ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಶ್ರೀವತ್ಸ ಜೋಶಿ

columnist

info4@vishwavani.news

ದಕ್ಷಿಣಕನ್ನಡ (ಈಗಿನ ಉಡುಪಿ) ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಊರಿನವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದು ದಿಲ್ಲಿ, ಹೈದರಾಬಾದ್, ಬೆಂಗಳೂರು ಮುಂತಾದ ಕಡೆ ಉದ್ಯೋಗದ ನಂತರ ಈಗ ಇಪ್ಪತ್ತು ವರ್ಷಗಳಿಂದ ಅಮೆರಿಕದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ರಾಜಧಾನಿ ವಾಷಿಂಗ್ಟನ್‌ನಲ್ಲಿ ಐಬಿ‌ಎಂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ವರ್ಜಿನಿಯಾ ಸಂಸ್ಥಾನದ ರೆಸ್ಟನ್ ನಗರದಲ್ಲಿ ಪತ್ನಿ ಸಹನಾ ಮತ್ತು ಪುತ್ರ ಸೃಜನ್‌ನೊಂದಿಗೆ ವಾಸಿಸುತ್ತಿದ್ದಾರೆ. ಕನ್ನಡ ನಾಡು-ನುಡಿ-ಭಾಷೆ-ಸಂಸ್ಕೃತಿಯ ಕುರಿತು ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆಯೂ ಆಸಕ್ತಿ ಹೊಂದಿರುವ ಶ್ರೀವತ್ಸ ಜೋಶಿ, ೨೦೦೨ರಲ್ಲಿ ಆರಂಭಿಸಿ ಈಗಲೂ ಕನ್ನಡ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದಾರೆ. ಅವರ ‘ವಿಚಿತ್ರಾನ್ನ’, ‘ಪರಾಗಸ್ಪರ್ಶ’, ಮತ್ತು ‘ತಿಳಿರುತೋರಣ’ ಅಂಕಣಬರಹಗಳು ಪುಸ್ತಕಗಳ ರೂಪದಲ್ಲಿಯೂ ಪ್ರಕಟವಾಗಿವೆ. 2016ರಿಂದ ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ‘ತಿಳಿರುತೋರಣ’ ಅಂಕಣದ ಪ್ರತಿಯೊಂದು ಲೇಖನವನ್ನು ಧ್ವನಿಮುದ್ರಣ ಮಾಡಿ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲೂ ವಿತರಿಸುವುದರಿಂದ ಈ ಅಂಕಣ ಬಹುರೂಪಗಳಲ್ಲಿ ಜನಪ್ರಿಯವಾಗಿದೆ. ಶ್ರೀವತ್ಸ ಜೋಶಿಯವರ ಇದುವರೆಗಿನ ಒಟ್ಟು 17 ಪುಸ್ತಕಗಳ ಪೈಕಿ ಐದು, ವಾಷಿಂಗ್ಟನ್‌ನಲ್ಲಿರುವ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾದ ‘ಲೈಬ್ರರಿ ಆಫ್ ಕಾಂಗ್ರೆಸ್’ ಪುಸ್ತಕಭಂಡಾರದಲ್ಲಿವೆ. ವಾಷಿಂಗ್ಟನ್ ಡಿ.ಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘ, ಮತ್ತು ಅಮೆರಿಕದ ಇತರ ಕನ್ನಡ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಶ್ರೀವತ್ಸ ಜೋಶಿ, ಕಡಲಾಚೆ ಕನ್ನಡ ಭಾಷೆ-ಸಂಸ್ಕೃತಿ ಪಸರಿಸುವುದರಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಜಗದಗಲ ಓದುಗಮಿತ್ರರನ್ನು ಹೊಂದಿದ್ದಾರೆ. ಇವರು ಕಳೆದ ೩೦೦ ವಾರಗಳಿಂದ ನಡೆಸಿಕೊಂಡು ಬಂದಿರುವ ಸ್ವಚ್ಛ ಭಾಷೆ ಅಭಿಯಾನ ಸರಣಿ ಕಲಿಕೆಯು ತುಂಬ ಜನಪ್ರಿಯವಾಗಿದೆ.

Articles
Srivathsa Joshi Column: ಹಾಗೇ ಸುಮ್ಮನೆ ಅಲ್ಲದ ʼಹಾಗೇ ಸುಮ್ಮನೆʼಗಳು...

Srivathsa Joshi Column: ಹಾಗೇ ಸುಮ್ಮನೆ ಅಲ್ಲದ ʼಹಾಗೇ ಸುಮ್ಮನೆʼಗಳು...

ಮುಂಗಾರು ಮಳೆ ಹಾಡು ಯಶಸ್ವಿಯಾದದ್ದು ಹಾಗೇ ಸುಮ್ಮನೆ ಅಲ್ಲ, ‘ಹಾಗೇ ಸುಮ್ಮನೆ’ ಪದಪುಂಜ ದಿಂದಲೇ ಎಂದು ನನ್ನ ಅಭಿಪ್ರಾಯ. ಇದಕ್ಕೆ ಪುರಾವೆಗಳನ್ನೂ ಒದಗಿಸಬಲ್ಲೆ. ಪಲ್ಲವಿಯಲ್ಲಿ ಒಮ್ಮೆ ಮಾತ್ರ ಬಂದು ಹೋಗುವುದಲ್ಲ, ಜಯಂತ ಕಾಯ್ಕಿಣಿಯವರು ಹಾಡಿನ ಎರಡು ಚರಣಗಳನ್ನೂ ‘ಹಾಗೇ ಸುಮ್ಮನೆ’ಯಿಂದಲೇ ಕೊನೆಗೊಳಿಸಿದ್ದಾರೆ.

