ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಈ ದೇಶ ಭಾಷೆಗಳ ಮಹಾಸಂಗಮ

Vishweshwar Bhat Column: ಈ ದೇಶ ಭಾಷೆಗಳ ಮಹಾಸಂಗಮ

ಪಪುವಾ ನ್ಯೂಗಿನಿಯಾ ದೇಶವು ಭಾಷಾವಿಜ್ಞಾನಿಗಳ ಪಾಲಿಗೆ ಒಂದು ಜೀವಂತ ಪ್ರಯೋಗಾ ಲಯ. ಇಲ್ಲಿನ ಜನಸಂಖ್ಯೆ ಕಡಿಮೆಯಿದ್ದರೂ, ಪ್ರತಿ 10000 ಜನರಿಗೆ ಒಂದು ಭಾಷೆ ಎಂಬಷ್ಟು ವೈವಿಧ್ಯತೆ ಇಲ್ಲಿದೆ. ಇದಕ್ಕೆ ಮುಖ್ಯವಾದ ಕಾರಣಗಳನ್ನು ನಾವು ಭೌಗೋಳಿಕ, ಸಾಮಾಜಿಕ ಮತ್ತು ಐತಿಹಾಸಿಕ ನೆಲೆಗಟ್ಟಿನಲ್ಲಿ ನೋಡಬಹುದು.

Vishweshwar Bhat Column: ಯುದ್ಧದ ವಿಷಯ ಬಂದರೆ ಇಸ್ರೇಲ್‌ ಏಕೆ ಮುಂಗಾಲಪುಟಕಿ ?

ಯುದ್ಧದ ವಿಷಯ ಬಂದರೆ ಇಸ್ರೇಲ್‌ ಏಕೆ ಮುಂಗಾಲಪುಟಕಿ ?

ಇಷ್ಟೆಲ್ಲ ವೈರಿಗಳನ್ನು ಬಗಲಲ್ಲಿ ಇಟ್ಟುಕೊಂಡು ನಿರಂತರವಾಗಿ ಹೋರಾಡುತ್ತಾ ಇಸ್ರೇಲ್ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವುದು ಸಣ್ಣ ಮಾತಲ್ಲ. ಇಸ್ರೇಲ್ ಅನುಸರಿಸಿ ಕೊಂಡು ಬಂದಿರುವ ತಂತ್ರಗಳನ್ನು ಯಾರು ಎಷ್ಟೇ ಟೀಕಿಸಬಹುದು, ಆದರೆ ಇಸ್ರೇಲೇನಾದರೂ ಒಂದು ಕ್ಷಣ ಮೈಮರೆತಿದ್ದರೆ, ಆ ದೇಶ ಇಂದು ವಿಶ್ವದ ಭೂಪಟ ದಲ್ಲಿಯೇ ಇರುತ್ತಿರಲಿಲ್ಲ ಎಂಬುದು ಅಷ್ಟೇ ಸತ್ಯ.

Vishweshwar Bhat Column: ಬಾಲಿಯಲ್ಲಿ ಹಿಂದೂ ಧರ್ಮ

Vishweshwar Bhat Column: ಬಾಲಿಯಲ್ಲಿ ಹಿಂದೂ ಧರ್ಮ

ಬಾಲಿಯಲ್ಲಿ ಹಿಂದೂ ಧರ್ಮವನ್ನು ಯಾರೂ ಹೊರಗಿನಿಂದ ಹೇರಿದ್ದಲ್ಲ, ಬದಲಾಗಿ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ನಿಧಾನವಾಗಿ ಹರಡಿತು. ಪ್ರಾಚೀನ ಕಾಲದಲ್ಲಿ ಭಾರತದ ಚೋಳ, ಪಲ್ಲವ ಮತ್ತು ಕಳಿಂಗ ಸಾಮ್ರಾಜ್ಯದ ನಾವಿಕರು ಸಾಂಬಾರು ಪದಾರ್ಥಗಳ ವ್ಯಾಪಾರಕ್ಕಾಗಿ ಆಗ್ನೇಯ ಏಷ್ಯಾಕ್ಕೆ ಪ್ರಯಾಣಿಸುತ್ತಿದ್ದರು.

