ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಎಂ.ಜಿ.ದೇವಸಹಾಯಂ ಗೊತ್ತಾ ?

Vishweshwar Bhat Column: ಎಂ.ಜಿ.ದೇವಸಹಾಯಂ ಗೊತ್ತಾ ?

ಸರಕಾರದ ಕಠಿಣ ನಿಯಮಗಳ ನಡುವೆಯೂ ದೇವಸಹಾಯಂ, ಜೆಪಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ಕೇವಲ ಒಬ್ಬ ಅಧಿಕಾರಿಯಾಗಿರದೇ, ಜೆಪಿಗೆ ಬೌದ್ಧಿಕ ಸಾಂಗತ್ಯವನ್ನೂ ನೀಡಿದರು. ಆ ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಚೇಲಾಗಳ ಹಾಗೆ ವರ್ತಿಸು ತ್ತಿದ್ದರು.

Vishweshwar Bhat Column: ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ !

ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ !

ತನ್ನದೇ ಸಂಸ್ಥೆಯ ಉದ್ಯೋಗಿಯೊಬ್ಬನ ಸುದ್ದಿಯನ್ನು ಅಷ್ಟು ನಿರ್ದಯವಾಗಿ, ನಿಷ್ಕರುಣೆಯಿಂದ ಆ ಪತ್ರಿಕೆ ಪ್ರಕಟಿಸಿತ್ತು. ಅಷ್ಟಕ್ಕೂ ಒಬ್ಬ ಪತ್ರಕರ್ತನ ಸಾವಿಗೆ ಬೆಲೆಯೇ ಇಲ್ಲವಾ? ಪತ್ರಿಕೆಯ ಸುದ್ದಿ ಮನೆ ಯಲ್ಲಿ ಒಂದು ಅಲಿಖಿತ ನಿಯಮವಿದೆ -‘ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ’ ಅಥವಾ ಹೆಚ್ಚೆಂದರೆ, ‘ಪತ್ರಕರ್ತನ ಸಾವು ಸಿಂಗಲ್ ಕಾಲಂ ಸುದ್ದಿ’.

Vishweshwar Bhat Column: ವಿದೇಶಾಂಗ ಇಲಾಖೆಯಲ್ಲಿ ಹಿಂದಿ

Vishweshwar Bhat Column: ವಿದೇಶಾಂಗ ಇಲಾಖೆಯಲ್ಲಿ ಹಿಂದಿ

ಡಿಸೆಂಬರ್ 1955ರಲ್ಲಿ, ಬಚ್ಚನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ಅಧಿಕಾರಿಯಾಗಿ ಅಧಿಕೃತವಾಗಿ ಸೇರಿಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಆಡಳಿತ ದಲ್ಲಿ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಿಂದಿ ಭಾಷೆಯನ್ನು ಸಶಕ್ತವಾಗಿ ಬಳಸುವ ಅವಶ್ಯಕತೆಯಿತ್ತು. ಅಲ್ಲಿಯವರೆಗೆ ವಿದೇಶಾಂಗ ಇಲಾಖೆಯ ಎಲ್ಲ ಕೆಲಸಗಳು ಕೇವಲ ಇಂಗ್ಲಿಷ್‌ನಲ್ಲಿ ನಡೆಯುತ್ತಿದ್ದವು. ಈ ಇಲಾಖೆಯಲ್ಲಿ ಹಿಂದಿ ಭಾಷೆಯನ್ನು ಪರಿಚಯಿಸುವ ಮತ್ತು ಅದನ್ನು ಜಾರಿಗೆ ತರುವ ಬೃಹತ್ ಜವಾಬ್ದಾರಿ ಬಚ್ಚನ್ ಅವರ ಹೆಗಲ ಮೇಲೆ ಬಿದ್ದಿತು.