Srivathsa Joshi Column: ದಂಡಕ್ರಮ ಪಾರಾಯಣದಲ್ಲಿ ಬಣ್ಣದ ತಗಡಿನ ತುತ್ತೂರಿ...

ದಂಡಕ್ರಮ ಪಾರಾಯಣದಲ್ಲಿ ಬಣ್ಣದ ತಗಡಿನ ತುತ್ತೂರಿ...

‘ಹದಿಮೂರ್ ಹದಿನೇಳ್ಲ ಎಷ್ಟು?’ ಎಂದು ಕೇಳಿದರೆ ಬೆಚ್ಚಿ ಬಿದ್ದು ಕಾಲ್ಕ್ಯುಲೇಟರ್‌ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ, ಈಗ ಅದನ್ನೂ ಮರೆತ ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು.

Srivathsa Joshi Column: ಕಲಿಸಿಕೊಟ್ಟರೆ ಕೋಡಗನಿಂದಲೂ ಕೆಲಸ ಕೈಗೂಡಬಹುದು !

Srivathsa Joshi Column: ಕಲಿಸಿಕೊಟ್ಟರೆ ಕೋಡಗನಿಂದಲೂ ಕೆಲಸ ಕೈಗೂಡಬಹುದು !

ಗಾರ್ಡ್ ಎಂದರೆ ಒಂದಷ್ಟು ವ್ಯಾಪ್ತಿಯಲ್ಲಿ ರೈಲ್ವೇ ಹಳಿಗಳ ರಕ್ಷಣೆ, ಕ್ರಾಸಿಂಗ್ ಬಳಿ ಸಿಗ್ನಲ್‌ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಾನೆಂದು ನೋಡಿಕೊಳ್ಳುವುದು, ರೈಲುಗಳಿಗೆ ಹಸಿರು ನಿಶಾನೆ ತೋರಿಸು ವುದು, ರೈಲುಚಾಲಕರ ಬಳಿ ಟೋಕನ್ ವಿನಿಮಯ ಮಾಡಿಕೊಳ್ಳುವುದು... ಹೀಗೆ ಒಟ್ಟಾರೆಯಾಗಿ ರೈಲು ಗಳ ಸಂಚಾರ ಸುಗಮವಾಗಿ ಆಗಲಿಕ್ಕೆ ಬೇಕಾದ ಎಲ್ಲ ಜವಾಬ್ದಾರಿಗಳು.

Srivathsa Joshi Column: ಥ್ಯಾಂಕ್ಸ್‌ʼಗಿವಿಂಗ್‌ ಹೊಸ್ತಿಲಲ್ಲಿ ಕೃತಜ್ಞತೆಯ ಕಥಾನಕಗಳು

ಥ್ಯಾಂಕ್ಸ್‌ʼಗಿವಿಂಗ್‌ ಹೊಸ್ತಿಲಲ್ಲಿ ಕೃತಜ್ಞತೆಯ ಕಥಾನಕಗಳು

ಶಾಲಾ ಮಕ್ಕಳಿಗೂ ಕೃತಜ್ಞತೆಯ ಮಹತ್ತ್ವವನ್ನು- ಸ್ಕೂಲ್‌ಬಸ್ ಡ್ರೈವರ್ ಅಪ್ರೀಸಿಯೇಷನ್, ಲೈಬ್ರೇರಿಯನ್ ಅಪ್ರೀಸಿಯೇಷನ್ ಅಂತೆಲ್ಲ ಚಟುವಟಿಕೆಗಳ ಮೂಲಕ ಕಲಿಸುತ್ತಾರೆ. ಥ್ಯಾಂಕ್ಸ್‌ ಗಿವಿಂಗ್‌ಗೆ ಆರಂಭವಾಗುವ ಉಡುಗೊರೆ ವಿನಿಮಯ ಕ್ರಿಸ್ಮಸ್ ಮತ್ತು ಜನವರಿ ೧ರ ಹೊಸ ವರ್ಷಾಚರಣೆವರೆಗೂ ಮುಂದುವರಿಯುತ್ತದೆ.

Srivathsa Joshi Column: ರಾ.ಹ.ದೇಶಪಾಂಡೆಯವರ ಕ್ಷಮೆ ಕೋರಿ ಸಿರಿಗನ್ನಡಂ ಬೇಗಲ್ʼಗೆ !

ರಾ.ಹ.ದೇಶಪಾಂಡೆಯವರ ಕ್ಷಮೆ ಕೋರಿ ಸಿರಿಗನ್ನಡಂ ಬೇಗಲ್ʼಗೆ !

ಕನ್ನಡ ಸಮ್ಮೇಳನದಲ್ಲೂ ಬಿಸಿಬಿಸಿ ಇಡ್ಲಿ-ವಡೆ, ಉಪ್ಪಿಟ್ಟು-ಕೇಸರಿಭಾತ್ ಚಪ್ಪರಿಸಲಾಗದೆ ಒಣಕಲು ಬೇಗಲ್ ತಿನ್ನಬೇಕಾಗಿ ಬಂದ ನಾವುಗಳು ಬೇರೆ ಉಪಾಯವಿಲ್ಲದೆ “ಸಿರಿಗನ್ನಡಂ ಬೇಗಲ್ಗೆ!" ಎಂದು ಮನಸ್ಸಿಲ್ಲದ ಮನಸ್ಸಿನಿಂದ ಸಂಭ್ರಮಿಸಿದ್ದೆವು. ಆವತ್ತಿಂದ ನನಗೆ ಸಿರಿಗನ್ನಡಂ ಗೆಲ್ಗೆ ಎಂದುಕೊಂಡಾಗಲೆಲ್ಲ ನೆನಪಾಗುವುದು ಸಿರಿಗನ್ನಡಂ ಬೇಗಲ್‌ಗೆ ಘೋಷಣೆಯೇ.

