ವನಿಮುದ್ರಣ ಮಾಡಿ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ವಿತರಿಸುವುದರಿಂದ ಈ ಅಂಕಣ ಬಹುರೂಪಗಳಲ್ಲಿ ಜನಪ್ರಿಯವಾಗಿದೆ. ಶ್ರೀವತ್ಸ ಜೋಶಿಯವರ ಇದುವರೆಗಿನ ಒಟ್ಟು 17 ಪುಸ್ತಕಗಳ ಪೈಕಿ ಐದು, ವಾಷಿಂಗ್ಟನ್‌ನಲ್ಲಿರುವ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾದ ‘ಲೈಬ್ರರಿ ಆಫ್ ಕಾಂಗ್ರೆಸ್’ ಪುಸ್ತಕಭಂಡಾರದಲ್ಲಿವೆ. ವಾಷಿಂಗ್ಟನ್ ಡಿ.ಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘ, ಮತ್ತು ಅಮೆರಿಕದ ಇತರ ಕನ್ನಡ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಶ್ರೀವತ್ಸ ಜೋಶಿ, ಕಡಲಾಚೆ ಕನ್ನಡ ಭಾಷೆ-ಸಂಸ್ಕೃತಿ ಪಸರಿಸುವುದರಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಜಗದಗಲ ಓದುಗಮಿತ್ರರನ್ನು ಹೊಂದಿದ್ದಾರೆ. ಇವರು ಕಳೆದ ೩೦೦ ವಾರಗಳಿಂದ ನಡೆಸಿಕೊಂಡು ಬಂದಿರುವ ಸ್ವಚ್ಛ ಭಾಷೆ ಅಭಿಯಾನ ಸರಣಿ ಕಲಿಕೆಯು ತುಂಬ ಜನಪ್ರಿಯವಾಗಿದೆ.

Articles
Srivathsa Joshi Column: ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?

ಕನಕದಾಸರು ಆ ಬಾಳೆಹಣ್ಣನ್ನು ತಿನ್ನಲೇ ಇಲ್ಲವೇಕೆ ?

ಕುಟುಂಬ, ಸಮಾಜ ಅನ್ನೋದಕ್ಕೆಲ್ಲ ಅರ್ಥವೇ ಇಲ್ಲ. ಮಾನವೀಯ ಸಂಬಂಧಗಳ ಒಂದೊಂದು ಎಳೆಯೂ ಛಿದ್ರಛಿದ್ರ. ಕಾಡಿನಲ್ಲಾದರೂ ಪ್ರಾಣಿಗಳೆಲ್ಲ ಒಂದು ಅಲಿಖಿತ ನೀತಿ ನಿಯಮ ಪಾಲಿಸಿ ಸಹಬಾಳ್ವೆ ನಡೆಸುತ್ತಿರುವಾಗ ನಾಡಿನ ಮನುಷ್ಯಪ್ರಾಣಿ ಅವುಗಳಿಗಿಂತಲೂ ಕಡೆ ಎನ್ನಿಸಿಕೊಳ್ಳುವಂಥ ಅಸಹ್ಯ ಅನೂಹ್ಯ ಸನ್ನಿವೇಶ!

Srivathsa Joshi Column: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇನ್ನೂ ಇಪ್ಪತ್ತೆಂಟು ಹೆಸರು ಬೇಕೆ?

ಸ್ತ್ರೀ ಎಂದರೆ ಅಷ್ಟೇ ಸಾಕೆ? ಇನ್ನೂ ಇಪ್ಪತ್ತೆಂಟು ಹೆಸರು ಬೇಕೆ?

ಅಷ್ಟಾಧ್ಯಾಯೀ ಮತ್ತು ಅಮರಕೋಶ- ಇವೆರಡೂ ಸಂಸ್ಕೃತ ಭಾಷೆ ಹಾಗೂ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆಯಲು ಬಯಸುವವರಿಗೆ ಅತ್ಯಂತ ಉಪಯುಕ್ತ ಗ್ರಂಥಗಳು. ಹಿಂದೆಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಅಧಿಕೃತ ಶಿಕ್ಷಣ ಆರಂಭವಾಗುವ ಮೊದಲೇ ಇವೆರಡನ್ನು ಕಂಠಪಾಠ ಮಾಡಿಸುವುದು ಸಾಮಾನ್ಯ ಪದ್ಧತಿಯಾಗಿತ್ತಂತೆ.

Srivathsa Joshi Column: ಒಡಲ ಜಾಗಟೆಯ ಮಾಡಿ ಬಿಡದೆ ಢಣಢಣರೆಂದು ಬಡಿದು...

ಒಡಲ ಜಾಗಟೆಯ ಮಾಡಿ ಬಿಡದೆ ಢಣಢಣರೆಂದು ಬಡಿದು...

