ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಜಪಾನಿಯರು ಪರಿಪೂರ್ಣವಾದಿಗಳೂ ಹೌದು, ಅದ್ಭುತ ಮಂದಿಯೂ ಹೌದು. ಪರಿಪೂರ್ಣರು ಎಂದ ಮಾತ್ರಕ್ಕೆ ಅವರಲ್ಲಿ ದೋಷವೇ ಇಲ್ಲ ಎಂದು ಭಾವಿಸಬೇಕಿಲ್ಲ. ಅವರಲ್ಲೂ ಬೇರೆಯವರಂತೆ ದೋಷ ಗಳಿವೆ. ಆದರೆ ಅವರು ಸಣ್ಣ ಸಣ್ಣ ವಿಷಯ ಹಾಗೂ ಸೂಕ್ಷ್ಮ ಸಂಗತಿಗಳ ಬಗ್ಗೆ ಇತರರಿಗಿಂತ ಹೆಚ್ಚು ಗಮನ ಕೊಡುತ್ತಾರೆ. ನಿರಂತರವಾಗಿ ತಮ್ಮನ್ನು ಸುಧಾರಿಸಿಕೊಳ್ಳುತ್ತಾ ಹೋಗುತ್ತಾರೆ. ಹೆಜ್ಜೆ ಹೆಜ್ಜೆಗೂ ಪರಿಪೂರ್ಣರಾಗಲು ಹಂಬಲಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ. ತಮ್ಮ ದೋಷವನ್ನು ಮೀರಿ ನಿಲ್ಲಲು ಹೆಣಗುತ್ತಾರೆ.

Vishweshwar Bhat Column: ಬೆಕ್ಕುಗಳಿಗೂ ಇಲ್ಲಿ ರಾಜಯೋಗ !

ಬೆಕ್ಕುಗಳಿಗೂ ಇಲ್ಲಿ ರಾಜಯೋಗ !

ಅವನ್ನು ಕೇವಲ ಸಾಕುಪ್ರಾಣಿಯಾಗಷ್ಟೇ ಅಲ್ಲ, ಸಂಪತ್ತು, ಧೈರ್ಯ ಮತ್ತು ರಕ್ಷಣೆಗಳ ಸಂಕೇತ ಗಳಾಗಿ ಕೂಡ ಪರಿಗಣಿಸಲಾಗುತ್ತದೆ. ಜಪಾನಿನ ಶಿಂಟೋ ಮತ್ತು ಬೌದ್ಧ ಧರ್ಮಗಳಲ್ಲಿ ಬೆಕ್ಕುಗಳಿಗೆ ವಿಶೇಷ ಸ್ಥಾನ. ಅಲ್ಲಿನ ಪುರಾಣಗಳಲ್ಲಿ ಬೆಕ್ಕುಗಳನ್ನು ಶಕ್ತಿಶಾಲಿ ಮತ್ತು ಅತೀಂದ್ರಿಯ ಪ್ರಾಣಿಯಂತೆ ಚಿತ್ರಿಸ ಲಾಗಿದೆ. ಕೆಲವೊಂದು ಕಥೆಗಳಲ್ಲಿ ಅವನ್ನು ಶಕ್ತಿಶಾಲಿ ದೇವತೆಗಳಂತೆ ಬಿಂಬಿಸಲಾಗಿದೆ.

Vishweshwar Bhat Column: ಚೌಕಾಕಾರದ ಕಲ್ಲಂಗಡಿಗಳು

ಚೌಕಾಕಾರದ ಕಲ್ಲಂಗಡಿಗಳು

ಜಪಾನಿನಲ್ಲಿ ಅದು ಒಂದು ವಿಶಿಷ್ಟ ಆಕರ್ಷಣೆ. ಈ ವಿಶಿಷ್ಟ ಹಣ್ಣುಗಳು ಜಪಾನಿನ ಕೃಷಿ ತಂತ್ರಜ್ಞಾನ, ನಾವೀನ್ಯ ಮತ್ತು ಸೌಂದರ್ಯದ ಪ್ರತಿಬಿಂಬವಾಗಿವೆ. 1970ರ ದಶಕದಲ್ಲಿ ಜಪಾನಿನ ಜೆನ್ಸೇಕಿ ಟೋಜು ಎಂಬ ಕೃಷಿ ತಜ್ಞ ಚೌಕಾಕಾರದ ಕಲ್ಲಂಗಡಿಗಳ ಆವಿಷ್ಕಾರ ಮಾಡಿದ. ಆತ ಕಾಗಾವಾ ಪ್ರಾಂತದಲ್ಲಿರುವ ಕೃಷಿ ಕಾಲೇಜಿನಲ್ಲಿ ಈ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ

Vishweshwar Bhat Column: ಸ್ವಚ್ಛ ಭಾರತದಂತೆ, ಸ್ವಚ್ಛ ದೇಗುಲ ಆಂದೋಲನವೂ ಆಗಲಿ !

ಸ್ವಚ್ಛ ಭಾರತದಂತೆ, ಸ್ವಚ್ಛ ದೇಗುಲ ಆಂದೋಲನವೂ ಆಗಲಿ !

ಪ್ರತಿ ದೇವಾಲಯದ ಹಿಂದೆ ಧಾರ್ಮಿಕ ಕಾರಣಗಳೇನೇ ಇರಲಿ, ಅದನ್ನು ಕಟ್ಟಿದ ಕತೆಯೇ ರೋಚಕ. ಯಾವುದೋ ಒಂದು ಬೋಳುಗುಡ್ಡದ ಮೇಲೆ ರಾತ್ರೋರಾತ್ರಿ ಒಂದು ಕಲ್ಲನ್ನು ನೆಟ್ಟರೆ ಸಾಕು, ಅದು ಬೆಳಗಾಗುವ ಹೊತ್ತಿಗೆ ಒಂದು ಪುಣ್ಯಕ್ಷೇತ್ರವಾಗಿರುತ್ತದೆ. ಅದರ ಸುತ್ತಮುತ್ತ ನೂರಾರು ಕತೆಗಳು ಹುಟ್ಟಿ ಕೊಳ್ಳುತ್ತವೆ.

Vishweshwar Bhat Column: ಹೈಕುಗಳು: ಜಪಾನಿನ ಕೊಡುಗೆ

ಹೈಕುಗಳು: ಜಪಾನಿನ ಕೊಡುಗೆ

ಹೈಕು ಬರವಣಿಗೆಯನ್ನು ಪ್ರಖ್ಯಾತಿಗೆ ತಂದವರು ಮತ್ಸುಒ ಬಾಶೋ ಎಂಬ ಪ್ರಸಿದ್ಧ ಕವಿ. ಅವರು ಆ ದಿನಗಳಲ್ಲಿ ತನ್ನ ಹೈಕುಗಳ ಮೂಲಕ ಜಪಾನಿನ ಕಾವ್ಯವೈಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರ ಹೈಕುಗಳಲ್ಲಿ ಪ್ರಕೃತಿ, ಬೌದ್ಧತತ್ವಗಳು ಹಾಗೂ ಮಾನವೀಯ ಅನುಭವಗಳ ಗಂಭೀರತೆಯಿದೆ.

Vishweshwar Bhat Column: ಬಿಳಿ ಸಾಕ್ಸ್‌ ಸ್ವಚ್ಛತೆ ನಿಜವಾ?

ಬಿಳಿ ಸಾಕ್ಸ್‌ ಸ್ವಚ್ಛತೆ ನಿಜವಾ?

ಪಾನ್ ಎಷ್ಟು ಶುದ್ಧವಾಗಿದೆಯೆಂದರೆ, ನೀವು ಬಿಳಿ ಸಾಕ್ಸ್‌ ಧರಿಸಿ ನಡೆದಾಡಿದರೂ ಅದು ಕೊಳೆಯಾಗುವು ದಿಲ್ಲ ಎಂಬ ಮಾತನ್ನು ಅಕ್ಷರಶಃ ಅರ್ಥೈಸು ವುದಕ್ಕೆ ಬದಲಾಗಿ, ಆ ದೇಶದ ಸಾರ್ವಜನಿಕ ಸ್ಥಳಗಳ ಪರಿಪಾಲನೆ, ನಿತ್ಯ ತೊಳೆದಂತೆ ತೋರಿಸುವ ರಸ್ತೆಗಳಿಗೆ ಪ್ರತಿನಿಧಿಯಾಗಿರುವ ಶ್ಲೇಷೆ ಎಂದು ಭಾವಿಸಿದರೆ ಅದು ಹೆಚ್ಚು ಸಮರ್ಪಕ ವಾದೀತು.