Srivathsa Joshi Column: ಅವಭೃತವೆಂದರೆ ದೇವರ ವಾರ್ಷಿಕ ಗ್ರಾಮಭೇಟಿಯೂ ಹೌದು

ಅವಭೃತವೆಂದರೆ ದೇವರ ವಾರ್ಷಿಕ ಗ್ರಾಮಭೇಟಿಯೂ ಹೌದು

ರನ್ನನಂತೂ ಗದಾಯುದ್ಧದಲ್ಲಿ ಅವಭೃತವನ್ನು ಬೇರೆಯೇ ಆಯಾಮಕ್ಕೇರಿಸಿದ್ದಾನೆ. “ದುರ್ವಹ ದುರ್ಯೋಧನ ದೇಹ ಪ್ರಹರಣ ಲೋಹಿತದಿನ್ ಅವಭೃಥ ಸವನಮ್ ಆದುದು" ಎಂದು ಭೀಮ ಸೇನನ ಬಾಯಿಯಿಂದ ಹೇಳಿಸಿದ್ದಾನೆ. “ಈ ದುರ್ಯೋಧನನನ್ನು ನನ್ನ ಕೋಪವೆಂಬ ಬೆಂಕಿಗೆ ಆಹುತಿ ಕೊಡುತ್ತಿದ್ದೇನೆ. ಈತನ ಹಸಿಯಾದ ಮಾಂಸವನ್ನು ಕುರುಕ್ಷೇತ್ರ ಯುದ್ಧವೆಂಬ ಯಾಗದ ಬೆಂಕಿಯಲ್ಲಿ ಬಲಿ ಕೊಟ್ಟರೇನೇ ನನ್ನ ಕೋಪಾಗ್ನಿಯು ತಣಿಯುವುದು.

Srivathsa Joshi Column: ಕನ್ನಡ ವಾಙ್ಮಯಕ್ಕೆ ಸೇರಲಿರುವ ಅರ್ಥಪೂರ್ಣ ಪುಸ್ತಕವಿದು !

ಕನ್ನಡ ವಾಙ್ಮಯಕ್ಕೆ ಸೇರಲಿರುವ ಅರ್ಥಪೂರ್ಣ ಪುಸ್ತಕವಿದು !

ಇಂಗ್ಲಿಷ್‌ನಲ್ಲೂ ಈ ಹೋಲಿಕೆಯನ್ನು Be the tongue, not a ladle ಎಂದು ಹಿತೋಪದೇಶ ಸೂಕ್ತಿ ಯಾಗಿ ಬಳಸುವುದಿದೆ. ದಾಸಸಾಹಿತ್ಯದ ಮಟ್ಟಿಗೆ ಪಾಯಸದ ಹಂಡೆಯಲ್ಲಿನ ಸೌಟು ಆಗಿರುವವ ರನ್ನು ಪಾಯಸದ ರುಚಿ ಸವಿಯಬಲ್ಲವರನ್ನಾಗಿಸುವತ್ತ ಸದಾಶಯದ ಪುಟ್ಟದೊಂದು ಪ್ರಯತ್ನ ಮಾಡಿದ್ದಾರೆ ಶಿವಶಂಕರ ಪ್ರಭು ಅವರು ಈ ಕೃತಿಯಲ್ಲಿ.

Srivathsa Joshi Column: ತೃಣಮಪಿ ನ ಚಲತಿ... ಸೂಕ್ತಿಯ ಹುಲ್ಲು ಸಾಮಾನ್ಯವೇನಲ್ಲ !

ತೃಣಮಪಿ ನ ಚಲತಿ... ಸೂಕ್ತಿಯ ಹುಲ್ಲು ಸಾಮಾನ್ಯವೇನಲ್ಲ !

ಹಸಿವಿನಿಂದ ಬಳಲಿದ್ದರೂ ಮುಪ್ಪಿನಿಂದ ದುರ್ಬಲವಾಗಿದ್ದರೂ ಅಂಗಗಳೆಲ್ಲ ಕ್ಷೀಣಿಸಿದ್ದರೂ ಅತಿ ಕಷ್ಟದ ಸನ್ನಿವೇಶದಲ್ಲಿ ಸಿಲುಕಿದ್ದರೂ ತನ್ನ ಮನೋಸ್ಥೈರ್ಯವನ್ನೇ ಕಳೆದುಕೊಂಡಿದ್ದರೂ ಕಟ್ಟಕಡೆ ಯಲ್ಲಿ ಜೀವ ಹೋಗುವ ಸ್ಥಿತಿಯೇ ಉಂಟಾಗಿದ್ದರೂ, ಮದಿಸಿದ ಕಾಡಾನೆಗಳ ಸೀಳಿದ ಕುಂಭಸ್ಥಳದಲ್ಲಿ ರುವ ಮಾಂಸವನ್ನು ಮಾತ್ರ ಭಕ್ಷಿಸುವ ಸ್ವಭಾವವನ್ನು ತನ್ನ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದ, ಸ್ವಾಭಿಮಾನಿಗಳಲ್ಲಿ ಅಗ್ರಗಣ್ಯವಾದ ಸಿಂಹವು ಒಣಹುಲ್ಲನ್ನು ತಿಂದು ಬದುಕಿ ಉಳಿಯುತ್ತೇ ನೆಂದು ಎಂದಿಗೂ ಬಯಸುವುದಿಲ್ಲ ಅಂತ ಭಾವಾರ್ಥ).

