ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ವಿಶ್ವೇಶ್ವರ ಭಟ್‌

Editor in Chief, Author, Columnist

[email protected]

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಟೆಕ್ಸ್ಟ್ ಮೆಸೇಜಿಂಗ್ ರಾಜಧಾನಿ

Vishweshwar Bhat Column: ಟೆಕ್ಸ್ಟ್ ಮೆಸೇಜಿಂಗ್ ರಾಜಧಾನಿ

ಫಿಲಿಪೈನ್ಸ್ ದೇಶವನ್ನು ಜಗತ್ತಿನ ಟೆಕ್ಸ್ಟ್ ಮೆಸೇಜಿಂಗ್ ರಾಜಧಾನಿ (Text Messaging Capital of the World) ಎಂದು ಕರೆಯುವುದು ಕೇವಲ ಉತ್ಪ್ರೇಕ್ಷೆಯಲ್ಲ, ಅದು ಅಂಕಿಅಂಶಗಳಿಂದ ಸಾಬೀತಾದ ಸತ್ಯ. ಸುಮಾರು ಏಳು ಸಾವಿರಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಈ ದೇಶದಲ್ಲಿ, ಜನರು ಪರಸ್ಪರ ಸಂಪರ್ಕ ಸಾಧಿಸಲು ಕಂಡುಕೊಂಡ ಅತ್ಯಂತ ಸುಲಭ ಮತ್ತು ಅಗ್ಗದ ಮಾರ್ಗವೆಂದರೆ ಅದು ಎಸ್‌ಎಂಎಸ್ (SMS).

Vishweshwar Bhat Column: ಪಂಡಾ ಎಕ್ಸ್‌ಪ್ರೆಸ್ ಎಂದರೇನು ?

Vishweshwar Bhat Column: ಪಂಡಾ ಎಕ್ಸ್‌ಪ್ರೆಸ್ ಎಂದರೇನು ?

ಪಂಡಾ ಎಕ್ಸ್‌ಪ್ರೆಸ್ ಎಂಬುದು ಇಂದು ವಿಶ್ವದಾದ್ಯಂತ ಚಿರಪರಿಚಿತವಾಗಿರುವ ಅಮೇರಿಕನ್-ಚೈನೀಸ್ ಪಾಕಪದ್ಧತಿಯ ದೈತ್ಯ ಸಂಸ್ಥೆ. ಈ ಸಂಸ್ಥೆಯ ಬೆಳವಣಿಗೆಯ ಕಥೆಯು ಕೇವಲ ಒಂದು ರೆಸ್ಟೋರೆಂಟ್‌ನ ಯಶಸ್ಸಿನ ಕಥೆಯಲ್ಲ. ಅದು ಪರಿಶ್ರಮ, ನಾವೀನ್ಯ ಮತ್ತು ಸಂಸ್ಕೃತಿಗಳ ಸಮ್ಮಿಲನದ ಅದ್ಭುತ ಪಯಣವಾಗಿದೆ.

Vishweshwar Bhat Column: ರಸ್ತೆಗಿಂತ ಆಕಾಶವೇ ಸುರಕ್ಷಿತ: ಗಗನಯಾನದ ಅಸಲಿ ಮುಖ

ರಸ್ತೆಗಿಂತ ಆಕಾಶವೇ ಸುರಕ್ಷಿತ: ಗಗನಯಾನದ ಅಸಲಿ ಮುಖ

ಬಸ್ಸು ಕಂದಕಕ್ಕೆ ಬಿದ್ದರೆ, ಯಾರೂ ಬಸ್ ಹತ್ತದೇ ಇರುವುದಿಲ್ಲ. ರೈಲು ದುರಂತವಾದರೆ, ರೈಲಿನಲ್ಲಿ ಹೋಗಲು ಭಯಪಡುವುದಿಲ್ಲ. ಹಾಗೆ ಕಾರು ಅಪಘಾತ ಸುದ್ದಿ ಓದಿದವರು ಆರಾಮಾಗಿ ಕಾರು ಓಡಿಸಿಕೊಂಡು ಹೋಗುತ್ತಾರೆ. ಆದರೆ ಈ ಮಾತು ವಿಮಾನ ದುರಂತಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಯಾವ ವಿಮಾನಯಾನ ಸಂಸ್ಥೆಯೂ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದಿಲ್ಲ ಅಥವಾ ರಾಜಿ ಮಾಡಿಕೊಳ್ಳುವುದಿಲ್ಲ.