Vishweshwar Bhat Column: ಉಡುಗೊರೆ ಸಂಸ್ಕೃತಿ

ಉಡುಗೊರೆ ಸಂಸ್ಕೃತಿ

ಜಪಾನಿಯರಿಗೆ ಉಡುಗೊರೆ ಕೊಡಲು ಅಥವಾ ಸ್ವೀಕರಿಸಲು ಯಾವ ನೆಪವೂ ಬೇಕಿಲ್ಲ. ಎರಡು ತಿಂಗಳಿಗೊಮ್ಮೆ ಏನಾದರೂ ಒಂದು ನೆಪ ಹುಡುಕಿಕೊಂಡು ಗಿಫ್ಟ್ ವಿನಿಮಯ ಮಾಡಿಕೊಳ್ಳು ತ್ತಾರೆ. ಜಪಾನಿನಲ್ಲಿ ಹಲವಾರು ಸಂದರ್ಭಗಳಲ್ಲಿ ಉಡುಗೊರೆ ನೀಡುವ ಪರಿಪಾಠ ಇದೆ. ವರ್ಷದ ಮಧ್ಯದಲ್ಲಿ ಅಂದರೆ ಜುಲೈನಲ್ಲಿ ಉಡುಗೊರೆ ಕೊಡುವ ಸಂಪ್ರ‌ ದಾಯಕ್ಕೆ ‘ಒಚುಗೆ’ ಎಂದು ಅವರು ಕರೆಯುತ್ತಾರೆ.

Vishweshwar Bhat Column: ಕಡಲಾಮೆಗಳನ್ನು ಉಳಿಸಲು ಅವರು ರೈಲುಮಾರ್ಗದಲ್ಲಿ ಸುರಂಗ ಕೊರೆದರು !

ಕಡಲಾಮೆಗಳನ್ನು ಉಳಿಸಲು ಅವರು ರೈಲುಮಾರ್ಗದಲ್ಲಿ ಸುರಂಗ ಕೊರೆದರು !

ಕಡಲಾಮೆಗಳು ಹಳಿಗಳ ನಡುವೆ ಸಿಕ್ಕಿಹಾಕಿಕೊಂಡರೆ, ರೈಲು ಚಾಲಕರು ತಕ್ಷಣ ಬ್ರೇಕ್ ಹಾಕಬೇಕಾಗುತ್ತದೆ. ಇದರಿಂದ ರೈಲು ಸಂಚಾರ ವಿಳಂಬವಾಗುತ್ತದೆ. ಹಳಿಗಳ ಮೇಲೆ ಸಿಕ್ಕಿರುವ ಕಡಲಾಮೆಗಳನ್ನು ಹಳಿಯಿಂದ ತೆಗೆದು ಹಾಕುವ ಪ್ರಕ್ರಿಯೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗಬಹುದು.

Vishweshwar Bhat Column: ದಾರಿ ತಪ್ಪಿದರೆ ರಾಘವೇಂದ್ರ ಬೇಕಿಲ್ಲ !

ದಾರಿ ತಪ್ಪಿದರೆ ರಾಘವೇಂದ್ರ ಬೇಕಿಲ್ಲ !

‘ಇದೋ ನೀವು ಏರಬೇಕಿರುವ ಬಸ್’ ಎಂದು ಹೇಳಿದ. ನಾನು ಅವನಿಗೆ ಧನ್ಯವಾದಗಳನ್ನು ಹೇಳಿದೆ. ಆದರೆ ಆತ ‘ನಿಮ್ಮ ಧನ್ಯವಾದ ಇರಲಿ, ಇದು ನನ್ನ ಕರ್ತವ್ಯ’ ಎಂಬಂತೆ ನಿರ್ಲಿಪ್ತ ನಾಗಿದ್ದ. ನನಗೆ ದಾರಿ ತೋರಿಸಲೆಂದು ಕೈಯಲ್ಲಿ ಲಗೇಜ್ ಹಿಡಿದು ಒಂದು ಮೈಲಿ ನಡೆದು ಬಂದ ಆತನ ನಡೆ ನನಗೆ ಅತಿ ವಿಶೇಷವಾಗಿ ಕಂಡಿತು.