Srivathsa Joshi Column: ಕರುಣಾಳು ಬಾ ಬೆಳಕೇ, ನೇತಿಯಿಂದ ಇತಿಯೆಡೆಗೆ ನಡೆಸೆಮ್ಮನು

ಕರುಣಾಳು ಬಾ ಬೆಳಕೇ, ನೇತಿಯಿಂದ ಇತಿಯೆಡೆಗೆ ನಡೆಸೆಮ್ಮನು

ನಮ್ಮೊಳಗಿನ ನೇತ್ಯಾತ್ಮಕತೆಯನ್ನು ನಾವೇ ಹೋಗಲಾಡಿಸಬೇಕಿದೆ. ‘ಅಸತೋ ಮಾ ಸದ್ಗಮಯ... ತಮಸೋ ಮಾ ಜ್ಯೋತಿರ್ಗಮಯ... ಮೃತ್ಯೋರ್ಮಾ ಅಮೃತಂ ಗಮಯ...’ ಎಂಬ ಪ್ರಾರ್ಥನೆ ಯೊಂದಿಗೆ ಈಗ ‘ಮೈನಸ್ಸೋ ಮಾ ಪ್ಲಸ್ಸೋ ಗಮಯ...’ ಅಂತ ಸೇರಿಸಬೇಕಾಗಿದೆ, ಇಂಗ್ಲಿಷ್-ಸಂಸ್ಕೃತ ಕಲಬೆರಕೆ ಯಾದರೂ. ಅಂತೂ ಋಣತ್ವದಿಂದ ಧನತ್ವದೆಡೆಗೆ ಹೊರಳಬೇಕಿದೆ.

Srivathsa Joshi Column: ಸೀತೆಯನ್ನು ರಾವಣನು ಅಶೋಕವನದಲ್ಲೇ ಕೂರಿಸಿದ್ದೇಕೆ ?

ಸೀತೆಯನ್ನು ರಾವಣನು ಅಶೋಕವನದಲ್ಲೇ ಕೂರಿಸಿದ್ದೇಕೆ ?

ನಮ್ಮ ದೈನಂದಿನ ಕೆಲಸಗಳಲ್ಲಿ, ವಸ್ತು-ಸೇವೆ-ಸೌಲಭ್ಯಗಳ ಆಯ್ಕೆಯಲ್ಲಿ ಕೆಲವೊಮ್ಮೆ ನಿರ್ದಿಷ್ಟ ಕಾರಣಗಳೇನೂ ಇರುವುದಿಲ್ಲ. ಇರಬೇಕಂತನೂ ಇಲ್ಲ. ಪ್ರತಿಯೊಂದರಲ್ಲೂ ತೀರಾ ಚೂಸಿ ಆಗಿರುವುದು ಒಳ್ಳೆಯದೂ ಅಲ್ಲ. ಯಾವ ನಿರ್ಧಾರಕ್ಕೆ ಕಾರಣದ ಅಪೇಕ್ಷೆಯಿಲ್ಲವೋ, ಫಲ ಅಥವಾ ಪರಿಣಾಮದಲ್ಲಿ ಭೇದವೇನೂ ಇಲ್ಲವೋ ಆಗ ಯಾದೃಚ್ಛಿಕವಾಗಿ ನಿರ್ಧರಿಸುತ್ತೇವೆ.

Srivathsa Joshi Column: ಕಪ್ಪೆಯಂತೆ ಕುಪ್ಪಳಿಸುವ ಚಪ್ಪಟೆಕಲ್ಲನ್ನು ಅಪ್ಪಿಕೊಂಡು...

ಕಪ್ಪೆಯಂತೆ ಕುಪ್ಪಳಿಸುವ ಚಪ್ಪಟೆಕಲ್ಲನ್ನು ಅಪ್ಪಿಕೊಂಡು...

ಐದಾರು ಬಾರಿಯಾದರೂ ಛಂಗನೆ ಜಿಗಿದ ಮೇಲಷ್ಟೇ ಅದು ಮುಳುಗಬೇಕು. ಹೆಚ್ಚು ಸಲ ಪುಟಿದಷ್ಟೂ ಆಟದಲ್ಲಿ ಹೆಚ್ಚು ಮೋಜು. ಎಸೆದ ಕಲ್ಲುಗಳನ್ನೇನೂ ನೀರಲ್ಲಿ ಮುಳುಗಿ ಎತ್ತಿಕೊಂಡು ಬರಬೇಕೆಂದಿಲ್ಲ. ಅವು ಕರ್ಣನ ಬಾಣಗಳಂತೆ ಒಮ್ಮೆ ಪ್ರಯೋಗಿಸಿದ ಮೇಲೆ ಮುಗೀತು. ಅಲ್ಲದೇ ನದೀತೀರದಲ್ಲಾದರೆ ಅಂಥ ಕಲ್ಲುಗಳಿಗೇನು ಕೊರತೆಯೇ? ಹಾಂ, ಕಪ್ಪೆಕಲ್ಲು ಅಷ್ಟು ಸಲ ಪುಟಿದು ಅಷ್ಟು ದೂರ ಸಾಗಬೇಕಾದರೆ ಚಿಕ್ಕಪುಟ್ಟ ಕೆರೆ ಕೊಳ ಸಾಲದು.