Vishweshwar Bhat Column: ಮಾನವೀಯತೆಯ ಕೋಟು

Vishweshwar Bhat Column: ಮಾನವೀಯತೆಯ ಕೋಟು

ಸ್ಥಳೀಯ ಅಂಗಡಿಗಳ ಮುಂದೆ ಅಥವಾ ಕೆಫೆಗಳ ಹೊರಗೆ ಸಾಲಾಗಿ ಕೋಟ್ ಸ್ಟ್ಯಾಂಡ್ʼಗಳನ್ನು ಇರಿಸಲಾಗಿರುತ್ತದೆ. ಅವುಗಳ ಮೇಲೆ ‘ಚಳಿಯಾಗುತ್ತಿದ್ದರೆ ಒಂದನ್ನು ಪಡೆದುಕೊಳ್ಳಿ’ (Take One If Cold ) ಎಂಬ ಫಲಕವಿರುತ್ತದೆ. ಯಾವುದೇ ಅರ್ಜಿಗಳಿಲ್ಲದೇ, ಯಾರ ಅಪ್ಪಣೆಯೂ ಇಲ್ಲದೇ, ಅಗತ್ಯವಿರುವವರು ತಮಗೆ ಬೇಕಾದ ಕೋಟನ್ನು ಆರಿಸಿಕೊಳ್ಳುವ ಈ ಪರಿಕಲ್ಪನೆಯು ‘ಮಾನವೀಯತೆಗೆ ಯಾವುದೇ ಗಡಿಯಿಲ್ಲ’ ಎಂಬುದನ್ನು ಸಾಬೀತುಪಡಿಸುತ್ತಿದೆ. ಈ ಅಭಿಯಾನವು ಮೊದಲು ಬೆಲ್ಜಿಯಂನ ಘೆಂಟ್ ಮತ್ತು ಬ್ರಸೆಲ್ಸ್ ನಗರಗಳಲ್ಲಿ ಆರಂಭವಾಯಿತು. ‌

Vishweshwar Bhat Column: ವಾಷಿಂಗ್ಟನ್‌ ಪೋಸ್ಟ್‌ ಸಂಕಟ

Vishweshwar Bhat Column: ವಾಷಿಂಗ್ಟನ್‌ ಪೋಸ್ಟ್‌ ಸಂಕಟ

2‌024ರಲ್ಲಿ ಪತ್ರಿಕೆಯು ಸುಮಾರು 100 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆಯಂತೆ. ಇತ್ತೀಚೆಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ, ಪತ್ರಿಕೆಯು ಯಾವುದೇ ಅಭ್ಯರ್ಥಿಗೆ (ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ನೀಡುವ ನಿರ್ಧಾರವನ್ನು ತಡೆಹಿಡಿಯಲಾಗಿತ್ತು) ಅಧಿಕೃತ ಬೆಂಬಲ ಸೂಚಿಸದಿರಲು ಬೆಜೋಸ್ ನಿರ್ಧರಿಸಿದ್ದರು. ಈ ನಿರ್ಧಾರದಿಂದ ಕೋಪಗೊಂಡ ಸುಮಾರು 2.5 ಲಕ್ಷ ಡಿಜಿಟಲ್ ಚಂದಾದಾರರು ತಮ್ಮ ಚಂದಾದಾರಿಕೆಯನ್ನು ರದ್ದುಗೊಳಿಸಿದರು. ಇದು ಪತ್ರಿಕೆಗೆ ದೊಡ್ಡ ಆರ್ಥಿಕ ಹೊಡೆತ ನೀಡಿತು.

Vishweshwar Bhat Column: ಸುದೀರ್ಘ ವಾರಸುದಾರ !

Vishweshwar Bhat Column: ಸುದೀರ್ಘ ವಾರಸುದಾರ !

ಡೇವಿಡ್ ಕ್ಯಾಮರೂನ್ ಪ್ರಧಾನಿಯಾದಾಗ ಲ್ಯಾರಿಯನ್ನು ಕರೆತಂದರು. ಇವರ ಅವಧಿಯಲ್ಲಿ ಮೊದಲ ಬಾರಿಗೆ ಲ್ಯಾರಿ ವಿಶ್ವದ ಗಮನ ಸೆಳೆದ. ನಂತರ ಬಂದ ಐದು ಪ್ರಧಾನಿಗಳನ್ನು ಸ್ವಾಗತಿಸಿದ್ದು ಇದೇ ಬೆಕ್ಕು. ಭಾರತೀಯ ಮೂಲದ ಸುನಕ್ ಅವಧಿಯಲ್ಲೂ ಲ್ಯಾರಿ ತನ್ನ ಪ್ರಾಬಲ್ಯ ಮೆರೆದ. ಥೆರೆಸಾ ಮೇ ಕಾಲದಲ್ಲಿ ಲ್ಯಾರಿ ಮಾಧ್ಯಮಗಳ ಫೇವರಿಟ್ ಆಯಿತು.

Vishweshwar Bhat Column: ಆಗಾಗ ಮಾತಿನಲ್ಲಿ ಇಣುಕುವ ರೆಡ್‌ ಹೆರಿಂಗ್‌ ಮತ್ತು ಸ್ಟ್ರಾಮ್ಯಾನ್‌ ಫ್ಯಾಲಸಿ !

ಮಾತಿನಲ್ಲಿ ಇಣುಕುವ ರೆಡ್‌ ಹೆರಿಂಗ್‌ ಮತ್ತು ಸ್ಟ್ರಾಮ್ಯಾನ್‌ ಫ್ಯಾಲಸಿ !