Vishweshwar Bhat Column: ಇನ್ನಷ್ಟು ಅಚ್ಚರಿಯ ಸಂಗತಿಗಳು

ಇನ್ನಷ್ಟು ಅಚ್ಚರಿಯ ಸಂಗತಿಗಳು

ಹತ್ತಿಯನ್ನು ಚೀಲದಲ್ಲಿ ಹಾಕಿ ಗಿಡಿಯುವಂತೆ ಜನರನ್ನೂ ಬೋಗಿಯೊಳಗೆ ಹಾಕಿ ತಳ್ಳುತ್ತಾನೆ. ಆತನಿಗೆ ಜನರನ್ನು ಬೋಗಿಯೊಳಗೆ ತಳ್ಳುವುದೇ ಕೆಲಸ. ರೈಲುಗಳ ಸಂಚಾರ ವನ್ನು ಹೆಚ್ಚಿಸುವ ಬದಲು, ಜಪಾನ್ ರೈಲ್ವೆ ಇಲಾಖೆ ಪ್ರಯಾಣಿಕರನ್ನು ತಳ್ಳಲು ಜನರನ್ನು ನೇಮಿಸಿ ಕೊಂಡಿರುವುದು ವಿಚಿತ್ರವಾದ ಸತ್ಯ.

Vishweshwar Bhat Column: ಒಂದು ಮರ ಉಳಿಸಲು ಯೋಜನೆ ಬದಲಾಯಿಸಿದ ಜಪಾನ್‌ !

ಒಂದು ಮರ ಉಳಿಸಲು ಯೋಜನೆ ಬದಲಾಯಿಸಿದ ಜಪಾನ್‌ !

ಅಷ್ಟು ಹಳೆಯ, ಅಪರೂಪದ ಮರವನ್ನು ಯಾವ ಕಾರಣಕ್ಕೂ ಕಡಿಯುವಂತಿಲ್ಲ. ಆ ಜಾತಿಯ ಮರಗಳ ಸಂಖ್ಯೆ ಹೆಚ್ಚಿಲ್ಲ. ಆ ತಳಿಯನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಅಲ್ಲದೇ ಆ ಮರವನ್ನು ಆಶ್ರಯಿಸಿ, ಅಸಂಖ್ಯ ಪಕ್ಷಿಗಳು, ಜೀವಿಗಳು ಬದುಕು ಕಟ್ಟಿಕೊಂಡಿರುತ್ತವೆ. ಅಂಥ ಮರವನ್ನು ಏಕಾಏಕಿ ಕಡಿದು ಹಾಕಿದರೆ, ಅದರಿಂದ ಆಗುವ ಹಾನಿಯನ್ನು ಊಹಿಸುವುದು ಕಷ್ಟ.

Vishweshwar Bhat Column: ಹಿರಿಯರ ಆರೈಕೆ ರೋಬೋಟ್

ಹಿರಿಯರ ಆರೈಕೆ ರೋಬೋಟ್

ಜಪಾನಿಯರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ನಿಸ್ಸೀಮರು. ದೈನಂದಿನ ಜೀವನದ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಅವರ ಮನಸ್ಸು ಸದಾ ಹುಡುಕಾಟದಲ್ಲಿರುತ್ತದೆ. ಜನಸಂಖ್ಯೆಯಲ್ಲಿ ಹಿರಿಯರ ಪ್ರಮಾಣ ದಿನೇ ದಿನೆ ಹೆಚ್ಚುತ್ತಿ ರುವುದರಿಂದ, ಹಿರಿಯರ ಆರೈಕೆಯ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳು ವುದು ಅವರಿಗೆ ಅನಿವಾರ್ಯವೂ ಹೌದು. ಈ ನಿಟ್ಟಿನಲ್ಲಿ, ಹಿರಿಯರ ಆರೈಕೆ ರೋಬೋಟ್‌ಗಳು (ಉbಛ್ಟಿ ಇZಛಿ ಟಚಿಟಠಿo) ಒಂದು ಮಹತ್ವ ಪೂರ್ಣಹೆಜ್ಜೆ

