ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ವಿಶ್ವೇಶ್ವರ ಭಟ್‌

Editor in Chief, Author, Columnist

[email protected]

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ನಡೆಯುವಾಗ ನಮ್ಮ ಶೂಲೇಸ್‌ ತನ್ನಷ್ಟಕ್ಕೆ ಬಿಚ್ಚಿಕೊಳ್ಳುತ್ತದಲ್ಲ, ಏಕೆ ?

ನಡೆಯುವಾಗ ನಮ್ಮ ಶೂಲೇಸ್‌ ತನ್ನಷ್ಟಕ್ಕೆ ಬಿಚ್ಚಿಕೊಳ್ಳುತ್ತದಲ್ಲ, ಏಕೆ ?

ಎಲ್ಲ ಗಂಟುಗಳು ಒಂದೇ ರೀತಿ ಇರುವುದಿಲ್ಲ. ಶೂಲೇಸ್ ಕಟ್ಟುವಲ್ಲಿ ಎರಡು ಪ್ರಮುಖ ವಿಧಗಳಿವೆ. ಮೊದಲನೆಯದು, ಗಟ್ಟಿ ಗಂಟು. ಇದರಲ್ಲಿ ಮೇಲೆ ಹಾಕುವ ಗಂಟು ಮತ್ತು ಕೆಳಗಿನ ಗಂಟು ವಿರುದ್ಧ ದಿಕ್ಕಿನಲ್ಲಿರುತ್ತವೆ. ಇದು ಸುಲಭವಾಗಿ ಬಿಚ್ಚಿಕೊಳ್ಳುವುದಿಲ್ಲ. ಎರಡನೆಯದು, ದುರ್ಬಲ ಗಂಟು. ಇದರಲ್ಲಿ ಎರಡೂ ಗಂಟುಗಳು ಒಂದೇ ದಿಕ್ಕಿನಲ್ಲಿರುತ್ತವೆ. ಇದು ಓಡುವಾಗ ಅಥವಾ ನಡೆಯುವಾಗ ಅತಿ ಬೇಗನೆ ಸಡಿಲಗೊಳ್ಳುತ್ತದೆ.

Vishweshwar Bhat Column: ಆವಕಾಡೊ ಮತ್ತು ಅಪರಾಧ

Vishweshwar Bhat Column: ಆವಕಾಡೊ ಮತ್ತು ಅಪರಾಧ

ಕೋಸ್ಟರಿಕಾದಂಥ ದೇಶಗಳಲ್ಲಿ ನಿರ್ದಿಷ್ಟ ತಳಿಯ ಆವಕಾಡೊಗಳ ಮೇಲೆ ನಿಷೇಧ ಹೇರಿದಾಗ, ಗಡಿ ದಾಟಿ ಹಣ್ಣುಗಳನ್ನು ಕಳ್ಳಸಾಗಣೆ ಮಾಡುವ ಮಾಫಿಯಾಗಳು ಹುಟ್ಟಿಕೊಂಡವು. ಆವಕಾಡೊ ಅಪ ರಾಧದ ಅತ್ಯಂತ ಭಯಾನಕ ರೂಪ ಕಾಣ ಸಿಗುವುದು ಮೆಕ್ಸಿಕೊದಲ್ಲಿ. ಜಗತ್ತಿನ ಮೂರನೇ ಒಂದು ಭಾಗ ದಷ್ಟು ಆವಕಾಡೊ ಮೆಕ್ಸಿಕೊದ ‘ಮಿಕೋಕಾನ್’ ಪ್ರಾಂತ್ಯದಿಂದ ಬರುತ್ತದೆ.

Vishweshwar Bhat Column: ‘ಗಿಲೋಟಿನ್’ ಎಂದರೇನು ?

Vishweshwar Bhat Column: ‘ಗಿಲೋಟಿನ್’ ಎಂದರೇನು ?

