ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ವಿಶ್ವೇಶ್ವರ ಭಟ್‌

Editor in Chief, Author, Columnist

[email protected]

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಡಾ.ಕೆ.ಪಿ.ಮಾಥುರ್‌ ನೆನಪು

Vishweshwar Bhat Column: ಡಾ.ಕೆ.ಪಿ.ಮಾಥುರ್‌ ನೆನಪು

ಡಾ.ಮಾಥುರ್ ಅವರು ದೆಹಲಿಯ ಪ್ರತಿಷ್ಠಿತ ಸಫ್ದರ್‌ʼಜಂಗ್ ಆಸ್ಪತ್ರೆಯಲ್ಲಿ ಹಿರಿಯ ಫಿಸಿಷಿಯನ್ ಹಾಗೂ ನಂತರದ ದಿನಗಳಲ್ಲಿ ಮೆಡಿಕಲ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಶ್ರೇಷ್ಠ ವೈದ್ಯಕೀಯ ಜ್ಞಾನ, ಕಟ್ಟುನಿಟ್ಟಿನ ವೃತ್ತಿಪರತೆ, ಕರ್ತವ್ಯನಿಷ್ಠೆ ಮತ್ತು ಮೃದು ಸ್ವಭಾವ ವನ್ನು ಗುರುತಿಸಿ ಅವರನ್ನು ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕೃತ ವೈದ್ಯರನ್ನಾಗಿ ನೇಮಿಸಲಾಯಿತು.

Vishweshwar Bhat Column: ಇದು ದೇಶವಾಸಿಗಳ ಶ್ರಮದಾನ

Vishweshwar Bhat Column: ಇದು ದೇಶವಾಸಿಗಳ ಶ್ರಮದಾನ

ರವಾಂಡದ ಕಾನೂನಿನ ಪ್ರಕಾರ, 18 ರಿಂದ 65 ವರ್ಷದೊಳಗಿನ ದೈಹಿಕವಾಗಿ ಸಮರ್ಥರಾದ ಪ್ರತಿ ಯೊಬ್ಬ ನಾಗರಿಕನೂ ಉಮುಗಂದದಲ್ಲಿ ಭಾಗವಹಿಸುವುದು ಕಡ್ಡಾಯ. ದೇಶದ ಯಾವುದೇ ಪ್ರಮುಖ ವ್ಯಕ್ತಿಗೂ ಇದರಲ್ಲಿ ವಿನಾಯಿತಿ ಇರುವುದಿಲ್ಲ. ದೇಶದ ಅಧ್ಯಕ್ಷರು, ಮಂತ್ರಿಗಳು, ವಿದೇಶಿ ರಾಯಭಾರಿಗಳು, ಉನ್ನತ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ಕೃಷಿಕನವರೆಗೂ ಎಲ್ಲರೂ ಸಾಮಾನ್ಯರಂತೆ ಕೈಯಲ್ಲಿ ಉಪಕರಣಗಳನ್ನು ಹಿಡಿದು ಕೆಲಸ ಮಾಡುತ್ತಾರೆ.

Vishweshwar Bhat Column: ಇದು ಶ್ವಾನ ಪ್ರೇಮಿಗಳ ರಾಜಧಾನಿ

Vishweshwar Bhat Column: ಇದು ಶ್ವಾನ ಪ್ರೇಮಿಗಳ ರಾಜಧಾನಿ

ಟೆಲ್ ಅವಿವ್ ನಗರವು ಇಸ್ರೇಲ್‌ನ ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲ, ಜಾಗತಿಕ ಮಟ್ಟ ದಲ್ಲಿ ಶ್ವಾನ ಪ್ರೇಮಿಗಳ ರಾಜಧಾನಿ ಎಂದೂ ಖ್ಯಾತಿ ಪಡೆದಿದೆ. ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿರುವ ಈ ನಗರ ನಾಯಿಗಳು ಮತ್ತು ಅವುಗಳ ಮಾಲೀಕರಿಗೆ ವಿಶ್ವದ ಅತ್ಯಂತ ಅನುಕೂಲಕರ ಮತ್ತು ಹಿತಕರ ವಾತಾವರಣವನ್ನು ಒದಗಿಸುತ್ತದೆ. ನಗರದಾದ್ಯಂತ ಹತ್ತಾರು ಸಾವಿರ ನೋಂದಾಯಿತ ನಾಯಿಗಳಿದ್ದು, ಅವುಗಳಿಗೆಂದೇ ಮೀಸಲಾದ ಡಜನ್‌ಗಟ್ಟಲೆ ಶ್ವಾನ ಉದ್ಯಾನ ವನಗಳು, ನಾಯಿ-ಸ್ನೇಹಿ ಕಡಲತೀರಗಳು ಮತ್ತು ವ್ಯಾಪಾರಿ ಮಳಿಗೆಗಳಿವೆ.