Vishweshwar Bhat Column: ಲಕ್ಷ್ಮಣ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ ?

Vishweshwar Bhat Column: ಲಕ್ಷ್ಮಣ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ ?

ತಮ್ಮ ವೃತ್ತಿಜೀವನದ ಉತ್ತರಾರ್ಧದಲ್ಲಿ ಅವರು ರಾಜಕಾರಣಿಗಳ ವ್ಯಂಗ್ಯಚಿತ್ರ ಗಳನ್ನು ಬಿಡಿಸುವ ಬಗ್ಗೆ ಒಂದು ವಿಶಿಷ್ಟ ಮತ್ತು ತುಸು ಬೇಸರದ ಮಾತನ್ನಾಡಿದ್ದರು. ‘ರಾಜಕಾರಣಿಗಳು ತಾವೇ ಸ್ವತಃ ಕಾರ್ಟೂನ್‌ಗಳಂತೆ ವರ್ತಿಸಲು ಶುರುಮಾಡಿದ ಮೇಲೆ, ನಾನು ಅವರ ವ್ಯಂಗ್ಯಚಿತ್ರ ಬಿಡಿಸುವುದನ್ನು ನಿಲ್ಲಿಸಿದೆ’ ಎಂಬುದು ಅವರ ಮಾರ್ಮಿಕ ನುಡಿಯಾಗಿತ್ತು.

Vishweshwar Bhat Column: ಕ್ರಿಶ್ಚಿಯನ್ ಮುಖ್ಯಮಂತ್ರಿಗಳು

Vishweshwar Bhat Column: ಕ್ರಿಶ್ಚಿಯನ್ ಮುಖ್ಯಮಂತ್ರಿಗಳು

‘ತಮಿಳುನಾಡಿನ ಪ್ರಪ್ರಥಮ ಕ್ರಿಶ್ಚಿಯನ್ ಮುಖ್ಯಮಂತ್ರಿ’ ಎಂದಿದ್ದರೆ ಒಪ್ಪಿಕೊಳ್ಳಬಹು ದಿತ್ತು. ಆದರೆ ಭಾರತದಲ್ಲಿಯೇ, ಕ್ರಿಶ್ಚಿಯನ್ ಸಮುದಾಯದ ನಾಯಕ ರೊಬ್ಬರು ಮುಖ್ಯಮಂತ್ರಿ ಆಗುತ್ತಿರುವುದು ಇದು ಮೊದಲೂ ಅಲ್ಲ, ಎರಡನೆಯದೂ ಅಲ್ಲ. ಈ ಮೊದಲು ಸಾಕಷ್ಟು ಮಂದಿ ಕ್ರಿಶ್ಚಿಯನ್ ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ.

Vishweshwar Bhat Column: ಜೇವಾಕರ್ ಎಂದರೇನು ?

Vishweshwar Bhat Column: ಜೇವಾಕರ್ ಎಂದರೇನು ?

‘ಜೇವಾಕರ್’ ಎಂಬ ಪದವು ಸಂಚಾರ ನಿಯಮಗಳ ಉಲ್ಲಂಘನೆಯನ್ನು ಸೂಚಿಸುವ ಜಾಗತಿಕ ವಾಗಿ ಚಾಲ್ತಿಯಲ್ಲಿರುವ ಒಂದು ಪದ. ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ, ನಿಗದಿತ ಸ್ಥಳಗಳಲ್ಲದೇ ರಸ್ತೆಯ ಮಧ್ಯಭಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ರಸ್ತೆ ದಾಟುವ ಪಾದಚಾರಿ ಗಳನ್ನು ಹೀಗೆ ಕರೆಯಲಾಗುತ್ತದೆ.