‘ಗಿಲೋಟಿನ್’ ಎಂಬ ಪದವು ಮೂಲತಃ ಸಂಸತ್ತಿಗೆ ಸಂಬಂಧಿಸಿದ್ದಲ್ಲ. ಇದು ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಅಪರಾಧಿಗಳ ಶಿರಚ್ಛೇದ ಮಾಡಲು ಬಳಸುತ್ತಿದ್ದ ಒಂದು ಮರಣ ದಂಡನೆ ಯಂತ್ರದ ಹೆಸರು. ಜೋಸೆಫ್ ಇಗ್ನೇಸ್ ಗಿಲೋಟಿನ್ ಎಂಬ ವೈದ್ಯನ ಹೆಸರಿನಿಂದ ಬಂದ ಈ ಯಂತ್ರವು, ಮೇಲಿನಿಂದ ಕೆಳಕ್ಕೆ ಬೀಳುವ ಚೂಪಾದ ಬ್ಲೇಡ್ ಮೂಲಕ ಕ್ಷಣಾರ್ಧದಲ್ಲಿ ವ್ಯಕ್ತಿಯ ತಲೆಯನ್ನು ದೇಹದಿಂದ ಬೇರ್ಪಡಿಸುತ್ತಿತ್ತು. ‌

Vishweshwar Bhat Column: ಒಂದು ಕಾಲವಿತ್ತು, ಅಮೆರಿಕ ಅಧ್ಯಕ್ಷ ಸೀನಿದರೆ ವಿಶ್ವಕ್ಕೆ ಶೀತವಾಗುತ್ತಿತ್ತು...ಈಗ ?

ಅಮೆರಿಕ ಅಧ್ಯಕ್ಷ ಸೀನಿದರೆ ವಿಶ್ವಕ್ಕೆ ಶೀತವಾಗುತ್ತಿತ್ತು...ಈಗ ?

ಅಮೆರಿಕದ ಖ್ಯಾತ ರಾಜಕೀಯ ವಿಶ್ಲೇಷಕ ಕ್ರಿಸ್ಟೋಫರ್ ಬರ್ರ‍ೋನ್ ಒಮ್ಮೆ ಹೀಗೆ ಬರೆದಿದ್ದ - ಅಧ್ಯಕ್ಷರು ಭಾಷಣದ ಮಧ್ಯೆ ನೀರು ಕುಡಿದರೆ, ಮಾರನೇ ದಿನದ ಪತ್ರಿಕೆಗಳಲ್ಲಿ ‘ಅಧ್ಯಕ್ಷರ ಗಂಟಲು ಒಣಗಲು ರಷ್ಯಾದ ಒತ್ತಡವೇ ಕಾರಣವೇ?’ ಅಥವಾ ‘ಅಧ್ಯಕ್ಷರು ಬಳಸಿದ ನೀರಿನ ಬಾಟಲಿ ಯಾವ ಕಂಪನಿಯದ್ದು? ಆ ಕಂಪನಿಯ ಷೇರು ಬೆಲೆ ಏರುತ್ತದೆಯೇ?’ ಎಂಬ ಲೇಖನಗಳು ಬರುತ್ತವೆ!

Vishweshwar Bhat Column: ಇರಾನಿನಲ್ಲಿ ಸಂಸ್ಕೃತ

Vishweshwar Bhat Column: ಇರಾನಿನಲ್ಲಿ ಸಂಸ್ಕೃತ

ಇರಾನ್‌ನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಕೆ ಮತ್ತು ಸಂಶೋಧನೆಗೆ ದಶಕಗಳ ಇತಿಹಾಸವಿದೆ. ಇರಾನ್ ಮತ್ತು ಭಾರತ ನೆರೆಹೊರೆಯ ರಾಷ್ಟ್ರಗಳಲ್ಲ. ಆದರೆ, ಇವುಗಳ ಭಾಷಾ ಮೂಲ ವೂ ಒಂದೇ. ಸಂಸ್ಕೃತ ಮತ್ತು ಪ್ರಾಚೀನ ಪರ್ಷಿಯನ್ ಭಾಷೆಯಾದ ‘ಅವೆಸ್ತಾನ್’ ನಡುವೆ ಅವಿನಾಭಾವ ಸಂಬಂಧವಿದೆ.

Vishweshwar Bhat Column: ನಾಯಿಗೆ ತತ್ವಶಾಸ್ತ್ರ ಹೇಳುವುದು ಹೇಗೆ ?

Vishweshwar Bhat Column: ನಾಯಿಗೆ ತತ್ವಶಾಸ್ತ್ರ ಹೇಳುವುದು ಹೇಗೆ ?