‌Vishweshwar Bhat Column: ಪದ ಪಯಣ: ಒಂದು ಸಾಮಾನ್ಯ ಮಾತು ಬಳಕೆಗೆ ಬಂದ ಕುತೂಹಲ ಕಥೆ

ಪದ ಪಯಣ: ಒಂದು ಸಾಮಾನ್ಯ ಮಾತು ಬಳಕೆಗೆ ಬಂದ ಕುತೂಹಲ ಕಥೆ

ಸಾಮಾನ್ಯವಾಗಿ ವೈದ್ಯಕೀಯ ಅಥವಾ ಸಾಂಪ್ರದಾಯಿಕ ಭಾಷೆಯಲ್ಲಿ ‘ಭ್ರಮೆ’ (Delusion) ಎನ್ನುವುದು ನಕಾರಾತ್ಮಕ ಅಥವಾ ಮಾನಸಿಕ ಸಮಸ್ಯೆಗೆ ಸಂಬಂಧಿಸಿದ ಪದ. ಆದರೆ, ಇಂಟರ್ನೆಟ್ ಜಗತ್ತಿನಲ್ಲಿ ‘ಡೆಲೂಲು’ ಪದವನ್ನು ಸಂಪೂರ್ಣವಾಗಿ ನಕಾರಾತ್ಮಕವಾಗಿ ಬಳಸಲಾಗುವುದಿಲ್ಲ. ಬದಲಿಗೆ, ಇದನ್ನು ತಮಾಷೆಯಾಗಿ, ಸ್ವಯಂ-ಹಾಸ್ಯವಾಗಿ (self- deprecating humor) ಅಥವಾ ಕೆಲವೊಮ್ಮೆ ತೀವ್ರವಾದ ಆತ್ಮವಿಶ್ವಾಸವನ್ನು (Overconfidence/ Manifestation) ಸೂಚಿಸಲು ಬಳಸಲಾಗುತ್ತದೆ

Vishweshwar Bhat Column: ಅಮೆರಿಕ ಅಧ್ಯಕ್ಷರ ಹೆಸರಿನಲ್ಲಿ ನಗರ

Vishweshwar Bhat Column: ಅಮೆರಿಕ ಅಧ್ಯಕ್ಷರ ಹೆಸರಿನಲ್ಲಿ ನಗರ

ಲೈಬೀರಿಯಾ ವಸಾಹತಿನ ಸ್ಥಾಪನೆಗೆ ಮತ್ತು ಕಪ್ಪು ವರ್ಣೀಯರಿಗೆ ಮರುಭೂಮಿ ನೀಡುವ ಯೋಜನೆ ಯಲ್ಲಿ ಜೇಮ್ಸ್ ಮೊನ್ರೋ ವಹಿಸಿದ ಪ್ರಮುಖ ಪಾತ್ರವನ್ನು ಗೌರವಿಸಲು, ನಗರಕ್ಕೆ ‘ಮೊನ್ರೋವಿಯಾ’ ಎಂದು ಮರುನಾಮಕರಣ ಮಾಡಲಾಯಿತು. ಮೊನ್ರೋ ಅವರ ರಾಜಕೀಯ ಹಾಗೂ ಆರ್ಥಿಕ ಬೆಂಬಲ ವಿಲ್ಲದಿದ್ದರೆ ಈ ಯೋಜನೆಯು ಸಾಕಾರಗೊಳ್ಳುತ್ತಿರಲಿಲ್ಲ ಎಂಬುದು ಅಂದಿನ ಅಮೆರಿಕನ್- ಲೈಬೀರಿಯನ್ನರ ಭಾವನೆಯಾಗಿತ್ತು.

Vishweshwar Bhat Column: ಅವಳನ್ನು ಮರೆಯಲಿ ಹ್ಯಾಂಗ?

Vishweshwar Bhat Column: ಅವಳನ್ನು ಮರೆಯಲಿ ಹ್ಯಾಂಗ?

ನವಜಾತ ಮಗುವನ್ನು ಎತ್ತಿಕೊಂಡು ನಾನು ಮೊದಲ ಬಾರಿಗೆ ಮನೆಗೆ ಕಾಲಿಟ್ಟಾಗ, ನಮ್ಮ ಹೊಸ ಮಗುವಿನ ಆರೈಕೆದಾತೆ ಚಂಪಾದೇವಿ ಪಾಸ್ವಾನ್ ನಕ್ಕಿದ್ದಳು. ‘ಈ ದೀದಿಗೆ ಹೆಚ್ಚೇನೂ ತಿಳಿದಿಲ್ಲ, ನಾನೇ ಎಲ್ಲವನ್ನೂ ಕಲಿಸಬೇಕಾಗುತ್ತದೆ’ ಎಂದು ಅವಳು ಮನಸ್ಸಿನಲ್ಲೇ ಅಂದುಕೊಂಡಿರಬೇಕು. ಅವಳ ಆಲೋಚನೆ ಸರಿಯಾಗಿತ್ತು. ನವಜಾತ ಶಿಶುವಿನ ಆರೈಕೆ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ನಂತರದ 18 ವರ್ಷಗಳಲ್ಲಿ ಅವಳು ನನ್ನ ಬೆಂಬಲವಾಗಿ ನಿಂತು, ನನ್ನ ಮಕ್ಕಳನ್ನು ಬೆಳೆಸಲು ನೆರವಾದಳು. ಕಳೆದ ವರ್ಷ ಮನಸಿಲ್ಲದ ಮನಸ್ಸಿನಿಂದ ಅವಳನ್ನು ಕಳುಹಿಸಿಕೊಡಲು ನಾನು ಒಪ್ಪಿಕೊಂಡಿದ್ದೆ

