ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಶಾವು ಎಂಬ ಆನೆ ನೆನಪು

Vishweshwar Bhat Column: ಶಾವು ಎಂಬ ಆನೆ ನೆನಪು

‘ಶಾವು’ ಎಂಬ ಹೆಸರು ಆಫ್ರಿಕಾದ ಸ್ಥಳೀಯ ಭಾಷೆಯಿಂದ ಬಂದಿದೆ ಎಂಬುದು ಗಮನಾರ್ಹ. ಇದು ಆನೆಯ ಭವ್ಯತೆ ಮತ್ತು ಅದರ ಶಾಂತ ಸ್ವಭಾವವನ್ನು ಸೂಚಿಸುತ್ತದೆ. ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕೃಗರ್ ನ್ಯಾಷನಲ್ ಪಾರ್ಕ್‌ನಲ್ಲಿ ಜೀವಿಸಿದ್ದ ಈ ಆನೆಯು ‘ಗ್ರೇಟ್ ಟಸ್ಕರ್ಸ್’ (ಬೃಹತ್ ದಂತದ ಆನೆಗಳು) ಎಂಬ ಗುಂಪಿಗೆ ಸೇರಿತ್ತು

Vishweshwar Bhat Column: ನ್ಯಾಯಾಧೀಶನ ಮಾತು ʼಶಾಸನʼವಾಗಬೇಕೇ ಹೊರತು ʼಹರಿಕಥೆʼ ಆಗಬಾರದು !

ನ್ಯಾಯಾಧೀಶನ ಮಾತು ʼಶಾಸನʼವಾಗಬೇಕೇ ಹೊರತು ʼಹರಿಕಥೆʼ ಆಗಬಾರದು !

ಸಂಸತ್ತಿರಬಹುದು, ನ್ಯಾಯಾಲಯವಿರಬಹುದು, ಸಾರ್ವಜನಿಕ ವೇದಿಕೆಯಿರಬಹುದು, ಸಂದರ್ಭದ ಔಚಿತ್ಯ ಗೊತ್ತಿಲ್ಲದೇ ಯದ್ವಾತದ್ವಾ ಮಾತಾಡುವವರಿಗೆ ‘ತುಪುತುಪು ತುಪಾಕಿ’ ಎಂದು ಗೇಲಿ ಮಾಡುತ್ತಾರೆ. ಬುದ್ಧಿವಂತಿಕೆಯಿದ್ದೂ, ಮಾತು ಬಲ್ಲಿದನಾಗಿಯೂ ಜನರಿಂದ ಗೇಲಿಗೊಳಗಾಗುವವನೇ ಈ ವಾಚಾಳಿ. ಆತನಿಗೆ ಗೊತ್ತಿರದ ಸಂಗತಿಯೇನೆಂದರೆ, ಸನ್ನಿವೇಶ ವನ್ನು ಅರ್ಥ ಮಾಡಿಕೊಳ್ಳದೇ ಮಾತಾಡುವುದು.

Vishweshwar Bhat Column: ಜೋಹಾನ್ಸ್‌ಬರ್ಗ್ ನಗರದ ಕುರಿತು

Vishweshwar Bhat Column: ಜೋಹಾನ್ಸ್‌ಬರ್ಗ್ ನಗರದ ಕುರಿತು

ಜೋಹಾನ್ಸ್‌ಬರ್ಗ್ ನಗರವನ್ನು ಆಕಾಶದಿಂದ ನೋಡಿದರೆ ಅದೊಂದು ಕಾಡಿನಂತೆ ಕಾಣುತ್ತದೆ. ಆದರೆ ಒಂದು ಕಾಲದಲ್ಲಿ ಈ ಪ್ರದೇಶವು ಕೇವಲ ಬಂಜರು ಹುಲ್ಲುಗಾವಲಾಗಿತ್ತು (ಸವನ್ನಾ). ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಇಲ್ಲಿ ಬಂಗಾರದ ಗಣಿಗಾರಿಕೆ ಆರಂಭವಾದಾಗ, ಗಣಿಗಳ ಒಳಗೆ ಆಧಾರ ನೀಡಲು ಮರದ ದಿಮ್ಮಿಗಳ ಅವಶ್ಯಕತೆ ಇತ್ತು.