Srivathsa Joshi Column: ಮದವೇರಿದ್ದಿರುವಂಥ ಹಸ್ತಿ ನಡೆಯೇ ಮತ್ತೇಭವಿಕ್ರೀಡಿತಂ...

ಮದವೇರಿದ್ದಿರುವಂಥ ಹಸ್ತಿ ನಡೆಯೇ ಮತ್ತೇಭವಿಕ್ರೀಡಿತಂ...

ಶಾರ್ದೂಲವಿಕ್ರೀಡಿತ ಅಂತ ಇನ್ನೊಂದಿದೆ, ಅದರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ (ತಿಳಿರುತೋರಣ 9 ಜೂನ್ 2024). ಮತ್ತೇಭವಿಕ್ರೀಡಿತವು ಒಂದು ರೀತಿಯಲ್ಲಿ ಶಾರ್ದೂಲವಿಕ್ರೀಡಿತದ ಮಗು. ಅಯ್ಯೋ ಅದ್ಹೇಗಾಗುತ್ತೆ ಶಾರ್ದೂಲ ಅಂದ್ರೆ ಹುಲಿ, ಮತ್ತೇಭ (ಮತ್ತ+ಈಭ) ಅಂದ್ರೆ ಮದಿಸಿದ ಆನೆ. ಹಾಗಾದ್ರೆ ಹುಲಿಯ ಹೊಟ್ಟೆಯಲ್ಲಿ ಆನೆ ಹುಟ್ಟುತ್ತಾ? ಅಂತೆಲ್ಲ ಕೇಳ್ಬೇಡಿ.

Srivathsa Joshi Column: ತಕ್ಕ ರೀತೀಲಿ ಕಲಿಸಿದ್ರೆ ಲೆಕ್ಕ ಬಿಡ್ಸೋದೂ ಯಾವ್‌ ಲೆಕ್ಕ ?

ತಕ್ಕ ರೀತೀಲಿ ಕಲಿಸಿದ್ರೆ ಲೆಕ್ಕ ಬಿಡ್ಸೋದೂ ಯಾವ್‌ ಲೆಕ್ಕ ?

ನಾನು ಯಾವುದನ್ನಾದರೂ ಮರೆತಿದ್ದರೆ ನಿಮ್ಮ ಲೇಖನ ಅದನ್ನು ನೆನಪಿಸುತ್ತದೆ!", “ಲೇಖನ ಸ್ವಾರಸ್ಯಕರವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ, ಕೊನೆಯಲ್ಲಿ ಕೊಟ್ಟ ಗಣಿತದ ಸಮಸ್ಯೆ ತುಂಬಾ ಆಸಕ್ತಿದಾಯಕವಾಗಿತ್ತು. ಹಿಂದೊಮ್ಮೆ ಕೊಟ್ಟ ಮಾರ್ವಾಡಿ ಮಾತ್ರೆಗಳ ಸಮಸ್ಯೆಯಂತಿತ್ತು" ಎಂದು ಮುಂತಾಗಿ ಬರೆದರು.

Srivathsa Joshi Column: Orange ಅಂದರೆ ಒಂದು ಹಣ್ಣು, ಒಂದು ಬಣ್ಣ, ಆಮೇಲೆ ?

Orange ಅಂದರೆ ಒಂದು ಹಣ್ಣು, ಒಂದು ಬಣ್ಣ, ಆಮೇಲೆ ?

ಇಂತಿರುವ Orange ಪದ ಇಂಗ್ಲಿಷ್ ಭಾಷೆಗೆ ಹೇಗೆ, ಎಲ್ಲಿಂದ, ಯಾವಾಗ ಬಂತು ಎಂಬ ವಿಚಾರವೂ ಬಹಳವೇ ಕುತೂಹಲಕಾರಿಯಾಗಿ ಇದೆ. ಪಾಶ್ಚಾತ್ಯ ಜಗತ್ತಿಗೆ, ಅಥವಾ ಇಂಗ್ಲಿಷ್ ಭಾಷೆಗೆ Orange ಮೊದಲು ಒಂದು ಹಣ್ಣಾಗಿ ಪರಿಚಯವಾಯ್ತು, ಕೆಲವು ಶತಮಾನಗಳ ನಂತರವಷ್ಟೇ ಅದೊಂದು ಬಣ್ಣದ ಹೆಸರೂ ಆಯ್ತು ಎಂಬುವುದು ಮತ್ತೂ ಕುತೂಹಲಕರ ಸಂಗತಿ.

Srivathsa Joshi Column: ಬಾಗಿಲನು ತೆರೆದು ಬಹುಮಾನ ಕೊಡೊ ಹರಿಯೇ...

ಬಾಗಿಲನು ತೆರೆದು ಬಹುಮಾನ ಕೊಡೊ ಹರಿಯೇ...