Vishweshwar Bhat Column: ಇದು 'ನಾನು ಬಾಲ್ಡ್' ಎಂದು ಬೋಲ್ಡ್ ಆಗಿ ಹೇಳುವವರ ಕಾಲ!

ಇದು 'ನಾನು ಬಾಲ್ಡ್' ಎಂದು ಬೋಲ್ಡ್ ಆಗಿ ಹೇಳುವವರ ಕಾಲ!

ಜಗತ್ತಿನ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಜಾಗತಿಕ ಉದ್ಯಮವನ್ನು ಮುನ್ನಡೆಸು ತ್ತಿರುವ ಈ ಆರು ನಾಯಕರ ಕೊಡುಗೆಗಳನ್ನು ಶ್ಲಾಘಿಸುತ್ತಾ, 'ಬೋಳು' ಎಂಬುದು ಇಲ್ಲಿ ಕೇವಲ ಶಾರೀರಿಕ ಲಕ್ಷಣವಲ್ಲ, ಬದಲಿಗೆ ಅದು ಅನುಭವ, ದಾರ್ಶನಿಕತೆ, ನಾವೀನ್ಯ ಮತ್ತು ಸಾಂಪ್ರದಾಯಿಕ ಚೌಕಟ್ಟು ಗಳನ್ನು ಮುರಿಯುವ ಧೈರ್ಯದ ಸಂಕೇತವಾಗಿ ಚಿತ್ರಿಸಲಾಗಿದೆ.

Vishweshwar Bhat Column: ಇಲ್ಲಿ ರನ್ ವೇಯನ್ನು ಗುಡಿಸಬೇಕು!

ಇಲ್ಲಿ ರನ್ ವೇಯನ್ನು ಗುಡಿಸಬೇಕು!

ಪ್ರತಿಯೊಂದು ವಿಮಾನದ ಆಗಮನಕ್ಕೂ ಕೆಲವೇ ನಿಮಿಷಗಳ ಮುಂಚಿತವಾಗಿ ನೆಲದ ಸಿಬ್ಬಂದಿ (Ground Crew) ರನ್‌ವೇ ಮೇಲಿರುವ ಮರಳನ್ನು ಸಂಪೂರ್ಣವಾಗಿ ಗುಡಿಸಿ ತೆರವುಗೊಳಿಸ ಬೇಕಾಗುತ್ತದೆ! ಸಹಾರಾ ಮರುಭೂಮಿಯ ನಿರಂತರ ಗಾಳಿಗೆ ಕೊಚ್ಚಿಕೊಂಡು ಬರುವ ಮರಳು, ರನ್‌ವೇ ಮೇಲೆ ರಾಶಿಯಾಗುವುದರಿಂದ, ಈ ವಿಮಾನ ನಿಲ್ದಾಣದಲ್ಲಿ 'ಮರಳು ತೆರವುಗೊಳಿಸುವುದು' ಕೇವಲ ಒಂದು ಸ್ವಚ್ಛತಾ ಕಾರ್ಯವಲ್ಲ, ಬದಲಾಗಿ ನೂರಾರು ಪ್ರಯಾಣಿಕರ ಜೀವ ಉಳಿಸುವ ಅತ್ಯಂತ ಜವಾಬ್ದಾರಿ ಯುತ ಹಾಗೂ ಕಡ್ಡಾಯ ಸುರಕ್ಷತಾ ಪ್ರಕ್ರಿಯೆಯಾಗಿದೆ.