ನಾಯಿಗೆ ತತ್ವಶಾಸ್ತ್ರ ಕಲಿಸುವುದು ಎಂದರೆ ಓದುಗರಿಗೆ ಅತ್ಯಂತ ಸುಲಭವಾಗಿ ವಿಷಯವನ್ನು ಮನವರಿಕೆ ಮಾಡಿಕೊಡುವುದು ಎಂದರ್ಥ. ಪುಸ್ತಕವು ಜೀವನದ ಮೂಲಭೂತ ಪ್ರಶ್ನೆಗಳನ್ನು ನಾಲ್ಕು ಪ್ರಮುಖ ಭಾಗಗಳಾಗಿ ವಿಂಗಡಿಸಿದೆ. ಮೊದಲನೆಯದು, ನೈತಿಕತೆ. ’ಒಳ್ಳೆಯದು ಎಂದರೆ ಏನು?’, ’ನಾವು ಏಕೆ ಧರ್ಮವಾಗಿ ಬದುಕಬೇಕು?’ ಎಂಬ ಪ್ರಶ್ನೆಗಳನ್ನು ಮಾಂಟಿ ತನ್ನ ನಾಯಿ ಜಗತ್ತಿನ ಉದಾಹರಣೆಗಳ ಮೂಲಕ (ಉದಾಹರಣೆಗೆ, ಇನ್ನೊಂದು ನಾಯಿಯ ಆಹಾರ ಕದಿಯುವುದು ಸರಿಯೇ?) ಚರ್ಚಿಸುತ್ತದೆ.

Vishweshwar Bhat Column: ಅಂಬಾಸಿಡರ್‌ ಕಾರಿನ ಮೂಲಕ ಭಾರತ

Vishweshwar Bhat Column: ಅಂಬಾಸಿಡರ್‌ ಕಾರಿನ ಮೂಲಕ ಭಾರತ

ಸ್ವಯಂ-ಕಲಿತ ಛಾಯಾಚಿತ್ರಗ್ರಾಹಕರಾದ ಇವರು ಭಾರತದಲ್ಲಿ ಕೆಲಸ ಮಾಡುತ್ತಾ ಪ್ಯಾರಿಸ್, ಲಂಡನ್ ಮತ್ತು ನ್ಯೂಯಾರ್ಕ್ ನಗರಗಳಲ್ಲಿ ವಾಸವಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಇವರು ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್, ದ ನ್ಯೂಯಾರ್ಕ್ ಟೈಮ್ಸ್, ದ ನ್ಯೂಯಾ ರ್ಕರ್ ಮತ್ತು ಟೈಮ್ ನಿಯತಕಾಲಿಕೆಗಳಿಗಾಗಿ ಕೆಲಸ ಮಾಡಿದ್ದರು. ‌

Vishweshwar Bhat Column: ಒಬ್ಬನೇ ಒಂದು ಆನೆ ತಿನ್ನಬಹುದು

Vishweshwar Bhat Column: ಒಬ್ಬನೇ ಒಂದು ಆನೆ ತಿನ್ನಬಹುದು

ಚೇತನ್ ಭಗತ್ ಅವರ ಜನಪ್ರಿಯ ಕೃತಿಗಳಂದಾದ ‘11 Rules For Life’ ಪುಸ್ತಕದಲ್ಲಿ ಒಂದು ಅಧ್ಯಾಯದ ಹೆಸರು ’Eat the Elephant' (ಆನೆಯನ್ನು ತಿನ್ನುವುದು). ಹೀಗಂದರೇನು? ಜೀವನದಲ್ಲಿ ದೊಡ್ಡ ಗುರಿಗಳನ್ನು ಕಂಡಾಗ ನಾವು ಅನೇಕ ಬಾರಿ ಗಾಬರಿಯಾಗುತ್ತೇವೆ. ಆ ಗುರಿಯ ಅಗಾಧತೆ ನಮ್ಮನ್ನು ಆವರಿಸಿ, ಕೆಲಸವನ್ನು ಆರಂಭಿಸುವ ಮೊದಲೇ ನಾವು ಸೋತು ಕುಳಿತು ಬಿಡುತ್ತೇವೆ.

