ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಆಕ್ಸಿಜನ್‌ ಮಾಸ್ಕ್‌ ಬಳಕೆ

Vishweshwar Bhat Column: ಆಕ್ಸಿಜನ್‌ ಮಾಸ್ಕ್‌ ಬಳಕೆ

ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳು 30000 ದಿಂದ 40000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಈ ಎತ್ತರದಲ್ಲಿ ಗಾಳಿಯು ಅತ್ಯಂತ ವಿರಳವಾಗಿರುತ್ತದೆ ಮತ್ತು ಆಮ್ಲಜನಕದ ಪ್ರಮಾಣವು ತುಂಬಾ ಕಡಿಮೆ ಇರುತ್ತದೆ. ಈ ಎತ್ತರದಲ್ಲಿ ಮನುಷ್ಯನು ಮುಖವಾಡವಿಲ್ಲದೆ ನೇರವಾಗಿ ಉಸಿರಾಡಲು ಸಾಧ್ಯ ವಿಲ್ಲ. ಒಂದು ವೇಳೆ ವಿಮಾನದ ಒಳಗಿನ ಗಾಳಿಯ ಒತ್ತಡ ಕಡಿಮೆಯಾದರೆ, ಆ ಎತ್ತರದಲ್ಲಿ ಮನುಷ್ಯನಿಗೆ ಪ್ರಜ್ಞೆ ತಪ್ಪಲು 15 ರಿಂದ 30 ಸೆಕೆಂಡುಗಳು ಮಾತ್ರ ಸಾಕು. ಇದನ್ನು ’Useful Consciousness’ ಎಂದು ಕರೆಯುತ್ತಾರೆ.

Vishweshwar Bhat Column: ಮರುಭೂಮಿಯಲ್ಲೂ ಮೀನುಗಾರಿಕೆ: ಇದು ಇಸ್ರೇಲ್‌ ಮಾದರಿ

ಮರುಭೂಮಿಯಲ್ಲೂ ಮೀನುಗಾರಿಕೆ: ಇದು ಇಸ್ರೇಲ್‌ ಮಾದರಿ

ಇಸ್ರೇಲ್‌ನಲ್ಲಿ ಮಳೆ ಕಡಿಮೆ, ನದಿಗಳೂ ಕಡಿಮೆ. ಹೀಗಿರುವಾಗ ಮೀನು ಸಾಕಾಣಿಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ. ಅಲ್ಲಿನ ವಿಜ್ಞಾನಿಗಳು ‘ಪ್ರತಿ ಹನಿ ನೀರಿಗೂ ಗರಿಷ್ಠ ಲಾಭ’ ಎಂಬ ಮಂತ್ರ ವನ್ನು ಪಾಲಿಸುತ್ತಾರೆ. ಸಮುದ್ರದ ನೀರನ್ನು ಉಪ್ಪುಮುಕ್ತಗೊಳಿಸುವುದು ( Desalination) ಮತ್ತು ಬಳಸಿದ ನೀರನ್ನು ಪುನಃ ಸಂಸ್ಕರಿಸಿ ಮೀನು ಸಾಕಾಣಿಕೆಗೆ ಬಳಸುವುದು ಅಲ್ಲಿನ ತಂತ್ರಜ್ಞಾನದ ವೈಶಿಷ್ಟ್ಯ.ಇಸ್ರೇಲ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಪ್ರಪಂಚಕ್ಕೆ ಮಾದರಿ.

Vishweshwar Bhat Column: ನೆಹರು-ವಾಜಪೇಯಿ ಸ್ನೇಹ

Vishweshwar Bhat Column: ನೆಹರು-ವಾಜಪೇಯಿ ಸ್ನೇಹ

ಕ್ರುಶ್ಚೇವ್ ಗೌರವಾರ್ಥ ಏರ್ಪಡಿಸಿದ ಭೋಜನಕೂಟದಲ್ಲಿ ಅತಿಗಣ್ಯ ವ್ಯಕ್ತಿಗಳನ್ನು ಖುದ್ದಾಗಿ ನೆಹರು ಅವರೇ ಪರಿಚಯಿಸುತ್ತಿದ್ದರು. ವಾಜಪೇಯಿ ಅವರ ಸರದಿ ಬಂದಿತು. ಆಗ ನೆಹರು ಕ್ರುಶ್ಚೇವ್ ಅವರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಾ, ‘ಇವರು ನಮ್ಮ ದೇಶದ ಭವಿಷ್ಯದ ಪ್ರಧಾನಿ’ ಎಂದು ಉದ್ಗರಿಸಿ, ಪರಿಚಯಿಸಿದರು. ನೆಹರು ಅವರಿಂದ ವಾಜಪೇಯಿ ಆ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಆ ಮಾತುಗಳನ್ನು ಕೇಳಿ ಕ್ರುಶ್ಚೇವ್‌ಗೂ ಅಚ್ಚರಿಯಾಯಿತು.

