ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಐದಾರು ಪ್ಯಾರಗಳಲ್ಲಿ ಡಾ.ಕಲಾಂ

Vishweshwar Bhat Column: ಐದಾರು ಪ್ಯಾರಗಳಲ್ಲಿ ಡಾ.ಕಲಾಂ

ಇತ್ತೀಚೆಗೆ ನನ್ನ ಹಳೆಯ ಕಡತದಲ್ಲಿ ಸಿಂಗ್ ಬರೆದ ಆ ಬರಹ ಸಿಕ್ಕಿತು. ಅವರು ಡಾ.ಕಲಾಂ ಕುರಿತು ಹೀಗೆ ಬರೆದಿದ್ದರು: ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದ ಹನ್ನೊಂದನೇ ರಾಷ್ಟ್ರಪತಿ ಯಾಗಿ ಐದು ವರ್ಷ ಪೂರ್ಣ ಅವಧಿ ಅಧಿಕಾರ ಪೂರೈಸಲಿರುವ ಡಾ.ಅಬ್ದುಲ್ ಕಲಾಂ ನಿವೃತ್ತ ರಾಗಲಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಿದ ಮುಸ್ಲಿಮರ ಪೈಕಿ ಡಾ.ಕಲಾಂ ಮೂರನೆಯವ ರಾಗಿದ್ದಾರೆ.

Vishweshwar Bhat Column: ವಿಮಾನದ ಬಾಗಿಲ ರಚನೆ

Vishweshwar Bhat Column: ವಿಮಾನದ ಬಾಗಿಲ ರಚನೆ

ವಿಮಾನದ ಬಾಗಿಲುಗಳ ವಿನ್ಯಾಸವು ಕೇವಲ ಪ್ರಯಾಣಿಕರು ಒಳಬರುವುದು- ಹೊರ ಹೋಗು ವುದನ್ನು ಗಮನದಲ್ಲಿರಿಕೊಂಡು ಮಾಡಿದ್ದಲ್ಲ. ಅದಕ್ಕಿಂತ ಹೆಚ್ಚಾಗಿದೆ. ಇದು ವಿಮಾನಯಾನ ಎಂಜಿನಿಯರಿಂಗ್‌ನ ಅತ್ಯಂತ ಸಂಕೀರ್ಣ ಮತ್ತು ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ವಿಮಾನಗಳು ಹಾರುವ ಅತ್ಯಂತ ಎತ್ತರದಲ್ಲಿ, ಹೊರಗಿನ ವಾತಾವರಣದ ಒತ್ತಡ ಮತ್ತು ಆಮ್ಲಜನಕದ ಮಟ್ಟವು ಮಾನವನ ಜೀವನಕ್ಕೆ ಮಾರಕವಾಗಿರುತ್ತದೆ.

Vishweshwar Bhat Column: ಪತ್ರಕರ್ತರು ಟಂಕಿಸೋದಕ್ಕೂ ಸೈ, ಟೀಕಿಸೋದಕ್ಕೂ ಸೈ !

ಪತ್ರಕರ್ತರು ಟಂಕಿಸೋದಕ್ಕೂ ಸೈ, ಟೀಕಿಸೋದಕ್ಕೂ ಸೈ !

ಪತ್ರಕರ್ತರನ್ನು ಎದುರಿಸಬೇಕಲ್ಲ ಎಂದು ಮೊದಲೇ ಯೋಚಿಸಿದ್ದರೆ, ಆತ ಬುದ್ಧನಾಗುವ ಯೋಚನೆಯನ್ನೇ ಕೈ ಬಿಡುತ್ತಿದ್ದ. ಪತ್ರಕರ್ತರು ಅವನನ್ನು ಸುಮ್ಮನೆ ಬಿಡ್ತಾ ಇದ್ದರಾ?" ಓಶೋ ಮಾತಿನಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ, ಗೌತಮ ಬುದ್ಧನೇನಾದರೂ ಈಗಿರುವಂತೆ 247 ಟಿವಿ ಪತ್ರಕರ್ತರಿಗೇನಾದರೂ ಸಿಕ್ಕಿದ್ದರೆ?! ಮುಗಿಯಿತು ಕತೆ. ಬುದ್ಧ ಒಂದು ಚಾನೆಲ್ ಸ್ಟುಡಿಯೋಕ್ಕೆ ಹೋಗಿ ಬಂದು ಸುಸ್ತಾಗಿ ಸಾಕಪ್ಪಾ ಸಾಕು ಎಂದು ಹೇಳಿ ಬಿಡುತ್ತಿದ್ದ.