Vishweshwar Bhat Column: ಫ್ರಾಂಜ್ ಕಾಫ್ಕಾ ಮತ್ತು ಒಂದು ಗೊಂಬೆಯ ಕಥೆ

ಫ್ರಾಂಜ್ ಕಾಫ್ಕಾ ಮತ್ತು ಒಂದು ಗೊಂಬೆಯ ಕಥೆ

1923ರಲ್ಲಿ, ತಾನು ಸಾಯುವುದಕ್ಕೆ ಕೇವಲ ಒಂದು ವರ್ಷ ಮೊದಲು, ಕಾಫ್ಕಾ ಬರ್ಲಿನ್‌ನ ಸ್ಟೆಗ್ಲಿಟ್ಜ್ ಪಾರ್ಕ್‌ನಲ್ಲಿ ತನ್ನ ಗೆಳತಿ ಡೋರಾ ಡೈಮಂಟ್ ಜತೆ ನಡೆಯುತ್ತಿದ್ದ. ಆಗ ಅವನಿಗೆ ಅಳುತ್ತಿದ್ದ ಸಣ್ಣ ಹುಡುಗಿ ಕಂಡಳು. ವಿಚಾರಿಸಿದಾಗ, ಅವಳು ತನ್ನ ಪ್ರೀತಿಯ ಗೊಂಬೆ ಯನ್ನು ಕಳೆದುಕೊಂಡಿದ್ದಾಳೆಂದು ತಿಳಿಯಿತು. ‌

Vishweshwar Bhat Column: ಜಪಾನಿನ ಟ್ಯಾಕ್ಸಿ

Vishweshwar Bhat Column: ಜಪಾನಿನ ಟ್ಯಾಕ್ಸಿ

ಜಪಾನಿನ ಚಾಲಕರು ರಸ್ತೆಯಲ್ಲಿ ಸಾಗುವಾಗ ಅನಗತ್ಯವಾಗಿ ಹಾರ್ನ್ ಮಾಡುವುದಿಲ್ಲ. ಪ್ರಯಾಣಿಕರೊಂದಿಗೆ ಮಾತನಾಡುವಾಗ ಅತ್ಯಂತ ವಿನಮ್ರವಾಗಿ ನಡೆದುಕೊಳ್ಳುತ್ತಾರೆ. ನೀವು ಟ್ಯಾಕ್ಸಿ ಹತ್ತಿದಾಗ ಮತ್ತು ಇಳಿಯುವಾಗ ಅವರು ನೀಡುವ ಗೌರವಯುತ ವಂದನೆ (ಬಾಗುವುದು) ನಿಮ್ಮ ಮನ ಗೆಲ್ಲುವುದು ಖಚಿತ.

Vishweshwar Bhat Column: ಕಾರಿನ ಬಣ್ಣವೂ, ದೇಶದ ಆರ್ಥಿಕತೆಯೂ

Vishweshwar Bhat Column: ಕಾರಿನ ಬಣ್ಣವೂ, ದೇಶದ ಆರ್ಥಿಕತೆಯೂ

ಹಳದಿ ಅಥವಾ ಗಾಢ ಕೆಂಪು ಬಣ್ಣದ ಕಾರುಗಳು ಅಂದಿನ ಜನರ ಆಶಾವಾದಿ ಮತ್ತು ಬಂಡಾಯ ದ ಮನಸ್ಥಿತಿಯನ್ನು ಪ್ರತಿನಿದಿಸುತ್ತಿದ್ದವು. 2010ರ ನಂತರ ಬಿಳಿ ಬಣ್ಣದ ಕಾರುಗಳ ಸಂಖ್ಯೆ ಹಠಾತ್ ಏರಿಕೆಯಾಯಿತು. ಐಫೋನ್ ಮತ್ತು ಆಧುನಿಕ ಗೆಜೆಟ್‌ಗಳ ಪ್ರಭಾವದಿಂದ ‘ಬಿಳಿ’ ಬಣ್ಣವು ಸ್ವಚ್ಛತೆ, ತಂತ್ರಜ್ಞಾನ ಮತ್ತು ನಾವೀನ್ಯದ ಸಂಕೇತವಾಯಿತು.

Vishweshwar Bhat Column: ಕಲಾವಿದ ಶಿಳ್ಳೆಯನ್ನು ಪ್ರತಿಭಟಿಸುತ್ತಾನೆ ಅಂದ್ರೆ ಪ್ರೇಕ್ಷಕರನ್ನು ಅವಮಾನಿಸುತ್ತಾನೆ ಎಂದಲ್ಲ !

ಕಲಾವಿದ ಶಿಳ್ಳೆಯನ್ನು ಪ್ರತಿಭಟಿಸುತ್ತಾನೆ ಅಂದ್ರೆ...