Vishweshwar Bhat Column: ಇದು ಹಳೆಯ ವಿನ್ಯಾಸ

Vishweshwar Bhat Column: ಇದು ಹಳೆಯ ವಿನ್ಯಾಸ

ಬೋಯಿಂಗ್ 737 MAX ವಿಮಾನದ ವಿನ್ಯಾಸ ಮತ್ತು ಅದರ ಐತಿಹಾಸಿಕ ಹಿನ್ನೆಲೆ ವಿಮಾನಯಾನ ಲೋಕದ ಅತ್ಯಂತ ವಿವಾದಾತ್ಮಕ ಮತ್ತು ಆಸಕ್ತಿದಾಯಕ ವಿಷಯಗಳಲ್ಲಿ ಒಂದಾಗಿದೆ. 737 MAX ಅಗಿ ಇಂದು ಆಕಾಶದಲ್ಲಿ ಹಾರಾಡುತ್ತಿರುವ ಅತ್ಯಂತ ಸುಧಾರಿತ ವಿಮಾನಗಳಲ್ಲಿ ಒಂದಾಗಿ ಕಾಣಿಸಬಹುದು. ಅದರ ‘ಗ್ಲಾಸ್ ಕಾಕ್‌ಪಿಟ್’, ಅತ್ಯಾಧುನಿಕ ರೆಕ್ಕೆಗಳು ಮತ್ತು ಶಬ್ದರಹಿತ ಶಕ್ತಿಯುತ ಎಂಜಿನ್‌ಗಳನ್ನು ನೋಡಿದರೆ, ನಮಗೆ ಇದು 21ನೇ ಶತಮಾನದ ಅದ್ಭುತ ಎಂದು ಅನಿಸಬಹುದು.

Vishweshwar Bhat Column: ದಂತಕತೆಯಾದ ʼದಂತʼ ರಾಜ: ಒಂದು ಆನೆಯ ಮಹಾಪಯಣ

ದಂತಕತೆಯಾದ ʼದಂತʼ ರಾಜ: ಒಂದು ಆನೆಯ ಮಹಾಪಯಣ

ಜಗತ್ತಿನಾದ್ಯಂತ ಛಾಯಾಗ್ರಾಹಕರು ಮತ್ತು ಪ್ರವಾಸಿಗರು ಮೌಂಟ್ ಕಿಲಿಮಂಜಾರೋ ಪರ್ವತದ ಹಿನ್ನೆಲೆಯಲ್ಲಿ ಕ್ರೇಗ್‌ನ ಒಂದು ಫೋಟೋ ತೆಗೆಯಲು ಕಾದು ಕುಳಿತಿರುತ್ತಿದ್ದರು. ಅವನ ಒಂದು ವಿಶೇಷ ಪೋಸು ಸಿಕ್ಕರೆ ತಮ್ಮ ಪ್ರವಾಸ, ಪ್ರಯತ್ನ ಸಾರ್ಥಕ ಎಂದು ಭಾವಿಸುತ್ತಿದ್ದರು.

Vishweshwar Bhat Column: ಆ ಎಡವಟ್ಟಿನ ಪರಿಣಾಮ

Vishweshwar Bhat Column: ಆ ಎಡವಟ್ಟಿನ ಪರಿಣಾಮ

2009ರಲ್ಲಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಂಭವಿಸಿದ ಈ ದುರಂತವು, ಆಧುನಿಕ ವಿಮಾನಗಳು ಸಣ್ಣ ಸಂವೇದಕಗಳ ಮೇಲೆ ಎಷ್ಟು ಅವಲಂಬಿತವಾಗಿವೆ ಮತ್ತು ಅವು ವಿಫಲ ವಾದಾಗ ಪೈಲಟ್‌ಗಳ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಕನ್ನಡಿಯಾಗಿದೆ. ಜೂನ್ 1, 2009ರಂದು ರಿಯೊ ಡಿ ಜನೈರೊದಿಂದ ಪ್ಯಾರಿಸ್‌ಗೆ ಹೊರಟಿದ್ದ ಏರ್‌ಬಸ್ A330 ವಿಮಾನವು 228 ಪ್ರಯಾಣಿಕರೊಂದಿಗೆ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರುತ್ತಿದ್ದಾಗ ದಿಢೀರನೆ ನಾಪತ್ತೆಯಾಯಿತು.