ಘಂಟಾಪಥ ಅಂದರೆ ರಾಜಮಾರ್ಗ; ಕೊರಳಿಗೆ ಘಂಟಾ ವಾದ್ಯವನ್ನು ಕಟ್ಟಿರುವ ಆನೆಗಳು ಸಂಚರಿಸುವ ಮಾರ್ಗ. ಘಂಟಾಪಾಟಲೀ ಅಂದರೆ ಘಂಟಾ ವಾದ್ಯದಂತಿರುವ ಒಂದು ಹೂವು. ಘಂಟಾಲೀ ಅಂದರೆ ಘಂಟಾ ವಾದ್ಯಗಳ ಸಾಲು. ಘಂಟಿಕಾ ಅಂದರೆ ಚಿಕ್ಕದಾದ ಘಂಟಾ ವಾದ್ಯ. ಘಂಟಾಪಾತ್ರೆ ಅಂದರೆ ಕೆಮಿಸ್ಟ್ರಿ ಲ್ಯಾಬೊರೇಟರಿಯಲ್ಲಿ ಬಳಕೆಯಾಗುವ ಪರಿಕರ.

Srivathsa Joshi Column: ಟ್ರಾಜಿಡಿ ಅಂದ್ರೆ ಅಜಗೀತೆ, ಲಾಸ್ಟ್‌ ಮೆಲೊಡಿ ಹಂಸಗೀತೆ

ಟ್ರಾಜಿಡಿ ಅಂದ್ರೆ ಅಜಗೀತೆ, ಲಾಸ್ಟ್‌ ಮೆಲೊಡಿ ಹಂಸಗೀತೆ

ಒಟ್ಟಾರೆಯಾಗಿ ದುರಂತಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ದಶಕಗಳ ಹಿಂದಿನ ಭೋಪಾಲ್ ವಿಷಾನಿಲ ದುರಂತ, ಚೆರ್ನೊಬಿಲ್ ಅಣುಸ್ಥಾವರ ದುರಂತ, ಬೆಂಗಳೂರಿನಲ್ಲಿ ವೀನಸ್ ಸರ್ಕಸ್ ದುರಂತ, ಗಂಗಾರಾಮ್ ಕಟ್ಟಡ ಕುಸಿತದ ದುರಂತ, ಅಮೆರಿಕದಲ್ಲಿ ವಿಶ್ವ ವಾಣಿಜ್ಯ ಕೇಂದ್ರ ಅವಳಿಗೋಪುರ ದುರಂತ, ಜಪಾನ್‌ನಲ್ಲಿ ಭೂಕಂಪ, ಇಂಡೊನೇಷ್ಯಾದಲ್ಲಿ ತ್ಸುನಾಮಿ ಹೀಗೆ ಭಾರಿ ದುರಂತಗಳಿಂದ ಹಿಡಿದು ‘ಮ್ಯಾನ್‌ಹೋಲ್ ದುರಂತ, ಮೂವರ ಸಾವು’, ‘ಗರ್ಭಿಣಿ ಫೋಟೊಶೂಟ್ ವೇಳೆ ದುರಂತ, ಮೊದಲ ಮಗು ಸಾವು’ ಎಂದು ಮುಂತಾಗಿ ದುರಂತಗಳ ಸುದ್ದಿಗಳು ಅಂತ್ಯವಿಲ್ಲದವಾಗುತ್ತವೆ.

Srivathsa Joshi Column: ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ... ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ ನರರೇನು ಭಾವಿಸುವರದರಂತೆ ಕಾಣುವನು ಎಂದಿದ್ದಾರೆ ನಿಜಗುಣ ಶಿವಯೋಗಿಗಳು. ಭಗವಂತನು ಭಕ್ತರ ಮನೋಭಾವ ಮತ್ತು ಭಕ್ತಿಯ ತೀವ್ರತೆಗೆ ತಕ್ಕಂತೆ ವಿವಿಧ ರೂಪಗಳಲ್ಲಿ ಸಾಕ್ಷಾತ್ಕಾರವಾಗುತ್ತಾನೆ.

Srivathsa Joshi Column: ಗ್ವಾಕಮೂಲಿಯ ಮೂಲವಸ್ತುವಿನ ಹೆಸರಿನ ಮೂಲ

ಗ್ವಾಕಮೂಲಿಯ ಮೂಲವಸ್ತುವಿನ ಹೆಸರಿನ ಮೂಲ

ಆವಕಾಡೊ ಬಹುತೇಕ ಕೊಬ್ಬಿನ ಅಂಶ ಹೆಚ್ಚು ಇರುವ ಖಾದ್ಯವಾದರೂ ಅದು ದೇಹಕ್ಕೆ ಒಳ್ಳೆಯ ಕೊಬ್ಬು. “ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಭಗವಂತನ ಹಾಗೆ" ದೇಹದೊಳಗಿನ ಕೆಟ್ಟ ಕೊಲೆ ಸ್ಟ್ರಾಲ್ ಅನ್ನು ನಾಶಪಡಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುವಂತೆ ಮಾಡುತ್ತದೆ; ಪೊಟ್ಯಾಸಿಯಂ, ಪ್ರೋಟೀನ್, ಇ-ವಿಟಮಿನ್ ಮುಂತಾಗಿ ಪೋಷಕಾಂಶಗಳನ್ನು ಒದಗಿಸುತ್ತದೆ- ಎಂಬಿತ್ಯಾದಿ ಗುಣಗಾನ ವೂ ಇರುವುದರಿಂದ ಈಗಿನ ಹೆಲ್ತ್ ಕಾನ್ಷಿಯಸ್ ಪ್ರಜೆಗಳಿಗೆ ಆವಕಾಡೊ ಮೇಲೆ ಹೆಚ್ಚಿನ ಒಲವು.