Vishweshwar Bhat Column: ವಿಮಾನದಲ್ಲಿ ಮಗುವಿನ ರಾದ್ಧಾಂತ

Vishweshwar Bhat Column: ವಿಮಾನದಲ್ಲಿ ಮಗುವಿನ ರಾದ್ಧಾಂತ

ವಿಮಾನವು ಟೇಕಾಫ್ ಆಗಲು ಸಿದ್ಧವಾಗುತ್ತಿದ್ದ ಸಮಯದಲ್ಲಿ ಮಗುವನ್ನು ಸೀಟ್‌ನಲ್ಲಿ ಕುಳ್ಳಿರಿಸಿ, ಸುರಕ್ಷತಾ ಬೆಲ್ಟ್ ಹಾಕಲು ವಿಮಾನದ ಸಿಬ್ಬಂದಿ ಹಾಗೂ ಮಗುವಿನ ಪೋಷಕರು ಎಷ್ಟು ಪ್ರಯತ್ನಿಸಿ ದರೂ ಸಾಧ್ಯವಾಗಲಿಲ್ಲ. ವಿಮಾನಯಾನ ನಿಯಮಗಳ ಪ್ರಕಾರ, ವಿಮಾನದಲ್ಲಿ ಪ್ರತಿಯೊಬ್ಬ ಪ್ರಯಾಣಿಕನೂ (ಸಣ್ಣ ಮಕ್ಕಳೂ ಸೇರಿದಂತೆ) ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ‌

Vishweshwar Bhat Column: ಬಿನ್‌ ಅಂದ್ರೆ ಏನರ್ಥ ?

Vishweshwar Bhat Column: ಬಿನ್‌ ಅಂದ್ರೆ ಏನರ್ಥ ?

ಕನ್ನಡದಲ್ಲಿ ವ್ಯಕ್ತಿಯ ಹೆಸರುಗಳನ್ನು ಬರೆಯುವಾಗ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶ ಗಳಲ್ಲಿ, ಸರಕಾರಿ ದಾಖಲೆಗಳಲ್ಲಿ ಅಥವಾ ಹಳೆಯ ಕಂದಾಯ ಪತ್ರಗಳಲ್ಲಿ ‘ಬಿನ್’ ( Bin ) ಎಂಬ ಪದವನ್ನು ಬಹುವಾಗಿ ಬಳಸಲಾಗುತ್ತದೆ. ‘ಬಿನ್’ ಎಂಬುದು ಮೂಲತಃ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯ ಪದ. ಅರೇಬಿಕ್ ಭಾಷೆಯಲ್ಲಿ ‘ಇಬ್ನ್’ ( Ibn ) ಅಥವಾ ’ಬಿನ್’ ಎಂದರೆ ‘ಇನ್ನೊಬ್ಬರ ಮಗ ಅಥವಾ ಮಗಳು’ ಎಂದರ್ಥ.

Vishweshwar Bhat Column: 'ಲೇಟ್' ಪದದ ಕುರಿತು

Vishweshwar Bhat Column: 'ಲೇಟ್' ಪದದ ಕುರಿತು

ಸತ್ತವರ ಹೆಸರಿನ ಮುಂದೆ 'Late' (ಲೇಟ್) ಎಂಬ ಪದವನ್ನು ಬಳಸುವುದು ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಬಳಸುವುದು ಸಾಮಾನ್ಯ. 'Late' ಎಂದರೆ ಕನ್ನಡದಲ್ಲಿ 'ದಿವಂಗತ' ಅಥವಾ 'ಮೃತ' ಎಂದರ್ಥ. ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸಿದ್ದಾರೆ ಎಂಬುದನ್ನು ಗೌರವಪೂರ್ವಕವಾಗಿ ಮತ್ತು ಸ್ಪಷ್ಟವಾಗಿ ಸೂಚಿಸಲು ಅವರ ಹೆಸರಿನ ಮುಂದೆ ಈ ಪದವನ್ನು ಸೇರಿಸಲಾಗುತ್ತದೆ. ಉದಾಹರಣೆಗೆ, 'Late Mr. Sharma' ಎಂದರೆ 'ದಿವಂಗತ ಶ್ರೀ ಶರ್ಮಾ' ಎಂದರ್ಥ.

Vishweshwar Bhat Column: ಅದೆಷ್ಟೇ ಉನ್ನತ ಅಧಿಕಾರದಲ್ಲಿರಲಿ, ಕೊನೆಯಲ್ಲಿ ನಿಲ್ಲುವವರು ಮಾತ್ರ ಮನೆಯವರು !

ಉನ್ನತ ಅಧಿಕಾರದಲ್ಲಿರಲಿ, ಕೊನೆಯಲ್ಲಿ ನಿಲ್ಲುವವರು ಮಾತ್ರ ಮನೆಯವರು !

ಸರಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಯಾವ ನಿರ್ಧಾರವೂ ಧವನ್‌ಗೆ ಗೊತ್ತಿಲ್ಲದೇ ಆಗುತ್ತಿರಲಿಲ್ಲ. ಧವನ್ ಕೇವಲ ನಿರ್ದೇಶನಗಳನ್ನು ತಲುಪಿಸುವವರಷ್ಟೇ ಆಗಿರಲಿಲ್ಲ, ಪ್ರಧಾನಿಯ ಕಣ್ಣು ಮತ್ತು ಕಿವಿಯಾಗಿ ಕೆಲಸ ಮಾಡುತ್ತಿದ್ದರು. ಇಂದಿರಾ ಗಾಂಧಿಯವರು ಧವನ್ ಮೇಲೆ ಇಟ್ಟಿದ್ದ ಅಪಾರ ನಂಬಿಕೆಯೇ ಅವರ ಈ ಅಪ್ರತಿಮ ಅಧಿಕಾರಕ್ಕೆ ಮುಖ್ಯ ಕಾರಣವಾಗಿತ್ತು. ಸಚಿವರಿಗೆ ಕರೆ ಮಾಡಿ ಪ್ರಧಾನಿಯವರ ಹೆಸರಿನಲ್ಲಿ ಆದೇಶ ನೀಡುವಷ್ಟು ಶಕ್ತಿ ಅವರಿಗಿತ್ತು.

Vishweshwar Bhat Column: ʼಬ್ಲೂಬುಕ್‌ʼ ಎಂದರೇನು?

Vishweshwar Bhat Column: ʼಬ್ಲೂಬುಕ್‌ʼ ಎಂದರೇನು?

ಇತ್ತೀಚೆಗೆ ಹಿರಿಯ ಐಪಿಎಸ್ ಅಧಿಕಾರಿ ವೇಣು ಬನ್ಸಾಲ್ ಅವರು ‘ಬ್ಲೂ ಬುಕ್’ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ರಾಷ್ಟ್ರಪತಿ ಭವನದ ಭದ್ರತಾ ಹೊಣೆಗಾರಿಕೆಯಿಂದ ಮುಕ್ತಗೊಳಿಸ ಲಾಗಿದೆ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿರಬಹುದು. ಹಾಗಾದರೆ ‘ಬ್ಲೂ ಬುಕ್’ ಅಂದರೆ ಏನು? ಇದು ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ದೇಶದ ಅತ್ಯುನ್ನತ ಗಣ್ಯರ (ವಿವಿಐಪಿ) ಭದ್ರತೆ ಮತ್ತು ಪ್ರೊಟೋಕಾಲ್ ಅನ್ನು ನಿರ್ವಹಿಸುವ ಅತ್ಯಂತ ರಹಸ್ಯಮಯ ಹಾಗೂ ಪ್ರಮುಖ ಕೈಪಿಡಿ

Vishweshwar Bhat Column: ಸಿ.ಪಿ.ಎನ್. ಸಿಂಗ್ ನೆನಪು

Vishweshwar Bhat Column: ಸಿ.ಪಿ.ಎನ್. ಸಿಂಗ್ ನೆನಪು

ಸ್ವತಂತ್ರ ಭಾರತದ ಆರಂಭಿಕ ದಶಕಗಳಲ್ಲಿ ಪ್ರಮುಖ ದೇಶಗಳಲ್ಲಿ ರಾಯಭಾರಿಯಾಗಿ, ನಂತರದಲ್ಲಿ ಪ್ರಮುಖ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಅವರು, ದೆಹಲಿಯ ರಾಜಕೀಯ ಕಾರಿಡಾರ್‌ ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಸಿ.ಪಿ.ಎನ್. ಸಿಂಗ್ ಅವರು ಬಿಹಾರದ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಜನ್ಮ ತಾಳಿದರು.

Vishweshwar Bhat Column: ಕೀನ್ಯಾದ ಓಟಗಾರರ, ಎಸ್ತೋನಿಯಾ ಟೆಕ್ಕಿಗಳ ರಹಸ್ಯವೇನು?

ಕೀನ್ಯಾದ ಓಟಗಾರರ, ಎಸ್ತೋನಿಯಾ ಟೆಕ್ಕಿಗಳ ರಹಸ್ಯವೇನು?

ಜಗತ್ತಿನಾದ್ಯಂತ ನಡೆಯುವ ಪ್ರತಿಷ್ಠಿತ ಮ್ಯಾರಥಾನ್ ಮತ್ತು ದೀರ್ಘದೂರ ಓಟದ ಸ್ಪರ್ಧೆಗಳನ್ನು ಗಮನಿಸಿದರೆ, ಕೀನ್ಯಾದ ಅದರಲ್ಲೂ ನಿರ್ದಿಷ್ಟವಾಗಿ 'ಕಲೆಂಜಿನ್' (Kalenjin) ಸಮುದಾಯದ ಅಥ್ಲೀಟ್‌ಗಳದ್ದೇ ಪೂರ್ಣ ಆಧಿಪತ್ಯ. ಅವರು ಜಗತ್ತಿನ ಬೇರೆಲ್ಲ ದೇಶಗಳ ಓಟಗಾರರಿಗಿಂತ ಮ್ಯಾರಥಾನ್ ನಲ್ಲಿ ಮುಂದಿದ್ದಾರೆ.