Vishweshwara Bhat Column: ರಿವರ್ಸ್‌ ಗೇಯರ್‌ ವ್ಯವಸ್ಥೆ ಏಕಿಲ್ಲ ?

Vishweshwara Bhat Column: ರಿವರ್ಸ್‌ ಗೇಯರ್‌ ವ್ಯವಸ್ಥೆ ಏಕಿಲ್ಲ ?

ವಿಮಾನಗಳಿಗೆ ರಿವರ್ಸ್ ಗಿಯರ್ ವ್ಯವಸ್ಥೆ ಏಕೆ ಇಲ್ಲ ಮತ್ತು ವಿಮಾನಗಳು ಹಿಂದಕ್ಕೆ ಚಲಿಸಲು ಏನು ಮಾಡುತ್ತಾರೆ? ಕಾರುಗಳು ಅಥವಾ ಇತರ ವಾಹನಗಳಂತೆ, ಚಕ್ರಗಳಿಗೆ ನೇರವಾಗಿ ಎಂಜಿನ್ ಶಕ್ತಿಯನ್ನು ವರ್ಗಾಯಿಸುವ ಗಿಯರ್ ವ್ಯವಸ್ಥೆಯನ್ನು ವಿಮಾನಗಳು ಹೊಂದಿರುವುದಿಲ್ಲ. ವಿಮಾನಗಳು ಚಲಿಸುವುದು ಮುಖ್ಯವಾಗಿ ಅವುಗಳ ಎಂಜಿನ್‌ಗಳು ಉತ್ಪಾದಿಸುವ ಒತ್ತಡದಿಂದ (Thrust). ವಿಮಾನಗಳಲ್ಲಿ ರಿವರ್ಸ್ ಗಿಯರ್ ವ್ಯವಸ್ಥೆ ಇಲ್ಲದಿರಲು ಮತ್ತು ಅದನ್ನು ಬಳಸದಿ ರಲು ಹಲವಾರು ಪ್ರಮುಖ ಕಾರಣಗಳಿವೆ.

Vishweshwar Bhat Column: ಡಾ.ಸಿಂಗ್‌ ವಿತ್ತ ಸಚಿವರಾಗಿದ್ದು ಹೇಗೆ ?

Vishweshwar Bhat Column: ಡಾ.ಸಿಂಗ್‌ ವಿತ್ತ ಸಚಿವರಾಗಿದ್ದು ಹೇಗೆ ?

1980-82 ರವರೆಗೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ವೆಂಕಟರಾಮನ್ ಹಣಕಾಸು ಸಚಿವರಾಗಿದ್ದರು. ಅವರು ಹಣಕಾಸು ಇಲಾಖೆಯ ಒಳಮರ್ಮವನ್ನು ಅರಿತ ವರು. ಈ ಸಂದರ್ಭದಲ್ಲಿ ಯಾರನ್ನು ಹಣಕಾಸು ಸಚಿವರನ್ನಾಗಿ ಮಾಡಿದರೆ ಒಳ್ಳೆಯದು ಎಂದು ನರಸಿಂಹರಾಯರು ಕೇಳಿದಾಗ, ವೆಂಕಟರಾಮನ್ ಎರಡು ಹೆಸರುಗಳನ್ನು ಸೂಚಿಸಿದರು. ಮೊದಲನೆಯವರು ಐ.ಜಿ.ಪಟೇಲ್. ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದವರು. ಎರಡನೆಯವರು ಡಾ.ಮನಮೋಹನ್ ಸಿಂಗ್.