Vishweshwar Bhat Column: ರಿಯೋಕನ್‌ ವಾಸ

ರಿಯೋಕನ್‌ ವಾಸ

ರಿಯೋಕನ್‌ಗಳು ಸಾಮಾನ್ಯವಾಗಿ ಟಾಟಾಮಿ ನೆಲಹಾಸು, ಫ್ಯೂಟಾನ್ (futon) ಹಾಸಿಗೆಗಳು, ಸ್ಥಳೀಯ ಯುಕಾಟಾ ನಿಲುವಂಗಿಗಳು ಮತ್ತು ಸಾಂಪ್ರದಾಯಿಕ ಜಪಾನಿ ಊಟಗಳನ್ನು ಒಳಗೊಂಡಿರುತ್ತವೆ. ರಿಯೋಕನ್‌ಗಳಲ್ಲಿ ಉಳಿಯುವುದು ಜಪಾನಿನ ಸಂಸ್ಕೃತಿ ಮತ್ತು ಆತಿಥ್ಯವನ್ನು ಅನುಭವಿಸಲು ಒಂದು ಅದ್ಭುತ ಮಾರ್ಗವೇ ಸರಿ. ರಿಯೋಕನ್‌ಗಳು ಎಡೋ ಅವಧಿಯಲ್ಲಿ (1603-1868) ಯಾತ್ರಿಕರಿಗೆ ಮತ್ತು ಪ್ರಯಾಣಿಕರಿಗೆ ವಸತಿ ಒದಗಿಸಲು ಅಭಿವೃದ್ಧಿಗೊಂಡವು.

Vishweshwar Bhat Column: ಕಂಪನಿಗಳಲ್ಲಿ ಬೆಳಗ್ಗಿನ ಪ್ರಾರ್ಥನೆ

ಕಂಪನಿಗಳಲ್ಲಿ ಬೆಳಗ್ಗಿನ ಪ್ರಾರ್ಥನೆ

ಜಪಾನಿನ ಹಲವು ಕಂಪನಿಗಳಲ್ಲಿ ಬೆಳಗಿನ ಹೊತ್ತು, ಎಲ್ಲ ಸಿಬ್ಬಂದಿ ಪ್ರಾರ್ಥನೆ ಮಾಡುತ್ತಾರಂತೆ. ಈ ವಿಷಯವನ್ನು ಬೆಂಗಳೂರಿನ ಟೊಯೋಟಾ ಸಂಸ್ಥೆಯಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡು ತ್ತಿರುವ ಸ್ನೇಹಿತರಾದ ಹೊಸನಗರ ವಸಂತ ತಿಳಿಸಿದರು. ಅವರು ಜಪಾನಿಗೆ ಹೋದಾಗ ಬೆಳಗ್ಗೆ ಪಾಳಿ ಆರಂಭಕ್ಕೆ ಮುನ್ನ ಪ್ರಾರ್ಥನೆಗೆ ನಿಲ್ಲುತ್ತಿದ್ದರಂತೆ. ಈ ರೀತಿಯ ಸಂಪ್ರದಾಯವನ್ನು ಬೇರೆ ಯಾವ ದೇಶ ಗಳಲ್ಲೂ ನೋಡಲು ಸಾಧ್ಯವಿಲ್ಲ.

Vishweshwar Bhat Column: ಇಂದಿಗೂ ಜಪಾನಿನಲ್ಲಿ ಚಾಲ್ತಿಯಲ್ಲಿರುವ ಮಾನವ ರಿಕ್ಷಾ !

ಇಂದಿಗೂ ಜಪಾನಿನಲ್ಲಿ ಚಾಲ್ತಿಯಲ್ಲಿರುವ ಮಾನವ ರಿಕ್ಷಾ !