Srivathsa Joshi Column: ಫೆಬ್ರವರಿ: ಕಿರಿಯ ತಿಂಗಳ ಹಿರಿಮೆಯ ಕುರಿತೊಂದು ಲಹರಿ

ಫೆಬ್ರವರಿ: ಕಿರಿಯ ತಿಂಗಳ ಹಿರಿಮೆಯ ಕುರಿತೊಂದು ಲಹರಿ

ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ 29 ದಿನಗಳಿರುತ್ತವೆ, ಅದನ್ನು ಅಧಿಕವರ್ಷ ಎನ್ನುತ್ತೇವೆ, ಭೂಮಿಯು ಸೂರ್ಯನ ಸುತ್ತ ಸುತ್ತಲಿಕ್ಕೆ 365 ದಿನಗಳಿಗಿಂತ ತುಸು ಹೆಚ್ಚು ಸಮಯ ಬೇಕಾಗುವುದು, ನಾಲ್ಕು ವರ್ಷಗಳಲ್ಲಿ ಆ ಸಮಯವು ಒಂದು ದಿನದಷ್ಟಾಗುವುದು, ಅದೇ ಅಧಿಕ ದಿನ ಫೆಬ್ರವರಿಯ 29ನೆಯ ತಾರೀಕು. ಇಸವಿಯು ನಾಲ್ಕರಿಂದ ನಿಶ್ಶೇಷ ಭಾಗವಾದರೆ ಆ ಇಸವಿ ಅಧಿಕ ವರ್ಷ.

Srivathsa Joshi Column: ವನಭೋಜನ ಏಕೆ ವಿಶೇಷ ರುಚಿಕರ ಎಂದೆನಿಸುತ್ತದೆ ?

ವನಭೋಜನ ಏಕೆ ವಿಶೇಷ ರುಚಿಕರ ಎಂದೆನಿಸುತ್ತದೆ ?

ಅಶ್ವತ್ಥಕಟ್ಟೆ ಇದ್ದದ್ದು ನಮ್ಮ ಅಡಿಕೆತೋಟದ ಒಂದು ಬದಿಯಲ್ಲಿ, ಮನೆಗೆ ಹತ್ತಿರದಲ್ಲೇ. ಆದ್ದರಿಂದ ಹೆಚ್ಚಿನೆಲ್ಲ ಶಾಕಪಾಕಾದಿ ಅಡುಗೆಯನ್ನು, ಚಿತ್ರಾನ್ನ, ಆಂಬೊಡೆ ಹಪ್ಪಳ-ಸಂಡಿಗೆ ಮುಂತಾದ ಭಕ್ಷ್ಯಗಳನ್ನು, ಮನೆಯಲ್ಲೇ ಮಾಡಿ ಅಲ್ಲಿಗೆ ತಗೊಂಡು ಹೋದದ್ದು. ಸಾಂಕೇತಿಕ ವಾಗಿ ಒಂದೆರಡು ಐಟಂ ಮಾತ್ರ- ಸ್ವಲ್ಪ ಪಾಯಸ ಮತ್ತು ನೈವೇದ್ಯಕ್ಕೆ ಒಂದಿಷ್ಟು ಅನ್ನ- ಅಲ್ಲಿಯೇ ಬೇಯಿಸಿದ್ದಿರಬಹುದು.

Srivathsa Joshi Column: ಚ್ಯೂಯಿಂಗ್‌ʼಗಮ್ಮ ಗಮ್ಮಾಡಿಸ್ತಾವ ಹಲ್ಲಿಗೀ, ಮತ್ತ ಗ್ವಾಡಿಗೀ...

ಚ್ಯೂಯಿಂಗ್‌ʼಗಮ್ಮ ಗಮ್ಮಾಡಿಸ್ತಾವ ಹಲ್ಲಿಗೀ, ಮತ್ತ ಗ್ವಾಡಿಗೀ...

