ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಯಿಡ್ಡಿಷ್‌ ಭಾಷೆ ವೈಶಿಷ್ಠ್ಯ

ಯಿಡ್ಡಿಷ್‌ ಭಾಷೆ ವೈಶಿಷ್ಠ್ಯ

ನೀವು ಯಿಡ್ಡಿಶ್ ಭಾಷೆ ಬಗ್ಗೆ ಕೇಳಿರಬಹುದು. ನಾನು ಇಸ್ರೇಲಿಗೆ ಹೋದಾಗ ಆ ಭಾಷೆ ಬಗ್ಗೆ ಕೇಳಿದ್ದೆ. ಆ ಭಾಷೆಗೆ ಹೀಬ್ರೂ ಅಕ್ಷರಗಳನ್ನೇ ಬಳಸುತ್ತಾರೆ. ಯಿಡ್ಡಿಶ್ ಭಾಷೆಯ ವೈಶಿಷ್ಟ್ಯವೇನೆಂದರೆ ಅದರ ಬಹುತೇಕ ಪದಗಳಿಗೆ ಒಂದಕ್ಕಿಂತ ಹೆಚ್ಚು ಅರ್ಥಗಳಿವೆ. ಆಯಾ ಸನ್ನಿವೇಶ ಮತ್ತು ಸಂದರ್ಭಕ್ಕೆ ತಕ್ಕಂತೆ ಪದಗಳ ಅರ್ಥ ಬದಲಾಗುತ್ತಾ ಹೋಗುತ್ತದೆ.

Vishweshwar Bhat Column: ಲೇಪಿಸ್‌ ಲಜುಲಿ

ಲೇಪಿಸ್‌ ಲಜುಲಿ

ಕರಾಚಿಯಲ್ಲಿರುವ ದಂತ ವೈದ್ಯರ ಮೂಲಕ, ಬಹಳ ಪ್ರಯಾಸಪಟ್ಟು, ನುಸ್ರತ್ ಭುಟ್ಟೋ ಅವರನ್ನು ಸಿಂಗ್ ಅಧಿಕೃತವಾಗಿ ಭೇಟಿ ಮಾಡಿದರಂತೆ. “ನುಸ್ರತ್ ಭುಟ್ಟೋ ಮನೆಯ ಜಗುಲಿಯನ್ನು ಪ್ರವೇಶಿಸು ತ್ತಿದ್ದಂತೆ, ‘ಲೇಪಿಸ್ ಲಜುಲಿ’ ಕಲ್ಲಿನಲ್ಲಿ ಕೊರೆದ ಫ್ರೇಮಿನಲ್ಲಿ ಪತಿ ಝುಲ್ಫಿಕರ್ -ಅಲಿ-ಭುಟ್ಟೋ ಅವರ ಭಾವಚಿತ್ರ ಥಟ್ಟನೆ ವಿಶೇಷವಾಗಿ ಆಕರ್ಷಿಸಿತು.

Vishweshwar Bhat Column:  ಒಂದೇ ವರ್ಷದಲ್ಲಿ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದೇ ? ಅದು ಹೇಗೆ ?

ಒಂದೇ ವರ್ಷದಲ್ಲಿ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದೇ ? ಅದು ಹೇಗೆ ?

ಕಾವ್ಯದ ಬಗ್ಗೆ ನನ್ನಲ್ಲಿ ಯಾವ ಹೊಸ ಥಿಯರಿ-ಪ್ರಮೇಯವೂ ಇಲ್ಲ. ಇಂಥ ಕಾವ್ಯವೇ ಸರಿ, ಇಂಥದು ತಪ್ಪು ಎಂದು ನಾನು ಹೇಳಲಾರೆ. ನಾನು ಹೇಳಿ ಕೇಳಿ ಮಾಸ್ತರ. ಮಾಸ್ತರ ಆದವನು ಇದು ಹೀಗೆ, ಇದು ಹಾಗೆ ಎಂದು ವಿವರಿಸುತ್ತಾನೆಯೇ ಹೊರತು ಇದು ಮೇಲು, ಇದು ಕೀಳು ಎಂದು ತೂಗಲು ಹೊರಡುವು ದಿಲ್ಲ. ನವ್ಯಕಾವ್ಯದ ಬಗ್ಗೆ ನನ್ನ ದೃಷ್ಟಿಯೂ ಇದೇ. ಯಾವ ಕಾವ್ಯವೇ ಆಗಲಿ, ಕಾವ್ಯವಾಗಿದ್ದರೆ ಸರಿ ಎನ್ನುತ್ತೇನೆ.