ಕಲಾವಿದರು ಕಲೆಯನ್ನು ತಿದ್ದುತ್ತಾ ಹೊಳಪುಗೊಳಿಸಿದರೆ, ಕಲೆಯು ತನ್ನ ಪೊರೆ ಕಳಚುತ್ತಾ ಅಂತರಂಗವನ್ನು ಬಿಟ್ಟುಕೊಡುತ್ತಾ ಪ್ರೇಕ್ಷಕನನ್ನು ತಿದ್ದುತ್ತದೆ. ಅವರಂದು ಸಭ್ಯ, ಶ್ರೀಮಂತ ಸಂಸ್ಕಾರವನ್ನು ಉದ್ದೀಪಿಸುತ್ತದೆ. ಒಂದು ಕಲೆಯನ್ನು ಆರಾಧನಾ ಭಾವದಿಂದ ನೋಡಲು ಸಾಧ್ಯವಾಗುವುದು ಇಂಥ ಸಾಕ್ಷಾತ್ಕಾರವಾದಾಗಲೇ.

Vishweshwar Bhat Column: ದಂತವೈದ್ಯರ ಉಪದೇಶ

Vishweshwar Bhat Column: ದಂತವೈದ್ಯರ ಉಪದೇಶ

ಪ್ರಕಾಶ ಅಯ್ಯರ್ ಬರೆದ How Come No One Told Me That? ಪುಸ್ತಕವನ್ನು ಓದುತ್ತಿದ್ದೆ. ಈ ಕೃತಿಯಲ್ಲಿ ‘ದಂತವೈದ್ಯರ ಉಪದೇಶ’ ಎಂಬ ಒಂದು ಸಣ್ಣ ಅಧ್ಯಾಯವಿದೆ. ಅದರಲ್ಲಿ ಲೇಖಕರು ಒಂದು ಸರಳ ಸಂಗತಿಯನ್ನು ವಿವರಿಸಿದ್ದಾರೆ. ಅಯ್ಯರ್ ಹೇಳುತ್ತಾರೆ - ನನ್ನ ದಂತವೈದ್ಯರು ಸ್ವಲ್ಪ ಡಿಫರೆಂಟ್. ಅವರು ಕೆಲಸ ಮಾಡುವುದಕ್ಕಿಂತ ಹೆಚ್ಚು ಮಾತನಾಡು ತ್ತಾರೆ. ಅವರ ಕೈಯಲ್ಲಿ ಡ್ರಿಲ್ಲಿಂಗ್ ಮಿಷನ್ ಇದ್ದರೂ, ಬಾಯಿ ಮಾತ್ರ ಹರಟೆಯ ಫ್ಯಾಕ್ಟರಿ.

Vishweshwar Bhat Column: ದ ಲಾಸ್ಟ್ ಮೀಟಿಂಗ್ ಥಿಯರಿ ಎಂದರೇನು ?

ದ ಲಾಸ್ಟ್ ಮೀಟಿಂಗ್ ಥಿಯರಿ ಎಂದರೇನು ?

‘ದ ಲಾಸ್ಟ್ ಮೀಟಿಂಗ್ ಥಿಯರಿ’ ಎಂದರೇನು? ಇದು ಜೀವನದ ಅತ್ಯಂತ ಗಹನ ವಾದ, ಭಾವನಾ ತ್ಮಕವಾದ ಮತ್ತು ಅಷ್ಟೇ ಕಟುವಾದ ಸತ್ಯವನ್ನು ಸಾರುವ ಒಂದು ಪರಿ ಕಲ್ಪನೆ. ಇದು ಯಾವುದೇ ವಿಜ್ಞಾನದ ಪ್ರಯೋಗಾಲಯದಲ್ಲಿ ಸಾಬೀತಾದ ಸಿದ್ಧಾಂತವಲ್ಲ, ಬದಲಿಗೆ ಮನುಷ್ಯನ ಸಂಬಂಧಗಳು, ಸಮಯದ ಅನಿಶ್ಚಿತತೆ ಮತ್ತು ಮರಣದ ಅನಿವಾರ್ಯತೆಯ ಸುತ್ತ ಹೆಣೆಯಲಾದ ಒಂದು ಜೀವನ ದರ್ಶನ ಎನ್ನಬಹುದು.

Vishweshwar Bhat Column: ‘ಗ್ರೇ ಎಮರ್ಜೆನ್ಸಿ’ ಎಂದರೇನು ?

Vishweshwar Bhat Column: ‘ಗ್ರೇ ಎಮರ್ಜೆನ್ಸಿ’ ಎಂದರೇನು ?