Vishweshwar Bhat Column: ಒಲಿವರ್ ಟ್ಯಾಂಬೋ ನೆನಪು

Vishweshwar Bhat Column: ಒಲಿವರ್ ಟ್ಯಾಂಬೋ ನೆನಪು

ಒಲಿವರ್ ಟ್ಯಾಂಬೋ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ (Apartheid) ವಿರುದ್ಧ ನಡೆದ ಹೋರಾಟದ ಅತಿದೊಡ್ಡ ಶಕ್ತಿ. ದಕ್ಷಿಣ ಆಫ್ರಿಕಾದ ಇತಿಹಾಸದಲ್ಲಿ ನೆಲ್ಸನ್ ಮಂಡೇ ಲಾರ ಹೆಸರು ಎಷ್ಟು ಪ್ರಸಿದ್ಧವೋ, ಅಷ್ಟೇ ಪ್ರಮುಖವಾದದ್ದು ಒಲಿವರ್ ಟ್ಯಾಂಬೋ ಹೆಸರು. ಮಂಡೇಲಾ ಜೈಲಿನಲ್ಲಿದ್ದಾಗ, ಇಡೀ ಜಗತ್ತಿನ ಗಮನವನ್ನು ದಕ್ಷಿಣ ಆಫ್ರಿಕಾದತ್ತ ಸೆಳೆದು, ಹೊರಗಿನಿಂದ ಹೋರಾಟವನ್ನು ಜೀವಂತವಾಗಿರಿಸಿದವರು ಟ್ಯಾಂಬೋ.

Vishweshwar Bhat Column: ಅಲ್ಜೀರಿಯಾ ಸಿಂಡ್ರೋಮ್ ಅಂದರೇನು ?

Vishweshwar Bhat Column: ಅಲ್ಜೀರಿಯಾ ಸಿಂಡ್ರೋಮ್ ಅಂದರೇನು ?

‘ಅಲ್ಜೀರಿಯಾ ಸಿಂಡ್ರೋಮ್’ ಎಂಬುದು ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ಪದವಲ್ಲ, ಬದಲಿಗೆ ಇದು ರಾಜತಾಂತ್ರಿಕ ಮತ್ತು ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದ ಒಂದು ಪ್ರಮುಖ ವಿದ್ಯಮಾನವಾಗಿದೆ. ಒಂದು ದೇಶವು ತನ್ನ ಅತಿಯಾದ ಆತ್ಮವಿಶ್ವಾಸದಿಂದ ಯುದ್ಧಕ್ಕೆ ಇಳಿದು, ಅಲ್ಲಿನ ಸ್ಥಳೀಯ ಪ್ರತಿರೋಧದ ಮುಂದೆ ಮಂಡಿಯೂರಿ, ತನ್ನ ಸ್ವಂತ ದೇಶದ ಒಳಗೇ ರಾಜಕೀಯ ಅಸ್ಥಿರತೆಯನ್ನು ಅನುಭವಿಸಿದರೆ ಅದನ್ನು ‘ಸಿಂಡ್ರೋಮ್’ ಎಂದು ಕರೆಯಲಾಗು ತ್ತದೆ. ‌

Vishweshwar Bhat Column: ಎಐ ಯುಗದಲ್ಲಿ ಮನುಷ್ಯ

Vishweshwar Bhat Column: ಎಐ ಯುಗದಲ್ಲಿ ಮನುಷ್ಯ

ನಿತಿನ್ ಸೇಠ್ ಈ ಪುಸ್ತಕದಲ್ಲಿ ಒಂದು ಆಶಾದಾಯಕ ಸಂದೇಶ ನೀಡುತ್ತಾರೆ: ‘ಎಐ’ಗೆ ‘ಪ್ರೋಗ್ರಾ ಮಿಂಗ್’ ಇದೆ, ಆದರೆ ಮನುಷ್ಯನಿಗೆ ‘ಪರ್ಪಸ್’ (ಉದ್ದೇಶ) ಇದೆ. ಸೇಠ್ ಮನುಷ್ಯನ ಶಕ್ತಿಯನ್ನು ‘Human Edge’ ಎಂದು ಕರೆಯುತ್ತಾರೆ. ಇದು ಕೇವಲ ಮಿದುಳಿನ ಶಕ್ತಿಯಲ್ಲ, ಜತೆಗೆ ಹೃದಯ ಮತ್ತು ಆತ್ಮದ ಶಕ್ತಿ. ಈ ಪುಸ್ತಕದಲ್ಲಿ ಬರುವ ಒಂದು ಪ್ರಸಿದ್ಧ ದೃಷ್ಟಾಂತ ವೆಂದರೆ ಚೆಸ್ ಆಟಗಾರ ಗ್ಯಾರಿ ಕಾಸ್ಪರೋವ್ ಕಥೆ.