ಪತ್ತೇದಾರಿ ಕಾದಂಬರಿಗಳು ಮತ್ತು ಸಸ್ಪೆ ಸಿನಿಮಾಗಳಲ್ಲಿ ‘ರೆಡ್ ಹೆರಿಂಗ್’ ಅತ್ಯಗತ್ಯ. ಓದುಗ ಅಥವಾ ಪ್ರೇಕ್ಷಕ ಸುಲಭವಾಗಿ ಕೊಲೆಗಾರ ಯಾರು ಎಂದು ಕಂಡುಹಿಡಿಯಬಾರದು ಎಂಬ ಉದ್ದೇಶದಿಂದ ಲೇಖಕರು ಇದನ್ನು ಬಳಸುತ್ತಾರೆ. ಕಥೆಯಲ್ಲಿ ಒಬ್ಬ ವ್ಯಕ್ತಿಯು ಸಂಶಯಾಸ್ಪದವಾಗಿ ನಡೆದುಕೊಳ್ಳು ವಂತೆ ತೋರಿಸಲಾಗುತ್ತದೆ.

Vishweshwar Bhat Column: ಹವಾನ ಸಿಂಡ್ರೋಮ್‌ ಎಂದರೇನು ?

Vishweshwar Bhat Column: ಹವಾನ ಸಿಂಡ್ರೋಮ್‌ ಎಂದರೇನು ?

ನೀವು ‘ಹವಾನಾ ಸಿಂಡ್ರೋಮ್’ ಬಗ್ಗೆ ಕೇಳಿದ್ದೀರಾ? ಇದು ಇಪ್ಪತ್ತೊಂದನೇ ಶತಮಾನದ ಅತ್ಯಂತ ನಿಗೂಢ ರಾಜತಾಂತ್ರಿಕ ಮತ್ತು ವೈದ್ಯಕೀಯ ರಹಸ್ಯಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ಆರೋಗ್ಯ ಸಮಸ್ಯೆಯಾಗಿ ಉಳಿಯದೇ, ಅಮೆರಿಕ, ರಷ್ಯಾ ಮತ್ತು ಚೀನಾದಂಥ ಬಲಿಷ್ಠ ರಾಷ್ಟ್ರಗಳ ನಡುವಿನ ಶೀತಲ ಸಮರದ ಹೊಸ ಆಯಾಮವಾಗಿ ಮಾರ್ಪಟ್ಟಿದೆ.

Vishweshwar Bhat Column: ಯಾರು ಈ ಸದಾನಂದನ್‌ ಮಾಸ್ಟರ್‌ ?

Vishweshwar Bhat Column: ಯಾರು ಈ ಸದಾನಂದನ್‌ ಮಾಸ್ಟರ್‌ ?

‘ದೇಶೀಯ ಅಧ್ಯಾಪಕ ವಾರ್ತಾ’ ಪತ್ರಿಕೆಯ ಸಂಪಾದಕರೂ ಅವರೇ. ಸದಾನಂದನ್ ಮಾಸ್ಟರ್ ಹೆಸರನ್ನು ಕೇಳಿದಾಗ ಕೇರಳದ ಜನರಿಗೆ ಮೊದಲು ನೆನಪಾಗುವುದು 32 ವರ್ಷಗಳ ಹಿಂದೆ (1994ರ ಜನವರಿ 25) ನಡೆದ ಆ ಅಮಾನುಷ ಘಟನೆ. ಅಂದು ಸಂಜೆ ಅವರು ಕೆಲಸ ಮುಗಿಸಿ ಮನೆಗೆ ಹಿಂದಿ ರುಗುತ್ತಿದ್ದಾಗ, ಕಮ್ಯುನಿಸ್ಟ್ ಪಕ್ಷದ (ಸಿಪಿಎಂ) ಕಾರ್ಯಕರ್ತರೆನ್ನಲಾದ ಗುಂಪೊಂದು ಅವರ ಮೇಲೆ ಭೀಕರ ದಾಳಿ ನಡೆಸಿತು. ‌

Vishweshwar Bhat Column: ಭಾರತದಲ್ಲಿ ಭಯೋತ್ಪಾದನೆಗಿಂತ ಪ್ರೇಮವೇ ಹೆಚ್ಚು ಅಪಾಯಕಾರಿ !

ಭಾರತದಲ್ಲಿ ಭಯೋತ್ಪಾದನೆಗಿಂತ ಪ್ರೇಮವೇ ಹೆಚ್ಚು ಅಪಾಯಕಾರಿ !

