Vishweshwar Bhat Column: ಯಾರ ಕೈಗೂ ಸಿಗದ ಜಾರ್ಜ್
ಆ ದಿನಗಳಲ್ಲಿ ಜಾರ್ಜ್ ಅವರು ರಹಸ್ಯವಾಗಿ ಬೆಂಗಳೂರಿಗೆ ಬಂದಾಗ ಭೇಟಿ ನೀಡಿದ ಪ್ರಮುಖ ಜಾಗಗಳಲ್ಲಿ ‘ಸಂಯುಕ್ತ ಕರ್ನಾಟಕ’ ಪತ್ರಿಕಾ ಕಚೇರಿಯೂ ಒಂದು. ಅಂದು ಕರ್ನಾಟಕದಲ್ಲಿ ದೇವರಾಜ ಅರಸು ಕಾಂಗ್ರೆಸ್ ಸರಕಾರವಿತ್ತು. ಆ ಸರಕಾರದಲ್ಲಿ ಅತ್ಯಂತ ಪ್ರಭಾವಿ ಮತ್ತು ದಕ್ಷ ಸಚಿವರಾಗಿದ್ದವರು ಎಂ.ವೈ.ಘೋರ್ಪಡೆ. ಅವರು ಸಂಡೂರಿನ ರಾಜಮನೆತನಕ್ಕೆ ಸೇರಿದವ ರಾಗಿದ್ದು, ಅತ್ಯುತ್ತಮ ಅರ್ಥಶಾಸ್ತ್ರಜ್ಞರಾಗಿದ್ದರು ಹಾಗೂ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಮುನ್ನಡೆಸುತ್ತಿದ್ದ ಲೋಕಶಿಕ್ಷಣ ಟ್ರಸ್ಟ್ʼನ ಮುಖ್ಯಸ್ಥರೂ ಆಗಿದ್ದರು