Vishweshwar Bhat Column: ಜಪಾನಿನಲ್ಲಿ ಫ್ಯಾಕ್ಸ್‌ ಇನ್ನೂ ಜೀವಂತ

Vishweshwar Bhat Column: ಜಪಾನಿನಲ್ಲಿ ಫ್ಯಾಕ್ಸ್‌ ಇನ್ನೂ ಜೀವಂತ

ಜಪಾನಿನಲ್ಲಿ ಎಲ್ಲ ರಸ್ತೆಗಳಿಗೆ ಹೆಸರಿಲ್ಲದಿರುವುದರಿಂದ ತಕ್ಷಣ ಪತ್ತೆ ಹಚ್ಚುವುದು ಕಷ್ಟ. ಹೀಗಾಗಿ ಪದೇ ಪದೆ ಸ್ಮಾರ್ಟ್ ಫೋನ್ ನೋಡುವುದು ಅನಿವಾರ್ಯ. ಜಗತ್ತಿನ ಬಹುತೇಕ ದೇಶಗಳಲ್ಲಿ ಫ್ಯಾಕ್ಸ್‌ ಮಷೀನುಗಳು ಕಾಲಗರ್ಭವನ್ನು ಸೇರಿದ್ದರೂ, ತಾಂತ್ರಿಕವಾಗಿ ಮುಂದುವರಿದಿರುವ ಜಪಾನಿನಲ್ಲಿ ಅವು ಇನ್ನೂ ಜೀವಂತವಾಗಿವೆ.

Vishweshwar Bhat Column: ಕಿಬೂತ್: ಇಸ್ರೇಲಿನ ಮರುಭೂಮಿಯಲ್ಲಿ ಹುಟ್ಟಿದ ಸಮಾಜದ ಮಾದರಿ

ಕಿಬೂತ್: ಇಸ್ರೇಲಿನ ಮರುಭೂಮಿಯಲ್ಲಿ ಹುಟ್ಟಿದ ಸಮಾಜದ ಮಾದರಿ

ಕಿಬೂತ್‌ನ ಎಲ್ಲ ಆಸ್ತಿಗಳು, ಭೂಮಿ, ಕಾರ್ಖಾನೆಗಳು, ಉಪಕರಣಗಳು ಮತ್ತು ಕೃಷಿ ಸಂಪನ್ಮೂಲ ಗಳು ಸಮುದಾಯಕ್ಕೆ ಸಾಮೂಹಿಕವಾಗಿ ಸೇರಿರುತ್ತವೆ. ಯಾರೊಬ್ಬರೂ ವೈಯಕ್ತಿಕವಾಗಿ ಆಸ್ತಿ ಯನ್ನು ಹೊಂದಿರುವುದಿಲ್ಲ. ಕಿಬೂತ್‌ನ ಸದಸ್ಯರೆಲ್ಲರೂ ಸಮಾನತೆಯ ತತ್ವದಲ್ಲಿ ಒಟ್ಟಿಗೆ ವಾಸಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ.

Vishweshwar Bhat Column: ಪೈಲಟ್‌ʼಗೆ ಮಾತ್ರ ಗೊತ್ತು

Vishweshwar Bhat Column: ಪೈಲಟ್‌ʼಗೆ ಮಾತ್ರ ಗೊತ್ತು

ಸ್ವಯಂ ಪೈಲಟ್ (Autopilot) ಬಹುತೇಕ ಎಲ್ಲವನ್ನೂ ಮಾಡುತ್ತದೆ ಎಂಬುದು. ವಿಸ್ತೃತ ವಿಮಾನಗಳಲ್ಲಿ, ವಿಮಾನ ಚಾಲಕರು ನಿಯಂತ್ರಣ ಗಳನ್ನು ಹಿಡಿದಿರುವುದು ತೀರಾ ಕಡಿಮೆ. ಆಧುನಿಕ ವಿಮಾನಗಳು ಅತ್ಯಾಧುನಿಕ ‘ಸ್ವಯಂ ಪೈಲಟ್’ ವ್ಯವಸ್ಥೆಯನ್ನು ಹೊಂದಿದ್ದು, ವಿಮಾನ ಹಾರಾಟದ ಬಹುಪಾಲು ಅವಧಿಯನ್ನು ಅದುವೇ ನಿರ್ವಹಿಸುತ್ತದೆ.

Vishweshwar Bhat Column: ಕಾಕ್‌ʼಪಿಟ್‌ʼನಲ್ಲಿ ಯಾರು ಹೋಗಬಹುದು ?

ಕಾಕ್‌ʼಪಿಟ್‌ʼನಲ್ಲಿ ಯಾರು ಹೋಗಬಹುದು ?

ಇದು ವಿಮಾನದ ನರಮಂಡಲವಿದ್ದಂತೆ. ಇಲ್ಲಿ ತರಬೇತಿ ಪಡೆದ ವಿಮಾನ ಸಿಬ್ಬಂದಿ ಮಾತ್ರ ಇರಲು ಅನುಮತಿ ಇದೆ. ನಿಯಮದ ಪ್ರಕಾರ, ಕಾಕ್‌ಪಿಟ್ ನೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಕ್ಕೆ ಅವಕಾಶವಿಲ್ಲ, ಏಕೆಂದರೆ ಇದು ವಿಮಾನದ ಸುರಕ್ಷತೆಗೆ ಮತ್ತು ಒಟ್ಟಾರೆಯಾಗಿ ವಾಯು ಯಾನ ಭದ್ರತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ.