ಮಾತೃಭಾಷೆಗಳ ದಾಸ್ತಾನನ್ನು ಆಗ ಭಾರತದ 121 ಅಧಿಕೃತ ಭಾಷೆಗಳ ಅಡಿಯಲ್ಲಿ ವರ್ಗೀಕರಿಸ ಲಾಗಿತ್ತು. ಹಿಂದಿ ಭಾಷೆಯಂದೇ 56ಕ್ಕೂ ಹೆಚ್ಚು ಮಾತೃಭಾಷೆಗಳಿವೆ, ಆದರೆ ಆ ಭಾಷಿಕರು ಇವುಗಳನ್ನು ಅವಧ್, ಭೋಜಪುರಿ, ಹರಿಯಾನ್ವಿ, ರಾಜಸ್ಥಾನಿ ಎಂದು ಕರೆಯುತ್ತಾರೆ. ಹಿಂದಿ ಮಾತನಾಡುವ 52.8 ಕೋಟಿ ಭಾರತೀಯರಲ್ಲಿ ಶೇ.40ರಷ್ಟು ಜನರು ವಾಸ್ತವವಾಗಿ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ‌

Vishweshwar Bhat Column: ಬುಲೆಟ್‌ ಅನ್ನು ಕಚ್ಚಬಹುದಾ ?

Vishweshwar Bhat Column: ಬುಲೆಟ್‌ ಅನ್ನು ಕಚ್ಚಬಹುದಾ ?

ಯುದ್ಧಭೂಮಿ ಯಲ್ಲಿ ಗಾಯಗೊಂಡ ಸೈನಿಕರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾದಾಗ ಅಥವಾ ಅವರ ಕಾಲು-ಕೈಗಳನ್ನು ಕತ್ತರಿಸಬೇಕಾದಾಗ ಅವರು ವಿಪರೀತ ನೋವಿನಿಂದ ಕಿರುಚುತ್ತಿದ್ದರು. ಆ ನೋವಿನ ತೀವ್ರತೆಯನ್ನು ತಡೆಯಲು ಮತ್ತು ಕಿರುಚಾಟವನ್ನು ಕಡಿಮೆ ಮಾಡಲು, ವೈದ್ಯರು ಸೈನಿಕನ ಹಲ್ಲುಗಳ ಮಧ್ಯೆ ಒಂದು ಸೀಸದ ಗುಂಡನ್ನು (Lead Bullet) ಇಡುತ್ತಿದ್ದರು. ಸೀಸವು ತುಲನಾತ್ಮಕವಾಗಿ ಮೃದುವಾದ ಲೋಹವಾಗಿದ್ದರಿಂದ, ಸೈನಿಕನು ಅದನ್ನು ಹಲ್ಲುಗಳಿಂದ ಗಟ್ಟಿಯಾಗಿ ಕಚ್ಚಿ ಹಿಡಿಯುತ್ತಿದ್ದನು.

Vishweshwar Bhat Column: ʼಹೇರ್‌ ಆಫ್‌ ದಿ ಡಾಗ್‌ʼ ಅಂದರೇನು ?

Vishweshwar Bhat Column: ʼಹೇರ್‌ ಆಫ್‌ ದಿ ಡಾಗ್‌ʼ ಅಂದರೇನು ?

ಟೋಪಿ ನೆಲಕ್ಕೆ ಬಿದ್ದ ತಕ್ಷಣ ಆಟಗಾರರು ಸ್ಪರ್ಧೆಯನ್ನು ಶುರುಮಾಡಬೇಕಿತ್ತು. ಅಂದರೆ, ಟೋಪಿ ಕೆಳಗೆ ಬಿದ್ದ ಕ್ಷಣದ ಕೆಲಸ ಆರಂಭವಾಗಬೇಕು ಎಂಬ ಅರ್ಥದಿಂದ ಈ ನುಡಿಗಟ್ಟು ಬಳಕೆಗೆ ಬಂದಿತು. ಹಾಗೆ 'Hair of the Dog' ಎಂಬ ನುಡಿಗಟ್ಟು ಇದೆ. ಇದರ ಪೂರ್ಣ ರೂಪ 'Hair of the dog that bit you'.

Vishweshwar Bhat Column: ಒಳ್ಳೆಯ ಯೋಜನೆ, ಕೆಟ್ಟ ಅನುಷ್ಠಾನ

Vishweshwar Bhat Column: ಒಳ್ಳೆಯ ಯೋಜನೆ, ಕೆಟ್ಟ ಅನುಷ್ಠಾನ

ಪರಿಸರ ಪ್ರೇಮಿಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಇದಕ್ಕೆ ಬೆಂಬಲ ನೀಡಿದ್ದವು. ಈ ಯೋಜನೆ ಯ ಮುಖ್ಯಗುರಿ- ಜೈವಿಕ ವೈವಿಧ್ಯವನ್ನು ಹೆಚ್ಚಿಸುವುದು, ಪ್ರವಾಸೋದ್ಯಮದ ಮೂಲಕ ದೇಶದ ಆರ್ಥಿಕತೆಯನ್ನು ಸುಧಾರಿಸುವುದು, ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಹೊಸ ಆವಾಸ ಸ್ಥಾನ ಕಲ್ಪಿಸುವುದು.