Vishweshwar Bhat Column: ಏರ್‌ʼಸ್ಪೀಡ್‌ ಮಾಹಿತಿ ಏಕೆ ನಿರ್ಣಾಯಕ ?

ಏರ್‌ʼಸ್ಪೀಡ್‌ ಮಾಹಿತಿ ಏಕೆ ನಿರ್ಣಾಯಕ ?

ಭೂಮಿಯ ಮೇಲೆ ಕಾರು ಚಲಿಸುವಾಗ ಚಕ್ರದ ತಿರುಗುವಿಕೆಯಿಂದ ವೇಗ ತಿಳಿಯುತ್ತದೆ, ಆದರೆ ಆಕಾಶದಲ್ಲಿ ಗಾಳಿಯ ಒತ್ತಡದ ಮೂಲಕ ವೇಗವನ್ನು ಅಳೆಯಲಾಗುತ್ತದೆ. ಇಲ್ಲಿ ಪಿಟೋ ಟ್ಯೂಬ್‌ಗಳ ಪಾತ್ರ ಶುರುವಾಗುತ್ತದೆ. ಪಿಟೋ ಟ್ಯೂಬ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ? ಪಿಟೋ ಟ್ಯೂಬ್ ಎನ್ನುವುದು ವಿಮಾನದ ಹೊರಭಾಗದಲ್ಲಿ (ಸಾಮಾನ್ಯವಾಗಿ ಮೂತಿಯ ಬಳಿ) ಅಳವಡಿಸಲಾಗಿರುವ ಒಂದು ಸಣ್ಣ ಕೊಳವೆ.

Vishweshwar Bhat Column: ಇದು ಪ್ರಜಾಸತ್ತೆಯ ವಿಶೇ಼ಷ

Vishweshwar Bhat Column: ಇದು ಪ್ರಜಾಸತ್ತೆಯ ವಿಶೇ಼ಷ

ಕುರಿ ಕಾಯುತ್ತಾ, ಜಾನಪದ ಕಲೆಯಾದ ’ವೀರ ಕುಣಿತ’ದಲ್ಲಿ ಹೆಜ್ಜೆ ಹಾಕುತ್ತಿದ್ದ ಆ ಹುಡುಗನಿಗೆ ಅಂದು ತಿಳಿದಿರಲಿಲ್ಲ ತಾನು ಮುಂದೊಂದು ದಿನ ರಾಜ್ಯದ ಕೋಟ್ಯಂತರ ಜನರ ಭವಿಷ್ಯ ಬರೆಯುತ್ತೇನೆ ಎಂದು. ತಂದೆಗೆ ಮಗ ಓದುವುದಕ್ಕಿಂತ ಕೃಷಿ ಮಾಡಲಿ ಎಂಬ ಆಸೆ ಇತ್ತು. ಆದರೆ, ಸಿದ್ದರಾಮಯ್ಯನವರಲ್ಲಿ ವಿದ್ಯೆಯ ಹಸಿವಿತ್ತು.

Vishweshwar Bhat Column: ಎಂಜಿನ್‌ ವಿಫಲವಾದರೆ ಮುಂದೇನು ?

Vishweshwar Bhat Column: ಎಂಜಿನ್‌ ವಿಫಲವಾದರೆ ಮುಂದೇನು ?

ಒಂದು ಎಂಜಿನ್ ಕೆಟ್ಟುಹೋದಾಗ ವಿಮಾನವು ಹತ್ತಿರದ ವಿಮಾನ ನಿಲ್ದಾಣವನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ಇದು ನಿರ್ಧರಿಸುತ್ತದೆ. ಹಿಂದಿನ ಕಾಲ ದಲ್ಲಿ, ಸಮುದ್ರದ ಮೇಲೆ ಹಾರಲು ಕನಿಷ್ಠ ಮೂರು ಅಥವಾ ನಾಲ್ಕು ಎಂಜಿನ್‌ಗಳಿರಬೇಕು ಎಂಬ ನಿಯಮವಿತ್ತು. ಆದರೆ ಇಂದಿನ ಎಂಜಿನ್‌ಗಳ ವಿಶ್ವಾಸಾರ್ಹತೆ ಹೆಚ್ಚಾಗಿರುವುದರಿಂದ, ಎರಡು ಎಂಜಿನ್ ಇರುವ ವಿಮಾನಗಳಿಗೂ ಸುದೀರ್ಘ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ

Vishweshwar Bhat Column: ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರ ಕಟ್ಟಬಹುದೆಂಬುದಕ್ಕೆ ಇಸ್ರೇಲ್‌ ನಿದರ್ಶನ

ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರ: ಇಸ್ರೇಲ್‌ ನಿದರ್ಶನ

ಮೊದಲ ಮಹಾಯುದ್ಧದ ನಂತರ, ಈ ಪ್ರದೇಶ ಬ್ರಿಟಿಷರ ಅಧೀನಕ್ಕೆ ಬಂತು. 1917ರ ಬಾಲರ್ ಘೋಷ ಣೆಯು ಯಹೂದಿಗಳಿಗೆ ರಾಷ್ಟ್ರೀಯ ನೆಲೆಯನ್ನು ಸ್ಥಾಪಿಸಲು ಬ್ರಿಟನ್ ಬೆಂಬಲ ನೀಡಿತು. ಆದರೆ, ಇದು ಸ್ಥಳೀಯ ಅರಬ್ ಸಮುದಾಯ ಮತ್ತು ಯಹೂದಿಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು. 1930ರ ದಶಕದಲ್ಲಿ ಜರ್ಮನಿಯಲ್ಲಿ ನಾಜಿಗಳಿಂದ ನಡೆದ ‘ಹೋಲೋಕಾಸ್ಟ್’ (ಯಹೂದಿಗಳ ಸಾಮೂಹಿಕ ಹತ್ಯೆ) ಇಸ್ರೇಲ್ ಸ್ಥಾಪನೆಯ ಅನಿವಾರ್ಯತೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತು. ಲಕ್ಷಾಂತರ ಜನರು ಪ್ರಾಣ ಉಳಿಸಿಕೊಳ್ಳಲು ಪ್ಯಾಲೆಸ್ತೀನ್‌ಗೆ ಬರತೊಡಗಿದರು.

Vishweshwar Bhat Column: ವಿಮಾನದಲ್ಲಿ ವಾಸನೆ: ಆತಂಕ

Vishweshwar Bhat Column: ವಿಮಾನದಲ್ಲಿ ವಾಸನೆ: ಆತಂಕ

ವಿಮಾನದ ಕ್ಯಾಬಿನ್‌ನಲ್ಲಿ ಕಾಣಿಸಿಕೊಂಡ ವಿಚಿತ್ರ ಮತ್ತು ತೀಕ್ಷವಾದ ವಾಸನೆಯು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದರೂ, ವಿಮಾನ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಒಂದು ಸಂಭಾವ್ಯ ಅನಾ‌ ಹುತ ತಪ್ಪಿತು. ಡೆಲ್ಟಾ ಏರ್‌ಲೈ ವಿಮಾನವು ಹಾರುತ್ತಿದ್ದಾಗ, ವಿಮಾನದ ಒಳಭಾಗದಲ್ಲಿ ಹಠಾತ್ತಾಗಿ ಒಂದು ಅಸಹಜ ಮತ್ತು ತೀಕ್ಷವಾದ ವಾಸನೆ ಹರಡಲಾರಂಭಿಸಿತು.

Vishweshwar Bhat Column: ನಿರಂತರ ಹಾರಾಟ

Vishweshwar Bhat Column: ನಿರಂತರ ಹಾರಾಟ

ಲಂಡನ್‌ನಿಂದ ಹೂಸ್ಟನ್‌ಗೆ ಹೋಗಲು ಸುಮಾರು 10ರಿಂದ 11 ಗಂಟೆಗಳ ಕಾಲ ಬೇಕಾಗುತ್ತದೆ. ಅಲ್ಲಿಗೆ ತಲುಪಿದ ಕೆಲವೇ ಗಂಟೆಗಳಲ್ಲಿ, ಅಂದರೆ ಕೇವಲ ಇಂಧನ ತುಂಬಿಸಿ, ಸ್ವಚ್ಛಗೊಳಿಸಿ ಮತ್ತು ಪ್ರಯಾಣಿಕ ರನ್ನು ಬದಲಾಯಿಸಿದ ತಕ್ಷಣ, ಅದು ಮತ್ತೆ ಲಂಡನ್‌ನತ್ತ ಪ್ರಯಾಣ ಬೆಳೆಸುತ್ತದೆ. ದಿನದ 24 ಗಂಟೆ ಗಳಲ್ಲಿ ಸುಮಾರು 20 ಗಂಟೆಗಳ ಕಾಲ ಈ ವಿಮಾನವು ಹಾರಾಟ ನಡೆಸುತ್ತಲೇ ಇರುತ್ತದೆ.

Vishweshwar Bhat Column: ʼಸ್ಕಾಚ್‌ʼ ಸವಿಯುತ್ತಾ, ಹೊಸವರ್ಷಕ್ಕೆ ಕಾಲಿಡೋಣ !

ʼಸ್ಕಾಚ್‌ʼ ಸವಿಯುತ್ತಾ, ಹೊಸವರ್ಷಕ್ಕೆ ಕಾಲಿಡೋಣ !