Vishweshwar Bhat Column: ಖರ್ಗ್‌ ದ್ವೀಪದ ಮಹತ್ವ

Vishweshwar Bhat Column: ಖರ್ಗ್‌ ದ್ವೀಪದ ಮಹತ್ವ

ಇರಾನಿನ ಬುಶೆಹರ್ ಪ್ರಾಂತ್ಯದ ಕರಾವಳಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ‘ಖರ್ಗ್ ದ್ವೀಪ’ ಇರಾನಿನ ತೈಲ ಸಾಮ್ರಾಜ್ಯದ ಹೃದಯಭಾಗ. ಈ ದ್ವೀಪ ವನ್ನು ವಶಪಡಿಸಿ ಕೊಳ್ಳಲು ಈಗ ಅಮೆರಿಕ ತುದಿಗಾಲ ಮೇಲೆ ನಿಂತಿದೆ. ಖರ್ಗ್ ದ್ವೀಪವು ಸುಮಾರು 20 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಇದು ಹವಳದ ದಿಬ್ಬಗಳಿಂದ ಕೂಡಿದ ದ್ವೀಪವಾಗಿದ್ದು, ಸಮುದ್ರ ಮಟ್ಟದಿಂದ ಸ್ವಲ್ಪ ಎತ್ತರದಲ್ಲಿದೆ. ಇದರ ಆಯಕಟ್ಟಿನ ಸ್ಥಳವು ಪರ್ಷಿಯನ್ ಕೊಲ್ಲಿ ಯ ನೌಕಾಯಾನ ಮಾರ್ಗಗಳಿಗೆ ಅತ್ಯಂತ ಹತ್ತಿರದಲ್ಲಿದೆ.

Vishweshwar Bhat Column: ಯುದ್ಧ ಮತ್ತು ಸಾಕುಪ್ರಾಣಿ

Vishweshwar Bhat Column: ಯುದ್ಧ ಮತ್ತು ಸಾಕುಪ್ರಾಣಿ

ದುಬೈನಲ್ಲಿ ತಲೆದೋರಿರುವ ಸಂಘರ್ಷ ಮತ್ತು ಅಸ್ಥಿರತೆಯು ಮನುಷ್ಯರ ಮೇಲೆ ಮಾತ್ರವಲ್ಲ, ಅಲ್ಲಿನ ಸಾಕುಪ್ರಾಣಿಗಳ ಮೇಲೂ ಭೀಕರ ಪರಿಣಾಮ ಬೀರಿದೆ. ಯುದ್ಧದ ಭೀತಿ ಮತ್ತು ತುರ್ತು ಪರಿಸ್ಥಿತಿಯಿಂದಾಗಿ ಜನರು ದೇಶ ಬಿಟ್ಟು ಓಡುತ್ತಿದ್ದಾರೆ. ಆದರೆ, ಈ ಆತುರದ ಪಲಾಯನ ದಲ್ಲಿ ಸಾವಿರಾರು ಸಾಕುಪ್ರಾಣಿಗಳು ಅನಾಥವಾಗಿ ಬೀದಿಗೆ ಬೀಳುತ್ತಿವೆ.

Vishweshwar Bhat Column: ಕೆ-9 ಯೂನಿಟ್‌ ಅಂದರೇನು ?

Vishweshwar Bhat Column: ಕೆ-9 ಯೂನಿಟ್‌ ಅಂದರೇನು ?

’K-9’ ಯೂನಿಟ್ ಎನ್ನುವುದು ವಿಶೇಷವಾಗಿ ತರಬೇತಿ ಪಡೆದ ನಾಯಿಗಳು ಮತ್ತು ಅವುಗಳನ್ನು ಮುನ್ನಡೆಸುವ ಅಧಿಕಾರಿಗಳ ತಂಡ. ಈ ನಾಯಿಗಳು ಸಾಮಾನ್ಯ ಸಾಕುಪ್ರಾಣಿಗಳಲ್ಲ, ಇವುಗಳಿಗೆ ಅಪರಾಧ ಪತ್ತೆ ಹಚ್ಚಲು, ಸ್ಫೋಟಕಗಳನ್ನು ಪತ್ತೆ ಹಚ್ಚಲು ಮತ್ತು ತುರ್ತು ಸಂದರ್ಭಗಳಲ್ಲಿ ರಕ್ಷಣೆ ನೀಡಲು ಕಠಿಣ ತರಬೇತಿ ನೀಡಲಾಗುತ್ತದೆ.

Vishweshwar Bhat Column: ಕೊಂಬಿಲ್ಲದ ಖಡ್ಗಮೃಗಗಳು: ದಕ್ಷಿಣ ಆಫ್ರಿಕಾದ ಸಂರಕ್ಷಣಾ ಕ್ರಾಂತಿ !