Vishweshwar Bhat Column: ಹ್ಯಾನ್ಲನ್ಸ್ ರೇಜರ್ ಮತ್ತು ಆಕಮ್ಸ್‌ ರೇಜರ್‌ ಎಂದರೇನು ?

ಹ್ಯಾನ್ಲನ್ಸ್ ರೇಜರ್ ಮತ್ತು ಆಕಮ್ಸ್‌ ರೇಜರ್‌ ಎಂದರೇನು ?

ಯಾವುದಾದರೂ ಒಂದು ಕೆಟ್ಟ ಘಟನೆ ನಡೆದಾಗ, ಅದು ದುರುದ್ದೇಶದಿಂದ ನಡೆದಿದೆ ಎಂದು ಭಾವಿಸುವ ಬದಲು, ಅದು ಅಜ್ಞಾನ ಅಥವಾ ಮೂರ್ಖತನದಿಂದ ನಡೆದಿದೆ ಎಂದು ಭಾವಿಸು ವುದು ಲೇಸು. ಇದನ್ನು ‘ರೇಜರ್’ ಎಂದು ಕರೆಯಲು ಕಾರಣವಿದೆ. ತರ್ಕಶಾಸ್ತ್ರದಲ್ಲಿ ‘ರೇಜರ್’ ಎಂದರೆ ಅನಗತ್ಯವಾದ ಊಹೆಗಳನ್ನು ಅಥವಾ ಸಂಕೀರ್ಣ ವಾದ ವಿಚಾರಗಳನ್ನು ಕತ್ತರಿಸಿ ಹಾಕಿ, ಸರಳವಾದ ಸತ್ಯವನ್ನು ಕಂಡುಕೊಳ್ಳುವ ಸಾಧನ ಎಂದರ್ಥ.

Vishweshwar Bhat Column: ಫ್ಯಾಂಟಮ್‌ʼಗೆ ತೊಂಬತ್ತು

Vishweshwar Bhat Column: ಫ್ಯಾಂಟಮ್‌ʼಗೆ ತೊಂಬತ್ತು

ಫ್ಯಾಂಟಮ್‌ನ ಕಥೆ ಆರಂಭವಾಗುವುದು 1536ರಲ್ಲಿ. ಸಮುದ್ರದೇವತೆಗಳ ನಾಡು ಎಂದು ಕರೆಯುತ್ತಿದ್ದ ಬೆಂಗಾ ತೀರದಲ್ಲಿ ಕಡಲ್ಗಳ್ಳರ ದಾಳಿಗೆ ಒಳಗಾದ ನಾವಿಕ ಕ್ರಿಸ್ಟೋಫರ್ ಸ್ಟ್ಯಾಂಡ್ ಎಂಬಾತ ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಮತ್ತು ಜಗತ್ತಿನಾದ್ಯಂತ ಕಡಲ್ಗಳ್ಳತನ ಹಾಗೂ ಕ್ರೌರ್ಯವನ್ನು ಕೊನೆಗಾಣಿಸುವುದಾಗಿ ಸಮುದ್ರದ ತಟದಲ್ಲಿ ಬಿದ್ದಿದ್ದ ಹಂತಕನ ತಲೆಬುರುಡೆಯ ಮೇಲೆ ಆಣೆ ಮಾಡುತ್ತಾನೆ.

Vishweshwar Bhat Column: ಏನಿದು ಡನ್ನಿಂಗ್-ಕ್ರೂಗರ್ ಎಫೆಕ್ಟ್ ?

Vishweshwar Bhat Column: ಏನಿದು ಡನ್ನಿಂಗ್-ಕ್ರೂಗರ್ ಎಫೆಕ್ಟ್ ?

ಹಾಗಾದರೆ ‘ಡನ್ನಿಂಗ್-ಕ್ರೂಗರ್ ಎಫೆಕ್ಟ್’ ಅಂದ್ರೆ ಏನು? ಇದು ಒಂದು ರೀತಿಯ ಮಾನಸಿಕ ಭ್ರಮೆ ಅಥವಾ ‘ಕಾಗ್ನಿಟಿವ್ ಬಯಾಸ್’ (Cognitive Bias). 1999ರಲ್ಲಿ ಕಾರ್ನೆಲ್ ವಿಶ್ವ ವಿದ್ಯಾಲಯದ ಸಾಮಾಜಿಕ ಮನಶ್ಶಾಸ್ತ್ರಜ್ಞರಾದ ಡೇವಿಡ್ ಡನ್ನಿಂಗ್ ಮತ್ತು ಜಸ್ಟಿನ್ ಕ್ರೂಗರ್ ಈ ವಿದ್ಯಮಾನ ವನ್ನು ಜಗತ್ತಿಗೆ ಪರಿಚಯಿಸಿದರು.

