ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
‌Vishweshwar Bhat Column: ಪಾರಿವಾಳ ಮತ್ತು ಜಿಪಿಎಸ್

‌Vishweshwar Bhat Column: ಪಾರಿವಾಳ ಮತ್ತು ಜಿಪಿಎಸ್

ಪಾರಿವಾಳಗಳು ಸಾವಿರಾರು ಕಿಮೀ ದೂರದ ಅಪರಿಚಿತ ಪ್ರದೇಶಗಳಿಂದಲೂ ತಮ್ಮ ಗೂಡಿಗೆ ಅತ್ಯಂತ ನಿಖರವಾಗಿ ಮರಳಿ ಬರುವ ಸಾಮರ್ಥ್ಯವನ್ನು ಹೊಂದಿವೆ. ಈ ಅದ್ಭುತ ಶಕ್ತಿಯನ್ನು ’ಹೋಮಿಂಗ್ ಇನ್‌ಸ್ಟಿಂಕ್ಟ್’ (Homing Instinct) ಎಂದು ಕರೆಯಲಾಗುತ್ತದೆ. ಮಾನವನು ಜಿಪಿಎಸ್ ಕಂಡುಹಿಡಿಯುವ ಶತಮಾನಗಳ ಮೊದಲೇ ಪಾರಿವಾಳಗಳು ಈ ನೈಸರ್ಗಿಕ ತಂತ್ರಜ್ಞಾನ ವನ್ನು ಬಳಸುತ್ತಿದ್ದವು.

Vishweshwar Bhat Column: ಹದಿನೇಳು ವರ್ಷಗಳ ದ್ವೇಷ ಮತ್ತು ಸ್ನೇಹದ ಮರುಜನ್ಮ

ಹದಿನೇಳು ವರ್ಷಗಳ ದ್ವೇಷ ಮತ್ತು ಸ್ನೇಹದ ಮರುಜನ್ಮ

ಯಾವಾಗ ಇಬ್ಬರು ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಅತ್ಯುನ್ನತ ಶಿಖರವನ್ನು ಏರುತ್ತಾರೋ, ಆಗ ಅವರ ನಡುವೆ ‘ನಾನು’ ಎಂಬ ಭಾವನೆ ಹೆಮ್ಮರವಾಗಿ ಬೆಳೆದು ಬಿಡುತ್ತವೆ. ದೈತ್ಯ ಪ್ರತಿಭೆಗಳ ನಡುವೆ ಎಷ್ಟೇ ಗೌರವವಿದ್ದರೂ, ಅಂತರಾಳದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ಪರ್ಧೆ ಇದ್ದರಂತೂ ಅದು ಯಾವ ಕ್ಷಣದದರೂ ಸ್ಪೋಟಗೊಳ್ಳಲು ಒಂದು ಸಣ್ಣ ಕಿಡಿಗಾಗಿ ಕಾಯುತ್ತಿರುತ್ತದೆ.

Vishweshwar Bhat Column: ಯಾರು ಈ ಅರ್ಮಾಂಡೋ ?

Vishweshwar Bhat Column: ಯಾರು ಈ ಅರ್ಮಾಂಡೋ ?

ಅರ್ಮಾಂಡೋ ಕೇವಲ ಒಂದು ಹಕ್ಕಿಯಲ್ಲ, ಅದು ರೇಸಿಂಗ್ ಜಗತ್ತಿನಲ್ಲಿ ಅಜೇಯ ಶಕ್ತಿಯಾಗಿ ಗುರುತಿಸಲ್ಪಟ್ಟ ಅತ್ಯುನ್ನತ ಅಥ್ಲೀಟ್. 2019ರ ಮಾರ್ಚ್ ನಲ್ಲಿ ಆನ್‌ಲೈನ್ ಹರಾಜು ಸಂಸ್ಥೆಯಾದ ಪೈಪ (PIPA) ಮೂಲಕ ಅರ್ಮಾಂಡೋ ಹರಾಜಿಗೆ ಬಂದಿತು. ಆರಂಭದಲ್ಲಿ ಈ ಪಾರಿವಾಳವು ಸುಮಾರು 4-5 ಲಕ್ಷ ಯುರೋಗಳಿಗೆ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿತ್ತು.