ಅಂಥದೊಂದು ಕ್ವಿಜ್ ಶೋ ನಡೀತಿದೆ ಅಂತಿಟ್ಕೊಳ್ಳಿ. ಅದರ ಹೋಸ್ಟ್ ಅಮಿತಾಭ್ ಅಲ್ಲ, ಅವರಪ್ಪ ನನ್ನೂ ಮೀರಿಸುವಂಥವ! ಅಂದ ಹಾಗೆ ಅಮಿತಾಭ್ ಬಚ್ಚನ್‌ರ ಅಪ್ಪನ ಹೆಸರು ಹರಿವಂಶರಾಯ್ ಬಚ್ಚನ್. ಈವತ್ತಿನ ಶೀರ್ಷಿಕೆಯಲ್ಲಿ ಹೇಗೂ ‘ಹರಿ’ ಬಂದಿರುವುದರಿಂದ ಕ್ವಿಜ್ ಶೋ ಹೋಸ್ಟ್‌ನ ಹೆಸರು ಹರಿ ಎಂದೇ ಇರಲಿ. ಕ್ವಿಜ್‌ನಲ್ಲಿ ಕಟ್ಟಕಡೆಯ ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದರೆ ಜಾಕ್‌ ಪಾಟ್ ಬಹುಮಾನ. ಸುವರ್ಣನಾಣ್ಯಗಳಿರುವ ದೊಡ್ಡದೊಂದು ಗಡಿಗೆ!

Srivathsa Joshi Column: ಕೊನೆಗೆ ತಲೆಯೂ ಹೋಗಿ ಬರಿಯ ದಿಂಬು ಉಳಿಯಿತು !

ಕೊನೆಗೆ ತಲೆಯೂ ಹೋಗಿ ಬರಿಯ ದಿಂಬು ಉಳಿಯಿತು !

ಸ್ತ್ರೀಮೂಲ, ನದೀಮೂಲ, ಋಷಿಮೂಲ ಹುಡುಕಬಾರದು ಎನ್ನುತ್ತಾರೆ. ಮೂಲ ತಿಳಿದರೆ ಇದ್ದ ಗೌರವ ಕಮ್ಮಿಯಾದೀತು ಎನ್ನುವ ಭಯ. ಆದರೆ ಶಬ್ದಮೂಲ ಹುಡುಕಬೇಕು. ಹುಡುಕಿದಾಗ ಆ ಪುಟ್ಟ ಶಬ್ದದ ಒಡಲೊಳಗೆ ಇಡಿಯ ಬ್ರಹ್ಮಾಂಡ ಹುದುಗಿರುವುದನ್ನು ಕಂಡು ಒಮ್ಮೊಮ್ಮೆ ನಾವು ದಿಗಿಲುಗೊಳ್ಳು ವಂತಾಗುತ್ತದೆ.

Srivathsa Joshi Column: ಅಡಿಕೆಮರದಿಂದ ಬಿದ್ದು ಡಿಪ್ಲೊಮಾ ಓದುತ್ತಿದ್ದ ಯುವಕನ ಸಾವು !

ಅಡಿಕೆಮರದಿಂದ ಬಿದ್ದು ಡಿಪ್ಲೊಮಾ ಓದುತ್ತಿದ್ದ ಯುವಕನ ಸಾವು !

ಪಾದರಕ್ಷೆಗಳ ದೊಡ್ಡ ಅಂಗಡಿಯಲ್ಲಿ ಒಂದು ಕಡೆ Purple women’s shoes ಎಂಬ ಫಲಕ ಇರುತ್ತ ದೆಂದುಕೊಳ್ಳಿ. ಮಹಿಳೆಯರು ಧರಿಸುವ ಪಾದರಕ್ಷೆಗಳು, ನೇರಳೆ ಬಣ್ಣದವು ಅಲ್ಲಿರುವವು. ಆದರೆ ಆ ವಾಕ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಾದರಕ್ಷೆಗಳು ನೇರಳೆ ಬಣ್ಣದವೋ ಅಥವಾ ಧರಿಸುವ ಮಹಿಳೆ ಯರು ನೇರಳೆ ಬಣ್ಣದವರೋ ಎಂಬ ಪ್ರಶ್ನೆ ಮೂಡಬಹುದು!

Srivathsa Joshi Column: ರಾಮಾಯಣ ಕಾಲದಿಂದಲೂ ಕಾಗೆಗೆ ಒಂದೇ ಕಣ್ಣು !

ರಾಮಾಯಣ ಕಾಲದಿಂದಲೂ ಕಾಗೆಗೆ ಒಂದೇ ಕಣ್ಣು !

ವಾಲ್ಮೀಕಿ ರಾಮಾಯಣದಲ್ಲಿ ಬರುವಂಥದ್ದು. ಇಂದಿನ ಪುರಾಣಶ್ರವಣಕ್ಕೆ ಆಯ್ದುಕೊಂಡಿರುವುದು. ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡುಕುವ ಘನ ಉದ್ದೇಶದಿಂದ ಲಂಕೆಗೆ ಹಾರಿದ ಹನುಮಂತನು, ಅಲ್ಲಿ ನಿಜವಾದ ಸೀತೆಯನ್ನೇ ಭೇಟಿಯಾಗಿ ಬಂದನು ಎಂಬುದನ್ನು ಶ್ರೀರಾಮನಿಗೆ ಮನವರಿಕೆ ಮಾಡಿಕೊಡಲು ಏನಾದರೊಂದು ಚಿಹ್ನೆಯನ್ನು ಕೊಡುವಂತೆ ಸೀತೆಯನ್ನು ವಿನಂತಿಸಿ ದನು.

Srivathsa Joshi Column: ತಪಸ್ವಿನಿ ವೃದ್ಧಕನ್ಯೆ ಪ್ರಥಮರಾತ್ರಿಗಷ್ಟೇ ತರುಣಿಯಾದಳು !