Vishweshwar Bhat Column: ಆ ದೇಶವೇಕೆ ಹಾಗಿದೆ ?

ಆ ದೇಶವೇಕೆ ಹಾಗಿದೆ ?

ಒಂದೊಮ್ಮೆ ಹಾಗೆ ಹೇಳದಿದ್ದಿದ್ದರೆ, ಸಿಂಗಾಪುರ ಈಗಿನಂತೆ ಇರುತ್ತಿರಲಿಲ್ಲ ಎಂಬುದನ್ನು ಮರೆಯ ಬಾರದು" ಎಂದು ಅವರು ಹೇಳಿದ್ದರು. ಅದು ನಿಜವೂ ಆಗಿತ್ತು. “ಸಾರ್ವಜನಿಕ ಸ್ಥಳಗಳಲ್ಲಿ ಎಂಜಲು ಉಗುಳಬಾರದು, ಬಬಲ್‌ಗಮ್ ಬಿಸಾಡಬಾರದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಸುಂದರವಾಗಿಟ್ಟು ಕೊಳ್ಳಬೇಕು, ಮನೆ ಮುಂದೆ ಉದ್ಯಾನ ಬೆಳೆಸಿ, ಮನೆಗೆ ಕನಿಷ್ಠ ಹತ್ತು ವರ್ಷಗಳಿಗೊಮ್ಮೆ ಸುಣ್ಣ-ಬಣ್ಣ ಬಳಿಯಿರಿ.

Vishweshwar Bhat Column: ಔತಣಕೂಟದಲ್ಲಿ ಜೈಲ್‌ ಸಿಂಗ್

ಔತಣಕೂಟದಲ್ಲಿ ಜೈಲ್‌ ಸಿಂಗ್

ರಾಷ್ಟ್ರಪತಿಯವರು ಇಂಗ್ಲಿಷ್‌ನಲ್ಲಿ ಮಾತಾಡಲಾರಂಭಿಸಿದರೆ ಯಡವಟ್ಟು ತಪ್ಪಿದ್ದಲ್ಲ" ಎಂದು ಆಗಾಗ ದೂರುತ್ತಿದ್ದರು. ಜೈಲ್ ಸಿಂಗ್ ರಾಷ್ಟ್ರಪತಿ ಆಗಿದ್ದ ದಿನಗಳ ಬಗ್ಗೆ ಪುಸ್ತಕ ಬರೆದ ಹಾಗೂ ಅವರಿಗೆ ಡೆಪ್ಯುಟಿ ಸೆಕ್ರೆಟರಿ ಆಗಿದ್ದ ಕೆ.ಸಿ.ಸಿಂಗ್ ಪ್ರಕಾರ, ಇದು ಅರ್ಧ ನಿಜ ಮತ್ತು ಅರ್ಧ ಸುಳ್ಳು. ಜೈಲ್ ಸಿಂಗ್ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿರಲಿಲ್ಲ. ಅದು ಅವರಿಗೂ ಗೊತ್ತಿತ್ತು.

Vishweshwar Bhat Column: ಜೀವನದಲ್ಲಿ ಹಿನ್ನಡೆಯಾದಾಗ ಕಿಂಚಿತ್ತೂ ಅಧೀರರಾಗಬಾರದು

ಜೀವನದಲ್ಲಿ ಹಿನ್ನಡೆಯಾದಾಗ ಕಿಂಚಿತ್ತೂ ಅಧೀರರಾಗಬಾರದು

ದೇವರು ನಮ್ಮ ಯೋಜನೆಗಳನ್ನು ತಲೆಕೆಳಗು ಮಾಡುತ್ತಿರುತ್ತಾನೆ. ಆಗ ನೀವು ಬೇಸರಿಸಿಕೊಳ್ಳ ಬಾರದು, ಯಾಕೆಂದರೆ ಆತ ತನ್ನ ಯೋಜನೆಗಳನ್ನು ಜಾರಿಗೊಳಿಸಲು ಸ್ಕೆಚ್ ಹಾಕಿರುತ್ತಾನೆ. ಹೀಗಾಗಿ ಜೀವನದಲ್ಲಿ ಹಿನ್ನಡೆಯಾದಾಗ ಕಿಂಚಿತ್ತೂ ಅಽರರಾಗಬಾರದು. ನಮ್ಮ ಒಳ್ಳೆಯದಕ್ಕಾಗಿಯೇ ಇವೆಲ್ಲ ಆಗುತ್ತಿದೆ ಯೆಂದು ಭಾವಿಸಿ ಸಾಕು, ಎಲ್ಲವೂ ಸರಿ ಹೋಗುತ್ತದೆ.