ನ್ಯೂಯಾರ್ಕ್ ನಗರದ ಥಾಮಸ್ ಆಡಮ್ಸ್ ಜೂನಿಯರ್ ಎಂಬ ಸಂಶೋಧಕರು ಚಿಕಲ್‌ನಿಂದ ರಬ್ಬರ್ ತಯಾರಿಸಲೆತ್ನಿಸಿದಾಗ ಅದು ರಬ್ಬರಿನಂತೆ ಗಟ್ಟಿಯಾಗಲೇ ಇಲ್ಲ. ಅದನ್ನು ಕುದಿಸಿ ಚ್ಯೂ ಯಿಂಗ್ ಗಮ್ ತಯಾರಿಸಿ 1870ರಲ್ಲಿ ಮಾರುಕಟ್ಟೆಗೆ ತಂದರು. ಹೀಗೆ ಪ್ರಪಂಚಕ್ಕೆ ಗಮ್ ಮೆಲ್ಲುವ ಚಟ ಕಲಿಸಿದ ಕೀರ್ತಿಗೆ ಪಾತ್ರರಾದರು. ಬಬಲ್‌ಗಮ್ ಮೊದಲ ಬಾರಿಗೆ 1906ರಲ್ಲಿ ತಯಾರಾಯಿತಾದರೂ ಅದು ಪರಿಪೂರ್ಣ ಗೊಂಡು, ಮಾರಾಟಕ್ಕೆ ಬಂದದ್ದು 1928ರ ವೇಳೆಗೆ.

Srivathsa Joshi Column: ದಿನರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾಗುವುದು

ದಿನರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾಗುವುದು

ಚಿ.ಉದಯಶಂಕರ್ ಬರೆದ ಸಾಹಿತ್ಯದಲ್ಲೇ ‘ಹೇನೋ’ ಅಂತ ಇತ್ತೇ? ದಿನರಾತ್ರಿ ಹೇನಿನ ಕಾಟ (ತುರಿಕೆ, ನೋವು) ತಾಳಲಾರದ ಹೀರೋ “ದಿನರಾತ್ರಿಯಲಿ ಏಕಾಂತದಲಿ ಏಕೋ ಹೇನೋ ನೋವಾಗುವುದು" ಎಂದಿರಬಹುದೇ? ಆದರೆ ಅಲ್ಲೂ ಒಂದು ವಿರೋಧಾಭಾಸ ಉಂಟಾಗುತ್ತದೆ. ಹಗಲೂ ರಾತ್ರಿಯೂ ಏಕಾಂತದಲ್ಲೇ ಇದ್ದರೆ ತಲೆಯಲ್ಲಿ ಹೇನು ಎಲ್ಲಿಂದ ಬರಲು ಸಾಧ್ಯ? ಹಾಗಾಗಿ ಆ ತರ್ಕವನ್ನು ಅಲ್ಲಿಗೇ ಬಿಟ್ಟುಬಿಟ್ಟೆ

Srivathsa Joshi Column: ಲೋಕವೇ ಹೇಳಿದ ಮಾತಿದು...ಆದರೆ ಮೂಲತಃ ಏನದು ?

ಲೋಕವೇ ಹೇಳಿದ ಮಾತಿದು...ಆದರೆ ಮೂಲತಃ ಏನದು ?

ಋಷಿಮೂಲ, ನದಿಮೂಲಗಳನ್ನೆಲ್ಲ ಹುಡುಕಬಾರದು ಎನ್ನುತ್ತಾರೆ, ಆದರೆ ಲೋಕೋಕ್ತಿಗಳ ಮೂಲವನ್ನು ಹುಡುಕುತ್ತ ಹೊರಟರೆ ತಪ್ಪಿಲ್ಲ. ಮಾತ್ರವಲ್ಲ ಇನ್ನೂ ಹೊಸಹೊಸ ವಿಚಾರಗಳು, ವಿಷಯಗಳು ಇದರಿಂದ ನಮ್ಮೆದುರು ತೆರೆದುಕೊಳ್ಳುತ್ತವೆ ಮತ್ತು ಜ್ಞಾನವರ್ಧನೆಗೆ ಸಹಾಯ ವಾಗುತ್ತವೆ. ಅಂಥ ಕೆಲವು ಪ್ರಸಿದ್ಧ ಲೋಕೋಕ್ತಿ/ನುಡಿಗಟ್ಟುಗಳ ಬಗ್ಗೆ ವ್ಯಾಖ್ಯಾನ-ವಿಶ್ಲೇಷಣೆಗಳನ್ನು ಇಲ್ಲಿ ಒಟ್ಟುಹಾಕಿದ್ದೇನೆ.

Srivathsa Joshi Column: ಪರೋಪಕಾರಿ ಪುಣ್ಯವಂತೆಗೆ ಪಿಎಚ್‌ʼಡಿ ಪದವಿ ಪುರಸ್ಕಾರ

ಪರೋಪಕಾರಿ ಪುಣ್ಯವಂತೆಗೆ ಪಿಎಚ್‌ʼಡಿ ಪದವಿ ಪುರಸ್ಕಾರ

ಹಾಂ! ಅದೃಷ್ಟವಶಾತ್ ನನಗೊಬ್ಬರು ಸಿಕ್ಕಿದ್ದಾರೆ, ಕಳೆದ ವಾರಾಂತ್ಯದಲ್ಲಿ ಇಲ್ಲೇ ಅಮೆರಿಕದ ನಾರ್ತ್ ಕೆರೊಲಿನಾ ಸಂಸ್ಥಾನದ ಮೊರ್ರಿಸ್‌ವಿಲ್ ಎಂಬ ಪಟ್ಟಣದಲ್ಲಿ ನಡೆದ ಒಂದು ಸುಂದರ ಸನ್ಮಾನ ಸಮಾರಂಭದಲ್ಲಿ ನಾನೊಬ್ಬ ಪ್ರೇಕ್ಷಕನಾಗಿ ಭಾಗವಹಿಸಿದಾಗ. ಅದು, ಆ ಪಟ್ಟಣದ ನಿವಾಸಿ 93ರ ಹರೆಯದ ಭಾರತೀಯ ಮಹಿಳೆ ಸರೋಜ್ ಶರ್ಮ ಎಂಬುವವರಿಗೆ ಸಂದ ಸನ್ಮಾನ ಸಮಾರಂಭ.

