ತ್ರಿಭಾಷಾ ಸೂತ್ರವಲ್ಲ, ಬೇಕಾದ್ದು ಬಹುಭಾಷೆಗಳಲ್ಲಿ ದ್ವಿಭಾಷೆ
ರಾಜಕೀಯ ಏನೇ ಇರಲಿ, ಒಂದು ಕಾಲದಲ್ಲಿ ಕನ್ನಡ ಕಾವಲು ಸಮಿತಿಯ ಜವಾಬ್ದಾರಿ ಹೊತ್ತಿದ್ದ ರಾಜ್ಯದ ಮುಖ್ಯಮಂತ್ರಿಗಳ ಮುಂದೆ, ಅದರಲ್ಲೂ ಕರ್ನಾಟಕದ ನಡುಮನೆ ಯಂತಿರುವ ದಾವಣಗೆರೆಯಲ್ಲಿ ನಿಂತು ಕನ್ನಡ ಮಾತನಾಡದೇ, ತುಷ್ಟೀಕರಣಕ್ಕೆ ಹಿಂದಿಯನ್ನು ಮೇಡಮ್ ಭಾಷಣಕ್ಕೆ ಆಯ್ಕೆ ಮಾಡಿಕೊಂಡಿರುವುದನ್ನು ಯಾರೂ ಪ್ರಶ್ನೆ ಮಾಡುವ ಧೈರ್ಯ ತಾಕತ್ತು ತೋರಿಸದೇ, ಕೇಂದ್ರ ಸರಕಾರದಿಂದ ಹಿಂದಿ ಹೇರಿಕೆಯಾಗುತ್ತಿದೆ, ನಾವು ಇದನ್ನು ಸಹಿಸುವುದಿಲ್ಲ ಎಂದು ಬೊಬ್ಬೆ ಹಾಕುವುದಲ್ಲಿ ಯಾವ ಪುರುಷಾರ್ಥವಿದೆಯೋ ಕಾಣೆ