Vishweshwar Bhat Column: ಪಾರಿವಾಳಗಳ ರೇಸಿಂಗ್

Vishweshwar Bhat Column: ಪಾರಿವಾಳಗಳ ರೇಸಿಂಗ್

ಪಾರಿವಾಳಗಳ ರೇಸಿಂಗ್ (Pigeon Racing) ಎಂಬುದು ಕೇವಲ ಒಂದು ಹವ್ಯಾಸವಲ್ಲ, ಇದೊಂದು ಕೋಟ್ಯಂತರ ರುಪಾಯಿಗಳ ವಹಿವಾಟು ನಡೆಯುವ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಒಂದು ರೇಸಿಂಗ್ ಪಾರಿವಾಳವು ಬರೋಬ್ಬರಿ 14-15 ಕೋಟಿ ರುಪಾಯಿ ಗಳಿಗೆ (1.9 ಮಿಲಿಯನ್ ಡಾಲರ್) ಮಾರಾಟವಾಗಿ ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು

Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

Vishweshwar Bhat Column: ಆಸ್ಟ್ರೇಲಿಯಾದಲ್ಲಿ ಅರೇಬಿಕ್‌ ಭಾಷೆ

ಆಸ್ಟ್ರೇಲಿಯಾ ಇಂದು ವಿಶ್ವದ ಅತ್ಯಂತ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ. ಇಂಗ್ಲಿಷ್ ಪ್ರಾಬಲ್ಯದ ಈ ನಾಡಿನಲ್ಲಿ ಅರೇಬಿಕ್ ಭಾಷೆ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿ ಹೊರಹೊಮ್ಮಿದೆ ಅಂದರೆ ಅನೇಕರಿಗೆ ಅಚ್ಚರಿಯಾಗಬಹುದು. ಆಸ್ಟ್ರೇಲಿಯಾಕ್ಕೆ ಅರೇಬಿಕ್ ಭಾಷಿಕರ ಆಗಮನವು 19ನೇ ಶತಮಾನದ ಅಂತ್ಯದ ಆರಂಭವಾಯಿತು.

Vishweshwar Bhat Column: ದುರಂತಗಳ ಮೌನಜಾಡು

Vishweshwar Bhat Column: ದುರಂತಗಳ ಮೌನಜಾಡು

ದೊಡ್ಡ ತಾಂತ್ರಿಕ ದೋಷಗಳು ತಕ್ಷಣವೇ ಎಚ್ಚರಿಕೆಯ ಗಂಟೆ ಬಾರಿಸುತ್ತವೆ, ಚೆಕ್‌ಲಿಸ್ಟ್‌ಗಳನ್ನು ನೆನಪಿಸು ತ್ತವೆ ಮತ್ತು ಪೈಲಟ್ ತಕ್ಷಣದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತವೆ. ಆದರೆ ಸಣ್ಣ ದೋಷಗಳು ಹಾಗಲ್ಲ. ಒಂದು ಸೆನ್ಸರ್ ವಿಮಾನದ ವೇಗವನ್ನು ಕೇವಲ ಶೇ.5ರಷ್ಟು ಕಡಿಮೆ ತೋರಿಸುತ್ತಿದ್ದರೆ, ಪೈಲಟ್‌ ಗೆ ಅದು ತಕ್ಷಣಕ್ಕೆ ತಿಳಿಯುವುದಿಲ್ಲ.

Vishweswhar Bhat Column: ಇಸ್ರೇಲಿಗೆ ಯುದ್ದದಲ್ಲಿ ಸೋಲುವ ಆಯ್ಕೆಯೇ ಇಲ್ಲ, ಸೋತರೆ ಅಸ್ತಿತ್ವವೇ ಇಲ್ಲ !

ಇಸ್ರೇಲಿಗೆ ಯುದ್ದದಲ್ಲಿ ಸೋಲುವ ಆಯ್ಕೆಯೇ ಇಲ್ಲ, ಸೋತರೆ ಅಸ್ತಿತ್ವವೇ ಇಲ್ಲ !

ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ರಕ್ಷಣಾ ಬಜೆಟ್ ಅನ್ನು ಅಧಿಕೃತವಾಗಿ ಘೋಷಿಸುತ್ತವೆ. ಆದರೆ ಇಸ್ರೇಲ್ ತನ್ನ ರಕ್ಷಣಾ ವೆಚ್ಚದ ನಿಖರ ಅಂಕಿ-ಅಂಶಗಳನ್ನು ಎಂದಿಗೂ ಸಂಪೂರ್ಣವಾಗಿ ಬಹಿರಂಗ ಪಡಿಸುವುದಿಲ್ಲ. ಜಗತ್ತಿನ ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಇಸ್ರೇಲ್ ತನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಅತಿ ದೊಡ್ಡ ಪಾಲನ್ನು ರಕ್ಷಣೆಗಾಗಿ ಮೀಸಲಿಡುತ್ತದೆ.