Vishweshwar Bhat Column: ಪ್ರಧಾನಿ ಸಂದರ್ಶಿಸಿದ ಮೊದಲ ಪತ್ರಕರ್ತ

ಪ್ರಧಾನಿ ಸಂದರ್ಶಿಸಿದ ಮೊದಲ ಪತ್ರಕರ್ತ

ವಾಜಪೇಯಿ ಈ ವಿಷಯದಲ್ಲಿ ಜಾಣ್ಮೆಯನ್ನು ಮೆರೆದರು. ಒಂದು ಕಾಲಕ್ಕೆ ತಾವೇ ಸಂಪಾದಕ ರಾಗಿದ್ದ ‘ಪಾಂಚಜನ್ಯ’ ಪತ್ರಿಕೆಗೆ ಸಂದರ್ಶನ ನೀಡಲು ನಿರ್ಧರಿಸಿದರು. ಅವರು ಆ ಪತ್ರಿಕೆಯ ಆಗಿನ ಸಂಪಾದಕ ತರುಣ್ ವಿಜಯ್ ಅವರಿಗೆ ಪ್ರಪ್ರಥಮ ಸಂದರ್ಶನವನ್ನು ನೀಡಿದರು. ಅದು ಅವರ ಅದೃಷ್ಟವನ್ನೇ ಬದಲಾಯಿಸಿ ಬಿಟ್ಟಿತು.

Vishweshwar Bhat Column: ʼಭುಜಬಲ್‌ʼದ ಪರಾಕ್ರಮ

ʼಭುಜಬಲ್‌ʼದ ಪರಾಕ್ರಮ

ಶಿವಸೇನೆಯ ನಾಯಕ ಬಾಳ್ ಠಾಕ್ರೆ ಅವರ ಬಲಗೈ ಬಂಟ ಎಂದು ಕರೆಯಿಸಿಕೊಂಡಿದ್ದ ಭುಜಬಲ್, ತಮ್ಮ ನಾಯಕ ಕಾಲಿನಲ್ಲಿ ತೋರಿಸಿದನ್ನು ತಲೆ ಮೇಲೆ ಇಟ್ಟು ಮಾಡಿತೋರಿಸುತ್ತಿದ್ದರು. ‘ನನ್ನ ಮನೆ ದೈವ ಠಾಕ್ರೆ, ನನ್ನ ಮನೆ ಠಾಕ್ರೆ ಭಿಕ್ಷೆ’ ಎಂದು ಹೇಳಿ ಸ್ವಾಮಿನಿಷ್ಠೆಯನ್ನು ಮೆರೆದಿದ್ದ ಭುಜಬಲ್, ಮುಂಬೈಯಲ್ಲಿದ್ದಾಗ ಬಾಳ್ ಠಾಕ್ರೆಯವರನ್ನು ಒಂದು ದಿನವೂ ನೋಡದ ದಿನಗಳಿರ ಲಿಲ್ಲ.

Vishweshwar Bhat Column: ವಿಮಾನ ಮತ್ತು ಎತ್ತರದ ಹಾರಾಟ

ವಿಮಾನ ಮತ್ತು ಎತ್ತರದ ಹಾರಾಟ

38000 ಅಡಿ ಎತ್ತರದಿಂದ ವಿಮಾನ ಬಿದ್ದರೆ ಯಾರೂ ಉಳಿಯುವುದಿಲ್ಲ, ಅದರ ಬದಲು ಏಳೆಂಟು ಸಾವಿರ ಅಡಿ ಎತ್ತರದಲ್ಲಿ ಹಾರಿಸಬಹುದಲ್ಲ ಎಂದು ಕೆಲವರು ಕೇಳುತ್ತಾರೆ. ಇದಕ್ಕೆ ಉತ್ತರ- ಏಳೆಂಟು ಸಾವಿರ ಅಡಿ ಎತ್ತರದಿಂದ ಬಿದ್ದರೂ ಯಾರೂ ಬದುಕಿ ಉಳಿಯುವುದಿಲ್ಲ. ಆದರೆ ವಿಮಾನವನ್ನು 38000 ಅಡಿ ಎತ್ತರದಲ್ಲಿ ಹಾರಿಸುವುದಕ್ಕೆ ಹಲವು ಕಾರಣಗಳಿವೆ. ಈ ಎತ್ತರವನ್ನು ‘ಕ್ರೂಸ್ ಎತ್ತರ’ ಅಂತಾರೆ.