Vishweshwar Bhat Column: ಹೋಲಿ ಗ್ರೇಲ್‌ ಎಂದರೇನು ?

Vishweshwar Bhat Column: ಹೋಲಿ ಗ್ರೇಲ್‌ ಎಂದರೇನು ?

ಕ್ರೈಸ್ತ ಧರ್ಮದ ನಂಬಿಕೆಗಳ ಪ್ರಕಾರ, ಏಸು ಕ್ರಿಸ್ತ ತಮ್ಮ ಶಿಷ್ಯರೊಂದಿಗೆ ನಡೆಸಿದ ಕೊನೆಯ ಔತಣ ಕೂಟದಲ್ಲಿ (The Last Supper) ದ್ರಾಕ್ಷಾರಸ ಕುಡಿಯಲು ಬಳಸಿದ ಕಪ್ ಅಥವಾ ಪಾತ್ರೆ ಯನ್ನು ‘ಹೋಲಿ ಗ್ರೇಲ್’ ಎಂದು ಕರೆಯಲಾಗುತ್ತದೆ. ಮತ್ತೊಂದು ಪ್ರಬಲ ನಂಬಿಕೆಯ ಪ್ರಕಾರ, ಕ್ರಿಸ್ತರನ್ನು ಶಿಲುಬೆಗೇರಿಸಿ ದಾಗ ಅವರ ದೇಹದಿಂದ ಹರಿದ ಪವಿತ್ರ ರಕ್ತವನ್ನು ಸಂಗ್ರಹಿಸಲು ಜೋಸೆಫ್ ಆಫ್ ಅರಿಮತಿಯಾ ಇದೇ ಪಾತ್ರೆಯನ್ನು ಬಳಸಿದ್ದರು ಎನ್ನಲಾಗುತ್ತದೆ. ‌

Vishweshwar Bhat Column: ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್‌ʼನಲ್ಲಿ ಅದೂ ಇಲ್ಲ !

ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್‌ʼನಲ್ಲಿ ಅದೂ ಇಲ್ಲ !

ಇಸ್ರೇಲಿಗಳು ಕಾಫಿ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಅವರಿಗೆ ಕಾಫಿ ಎಂದರೆ ಕೇವಲ ಒಂದು ಪಾನೀಯವಲ್ಲ, ಅದೊಂದು ಭಾವನೆ ಮತ್ತು ಸಂಸ್ಕೃತಿ. 2001ರಲ್ಲಿ ಸ್ಟಾರ್‌ಬಕ್ಸ್ ಬಹಳ ಅದ್ದೂರಿ‌ ಯಾಗಿ ಇಸ್ರೇಲ್ ಮಾರುಕಟ್ಟೆಗೆ ಪ್ರವೇಶಿಸಿತು. ‘ಶಾಲೋಮ್ ಕಾಫಿ ಲಿಮಿಟೆಡ್’ ಎಂಬ ಸ್ಥಳೀಯ ಸಂಸ್ಥೆಯೊಂದಿಗೆ ಕೈಜೋಡಿಸಿ ಆರು ಶಾಖೆಗಳನ್ನು ತೆರೆಯಿತು. ಆದರೆ, ಕೇವಲ ಎರಡು ವರ್ಷ ಕಳೆಯುವಷ್ಟರಲ್ಲಿ (2003) ಸುಮಾರು 6 ಮಿಲಿಯನ್ ಡಾಲರ್ ನಷ್ಟ ಅನುಭವಿಸಿ ತನ್ನೆಲ್ಲ ಶಾಖೆ ಗಳನ್ನು ಮುಚ್ಚಿತು.

Vishweshwar Bhat Column: ಇನ್ನೂರು ವರ್ಷಗಳ ಬಳಿಕ ಸಿಕ್ಕಿತು !

Vishweshwar Bhat Column: ಇನ್ನೂರು ವರ್ಷಗಳ ಬಳಿಕ ಸಿಕ್ಕಿತು !

