ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ಇಸ್ರೇಲನ್ನು ಕೆಣಕಿ ಬಚಾವ್‌ ಆದವರು ಯಾರಿದ್ದಾರೆ ?!

ಇಸ್ರೇಲನ್ನು ಕೆಣಕಿ ಬಚಾವ್‌ ಆದವರು ಯಾರಿದ್ದಾರೆ ?!

ಸುಮಾರು ನಲವತ್ತು ಕಿಮೀ ಗಡಿಯುದ್ದಕ್ಕೂ ಭಾರಿ ಭದ್ರತೆ. ಮುಳ್ಳುತಂತಿಯ ಬೇಲಿ. ಅಲ್ಲಲ್ಲಿ ಎತ್ತರದ ತಡೆಗೋಡೆ. ಪ್ರತಿ ನೂರು ಮೀಟರಿಗೆ ಕೆಮರಾ ಕಣ್ಗಾವಲು. ಇಸ್ರೇಲ್ ಗಡಿ ಗುಂಟ ಹಾದು ಹೋಗುವ ಹೆzರಿ ಬೇರೆ. ಯಾರೇ ಗಡಿಯೊಳಗೆ ನುಸುಳುವ ಸಣ್ಣ ಪ್ರಯತ್ನ ಮಾಡಿದರೂ ಇಸ್ರೇಲಿ ಸೈನಿಕರು ಅವರನ್ನು ಸಾಯಿಸದೇ ಬಿಡುವುದಿಲ್ಲ.

Vishweshwar Bhat Column: ಪೈಲಟ್‌ ಮತ್ತು ಪರಿಮಳ ದ್ರವ್ಯ

Vishweshwar Bhat Column: ಪೈಲಟ್‌ ಮತ್ತು ಪರಿಮಳ ದ್ರವ್ಯ

ಸಾಮಾನ್ಯವಾಗಿ ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳು ಪರಿಮಳ ಅಥವಾ ತೀವ್ರವಾದ ಸುಗಂಧ ದ್ರವ್ಯ ( (Perfume )ಗಳನ್ನು ಹಾಕಿಕೊಳ್ಳುವುದಿಲ್ಲ ಅಂದ್ರೆ ಆಶ್ಚರ್ಯವಾದೀತು. ಇದಕ್ಕೆ ಕೆಲವು ಕಾರಣಗಳು ಇರಲೇ ಬೇಕು. ಕಾಕ್‌ಪಿಟ್ ಒಂದು ಸಣ್ಣ, ಮುಚ್ಚಿದ ಸ್ಥಳವಾಗಿದ್ದು, ಅಲ್ಲಿ ಗಾಳಿಯ ಚಲನೆಯು ಸೀಮಿತ ವಾಗಿರುತ್ತದೆ. ವಿಮಾನದ ಗಾಳಿಯನ್ನು ಮರುಬಳಕೆ (ರೀ ಸರ್ಕ್ಯುಲೇಷನ್) ಮಾಡಲಾಗುತ್ತದೆ.

Vishweshwar Bhat Column: ಶಬ್ದಮಾಲಿನ್ಯದಿಂದ ಬಂದ್

Vishweshwar Bhat Column: ಶಬ್ದಮಾಲಿನ್ಯದಿಂದ ಬಂದ್

ನ್ಯಾಯಾಲಯದ ಆದೇಶದ ಮೇರೆಗೆ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ಯಾವುದೇ ವಿಮಾನಗಳು ಹಾರಾಟ ನಡೆಸುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಯಿತು. ಈ ನಿಯಮವು ವಿಮಾನ ನಿಲ್ದಾಣದ ಹೊಸ ರನ್ ವೇಯನ್ನು ತೆರೆಯುವ ಸಂದರ್ಭದಲ್ಲಿ ಜಾರಿಗೆ ಬಂದಿತು. ಮ್ಯೂನಿಚ್ ವಿಮಾನ ನಿಲ್ದಾಣ ದಲ್ಲಿ ಕೂಡ ರಾತ್ರಿ ಹತ್ತರಿಂದ ಬೆಳಗ್ಗೆ ಆರರವರೆಗೆ ವಿಮಾನ ಹಾರಾಟಕ್ಕೆ ನಿರ್ಬಂಧಗಳಿವೆ.