Vishweshwar Bhat Column: ಅಂಕಣಕಾರನ ತಳಮಳ

ಅಂಕಣಕಾರನ ತಳಮಳ

ಮೊದಲ ಓವರಿನಲ್ಲಿ ಮೂರು ವೈಡ್ ಬಾಲ್ ಎಸೆದರೆ ಬೌಲರನ ಮನಸ್ಥಿತಿಯಂತೆ, ಅಂಕಣಕಾರನೂ ಪೇಚಾಡುವುದು ಅನುಭವಕ್ಕೆ ಬರುತ್ತದೆ. ಹಾಗಂತ ಅದೇನು ಪ್ರಮಾದವಲ್ಲ. ಮಾಲ್ಕಮ್ ಮಾರ್ಷಲ್‌ ನಂಥ ಅದ್ಭುತ ಬೌಲರುಗಳು ಸಹ ಓವರಿನಲ್ಲಿ ಐದು ವೈಡ್ ಬಾಲ್ ಎಸೆದಿದ್ದಾರೆ. ಅದು ಅವನ ಅಂದಿನ ಮನಸ್ಥಿತಿ ಅಷ್ಟೇ. ಅಂಕಣಕಾರನೂ ಒಮ್ಮೊಮ್ಮೆ ಇಂಥದೇ ವೈಡ್ ಬಾಲ್ ಎಸೆಯುತ್ತಾನೆ.

Vishweshwar Bhat Column: ಆನೆ ಮಾಂಸವನ್ನು ಒಬ್ಬ ವ್ಯಕ್ತಿ ಸೇವಿಸುವುದು ಸಾಧ್ಯವಾ ? ಹೂಂ ಸಾಧ್ಯ..

ಆನೆ ಮಾಂಸವನ್ನು ಒಬ್ಬ ವ್ಯಕ್ತಿ ಸೇವಿಸುವುದು ಸಾಧ್ಯವಾ ? ಹೂಂ ಸಾಧ್ಯ..

ಸಾಮಾನ್ಯವಾಗಿ ಏಷ್ಯಾದಲ್ಲಿ ಕಂಡುಬರುವ ಆನೆಗಳು ಆಫ್ರಿಕಾದ ಆನೆಗಳಿಗಿಂತ ಚಿಕ್ಕದಾಗಿದ್ದರೂ, ಸುಮಾರು ನಾಲ್ಕರಿಂದ ಐದು ಸಾವಿರ ಕೆಜಿ ಭಾರ ಹೊಂದಿರುತ್ತವೆ. ಒಂದು ಆನೆ ಸರಾಸರಿ ಮೂರೂವರೆ ಸಾವಿರ ಕೆಜಿ ತೂಕದ್ದು ಎಂದು ಭಾವಿಸಿ ದರೂ, ಮನುಷ್ಯನಿಗೆ ಅದನ್ನು ಸೇವಿಸುವುದು ಅಸಾಧ್ಯದ ಮಾತೇ.

Vishweshwar Bhat Column: ಶಬ್ದಬ್ರಹ್ಮ ತಿ.ತಾ.ಶರ್ಮ

ಶಬ್ದಬ್ರಹ್ಮ ತಿ.ತಾ.ಶರ್ಮ

‘ಥಿಯರಿ ಆಫ್ ರಿಲೇಟಿವಿಟಿ’ ಯನ್ನು ಸಾಪೇಕ್ಷವಾದ ಎಂದು ಟಂಕಿಸಿದವರೂ ತಿ.ತಾ.ಶರ್ಮರೇ. ಸುಗ್ರೀವಾಜ್ಞೆ, ಭರತವಾಕ್ಯ, ಚಕ್ರಗೋಷ್ಠಿ, ಕ್ರಿಯಾಲೋಪ (ಪಾಯಿಂಟ್ ಆಫ್ ಆರ್ಡರ್), ಗೊತ್ತು ವಳಿ‌ (ಮೋಷನ್), ಕಂಠಕೌಪೀನ (ಟೈ), ಬಡ ಬೋರೇಗೌಡ, ಮಾತಿನ ಮಲ್ಲ ಮುಂತಾದ ಪದಗಳು ಶರ್ಮ ರಿಂದ ಟಂಕಿಸಲಾದವುಗಳು. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಕುರಿತ ವರದಿಗೆ ತಿ.ತಾ. ಶರ್ಮರು, ‘ಧರ್ಮ ಸಂಗ್ರಾಮ : ಲವಣಾಸುರ ವಧೆ’ ಎಂಬ ಶೀರ್ಷಿಕೆ ನೀಡಿದ್ದು ಆ ದಿನಗಳಲ್ಲಿ ಗಮನ ಸೆಳೆದಿತ್ತು