ತಪಸ್ವಿನಿ ವೃದ್ಧಕನ್ಯೆ ಪ್ರಥಮರಾತ್ರಿಗಷ್ಟೇ ತರುಣಿಯಾದಳು !

ಓದಿ ಅರ್ಥ ಮಾಡಿಕೊಂಡು ಅನುಸರಿಸಿದರೆ ಪುಣ್ಯವಿದೆ. ಸಾಹಿತ್ಯಿಕ ಶ್ರೀಮಂತ ಪದಪುಂಜಗಳಿಂದ ಕಥೆಯನ್ನು ಆರಂಭಿಸುವುದಾದರೆ- ಮಹಾವೀರ್ಯನಾದ ಮಹಾಯಶಸ್ವಿಯಾದ ಕುಣಿಗಾರ್ಗ್ಯ ಎಂಬ ಬ್ರಹ್ಮಋಷಿಯಿದ್ದನು. ಕುಣಿ ಎಂದರೆ ಗಿಡ್ಡ ಎಂಬರ್ಥ, ಗರ್ಗ ಋಷಿಯ ವಂಶದವ ನಾದ್ದರಿಂದ ಗಾರ್ಗ್ಯ. ತಪಸ್ವಿಗಳಲ್ಲಿ ಶ್ರೇಷ್ಠನಾದ ಆ ವಿಭುವು ವಿಪುಲ ತಪಸ್ಸನ್ನು ತಪಿಸಿ, ಸುಂದರ ಹುಬ್ಬಿನ ಮಗಳೋರ್ವ ಳನ್ನು ಮನಸ್ಸಿನಿಂದಲೇ ಸೃಷ್ಟಿಸಿದನು.

Srivathsa Joshi Column: ಮಹಾಭಾರತ ಕಥೆ ಹೆಣೆಯಲಿಕ್ಕೆ ಹಾವುಗಳೇ ಹಗ್ಗವಾದುವೇ ?

ಮಹಾಭಾರತ ಕಥೆ ಹೆಣೆಯಲಿಕ್ಕೆ ಹಾವುಗಳೇ ಹಗ್ಗವಾದುವೇ ?

ಮಹಾ ಭಾರತವನ್ನು ವೇದವ್ಯಾಸರು ರಚಿಸಿದ್ದು ಮತ್ತು ಗಣೇಶನು ಅವರಿಂದ ನಿರಂತರವಾಗಿ ಉಕ್ತಲೇಖನದಂತೆ ಬರೆದದ್ದು ಹೌದಾದರೂ, ಮಹಾಭಾರತ ಮಹಾಕಾವ್ಯದ ಮೊತ್ತಮೊದಲ ಸಾರ್ವಜನಿಕ ನಿರೂಪಣೆ ಆದದ್ದು, ಅಂದರೆ ಒಂದು ಕಥೆಯಂತೆ ಅದನ್ನು ಜನರೆದುರಿಗೆ ಹೇಳಿದ್ದು ವ್ಯಾಸಶಿಷ್ಯ ವೈಶಂಪಾಯನ ಮಹರ್ಷಿ.

Srivathsa Joshi Column: ಸುವರ್ಚಲೆಯ ಒಗಟಿಗೆ ಉತ್ತರವಾಗಿ ಬಂದು ವರಿಸಿದ ಶ್ವೇತಕೇತು

ಸುವರ್ಚಲೆಯ ಒಗಟಿಗೆ ಉತ್ತರವಾಗಿ ಬಂದು ವರಿಸಿದ ಶ್ವೇತಕೇತು

ಸಪ್ತ ಚಿರಂಜೀವಿಗಳ ಪಟ್ಟಿಯಲ್ಲಿಲ್ಲದವರೂ ಕೆಲವರು ತ್ರೇತಾಯುಗದ ಕಥೆಗಳಲ್ಲೂ ದ್ವಾಪರ ಯುಗದ ಕಥಾನಕಗಳಲ್ಲೂ ಕಾಣಿಸಿಕೊಳ್ಳುವುದಿದೆ. ದ್ವಾಪರಯುಗದ ಪಾತ್ರಗಳೆರಡು ತ್ರೇತಾಯುಗದಲ್ಲಿ ನಡೆಯಿತೆನ್ನಲಾದ ಕಥೆ/ಘಟನೆಯನ್ನು ಸಂಭಾಷಣೆಯಲ್ಲಿ ತರುವುದಿದೆ. ಶಾಪ-ವರಗಳಿಂದಾಗಿ ಒಂದು ಪಾತ್ರವೇ ಇನ್ನೊಂದು ರೂಪದಿಂದ, ಹೆಸರಿನಿಂದ ಮುಂದುವರಿಯುವುದು ಇದೆ. ಹೀಗೆ ಪುರಾಣಕಥೆ ಗಳನ್ನು ಓದುವಾಗ ಮನಸ್ಸಿನಲ್ಲಿ ಗೊಂದಲವಾಗುವ ಸಾಧ್ಯತೆಗಳಿರುತ್ತವೆ.