ಬಾಬುರಾವ್ ಪಟೇಲ್ ಅಂದಿನ ಪ್ರಧಾನಿ ನೆಹರು ಅವರನ್ನು ಈ ಅಂಕಣದಲ್ಲಿ ಕಟುವಾಗಿ ಟೀಕಿಸು ತ್ತಿದ್ದರು. ನೆಹರು ಅದನ್ನು ತಪ್ಪದೇ ಓದುತ್ತಿದ್ದರು ಮತ್ತು ಎಂಜಾಯ್ ಮಾಡುತ್ತಿದ್ದರು. ಒಮ್ಮೆ ಇಡೀ ಸಂಚಿಕೆಯಲ್ಲಿ ಒಂದೇ ಒಂದು ಪ್ರಶ್ನೆಯೂ ನೆಹರು ಕುರಿತು ಇರಲಿಲ್ಲ. ಅದಕ್ಕೆ ನೆಹರು, ‘ಈ ತಿಂಗಳು ನಾನು ಅಪ್ರಸ್ತುತನಾಗಿದ್ದೇನೆ. ಬಾಬುರಾವ್ ಪಟೇಲ್ ಕೂಡ ನನ್ನನ್ನು ಅವರ ಅಂಕಣದಲ್ಲಿ ಪ್ರಸ್ತಾಪಿಸಿಲ್ಲ’ ಎಂದು ತಮಾಷೆಯಾಗಿ ಹೇಳಿದ್ದರು.

Vishweshwar Bhat Column: ಇದೆಂಥ ವಿಚಿತ್ರ ಪರೀಕ್ಷೆ

Vishweshwar Bhat Column: ಇದೆಂಥ ವಿಚಿತ್ರ ಪರೀಕ್ಷೆ

ವಿಮಾನವೊಂದು ಟೇಕಾಫ್ ಅಥವಾ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿದ್ದಾಗ, ಅದು ಭೂಮಿಗೆ ಹತ್ತಿರ ದಲ್ಲಿರುತ್ತದೆ. ಈ ಸಮಯದಲ್ಲಿ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಅತಿ ಹೆಚ್ಚು. ಒಂದು ಸಣ್ಣ ಪಕ್ಷಿ ಬೃಹತ್ ವಿಮಾನಕ್ಕೆ ಏನು ಹಾನಿ ಮಾಡಬಲ್ಲದು ಎಂದು ನೀವು ಯೋಚಿಸಬಹುದು. ಆದರೆ ವಿಜ್ಞಾನವು ಬೇರೆಯೇ ಕಥೆಯನ್ನು ಹೇಳುತ್ತದೆ. ‌

Vishweshwar Bhat Column: ಪೈಲಟ್‌ʼಗಳ ರಹಸ್ಯ ನಿದ್ರೆ

Vishweshwar Bhat Column: ಪೈಲಟ್‌ʼಗಳ ರಹಸ್ಯ ನಿದ್ರೆ

ಪ್ರತಿಯೊಬ್ಬ ಸಿಬ್ಬಂದಿಗೆ ಕಾನೂನುಬದ್ಧ ಕೆಲಸದ ಅವಧಿ ಇರುತ್ತದೆ. ಇದನ್ನು ಮೀರಬಾರದು ಎನ್ನುವ ಕಾರಣಕ್ಕೆ ವಿಮಾನದ ಹಾರಾಟದ ಸಮಯದಲ್ಲಿಯೇ ಸರದಿಯ ಪ್ರಕಾರ ವಿಶ್ರಾಂತಿ ನೀಡಲಾಗುತ್ತದೆ. ವಿಮಾನವು ಆಕಾಶದಲ್ಲಿ ಹಾರಾಡುತ್ತಿರುವಾಗ ಪ್ರತಿಯೊಬ್ಬ ಸಿಬ್ಬಂದಿಗೂ ಯಾವುದೇ ಅಡೆತಡೆಯಿಲ್ಲದ ವಿಶ್ರಾಂತಿ ಅವಧಿಯನ್ನು ಮುಂಚಿತವಾಗಿಯೇ ನಿಗದಿ ಪಡಿಸಲಾಗುತ್ತದೆ.