Vishweshwar Bhat Column: ಇದು ಹೂವುಗಳ ಅಲಂಕಾರವಷ್ಟೇ ಅಲ್ಲ

ಇದು ಹೂವುಗಳ ಅಲಂಕಾರವಷ್ಟೇ ಅಲ್ಲ

ಜಪಾನಿನ ಒಂದು ಕಲೆ ಭಾರತದಲ್ಲೂ ಜನಪ್ರಿಯವಾಗಿದ್ದರೆ ಅದು ಇಕೆಬಾನ. ಜಪಾನಿನ ‘ಪುಷ್ಪಾಲಂಕಾರ ಕಲೆ’ (ಇಕೆಬಾನ) ಜಪಾನ್ ಮತ್ತು ಭಾರತ ಮಾತ್ರ ಅಲ್ಲ, ಅದು ವ್ಯಾಪಿಸದ ಜಗತ್ತಿನ ದೇಶ ಇರಲಿಕ್ಕಿಲ್ಲ. ಜಾಗತಿಕರಣಕ್ಕೆ ಜಪಾನ್ ನೀಡಿದ ಬಹು ದೊಡ್ಡ ಕಾಣಿಕೆ ಅಂದ್ರೆ ಇಕೆಬಾನ. ‘ಜೀವಂತ ಹೂವುಗಳನ್ನು ಇಡುವುದು’ ಅಥವಾ ’ಹೂವುಗಳಿಗೆ ಜೀವ ನೀಡುವುದು’ ಅಂದ್ರೆ ಇಕೆಬಾನ ಎಂದು ಸ್ಥೂಲವಾಗಿ ಹೇಳಬಹುದು. ಇದು ಜಪಾನಿನ ಸಾಂಪ್ರದಾಯಿಕ ಪುಷ್ಪಾಲಂಕಾರ ಕಲೆಯಾಗಿದೆ.

Vishweshwar Bhat Column: ಕನ್ನಡ ಅಸ್ಮಿತೆ ಸೋನು, ತಮನ್ನಾ, ಕಮಲ್‌ ಅಲ್ಲಾಡಿಸುವಷ್ಟು ದುರ್ಬಲವಾ ?

ಕನ್ನಡ ಅಸ್ಮಿತೆ ಸೋನು, ತಮನ್ನಾ, ಕಮಲ್‌ ಅಲ್ಲಾಡಿಸುವಷ್ಟು ದುರ್ಬಲವಾ ?

ಅಷ್ಟಕ್ಕೂ ಸೋನು ನಿಗಮ್ ಹಾಗೆ ಹೇಳಿದಾಕ್ಷಣ ಕನ್ನಡಿಗರ ಸ್ವಾಭಿಮಾನ, ಅಸ್ಮಿತೆ ವೃಷಭಾವತಿ ಯಲ್ಲಿ ಕೊಚ್ಚಿ ಹೋಗ್ತಾ ಇತ್ತಾ? ಬಕ್ವಾಸ್ ! ಇಂಥ ಕ್ಷುಲ್ಲಕ ವಿಷಯಗಳಿಗೆ ಹತ್ತು-ಹದಿನೈದು ದಿನ ವ್ಯಯಿಸುತ್ತೇ ವಲ್ಲ, ಅದು ವಿಷಾದದ ಅಂಶ. ಕೆಲಸಕ್ಕೆ ಬಾರದ ಸಂಗತಿಗಳು ನಮ್ಮನ್ನು ಈ ರೀತಿ ಗಾಢವಾಗಿ ಬಾಧಿಸುತ್ತ ವಲ್ಲ, ಅದು ಖೇದಕರ. ಅಷ್ಟಕ್ಕೂ ಸೋನು ನಿಗಮ್ ಯಾರು? ಒಬ್ಬ ಗಾಯಕ, ಫುಲ್ ಸ್ಟಾಪ್.

Vishweshwar Bhat Column: ಅಲ್ಲಿ ಜನರೇ ಪ್ರೇಕ್ಷಣೀಯ !

ಅಲ್ಲಿ ಜನರೇ ಪ್ರೇಕ್ಷಣೀಯ !