Vishweshwar Bhat Column: ರಿಸ್ಕ್‌ ಇದ್ದಾಗಲೇ ಬದುಕು ಮತ್ತಷ್ಟು ರೋಚಕ

Vishweshwar Bhat Column: ರಿಸ್ಕ್‌ ಇದ್ದಾಗಲೇ ಬದುಕು ಮತ್ತಷ್ಟು ರೋಚಕ

ಸಂಭ್ರಮಗಳೆಲ್ಲ ಒಂದಾದ ಸಂದರ್ಭವೇ ಬದುಕಾಗಿದೆ ಎನಿಸುತ್ತದೆ ನಿಜ. ಆದರೆ, ನಂತರದ ಒಂದೆರಡು ದಿನಗಳಲ್ಲಿ ಬದುಕೆಂಬುದು ಏನೇನೂ ಇಲ್ಲದ ಮರುಭೂಮಿ ಎಂದೂ ಅನಿಸಿ ಬಿಡುತ್ತದೆ. ಡಿಯರ್ ಕಿಡ್ಸ್, ನಿಮಗೇ ಗೊತ್ತಿರುವಂತೆ, ಒಂದೊಂದು ಕ್ಷಣವನ್ನೂ ತೀವ್ರವಾಗಿ ಅನುಭವಿಸಬೇಕು ಎಂದು ಆಸೆಪಡುವವನು ನಾನು.

Vishweshwar Bhat Column: ವಿಂಡ್‌ ಸಾಕ್‌ ಗಳ ಪಾತ್ರ

Vishweshwar Bhat Column: ವಿಂಡ್‌ ಸಾಕ್‌ ಗಳ ಪಾತ್ರ

ಇದು ವಿಮಾನಯಾನ ಮತ್ತು ಅನೇಕ ಕೈಗಾರಿಕಾ ಪ್ರದೇಶಗಳಲ್ಲಿ ಕಂಡುಬರುವ ಒಂದು ಸರಳ, ಆದರೆ ಅತ್ಯಂತ ಮಹತ್ವದ ಸಾಧನ. ನೀವು ವಿಮಾನ ನಿಲ್ದಾಣ, ಹೆಲಿಪ್ಯಾಡ್ (ಹೆಲಿಕಾಪ್ಟರ್ ಇಳಿಯುವ ಸ್ಥಳ) ಬಳಿ ಪ್ರಕಾಶಮಾನವಾದ, ಶಂಕುವಿನಾಕಾರದ (ಕೋನ್ ಆಕಾರದ) ಬಟ್ಟೆಯ ರಚನೆಯು ಗಾಳಿಯಲ್ಲಿ ಹಾರಾಡುವುದನ್ನು ನೋಡಿರಬಹುದು. ಅದೇ ವಿಂಡ್‌ಸಾಕ್.

Vishweshwar Bhat Column: ವಿಮಾನದ ತೂಕ ಅಳೆಯುವುದು

Vishweshwar Bhat Column: ವಿಮಾನದ ತೂಕ ಅಳೆಯುವುದು

ಪ್ರಯಾಣಿಕರು ಮತ್ತು ಬ್ಯಾಗೇಜ್‌ಗಳನ್ನು ವಿಮಾನಯಾನ ಸಂಸ್ಥೆಗಳು ಹೇಗೆ ತೂಕ ಮಾಡು ತ್ತವೆ? ನಾಗರಿಕ ವಿಮಾನಯಾನದಲ್ಲಿ ಸುರಕ್ಷತೆ ಮತ್ತು ಇಂಧನ ದಕ್ಷತೆಯನ್ನು ಖಚಿತಪಡಿಸಿ ಕೊಳ್ಳಲು ಪ್ರಯಾಣಿಕರು ಮತ್ತು ಅವರ ಬ್ಯಾಗೇಜ್‌ಗಳ ತೂಕವನ್ನು ಲೆಕ್ಕ ಹಾಕುವುದು ಒಂದು ಅತ್ಯಂತ ನಿರ್ಣಾಯಕ ಪ್ರಕ್ರಿಯೆ.