V‌ishweshwar Bhat Column: ಲ್ಯಾಂಡಿಂಗ್‌ ಗೇರ್

V‌ishweshwar Bhat Column: ಲ್ಯಾಂಡಿಂಗ್‌ ಗೇರ್

ವಿಮಾನವು ನೆಲ ಬಿಟ್ಟು ಮೇಲೆದ್ದ ತಕ್ಷಣ, ಚಕ್ರಗಳ ಮೇಲೆ ಯಾವುದೇ ಘರ್ಷಣೆ ಇರುವುದಿಲ್ಲ. ಇದರಿಂದಾಗಿ ಅವು ದೀರ್ಘಕಾಲದವರೆಗೆ ವೇಗವಾಗಿ ಸುತ್ತುತ್ತಲೇ ಇರುತ್ತವೆ. ಒಂದು ವೇಳೆ ಈ ವೇಗವಾಗಿ ಸುತ್ತುವ ಚಕ್ರಗಳನ್ನು ಹಾಗೆಯೇ ‘ಲ್ಯಾಂಡಿಂಗ್ ಗೇರ್ ಬೇ’ ಒಳಗಡೆ ಎಳೆದುಕೊಂಡರೆ, ಅದು ವಿಮಾನದ ಸುರಕ್ಷತೆಗೆ ದೊಡ್ಡ ಸಂಚಕಾರ ತರಬಹುದು.

Vishweshwar Bhat Column: ಕಿಟಕಿಯ ರಂಧ್ರದ ಮಹತ್ವ

Vishweshwar Bhat Column: ಕಿಟಕಿಯ ರಂಧ್ರದ ಮಹತ್ವ

ವಿಮಾನದಲ್ಲಿ ಪ್ರಯಾಣಿಸುವಾಗ ಕಿಟಕಿಯ ಕೆಳಭಾಗದಲ್ಲಿ ಒಂದು ಪುಟ್ಟ ರಂಧ್ರವನ್ನು ನೀವು ಗಮನಿಸಿ ರಬಹುದು. ಇದನ್ನು ತಾಂತ್ರಿಕವಾಗಿ ‘ಬ್ರೀದರ್ ಹೋಲ್’ (Breather Hole) ಅಥವಾ ‘ಬ್ಲೀಡ್ ಹೋಲ್’ (Bleed Hole) ಎಂದು ಕರೆಯುತ್ತಾರೆ. ಇದು ನೋಡಲು ಅತ್ಯಂತ ಸಣ್ಣದಾಗಿ ಕಂಡರೂ, ವಿಮಾನದ ಸುರಕ್ಷತೆ ಮತ್ತು ಪ್ರಯಾಣಿಕರ ದೃಷ್ಟಿಕೋನದಲ್ಲಿ ಇದರ ಪಾತ್ರ ಬಹಳ ದೊಡ್ಡದು.

Vishweshwar Bhat Column: 52 ವರ್ಷಗಳ ನಂತರವೂ ನೆನಪಾಗುವ, ಪ್ರಸ್ತಾಪವಾಗುವ, ಪ್ರಸ್ತುತವಾಗುವ ಆ ಮಾತು !

52 ವರ್ಷಗಳ ನಂತರವೂ ನೆನಪಾಗುವ, ಪ್ರಸ್ತಾಪವಾಗುವ, ಪ್ರಸ್ತುತವಾಗುವ ಆ ಮಾತು !

ಈ ಮಾತು ಇಸ್ರೇಲ್ ಕೇವಲ ಮಣ್ಣಿನೊಳಗಿನ ತೈಲವನ್ನು ನೆಚ್ಚಿಕೊಳ್ಳದೇ, ತನ್ನ ಜನರ ಬುದ್ಧಿ ವಂತಿಕೆಯನ್ನು ನಂಬಿ ಬೆಳೆಯಬೇಕು ಎಂಬ ಸಂದೇಶವನ್ನು ಧ್ವನಿಸಿತ್ತು. ಈ ಒಂದು ಮಾತು, ಇಸ್ರೇಲ್ʼನ ಅಸ್ತಿತ್ವದ ಹೋರಾಟ, ಭೌಗೋಳಿಕ ಸವಾಲುಗಳು ಮತ್ತು ಆ ದೇಶವು ತನ್ನ ಕೊರತೆ ಯನ್ನೇ ಶಕ್ತಿಯನ್ನಾಗಿ ಮಾಡಿಕೊಂಡ ರೋಚಕ ಕಥೆಯನ್ನು ಒಳಗೊಂಡಿರುವುದರಿಂದ ಆಗಾಗ ಪ್ರಸ್ತಾಪವಾಗುತ್ತಲೇ ಇರುತ್ತದೆ.