ಹರಾಜುಕೂ ಜಪಾನಿನ ಯುವ ಸಂಸ್ಕೃತಿಯ ಹೃದಯ ಸಂಗಮ. ಫ್ಯಾಷನ್ ಪ್ರಿಯರ ಸ್ವರ್ಗ. ಹರಾಜು ಕೂ ಎನ್ನುವುದು ಕೇವಲ ವ್ಯಾಪಾರ ವಲಯವಲ್ಲ, ಅದು ಹೊಸ ಫ್ಯಾಷನ್ ಲೋಕದ ಪ್ರತಿನಿಧಿ. ಪ್ರವಾಸಿಗರ ಆಕರ್ಷಣೆಯ ಕೇಂದ್ರ ಮತ್ತು ನವೀನ ಆವಿಷ್ಕಾರಗಳ ಹಸಿರುಭೂಮಿ. ಹರಾಜುಕೂ ಅಂದ್ರೆ ಜಪಾನಿ ಭಾಷೆಯಲ್ಲಿ ‘ಮೂಲ ನಿಲ್ದಾಣ’ ಎಂದರ್ಥ

Vishweshwar Bhat Column: ಸಾಯಂಕಾಲ ಐದು ಗಂಟೆ ಸಂಗೀತ

ಸಾಯಂಕಾಲ ಐದು ಗಂಟೆ ಸಂಗೀತ

ಜಪಾನ್ ಒಂದು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ದೇಶ ಎಂಬುದು ಗೊತ್ತಿರುವ ಸಂಗತಿ. ಜಪಾ ನಿನ ಪ್ರಮುಖ ನಗರಗಳಲ್ಲಿ ಶಾಲೆ, ಉದ್ಯಾನ, ಆಫೀಸುಗಳು ಇರುವ ತಾಣಗಳಲ್ಲಿ ಸುತ್ತಲೂ ಕೇಳಿಸು ವಂಥ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಸಾಯಂಕಾಲ ಐದು ಗಂಟೆಗೆ ಆ ಧ್ವನಿವರ್ಧಕ ಗಳಿಂದ ಸಂಗೀತ ಹೊರ ಹೊಮ್ಮುತ್ತದೆ. ಇದನ್ನು Five o' Clock Music’ ಎಂದು ಕರೆಯುತ್ತಾರೆ.

Vishweshwar Bhat Column: ಮನೆಯಲ್ಲಿ ಪತಿಯೇ ಪರಾಧೀನ

ಮನೆಯಲ್ಲಿ ಪತಿಯೇ ಪರಾಧೀನ

ಪತಿಯು ತಿಂಗಳ ಕೊನೆಯಲ್ಲಿ ‘ಒಕೊಡುಕಿ’ ಎಂಬ ರೂಪದಲ್ಲಿ ನಿಗದಿತ ಮೊತ್ತವನ್ನು ಮಾತ್ರ ಪಡೆಯು ತ್ತಾನೆ. ಈ ಹಣವನ್ನು ಆತ ತನ್ನ ಸುತ್ತಾಟ, ಹವ್ಯಾಸ, ಸ್ನೇಹಿತರೊಂದಿಗೆ ಕೂಟ ಮತ್ತು ಇತರೆ ವೈಯಕ್ತಿಕ ವೆಚ್ಚಗಳಿಗೆ ಬಳಸುತ್ತಾನೆ. ಪತಿಯ ಖರ್ಚಿನಲ್ಲಿ ನಿಯಂತ್ರಣ ತರಲು ಮತ್ತು ನಿಯಮಿತ ವೆಚ್ಚದ ಗಡಿ ದಾಟದೇ, ಅನವಶ್ಯಕ ಖರ್ಚುಗಳನ್ನು ಕಡಿತಗೊಳಿಸಲು ಈ ಪದ್ಧತಿ ಸಹಾಯಕ ಎಂಬ ಭಾವನೆ ಜಪಾನಿ ಯರಲ್ಲಿದೆ

Vishweshwar Bhat Column: ಸೆಂಚಾ ಚಹಾದ ಗಮ್ಮತ್ತು ಗೊತ್ತಾ ?

ಸೆಂಚಾ ಚಹಾದ ಗಮ್ಮತ್ತು ಗೊತ್ತಾ ?

ಅಷ್ಟಕ್ಕೂ ಸೆಂಚಾ ಎಂದರೇನು? ಸೆಂಚಾ ಅಂದ್ರೆ ಬಿಸಿನೀರಿನಲ್ಲಿ ತಯಾರಿಸಲಾದ ಚಹಾ ಎಂದು ಸರಳ ವಾಗಿ ಹೇಳಬಹುದು. ಇದನ್ನು ಜಪಾನಿನ ಬೆಳೆದಿರುವ ಹಸಿರು ಚಹಾ ಎಲೆಗಳಿಂದ ತಯಾರಿಸ ಲಾಗು ತ್ತದೆ. ಸೆಂಚಾವನ್ನು ಸೂರ್ಯ ಪ್ರಕಾಶದಲ್ಲಿ ಬೆಳೆಯಲಾಗುತ್ತದೆ ಮತ್ತು ಬೆಳೆದ ಎಲೆಗಳನ್ನು ತಾಜಾ ಸ್ಥಿತಿಯಲ್ಲಿಯೇ ಸಂರಕ್ಷಿಸಿ ಇಡಲಾಗುತ್ತದೆ