ತಮ್ಮ ಪೂರ್ವಿಕರು ಮಾಡಿಕೊಂಡು ಬಂದಿರುವ ಕಸುಬನ್ನು ಮುಂದುವರಿಸಿಕೊಂಡು ಹೋಗ ಬೇಕು ಎಂಬ ಕಾರಣದಿಂದ ಇನ್ನೂ ಆ ವೃತ್ತಿಗೆ ಅಂಟಿಕೊಂಡಿದ್ದಾರೆ. ಅವರು ಬೇರೆ ಯಾವ ರಂಗದದರೂ ಕಸಬು ಗಿಟ್ಟಿಸಿಕೊಳ್ಳಲು ಶಕ್ತರು. ಆದರೂ ಆ ಕಠಿಣ ವೃತ್ತಿಯನ್ನು ನೆಚ್ಚಿಕೊಂಡಿ ರುವುದು ಅವರ ಕಾಯಕ ನಿಷ್ಠೆಗೆ ನಿದರ್ಶನ.

Vishweshwar Bhat Column: ಲಗೇಜ್‌ ನಿರ್ವಹಣೆ

ಲಗೇಜ್‌ ನಿರ್ವಹಣೆ

ಜಪಾನಿನ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಹ್ಯಾಂಡ್ಲಿಂಗ್ ವ್ಯವಸ್ಥೆ, ವಿಶ್ವದ ಇತರ ದೇಶ ಗಳ ವಿಮಾನ ನಿಲ್ದಾಣಗಳೊಂದಿಗೆ ಹೋಲಿಸಿದಾಗ ಅತ್ಯಂತ ಪರಿಣಾಮಕಾರಿ ಮತ್ತು ನಿಖರವಂತೆ. ಟೋಕಿಯೋ ನಾರಿಟಾ, ಹನೇಡಾ ಮತ್ತು ಕಾನ್ಸಾಯಿ ವಿಮಾನ ನಿಲ್ದಾಣಗಳು ತಮ್ಮ ಉನ್ನತ ಮಟ್ಟದ ಲಗೇಜ್ ಹ್ಯಾಂಡ್ಲಿಂಗ್ ಸೇವೆಗಳಿಗಾಗಿ ಪ್ರಸಿದ್ಧವಾಗಿವೆಯಂತೆ.

Vishweshwar Bhat Column: ನಕಲಿ ಆಹಾರವೂ ಜನಪ್ರಿಯ

ನಕಲಿ ಆಹಾರವೂ ಜನಪ್ರಿಯ

ನಕಲಿ ಆಹಾರದ ಇತಿಹಾಸ 20ನೇ ಶತಮಾನದ ಆರಂಭದಲ್ಲಿ ಶುರುವಾಯಿತು. 1920ರ ದಶಕ ದಲ್ಲಿ, ಜಪಾನ್‌ನಲ್ಲಿ ಪಾಶ್ಚಿಮಾತ್ಯ ಆಹಾರ (Western food) ಪರಿಚಯವಾಗು ತ್ತಿದ್ದಾಗ, ಅಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಅಶಿಕ್ಷಿತ ಗ್ರಾಹಕರಿಗೆ ಆಹಾರವನ್ನು ವಿವರಿಸುವುದು ಕಷ್ಟವಾಗುತ್ತಿತ್ತು

Vishweshwar Bhat Column: ವಿಮಾನದಿಂದಲೇ ದೇವರನ್ನು ತೋರಿಸಿದ ಆ ಪೈಲಟ್

ವಿಮಾನದಿಂದಲೇ ದೇವರನ್ನು ತೋರಿಸಿದ ಆ ಪೈಲಟ್

ಮೆಲ್ಬರ್ನ್ ಎಂಸಿಜಿ ಕ್ರೀಡಾಂಗಣದಲ್ಲಿ ಸುಮಾರು 93 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಆಸ್ಟ್ರೇ ಲಿಯಾ-ನ್ಯೂಜಿಲೆಂಡ್ ನಡುವೆ ಅಂತಿಮ ಪಂದ್ಯ. ಅದೇ ದಿನ ನಾನು ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಟಿಕೆಟ್ ಬುಕ್ ಮಾಡುವಾಗ ಆ ದಿನ ಫೈನಲ್ ಪಂದ್ಯವಿರುತ್ತದೆಂಬುದನ್ನು ಯೋಚಿಸಲೇ ಇಲ್ಲ.