ಸುಮಾರು 100 ವರ್ಷಗಳ ಹಿಂದೆ, ಈ ಚಿತ್ರವನ್ನು ಪತ್ತೆಹಚ್ಚಲು ನಡೆದ ಗಂಭೀರ ಪ್ರಯತ್ನಗಳ ಬಗ್ಗೆ ಡಾಯ್ಲ್ ವರದಿ ಮಾಡಿದ್ದರು. ‘ಸ್ಕಾಟ್ಲೆಂಡ್‌ನ ಶ್ರೇಷ್ಠ ಕಲಾವಿದ ಚಿತ್ರಿಸಿದ ಶ್ರೇಷ್ಠ ಸ್ಕಾಟ್ಸ್‌ಮನ್‌ನ ಭಾವ ಚಿತ್ರ’ ಎಂದು ಇದನ್ನು ಕರೆಯಲಾಗುತ್ತಿತ್ತು. ಬರ್ನ್ಸ್‌ ಅವರ ಅಭಿಮಾನಿಗಳು ಮತ್ತು ಕಲಾರಸಿಕರು ಇದನ್ನು ‘ಕಲಾಪ್ರಪಂಚದ ಹೋಲಿ ಗ್ರೇಲ್’ ಎಂದು ಪರಿಗಣಿಸಿದ್ದರು.

Vishweshwar Bhat Column: ಪ್ರತಿಭಟನೆಯಲ್ಲಿ ಸೃಜನಶೀಲತೆ

Vishweshwar Bhat Column: ಪ್ರತಿಭಟನೆಯಲ್ಲಿ ಸೃಜನಶೀಲತೆ

ಇಂಥದೇ ಘಟನೆ ಸರ್ಬಿಯಾ ದೇಶದಲ್ಲೂ ನಡೆದಿದೆ. ಅಲ್ಲಿನ ನೊವಿಸಾದ್ ಎಂಬ ನಗರದಲ್ಲಿ ನಡೆದ ‘ರಬ್ಬರ್ ಬಾತುಕೋಳಿಗಳ ಕ್ರಾಂತಿ’ ನಾಗರಿಕ ಸಮಾಜಕ್ಕೆ ಒಂದು ಹೊಸ ಪಾಠವನ್ನು ಕಲಿಸಿದೆ. ರಸ್ತೆಯ ಗುಂಡಿಗಳ ಬಗ್ಗೆ ಅಧಿಕಾರಿಗಳ ಮೇಲೆ ಕೂಗಾಡಿ, ಪ್ರತಿಭಟನೆ ಮಾಡುವ ಬದಲು, ಸೃಜನ ಶೀಲತೆ ಮತ್ತು ಹಾಸ್ಯದ ಮೂಲಕ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಅದು ಅದ್ಭುತ ಉದಾಹರಣೆ.

Vishweshwar Bhat Column: ಡಾ.ರಾಜಾರಾಮಣ್ಣ ಎಂಬ ನಿತ್ಯ ನೆನಪಿನ ಸ್ಥಾವರ

ಡಾ.ರಾಜಾರಾಮಣ್ಣ ಎಂಬ ನಿತ್ಯ ನೆನಪಿನ ಸ್ಥಾವರ

ಜನವರಿ 28. ಖ್ಯಾತ ಅಣುವಿಜ್ಞಾನಿ, ಪದ್ಮವಿಭೂಷಣ ಡಾ.ರಾಜಾ ರಾಮಣ್ಣ ಅವರ ಜನ್ಮದಿನ. ಅವರು ಬದುಕಿದ್ದಿದ್ದರೆ ಅವರಿಗೆ ನಿನ್ನೆ 101 ವರ್ಷ ಆಗುತ್ತಿತ್ತು. ನನಗೆ ಅವರೊಂದಿಗೆ ಸುಮಾರು ಹನ್ನೆರಡು ವರ್ಷಗಳ ಅನ್ಯೋನ್ಯ ಸಂಬಂಧವಿತ್ತು. ಅಣುವಿಜ್ಞಾನಿಯಾಗಿದ್ದ ಕಾರಣದಿಂದಲೋ, ಅವರು ಏರಿದ ಎತ್ತರದಿಂದಲೋ, ನನಗೆ ಅವರ ಜತೆ ಬೆರೆಯುವುದು ಆರಂಭದಲ್ಲಿ ಸುಲಭವಾಗಿರ ಲಿಲ್ಲ. ನಮ್ಮಿಬ್ಬರ ನಡುವಿನ ಅಂತರವನ್ನು ಕಿರಿದು ಮಾಡಿದವರು ಅವರೇ.