Vishweshwar Bhat Column: ಆಪರೇಶನ್‌ ಸಿಂದೂರ ಮತ್ತು ತುಪ್ಪದಲ್ಲಿ ಬಿದ್ದ ಜಾರ್ಜಿಯಾದ ಒಣರೊಟ್ಟಿ

ಆಪರೇಶನ್‌ ಸಿಂದೂರ ಮತ್ತು ತುಪ್ಪದಲ್ಲಿ ಬಿದ್ದ ಜಾರ್ಜಿಯಾದ ಒಣರೊಟ್ಟಿ

ಕೂರಾ ನದಿಯ ತೀರದಲ್ಲಿರುವ ಈ ನಗರ, ಪರ್ವತ, ಹಸಿರು ಬೆಟ್ಟ-ಗುಡ್ಡಗಳಿಂದ ಸುತ್ತುವರಿ ಯಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 400 ಮೀ. ಎತ್ತರದಲ್ಲಿರುವ ಈ ನಗರವು ವಿಶಿಷ್ಟ ಭೌಗೋಳಿಕ ರಚನೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.

Vishweshwar Bhat Column: ತಜ್ಞರ ಸಲಹೆ ತೀರಾ ಅಗತ್ಯ

ತಜ್ಞರ ಸಲಹೆ ತೀರಾ ಅಗತ್ಯ

ತಮ್ಮದೇನೂ ತಪ್ಪಿಲ್ಲ ಎಂದು ಈ ವ್ಯಕ್ತಿ ಅಲವತ್ತುಕೊಂಡರೂ ಬ್ಯಾಂಕ್ ಅಧಿಕಾರಿಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಷ್ಟರೊಳಗೆ ಅವರು ವಕೀಲರ ಸಹಾಯ ಪಡೆದಿದ್ದರು. ರಾಜಕುಮಾರ್ ಖರ್ಚು ಮಾಡಿರುವ ಹಣ ವಾಪಸು ಕೊಡಬೇಕಿಲ್ಲ, ಬದಲಾಗಿ ಅವರಿಗೆ ಒಂದು ಕಾರ್ ಲೋನ್ ಆಫರ್ ಕೊಡೋ ಣ ಎಂದು ಬ್ಯಾಂಕಿನವರು ಆಗಲೇ ನಿರ್ಧರಿಸಿದ್ದರು

Vishweshwar Bhat Column: ಲಂಕೇಶರ ಇಂಗ್ಲಿಷ್‌ ಕೀಳರಿಮೆ

ಲಂಕೇಶರ ಇಂಗ್ಲಿಷ್‌ ಕೀಳರಿಮೆ

ಲಂಕೇಶ್ ಬಗ್ಗೆ ಅವರು ಒಂದೆಡೆ ಹೀಗೆ ಬರೆಯುತ್ತಾರೆ- ಲಂಕೇಶರ ಹೆಸರಿನ ಪಿ.ಇನಿಷಿಯಲ್ಸ್ ಪಾಳ್ಯದ ಅಥವಾ ಪಟೇಲ್ ಅಥವಾ ಪಾಳೇಗಾರ ಎಂಬುದರಿಂದ ಬಂದದ್ದು ಇರಬೇಕು. ಇದನ್ನು ‌ಕೇಳಿದ್ದು ಲಂಕೇಶರೇ. ಇವತ್ತಿಗೂ ಈ ‘ಪಿ’ ಅಕ್ಷರ ಲಂಕೇಶರ ಹೆಸರಿನೊಂದಿಗೆ ಸೇರಿಕೊಂಡ ಕಾರಣ ಬಹಿರಂಗ ವಾಗಿಲ್ಲ. ಅವರ ಊರು ಕೊನೆಗವಳ್ಳಿ, ತಂದೆ ನಂದಿಬಸಪ್ಪ.