Vishweshwar Bhat Column: ಸಾಕುಪ್ರಾಣಿಗಳು ಬೇಕು

Vishweshwar Bhat Column: ಸಾಕುಪ್ರಾಣಿಗಳು ಬೇಕು

ಜಾಗರೂಕವಾಗಿ ಸಾಕುಪ್ರಾಣಿಗಳ ಮಾರುಕಟ್ಟೆಯು 2025ರ ವೇಳೆಗೆ ಸುಮಾರು 273 ಶತಕೋಟಿ ಡಾಲರ್ ತಲುಪುವ ಅಂದಾಜಿದೆ. ಸಾಕುಪ್ರಾಣಿಗಳಿಗಾಗಿ ಅತಿ ಹೆಚ್ಚು ಹಣ ವ್ಯಯಿಸುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದ ಸುಮಾರು ಶೇ.70ರಷ್ಟು ಮನೆಗಳಲ್ಲಿ ಕನಿಷ್ಠ ಒಂದು ಸಾಕುಪ್ರಾಣಿಯಾದರೂ ಇದೆ.

V‌ishweshwar Bhat Column: ವೈ ವೈ: ನೇಪಾಳದ ಜಾಗತಿಕ ಬ್ರ್ಯಾಂಡ್

V‌ishweshwar Bhat Column: ವೈ ವೈ: ನೇಪಾಳದ ಜಾಗತಿಕ ಬ್ರ್ಯಾಂಡ್

1980ರ ದಶಕದ ಆರಂಭದಲ್ಲಿ ನೇಪಾಳದ ‘ಚೌಧರಿ ಗ್ರೂಪ್’ (CG Corp Global) ಥೈಲ್ಯಾಂಡ್‌ನ ಕಂಪನಿ ಯೊಂದರ ಸಹಯೋಗದೊಂದಿಗೆ ಈ ನೂಡಲ್ಸ್ ಉತ್ಪಾದನೆಯನ್ನು ಪ್ರಾರಂಭಿಸಿತು. ಕುತೂಹಲದ ಸಂಗತಿಯೆಂದರೆ, ಬಿನೋದ್ ಚೌಧರಿ ಅವರು ಥೈಲ್ಯಾಂಡ್‌ನಿಂದ ನೇಪಾಳಕ್ಕೆ ಬರುವ ವಿಮಾನಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ನೂಡಲ್ಸ ಪ್ಯಾಕೆಟ್ಗಳನ್ನು ತರುತ್ತಿರುವುದನ್ನು ಗಮನಿಸಿದರು. ‌

Vishweshwar Bhat Column: ನಿಮ್ಮ ಬಲಗೈ ಸದಾ ನನ್ನ ತಲೆ ಮೇಲಿರಲಿ !

Vishweshwar Bhat Column: ನಿಮ್ಮ ಬಲಗೈ ಸದಾ ನನ್ನ ತಲೆ ಮೇಲಿರಲಿ !

ಹಿಂತಿರುಗಿ ನೋಡಿದಾಗ ಅಚ್ಚರಿಯಾಗುತ್ತದೆ. ಎದುರಾದ ಸವಾಲುಗಳು ಹಿಮಾಲಯದಷ್ಟಿದ್ದರೂ, ಅದನ್ನು ದಾಟುವ ಛಲವೂ ನನಗಿತ್ತು, ಈಗಲೂ ಇದೆ. ಅಡೆತಡೆಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿ ಕೊಂಡು ಸಾಗಿದ ಈ ಪಯಣದಲ್ಲಿ ಸೋಲಿಗಿಂತ ಗೆಲುವಿನ ರುಚಿಯೇ ಹೆಚ್ಚು ಆಪ್ತ. ಇಂದು ‘ವಿಶ್ವವಾಣಿ’ ಬೆಳೆದು ನಿಂತಿರುವ ರೀತಿಗೆ ಹತ್ತು ವರ್ಷಗಳ ಹಿಂದೆ ಇಟ್ಟ ಆ ಸಣ್ಣ ಹೆಜ್ಜೆಯೇ ಕಾರಣ.