Vishweshwar Bhat Column: ಸಿಮ್ಯುಲೇಟರ್’ಗಳ ಪಾತ್ರ

Vishweshwar Bhat Column: ಸಿಮ್ಯುಲೇಟರ್’ಗಳ ಪಾತ್ರ

ವಿಮಾನವು ಮೇಲಕ್ಕೆ ಏರುವಾಗ, ಕೆಳಕ್ಕೆ ಇಳಿಯುವಾಗ ಅಥವಾ ತಿರುಗುವಾಗ ಉಂಟಾಗುವ ಸೆಳೆತ ಮತ್ತು ವೇಗವರ್ಧನೆಯನ್ನು ಪೈಲಟ್‌ನ ದೇಹಕ್ಕೆ ನಿಖರವಾಗಿ ಅನುಭವಕ್ಕೆ ತರುತ್ತವೆ. ವಿಮಾನವು ರನ್‌ವೇ ಮೇಲೆ ಚಲಿಸುವಾಗ ಉಂಟಾಗುವ ಸಣ್ಣ ಕಂಪನವನ್ನೂ ಇದು ಮರು ಸೃಷ್ಟಿಸುತ್ತದೆ.

‌Vishweshwar Bhat Column: ವಿಮಾನವೆಂಬ ಪವರ್‌ ಹೌಸ್

‌Vishweshwar Bhat Column: ವಿಮಾನವೆಂಬ ಪವರ್‌ ಹೌಸ್

ಪ್ರತಿಯೊಂದು ಎಂಜಿನ್‌ನಲ್ಲಿ ಅಳವಡಿಸಲಾದ ಜನರೇಟರ್‌ಗಳು ಸಾಮಾನ್ಯವಾಗಿ 90 ರಿಂದ 150 ಕೆವಿಎ (Kilovolt-Ampere) ವಿದ್ಯುತ್ ಉತ್ಪಾದಿಸುತ್ತವೆ. ಬೋಯಿಂಗ್ 787 (ಡ್ರೀಮ್ ಲೈನರ್)ನಂಥ ಆಧುನಿಕ ವಿಮಾನಗಳಲ್ಲಿ ಇದು ಇನ್ನೂ ಹೆಚ್ಚಾಗಿರುತ್ತದೆ. ಎಪಿಯು (APU- Auxiliary Power Unit) ಎಂಬುದು ವಿಮಾನದ ಬಾಲದ ಭಾಗದಲ್ಲಿರುವ ಪುಟ್ಟ ಎಂಜಿನ್. ವಿಮಾನವು ನೆಲದ ಮೇಲಿರು ವಾಗ ಮತ್ತು ತುರ್ತು ಸಂದರ್ಭದಲ್ಲಿ ಗಾಳಿಯಲ್ಲಿದ್ದಾಗ ಇದು ವಿದ್ಯುತ್ ಮತ್ತು ಎಸಿ (AC) ವ್ಯವಸ್ಥೆ ಯನ್ನು ಒದಗಿಸುತ್ತದೆ.

Vishweshwar Bhat Column: ಇದು ತಾಳಮದ್ದಳೆಯ ʼಐಟಮ್‌ ಸಾಂಗ್‌ ಡಾನ್ಸರ್‌ʼಗಳಂತೆ ಇರುವ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ !

ʼಐಟಮ್‌ ಸಾಂಗ್‌ ಡಾನ್ಸರ್‌ʼಗಳಂತೆ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ !

ಯಕ್ಷಗಾನ ಮತ್ತು ತಾಳಮದ್ದಳೆಗಳೆರಡೂ ಕರ್ನಾಟಕದ ಸಾಂಸ್ಕೃತಿಕ ಕಲಾರತ್ನಗಳು. ಇವೆರಡೂ ಒಂದೇ ತಾಯಿ ಬೇರಿನಿಂದ ಬಂದಿದ್ದರೂ, ಪ್ರದರ್ಶನದ ದೃಷ್ಟಿಯಿಂದ ಒಂದಕ್ಕೊಂದು ಭಿನ್ನ. ಯಕ್ಷಗಾನ ಒಂದು ಸಂಪೂರ್ಣ ರಂಗಕಲೆ. ಇಲ್ಲಿ ಗಾಯನ, ವಾದನ, ನೃತ್ಯ ಮತ್ತು ಮಾತುಗಾರಿಕೆ ಎಂಬ ನಾಲ್ಕೂ ಪ್ರಕಾರಗಳ ಸಂಗಮವಿರುತ್ತದೆ.