Vishweshwar Bhat Column: ಆಸ್ಪತ್ರೆಯಲ್ಲಿದ್ದ ಕ್ಲಿಯರ್‌ಗೆ ಮನೋಬಲವೆಂಬ ಬೆಳಕಿನ ಕಿಂಡಿ

ಆಸ್ಪತ್ರೆಯಲ್ಲಿದ್ದ ಕ್ಲಿಯರ್‌ಗೆ ಮನೋಬಲವೆಂಬ ಬೆಳಕಿನ ಕಿಂಡಿ

ಜೀವನ ಮುಗಿದೇ ಹೋಯಿತು ಎಂದು ಭಾವಿಸಿದ್ದ ಅವನ ಬದುಕಿನಲ್ಲಿ ಕಾಮನ ಬಿಲ್ಲು ಮೂಡಲಾ‌ ರಂಭಿಸಿತ್ತು. ಬೇಸ್ ಬಾಲ್ ಅವನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಅವನ ತಂದೆಯೂ ಲೀಗ್ ಪಂದ್ಯ ಗಳಲ್ಲಿ ಆಡಿದ್ದರು. ಅವನಿಗೂ ವೃತ್ತಿಪರ ಬೇಸ್ ಬಾಲ್ ಆಟಗಾರನಾಗಬೇಕು ಎಂಬ ಆಸೆಯಿತ್ತು. ಆದರೆ ಇಂಥ ಪರಿಸ್ಥಿತಿಯಲ್ಲಿ, ಆಟಗಾರನಾಗುವುದು ಬೇರೆ ಮಾತಾಯಿತು, ಮೊದಲಿನಂತೆ ಓಡಾ ಡಲು ಸಾಧ್ಯವಾದರೆ ಅದೇ ದೊಡ್ಡದಾಗಿತ್ತು.

Vishweshwar Bhat Column: ಲ್ಯಾಂಡಿಂಗ್‌ ಮಾಡುವಾಗ ಕಾಣದಿದ್ದರೆ

ಲ್ಯಾಂಡಿಂಗ್‌ ಮಾಡುವಾಗ ಕಾಣದಿದ್ದರೆ

ಒಮ್ಮೆ ನಾನು ಫ್ರಾನ್ಸಿನ ಟುಲೂಸ್‌ನಿಂದ ಪ್ಯಾರಿಸ್ಸಿಗೆ ವಿಮಾನದಲ್ಲಿ ಆಗಮಿಸುತ್ತಿದ್ದೆ. ವಿಮಾನ ಪ್ಯಾರಿಸ್ಸಿನ ಚಾರ್ಲ್ಸ್ ಡಿಗಾಲ್ ವಿಮಾನ‌ ನಿಲ್ದಾಣದಲ್ಲಿ ಇಳಿಯಬೇಕಿತ್ತು. ವಿಮಾನ ಲ್ಯಾಂಡ್ ಆಗುವ ಸುಮಾರು 20 ನಿಮಿಷ ಮುನ್ನ ದಟ್ಟವಾದ ಕಪ್ಪು ಮೋಡದಲ್ಲಿ ಸುಮಾರು ಏಳೆಂಟು ನಿಮಿಷ ಹಾದು ಹೋಗುತ್ತಿದ್ದರೂ, ಶುಭ್ರ ಆಗಸ ಕಾಣುತ್ತಿರಲಿಲ್ಲ.

Vishweshwar Bhat Column: ಟೈಮ್ ಮ್ಯಾಗಜಿನ್‌ ಮುಖಪುಟ

ಟೈಮ್ ಮ್ಯಾಗಜಿನ್‌ ಮುಖಪುಟ

ಜಗತ್ತಿನಲ್ಲಿ ಯಾವುದಾದರೂ ಒಂದು ಮ್ಯಾಗಜಿನ್‌ನ ಮುಖಪುಟ ಅತಿ ಹೆಚ್ಚು ಜನರನ್ನು ಆಕರ್ಷಿಸಿ ದ್ದರೆ, ಅದು ನಗ್ನಚಿತ್ರಗಳುಳ್ಳ ‘ಪ್ಲೇ ಬಾಯ್’ ಪತ್ರಿಕೆಯದ್ದು ಎಂದು ಅನೇಕರು ಭಾವಿಸಿರಬಹುದು. ಆದರೆ‌ ನಿಜಕ್ಕೂ ಈ ವಿಷಯದಲ್ಲಿ ಅತಿ ಹೆಚ್ಚು ಜನರ ಗಮನ ಸೆಳೆದಿದ್ದು ‘ಟೈಮ್’ ಮ್ಯಾಗಜಿನ್ ಅಂದ್ರೆ ಆಶ್ಚರ್ಯವಾಗಬಹುದು. ‘ಟೈಮ್’ ಮ್ಯಾಗಜಿನ್‌ನ‌ ಮೊದಲ ಸಂಚಿಕೆ ಬಂದಿದ್ದು 1923ರ ಮಾರ್ಚ್ 3 ರಂದು