Vishweshwar Bhat Column: ಎತ್ತರದಲ್ಲಿ ಹಾರುವ ಅದ್ಭುತ

Vishweshwar Bhat Column: ಎತ್ತರದಲ್ಲಿ ಹಾರುವ ಅದ್ಭುತ

ಏರ್ ಬಸ್ A350 ಈ ವಿಷಯದಲ್ಲಿ ಮುಂಚೂಣಿಯಲ್ಲಿರಲು ಕಾರಣಗಳೇನು? ಸಾಂಪ್ರದಾಯಿಕ ವಿಮಾನ ಗಳನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತಿತ್ತು. ಆದರೆ(CFRP)ನಂಥ ಸಂಯೋಜಿತ ವಸ್ತು ಗಳಿಂದ ಮಾಡಲಾಗಿದೆ. ಲೋಹಕ್ಕಿಂತ ಹಗುರವಾಗಿದ್ದರೂ, ಇವು ಅಷ್ಟೇ ಬಲವಾಗಿರುತ್ತವೆ. ವಿಮಾನದ ತೂಕ ಕಡಿಮೆಯಾದಷ್ಟೂ, ತೆಳುವಾದ ಗಾಳಿ ಇರುವ ಎತ್ತರದ ಪ್ರದೇಶಗಳಲ್ಲಿ ವಿಮಾನವು ಸುಲಭವಾಗಿ ತೇಲಬಲ್ಲದು. ಅಲ್ಯೂಮಿನಿಯಂಗೆ ಹೋಲಿಸಿದರೆ ಇವುಗಳಿಗೆ ತುಕ್ಕು ಹಿಡಿಯುವುದಿಲ್ಲ, ಇದು ವಿಮಾನದ ದೀರ್ಘಾಯುಷ್ಯಕ್ಕೆ ಪೂರಕ.

Vishweshwar Bhat Column: ವಿಮಾನದ ಹಿಂಭಾಗ ನೆಲಕ್ಕಪ್ಪಳಿಸಿದರೆ ?

ವಿಮಾನದ ಹಿಂಭಾಗ ನೆಲಕ್ಕಪ್ಪಳಿಸಿದರೆ ?

ವಿಮಾನವು ಟೇಕಾಫ್ ಆಗುವಾಗ ಅದರ ಹಿಂಭಾಗವು (Tail) ನೆಲಕ್ಕೆ ತಗುಲುವ ಘಟನೆ‌ ಯನ್ನು ತಾಂತ್ರಿಕ ಪರಿಭಾಷೆಯಲ್ಲಿ ‘ಟೇಲ್‌ಸ್ಟ್ರೈಕ್’ ಎಂದು ಕರೆಯಲಾಗುತ್ತದೆ. ರನ್‌ವೇ ಮೇಲೆ ವಿಮಾನ ವು ವೇಗವಾಗಿ ಚಲಿಸಿ, ಗಾಳಿಯಲ್ಲಿ ಏರಲು ಸಿದ್ಧವಾದಾಗ ಅದರ ಮುಂಭಾಗವನ್ನು ಮೇಲಕ್ಕೆ ಎತ್ತಲಾಗುತ್ತದೆ. ಈ ಹಂತದಲ್ಲಿ ಸಮತೋಲನ ತಪ್ಪಿ ತುಸು ಎಡವಟ್ಟಾದರೆ ಹಿಂಭಾಗ ನೆಲಕ್ಕೆ ಅಪ್ಪಳಿಸುವ ಅಪಾಯವಿರುತ್ತದೆ.

Vishweshwar Bhat Column: ತಾವಾಗಿಯೇ ಲ್ಯಾಂಡ್‌ ಆಗಬಲ್ಲವು ?

ತಾವಾಗಿಯೇ ಲ್ಯಾಂಡ್‌ ಆಗಬಲ್ಲವು ?