Vishweshwar Bhat Column: ಟೇಕಾಫ್‌ ಟ್ಯಾಂಗೋ ಎಂದರೇನು ?

Vishweshwar Bhat Column: ಟೇಕಾಫ್‌ ಟ್ಯಾಂಗೋ ಎಂದರೇನು ?

ನೀವು ಟೇಕಾಫ್‌ ಟ್ಯಾಂಗೋ ( Takeoff Tango) ಬಗ್ಗೆ ಕೇಳಿದ್ದೀರಾ? ’ಟೇಕ್‌ಆಫ್‌ ಟ್ಯಾಂಗೋ’ ಎಂಬುದು ವಿಮಾನ ಟೇಕಾಫ್‌ ಆಗುವಾಗ ಪೈಲಟ್‌ಗಳು ಅನುಸರಿಸುವ ಒಂದು ತಂತ್ರ. ವಿಮಾನವು ಸುರಕ್ಷಿತವಾಗಿ ಹಾರಲು ಅಗತ್ಯವಾದ ಶಕ್ತಿಯನ್ನು ಉಪಯೋಗಿಸಬೇಕು. ಅದೇ ಸಮಯದಲ್ಲಿ, ವಿಮಾನದಿಂದ ಬರುವ ಶಬ್ದವು ವಿಮಾನ ನಿಲ್ದಾಣದ ಸುತ್ತಮುತ್ತ ವಾಸಿಸುವ ಜನರಿಗೆ ತೊಂದರೆ ಯಾಗಬಾರದು. ಈ ಎರಡೂ ಅಂಶಗಳನ್ನು ಸಮತೋಲನದಲ್ಲಿ ಇಡುವುದನ್ನೇ ’ಟೇಕಾಫ್‌ ಟ್ಯಾಂಗೋ’ ಅಂತಾರೆ.

Vishweshwar Bhat Column: ಹೆಡ್‌ ವಿಂಡ್‌ ಮತ್ತು ಟೇಲ್‌ ವಿಂಡ್

Vishweshwar Bhat Column: ಹೆಡ್‌ ವಿಂಡ್‌ ಮತ್ತು ಟೇಲ್‌ ವಿಂಡ್

ವಿಮಾನಯಾನದಲ್ಲಿ ಹೆಡ್‌ವಿಂಡ್ (Headwind) ಮತ್ತು ಟೇಲ್ ವಿಂಡ್ (Headwind) ಅಂತ ಹೇಳುವು‌ ದನ್ನು ಕೇಳಿರಬಹುದು. ಹಾಗಂದರೇನು? ಸರಳವಾಗಿ ಹೇಳುವುದಾದರೆ, ನೀವು ಚಲಿಸುತ್ತಿರುವ ದಿಕ್ಕಿನ ಎದುರಿನಿಂದ ಬೀಸುವ ಗಾಳಿಯನ್ನು ಹೆಡ್‌ವಿಂಡ್ (ಎದುರು ಗಾಳಿ) ಎನ್ನುತ್ತಾರೆ. ನೀವು ಚಲಿಸುತ್ತಿರುವ ದಿಕ್ಕಿನ ಹಿಂದಿನಿಂದ ಬೀಸುವ ಗಾಳಿಯನ್ನು ಟೇಲ್‌ವಿಂಡ್ (ಹಿಂಗಾಳಿ) ಎಂದು ಕರೆಯುತ್ತಾರೆ.

Vishweshwar Bhat Column: ಇದು ಇಸ್ರೇಲಿನ ʼಒಳ್ಳೆಯದಕ್ಕಾಗಿ ಆಶಿಸು, ಕೆಟ್ಟದ್ದಕ್ಕೆ ಸಿದ್ಧನಾಗುʼ ತತ್ತ್ವಕ್ಕೆ ಸಾಕ್ಷಿ !