ಕೊಂಬಿಲ್ಲದ ಖಡ್ಗಮೃಗಗಳು: ದಕ್ಷಿಣ ಆಫ್ರಿಕಾದ ಸಂರಕ್ಷಣಾ ಕ್ರಾಂತಿ !

ದಕ್ಷಿಣ ಆಫ್ರಿಕಾ ವಿಶ್ವದ ಅತಿ ಹೆಚ್ಚು ಖಡ್ಗಮೃಗಗಳನ್ನು ಹೊಂದಿರುವ ದೇಶ. ವಿಶ್ವದ ಒಟ್ಟು ಖಡ್ಗಮೃಗಗಳ ಪೈಕಿ ಸುಮಾರು ಶೇ.80ರಷ್ಟು ಆ ದೇಶದಲ್ಲಿವೆ. ಪ್ರಮುಖವಾಗಿ ‘ಬಿಳಿ ಖಡ್ಗಮೃಗ’ ಮತ್ತು ಅಳಿವಿನ ಅಂಚಿನಲ್ಲಿರುವ ‘ಕಪ್ಪು ಖಡ್ಗಮೃಗ’ಗಳು ಇಲ್ಲಿನ ಹೆಮ್ಮೆ. ಇಲ್ಲಿನ ಕ್ರುಗರ್ ನ್ಯಾಷನಲ್ ಪಾರ್ಕ್ ಇವುಗಳ ಅತಿದೊಡ್ಡ ಆವಾಸಸ್ಥಾನ.

Vishweshwar Bhat Column: ಇದು ಅತಿ ಸಣ್ಣ ಆಮೆಗೂ ಪ್ರಸಿದ್ದ

Vishweshwar Bhat Column: ಇದು ಅತಿ ಸಣ್ಣ ಆಮೆಗೂ ಪ್ರಸಿದ್ದ

ಅಲ್ಲಿನ ಶುಷ್ಕ ಭೂಪ್ರದೇಶಗಳಲ್ಲಿ ವಾಸಿಸುವ ‘ಪದ್ಲೋಪರ್’ ಆಮೆಗಳು ಗಾತ್ರದಲ್ಲಿ ಮಾತ್ರ ವಲ್ಲ, ತಮ್ಮ ಬದುಕುವ ಶೈಲಿ ಮತ್ತು ವಿಕಾಸದ ಹಾದಿಯಲ್ಲೂ ವಿಶಿಷ್ಟವಾಗಿವೆ. ಇವು ಗಳನ್ನು ಸ್ಥಳೀಯವಾಗಿ ‘ಪದ್ಲೋಪರ್’ ಎಂದು ಕರೆಯಲಾಗುತ್ತದೆ, ಆಫ್ರಿಕಾ ಭಾಷೆಯಲ್ಲಿ ಇದರರ್ಥ ‘ದಾರಿಯಲ್ಲಿ ನಡೆಯುವವನು’ (Path walker) ಅಂತ.

Vishweshwar Bhat Column: ಇಲ್ಲಿ ಈಗಿರುವುದು ಒಂದೇ ಆನೆ !

Vishweshwar Bhat Column: ಇಲ್ಲಿ ಈಗಿರುವುದು ಒಂದೇ ಆನೆ !

ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಆನೆಗಳ ಕುಲ ಇಂದು ಕೇವಲ ‘ಒಂದೇ ಒಂದು’ ಆನೆಗೆ ಬಂದು ನಿಂತಿದೆ ಎಂಬುದು ವಿಜ್ಞಾನ ಲೋಕದ ಅಚ್ಚರಿ ಮತ್ತು ನೋವಿನ ಸಂಗತಿ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ನೈಸ್ನಾ ಮತ್ತು ಅದರ ಸುತ್ತಮುತ್ತಲಿನ ದಟ್ಟವಾದ ಅರಣ್ಯಗಳು ಆನೆಗಳ ಪಾಲಿನ ಸ್ವರ್ಗವಾಗಿದ್ದವು.

Vishweshwar Bhat Column: ಈಗಿನ ಯುದ್ದದಲ್ಲಿ ಇಸ್ರೇಲಿನಿಂದ ಭಾರತ ಏನು ಕಲಿಯಬಹುದು ?

ಈಗಿನ ಯುದ್ದದಲ್ಲಿ ಇಸ್ರೇಲಿನಿಂದ ಭಾರತ ಏನು ಕಲಿಯಬಹುದು ?