ವಿಮಾನಗಳು ತಾವಾಗಿಯೇ ಲ್ಯಾಂಡ್ ಆಗಬಲ್ಲವು ಅಂದ್ರೆ ಅಚ್ಚರಿ ತರಬಹುದು. ಆದರೆ, ಈ ತಂತ್ರಜ್ಞಾನವು ಕಳೆದ ಹಲವಾರು ದಶಕಗಳಿಂದ ಅತ್ಯಂತ ಸದ್ದಿಲ್ಲದೆ ವಿಮಾನಯಾನ ಕ್ಷೇತ್ರ ದಲ್ಲಿ ಬಳಕೆಯಾಗುತ್ತಿದೆ. ದಟ್ಟವಾದ ಮಂಜು ಮುಸುಕಿದಾಗ ಅಥವಾ ಕಣ್ಣಿಗೆ ಏನೂ ಕಾಣಿಸ ದಂಥ ಪರಿಸ್ಥಿತಿಗಳಲ್ಲಿ ವಿಮಾನಗಳು ಹೇಗೆ ಸುರಕ್ಷಿತವಾಗಿ ಇಳಿಯುತ್ತವೆ? ಇದಕ್ಕೆ ಉತ್ತರವೇ ‘ಆಟೋಲ್ಯಾಂಡ್’ ಸಿಸ್ಟಮ್. ‌

Vishweshwar Bhat Column: ಆಕ್ಸಿಜನ್‌ ಮಾಸ್ಕ್‌ ಬಳಕೆ

Vishweshwar Bhat Column: ಆಕ್ಸಿಜನ್‌ ಮಾಸ್ಕ್‌ ಬಳಕೆ

ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳು 30000 ದಿಂದ 40000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಈ ಎತ್ತರದಲ್ಲಿ ಗಾಳಿಯು ಅತ್ಯಂತ ವಿರಳವಾಗಿರುತ್ತದೆ ಮತ್ತು ಆಮ್ಲಜನಕದ ಪ್ರಮಾಣವು ತುಂಬಾ ಕಡಿಮೆ ಇರುತ್ತದೆ. ಈ ಎತ್ತರದಲ್ಲಿ ಮನುಷ್ಯನು ಮುಖವಾಡವಿಲ್ಲದೆ ನೇರವಾಗಿ ಉಸಿರಾಡಲು ಸಾಧ್ಯ ವಿಲ್ಲ. ಒಂದು ವೇಳೆ ವಿಮಾನದ ಒಳಗಿನ ಗಾಳಿಯ ಒತ್ತಡ ಕಡಿಮೆಯಾದರೆ, ಆ ಎತ್ತರದಲ್ಲಿ ಮನುಷ್ಯನಿಗೆ ಪ್ರಜ್ಞೆ ತಪ್ಪಲು 15 ರಿಂದ 30 ಸೆಕೆಂಡುಗಳು ಮಾತ್ರ ಸಾಕು. ಇದನ್ನು ’Useful Consciousness’ ಎಂದು ಕರೆಯುತ್ತಾರೆ.

Vishweshwar Bhat Column: ಮರುಭೂಮಿಯಲ್ಲೂ ಮೀನುಗಾರಿಕೆ: ಇದು ಇಸ್ರೇಲ್‌ ಮಾದರಿ

ಮರುಭೂಮಿಯಲ್ಲೂ ಮೀನುಗಾರಿಕೆ: ಇದು ಇಸ್ರೇಲ್‌ ಮಾದರಿ

ಇಸ್ರೇಲ್‌ನಲ್ಲಿ ಮಳೆ ಕಡಿಮೆ, ನದಿಗಳೂ ಕಡಿಮೆ. ಹೀಗಿರುವಾಗ ಮೀನು ಸಾಕಾಣಿಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ. ಅಲ್ಲಿನ ವಿಜ್ಞಾನಿಗಳು ‘ಪ್ರತಿ ಹನಿ ನೀರಿಗೂ ಗರಿಷ್ಠ ಲಾಭ’ ಎಂಬ ಮಂತ್ರ ವನ್ನು ಪಾಲಿಸುತ್ತಾರೆ. ಸಮುದ್ರದ ನೀರನ್ನು ಉಪ್ಪುಮುಕ್ತಗೊಳಿಸುವುದು ( Desalination) ಮತ್ತು ಬಳಸಿದ ನೀರನ್ನು ಪುನಃ ಸಂಸ್ಕರಿಸಿ ಮೀನು ಸಾಕಾಣಿಕೆಗೆ ಬಳಸುವುದು ಅಲ್ಲಿನ ತಂತ್ರಜ್ಞಾನದ ವೈಶಿಷ್ಟ್ಯ.ಇಸ್ರೇಲ್ ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು ಪ್ರಪಂಚಕ್ಕೆ ಮಾದರಿ.