Srivathsa Joshi Column: ಕೋಮಲ ಕುಸುಮವು ಕಠೋರವೆನಿಸುವ ಕಥಾನಕಗಳು

ಕೋಮಲ ಕುಸುಮವು ಕಠೋರವೆನಿಸುವ ಕಥಾನಕಗಳು

ಹೂವಿನೊಡನೆ ಹೆಣೆದ ಕವಿಕಲ್ಪನೆಗಳಲ್ಲೆಲ್ಲ ಅತಿ ಕಟು-ಮಧುರವಾದದ್ದು ಇಂದುಮತಿಯ ಮರಣ ಪ್ರಸಂಗ. ಆಕೆ, ಆಕಾಶದಿಂದ ಬಿದ್ದ ಒಂದು ಹೂಮಾಲೆಯ ಪೆಟ್ಟುತಿಂದು ಸಾಯುತ್ತಾಳೆ. ಈ ಪ್ರಸಂಗ ವನ್ನು ಕುರಿತು ಕಾಳಿದಾಸ ಬರೆದ ಪಂಕ್ತಿಯು ವಿಶ್ವಸಾಹಿತ್ಯದ ಅದ್ವಿತೀಯ ರತ್ನವೆಂದು ನನ್ನೆಣಿಕೆ.

Srivathsa Joshi Column: ಹಾಗೇ ಸುಮ್ಮನೆ ಅಲ್ಲದ ʼಹಾಗೇ ಸುಮ್ಮನೆʼಗಳು...

Srivathsa Joshi Column: ಹಾಗೇ ಸುಮ್ಮನೆ ಅಲ್ಲದ ʼಹಾಗೇ ಸುಮ್ಮನೆʼಗಳು...

ಮುಂಗಾರು ಮಳೆ ಹಾಡು ಯಶಸ್ವಿಯಾದದ್ದು ಹಾಗೇ ಸುಮ್ಮನೆ ಅಲ್ಲ, ‘ಹಾಗೇ ಸುಮ್ಮನೆ’ ಪದಪುಂಜ ದಿಂದಲೇ ಎಂದು ನನ್ನ ಅಭಿಪ್ರಾಯ. ಇದಕ್ಕೆ ಪುರಾವೆಗಳನ್ನೂ ಒದಗಿಸಬಲ್ಲೆ. ಪಲ್ಲವಿಯಲ್ಲಿ ಒಮ್ಮೆ ಮಾತ್ರ ಬಂದು ಹೋಗುವುದಲ್ಲ, ಜಯಂತ ಕಾಯ್ಕಿಣಿಯವರು ಹಾಡಿನ ಎರಡು ಚರಣಗಳನ್ನೂ ‘ಹಾಗೇ ಸುಮ್ಮನೆ’ಯಿಂದಲೇ ಕೊನೆಗೊಳಿಸಿದ್ದಾರೆ.

Srivathsa Joshi Column: ದಂಡಕ್ರಮ ಪಾರಾಯಣದಲ್ಲಿ ಬಣ್ಣದ ತಗಡಿನ ತುತ್ತೂರಿ...

ದಂಡಕ್ರಮ ಪಾರಾಯಣದಲ್ಲಿ ಬಣ್ಣದ ತಗಡಿನ ತುತ್ತೂರಿ...

‘ಹದಿಮೂರ್ ಹದಿನೇಳ್ಲ ಎಷ್ಟು?’ ಎಂದು ಕೇಳಿದರೆ ಬೆಚ್ಚಿ ಬಿದ್ದು ಕಾಲ್ಕ್ಯುಲೇಟರ್‌ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ, ಈಗ ಅದನ್ನೂ ಮರೆತ ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು.

Srivathsa Joshi Column: ಕಲಿಸಿಕೊಟ್ಟರೆ ಕೋಡಗನಿಂದಲೂ ಕೆಲಸ ಕೈಗೂಡಬಹುದು !

Srivathsa Joshi Column: ಕಲಿಸಿಕೊಟ್ಟರೆ ಕೋಡಗನಿಂದಲೂ ಕೆಲಸ ಕೈಗೂಡಬಹುದು !