Vishweshwar Bhat Column: ವಿಮಾನದ ಕಿಟಿಕಿ ರಹಸ್ಯ

Vishweshwar Bhat Column: ವಿಮಾನದ ಕಿಟಿಕಿ ರಹಸ್ಯ

ಇದು ಸಾಮಾನ್ಯ ಗಾಜಿಗಿಂತ ಹಗುರವಾಗಿದ್ದರೂ, ವಿಪರೀತ ಒತ್ತಡ ಮತ್ತು ತಾಪಮಾನದ ವ್ಯತ್ಯಾಸಗಳನ್ನು ತಡೆದುಕೊಳ್ಳುವ ಗುಣವನ್ನು ಹೊಂದಿದೆ. ಈ ವಿನ್ಯಾಸದಲ್ಲಿ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಮಧ್ಯದ ಪದರದಲ್ಲಿ ಇರುವ ಒಂದು ಸಣ್ಣ ರಂಧ್ರ. ಇದನ್ನು ’ಬ್ರೀದರ್ ಹೋಲ್’ ಅಥವಾ ‘ವೆಂಟ್ ಹೋಲ್’ ಎಂದು ಕರೆಯಲಾಗುತ್ತದೆ.

Vishweshwar Bhat Column: 'ಮಾರಿಯೋ': ಬದುಕಿನ ಕಿಕ್ಕಿರಿದ ದೃಶ್ಯಗಳಿಗೆ ಬಣ್ಣ ಹಚ್ಚಿದ ಮಾಂತ್ರಿಕ

ಮಾರಿಯೋ: ಬದುಕಿನ ಕಿಕ್ಕಿರಿದ ದೃಶ್ಯಗಳಿಗೆ ಬಣ್ಣ ಹಚ್ಚಿದ ಮಾಂತ್ರಿಕ

ನಾನು ಮಾರಿಯೋ ಅವರ ಚಿತ್ರಗಳನ್ನು ನೋಡಿದ್ದು ನನ್ನ ಕಾಲೇಜು ದಿನಗಳಲ್ಲಿ ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಪತ್ರಿಕೆಯಲ್ಲಿ. ಅವರ ಕಾರ್ಟೂನ್‌ಗಳು ಕೇವಲ ಹಾಸ್ಯಕ್ಕೆ ಸೀಮಿತವಾಗಿರದೇ, ಅಂದಿನ ಸಮಾಜದ ಪ್ರತಿಬಿಂಬದಂತಿದ್ದವು. ಮೂಲತಃ ಗೋವಾದವರಾದ ಮಾರಿಯೋ ಅವರಿಗೆ ಮುಂಬೈ ನಾಡಿಮಿಡಿತ ಚೆನ್ನಾಗಿ ತಿಳಿದಿತ್ತು.

Vishweshwar Bhat Column: ನಮ್ಮ ನಡೆ ಯಾರಿಗೆ ಗೊತ್ತಿರಬೇಕು ?

ನಮ್ಮ ನಡೆ ಯಾರಿಗೆ ಗೊತ್ತಿರಬೇಕು ?

ಹಿಂದೆಲ್ಲ ನಮ್ಮ ಸಾಧನೆ, ನೋವು-ನಲಿವು ಕೇವಲ ಆಪ್ತ ವಲಯಕ್ಕೆ ಮಾತ್ರ ಸೀಮಿತವಾಗಿರು ತ್ತಿತ್ತು. ಆದರೆ ಇಂದಿನ ‘ಸೋಷಿಯಲ್ ಮೀಡಿಯಾ’ ಯುಗದಲ್ಲಿ ನಾವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನು ಮಾಡುತ್ತೇವೆ ಎಂಬ ಪ್ರತಿಯೊಂದು ಸಣ್ಣ ವಿಚಾರವನ್ನೂ ಜಗತ್ತಿಗೆ ಸಾರುತ್ತೇವೆ. ಈ ಹಂತದಲ್ಲಿ, ‘ಜೀವನವು ಯಾರಿಗೂ ತಿಳಿಯದಿದ್ದಾಗ ಸುಂದರವಾಗಿರುತ್ತದೆ’ ಎಂಬ ಮಾತು ಅತ್ಯಂತ ಪ್ರಸ್ತುತವೆನಿಸುತ್ತದೆ.

Vishweshwar Bhat Column: ರೋಲಿಂಗ್‌ ಮತ್ತು ಗುಪ್ತನಾಮ

Vishweshwar Bhat Column: ರೋಲಿಂಗ್‌ ಮತ್ತು ಗುಪ್ತನಾಮ

ಹ್ಯಾರಿ ಪಾಟರ್ ಸರಣಿಯ ಮೂಲಕ ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ಲೇಖಕಿ ಯಾಗಿ ಬೆಳೆದ ರೋಲಿಂಗ್ ಅವರಿಗೆ ಒಂದು ಆಸೆ ಇತ್ತು. ತನ್ನ ಹೆಸರಿನ ಪ್ರಭಾವವಿಲ್ಲದೇ, ಕೇವಲ ತನ್ನ ಬರವಣಿಗೆಯ ಗುಣಮಟ್ಟದಿಂದ ಓದುಗರನ್ನು ಸೆಳೆಯಲು ಸಾಧ್ಯವೇ ಎಂದು ಪರೀಕ್ಷಿಸುವುದು ಅವರ ಉದ್ದೇಶವಾಗಿತ್ತು.