Vishweshwar Bhat Column: ಡಿಎಲ್‌ʼಇ 6 ನಂಬರಿನ ಒಂದು ಫಿಯಟ್‌ ಕಾರಿನ ಕತೆ !

ಡಿಎಲ್‌ʼಇ 6 ನಂಬರಿನ ಒಂದು ಫಿಯಟ್‌ ಕಾರಿನ ಕತೆ !

ಒಂದು ಕಾಲಕ್ಕೆ ದೇಶದ ಪ್ರಧಾನಿ ವಾಸಿಸಿದ, ಓಡಾಡಿದ ಆ ಬಂಗಲೆಯ ಆವರಣದಲ್ಲಿ, ಕಾಲದ ಧೂಳನ್ನು ಕೊಡವಿಕೊಂಡು ನಿಂತಿರುವ ಆ ಗೋದಿ ಬಣ್ಣದ ಫಿಯೆಟ್ ಕಾರನ್ನು ನೋಡಿದಾಗ, ತೀರಿಸಲಾಗದ ಪ್ರೀತಿಯ ಸಾಲವೊಂದನ್ನು ಎದೆಯಲ್ಲಿ ಇಟ್ಟುಕೊಂಡು ಮೌನವಾಗಿ ಧ್ಯಾನಕ್ಕೆ ಕುಳಿತಿರುವ ಒಬ್ಬ ಹಿರಿಯ ಜೀವದಂತೆ ಭಾಸವಾಯಿತು.

Vishweshwar Bhat Column: ಡೆಡ್‌ ಹಾರ್ಸ್‌ ಥಿಯರಿ ಅಂದರೇನು ?

Vishweshwar Bhat Column: ಡೆಡ್‌ ಹಾರ್ಸ್‌ ಥಿಯರಿ ಅಂದರೇನು ?

‘ನೀವು ಏರಿರುವ ಕುದುರೆ ಸತ್ತು ಹೋಗಿದೆ ಎಂದು ನಿಮಗೆ ತಿಳಿದಾಗ, ಅದರಿಂದ ಇಳಿಯುವುದೇ ಅತ್ಯಂತ ಬುದ್ಧಿವಂತಿಕೆಯ ಕೆಲಸ’ ಎಂಬ ಸರಳ ಸತ್ಯದ ಸುತ್ತ ಈ ಸಿದ್ಧಾಂತ ರೂಪಿತವಾಗಿದೆ. ಆದರೆ, ದುರದೃಷ್ಟವಶಾತ್ ಮಾನವ ಸಹಜ ಗುಣ ಮತ್ತು ವ್ಯವಸ್ಥೆಯ ಜಡತ್ವದಿಂದಾಗಿ ನಾವು ಸತ್ತ ಕುದುರೆಯನ್ನು ಜೀವಂತಗೊಳಿಸಲು ಅಥವಾ ಅದು ಇನ್ನೂ ಓಡುತ್ತಿದೆ ಎಂದು ತೋರಿಸಿ ಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತೇವೆ ಎಂಬುದನ್ನು ಈ ಸಿದ್ಧಾಂತ ವ್ಯಂಗ್ಯವಾಗಿ ವಿವರಿಸುತ್ತದೆ.

Vishweshwar Bhat Column: ಜಗತ್ತಿನ ಅತಿ ಕಡಿಮೆ ಅವಧಿ ಯುದ್ಧ

Vishweshwar Bhat Column: ಜಗತ್ತಿನ ಅತಿ ಕಡಿಮೆ ಅವಧಿ ಯುದ್ಧ

1896ರ ಆಗಸ್ಟ್ 27ರಂದು ನಡೆದ ಆಂಗ್ಲೋ-ಜಂಜಿಬಾರ್ ಸಮರ ವಿಶ್ವ ಇತಿಹಾಸದ ಅತ್ಯಂತ ಕಡಿಮೆ ಅವಧಿಯ ಯುದ್ಧ ಎಂದು ದಾಖಲಾಗಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಆಫ್ರಿಕಾ ಖಂಡವು ಯುರೋಪಿಯನ್ ರಾಷ್ಟ್ರಗಳ ವಸಾಹತುಶಾಹಿ ಆಸಕ್ತಿಗೆ ಕೇಂದ್ರಬಿಂದು ವಾಗಿತ್ತು.