Vishweshwar Bhat Column: ಪೈಲಟ್‌ ಮತ್ತು ಸಂಕೇತ

Vishweshwar Bhat Column: ಪೈಲಟ್‌ ಮತ್ತು ಸಂಕೇತ

ತುರ್ತು ಸಂದರ್ಭಗಳಲ್ಲಿ ಪೈಲಟ್‌ಗಳಿಗೆ ಕ್ಷಣಾರ್ಧದಲ್ಲಿ ಮಾಹಿತಿ ನೀಡಲು ‘ಮಾಸ್ಟರ್ ವಾರ್ನಿಂಗ್’ ಮತ್ತು ‘ಮಾಸ್ಟರ್ ಕಾಶನ್’ ಎಂಬ ಎರಡು ಪ್ರಮುಖ ಸಂಕೇತಗಳನ್ನು ಬಳಸಲಾಗುತ್ತದೆ. ಇವುಗಳ ನಡುವಿನ ವ್ಯತ್ಯಾಸ ಮತ್ತು ಅವುಗಳಿಗೆ ಪೈಲಟ್ʼಗಳು ಹೇಗೆ ಪ್ರತಿಕ್ರಿಯಿಸುತ್ತಾರೆ? ವಿಮಾನ ಯಾನದಲ್ಲಿ ಸುರಕ್ಷತೆಯೇ ಮೊದಲ ಆದ್ಯತೆ. ಹಾರಾಟದ ಸಮಯದಲ್ಲಿ ಯಾವುದಾದರೂ ತಾಂತ್ರಿಕ ದೋಷ ಕಾಣಿಸಿ ಕೊಂಡಾಗ, ಅದನ್ನು ಅದರ ಗಂಭೀರತೆಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಇದಕ್ಕಾಗಿ ಬಣ್ಣ ಮತ್ತು ಶಬ್ದದ ಸಂಕೇತಗಳನ್ನು ಬಳಸಲಾಗುತ್ತದೆ.

‌Vishweshwar Bhat Column: ಎಡಭಾಗದಲ್ಲೇ ಬೋರ್ಡಿಂಗ್

‌Vishweshwar Bhat Column: ಎಡಭಾಗದಲ್ಲೇ ಬೋರ್ಡಿಂಗ್

ವಿಮಾನದ ಕ್ಯಾಪ್ಟನ್ ಅಥವಾ ಮುಖ್ಯ ಪೈಲಟ್ ಯಾವಾಗಲೂ ಕಾಕ್‌ಪಿಟ್‌ನ ಎಡಭಾಗದಲ್ಲಿ ಕುಳಿತಿರುತ್ತಾರೆ. ವಿಮಾನವನ್ನು ಟರ್ಮಿನಲ್ ಹತ್ತಿರ ತರುವಾಗ (Taxiing ), ಪೈಲಟ್ಗೆ ಎಡಭಾಗದ ಕಿಟಕಿಯಿಂದ ವಿಮಾನದ ರೆಕ್ಕೆ ಮತ್ತು ಜೆಟ್ ಸೇತುವೆ ಯ ನಡುವಿನ ಅಂತರವು ಸ್ಪಷ್ಟವಾಗಿ ಕಾಣಿಸು ತ್ತದೆ. ಇದು ವಿಮಾನವನ್ನು ಅತ್ಯಂತ ನಿಖರವಾಗಿ ನಿಲುಗಡೆ ಮಾಡಲು ಸಹಾಯ ಮಾಡುತ್ತದೆ.

Vishweshwar Bhat Column: ವಿಮಾನ ಬಯಲಲ್ಲಿ ಲ್ಯಾಂಡ್‌ ಆದರೆ...

Vishweshwar Bhat Column: ವಿಮಾನ ಬಯಲಲ್ಲಿ ಲ್ಯಾಂಡ್‌ ಆದರೆ...

ವಿಮಾನವು ಹೇಗೋ ಒಂದು ಬಯಲಲ್ಲಿ ಲ್ಯಾಂಡ್ ಆಯಿತು ಎಂದು ಭಾವಿಸಿ. ಅಲ್ಲಿ ರನ್‌ವೇ ಇಲ್ಲ. ಅಲ್ಲಿಂದ ಅದು ಹೇಗೆ ಟೇಕಾಫ್ ಆಗುತ್ತದೆ? ವಿಮಾನವೊಂದು ರನ್‌ವೇ ಇಲ್ಲದ ಬಯಲಿನಲ್ಲಿ ಅಥವಾ ಅಸಮತೋಲಿತ ಜಾಗದಲ್ಲಿ ಅನಿವಾರ್ಯ ಕಾರಣಗಳಿಂದ ಲ್ಯಾಂಡ್ ಆದರೆ, ಅದನ್ನು ಅಲ್ಲಿಂದ ಮತ್ತೆ ಸುರಕ್ಷಿತವಾಗಿ ಟೇಕಾಫ್ ಮಾಡುವುದು ವಿಮಾನಯಾನ ಎಂಜಿನಿಯರಿಂಗ್‌ನ ಅತ್ಯಂತ ಸವಾಲಿನ ಕೆಲಸಗಳಲ್ಲಿ ಒಂದು. ‌

Loading...