Vishweshwarbhat Column: ಅಮೆರಿಕದಲ್ಲಿ ಹಿಸ್ಪಾನಿಕ್‌ ಸಮುದಾಯ

ಅಮೆರಿಕದಲ್ಲಿ ಹಿಸ್ಪಾನಿಕ್‌ ಸಮುದಾಯ

ಹಿಸ್ಪಾನಿಕ್ ಅಂದರೆ ಕ್ಯೂಬಾ, ಮೆಕ್ಸಿಕೋ, ಡೊಮಿನಿಕನ್ ರಿಪಬ್ಲಿಕ್, ಪುರ್ಟೋ ರಿಕೋ, ದಕ್ಷಿಣ ಅಮೆರಿಕ (ಅರ್ಜೆಂಟೀನಾ, ಕೊಲಂಬಿಯಾ, ಪೆರು) ಅಥವಾ ಸೆಂಟ್ರಲ್ ಅಮೆರಿಕನ್ (ಹೋಂಡು ರಾಸ್, ಎಲ್ ಸಾಲ್ವಡೋರ್) ಗೆ ಸೇರಿದ ಜನಸಮೂಹ ಅಥವಾ ಸ್ಪ್ಯಾನಿಷ್ ಮೂಲ-ಸಂಸ್ಕೃತಿಗೆ ಸೇರಿದ ಜನ ಎಂದರ್ಥ.

Vishweshwar Bhat Column: ಪಾವೆಂ ಪದಪ್ರೀತಿ

Vishweshwar Bhat Column: ಪಾವೆಂ ಪದಪ್ರೀತಿ

ಒಮ್ಮೆ ಅವರು ಕನ್ನಡ-ತಮಿಳು ಭಾಷೆಗಳಲ್ಲಿನ ಹಲವು ಪದಗಳ ಸಾಮ್ಯವನ್ನು ಅರಿಯು ವುದಕ್ಕಾಗಿ ವಿಶ್ವವಿದ್ಯಾಲಯವೊಂದರ ಪ್ರಾಧ್ಯಾಪಕರನ್ನು ಭೇಟಿ ಮಾಡಿ ಚರ್ಚಿಸಲು ಹುಬ್ಬಳ್ಳಿ ಯಿಂದ ಮದರಾಸಿಗೆ ಹೋದ ಪ್ರಸಂಗವನ್ನು ಹೇಳಿದ್ದರು. ಯಾರಾದರೂ ಒಂದು ಪದವನ್ನು ಹೇಳಿದರೆ, ಆಚಾರ್ಯರು ಅದರ ಹಿಂದೆ ಬೀಳುತ್ತಿದ್ದರು.

Vishweshwar Bhat Column: ಒಂದು ಕಾಲಕ್ಕೆ ಸತ್ತು ಹೋದ ಭಾಷೆಗೆ ಮರುಜೀವ ನೀಡಿದ ಇಸ್ರೇಲಿಗರು !

ಒಂದು ಕಾಲಕ್ಕೆ ಸತ್ತು ಹೋದ ಭಾಷೆಗೆ ಮರುಜೀವ ನೀಡಿದ ಇಸ್ರೇಲಿಗರು !

ನೂರಾರು ವರ್ಷಗಳಿಂದ ಧಾರ್ಮಿಕ ಮತ್ತು ಸಾಹಿತ್ಯಿಕ ಉದ್ದೇಶಗಳಿಗಾಗಿ ಮಾತ್ರ ಸೀಮಿತ ವಾಗಿದ್ದ ಭಾಷೆಯೊಂದು ಮತ್ತೆ ಮಾತನಾಡುವ ಭಾಷೆಯಾಗಿ ಪುನರುಜ್ಜೀವನ ಗೊಂಡಿರುವುದು ಇಸ್ರೇಲ್‌ನ ಇತಿಹಾಸದಲ್ಲಿ ಒಂದು ಅದ್ಭುತ ಸಾಧನೆ ಮತ್ತು ಭಾಷಾ ಪವಾಡವೇ. ಹೀಬ್ರೂ ಭಾಷೆಯು ಸುಮಾರು ಎರಡು ಸಾವಿರ ವರ್ಷಗಳ ಕಾಲ ದೈನಂದಿನ ಸಂಭಾಷಣೆಯಲ್ಲಿ ಬಳಕೆ ಯಲ್ಲಿ ಇಲ್ಲದಿದ್ದರೂ, ಅದನ್ನು ಯಶಸ್ವಿಯಾಗಿ ಪುನಃ ಬಳಕೆಗೆ ತಂದ ವಿಶ್ವದ ಏಕೈಕ ದೇಶ ಇಸ್ರೇಲ್. ‌