ʼಒಳ್ಳೆಯದಕ್ಕಾಗಿ ಆಶಿಸು, ಕೆಟ್ಟದ್ದಕ್ಕೆ ಸಿದ್ಧನಾಗುʼ ತತ್ತ್ವಕ್ಕೆ ಸಾಕ್ಷಿ !

ಯುದ್ಧ ಅಥವಾ ಯಾವುದೇ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಕೇವಲ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಇದನ್ನು 2000 ಹಾಸಿಗೆಗಳ, ಸಂಪೂರ್ಣ ಸುಸಜ್ಜಿತ 2000 ಆಸ್ಪತ್ರೆಯಾಗಿ ಪರಿವರ್ತಿಸಬಹುದು. ಪಾರ್ಕಿಂಗ್ ತಾಣವನ್ನು ಅಷ್ಟು ಶೀಘ್ರವಾಗಿ ಆಸ್ಪತ್ರೆ ಯನ್ನಾಗಿ ಹೇಗೆ ಪರಿವರ್ತಿಸಲು ಸಾಧ್ಯ?

Vishweshwar Bhat Column: ಟೇಕಾಫ್‌ ಪ್ರಕ್ರಿಯೆಗಳು

Vishweshwar Bhat Column: ಟೇಕಾಫ್‌ ಪ್ರಕ್ರಿಯೆಗಳು

ಟೇಕಾಫ್ ಆಗುವಾಗ ವಿಮಾನವು ಯಾವ ವೇಗದಲ್ಲಿ ರನ್‌ವೇ ಮೇಲೆ ಓಡಬೇಕು? ಪೈಲಟ್‌ಗಳು ಯಾವ ತ್ತೂ ಕೇವಲ ಒಂದೇ ವೇಗವನ್ನು ಗಮನಿಸುವುದಿಲ್ಲ. ಟೇಕಾಫ್ ಪ್ರಕ್ರಿಯೆಯಲ್ಲಿ ಮೂರು ನಿರ್ಣಾಯಕ ವೇಗಗಳಿವೆ. ಇವನ್ನು ವಿಮಾನಯಾನ ಪರಿಭಾಷೆಯಲ್ಲಿ V-Speeds ಅಂತ ಕರೆಯು ತ್ತಾರೆ. ಇವುಗಳನ್ನು ಪ್ರತಿ ಹಾರಾಟಕ್ಕೂ ಮೊದಲು ವಿಮಾನದ ತೂಕ, ಹವಾಮಾನ ಮತ್ತು ರನ್‌ವೇ ಸ್ಥಿತಿಗೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ. ‌

Vishweshwar Bhat Column: ಟೇಕಾಫ್‌ ಮತ್ತು ರನ್‌ ವೇ

Vishweshwar Bhat Column: ಟೇಕಾಫ್‌ ಮತ್ತು ರನ್‌ ವೇ

ರನ್‌ವೇಯ ಉದ್ದಕ್ಕೂ ಮತ್ತು ವಿಮಾನದ ಗರಿಷ್ಠ ಟೇಕಾಫ್ ತೂಕ (Maximum Takeoff Weight )ಕ್ಕೂ ಹೇಗೆ ಸಂಬಂಧ? ವಿಮಾನವು ಟೇಕಾಫ್‌ ಆಗಲು ನಿರ್ದಿಷ್ಟ ವೇಗ ಮತ್ತು ದೂರದ ಅವಶ್ಯಕತೆಯಿರುತ್ತದೆ. ರನ್‌ವೇಯ ಉದ್ದವು ವಿಮಾನದ ಸುರಕ್ಷಿತ ಟೇಕಾಫ್‌ ಗೆ ನಿರ್ಣಾಯಕ ಅಂಶವಾಗಿದೆ. ವಿಮಾನವು ತನಗೆ ಹಾರಲು ಬೇಕಾದ ವೇಗವನ್ನು ತಲುಪಲು ರನ್‌ವೇ ಮೇಲೆ ಓಡುತ್ತದೆ.