Vishweshwar Bhat Column: ಪತ್ನಿಯ ಗೌರವಕ್ಕಾಗಿ ಹೊಡೆತ ತಿಂದ ನೊಬೆಲ್‌ ಪುರಸ್ಕೃತ ಸಾಹಿತಿ !

ಪತ್ನಿಯ ಗೌರವಕ್ಕಾಗಿ ಹೊಡೆತ ತಿಂದ ನೊಬೆಲ್‌ ಪುರಸ್ಕೃತ ಸಾಹಿತಿ !

‘ರಾಜಕೀಯದಲ್ಲಿ ರಾಜಕಾರಣಿಗಳು ರಾಜಕೀಯವನ್ನು ಮಾತ್ರ ಮಾಡುತ್ತಾರೆ. ಆದರೆ ಹೊಡೆದಾಟ ಕ್ಕಿಳಿಯುವುದಿಲ್ಲ. ಪರಸ್ಪರ ಭೇಟಿಯಾದಾಗ ಚೆನ್ನಾಗಿ ಮಾತಾಡುತ್ತಾರೆ. ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುತ್ತಾರೆ. ತಮ್ಮ ಮಧ್ಯೆ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಈ ನಡತೆ ಯನ್ನು ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ’

Vishweshwar Bhat Colum: ಒಂದು ಫಲಕ ಮತ್ತು ಸಂದೇಶ

Vishweshwar Bhat Colum: ಒಂದು ಫಲಕ ಮತ್ತು ಸಂದೇಶ

ಸೋಲು ಮತ್ತು ಗೆಲುವಿನ ನಡುವೆ ಇರುವ ಏಕೈಕ ಸೇತುವೆ ಎಂದರೆ ಅದು ‘ಪ್ರಯತ್ನ’. ನಾವು ಅನೇಕ ಬಾರಿ ಯಶಸ್ವಿ ವ್ಯಕ್ತಿಗಳನ್ನು ನೋಡಿ, ‘ಅವರ ಅದೃಷ್ಟ ಚೆನ್ನಾಗಿತ್ತು, ಹಾಗಾಗಿ ಅವರಿಗೆ ಎಲ್ಲವೂ ಸುಲಭ ವಾಗಿ ಸಿಕ್ಕಿತು’ ಎಂದು ಸುಮ್ಮನಾಗುತ್ತೇವೆ. ಆದರೆ ಅವರ ಯಶಸ್ಸಿನ ಹಿಂದೆ ಅವರು ನಡೆಸಿದ ‘ಬೆನ್ನಟ್ಟುವಿಕೆ’ ನಮಗೆ ಕಾಣಿಸುವುದಿಲ್ಲ.

Vishweshwar Bhat Column: ಶ್ಯಾಡೋಬ್ಯಾನಿಂಗ್ ಎಂದರೇನು ?

Vishweshwar Bhat Column: ಶ್ಯಾಡೋಬ್ಯಾನಿಂಗ್ ಎಂದರೇನು ?

ಅಷ್ಟಕ್ಕೂ ಶ್ಯಾಡೋಬ್ಯಾನಿಂಗ್ ಎಂದರೇನು? ಸಾಮಾನ್ಯವಾಗಿ ಫೇಸ್ಬುಕ್, ಇನ್ಸ್ಟಾಗ್ರಾಮ, ಎಕ್ಸ್ (ಟ್ವಿಟ್ಟರ್) ಅಥವಾ ಯೂಟ್ಯೂಬ್‌ನಂಥ ವೇದಿಕೆಗಳು ತಮ್ಮ ನಿಯಮಗಳನ್ನು ಉಲ್ಲಂಘಿಸುವ ಬಳಕೆದಾರರ ಖಾತೆಯನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತವೆ. ಆದರೆ ಶ್ಯಾಡೋಬ್ಯಾನಿಂಗ್‌ನಲ್ಲಿ ನಿಮ್ಮ ಖಾತೆ ಚಾಲನೆಯಲ್ಲಿರುತ್ತದೆ, ನೀವು ಪೋಸ್ಟ್‌ಗಳನ್ನು ಹಾಕಬಹುದು, ಕಾಮೆಂಟ್ ಮಾಡ ಬಹುದು. ಆದರೆ, ನಿಮ್ಮ ಪೋಸ್ಟ್‌ಗಳು ಇತರರಿಗೆ, ವಿಶೇಷವಾಗಿ ನಿಮ್ಮನ್ನು ಫಾಲೋ ಮಾಡದವರಿಗೆ ಕಾಣಿಸುವುದೇ ಇಲ್ಲ.