Vishweshwar Bhat Column: ನೆಹರು-ವಾಜಪೇಯಿ ಸ್ನೇಹ

Vishweshwar Bhat Column: ನೆಹರು-ವಾಜಪೇಯಿ ಸ್ನೇಹ

ಕ್ರುಶ್ಚೇವ್ ಗೌರವಾರ್ಥ ಏರ್ಪಡಿಸಿದ ಭೋಜನಕೂಟದಲ್ಲಿ ಅತಿಗಣ್ಯ ವ್ಯಕ್ತಿಗಳನ್ನು ಖುದ್ದಾಗಿ ನೆಹರು ಅವರೇ ಪರಿಚಯಿಸುತ್ತಿದ್ದರು. ವಾಜಪೇಯಿ ಅವರ ಸರದಿ ಬಂದಿತು. ಆಗ ನೆಹರು ಕ್ರುಶ್ಚೇವ್ ಅವರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಾ, ‘ಇವರು ನಮ್ಮ ದೇಶದ ಭವಿಷ್ಯದ ಪ್ರಧಾನಿ’ ಎಂದು ಉದ್ಗರಿಸಿ, ಪರಿಚಯಿಸಿದರು. ನೆಹರು ಅವರಿಂದ ವಾಜಪೇಯಿ ಆ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಆ ಮಾತುಗಳನ್ನು ಕೇಳಿ ಕ್ರುಶ್ಚೇವ್‌ಗೂ ಅಚ್ಚರಿಯಾಯಿತು.

Vishweshwar Bhat Column: ಇದು ಹಳೆಯ ವಿನ್ಯಾಸ

Vishweshwar Bhat Column: ಇದು ಹಳೆಯ ವಿನ್ಯಾಸ

ಬೋಯಿಂಗ್ 737 MAX ವಿಮಾನದ ವಿನ್ಯಾಸ ಮತ್ತು ಅದರ ಐತಿಹಾಸಿಕ ಹಿನ್ನೆಲೆ ವಿಮಾನಯಾನ ಲೋಕದ ಅತ್ಯಂತ ವಿವಾದಾತ್ಮಕ ಮತ್ತು ಆಸಕ್ತಿದಾಯಕ ವಿಷಯಗಳಲ್ಲಿ ಒಂದಾಗಿದೆ. 737 MAX ಅಗಿ ಇಂದು ಆಕಾಶದಲ್ಲಿ ಹಾರಾಡುತ್ತಿರುವ ಅತ್ಯಂತ ಸುಧಾರಿತ ವಿಮಾನಗಳಲ್ಲಿ ಒಂದಾಗಿ ಕಾಣಿಸಬಹುದು. ಅದರ ‘ಗ್ಲಾಸ್ ಕಾಕ್‌ಪಿಟ್’, ಅತ್ಯಾಧುನಿಕ ರೆಕ್ಕೆಗಳು ಮತ್ತು ಶಬ್ದರಹಿತ ಶಕ್ತಿಯುತ ಎಂಜಿನ್‌ಗಳನ್ನು ನೋಡಿದರೆ, ನಮಗೆ ಇದು 21ನೇ ಶತಮಾನದ ಅದ್ಭುತ ಎಂದು ಅನಿಸಬಹುದು.

Vishweshwar Bhat Column: ದಂತಕತೆಯಾದ ʼದಂತʼ ರಾಜ: ಒಂದು ಆನೆಯ ಮಹಾಪಯಣ

ದಂತಕತೆಯಾದ ʼದಂತʼ ರಾಜ: ಒಂದು ಆನೆಯ ಮಹಾಪಯಣ

ಜಗತ್ತಿನಾದ್ಯಂತ ಛಾಯಾಗ್ರಾಹಕರು ಮತ್ತು ಪ್ರವಾಸಿಗರು ಮೌಂಟ್ ಕಿಲಿಮಂಜಾರೋ ಪರ್ವತದ ಹಿನ್ನೆಲೆಯಲ್ಲಿ ಕ್ರೇಗ್‌ನ ಒಂದು ಫೋಟೋ ತೆಗೆಯಲು ಕಾದು ಕುಳಿತಿರುತ್ತಿದ್ದರು. ಅವನ ಒಂದು ವಿಶೇಷ ಪೋಸು ಸಿಕ್ಕರೆ ತಮ್ಮ ಪ್ರವಾಸ, ಪ್ರಯತ್ನ ಸಾರ್ಥಕ ಎಂದು ಭಾವಿಸುತ್ತಿದ್ದರು.