Vishweshwar Bhat Column: ಹಠಾತ್‌ ನಿಮ್ಮ ಉಚ್ಚಾರ ಬದಲಾದರೆ ?

Vishweshwar Bhat Column: ಹಠಾತ್‌ ನಿಮ್ಮ ಉಚ್ಚಾರ ಬದಲಾದರೆ ?

ಕೇಳುಗರಿಗೆ ಆ ವ್ಯಕ್ತಿಯು ಯಾವುದೋ ವಿದೇಶಿ ಮೂಲದವನೆಂದೋ ಅಥವಾ ಹೊಸದಾಗಿ ಆ ಭಾಷೆಯನ್ನು ಕಲಿತವನೆಂದೋ ಭಾಸವಾಗುತ್ತದೆ. ಉದಾಹರಣೆಗೆ, ಅಪ್ಪಟ ಕನ್ನಡ ಮಾತನಾ ಡುವ ವ್ಯಕ್ತಿಯೊಬ್ಬ ಮಿದುಳಿನ ಪೆಟ್ಟಿನ ನಂತರ ಅಮೆರಿಕನ್ ಇಂಗ್ಲಿಷ್ ಶೈಲಿಯ ಅಥವಾ ಚೈನೀಸ್ ಶೈಲಿಯ ಕನ್ನಡ ಮಾತನಾಡಲು ಶುರು ಮಾಡಬಹುದು.

Vishweshwar Bhat Column: ಫ್ಯಾಂಟಮ್ ವೈಬ್ರೇಶನ್ ಸಿಂಡ್ರೋಮ್

Vishweshwar Bhat Column: ಫ್ಯಾಂಟಮ್ ವೈಬ್ರೇಶನ್ ಸಿಂಡ್ರೋಮ್

ಜೇಬಿನಲ್ಲಿ ಫೋನ್ ಇಲ್ಲದಿದ್ದರೂ ಅಥವಾ ಫೋನ್ ಸೈಲೆಂಟ್ ಆಗಿದ್ದರೂ ಅದು ‘ವೈಬ್ರೇಟ್’ ಆಗುತ್ತಿರಬಹುದು ಎಂಬ ಭ್ರಮೆ ನಮಗಾಗುತ್ತದೆ. ವೈದ್ಯಕೀಯ ಮತ್ತು ಮಾನಸಿಕ ಜಗತ್ತಿನಲ್ಲಿ ಇದನ್ನು ‘ಫ್ಯಾಂಟಮ್ ವೈಬ್ರೇಶನ್ ಸಿಂಡ್ರೋಮ್’ ಅಥವಾ ‘ರಿಂಗ್ಟೋಕ್ಸಿಯಾ’ (Ringtoxia) ಎಂದು ಕರೆಯಲಾಗುತ್ತದೆ.

Vishweshwar Bhat Column: ಸಣ್ಣ ದೇಹ, ಅಗಾಧ ವೇಗ: ವಿಜ್ಞಾನವೇ ಬೆರಗಾಗುವ ಹಮ್ಮಿಂಗ್‌ ಬರ್ಡ್‌ ಲೋಕ

ವಿಜ್ಞಾನವೇ ಬೆರಗಾಗುವ ಹಮ್ಮಿಂಗ್‌ ಬರ್ಡ್‌ ಲೋಕ

ಹಮ್ಮಿಂಗ್ ಬರ್ಡ್‌ಗಳು ಸಾಮಾನ್ಯವಾಗಿ ಕೇವಲ ಎಂಟರಿಂದ ಇಪ್ಪತ್ತು ಗ್ರಾಮ್ ತೂಕ ವಿರುತ್ತವೆ. ಅಂದರೆ, ನಮ್ಮ ಕೈಯಲ್ಲಿರುವ ಹತ್ತು ರುಪಾಯಿ ನಾಣ್ಯಕ್ಕಿಂತಲೂ ಇವು ಹಗುರ! ಆದರೆ, ಈ ಪುಟ್ಟ ದೇಹದೊಳಗೆ ಒಬ್ಬ ದೀರ್ಘಾವಧಿ ಓಟಗಾರನಿಗೆ ಇರಬೇಕಾದ ಸರ್ವ ಸಾಮರ್ಥ್ಯವೂ ಅಡಗಿದೆ. ಇವುಗಳ ಹೃದಯ ಬಡಿತ ಮತ್ತು ಶಕ್ತಿಯ ವ್ಯಯದ ಪ್ರಮಾಣವು ಭೂಮಿಯ ಮೇಲಿನ ಯಾವುದೇ ಪ್ರಾಣಿಗಿಂತಲೂ ಹೆಚ್ಚು.