Vishweshwar Bhat Column: ಒಂದು ಗಾದೆಯ ಕುರಿತು

Vishweshwar Bhat Column: ಒಂದು ಗಾದೆಯ ಕುರಿತು

ಒಂದು ಮರ ಬೆಳೆದು ಹೆಮ್ಮರವಾಗಲು ಸಮಯ ಬೇಕು. ಹಾಗೆಯೇ ನಮ್ಮ ಯಶಸ್ಸು ಕೂಡ ರಾತ್ರೋ ರಾತ್ರಿ ಸಿಗುವಂಥದ್ದಲ್ಲ. ಅದಕ್ಕೆ ತಾಳ್ಮೆ ಮತ್ತು ನಿರಂತರ ಪ್ರಯತ್ನದ ಅಗತ್ಯವಿದೆ. ಇಂದು ನೀವು ಹಾಕುವ ಒಂದು ಸಣ್ಣ ಹೆಜ್ಜೆ ಅಥವಾ ನೀವು ಬಿತ್ತುವ ಒಂದು ಬೀಜ, ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

Vishweshwar Bhat Column: ಕರಡು ತಿದ್ದುವ ಸಂತಸ

Vishweshwar Bhat Column: ಕರಡು ತಿದ್ದುವ ಸಂತಸ

ಪ್ರೂಫ್ ರೀಡರ್ ಕೇವಲ ತಪ್ಪು ತಿದ್ದುವವನಲ್ಲ, ಆತ ಭಾಷೆಯ ಘನತೆಯನ್ನು ಎತ್ತಿ ಹಿಡಿಯುವ ಕಾವಲುಗಾರ. ಲೇಖಕನು ಭಾವಾವೇಶದಲ್ಲಿ ಬರೆಯುವಾಗ ವ್ಯಾಕರಣದ ನಿಯಮಗಳನ್ನು ಮರೆತಿರಬಹುದು. ಆದರೆ, ಕರಡು ತಿದ್ದಿ ಓದುವವನು ಬಹಳ ನಿಷ್ಠುರ ಮತ್ತು ತಾಳ್ಮೆಯ ವ್ಯಕ್ತಿ. ಹ್ರಸ್ವ-ದೀರ್ಘಗಳ ಬಳಕೆ, ವಿರಾಮ ಚಿಹ್ನೆಗಳ ಸರಿಯಾದ ಸ್ಥಾನ ಇವುಗಳನ್ನು ಸರಿಪಡಿಸಿದಾಗ ಆ ಬರಹಕ್ಕೆ ಒಂದು ಶಿಸ್ತು ಬರುತ್ತದೆ. ‌

Vishweshwar Bhat Column: ಇಂಗ್ಲಿಷ್‌ ಪದಗಳ ಅನುಕೂಲ, ಸಾಧ್ಯತೆ ಮತ್ತು ಡಾಗ್-ಇಯರಿಂಗ್

ಇಂಗ್ಲಿಷ್‌ ಪದಗಳ ಅನುಕೂಲ, ಸಾಧ್ಯತೆ ಮತ್ತು ಡಾಗ್-ಇಯರಿಂಗ್

ಒಂದು ಪದವನ್ನು ಯಾವ ರೀತಿ ಬೇಕಾದರೂ ಬಳಸಿಕೊಳ್ಳಬಹುದು ಎಂಬುದಕ್ಕೆ ಇದು ನಿದರ್ಶನ. ಪುಸ್ತಕಗಳನ್ನು ಪ್ರೀತಿಸುವವರಿಗೆ ಅದರ ಪ್ರತಿಯೊಂದು ಪುಟವೂ ಅಮೂಲ್ಯ. ಆದರೆ ಓದುವ ಭರದಲ್ಲಿ ಅಥವಾ ನಿಲ್ಲಿಸಿದ ಗುರುತಿಗಾಗಿ (ಬುಕ್ ಮಾರ್ಕ್) ನಾವು ಮಾಡುವ ಒಂದು ಸಣ್ಣ ಕೆಲಸವೇ ಈ ‘ಡಾಗ್-ಇಯರಿಂಗ್’.