Vishweshwar Bhat Column: ಮೂರು ದೇಶಕ್ಕೆ ಸೇರಿದ ಒಂದು ದ್ವೀಪ

Vishweshwar Bhat Column: ಮೂರು ದೇಶಕ್ಕೆ ಸೇರಿದ ಒಂದು ದ್ವೀಪ

ಪ್ರತಿಯೊಂದು ದೇಶವೂ ದ್ವೀಪದ ಭೂಭಾಗದಲ್ಲಿ ತನ್ನದೇ ಆದ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಅಸ್ತಿತ್ವವನ್ನು ಹೊಂದಿದೆ. ಈ ಸುಂದರ ದ್ವೀಪದ ಸಿಂಹಪಾಲು ಇಂಡೋನೇಷ್ಯಾಗೆ ಸೇರಿದೆಯಾದರೆ, ಉಳಿದ ಭಾಗವನ್ನು ಮಲೇಷ್ಯಾ ಮತ್ತು ಬ್ರೂನೈ ದೇಶಗಳು ಹೊಂದಿವೆ. ಬೋರ್ನಿಯೋ ದ್ವೀಪದ ಸುಮಾರು ಶೇ.7.50 ರಷ್ಟು ಭಾಗವು ಇಂಡೋನೇಷ್ಯಾದ ನಿಯಂತ್ರಣ ದಲ್ಲಿದೆ. ಈ ದಕ್ಷಿಣ ಭಾಗದ ಪ್ರದೇಶವನ್ನು 'ಕಾಲಿಮಂತಾನ್' ಎಂದು ಕರೆಯಲಾಗುತ್ತದೆ.

Vishweshwar Bhat Column: ಮೇರಿ ರೋಚ್ ಕುರಿತು

Vishweshwar Bhat Column: ಮೇರಿ ರೋಚ್ ಕುರಿತು

ಪ್ರಪಂಚದಾದ್ಯಂತ ಸಾವಿರಾರು ಅಂಕಣಕಾರರಿದ್ದಾರೆ. ರಾಜಕೀಯ, ಸಮಾಜ, ಸಿನಿಮಾ, ಅಥವಾ ಕ್ರೀಡೆಯಂಥ ಸಾಂಪ್ರದಾಯಿಕ ವಿಷಯಗಳ ಬಗ್ಗೆ ಬರೆಯುವವರೇ ಹೆಚ್ಚು. ಆದರೆ, ‘ದೈನಂದಿನ ಅತ್ಯಂತ ಸಣ್ಣ, ಆಡುಮಾತಿನ ಹಾಗೂ ಕಣ್ಣಿಗೆ ಕಾಣದ ವೈಜ್ಞಾನಿಕ ಅಥವಾ ಮಾನವೀಯ ನಡೆವಳಿಕೆಗಳ ಹಿಂದಿನ ಅಸಲಿ ಮರ್ಮವೇನು?’ ಎಂಬ ಅತ್ಯಂತ ವಿಶಿಷ್ಟ ವಿಷಯವನ್ನು ಇಟ್ಟುಕೊಂಡು ವಿಶ್ವಪ್ರಸಿದ್ಧ ರಾದ ಅಂಕಣಕಾರರೊಬ್ಬರಿದ್ದಾರೆ. ಅವರು ಮೇರಿ ರೋಚ್.

Vishweshwar Bhat Column: ಎಲ್ಲಿಯ ಫ್ರಾನ್ಸ್, ಎಲ್ಲಿಯ ಕೆನಡಾ ?

Vishweshwar Bhat Column: ಎಲ್ಲಿಯ ಫ್ರಾನ್ಸ್, ಎಲ್ಲಿಯ ಕೆನಡಾ ?

ಐತಿಹಾಸಿಕವಾಗಿ, 16 ನೇ ಶತಮಾನದಲ್ಲಿ ಫ್ರೆಂಚ್ ಅನ್ವೇಷಕ ಜಾಕ್ವೆಸ್ ಕಾರ್ಟಿಯರ್ ಈ ದ್ವೀಪಗಳನ್ನು ಫ್ರಾನ್ಸ್ ಸಾಮ್ರಾಜ್ಯದ ಪರವಾಗಿ ತನ್ನ ವಶಕ್ಕೆ ತೆಗೆದುಕೊಂಡ. 17 ಮತ್ತು 18 ನೇ ಶತಮಾನಗಳಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಉತ್ತರ ಅಮೆರಿಕದ ಮೇಲೆ ಆಧಿಪತ್ಯ ಸಾಧಿಸಲು ನಡೆದ ಏಳು ವರ್ಷಗಳ ಸುದೀರ್ಘ ಯುದ್ಧಗಳ ಪರಿಣಾಮವಾಗಿ, ಫ್ರಾನ್ಸ್ ತಾನು ಹೊಂದಿದ್ದ ಇಡೀ ಕೆನಡಾ (ನ್ಯೂ ಫ್ರಾನ್ಸ್) ಭೂಭಾಗವನ್ನು ಬ್ರಿಟನ್‌ಗೆ ಬಿಟ್ಟುಕೊಡಬೇಕಾಯಿತು.