ಗ್ರೇ ಎಮರ್ಜೆನ್ಸಿಯು ಕೇವಲ ಆರೋಗ್ಯಕ್ಕೆ ಸಂಬಂಧಿಸಿದ್ದಲ್ಲ, ಇದು ದೇಶದ ಬೆನ್ನೆಲುಬನ್ನೇ ನಡುಗಿಸಬಲ್ಲದು. ಯುವಜನರ ಸಂಖ್ಯೆ ಕಡಿಮೆಯಾದಾಗ ಕಾರ್ಖಾನೆಗಳು, ಐಟಿ ಕಂಪನಿಗಳು ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರ ಕೊರತೆ ಉಂಟಾಗುತ್ತದೆ. ನಿವೃತ್ತರಾದವರಿಗೆ ಪೆನ್ಷನ್ (ನಿವೃತ್ತಿ ವೇತನ) ನೀಡಲು ಸರಕಾರಕ್ಕೆ ಹೆಚ್ಚಿನ ಹಣದ ಅಗತ್ಯ ವಿರುತ್ತದೆ. ಆದರೆ ತೆರಿಗೆ ಕಟ್ಟುವ ಯುವಜನರ ಸಂಖ್ಯೆ ಕಡಿಮೆಯಿರುವುದರಿಂದ ಬೊಕ್ಕಸಕ್ಕೆ ಹೊರೆಯಾಗುತ್ತದೆ.

Vishweshwar Bhat Column: ಮುಖದ ಮೇಲಿನ ಕಲೆ ಪರಿಣಾಮ

Vishweshwar Bhat Column: ಮುಖದ ಮೇಲಿನ ಕಲೆ ಪರಿಣಾಮ

ಉದ್ಯೋಗ ಅಥವಾ ಸಾಮಾಜಿಕ ಸಂವಹನದಲ್ಲಿ, ಮುಖದ ಮೇಲೆ ಕಲೆ ಇರುವವರನ್ನು ಜನರು ಅರಿವಿಲ್ಲದೆಯೇ ‘ಅಪರಾಧಿ’ ಮನೋಭಾವದವರು ಅಥವಾ ‘ಕಡಿಮೆ ಸಮರ್ಥರು’ ಎಂದು ತಪ್ಪಾಗಿ ಭಾವಿಸಬಹುದು. ಮನೋವಿಜ್ಞಾನಿಗಳ ಪ್ರಕಾರ, ಮುಖದ ಮೇಲಿನ ಗಾಯದ ಗುರುತು ಕೇವಲ ಒಂದು ಚರ್ಮದ ಹಾನಿಯಲ್ಲ; ಅದು ಆ ವ್ಯಕ್ತಿಯ ಹಳೆಯ ಕಥೆಯನ್ನು ಹೇಳುತ್ತದೆ.

Vishweshwar Bhat Column: ಮಂಕಿ ಶೋಲ್ಡರ್‌ ಕುಡಿದಿದ್ದೀರಾ ಅಂತ ಕೇಳಿ, ನಂತರ ಏನಂದ್ರು ಹೇಳಿ !

ಮಂಕಿ ಶೋಲ್ಡರ್‌ ಕುಡಿದಿದ್ದೀರಾ ಅಂತ ಕೇಳಿ, ನಂತರ ಏನಂದ್ರು ಹೇಳಿ !

‘ವಿಲಿಯಂ ಗ್ರಾಂಟ್ ಅಂಡ್ ಸನ್ಸ್’ ಕಂಪನಿಯು ತನ್ನ ಹೊಸ ವಿಸ್ಕಿಗೆ ಈ ಹೆಸರನ್ನು ಇಡಲು ನಿರ್ಧರಿ ಸಿತು, ಅದರ ಹಿಂದೆ ಒಂದು ಉದಾತ್ತ ಉದ್ದೇಶವಿತ್ತು. ಆಧುನಿಕ ಕಾಲದಲ್ಲಿ ಯಂತ್ರಗಳು ಬಂದಿರುವು ದರಿಂದ ಈಗ ಯಾರೂ ‘ಮಂಕಿ ಶೋಲ್ಡರ್’ ಸಮಸ್ಯೆಯಿಂದ ಬಳಲುತ್ತಿಲ್ಲ. ಆದರೆ, ವಿಸ್ಕಿ ಉದ್ಯಮವು ಇಂದು ಈ ಮಟ್ಟಕ್ಕೆ ಬೆಳೆಯಲು ಅಂದು ಬೆವರು ಸುರಿಸಿದ ಆ ಹಳೆಯ ತಲೆಮಾರಿನ ಕಾರ್ಮಿಕರ ತ್ಯಾಗ ಮತ್ತು ಕಠಿಣ ಪರಿಶ್ರಮವೇ ಕಾರಣ.‌

Vishweshwar Bhat Column: ಖಾಲಿ ದೋಣಿ ಮನಸ್ಥಿತಿ ಎಂದರೇನು ?