ಗಾರ್ಡ್ ಎಂದರೆ ಒಂದಷ್ಟು ವ್ಯಾಪ್ತಿಯಲ್ಲಿ ರೈಲ್ವೇ ಹಳಿಗಳ ರಕ್ಷಣೆ, ಕ್ರಾಸಿಂಗ್ ಬಳಿ ಸಿಗ್ನಲ್‌ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಾನೆಂದು ನೋಡಿಕೊಳ್ಳುವುದು, ರೈಲುಗಳಿಗೆ ಹಸಿರು ನಿಶಾನೆ ತೋರಿಸು ವುದು, ರೈಲುಚಾಲಕರ ಬಳಿ ಟೋಕನ್ ವಿನಿಮಯ ಮಾಡಿಕೊಳ್ಳುವುದು... ಹೀಗೆ ಒಟ್ಟಾರೆಯಾಗಿ ರೈಲು ಗಳ ಸಂಚಾರ ಸುಗಮವಾಗಿ ಆಗಲಿಕ್ಕೆ ಬೇಕಾದ ಎಲ್ಲ ಜವಾಬ್ದಾರಿಗಳು.

Srivathsa Joshi Column: ಥ್ಯಾಂಕ್ಸ್‌ʼಗಿವಿಂಗ್‌ ಹೊಸ್ತಿಲಲ್ಲಿ ಕೃತಜ್ಞತೆಯ ಕಥಾನಕಗಳು

ಥ್ಯಾಂಕ್ಸ್‌ʼಗಿವಿಂಗ್‌ ಹೊಸ್ತಿಲಲ್ಲಿ ಕೃತಜ್ಞತೆಯ ಕಥಾನಕಗಳು

ಶಾಲಾ ಮಕ್ಕಳಿಗೂ ಕೃತಜ್ಞತೆಯ ಮಹತ್ತ್ವವನ್ನು- ಸ್ಕೂಲ್‌ಬಸ್ ಡ್ರೈವರ್ ಅಪ್ರೀಸಿಯೇಷನ್, ಲೈಬ್ರೇರಿಯನ್ ಅಪ್ರೀಸಿಯೇಷನ್ ಅಂತೆಲ್ಲ ಚಟುವಟಿಕೆಗಳ ಮೂಲಕ ಕಲಿಸುತ್ತಾರೆ. ಥ್ಯಾಂಕ್ಸ್‌ ಗಿವಿಂಗ್‌ಗೆ ಆರಂಭವಾಗುವ ಉಡುಗೊರೆ ವಿನಿಮಯ ಕ್ರಿಸ್ಮಸ್ ಮತ್ತು ಜನವರಿ ೧ರ ಹೊಸ ವರ್ಷಾಚರಣೆವರೆಗೂ ಮುಂದುವರಿಯುತ್ತದೆ.

Srivathsa Joshi Column: ರಾ.ಹ.ದೇಶಪಾಂಡೆಯವರ ಕ್ಷಮೆ ಕೋರಿ ಸಿರಿಗನ್ನಡಂ ಬೇಗಲ್ʼಗೆ !

ರಾ.ಹ.ದೇಶಪಾಂಡೆಯವರ ಕ್ಷಮೆ ಕೋರಿ ಸಿರಿಗನ್ನಡಂ ಬೇಗಲ್ʼಗೆ !

ಕನ್ನಡ ಸಮ್ಮೇಳನದಲ್ಲೂ ಬಿಸಿಬಿಸಿ ಇಡ್ಲಿ-ವಡೆ, ಉಪ್ಪಿಟ್ಟು-ಕೇಸರಿಭಾತ್ ಚಪ್ಪರಿಸಲಾಗದೆ ಒಣಕಲು ಬೇಗಲ್ ತಿನ್ನಬೇಕಾಗಿ ಬಂದ ನಾವುಗಳು ಬೇರೆ ಉಪಾಯವಿಲ್ಲದೆ “ಸಿರಿಗನ್ನಡಂ ಬೇಗಲ್ಗೆ!" ಎಂದು ಮನಸ್ಸಿಲ್ಲದ ಮನಸ್ಸಿನಿಂದ ಸಂಭ್ರಮಿಸಿದ್ದೆವು. ಆವತ್ತಿಂದ ನನಗೆ ಸಿರಿಗನ್ನಡಂ ಗೆಲ್ಗೆ ಎಂದುಕೊಂಡಾಗಲೆಲ್ಲ ನೆನಪಾಗುವುದು ಸಿರಿಗನ್ನಡಂ ಬೇಗಲ್‌ಗೆ ಘೋಷಣೆಯೇ.