Vishweshwar Bhat Column: ಪರ್ತ್: ಸುತ್ತ ಮುತ್ತ ಯಾರೂ ಇಲ್ಲ

Vishweshwar Bhat Column: ಪರ್ತ್: ಸುತ್ತ ಮುತ್ತ ಯಾರೂ ಇಲ್ಲ

ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿರುವ ಪರ್ತ್ ನಗರವು ಜಾಗತಿಕ ಭೂಪಟದಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿಸ್ಮಯಕಾರಿ ಭೌಗೋಳಿಕ ಸ್ಥಾನವನ್ನು ಹೊಂದಿದೆ. ಜಗತ್ತಿನ ಪ್ರಮುಖ ನಗರಗಳ ಸಾಲಿನಲ್ಲಿ ಪರ್ತ್ ಹೊಂದಿರುವ ಒಂಟಿತನ ಅಥವಾ ಪ್ರತ್ಯೇಕತೆ ಎಷ್ಟು ತೀವ್ರವಾಗಿದೆ ಎಂದರೆ, ಇದನ್ನು ಅಮೆರಿಕದ ಪ್ರಮುಖ ನಗರಗಳಿಗೆ ಹೋಲಿಸಿದಾಗ ಅಮೆರಿಕದ ನಗರಗಳು ಅತಿಯಾದ ಜನದಟ್ಟಣೆ ಮತ್ತು ಗದ್ದಲದಿಂದ ಕೂಡಿರುವಂತೆ ಭಾಸವಾಗುತ್ತವೆ.

Vishweshwar Bhat Column: ಸಾರ್ವಜನಿಕವಾಗಿ ಮೋದಿ ಆಕಳಿಸಿದ್ದನ್ನು ಯಾರೂ ನೋಡಿಲ್ಲವಂತೆ !

ಸಾರ್ವಜನಿಕವಾಗಿ ಮೋದಿ ಆಕಳಿಸಿದ್ದನ್ನು ಯಾರೂ ನೋಡಿಲ್ಲವಂತೆ !

ಮೋದಿಯವರು ದಶಕಗಳಿಂದ ಕಟ್ಟುನಿಟ್ಟಾಗಿ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ವಿಜ್ಞಾನದ ಪ್ರಕಾರ, ಮಿದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾದಾಗ ಅಥವಾ ಮಿದುಳು ದಣಿದಾಗ ಆಕಳಿಕೆ ಬರುತ್ತದೆ. ಆದರೆ, ಪ್ರತಿದಿನ ಪ್ರಾಣಾಯಾಮ ಮತ್ತು ಆಳವಾದ ಶ್ವಾಸಕ್ರಿಯೆ ಅಭ್ಯಾಸ ಮಾಡುವವರ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿರುತ್ತದೆ ಮತ್ತು ದೇಹದಲ್ಲಿ ಆಮ್ಲಜನಕದ ಸಮತೋಲನ ಚೆನ್ನಾಗಿರುತ್ತದೆ.

Vishweshwar Bhat Column: ಹತ್ತು ದೇಶಗಳಲ್ಲಿ ಹರಿವ ಡ್ಯಾನ್ಯೂಬ್

Vishweshwar Bhat Column: ಹತ್ತು ದೇಶಗಳಲ್ಲಿ ಹರಿವ ಡ್ಯಾನ್ಯೂಬ್

ಡ್ಯಾನ್ಯೂಬ್ ನದಿಯ ದಡದಲ್ಲಿ ನಿಂತಾಗ ಅದರ ಅಗಾಧತೆ ನಿಮ್ಮ ಅರಿವಿಗೆ ಬರದೇ ಹೋಗ ಬಹುದು. ಇದು ಯುರೋಪ್ ಖಂಡದ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ಜೀವನಾಡಿ ಯಾಗಿದೆ. ವೋಲ್ಗಾ ನದಿಯ ನಂತರ ಯುರೋಪ್‌ನ ಎರಡನೇ ಅತಿ ಉದ್ದದ ನದಿಯಾಗಿರುವ ಡ್ಯಾನ್ಯೂಬ್, ವಿಶ್ವದಲ್ಲೇ ಅತ್ಯಂತ ಹೆಚ್ಚು ದೇಶಗಳ ಮೂಲಕ ಹರಿಯುವ ಅಥವಾ ಗಡಿ ಹಂಚಿಕೊಳ್ಳುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Vishweshwar Bhat Column: ಲ್ಯಾಟಿನ್ ಅಮೆರಿಕ ಮತ್ತು ಸ್ಪ್ಯಾನಿಷ್