Vishweshwar Bhat Column: ಬಜೆಟ್‌ ಪ್ರೆಸ್‌ ಅಂತರಂಗ

Vishweshwar Bhat Column: ಬಜೆಟ್‌ ಪ್ರೆಸ್‌ ಅಂತರಂಗ

ನಾರ್ಥ್ ಬ್ಲಾಕ್‌ನ ಬಜೆಟ್ ಪ್ರೆಸ್ ಕೇವಲ ಯಂತ್ರಗಳಿರುವ ಜಾಗವಲ್ಲ. ಅದು ಭಾರತದ ಆರ್ಥಿಕ ಸಾರ್ವ ಭೌಮತ್ವದ ಮತ್ತು ಶಿಸ್ತಿನ ಸಂಕೇತ. ತಂತ್ರಜ್ಞಾನ ಎಷ್ಟೇ ಬೆಳೆದರೂ, ಬಜೆಟ್‌ನ ಗೌಪ್ಯತೆಯನ್ನು ಕಾಪಾ ಡುವಲ್ಲಿ ಈ ಸ್ಥಳವು ಇಂದಿಗೂ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ. ಅಲ್ಲಿ ನಡೆಯುವ ಪ್ರತಿಯೊಂದು ಮುದ್ರಣದ ಹೆಜ್ಜೆಯೂ ದೇಶದ ಅಭಿವೃದ್ಧಿಯ ಹಾದಿಯನ್ನು ನಿರ್ಧರಿಸುತ್ತದೆ.

V‌ishweshwar Bhat Column: ಎಡೆಲ್ಮನ್‌ ಟ್ರಸ್ಟ್‌ ಬ್ಯಾರೋಮೀಟರ್

ಎಡೆಲ್ಮನ್‌ ಟ್ರಸ್ಟ್‌ ಬ್ಯಾರೋಮೀಟರ್

ಜಗತ್ತಿನ ಅನೇಕ ದೇಶಗಳಲ್ಲಿ ಕಳೆದ ಇಪ್ಪತ್ತಾರು ವರ್ಷಗಳಿಂದ ಈ ಸಮೀಕ್ಷೆ ನಡೆಯುತ್ತಿದೆ. ಆ ಪ್ರಕಾರ ಜಗತ್ತಿನೆಡೆ ನಂಬಿಕೆ ಕ್ಷೀಣಿಸುತ್ತಿದೆ’ ಎಂದು ಹೇಳಿದರು. ಹಾಗಾದರೆ ಎಡೆಲ್ಮನ್ ಟ್ರಸ್ಟ್‌ ಬ್ಯಾರೋಮೀಟರ್ ಸಮೀಕ್ಷೆ ಅಂದ್ರೆ ಏನು? ಈ ಸಮೀಕ್ಷೆಗೆ ಯಾಕೆ ಅಷ್ಟು ಮಹತ್ವ? ಇದು ಜಾಗತಿಕ ಮಟ್ಟದಲ್ಲಿ ಸರಕಾರಗಳು, ವ್ಯವಹಾರ ಸಂಸ್ಥೆಗಳು, ಮಾಧ್ಯಮಗಳು ಮತ್ತು ಎನ್‌ಜಿಒ ಗಳ (NGO) ಮೇಲಿರುವ ಸಾರ್ವಜನಿಕ ನಂಬಿಕೆಯನ್ನು ಅಳೆಯುವ ಒಂದು ವಾರ್ಷಿಕ ಸಮೀಕ್ಷೆಯಾಗಿದೆ. ‌

Vishweshwar Bhat Column: ಮಾರ್ಕ್ ಟಲಿ ನೆನಪು

Vishweshwar Bhat Column: ಮಾರ್ಕ್ ಟಲಿ ನೆನಪು

ನೀವು 80 ಮತ್ತು 90ರ ದಶಕದ ಕಾಲಕ್ಕೆ ಹೋಗಿ ನೋಡಿ. ಆಗಿನ್ನೂ ಚಾನೆಲ್‌ಗಳ ಅಬ್ಬರ ಇರಲಿಲ್ಲ, ಬ್ರೇಕಿಂಗ್ ನ್ಯೂಸ್‌ಗಳ ಆರ್ಭಟವಿರಲಿಲ್ಲ. ಸಂಜೆ ಏಳೋ ಎಂಟೋ ಗಂಟೆಯಾ ದಾಗ ಹಳ್ಳಿಹಳ್ಳಿಯ ಕಟ್ಟೆಗಳ ಮೇಲೆ ಕುಳಿತ ಜನರೆಲ್ಲ ಕಿವಿಗೊಡುತ್ತಿದ್ದುದು ರೇಡಿಯೋಕ್ಕೆ. ಇಂಗ್ಲಿಷ್ ಬಲ್ಲ ನಗರ ಪ್ರದೇಶಗಳ ಕೆಲ ಜನ ಬಿಬಿಸಿಯ ಆ ಒಂದು ಕಂಠಕ್ಕೆ ಎದುರು ನೋಡುತ್ತಿದ್ದರು- ‘ದಿಸ್ ಈಸ್ ಬಿಬಿಸಿ... ಐ ಆಮ್ ಮಾರ್ಕ್ ಟಲಿ’. ಅವರು ಹಾಗೆ ಇಂಗ್ಲಿಷ್‌ ನಲ್ಲಿ ಮಾತಾಡು ತ್ತಿದ್ದರೂ, ಇಂಗ್ಲಿಷ್ ಬಲ್ಲವರೆಲ್ಲರಿಗೂ ಅರ್ಥವಾಗುತ್ತಿತ್ತು.