Srivathsa Joshi Column: ಅವಭೃತವೆಂದರೆ ದೇವರ ವಾರ್ಷಿಕ ಗ್ರಾಮಭೇಟಿಯೂ ಹೌದು

ಅವಭೃತವೆಂದರೆ ದೇವರ ವಾರ್ಷಿಕ ಗ್ರಾಮಭೇಟಿಯೂ ಹೌದು

ರನ್ನನಂತೂ ಗದಾಯುದ್ಧದಲ್ಲಿ ಅವಭೃತವನ್ನು ಬೇರೆಯೇ ಆಯಾಮಕ್ಕೇರಿಸಿದ್ದಾನೆ. “ದುರ್ವಹ ದುರ್ಯೋಧನ ದೇಹ ಪ್ರಹರಣ ಲೋಹಿತದಿನ್ ಅವಭೃಥ ಸವನಮ್ ಆದುದು" ಎಂದು ಭೀಮ ಸೇನನ ಬಾಯಿಯಿಂದ ಹೇಳಿಸಿದ್ದಾನೆ. “ಈ ದುರ್ಯೋಧನನನ್ನು ನನ್ನ ಕೋಪವೆಂಬ ಬೆಂಕಿಗೆ ಆಹುತಿ ಕೊಡುತ್ತಿದ್ದೇನೆ. ಈತನ ಹಸಿಯಾದ ಮಾಂಸವನ್ನು ಕುರುಕ್ಷೇತ್ರ ಯುದ್ಧವೆಂಬ ಯಾಗದ ಬೆಂಕಿಯಲ್ಲಿ ಬಲಿ ಕೊಟ್ಟರೇನೇ ನನ್ನ ಕೋಪಾಗ್ನಿಯು ತಣಿಯುವುದು.

Srivathsa Joshi Column: ಕನ್ನಡ ವಾಙ್ಮಯಕ್ಕೆ ಸೇರಲಿರುವ ಅರ್ಥಪೂರ್ಣ ಪುಸ್ತಕವಿದು !

ಕನ್ನಡ ವಾಙ್ಮಯಕ್ಕೆ ಸೇರಲಿರುವ ಅರ್ಥಪೂರ್ಣ ಪುಸ್ತಕವಿದು !

ಇಂಗ್ಲಿಷ್‌ನಲ್ಲೂ ಈ ಹೋಲಿಕೆಯನ್ನು Be the tongue, not a ladle ಎಂದು ಹಿತೋಪದೇಶ ಸೂಕ್ತಿ ಯಾಗಿ ಬಳಸುವುದಿದೆ. ದಾಸಸಾಹಿತ್ಯದ ಮಟ್ಟಿಗೆ ಪಾಯಸದ ಹಂಡೆಯಲ್ಲಿನ ಸೌಟು ಆಗಿರುವವ ರನ್ನು ಪಾಯಸದ ರುಚಿ ಸವಿಯಬಲ್ಲವರನ್ನಾಗಿಸುವತ್ತ ಸದಾಶಯದ ಪುಟ್ಟದೊಂದು ಪ್ರಯತ್ನ ಮಾಡಿದ್ದಾರೆ ಶಿವಶಂಕರ ಪ್ರಭು ಅವರು ಈ ಕೃತಿಯಲ್ಲಿ.

Srivathsa Joshi Column: ತೃಣಮಪಿ ನ ಚಲತಿ... ಸೂಕ್ತಿಯ ಹುಲ್ಲು ಸಾಮಾನ್ಯವೇನಲ್ಲ !

ತೃಣಮಪಿ ನ ಚಲತಿ... ಸೂಕ್ತಿಯ ಹುಲ್ಲು ಸಾಮಾನ್ಯವೇನಲ್ಲ !

ಹಸಿವಿನಿಂದ ಬಳಲಿದ್ದರೂ ಮುಪ್ಪಿನಿಂದ ದುರ್ಬಲವಾಗಿದ್ದರೂ ಅಂಗಗಳೆಲ್ಲ ಕ್ಷೀಣಿಸಿದ್ದರೂ ಅತಿ ಕಷ್ಟದ ಸನ್ನಿವೇಶದಲ್ಲಿ ಸಿಲುಕಿದ್ದರೂ ತನ್ನ ಮನೋಸ್ಥೈರ್ಯವನ್ನೇ ಕಳೆದುಕೊಂಡಿದ್ದರೂ ಕಟ್ಟಕಡೆ ಯಲ್ಲಿ ಜೀವ ಹೋಗುವ ಸ್ಥಿತಿಯೇ ಉಂಟಾಗಿದ್ದರೂ, ಮದಿಸಿದ ಕಾಡಾನೆಗಳ ಸೀಳಿದ ಕುಂಭಸ್ಥಳದಲ್ಲಿ ರುವ ಮಾಂಸವನ್ನು ಮಾತ್ರ ಭಕ್ಷಿಸುವ ಸ್ವಭಾವವನ್ನು ತನ್ನ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದ, ಸ್ವಾಭಿಮಾನಿಗಳಲ್ಲಿ ಅಗ್ರಗಣ್ಯವಾದ ಸಿಂಹವು ಒಣಹುಲ್ಲನ್ನು ತಿಂದು ಬದುಕಿ ಉಳಿಯುತ್ತೇ ನೆಂದು ಎಂದಿಗೂ ಬಯಸುವುದಿಲ್ಲ ಅಂತ ಭಾವಾರ್ಥ).