Vishweshwar Bhat Column: ಜಪಾನಿನ ಸಮೂಹ ಪ್ರಜ್ಞೆ

Vishweshwar Bhat Column: ಜಪಾನಿನ ಸಮೂಹ ಪ್ರಜ್ಞೆ

ಅಮೆರಿಕ ಅತ್ಯಂತ ಸ್ವಚ್ಛ ದೇಶ. ಹೀಗಿರುವಾಗ ಅಮೆರಿಕನ್ನರಿಗೂ ಜಪಾನಿನ ಸ್ವಚ್ಛತೆ ಅಚ್ಚರಿಯಾಗಿ ಕಾಣುವುದಂತೆ. ಏಷ್ಯಾದ ದೇಶಗಳ ಪೈಕಿ ಜಪಾನ್ ಸಮಯಪಾಲನೆಯಲ್ಲಿ ಅತಿಯೆನಿಸುವಷ್ಟು ಕಟ್ಟುನಿಟ್ಟು. ನೀವು ಜಪಾನಿಯರನ್ನು ಊಟಕ್ಕೆ ಕರೆದರೆ ಕನಿಷ್ಠ ಹತ್ತು ನಿಮಿಷ ಮೊದಲೇ ಆಗಮಿಸಿರುತ್ತಾರೆ.

Vishweshwar Bhat Column: ವಿಮಾನದಲ್ಲಿ ಸುರಕ್ಷತಾ ಪ್ರದರ್ಶನ

Vishweshwar Bhat Column: ವಿಮಾನದಲ್ಲಿ ಸುರಕ್ಷತಾ ಪ್ರದರ್ಶನ

ಸೀಟಿನ ಹಿಂಭಾಗ ದಲ್ಲಿರುವ ಸುರಕ್ಷತಾ ಕಾರ್ಡ್ ಕೂಡ ಅಷ್ಟೇ ಕಿರಿಕಿರಿ ನೀಡುತ್ತದೆ. ಕಾರ್ಡ್‌ ಗಳಲ್ಲಿನ ಚಿತ್ರಗಳು ಈಜಿಪ್ಟಿನ ಚಿತ್ರಲಿಪಿಗಳ ಅಗ್ಗದ ಪ್ರತಿಗಳಂತೆ ಕಾಣುತ್ತವೆ. ಇನ್ನೂ ವಿಚಿತ್ರ ಅಂದ್ರೆ, ತುರ್ತು ನಿರ್ಗಮನದ (Exit Row) ಆಸನಗಳ ಅವಶ್ಯಕತೆಗಳನ್ನು ವಿವರಿಸುವ ಕಾರ್ಡ್‌ ಗಳು. ಪ್ರಯಾಣಿಕರನ್ನು ವಿಮಾನ ಹಾರಾಟಕ್ಕೆ ಮೊದಲು ಈ ಮಾಹಿತಿಯನ್ನು ಪರಿಶೀಲಿಸು ವಂತೆ ಕೇಳಲಾಗುತ್ತದೆ,

Vishweshwar Bhat Column: ಕೆಲವೊಮ್ಮೆ ಅಗೋಚರವಾಗಿರುವುದೇ ಲೇಸು !

ಕೆಲವೊಮ್ಮೆ ಅಗೋಚರವಾಗಿರುವುದೇ ಲೇಸು !

‘ಶ್ರೀಕೃಷ್ಣ ಪರಮಾತ್ಮ ನಾನು ಅಂದುಕೊಂಡಷ್ಟು ಸುಂದರವಾಗಿಲ್ಲ. ಬಹಳ ಕಪ್ಪಿದ್ದಾನೆ. ಅವನ ಕೈಯಲ್ಲಿ ಕೊಳಲು ಇರಲಿಲ್ಲ. ಆತ ತನ್ನ ತಲೆಯಲ್ಲಿ ನವಿಲು ಗರಿ ಸಿಕ್ಕಿಸಿಕೊಂಡಿರಲಿಲ್ಲ. ಅವನ ಬಗ್ಗೆ ನನ್ನ ಕಲ್ಪನೆಯೇ ಬೇರೆಯಾಗಿತ್ತು. ನಾನು ಕಲ್ಪಿಸಿಕೊಂಡ ಶ್ರೀಕೃಷ್ಣ ಪರಮಾತ್ಮನೇ ಬೇರೆ, ನಾನು ಭೇಟಿಯಾದಾಗ ಕಂಡ ಶ್ರೀಕೃಷ್ಣನೇ ಬೇರೆ.