Vishweshwar Bhat Column: ತಜ್ಞರ ಸಲಹೆ ತೀರಾ ಅಗತ್ಯ

Vishweshwar Bhat Column: ತಜ್ಞರ ಸಲಹೆ ತೀರಾ ಅಗತ್ಯ

ಬ್ಯಾಂಕ್ ಖಾತೆಗಳಲ್ಲಿ ಆಗುವ ಗಡಿಬಿಡಿಗಳಲ್ಲಿ ಇದೂ ಒಂದು. ಇಂಥ ಘಟನೆ ನಡೆದಾಗ ಆಗುವ ತಲ್ಲಣ ಊಹಿಸುವುದಕ್ಕೂ ಅಸಾಧ್ಯ. ಯಾರೂ ರಾಜಕುಮಾರ್ ಅವರ ನಡವಳಿಕೆ ಯ ಬಗ್ಗೆ ಸಂದೇಹಿಸುವುದು ಸಾಧ್ಯವಿರಲಿಲ್ಲ. ನೀವು ಎಂದಾದರೂ ಇಂಥ ವಿಚಿತ್ರ ಸನ್ನಿವೇಶ ಎದುರಿಸಿ ದಲ್ಲಿ, ನಿಮ್ಮ ದೃಷ್ಟಿಕೋನ ಸರಿಯಿದೆ ಎಂದಾದಲ್ಲಿ, ಇನ್ನೊಬ್ಬರ ದೃಷ್ಟಿಕೋನದಲ್ಲಿ ಅದು ತಪ್ಪಿರಲೂಬಹುದು.

Vishweshwar Bhat Column: ಟೆಲ್‌ ಅವಿವ್‌ʼನ ಮನೆ ಗೋಡೆಯೂ ಬದುಕುಳಿಯುವ ಅದಮ್ಯ ಚೇತನಕ್ಕೆ ಸಾಕ್ಷಿ!

ಟೆಲ್‌ ಅವಿವ್‌ʼನ ಮನೆ ಗೋಡೆಯೂ ಬದುಕುಳಿಯುವ ಅದಮ್ಯ ಚೇತನಕ್ಕೆ ಸಾಕ್ಷಿ!

ಹೀಬ್ರೂ ಭಾಷೆಯಲ್ಲಿ ‘ಮಮದ್’ ಎಂದರೆ ‘ವೈಯಕ್ತಿಕ ವಸತಿ ಸುರಕ್ಷಿತ ಸ್ಥಳ’ ಎಂದರ್ಥ. ಇದು ಮನೆಯ ಒಳಗೇ ಇರುವ ಒಂದು ಬಲವಾದ ಕಾಂಕ್ರೀಟ್ ಕೊಠಡಿ. 1990-91ರ ಕೊಲ್ಲಿ ಯುದ್ಧದ ಸಮಯದಲ್ಲಿ ಇಸ್ರೇಲ್ ಮೇಲೆ ರಾಕೆಟ್ ದಾಳಿಗಳು ನಡೆದ ನಂತರ, ಇಸ್ರೇಲ್ ಸರಕಾರ ಒಂದು ಕಟ್ಟುನಿಟ್ಟಾದ ನಿಯಮವನ್ನು ಜಾರಿಗೆ ತಂದಿತು.

Vishweshwar Bhat Column: ಶ್ವಾನರಕ್ಷಕ ಪಟ್ಟಿ

Vishweshwar Bhat Column: ಶ್ವಾನರಕ್ಷಕ ಪಟ್ಟಿ

ಸೌರಶಕ್ತಿಯಿಂದ ನಡೆಯುವ ಈ ‘ಮಿನುಗುವ ಪಟ್ಟಿ’ಗಳು ಇಂದು ಕೀನ್ಯಾದ ಬೀದಿನಾಯಿ ಗಳ ಪಾಲಿಗೆ ರಕ್ಷಾಕವಚವಾಗಿವೆ. ಏನಿದು ಮಿನುಗುವ ಪಟ್ಟಿಯ ತಂತ್ರಜ್ಞಾನ? ಕೀನ್ಯಾದ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಿದೆ. ಕತ್ತಲೆಯಲ್ಲಿ ಈ ನಾಯಿಗಳು ರಸ್ತೆ ದಾಟುವಾಗ ವಾಹನ ಸವಾರರಿಗೆ ಕಾಣಿಸುವುದಿಲ್ಲ, ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ ‘ಸೋಲಾರ್ ಕಾಲರ್’ಗಳನ್ನು ಪರಿಚಯಿಸ ಲಾಗಿದೆ.

Loading...