ಇದು ಆಧುನಿಕ ಯುದ್ಧತಂತ್ರದ ಅತ್ಯಂತ ಶಕ್ತಿಶಾಲಿ ಅಸ್ತ್ರ. ಈ ಮೊದಲು ಯುದ್ಧಗಳು ಜಗತಿನಲ್ಲಿ ಗಡಿಯಲ್ಲಿ ನಡೆಯುತ್ತಿದ್ದವು. ಆದರೆ ಈಗ ಯುದ್ಧಗಳು ಕಂಪ್ಯೂಟರ್ ಪರದೆ ಮೇಲೆ, ಕೆಲವೇ ಜನರ ಮಿದುಳಿನ ಆಲೋಚನೆಗಳಲ್ಲಿ ನಡೆಯುತ್ತಿವೆ. ಈಗಿನ ಯುದ್ಧದಲ್ಲಿ ಸೈಬರ್ ತಂತ್ರಜ್ಞಾನ ಮತ್ತು ಮಾನವ ಗುಪ್ತಚರ ಶಕ್ತಿಯ ಸಮ್ಮಿಲನ ಎದ್ದು ಕಾಣುತ್ತಿದೆ.

Vishweshwar Bhat Column: ಸಾವಿರ ಪೇಟೆಂಟ್ʼಗಳ ಸರದಾರ

Vishweshwar Bhat Column: ಸಾವಿರ ಪೇಟೆಂಟ್ʼಗಳ ಸರದಾರ

1971ರಲ್ಲಿ ಮರ್ಸಿಡಿಸ್ ‘ಏರ್‌ಬ್ಯಾಗ್ ಸಿಸ್ಟಮ್’ಗಾಗಿ ಪೇಟೆಂಟ್ ಪಡೆಯಿತು. 1981ರಲ್ಲಿ ಸರಣಿ ಉತ್ಪಾದನೆಯ ಕಾರುಗಳಲ್ಲಿ ಇದನ್ನು ಅಳವಡಿಸಿದ ಮೊದಲ ಕಂಪನಿಯೂ ಇದೇ ಆಯಿತು. 1951ರಲ್ಲಿ ಬೆಂಜ್ ಎಂಜಿನಿಯರ್ ಬೆಲಾ ಬರೆನಿ ಅವರು ‘ಕ್ರಂಪಲ್ ಝೋನ್’ ವಿನ್ಯಾಸವನ್ನು ಅಭಿವೃದ್ಧಿಪಡಿಸಿದರು. ಅಪಘಾತವಾದಾಗ ಕಾರಿನ ಮುಂದಿನ ಭಾಗವು ಮಡಚಿಕೊಂಡು ಒಳಗಿರುವ ಪ್ರಯಾಣಿಕರಿಗೆ ಪೆಟ್ಟಾಗದಂತೆ ಶಕ್ತಿಯನ್ನು ಹೀರಿಕೊಳ್ಳುವ ಈ ವಿನ್ಯಾಸವು ಲಕ್ಷಾಂತರ ಜೀವಗಳನ್ನು ಉಳಿಸಿದೆ.

Vishweshwar Bhat Column: ಹರ್ಮುಜ್ ಜಲಸಂಧಿಗೆ ಮಹತ್ವವೇಕೆ ?

Vishweshwar Bhat Column: ಹರ್ಮುಜ್ ಜಲಸಂಧಿಗೆ ಮಹತ್ವವೇಕೆ ?

ಹರ್ಮುಜ್ ಜಲಸಂಧಿಗಿರುವ ಮಹತ್ವವೆಂದರೆ ಅದು ಜಾಗತಿಕ ತೈಲ ಪೂರೈಕೆಯ ಮಹಾ ದ್ವಾರ. ವಿಶ್ವದಲ್ಲಿ ಪ್ರತಿದಿನ ಬಳಕೆಯಾಗುವ ಒಟ್ಟು ತೈಲದ ಸುಮಾರು ಶೇ.20ರಿಂದ ಶೇ.30ರಷ್ಟು ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಸೌದಿ ಅರೇಬಿಯಾ, ಇರಾನ್, ಯುಎಇ, ಕುವೈತ್ ಮತ್ತು ಇರಾಕ್‌ನಂಥ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳು ತಮ್ಮ ಕಚ್ಚಾತೈಲವನ್ನು ಜಗತ್ತಿಗೆ ತಲುಪಿಸಲು ಈ ಮಾರ್ಗವನ್ನೇ ಅವಲಂಬಿಸಿವೆ.

Vishweshwar Bhat Column: ಯಾವುದು ಆಫ್ರಿಕಾದ ತುತ್ತ ತುದಿ ?

Vishweshwar Bhat Column: ಯಾವುದು ಆಫ್ರಿಕಾದ ತುತ್ತ ತುದಿ ?