Srivathsa Joshi Column: ಅಳಿಲಿನ ಬಾಲ ಅಳೆದ ಸೂರ್ಯನೂ, ಚಿತ್ರ ಬರೆದ ಪ್ರಣಮ್ಯಳೂ

ಅಳಿಲಿನ ಬಾಲ ಅಳೆದ ಸೂರ್ಯನೂ, ಚಿತ್ರ ಬರೆದ ಪ್ರಣಮ್ಯಳೂ

ಕೆಲ ದಿನಗಳ ಹಿಂದೆ ಶಿವಮೊಗ್ಗದಿಂದ ಪ್ರಣಮ್ಯ ನನಗೊಂದು ವಾಟ್ಸ್ಯಾಪ್ ಸಂದೇಶದಲ್ಲಿ ಒಂದು ಪಿಡಿಎಫ್ ಕಳುಹಿಸಿದಳು. ಅದು, ಭರ್ತಿ ನಾಲ್ಕು ಪುಟಗಳಷ್ಟು ಅವಳದೇ ಕೈಬರಹದಲ್ಲಿ ಇಂಗ್ಲಿಷ್‌‌ ನಲ್ಲಿ ಬರೆದ ಪತ್ರ. ಚಂದದ ಕರ್ಸಿವ್ ಹ್ಯಾಂಡ್ ರೈಟಿಂಗ್. ಪ್ರಣಮ್ಯಳಿಗೆ ಈಗ ಪಿಯುಸಿ ಪರೀಕ್ಷೆಗಳ ಫಲಿತಾಂಶ, ಸಿಇಟಿ ಮತ್ತಿತರ ಪ್ರವೇಶಪರೀಕ್ಷೆಗಳ ಫಲಿತಾಂಶ ಎಲ್ಲ ಮುಗಿದು ಎಂಜಿನಿಯರಿಂಗ್ ಕಾಲೇಜುಗಳ ಆಯ್ಕೆ ಪ್ರಕ್ರಿಯೆಯೂ ಆಗಿ ಕೊಂಚ ಬಿಡುವು ಸಿಕ್ಕಿರುವುದರಿಂದ ಅಷ್ಟೊಂದು ಸುದೀರ್ಘ ಪತ್ರ.

Srivathsa Joshi Column: ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ...

ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ...

ಸಂತರು ಭಗವಂತನ ಲೀಲೆಗಳನ್ನು ಬಣ್ಣಿಸುವುದೇ ಹಾಗೆ. ನಮಗದು ಉತ್ಪ್ರೇಕ್ಷೆಯಾಗಿ ತೋರ ಬಹುದು, ಆದರೆ ಅವರು ಅನುಭವ ಮತ್ತು ಅನುಭಾವಗಳಿಗೆ ದಕ್ಕಿದ್ದನ್ನೇ ಹೇಳಿರುತ್ತಾರೆ. ಕೃಷ್ಣನ ವೇಣುಗಾನವು ಸಕಲ ಚರಾಚರ ಜೀವಜಗತ್ತಿನ ಮೇಲೆ ಅಂಥದೊಂದು ಪರಿಣಾಮ ಬೀರಿದ್ದಿರಬಹುದು. ಅದು ನಮ್ಮ ಅನುಭವಕ್ಕೆ ದಕ್ಕಲಿಲ್ಲ ಅಂದಮಾತ್ರಕ್ಕೇ ಅಲ್ಲಿ ಹಾಗೆ ಆಗಿರಲಿಕ್ಕೇ ಸಾಧ್ಯ ವಿಲ್ಲ ಎಂದುಕೊಳ್ಳುವುದು ತಪ್ಪಾಗುತ್ತದೆ.

Srivathsa Joshi Column: ಆತ್ತಿಚ್ಚೂಡಿ: ತಮಿಳು ವರ್ಣಮಾಲೆಯಲ್ಲಿ ನೀತಿವಾಕ್ಯಗಳ ಸೂಡಿ

ಆತ್ತಿಚ್ಚೂಡಿ: ತಮಿಳು ವರ್ಣಮಾಲೆಯಲ್ಲಿ ನೀತಿವಾಕ್ಯಗಳ ಸೂಡಿ

ನಾನೋದಿದ ಇಂಗ್ಲಿಷ್ ಲೇಖನದಲ್ಲಿ ಆತ್ತಿಚ್ಚೂಡಿಯಿಂದ ಆಯ್ದ ನಾಲ್ಕಾರು ನೀತಿವಾಕ್ಯಗಳ ಇಂಗ್ಲಿಷ್ ಅನುವಾದ ಮತ್ತು ಪುರಾಣ ಕಥೆಗಳ ಉದಾಹರಣೆಗಳೊಂದಿಗೆ ವ್ಯಾಖ್ಯಾನವೂ ಇತ್ತು. ಆತ್ತಿಚ್ಚೂಡಿಯಲ್ಲಿ ಒಟ್ಟು 109 ನೀತಿವಾಕ್ಯಗಳಿವೆ, ಒಂದೊಂದೂ ಸಾರ್ವ ಕಾಲಿಕ ಮೌಲ್ಯವುಳ್ಳ ಆಣಿಮುತ್ತುಗಳೇ ಆಗಿವೆ ಎಂಬ ವಿವರಣೆಯೂ ಅದರಲ್ಲಿತ್ತು. ಆಮೇಲೆ ಅಂತರ್ಜಾಲದಲ್ಲಿ ಆತ್ತಿಚ್ಚೂಡಿ ಬಗ್ಗೆ ಹುಡುಕಿದಾಗ ಎಲ್ಲ 109 ನೀತಿವಾಕ್ಯಗಳ ತಮಿಳು ಮೂಲ ರೂಪ ಮತ್ತು ಅವುಗಳ ಇಂಗ್ಲಿಷ್ ಅನುವಾದವೂ ಸಿಕ್ಕಿತು

Loading...