Vishweshwar Bhat Column: ಜಪಾನಿಯರ ಹೆಸರುಗಳು

Vishweshwar Bhat Column: ಜಪಾನಿಯರ ಹೆಸರುಗಳು

ಜಪಾನಿ ಭಾಷೆಯಲ್ಲಿ ಹೆಸರು ಬರೆಯುವಾಗ ಸಾಮಾನ್ಯವಾಗಿ ಕುಟುಂಬದ ಹೆಸರನ್ನು ಮೊದಲು ಬರೆಯುತ್ತಾರೆ ಮತ್ತು ನಂತರ ವೈಯಕ್ತಿಕ ಹೆಸರನ್ನು. ಜಪಾನಿ ಭಾಷೆಯಲ್ಲಿ ಮೂರು ಮುಖ್ಯ ಲಿಪಿಗಳನ್ನು ಬಳಸಲಾಗುತ್ತದೆ. ಚೀನಿ ಮೂಲದ ಲಿಪಿ ಕಾಂಜಿ, ಜಪಾನಿ ಮೂಲದ ಶಬ್ದಲಿಪಿ ಹಿರಾಗಾನ ಮತ್ತು ವಿದೇಶಿ ಶಬ್ದಗಳನ್ನು ಬರೆಯಲು ಬಳಸುವ ಲಿಪಿ ಕಟಕಾನ. ಹೆಸರಿನಲ್ಲಿ ಹೆಚ್ಚು ವೇಳೆ ಕಾಂಜಿ ಅಕ್ಷರಗಳನ್ನೇ ಬಳಸಲಾಗುತ್ತದೆ.

Vishweshwar Bhat Column: ಹಠಾತ್‌ ಆಕ್ಸಿಜನ್‌ ಮಾಸ್ಕ್‌ ಬಿದ್ದರೆ..

Vishweshwar Bhat Column: ಹಠಾತ್‌ ಆಕ್ಸಿಜನ್‌ ಮಾಸ್ಕ್‌ ಬಿದ್ದರೆ..

ಎತ್ತರದಲ್ಲಿ ಹಾರುವಾಗ ವಿಮಾನದೊಳಗಿನ ಗಾಳಿಯ ಒತ್ತಡ ( Cabin Pressure ) ಕಡಿಮೆ ಯಾದಾಗ ಆಮ್ಲಜನಕದ ಮುಖವಾಡಗಳು (Oxygen Masks) ತಾವಾಗಿಯೇ ಕೆಳಕ್ಕೆ ಬೀಳುತ್ತವೆ. ಇಂಥ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಮೊದಲು ಏನು ಮಾಡಬೇಕು? ಅದರ ಹಿಂದಿನ ವೈಜ್ಞಾನಿಕ ಕಾರಣಗಳೇನು? ಆಮ್ಲಜನಕದ ಮುಖವಾಡಗಳು ಕೆಳಕ್ಕೆ ಬಿದ್ದ ತಕ್ಷಣ, ಪೈಲಟ್‌ಗಳು ಅಥವಾ ಗಗನಸಖಿಯರು ನೀಡುವ ಪ್ರಮುಖ ಸೂಚನೆ ಎಂದರೆ ‘ಬೇರೆಯವರಿಗೆ ಸಹಾಯ ಮಾಡುವ ಮೊದಲು ನಿಮ್ಮ ಬಗ್ಗೆ ಯೋಚಿಸಿ.

Vishweshwar Bhat Column: ಇಂಗ್ಲಿಷ್‌ ಭಾಷೆ ಸೊರಗುತ್ತಿಲ್ಲ, ಅಸಲಿಗೆ ಅದು ಪಾರ್ಟಿ ಮಾಡುತ್ತಿದೆ !

ಇಂಗ್ಲಿಷ್‌ ಭಾಷೆ ಸೊರಗುತ್ತಿಲ್ಲ, ಅಸಲಿಗೆ ಅದು ಪಾರ್ಟಿ ಮಾಡುತ್ತಿದೆ !