Srivathsa Joshi Column: ಕರುಣಾಳು ಬಾ ಬೆಳಕೇ, ನೇತಿಯಿಂದ ಇತಿಯೆಡೆಗೆ ನಡೆಸೆಮ್ಮನು

ಕರುಣಾಳು ಬಾ ಬೆಳಕೇ, ನೇತಿಯಿಂದ ಇತಿಯೆಡೆಗೆ ನಡೆಸೆಮ್ಮನು

ನಮ್ಮೊಳಗಿನ ನೇತ್ಯಾತ್ಮಕತೆಯನ್ನು ನಾವೇ ಹೋಗಲಾಡಿಸಬೇಕಿದೆ. ‘ಅಸತೋ ಮಾ ಸದ್ಗಮಯ... ತಮಸೋ ಮಾ ಜ್ಯೋತಿರ್ಗಮಯ... ಮೃತ್ಯೋರ್ಮಾ ಅಮೃತಂ ಗಮಯ...’ ಎಂಬ ಪ್ರಾರ್ಥನೆ ಯೊಂದಿಗೆ ಈಗ ‘ಮೈನಸ್ಸೋ ಮಾ ಪ್ಲಸ್ಸೋ ಗಮಯ...’ ಅಂತ ಸೇರಿಸಬೇಕಾಗಿದೆ, ಇಂಗ್ಲಿಷ್-ಸಂಸ್ಕೃತ ಕಲಬೆರಕೆ ಯಾದರೂ. ಅಂತೂ ಋಣತ್ವದಿಂದ ಧನತ್ವದೆಡೆಗೆ ಹೊರಳಬೇಕಿದೆ.

Srivathsa Joshi Column: ಸೀತೆಯನ್ನು ರಾವಣನು ಅಶೋಕವನದಲ್ಲೇ ಕೂರಿಸಿದ್ದೇಕೆ ?

ಸೀತೆಯನ್ನು ರಾವಣನು ಅಶೋಕವನದಲ್ಲೇ ಕೂರಿಸಿದ್ದೇಕೆ ?

ನಮ್ಮ ದೈನಂದಿನ ಕೆಲಸಗಳಲ್ಲಿ, ವಸ್ತು-ಸೇವೆ-ಸೌಲಭ್ಯಗಳ ಆಯ್ಕೆಯಲ್ಲಿ ಕೆಲವೊಮ್ಮೆ ನಿರ್ದಿಷ್ಟ ಕಾರಣಗಳೇನೂ ಇರುವುದಿಲ್ಲ. ಇರಬೇಕಂತನೂ ಇಲ್ಲ. ಪ್ರತಿಯೊಂದರಲ್ಲೂ ತೀರಾ ಚೂಸಿ ಆಗಿರುವುದು ಒಳ್ಳೆಯದೂ ಅಲ್ಲ. ಯಾವ ನಿರ್ಧಾರಕ್ಕೆ ಕಾರಣದ ಅಪೇಕ್ಷೆಯಿಲ್ಲವೋ, ಫಲ ಅಥವಾ ಪರಿಣಾಮದಲ್ಲಿ ಭೇದವೇನೂ ಇಲ್ಲವೋ ಆಗ ಯಾದೃಚ್ಛಿಕವಾಗಿ ನಿರ್ಧರಿಸುತ್ತೇವೆ.

Srivathsa Joshi Column: ಕಪ್ಪೆಯಂತೆ ಕುಪ್ಪಳಿಸುವ ಚಪ್ಪಟೆಕಲ್ಲನ್ನು ಅಪ್ಪಿಕೊಂಡು...

ಕಪ್ಪೆಯಂತೆ ಕುಪ್ಪಳಿಸುವ ಚಪ್ಪಟೆಕಲ್ಲನ್ನು ಅಪ್ಪಿಕೊಂಡು...

ಐದಾರು ಬಾರಿಯಾದರೂ ಛಂಗನೆ ಜಿಗಿದ ಮೇಲಷ್ಟೇ ಅದು ಮುಳುಗಬೇಕು. ಹೆಚ್ಚು ಸಲ ಪುಟಿದಷ್ಟೂ ಆಟದಲ್ಲಿ ಹೆಚ್ಚು ಮೋಜು. ಎಸೆದ ಕಲ್ಲುಗಳನ್ನೇನೂ ನೀರಲ್ಲಿ ಮುಳುಗಿ ಎತ್ತಿಕೊಂಡು ಬರಬೇಕೆಂದಿಲ್ಲ. ಅವು ಕರ್ಣನ ಬಾಣಗಳಂತೆ ಒಮ್ಮೆ ಪ್ರಯೋಗಿಸಿದ ಮೇಲೆ ಮುಗೀತು. ಅಲ್ಲದೇ ನದೀತೀರದಲ್ಲಾದರೆ ಅಂಥ ಕಲ್ಲುಗಳಿಗೇನು ಕೊರತೆಯೇ? ಹಾಂ, ಕಪ್ಪೆಕಲ್ಲು ಅಷ್ಟು ಸಲ ಪುಟಿದು ಅಷ್ಟು ದೂರ ಸಾಗಬೇಕಾದರೆ ಚಿಕ್ಕಪುಟ್ಟ ಕೆರೆ ಕೊಳ ಸಾಲದು.

Loading...