ಇದೇ ಆಫ್ರಿಕಾ ಖಂಡದ ನಿಜವಾದ ದಕ್ಷಿಣದ ತುದಿ. ಅಂತಾರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆಯ ಪ್ರಕಾರ, ಅಟ್ಲಾಂಟಿಕ್ ಸಾಗರ ಮತ್ತು ಹಿಂದೂ ಮಹಾಸಾಗರಗಳು ಭೇಟಿಯಾಗುವ ಅಧಿಕೃತ ಗಡಿ ಕೇಪ್ ಅಗುಲ್ಹಾಸ್ ಆಗಿದೆ. ಕೇಪ್ ಟೌನ್‌ನ ಕೇಪ್ ಪಾಯಿಂಟ್‌ನಲ್ಲಿ ಎರಡು ಸಾಗರಗಳು ಭೇಟಿಯಾಗುತ್ತವೆ ಎಂಬ ಭ್ರಮೆ ಪ್ರವಾಸಿಗರಲ್ಲಿ ಇದೆ.

12th Global Achievers Awards in South Africa: ವಿಶ್ವವಿಖ್ಯಾತ ಸನ್‌ʼಸಿಟಿಯಲ್ಲಿ ನಾಡಿನ ಸಾಧಕರಿಗೆ ಸನ್ಮಾನ

ವಿಶ್ವವಿಖ್ಯಾತ ಸನ್‌ʼಸಿಟಿಯಲ್ಲಿ ನಾಡಿನ ಸಾಧಕರಿಗೆ ಸನ್ಮಾನ

ಕರುನಾಡಿನ ಸಾಧಕರನ್ನು ವಿಶ್ವ ಮಟ್ಟದಲ್ಲಿ ಗೌರವಿಸುವ ವಿಭಿನ್ನ ಆಲೋಚನೆಯಾಗಿ ರುವ ಗ್ಲೋಬಲ್ ಅಚೀವರ್ಸ್‌ಅವಾರ್ಡ್ ಕಾರ್ಯಕ್ರಮ, ಪ್ರಕೃತಿಯ ಮುಗ್ಧತೆಯೊಂದಿಗೆ ಆಧುನಿಕತೆಯ ಗಾಂಭೀರ್ಯ ವನ್ನು ಮೈಗೂಡಿಸಿಕೊಂಡು, ಆಫ್ರಿಕಾ ಖಂಡದ ‘ಆರ್ಥಿಕ ಶಕ್ತಿ’ಯಾಗಿ ಹೊರ ಹೊಮ್ಮಿರುವ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಜರುಗಿತು.

‌Vishweshwar Bhat Column: ಚಕಾರ ಮತ್ತು ಟೆಮರಿಂಡ್

‌Vishweshwar Bhat Column: ಚಕಾರ ಮತ್ತು ಟೆಮರಿಂಡ್

ಹುಣಸೇಹಣ್ಣು ಈ ದೇಶದಿಂದಲೇ ಪಶ್ಚಿಮಕ್ಕೆ ಹೋದದ್ದು. ಒಯ್ದವರೂ ಅರಬರೇ. ಆದರೆ ಹುಣಸೇ ಹಣ್ಣು ನೋಡುವುದಕ್ಕೆ ಅವರ ದೇಶದ ಖರ್ಜೂರದ ಹಣ್ಣಿನ ಹಾಗೇ ಇದೆ. ಖರ್ಜೂರಕ್ಕೆ ಅರಬ್ಬಿ ಭಾಷೆ ಯಲ್ಲಿ ‘ತರ್ಮ’ ಎಂದು ಹೆಸರು. ಅವರು ಹುಣಸೇ ಹಣ್ಣನ್ನು ತರ್ಮಹಿಂದ್- ಹಿಂದುಸ್ತಾನದ ಖರ್ಜೂರ ಎಂದು ಕರೆದರು. ಅದು ಇಂಗ್ಲಿಷರ ಭಾಷೆ ಯಲ್ಲಿ ಟೆಮರಿಂಡ್ (tamarind)ಆಯಿತು

Vishweshwar Bhat Column: ಮರುಭೂಮಿಯಲ್ಲಿ ʼಸನ್‌ ಸಿಟಿʼ ಎಂಬ ಮಹಾಸಾಮ್ರಾಜ್ಯ ಕಟ್ಟಿದ ಕೆರ್ಜ್ನರ್ ಸಾಹಸಗಾಥೆ !

