ವೇತನ ಪರಿಷ್ಕರಣೆ, ಶಿವರಾತ್ರಿಯ ಮನೆಗೆ ಏಕಾದಶಿ ಬಂದಂತೆ !
ಬೆಂಗಳೂರಿನಂತಹ ನಗರದಲ್ಲಿ ಕನಿಷ್ಠವೇತನ ಶೇ.60ಕ್ಕಿಂತಲೂ ಹೆಚ್ಚಿಗೆ ಏರಿಕೆಯಾಗಿದೆ ಮತ್ತು ಈ ಏರಿಕೆ ರಾಜ್ಯದ ಕೈಗಾರಿಕಾ ಬೆಳವಣಿಗೆಯ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ, ಇದರ ಕುರಿತು ಕರ್ನಾಟಕದ ಜನರಿಗೆ ಖಬರೇ ಇಲ್ಲ. ಮುಖ್ಯಮಂತ್ರಿ ಸ್ಥಾನ ದಿಂದ ಸಿದ್ದರಾಮಯ್ಯ ಕೆಳಗಿಳಿದರು ಎಂದು ಒಂದು ವಲಯ ಬೇಸರ ದಲ್ಲಿದ್ದರೆ, ಇನ್ನೊಂದು ವಲಯ ಡಿ.ಕೆ. ಶಿವಕುಮಾರ್ರವರು ಅಂತೂ ಮುಖ್ಯಮಂತ್ರಿಯಾದರು ಎಂದು ಸಂಭ್ರಮಿಸುವುದರಲ್ಲಿ ಬ್ಯೂಸಿ ಯಾಗಿದ್ದಾರೆ.