Vishweshwar Bhat Column: ಬೆರಗಿನ ಫಾಂಟ್‌ ಲೋಕ

ಬೆರಗಿನ ಫಾಂಟ್‌ ಲೋಕ

ಹಾಗೆಯೇ ಸ್ಯಾಮ್‌ಸಂಗ್. ನೋಕಿಯಾ ಪಾಂಟ್ ಇದ್ದಂತೆ, ಸ್ಯಾಮ್‌ಸಂಗ್ ಫಾಂಟ್‌ ಇಲ್ಲ. ಹೀಗಾಗಿ ಎಲ್ಲ ಸಂಸ್ಥೆ ಅಥವಾ ಕಂಪನಿಗಳು ತಮಗಾಗಿ ವಿಶೇಷವಾದ ಫಾಂಟ್‌ಗಳನ್ನು ಡಿಸೈನ್ ಮಾಡಿಕೊಳ್ಳುತ್ತವೆ. ಇದಕ್ಕಾಗಿ ಕೋಟ್ಯಂತರ ರುಪಾಯಿ ಸುರಿಯುತ್ತವೆ. ಇದು ಅವುಗಳನ್ನು ಗುರುತಿಸಲು ಸಹಾಯಕವಾಗುತ್ತವೆ

Sirsi News: ಹೊಂಡ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದ ಪಿಎಸ್ ಐ ಮಹಾಂತೇಶ ಕುಂಬಾರ್

ಪೊಲೀಸರಿಂದಲೇ ಹೊಂಡ ಮುಚ್ಚುವ ಕಾರ್ಯ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿನ 5 ರೋಡ್ ಸರ್ಕಲ್ ನಲ್ಲಿ ರಾಜ್ಯ ಸರ ಕಾರ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿಯವರ ವಿರುದ್ದ ಬಿಜೆಪಿ ಪ್ರತಿಭಟನೆ ನಡೆಸು ತ್ತಿತ್ತು. ಈ ಸಂದರ್ಭ ದಲ್ಲಿ ಟ್ರಾಪಿಕ್ ನಿರ್ವಹಣೆ ಮಾಡುತ್ತಿದ್ದ ಪೊಲೀಸರಿಗೆ ರಸ್ತೆಯ ಮೇಲಿ ನ ದೊಡ್ಡ ಹೊಂಡ ವಾಹನ ಸವಾರರಿಗೆ ಹೋಗುವುದಕ್ಕೇ ಸಮಸ್ಯೆಯಾಗಿದ್ದನ್ನು ನೋಡಿ ಸ್ವತಃ ಅಲ್ಲಿದ್ದ ಪೊಲೀಸರೇ ಹೊಂಡ ಮುಚ್ಚುವ ಕಾರ್ಯ ನಡೆಸಿದರು.

Vishweshwar Bhat Column : ವಿಮಾನ ನಿಲ್ದಾಣ ಸಿಬ್ಬಂದಿ ನಡತೆ

ವಿಮಾನ ನಿಲ್ದಾಣ ಸಿಬ್ಬಂದಿ ನಡತೆ

ವಿಮಾನ ಹೊರಟ ನಂತರ ನಡುಬಗ್ಗಿ ನಮಸ್ಕರಿಸುವುದು ಕೇವಲ ಸಂಪ್ರದಾಯವಲ್ಲ, ಇದು ಅವರ ಕೆಲಸದ ಭಾಗವಾಗಿದ್ದು, ಪ್ರಯಾಣಿಕರ ನಂಬಿಕೆಗೆ ಕೃತಜ್ಞತೆ ತೋರುವ ನಡೆ ಯಾಗಿದೆ. ಜಪಾನಿನ ಜನರು ಯಾವುದೇ ಕೆಲಸವನ್ನು ಶ್ರದ್ಧೆಯೊಂದಿಗೆ ಮಾಡುವುದರಲ್ಲಿ ಮತ್ತು ಶಿಸ್ತಿ ನೊಂದಿಗೆ ನಡೆದುಕೊಳ್ಳುವುದರಲ್ಲಿ ನಿಸ್ಸೀಮರು