ʼಸನ್‌ ಸಿಟಿʼ ಎಂಬ ಮಹಾಸಾಮ್ರಾಜ್ಯ ಕಟ್ಟಿದ ಕೆರ್ಜ್ನರ್ ಸಾಹಸಗಾಥೆ !

ಮೊನ್ನೆ ನಾನು ದಕ್ಷಿಣ ಆಫ್ರಿಕಾದ ‘ಸನ್ ಸಿಟಿ’ಯಲ್ಲಿ ಓಡಾಡುತ್ತಿದ್ದೆ. ಹಠಕ್ಕೆ ಬಿದ್ದ ಮನು ಷ್ಯನ ಕಲ್ಪನಾಶಕ್ತಿ ಮತ್ತು ಮರುಭೂಮಿಯಂಥ ಬಂಜರು ನೆಲ ಒಂದಾದಾಗ ಇಂಥದ್ದೊಂದು ಪವಾಡ ಸಾಧ್ಯ ಎಂಬುದು ಇಲ್ಲಿನ ಗಾಳಿಯಲ್ಲೂ ಪಿಸುಗುಟ್ಟುವಂತಿದೆ. ಒಬ್ಬ ಅಪ್ರತಿಮ ಕನಸುಗಾರ ಇಲ್ಲಿನ ಧೂಳಿನ ನಡುವೆ ಹಸಿರು ಹಾಸಿ, ಆಕಾಶದ ನೀಲಿಯನ್ನು ತಂದು ನೆಲದ ಮೇಲೆ ಚೆಲ್ಲಿದಂತಿದೆ.

Vishweshwar Bhat Column: ಪ್ರೋಟಿಯಾ ಎಂಬ ಹೂವಿನ ಕುರಿತು

Vishweshwar Bhat Column: ಪ್ರೋಟಿಯಾ ಎಂಬ ಹೂವಿನ ಕುರಿತು

ಪ್ರೋಟಿಯಾ ಹೂವು ‘ಪ್ರೋಟಿಯೇಸಿ’ (Proteaceae) ಕುಟುಂಬಕ್ಕೆ ಸೇರಿದೆ. ಈ ಕುಟುಂಬವು ಸುಮಾರು 300 ದಶಲಕ್ಷ ವರ್ಷಗಳಷ್ಟು ಹಳೆಯದಂತೆ. ಅಂದರೆ, ಇದು ಡೈನೋಸಾರ್‌ಗಳ ಕಾಲ ದಿಂದಲೂ ಭೂಮಿಯ ಮೇಲಿದೆ! ಈ ಹೂವಿಗೆ ‘ಪ್ರೋಟಿಯಾ’ ಎಂಬ ಹೆಸರು ಬಂದಿದ್ದು ಗ್ರೀಕ್ ಪುರಾಣದ ಸಮುದ್ರ ದೇವನಾದ ‘ಪ್ರೋಟಿಯಸ್’ನಿಂದ.

Vishweshwar Bhat Column: ಶಾವು ಎಂಬ ಆನೆ ನೆನಪು

Vishweshwar Bhat Column: ಶಾವು ಎಂಬ ಆನೆ ನೆನಪು

‘ಶಾವು’ ಎಂಬ ಹೆಸರು ಆಫ್ರಿಕಾದ ಸ್ಥಳೀಯ ಭಾಷೆಯಿಂದ ಬಂದಿದೆ ಎಂಬುದು ಗಮನಾರ್ಹ. ಇದು ಆನೆಯ ಭವ್ಯತೆ ಮತ್ತು ಅದರ ಶಾಂತ ಸ್ವಭಾವವನ್ನು ಸೂಚಿಸುತ್ತದೆ. ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕೃಗರ್ ನ್ಯಾಷನಲ್ ಪಾರ್ಕ್‌ನಲ್ಲಿ ಜೀವಿಸಿದ್ದ ಈ ಆನೆಯು ‘ಗ್ರೇಟ್ ಟಸ್ಕರ್ಸ್’ (ಬೃಹತ್ ದಂತದ ಆನೆಗಳು) ಎಂಬ ಗುಂಪಿಗೆ ಸೇರಿತ್ತು

Vishweshwar Bhat Column: ನ್ಯಾಯಾಧೀಶನ ಮಾತು ʼಶಾಸನʼವಾಗಬೇಕೇ ಹೊರತು ʼಹರಿಕಥೆʼ ಆಗಬಾರದು !

ನ್ಯಾಯಾಧೀಶನ ಮಾತು ʼಶಾಸನʼವಾಗಬೇಕೇ ಹೊರತು ʼಹರಿಕಥೆʼ ಆಗಬಾರದು !