‌Vishweshwar Bhat Column: ಗೋರಖಪುರದ ಗೀತಾ ಪ್ರೆಸ್

‌Vishweshwar Bhat Column: ಗೋರಖಪುರದ ಗೀತಾ ಪ್ರೆಸ್

ಶ್ರೀಮದ್ ಭಗವದ್ಗೀತೆ, ರಾಮಾಯಣ, ಉಪನಿಷತ್ತುಗಳು ಮತ್ತು ಪುರಾಣಗಳಂಥ ಪವಿತ್ರ ಗ್ರಂಥಗಳನ್ನು ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಗೀತಾ ಪ್ರೆಸ್ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಗೀತಾ ಪ್ರೆಸ್ ಅನ್ನು 1923ರಲ್ಲಿ ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ಹಿಂದೆ ಒಂದು ಆಸಕ್ತಿದಾಯಕ ಕಥೆಯಿದೆ.

Vishweshwar Bhat Column: ಎಂ.ಜಿ.ದೇವಸಹಾಯಂ ಗೊತ್ತಾ ?

Vishweshwar Bhat Column: ಎಂ.ಜಿ.ದೇವಸಹಾಯಂ ಗೊತ್ತಾ ?

ಸರಕಾರದ ಕಠಿಣ ನಿಯಮಗಳ ನಡುವೆಯೂ ದೇವಸಹಾಯಂ, ಜೆಪಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ಕೇವಲ ಒಬ್ಬ ಅಧಿಕಾರಿಯಾಗಿರದೇ, ಜೆಪಿಗೆ ಬೌದ್ಧಿಕ ಸಾಂಗತ್ಯವನ್ನೂ ನೀಡಿದರು. ಆ ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಚೇಲಾಗಳ ಹಾಗೆ ವರ್ತಿಸು ತ್ತಿದ್ದರು.

Vishweshwar Bhat Column: ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ !

ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ !

ತನ್ನದೇ ಸಂಸ್ಥೆಯ ಉದ್ಯೋಗಿಯೊಬ್ಬನ ಸುದ್ದಿಯನ್ನು ಅಷ್ಟು ನಿರ್ದಯವಾಗಿ, ನಿಷ್ಕರುಣೆಯಿಂದ ಆ ಪತ್ರಿಕೆ ಪ್ರಕಟಿಸಿತ್ತು. ಅಷ್ಟಕ್ಕೂ ಒಬ್ಬ ಪತ್ರಕರ್ತನ ಸಾವಿಗೆ ಬೆಲೆಯೇ ಇಲ್ಲವಾ? ಪತ್ರಿಕೆಯ ಸುದ್ದಿ ಮನೆ ಯಲ್ಲಿ ಒಂದು ಅಲಿಖಿತ ನಿಯಮವಿದೆ -‘ಪತ್ರಕರ್ತನ ಸಾವು ಆತ ಕೆಲಸ ಮಾಡಿದ ಪತ್ರಿಕೆಗೆ ಸುದ್ದಿಯಲ್ಲ’ ಅಥವಾ ಹೆಚ್ಚೆಂದರೆ, ‘ಪತ್ರಕರ್ತನ ಸಾವು ಸಿಂಗಲ್ ಕಾಲಂ ಸುದ್ದಿ’.