Vishweshwar Bhat Column: ಆ ಎಡವಟ್ಟಿನ ಪರಿಣಾಮ

Vishweshwar Bhat Column: ಆ ಎಡವಟ್ಟಿನ ಪರಿಣಾಮ

2009ರಲ್ಲಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಂಭವಿಸಿದ ಈ ದುರಂತವು, ಆಧುನಿಕ ವಿಮಾನಗಳು ಸಣ್ಣ ಸಂವೇದಕಗಳ ಮೇಲೆ ಎಷ್ಟು ಅವಲಂಬಿತವಾಗಿವೆ ಮತ್ತು ಅವು ವಿಫಲ ವಾದಾಗ ಪೈಲಟ್‌ಗಳ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಕನ್ನಡಿಯಾಗಿದೆ. ಜೂನ್ 1, 2009ರಂದು ರಿಯೊ ಡಿ ಜನೈರೊದಿಂದ ಪ್ಯಾರಿಸ್‌ಗೆ ಹೊರಟಿದ್ದ ಏರ್‌ಬಸ್ A330 ವಿಮಾನವು 228 ಪ್ರಯಾಣಿಕರೊಂದಿಗೆ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರುತ್ತಿದ್ದಾಗ ದಿಢೀರನೆ ನಾಪತ್ತೆಯಾಯಿತು.

Vishweshwar Bhat Column: ಏರ್‌ʼಸ್ಪೀಡ್‌ ಮಾಹಿತಿ ಏಕೆ ನಿರ್ಣಾಯಕ ?

ಏರ್‌ʼಸ್ಪೀಡ್‌ ಮಾಹಿತಿ ಏಕೆ ನಿರ್ಣಾಯಕ ?

ಭೂಮಿಯ ಮೇಲೆ ಕಾರು ಚಲಿಸುವಾಗ ಚಕ್ರದ ತಿರುಗುವಿಕೆಯಿಂದ ವೇಗ ತಿಳಿಯುತ್ತದೆ, ಆದರೆ ಆಕಾಶದಲ್ಲಿ ಗಾಳಿಯ ಒತ್ತಡದ ಮೂಲಕ ವೇಗವನ್ನು ಅಳೆಯಲಾಗುತ್ತದೆ. ಇಲ್ಲಿ ಪಿಟೋ ಟ್ಯೂಬ್‌ಗಳ ಪಾತ್ರ ಶುರುವಾಗುತ್ತದೆ. ಪಿಟೋ ಟ್ಯೂಬ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ? ಪಿಟೋ ಟ್ಯೂಬ್ ಎನ್ನುವುದು ವಿಮಾನದ ಹೊರಭಾಗದಲ್ಲಿ (ಸಾಮಾನ್ಯವಾಗಿ ಮೂತಿಯ ಬಳಿ) ಅಳವಡಿಸಲಾಗಿರುವ ಒಂದು ಸಣ್ಣ ಕೊಳವೆ.

Vishweshwar Bhat Column: ಇದು ಪ್ರಜಾಸತ್ತೆಯ ವಿಶೇ಼ಷ

Vishweshwar Bhat Column: ಇದು ಪ್ರಜಾಸತ್ತೆಯ ವಿಶೇ಼ಷ

ಕುರಿ ಕಾಯುತ್ತಾ, ಜಾನಪದ ಕಲೆಯಾದ ’ವೀರ ಕುಣಿತ’ದಲ್ಲಿ ಹೆಜ್ಜೆ ಹಾಕುತ್ತಿದ್ದ ಆ ಹುಡುಗನಿಗೆ ಅಂದು ತಿಳಿದಿರಲಿಲ್ಲ ತಾನು ಮುಂದೊಂದು ದಿನ ರಾಜ್ಯದ ಕೋಟ್ಯಂತರ ಜನರ ಭವಿಷ್ಯ ಬರೆಯುತ್ತೇನೆ ಎಂದು. ತಂದೆಗೆ ಮಗ ಓದುವುದಕ್ಕಿಂತ ಕೃಷಿ ಮಾಡಲಿ ಎಂಬ ಆಸೆ ಇತ್ತು. ಆದರೆ, ಸಿದ್ದರಾಮಯ್ಯನವರಲ್ಲಿ ವಿದ್ಯೆಯ ಹಸಿವಿತ್ತು.

Vishweshwar Bhat Column: ಎಂಜಿನ್‌ ವಿಫಲವಾದರೆ ಮುಂದೇನು ?