ಸಂಸತ್ತಿರಬಹುದು, ನ್ಯಾಯಾಲಯವಿರಬಹುದು, ಸಾರ್ವಜನಿಕ ವೇದಿಕೆಯಿರಬಹುದು, ಸಂದರ್ಭದ ಔಚಿತ್ಯ ಗೊತ್ತಿಲ್ಲದೇ ಯದ್ವಾತದ್ವಾ ಮಾತಾಡುವವರಿಗೆ ‘ತುಪುತುಪು ತುಪಾಕಿ’ ಎಂದು ಗೇಲಿ ಮಾಡುತ್ತಾರೆ. ಬುದ್ಧಿವಂತಿಕೆಯಿದ್ದೂ, ಮಾತು ಬಲ್ಲಿದನಾಗಿಯೂ ಜನರಿಂದ ಗೇಲಿಗೊಳಗಾಗುವವನೇ ಈ ವಾಚಾಳಿ. ಆತನಿಗೆ ಗೊತ್ತಿರದ ಸಂಗತಿಯೇನೆಂದರೆ, ಸನ್ನಿವೇಶ ವನ್ನು ಅರ್ಥ ಮಾಡಿಕೊಳ್ಳದೇ ಮಾತಾಡುವುದು.

Vishweshwar Bhat Column: ಜೋಹಾನ್ಸ್‌ಬರ್ಗ್ ನಗರದ ಕುರಿತು

Vishweshwar Bhat Column: ಜೋಹಾನ್ಸ್‌ಬರ್ಗ್ ನಗರದ ಕುರಿತು

ಜೋಹಾನ್ಸ್‌ಬರ್ಗ್ ನಗರವನ್ನು ಆಕಾಶದಿಂದ ನೋಡಿದರೆ ಅದೊಂದು ಕಾಡಿನಂತೆ ಕಾಣುತ್ತದೆ. ಆದರೆ ಒಂದು ಕಾಲದಲ್ಲಿ ಈ ಪ್ರದೇಶವು ಕೇವಲ ಬಂಜರು ಹುಲ್ಲುಗಾವಲಾಗಿತ್ತು (ಸವನ್ನಾ). ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಇಲ್ಲಿ ಬಂಗಾರದ ಗಣಿಗಾರಿಕೆ ಆರಂಭವಾದಾಗ, ಗಣಿಗಳ ಒಳಗೆ ಆಧಾರ ನೀಡಲು ಮರದ ದಿಮ್ಮಿಗಳ ಅವಶ್ಯಕತೆ ಇತ್ತು.

Vishweshwar Bhat Column: ಒಲಿವರ್ ಟ್ಯಾಂಬೋ ನೆನಪು

Vishweshwar Bhat Column: ಒಲಿವರ್ ಟ್ಯಾಂಬೋ ನೆನಪು

ಒಲಿವರ್ ಟ್ಯಾಂಬೋ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ (Apartheid) ವಿರುದ್ಧ ನಡೆದ ಹೋರಾಟದ ಅತಿದೊಡ್ಡ ಶಕ್ತಿ. ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ನೆಲ್ಸನ್ ಮಂಡೇ ಲಾರ ಹೆಸರು ಎಷ್ಟು ಪ್ರಸಿದ್ಧವೋ, ಅಷ್ಟೇ ಪ್ರಮುಖವಾದದ್ದು ಒಲಿವರ್ ಟ್ಯಾಂಬೋ ಹೆಸರು. ಮಂಡೇಲಾ ಜೈಲಿನಲ್ಲಿದ್ದಾಗ, ಇಡೀ ಜಗತ್ತಿನ ಗಮನವನ್ನು ದಕ್ಷಿಣ ಆಫ್ರಿಕಾದತ್ತ ಸೆಳೆದು, ಹೊರಗಿನಿಂದ ಹೋರಾಟವನ್ನು ಜೀವಂತವಾಗಿರಿಸಿದವರು ಟ್ಯಾಂಬೋ.

Vishweshwar Bhat Column: ಅಲ್ಜೀರಿಯಾ ಸಿಂಡ್ರೋಮ್ ಅಂದರೇನು ?

Vishweshwar Bhat Column: ಅಲ್ಜೀರಿಯಾ ಸಿಂಡ್ರೋಮ್ ಅಂದರೇನು ?