Vishweshwar Bhat Column: ವಿದೇಶಾಂಗ ಇಲಾಖೆಯಲ್ಲಿ ಹಿಂದಿ

Vishweshwar Bhat Column: ವಿದೇಶಾಂಗ ಇಲಾಖೆಯಲ್ಲಿ ಹಿಂದಿ

ಡಿಸೆಂಬರ್ 1955ರಲ್ಲಿ, ಬಚ್ಚನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ಅಧಿಕಾರಿಯಾಗಿ ಅಧಿಕೃತವಾಗಿ ಸೇರಿಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಆಡಳಿತ ದಲ್ಲಿ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಿಂದಿ ಭಾಷೆಯನ್ನು ಸಶಕ್ತವಾಗಿ ಬಳಸುವ ಅವಶ್ಯಕತೆಯಿತ್ತು. ಅಲ್ಲಿಯವರೆಗೆ ವಿದೇಶಾಂಗ ಇಲಾಖೆಯ ಎಲ್ಲ ಕೆಲಸಗಳು ಕೇವಲ ಇಂಗ್ಲಿಷ್‌ನಲ್ಲಿ ನಡೆಯುತ್ತಿದ್ದವು. ಈ ಇಲಾಖೆಯಲ್ಲಿ ಹಿಂದಿ ಭಾಷೆಯನ್ನು ಪರಿಚಯಿಸುವ ಮತ್ತು ಅದನ್ನು ಜಾರಿಗೆ ತರುವ ಬೃಹತ್ ಜವಾಬ್ದಾರಿ ಬಚ್ಚನ್ ಅವರ ಹೆಗಲ ಮೇಲೆ ಬಿದ್ದಿತು.

Vishweshwar Bhat Column: ಮಾನವೀಯತೆಯ ಕೋಟು

Vishweshwar Bhat Column: ಮಾನವೀಯತೆಯ ಕೋಟು

ಸ್ಥಳೀಯ ಅಂಗಡಿಗಳ ಮುಂದೆ ಅಥವಾ ಕೆಫೆಗಳ ಹೊರಗೆ ಸಾಲಾಗಿ ಕೋಟ್ ಸ್ಟ್ಯಾಂಡ್ʼಗಳನ್ನು ಇರಿಸಲಾಗಿರುತ್ತದೆ. ಅವುಗಳ ಮೇಲೆ ‘ಚಳಿಯಾಗುತ್ತಿದ್ದರೆ ಒಂದನ್ನು ಪಡೆದುಕೊಳ್ಳಿ’ (Take One If Cold ) ಎಂಬ ಫಲಕವಿರುತ್ತದೆ. ಯಾವುದೇ ಅರ್ಜಿಗಳಿಲ್ಲದೇ, ಯಾರ ಅಪ್ಪಣೆಯೂ ಇಲ್ಲದೇ, ಅಗತ್ಯವಿರುವವರು ತಮಗೆ ಬೇಕಾದ ಕೋಟನ್ನು ಆರಿಸಿಕೊಳ್ಳುವ ಈ ಪರಿಕಲ್ಪನೆಯು ‘ಮಾನವೀಯತೆಗೆ ಯಾವುದೇ ಗಡಿಯಿಲ್ಲ’ ಎಂಬುದನ್ನು ಸಾಬೀತುಪಡಿಸುತ್ತಿದೆ. ಈ ಅಭಿಯಾನವು ಮೊದಲು ಬೆಲ್ಜಿಯಂನ ಘೆಂಟ್ ಮತ್ತು ಬ್ರಸೆಲ್ಸ್ ನಗರಗಳಲ್ಲಿ ಆರಂಭವಾಯಿತು. ‌

Vishweshwar Bhat Column: ವಾಷಿಂಗ್ಟನ್‌ ಪೋಸ್ಟ್‌ ಸಂಕಟ

Vishweshwar Bhat Column: ವಾಷಿಂಗ್ಟನ್‌ ಪೋಸ್ಟ್‌ ಸಂಕಟ

2‌024ರಲ್ಲಿ ಪತ್ರಿಕೆಯು ಸುಮಾರು 100 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆಯಂತೆ. ಇತ್ತೀಚೆಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ, ಪತ್ರಿಕೆಯು ಯಾವುದೇ ಅಭ್ಯರ್ಥಿಗೆ (ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ನೀಡುವ ನಿರ್ಧಾರವನ್ನು ತಡೆಹಿಡಿಯಲಾಗಿತ್ತು) ಅಧಿಕೃತ ಬೆಂಬಲ ಸೂಚಿಸದಿರಲು ಬೆಜೋಸ್ ನಿರ್ಧರಿಸಿದ್ದರು. ಈ ನಿರ್ಧಾರದಿಂದ ಕೋಪಗೊಂಡ ಸುಮಾರು 2.5 ಲಕ್ಷ ಡಿಜಿಟಲ್ ಚಂದಾದಾರರು ತಮ್ಮ ಚಂದಾದಾರಿಕೆಯನ್ನು ರದ್ದುಗೊಳಿಸಿದರು. ಇದು ಪತ್ರಿಕೆಗೆ ದೊಡ್ಡ ಆರ್ಥಿಕ ಹೊಡೆತ ನೀಡಿತು.