Vishweshwar Bhat Column: ಎಂಜಿನ್‌ ವಿಫಲವಾದರೆ ಮುಂದೇನು ?

ಒಂದು ಎಂಜಿನ್ ಕೆಟ್ಟುಹೋದಾಗ ವಿಮಾನವು ಹತ್ತಿರದ ವಿಮಾನ ನಿಲ್ದಾಣವನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ಇದು ನಿರ್ಧರಿಸುತ್ತದೆ. ಹಿಂದಿನ ಕಾಲ ದಲ್ಲಿ, ಸಮುದ್ರದ ಮೇಲೆ ಹಾರಲು ಕನಿಷ್ಠ ಮೂರು ಅಥವಾ ನಾಲ್ಕು ಎಂಜಿನ್‌ಗಳಿರಬೇಕು ಎಂಬ ನಿಯಮವಿತ್ತು. ಆದರೆ ಇಂದಿನ ಎಂಜಿನ್‌ಗಳ ವಿಶ್ವಾಸಾರ್ಹತೆ ಹೆಚ್ಚಾಗಿರುವುದರಿಂದ, ಎರಡು ಎಂಜಿನ್ ಇರುವ ವಿಮಾನಗಳಿಗೂ ಸುದೀರ್ಘ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ

Vishweshwar Bhat Column: ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರ ಕಟ್ಟಬಹುದೆಂಬುದಕ್ಕೆ ಇಸ್ರೇಲ್‌ ನಿದರ್ಶನ

ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರ: ಇಸ್ರೇಲ್‌ ನಿದರ್ಶನ

ಮೊದಲ ಮಹಾಯುದ್ಧದ ನಂತರ, ಈ ಪ್ರದೇಶ ಬ್ರಿಟಿಷರ ಅಧೀನಕ್ಕೆ ಬಂತು. 1917ರ ಬಾಲರ್ ಘೋಷ ಣೆಯು ಯಹೂದಿಗಳಿಗೆ ರಾಷ್ಟ್ರೀಯ ನೆಲೆಯನ್ನು ಸ್ಥಾಪಿಸಲು ಬ್ರಿಟನ್ ಬೆಂಬಲ ನೀಡಿತು. ಆದರೆ, ಇದು ಸ್ಥಳೀಯ ಅರಬ್ ಸಮುದಾಯ ಮತ್ತು ಯಹೂದಿಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು. 1930ರ ದಶಕದಲ್ಲಿ ಜರ್ಮನಿಯಲ್ಲಿ ನಾಜಿಗಳಿಂದ ನಡೆದ ‘ಹೋಲೋಕಾಸ್ಟ್’ (ಯಹೂದಿಗಳ ಸಾಮೂಹಿಕ ಹತ್ಯೆ) ಇಸ್ರೇಲ್ ಸ್ಥಾಪನೆಯ ಅನಿವಾರ್ಯತೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತು. ಲಕ್ಷಾಂತರ ಜನರು ಪ್ರಾಣ ಉಳಿಸಿಕೊಳ್ಳಲು ಪ್ಯಾಲೆಸ್ತೀನ್‌ಗೆ ಬರತೊಡಗಿದರು.

Vishweshwar Bhat Column: ವಿಮಾನದಲ್ಲಿ ವಾಸನೆ: ಆತಂಕ

Vishweshwar Bhat Column: ವಿಮಾನದಲ್ಲಿ ವಾಸನೆ: ಆತಂಕ

ವಿಮಾನದ ಕ್ಯಾಬಿನ್‌ನಲ್ಲಿ ಕಾಣಿಸಿಕೊಂಡ ವಿಚಿತ್ರ ಮತ್ತು ತೀಕ್ಷವಾದ ವಾಸನೆಯು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದರೂ, ವಿಮಾನ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಒಂದು ಸಂಭಾವ್ಯ ಅನಾ‌ ಹುತ ತಪ್ಪಿತು. ಡೆಲ್ಟಾ ಏರ್‌ಲೈ ವಿಮಾನವು ಹಾರುತ್ತಿದ್ದಾಗ, ವಿಮಾನದ ಒಳಭಾಗದಲ್ಲಿ ಹಠಾತ್ತಾಗಿ ಒಂದು ಅಸಹಜ ಮತ್ತು ತೀಕ್ಷವಾದ ವಾಸನೆ ಹರಡಲಾರಂಭಿಸಿತು.

Loading...