‘ಅಲ್ಜೀರಿಯಾ ಸಿಂಡ್ರೋಮ್’ ಎಂಬುದು ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ಪದವಲ್ಲ, ಬದಲಿಗೆ ಇದು ರಾಜತಾಂತ್ರಿಕ ಮತ್ತು ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದ ಒಂದು ಪ್ರಮುಖ ವಿದ್ಯಮಾನವಾಗಿದೆ. ಒಂದು ದೇಶವು ತನ್ನ ಅತಿಯಾದ ಆತ್ಮವಿಶ್ವಾಸದಿಂದ ಯುದ್ಧಕ್ಕೆ ಇಳಿದು, ಅಲ್ಲಿನ ಸ್ಥಳೀಯ ಪ್ರತಿರೋಧದ ಮುಂದೆ ಮಂಡಿಯೂರಿ, ತನ್ನ ಸ್ವಂತ ದೇಶದ ಒಳಗೇ ರಾಜಕೀಯ ಅಸ್ಥಿರತೆಯನ್ನು ಅನುಭವಿಸಿದರೆ ಅದನ್ನು ‘ಸಿಂಡ್ರೋಮ್’ ಎಂದು ಕರೆಯಲಾಗು ತ್ತದೆ. ‌

Vishweshwar Bhat Column: ಎಐ ಯುಗದಲ್ಲಿ ಮನುಷ್ಯ

Vishweshwar Bhat Column: ಎಐ ಯುಗದಲ್ಲಿ ಮನುಷ್ಯ

ನಿತಿನ್ ಸೇಠ್ ಈ ಪುಸ್ತಕದಲ್ಲಿ ಒಂದು ಆಶಾದಾಯಕ ಸಂದೇಶ ನೀಡುತ್ತಾರೆ: ‘ಎಐ’ಗೆ ‘ಪ್ರೋಗ್ರಾ ಮಿಂಗ್’ ಇದೆ, ಆದರೆ ಮನುಷ್ಯನಿಗೆ ‘ಪರ್ಪಸ್’ (ಉದ್ದೇಶ) ಇದೆ. ಸೇಠ್ ಮನುಷ್ಯನ ಶಕ್ತಿಯನ್ನು ‘Human Edge’ ಎಂದು ಕರೆಯುತ್ತಾರೆ. ಇದು ಕೇವಲ ಮಿದುಳಿನ ಶಕ್ತಿಯಲ್ಲ, ಜತೆಗೆ ಹೃದಯ ಮತ್ತು ಆತ್ಮದ ಶಕ್ತಿ. ಈ ಪುಸ್ತಕದಲ್ಲಿ ಬರುವ ಒಂದು ಪ್ರಸಿದ್ಧ ದೃಷ್ಟಾಂತ ವೆಂದರೆ ಚೆಸ್ ಆಟಗಾರ ಗ್ಯಾರಿ ಕಾಸ್ಪರೋವ್ ಕಥೆ.

Vishweshwar Bhat Column: ಹ್ಯಾನ್ಲನ್ಸ್ ರೇಜರ್ ಮತ್ತು ಆಕಮ್ಸ್‌ ರೇಜರ್‌ ಎಂದರೇನು ?

ಹ್ಯಾನ್ಲನ್ಸ್ ರೇಜರ್ ಮತ್ತು ಆಕಮ್ಸ್‌ ರೇಜರ್‌ ಎಂದರೇನು ?

ಯಾವುದಾದರೂ ಒಂದು ಕೆಟ್ಟ ಘಟನೆ ನಡೆದಾಗ, ಅದು ದುರುದ್ದೇಶದಿಂದ ನಡೆದಿದೆ ಎಂದು ಭಾವಿಸುವ ಬದಲು, ಅದು ಅಜ್ಞಾನ ಅಥವಾ ಮೂರ್ಖತನದಿಂದ ನಡೆದಿದೆ ಎಂದು ಭಾವಿಸು ವುದು ಲೇಸು. ಇದನ್ನು ‘ರೇಜರ್’ ಎಂದು ಕರೆಯಲು ಕಾರಣವಿದೆ. ತರ್ಕಶಾಸ್ತ್ರದಲ್ಲಿ ‘ರೇಜರ್’ ಎಂದರೆ ಅನಗತ್ಯವಾದ ಊಹೆಗಳನ್ನು ಅಥವಾ ಸಂಕೀರ್ಣ ವಾದ ವಿಚಾರಗಳನ್ನು ಕತ್ತರಿಸಿ ಹಾಕಿ, ಸರಳವಾದ ಸತ್ಯವನ್ನು ಕಂಡುಕೊಳ್ಳುವ ಸಾಧನ ಎಂದರ್ಥ.

Loading...