‘ಇಂಗ್ಲಿಷ್ ಒಂದು ಭಾಷೆಯೋ, ಒಂದು ಕೌಶಲವೋ?’ ಎಂಬ ಪ್ರಶ್ನೆಯಿಂದ ಹಿಡಿದು, ಅದು ಪ್ರಾದೇಶಿಕ ಭಾಷೆಗಳ ಮೇಲೆ ಬೀರುತ್ತಿರುವ ಪ್ರಭಾವದವರೆಗೆ ಅನೇಕ ಸ್ವಾರಸ್ಯಕರ ಸಂಗತಿಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು. ಇಂಗ್ಲಿಷ್ ಭಾಷೆಯ ಈ ‘ಪ್ರಜಾ ಪ್ರಭುತ್ವೀಕರಣ’ ಅಥವಾ ಅದರ ರೂಪಾಂತರವು, ಅದು ಒಂದು ಕಾಲದ ಶಿಸ್ತಿನ ಬ್ರಿಟಿಷ್ ಶಾಲಾ ಮಾಸ್ತರ ನಿಂದ ಈಗ ‘ಮಾಸ್’ ಹೀರೋ ಆಗಿ ಬದಲಾದ ಕಥೆಯಂತೆ ಕೇಳಿಸುತ್ತದೆ.

Vishweshwar Bhat Column: ಇದು ʼಹಾರುವ ದತ್ತಾಂಶ ಕೇಂದ್ರʼ

Vishweshwar Bhat Column: ಇದು ʼಹಾರುವ ದತ್ತಾಂಶ ಕೇಂದ್ರʼ

ವಿಮಾನದ ಕಾಕ್‌ಪಿಟ್‌ನಿಂದ ಹಿಡಿದು ರೆಕ್ಕೆಗಳ ತುದಿಯವರೆಗೆ, ಎಂಜಿನ್ ನಿಯಂತ್ರಣ ದಿಂದ ಹಿಡಿದು ಪ್ರತಿಯೊಬ್ಬ ಪ್ರಯಾಣಿಕನ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ನವರೆಗೆ ಮಾಹಿತಿ ಮತ್ತು ವಿದ್ಯುತ್ ಹರಿಯಲು ಈ ಜಾಲ ಅತ್ಯಗತ್ಯ. ಇಷ್ಟು ದೊಡ್ಡ ಪ್ರಮಾಣದ ತಾಮ್ರದ ತಂತಿಗಳು ವಿಮಾನದ ತೂಕವನ್ನು ವಿಪರೀತ ಹೆಚ್ಚಿಸುತ್ತವೆ.

Vishweshwar Bhat Column: ಸತತ ಪ್ರಯತ್ನ, ನಂಬಿಕೆಯಿದ್ದರೆ...

Vishweshwar Bhat Column: ಸತತ ಪ್ರಯತ್ನ, ನಂಬಿಕೆಯಿದ್ದರೆ...

ಮ್ಯಾರಾಥಾನ್ ಇತಿಹಾಸದಲ್ಲಿ ‘ಸಬ್-2 ಅವರ್’ (2 ಗಂಟೆಗಳಿಗಿಂತ ಕಡಿಮೆ ಅವಧಿ) ಎಂಬುದು ಕೇವಲ ಒಂದು ಅಂಕಿ-ಅಂಶವಾಗಿಲ್ಲ. ಅದು ಮಾನವ ದೇಹಕ್ಕೆ ಪ್ರಕೃತಿ ವಿಧಿಸಿದ ಅಂತಿಮ ಗೆರೆ ಎಂದು ಭಾವಿಸಲಾಗಿದೆ. ಆದರೆ, ಸಾವೆ ಅವರು 1 ಗಂಟೆ 59 ನಿಮಿಷ 30 ಸೆಕೆಂಡುಗಳಲ್ಲಿ ಹಾಗೂ ಕೆಜೆಲ್ಚಾ ಅವರು 1 ಗಂಟೆ 59 ನಿಮಿಷ 41 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ‘ಅಸಾಧ್ಯ’ ಎಂಬ ಗೋಡೆಯನ್ನು ಪುಡಿಪುಡಿ ಮಾಡಿದ್ದಾರೆ.

Vishweshwar Bhat Column: ನೆಟ್ ವರ್ಕಿಂಗ್ ಅಂದ್ರೆ ಏನು ?