Vishweshwar Bhat Column: ಖಾಲಿ ದೋಣಿ ಮನಸ್ಥಿತಿ ಎಂದರೇನು ?

ಏನಿದು ಖಾಲಿ ದೋಣಿಯ ಮನಸ್ಥಿತಿ? ಇದು ಪ್ರಾಚೀನ ಚೀನಿ ದಾರ್ಶನಿಕ ಜುವಾಂಗ್ ಝು ನೀಡಿದ ಅತ್ಯಂತ ಪ್ರಭಾವಶಾಲಿ ಮತ್ತು ಜೀವನದೃಷ್ಟಿಯನ್ನೇ ಬದಲಿಸಬಲ್ಲ ಒಂದು ರೂಪಕ ಎನ್ನಬಹುದು. ಈ ಪರಿಕಲ್ಪನೆಯು ನಮಗೆ ಕೋಪ, ಅಹಂಕಾರ ಮತ್ತು ಒತ್ತಡವನ್ನು ನಿರ್ವಹಿಸಲು ಒಂದು ಅದ್ಭುತ ಮಾರ್ಗವನ್ನು ತೋರಿಸಿ ಕೊಡುತ್ತದೆ.

Vishweshwar Bhat Column: ಕೈದಿ ನಂಬರ್‌ 46664

Vishweshwar Bhat Column: ಕೈದಿ ನಂಬರ್‌ 46664

‘46664’ ಈ ಸಂಖ್ಯೆಯ ಮೂಲವು ದಕ್ಷಿಣ ಆಫ್ರಿಕಾದ ರಾಬನ್ ದ್ವೀಪದ ಸೆರೆಮನೆಯಲ್ಲಿದೆ. 1964ರಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದಕ್ಕಾಗಿ ನೆಲ್ಸನ್ ಮಂಡೇಲಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ರಾಬನ್ ದ್ವೀಪದ ಸೆರೆಮನೆಗೆ ಬಂದಾಗ ಮಂಡೇಲಾ ಅವರಿಗೆ ಕೈದಿ ನಂಬರ್ 466 ನೀಡಲಾಯಿತು.

Vishweshwar Bhat Column: ಭಾರತದ ಚರಿತ್ರೆಯ ಮಹಾ ತಿರುವಿನ ತಾಣದಲ್ಲಿ ನಿಂತಾಗ..!

ಭಾರತದ ಚರಿತ್ರೆಯ ಮಹಾ ತಿರುವಿನ ತಾಣದಲ್ಲಿ ನಿಂತಾಗ..!

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಬಂದಾಗ ಅದರ ಪ್ರಾಥಮಿಕ ಉದ್ದೇಶ ಕೇವಲ ‘ವ್ಯಾಪಾರ’ವಾಗಿತ್ತು. ಆದರೆ, ಹದಿನೆಂಟನೇ ಶತಮಾನದ ಬಂಗಾಳದ ರಾಜಕೀಯ ಅಸ್ಥಿರತೆಯು ಅವರಲ್ಲಿ ಆಡಳಿತದ ಆಸೆಯನ್ನು ಚಿಗುರಿಸಿತು. ಸಿರಾಜ್-ಉದ್-ದೌಲನ ಆಪ್ತ ವಲಯದಲ್ಲಿ ಉಂಟಾದ ಬಿರುಕನ್ನು ಬ್ರಿಟಿಷರು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಳ್ಳಲು ಹೊಂಚು ಹಾಕಿತು.

Vishweshwar Bhat Column: ಮನುಷ್ಯ-ನಾಯಿಯ ಸಂಬಂಧ

Vishweshwar Bhat Column: ಮನುಷ್ಯ-ನಾಯಿಯ ಸಂಬಂಧ

ಸುಮಾರು ಹತ್ತು ವರ್ಷಗಳ ಹಿಂದೆ, ನಾನು ‘ಲಸ್ಸಿ ಕಮ್ಸ್ ಹೋಮ್’ (Lassie Come Home) ಎಂಬ ಸಿನಿಮಾ ನೋಡಿದ್ದೆ. ಅದು ಪ್ರಾಣಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಒಂದು ಅಪರೂಪದ ಸಿನಿಮಾ. ಬಡತನದಿಂದ ಯಾಕ್‌ಶೈರ್‌ನ ಒಂದು ಕುಟುಂಬವು ತಮ್ಮ ಪ್ರೀತಿಯ ನಾಯಿ ಲಸ್ಸಿಯನ್ನು ಒಬ್ಬ ಶ್ರೀಮಂತನಿಗೆ ಮಾರಾಟ ಮಾಡುತ್ತದೆ.