Vishweshwar Bhat Column: ಸಂಪಾದಕನ ಬದುಕು

Vishweshwar Bhat Column: ಸಂಪಾದಕನ ಬದುಕು

ಜಗತ್ತಿನ ಎಲ್ಲಾ ದೇಶಗಳಿಂದ ಅಲ್ಲಿಗೆ ಪ್ರವಾಸಿಗರು ವಿಹಾರಕ್ಕೆ ಬರುತ್ತಾರೆ. ಇಬಿಜಾ ನಾನು ನೋಡಿದ ಅತ್ಯಂತ ಸುಂದರ ದ್ವೀಪಗಳಂದು. ನಾನು ಹೋಗಿದ್ದಾಗ, ಅಲ್ಲಿ ವೈಫೈ ಸೌಲಭ್ಯ ಇರಲಿಲ್ಲ. ಕೈಯಲ್ಲಿ ಬರೆದು, ಫ್ಯಾಕ್ಸ್ ಮಾಡಬೇಕಿತ್ತು. ನಾನು ಹೋಟೆಲ್ ರೂಮಿನಲ್ಲಿ ಬರೆದು, ಅಲ್ಲಿನ ಬಿಜಿನೆಸ್ ಸೆಂಟರ್‌ಗೆ ಹೋಗಿ, ಫ್ಯಾಕ್ಸ್ ಮಾಡುತ್ತಿದ್ದೆ. ಒಂದು ಪುಟ ಫ್ಯಾಕ್ಸ್‌ಗೆ ಐನೂರು ರುಪಾಯಿ!

Vishweshwar Bhat Column: ವಿಮಾನದ ಬಿಡಿಭಾಗಗಳು

Vishweshwar Bhat Column: ವಿಮಾನದ ಬಿಡಿಭಾಗಗಳು

ಆಧುನಿಕ ವಾಣಿಜ್ಯ ವಿಮಾನವು ಏಕೆ ಎಂಜಿನಿಯರಿಂಗ್‌ನ ಒಂದು ಮಹೋನ್ನತ ಸಾಧನೆ? ಕಾರಣ, ವಿಮಾನವು ಭೂಮಿಯ ಮೇಲಿನ ಅತ್ಯಂತ ಸಂಕೀರ್ಣ ಯಂತ್ರಗಳಲ್ಲಿ ಒಂದಾಗಿದೆ. ಒಂದು ವಿಮಾನವು ಅದರ ಗಾತ್ರ ಮತ್ತು ವಿನ್ಯಾಸವನ್ನು ಅವಲಂಬಿಸಿ ಸುಮಾರು ೫ ಲಕ್ಷದಿಂದ 60 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಭಾಗಗಳನ್ನು ಒಳಗೊಂಡಿರಬಹುದು.

Vishweshwar Bhat Column: ವಿಮಾನದ ಮೇಲೆ ಹಿಮ ಶೇಖರಣೆ

Vishweshwar Bhat Column: ವಿಮಾನದ ಮೇಲೆ ಹಿಮ ಶೇಖರಣೆ

ತಾಪಮಾನವು ಶೂನ್ಯದ ಸಮೀಪವಿದ್ದಾಗ ಅಥವಾ ಮೋಡಗಳನ್ನು ದಾಟುವಾಗ ಗಾಳಿಯಲ್ಲಿರುವ ಸೂಪರ್‌ಕೋಲ್ಡ್ ನೀರಿನ ಹನಿಗಳು ವಿಮಾನದ ಮೇಲ್ಮೈಗೆ ಅಂಟಿಕೊಂಡು ಹಿಮವಾಗಿ ಗಟ್ಟಿಯಾಗು ತ್ತವೆ. ಇದು ವಿಮಾನದ ಮೇಲೆ ನಾನಾ ಪರಿಣಾಮಗಳನ್ನು ಉಂಟುಮಾಡಬಹುದು. ಇದು ವಿಮಾನದ ಲಿಫ್ಟ್‌ (ಮೇಲಕ್ಕೆತ್ತಲು ಬೇಕಾದ ಶಕ್ತಿ) ಸಾಮರ್ಥ್ಯದ ಕುಸಿತಕ್ಕೆ ಕಾರಣವಾಗಬಹುದು.