Vishweshwar Bhat Column: ನೆಟ್ ವರ್ಕಿಂಗ್ ಅಂದ್ರೆ ಏನು ?

ಬಲವಾದ ನೆಟ್ ವರ್ಕಿಂಗ್ ಎಂದರೆ ಸಂಖ್ಯೆಯನ್ನು ಹೆಚ್ಚಿಸುವುದಲ್ಲ, ಬದಲಿಗೆ ಗಾಢವಾದ ಸಂಬಂಧಗಳನ್ನು ಬೆಳೆಸುವುದು. ಯಾರೋ ಒಬ್ಬರು ಇನ್ನೊಬ್ಬರ ಮುಂದೆ ನಿಮ್ಮ ಬಗ್ಗೆ ಮಾತನಾಡುವಾಗ,‘ಅವರು ಈ ಕೆಲಸಕ್ಕೆ ಅತ್ಯಂತ ಸೂಕ್ತ ವ್ಯಕ್ತಿ’ ಎಂದು ಹೇಳಿದರೆ, ಅದು ನೀವು ಗಳಿಸಿದ ಅತಿದೊಡ್ಡ ಆಸ್ತಿ. ನೀವು ಇಲ್ಲದಿದ್ದಾಗಲೂ ನಿಮ್ಮ ಪರವಾಗಿ ನಿಮ್ಮ ಕೆಲಸ ಅಥವಾ ವ್ಯಕ್ತಿತ್ವ ಮಾತನಾಡಬೇಕು.

Vishweshwar Bhat Column: ಲಗೇಜ್‌ ನಿರ್ವಹಣೆ

Vishweshwar Bhat Column: ಲಗೇಜ್‌ ನಿರ್ವಹಣೆ

ಜಪಾನಿನಲ್ಲಿ ಒಂದು ವಿಶೇಷ ಲಗೇಜ್ ಸರ್ವಿಸ್ ಇದೆ. ನಾನು ಕ್ಯೊಟೋದಲ್ಲಿ ಉಳಿದುಕೊಂಡ ಹೋಟೆಲಿನಲ್ಲಿಯೇ ನನ್ನ ಬ್ಯಾಗುಗಳನ್ನು ನೀಡಿದರೆ ಹಾಗೂ ಮುಂದೆ ನಾನು ಉಳಿಯಲಿರುವ ಟೋಕಿಯೋ ಹೋಟೆಲಿನ ವಿವರಗಳನ್ನು ಕೊಟ್ಟರೆ, ಅದೇ ದಿನ ಸಾಯಂಕಾಲ ಅಥವಾ ಮರುದಿನ ಬೆಳಗಿನ ಹೊತ್ತಿಗೆ ಬ್ಯಾಗುಗಳು ಬಂದಿರುತ್ತವೆ.

Vishweshwar Bhat Column: ಸ್ಟಾರ್‌ ಹೋಟೆಲಿನಲ್ಲಿ ಕೆಲಸ ಮಾಡಿದವರು ಸಿಕ್ಕಾಗ ಏನು ಮಾಡಬೇಕು ?

ಸ್ಟಾರ್‌ ಹೋಟೆಲಿನಲ್ಲಿ ಕೆಲಸ ಮಾಡಿದವರು ಸಿಕ್ಕಾಗ ಏನು ಮಾಡಬೇಕು ?

ಎಲ್ಲರಿಗೂ ತಾವು ಹೆಚ್ಚಿನ ಹಣವನ್ನು ತೆತ್ತು ಅಲ್ಲಿಗೆ ಬಂದಿರುತ್ತೇವೆ ಎಂಬ ಭಾವನೆ ಇರುತ್ತದೆ. ಹೀಗಾಗಿ ತಮಗೆ ವಿಶೇಷ ಸವಲತ್ತು, ಸೌಕರ್ಯ, ಗಮನ ಮತ್ತು ಮರ್ಯಾದೆ ಸಿಗಬೇಕು ಎಂದು ಅಪೇಕ್ಷಿಸುತ್ತಾರೆ. ಇವುಗಳ ಪೈಕಿ ಸ್ವಲ್ಪ ವ್ಯತ್ಯಯವಾದರೂ ಕಿರಿಕಿರಿ ಮಾಡುತ್ತಾರೆ ಅಥವಾ ಜಗಳವಾಡಲು ಹಿಂದೇಟು ಹಾಕುವುದಿಲ್ಲ.

Loading...