Vishweshwar Bhat Column: ಟ್ಯಾಕ್ಸಿ ಶಿಷ್ಟಾಚಾರ

ಟ್ಯಾಕ್ಸಿ ಶಿಷ್ಟಾಚಾರ

ಜಪಾನಿನ ಟ್ಯಾಕ್ಸಿ ಚಾಲಕರು ತಮ್ಮನ್ನು ‘ದೇಶದ ರಾಯಭಾರಿ’ ಎಂದು ಭಾವಿಸಿರುತ್ತಾರೆ ಅಂತ ಹೇಳುವುದನ್ನು ಕೇಳಿದ್ದೆ. ಆದರೆ ಅಲ್ಲಿಗೆ ಹೋದಾಗ ಟ್ಯಾಕ್ಸಿಯಲ್ಲಿ ಎರಡು ಸಲ ಓಡಾಡಿದಾಗ, ಇದು ಮನವರಿಕೆಯಾಯಿತು. ಅಲ್ಲಿನ ಟ್ಯಾಕ್ಸಿ ಬಳಸುವಾಗ ಕೆಲವು ನಿಯಮಗಳನ್ನು ಅನು ಸರಿಸ‌ಬೇಕು. ಆ ಪೈಕಿ ಒಂದು ಪ್ರಮುಖ ನಿಯಮವೆಂದರೆ, ಟ್ಯಾಕ್ಸಿಯ ಬಾಗಿಲನ್ನು ತೆಗೆಯಲು ಪ್ರಯತ್ನಿಸಬಾರದು.

Vishweshwar Bhat Column: ಸುಮೋ ಅಳುವ ಮಗು ಉತ್ಸವ

ಸುಮೋ ಅಳುವ ಮಗು ಉತ್ಸವ

ನಾಕಿ ಸುಮೋ ಉತ್ಸವದ ಮೂಲವನ್ನು ನೋಡಿದರೆ, ಇದು ಜಪಾನಿನ ಶಿಂಟೋ ಧರ್ಮದ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಪೂರಕ ವಾಗಿದೆ. ಶಿಂಟೋ ಧರ್ಮದಲ್ಲಿ ಮಕ್ಕಳ ಆರೋಗ್ಯ, ಬೆಳವಣಿಗೆ ಮತ್ತು ಸಮೃದ್ಧ ಜೀವನಕ್ಕಾಗಿ ದೇವತೆಗಳನ್ನು ಆರಾಧಿಸುವುದು ಸಾಮಾನ್ಯ. ಜಪಾನಿನ ಅನೇಕ ಮಂದಿರಗಳಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತಿದ್ದರೂ, ಸೇನ್ಸೋಜಿ ದೇವಸ್ಥಾನ (Sensoji Temple) ಮತ್ತು ಶಿತನೋ ಮಿಯಾ ಶ್ರೈನ್ ದೇವಾಲಯಗಳಲ್ಲಿ ನಡೆಯುವ ಉತ್ಸವ ಅತ್ಯಂತ ಜನಪ್ರಿಯವಾಗಿದೆ.

Vishweshwar Bhat Column: ಇಕಿಗಾಯಿ ಅರಿಯದೇ ಜಪಾನ್‌ ಸರಿಯಾಗಿ ಅರ್ಥವಾಗುವುದುಂಟೇ ?

ಇಕಿಗಾಯಿ ಅರಿಯದೇ ಜಪಾನ್‌ ಸರಿಯಾಗಿ ಅರ್ಥವಾಗುವುದುಂಟೇ ?

ಇಕಿಗಾಯಿ ಎಂಬುದು ಎರಡು (ಜಪಾನಿ) ಪದಗಳಿಂದ ಕೂಡಿದೆ. ಇಕಿ ಅಂದರೆ ಜೀವಿಸುವುದು ಅಥವಾ ಬದುಕುವುದು ಮತ್ತು ಗಾಯಿ ಅಂದರೆ ಅರ್ಥ, ಕಾರಣ ಅಥವಾ ಮೌಲ್ಯ ಎಂದರ್ಥ. ಅಂದರೆ, ‘ಬದುಕಲು ಒಂದು ಕಾರಣ’ ಅಥವಾ ‘ಬದುಕಿಗೆ ಅರ್ಥ ನೀಡುವ ತತ್ವ’ ಎಂಬ ಅರ್ಥ ವನ್ನು ಹೊಂದಿದೆ. ಇಕಿಗಾಯಿ ಎಂಬುದು 4 ಪ್ರಮುಖ ಅಂಶಗಳನ್ನು ಒಳಗೊಂಡಿದೆ