V‌ishweshwar Bhat Column: ನಕಲಿ ಪೈಲಟ್

V‌ishweshwar Bhat Column: ನಕಲಿ ಪೈಲಟ್

ಸಾವಿರಾರು ಪ್ರಯಾಣಿಕರ ಜೀವದ ಜತೆ ಆಟವಾಡಿದ ಈ ಘಟನೆ, ವಿಮಾನಯಾನ ಸುರಕ್ಷತೆ ಯ ಬಗ್ಗೆ ಗಂಭೀರವಾದ ಕಳವಳಗಳನ್ನು ಮೂಡಿಸಿತ್ತು. ವಿಲಿಯಂ ಚಾಂಡ್ಲರ್ ಸುಮಾರು ಎರಡು ದಶಕಗಳ ಕಾಲ SAA ನಲ್ಲಿ ಪೈಲಟ್ ಆಗಿ ಕೆಲಸ ಮಾಡಿದ. ಅವನಿಗೆ ಕಮರ್ಷಿ ಯಲ್ ಪೈಲಟ್ ಲೈಸೆನ್ಸ್ ಮಾತ್ರ ಇತ್ತು. ಆದರೆ, ವಾಣಿಜ್ಯ ವಿಮಾನಗಳ ಕ್ಯಾಪ್ಟನ್ ಆಗಲು ಕಡ್ಡಾಯವಾಗಿ ಬೇಕಾಗುವ ಅಡ್ವಾನ್ಸ್‌ಡ್ ಏರ್ʼಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್ ಲೈಸೆನ್ಸ್ (ATPL) ಅವನ ಬಳಿ ಇರಲಿಲ್ಲ.

Vishweshwar Bhat Column: ಆತ ಬದುಕುಳಿದಿದ್ದೇ ಪವಾಡ

ಆತ ಬದುಕುಳಿದಿದ್ದೇ ಪವಾಡ

ಸೆಪ್ಟೆಂಬರ್ 21, 2025ರ ಭಾನುವಾರ ಬೆಳಗ್ಗೆ. ಕಾಮ್ ಏರ್‌ನ ವಿಮಾನ (RQ-4401) ಕಾಬೂಲ್‌ ನಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಒಂದು ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿತು. ಹದಿಮೂರು ವರ್ಷದ ಆಫ್ಘನ್ ಬಾಲಕ ನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ನ ಒಳಗಡೆ ನುಗ್ಗಿ, ಟಿಕೆಟ್ ಇಲ್ಲದೇ ಕಾಬೂಲ್‌ನಿಂದ ದೆಹಲಿಗೆ ಪಯಣಿಸಿದ್ದು ಬೆಳಕಿಗೆ ಬಂದಿತು.

Vishweshwar Bhat Column: ಇವಾಲ್ವ್ ಬ್ಯಾಕ್‌ ಎಂದರೇನು ?

Vishweshwar Bhat Column: ಇವಾಲ್ವ್ ಬ್ಯಾಕ್‌ ಎಂದರೇನು ?

ನಾನು ಹಂಪಿಯಲ್ಲಿರುವ ‘ಇವಾಲ್ವ್ ಬ್ಯಾಕ್’ ಎಂಬ ರೆಸಾರ್ಟಿನಲ್ಲಿ ಉಳಿದಿದ್ದೆ. ಇದರ ಹೆಸರೇ ಭಿನ್ನ ಮತ್ತು ವಿಶಿಷ್ಟವಾಗಿದೆ. ಈ ರೆಸಾರ್ಟ್ ಸಮೂಹವನ್ನು ಮೊದಲು ‘ಆರೇಂಜ್ ಕೌಂಟಿ’ ಎಂದು ಕರೆಯಲಾಗುತ್ತಿತ್ತು. ‘ಇವಾಲ್ವ್ ಬ್ಯಾಕ್’ ಎಂಬ ಹೆಸರಿನಿಂದ ಕರೆಯಲು ಯಾವುದೋ ಬಲವಾದ ಕಾರಣ ಇದ್ದಿರಲೇಬೇಕು.

Loading...