Vishweshwar Bhat Column: ಸುದೀರ್ಘ ವಾರಸುದಾರ !

Vishweshwar Bhat Column: ಸುದೀರ್ಘ ವಾರಸುದಾರ !

ಡೇವಿಡ್ ಕ್ಯಾಮರೂನ್ ಪ್ರಧಾನಿಯಾದಾಗ ಲ್ಯಾರಿಯನ್ನು ಕರೆತಂದರು. ಇವರ ಅವಧಿಯಲ್ಲಿ ಮೊದಲ ಬಾರಿಗೆ ಲ್ಯಾರಿ ವಿಶ್ವದ ಗಮನ ಸೆಳೆದ. ನಂತರ ಬಂದ ಐದು ಪ್ರಧಾನಿಗಳನ್ನು ಸ್ವಾಗತಿಸಿದ್ದು ಇದೇ ಬೆಕ್ಕು. ಭಾರತೀಯ ಮೂಲದ ಸುನಕ್ ಅವಧಿಯಲ್ಲೂ ಲ್ಯಾರಿ ತನ್ನ ಪ್ರಾಬಲ್ಯ ಮೆರೆದ. ಥೆರೆಸಾ ಮೇ ಕಾಲದಲ್ಲಿ ಲ್ಯಾರಿ ಮಾಧ್ಯಮಗಳ ಫೇವರಿಟ್ ಆಯಿತು.

Vishweshwar Bhat Column: ಆಗಾಗ ಮಾತಿನಲ್ಲಿ ಇಣುಕುವ ರೆಡ್‌ ಹೆರಿಂಗ್‌ ಮತ್ತು ಸ್ಟ್ರಾಮ್ಯಾನ್‌ ಫ್ಯಾಲಸಿ !

ಮಾತಿನಲ್ಲಿ ಇಣುಕುವ ರೆಡ್‌ ಹೆರಿಂಗ್‌ ಮತ್ತು ಸ್ಟ್ರಾಮ್ಯಾನ್‌ ಫ್ಯಾಲಸಿ !

ಪತ್ತೇದಾರಿ ಕಾದಂಬರಿಗಳು ಮತ್ತು ಸಸ್ಪೆ ಸಿನಿಮಾಗಳಲ್ಲಿ ‘ರೆಡ್ ಹೆರಿಂಗ್’ ಅತ್ಯಗತ್ಯ. ಓದುಗ ಅಥವಾ ಪ್ರೇಕ್ಷಕ ಸುಲಭವಾಗಿ ಕೊಲೆಗಾರ ಯಾರು ಎಂದು ಕಂಡುಹಿಡಿಯಬಾರದು ಎಂಬ ಉದ್ದೇಶದಿಂದ ಲೇಖಕರು ಇದನ್ನು ಬಳಸುತ್ತಾರೆ. ಕಥೆಯಲ್ಲಿ ಒಬ್ಬ ವ್ಯಕ್ತಿಯು ಸಂಶಯಾಸ್ಪದವಾಗಿ ನಡೆದುಕೊಳ್ಳು ವಂತೆ ತೋರಿಸಲಾಗುತ್ತದೆ.

Vishweshwar Bhat Column: ಹವಾನ ಸಿಂಡ್ರೋಮ್‌ ಎಂದರೇನು ?

Vishweshwar Bhat Column: ಹವಾನ ಸಿಂಡ್ರೋಮ್‌ ಎಂದರೇನು ?

ನೀವು ‘ಹವಾನಾ ಸಿಂಡ್ರೋಮ್’ ಬಗ್ಗೆ ಕೇಳಿದ್ದೀರಾ? ಇದು ಇಪ್ಪತ್ತೊಂದನೇ ಶತಮಾನದ ಅತ್ಯಂತ ನಿಗೂಢ ರಾಜತಾಂತ್ರಿಕ ಮತ್ತು ವೈದ್ಯಕೀಯ ರಹಸ್ಯಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ಆರೋಗ್ಯ ಸಮಸ್ಯೆಯಾಗಿ ಉಳಿಯದೇ, ಅಮೆರಿಕ, ರಷ್ಯಾ ಮತ್ತು ಚೀನಾದಂಥ ಬಲಿಷ್ಠ ರಾಷ್ಟ್ರಗಳ ನಡುವಿನ ಶೀತಲ ಸಮರದ ಹೊಸ ಆಯಾಮವಾಗಿ ಮಾರ್ಪಟ್ಟಿದೆ.

Loading...