V‌ishweshwar Bhat Column: ಏರ್‌ ಕ್ರಾಫ್ಟ್‌ ಕಂಟ್ರೋಲ್‌ ಬಾಕ್ಸ್

V‌ishweshwar Bhat Column: ಏರ್‌ ಕ್ರಾಫ್ಟ್‌ ಕಂಟ್ರೋಲ್‌ ಬಾಕ್ಸ್

ಆಧುನಿಕ ವಿಮಾನಗಳಲ್ಲಿ ಪೈಲಟ್ ನೀಡುವ ಪ್ರತಿ ಆದೇಶ, ಪ್ರತಿ ಬಟನ್ನು ಒತ್ತುವ ಕ್ರಿಯೆ ಅಥವಾ ಸ್ವಿಚ್‌ನ ಬದಲಾವಣೆ- ಇವೆಲ್ಲವೂ ಮೊದಲು ವಿಮಾನದ ಕೇಂದ್ರ ನರಮಂಡಲದ ಮೂಲಕ ಸಾಗುತ್ತವೆ. ಈ ನರಮಂಡಲದ ಪ್ರಮುಖ ಭಾಗವೇ ಏರ್‌ಕ್ರಾಫ್ಟ್‌ ಕಂಟ್ರೋಲ್ ಬಾಕ್ಸ್. ಇದನ್ನು ಸಾಮಾನ್ಯವಾಗಿ ಫ್ಲೈಟ್ ಕಂಟ್ರೋಲ್ ಸಿಸ್ಟಮ್‌ನ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ. ‌

Vishweshwar Bhat Column: ಇಸ್ರೇಲ್‌ ಮತ್ತು ಇಸ್ರೇಲಿಗರ ಕುರಿತ ಹತ್ತು ತಪ್ಪು ಕಲ್ಪನೆಗಳು

ಇಸ್ರೇಲ್‌ ಮತ್ತು ಇಸ್ರೇಲಿಗರ ಕುರಿತ ಹತ್ತು ತಪ್ಪು ಕಲ್ಪನೆಗಳು

ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಇಸ್ರೇಲ್ ಹೆಡ್ ಲೈನ್ ಆಗದ ದಿನಗಳೇ ಇಲ್ಲ. ಒಂದಿಂದು ರೀತಿ ಯಲ್ಲಿ ಆ ದೇಶ ಸುದ್ದಿಯಲ್ಲಿರುವುದು ಸಾಮಾನ್ಯ. ಹಾಗೆಯೇ ಇಸ್ರೇಲಿಗಳೂ. ಆದರೂ ಇಸ್ರೇಲಿ ಸಮಾಜದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಇಸ್ರೇಲಿಗಳ ಬಗ್ಗೆ ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ಹತ್ತು ಪ್ರಮುಖ ತಪ್ಪು ಕಲ್ಪನೆಗಳನ್ನು ಪಟ್ಟಿ ಮಾಡಬಹುದು.

Vishweshwar Bhat Column: ಕಡಿಮೆ ಅಂತರ ಯಾವುದು?

Vishweshwar Bhat Column: ಕಡಿಮೆ ಅಂತರ ಯಾವುದು?

ಗ್ರೇಟ್ ಸರ್ಕಲ್ ಎಂದರೇನು? ಒಂದು ಗೋಳದ (sphere) ಮೇಲ್ಮೈಯಲ್ಲಿರುವ ಎರಡು ಬಿಂದು ಗಳ ನಡುವಿನ ಅತಿ ಕಡಿಮೆ ಅಂತರವನ್ನು ‘ಗ್ರೇಟ್ ಸರ್ಕಲ್’ ಅಂತಾರೆ. ಒಂದು ಗೋಳದ (ಭೂಮಿ) ಕೇಂದ್ರದ ಮೂಲಕ ಹಾದು ಹೋಗುವ ಯಾವುದೇ ವೃತ್ತವು ಗ್ರೇಟ್ ಸರ್ಕಲ್ ಆಗಿರುತ್ತದೆ. ಈ ವೃತ್ತವು ಭೂಮಿ ಯನ್ನು ನಿಖರವಾಗಿ ೨ ಸಮಾನ ಅರ್ಧಗೋಳಗಳಾಗಿ ವಿಭಜಿಸುತ್ತದೆ.

Loading...