Vishweshwar Bhat Column: ಲ್ಯಾಟಿನ್ ಅಮೆರಿಕ ಮತ್ತು ಸ್ಪ್ಯಾನಿಷ್

‘ಲ್ಯಾಟಿನ್ ಅಮೆರಿಕ’ ಎಂಬ ಹೆಸರು ಬಂದಿರುವುದು ರೋಮನ್ ಸಾಮ್ರಾಜ್ಯದ ‘ಲ್ಯಾಟಿನ್’ ಭಾಷೆ ಯಿಂದ ಹುಟ್ಟಿಕೊಂಡ ರೋಮ್ಯಾ ಭಾಷಾ ಗುಂಪಿನ (Spoken Romance Languages) ಆಧಾರದ ಮೇಲೆಯೇ ಹೊರತು, ಕೇವಲ ಸ್ಪ್ಯಾನಿಷ್ ಭಾಷೆಯ ಆಧಾರದ ಮೇಲಲ್ಲ. ಈ ಪ್ರದೇಶದಲ್ಲಿ ಕೋಟ್ಯಂತರ ಜನರು ಸ್ಪ್ಯಾನಿಷ್ ಹೊರತುಪಡಿಸಿ ಇತರ ಹಲವು ಯುರೋಪಿಯನ್, ಸ್ಥಳೀಯ ಹಾಗೂ ಮಿಶ್ರಿತ ಭಾಷೆಗಳನ್ನು ದೈನಂದಿನ ಜೀವನದಲ್ಲಿ ಬಳಸುತ್ತಾರೆ.

Vishweshwar Bhat Column: ಕೃಷ್ಣ ಮೆನನ್ ಮಾರ್ಗ್

Vishweshwar Bhat Column: ಕೃಷ್ಣ ಮೆನನ್ ಮಾರ್ಗ್

ದೆಹಲಿಯ ಹೃದಯಭಾಗದಲ್ಲಿರುವ ಲುಟಿನ್ಸ್ ವಲಯದ ರಸ್ತೆಗಳು ಕೇವಲ ಡಾಂಬರು ಅಥವಾ ಕಾಂಕ್ರೀಟ್ ಹಾದಿಗಳಲ್ಲ. ಅವು ಭಾರತದ ಆಧುನಿಕ ರಾಜಕೀಯ ಇತಿಹಾಸದ ಮೂಕಸಾಕ್ಷಿಗಳು. ಅಂಥ ಅತ್ಯಂತ ಪ್ರಭಾವಶಾಲಿ ಮತ್ತು ಐತಿಹಾಸಿಕ ರಸ್ತೆಗಳಲ್ಲಿ ಕೃಷ್ಣ ಮೆನನ್ ಮಾರ್ಗ್ ಪ್ರಮುಖ ವಾದದ್ದು. ರಾಜಧಾನಿಯ ಅತ್ಯಂತ ಗಣ್ಯ ಹಾಗೂ ಭದ್ರತಾ ವಲಯದಲ್ಲಿ ಸೇರಿರುವ ಈ ರಸ್ತೆಯು ಭಾರತದ ಪ್ರಜಾಪ್ರಭುತ್ವದ ಅನೇಕ ಪ್ರಮುಖ ನಿರ್ಧಾರಗಳಿಗೆ, ರಾಜಕೀಯ ಚಟುವಟಿಕೆಗಳಿಗೆ ಮತ್ತು ಧುರೀಣರ ನೆಲೆವೀಡಿಗೆ ಸಾಕ್ಷಿಯಾಗಿದೆ.

Vishweshwar Bhat Column: ಇದು ‘ವಿಕಸಿತ ಭಾರತ’ವೋ, ‘ಕುಸಿತ ಭಾರತ’ವೋ?

ಇದು ‘ವಿಕಸಿತ ಭಾರತ’ವೋ, ‘ಕುಸಿತ ಭಾರತ’ವೋ?

ಬಿಹಾರದ ಖಗರಿಯಾ ಮತ್ತು ಭಾಗಲ್ಪುರ ಜಿಲ್ಲೆಗಳನ್ನು ಸಂಪರ್ಕಿಸಲು ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸುಲ್ತಾನ್‌ಗಂಜ್- ಅಗ್ವಾನಿ ಘಾಟ್ ಸೇತುವೆ ಕುಸಿತವು ಭಾರತದ ಮೂಲ ಸೌಕರ್ಯ ಇತಿಹಾಸದಲ್ಲಿಯೇ ಅತ್ಯಂತ ಅತಿರೇಕದ ಕಳಪೆ ಕಾಮಗಾರಿಗೆ ಉದಾಹರಣೆಯಾಗಿದೆ. ಸುಮಾರು 1700 ಕೋಟಿ ರುಪಾಯಿ ಭಾರಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಈ ನಾಲ್ಕು ಪಥದ ಸೇತುವೆಯು ಉದ್ಘಾಟನೆ ಯಾಗುವ ಮೊದಲೇ ಎರಡೆರಡು ಬಾರಿ ಜಲಸಮಾಧಿಯಾಯಿತು.

Loading...