Vishweshwar Bhat Column: ಗೆಲ್ಲುವ ತನಕ ಹೋರಾಡದಿದ್ದರೆ, ಸೋಲುವ ಹೊತ್ತಿಗೆ ಅದಿರುವುದಿಲ್ಲ !

ಗೆಲ್ಲುವ ತನಕ ಹೋರಾಡದಿದ್ದರೆ, ಸೋಲುವ ಹೊತ್ತಿಗೆ ಅದಿರುವುದಿಲ್ಲ !

ತಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದು ಇಸ್ರೇಲಿಗಳಿಗೆ ಯಾರೂ ಹೇಳಿಕೊಡ ಬೇಕಿಲ್ಲ. ತಮ್ಮನ್ನು ಕೆಣಕಿದವರನ್ನು ಅವರು ಹುಟ್ಟಡಗಿಸದೇ ಬಿಟ್ಟ ನಿದರ್ಶನವೇ ಇಲ್ಲ. ಯಹೂ ದಿಯರ ಧರ್ಮದಂದು ಮಾತಿದೆ - ಒಬ್ಬ ಮನುಷ್ಯನ ಜೀವ ಉಳಿಸಿದರೆ ಜಗತ್ತನ್ನು ಉಳಿಸಿದಂತೆ. ಒಬ್ಬನ ಜೀವ ತೆಗೆದರೆ, ಇಡೀ ಜಗತ್ತನ್ನು ನಾಶಪಡಿಸಿದಂತೆ.

Vishweshwar Bhat Column: ಪ್ರಯಾಣಿಕರ ಸ್ಥಳಾಂತರ

Vishweshwar Bhat Column: ಪ್ರಯಾಣಿಕರ ಸ್ಥಳಾಂತರ

ಎಲ್ಲ ಪ್ರಯಾಣಿಕ ವಿಮಾನಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಈ ನಿಯಮವನ್ನು ಕಡ್ಡಾಯ ವಾಗಿ ಪಾಲಿಸಬೇಕು. ಒಂದು ವೇಳೆ ವಿಮಾನದಲ್ಲಿ ಬೆಂಕಿ, ತಾಂತ್ರಿಕ ದೋಷ ಅಥವಾ ಇನ್ಯಾವುದೇ ತುರ್ತು ಪರಿಸ್ಥಿತಿ ಉಂಟಾದರೆ, ಪೂರ್ಣ ಸಾಮರ್ಥ್ಯದೊಂದಿಗೆ ವಿಮಾನದಲ್ಲಿರುವ ಎಲ್ಲ ಪ್ರಯಾಣಿಕರನ್ನು (ಮಕ್ಕಳು, ವೃದ್ಧರು, ಅಂಗವಿಕಲರು ಸೇರಿದಂತೆ) ಕೇವಲ 90 ಸೆಕೆಂಡುಗಳೊಳಗೆ ಸುರಕ್ಷಿತವಾಗಿ ಸ್ಥಳಾಂತ ರಿಸಬೇಕು.

Vishweshwar Bhat Column: ರನ್‌ ವೇ ಮೇಲಿನ ಗುರುತು

Vishweshwar Bhat Column: ರನ್‌ ವೇ ಮೇಲಿನ ಗುರುತು

ರನ್‌ವೇಯ ಮೇಲಿನ ಪ್ರತಿಯೊಂದು ಗುರುತು ಒಂದು ಕಥೆಯನ್ನು ಹೇಳುತ್ತದೆ. ಕೆಲವು ಸೆಕೆಂಡ್‌ಗಳ ಅವಧಿಯಲ್ಲಿ ವಿಮಾನ ಚಾಲಕರಿಗೆ ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ. ಈ ಗುರುತುಗಳು ವಿಮಾನ ಚಾಲಕರಿಗೆ ರನ್ ವೇಯನ್ನು ಸರಿಯಾಗಿ ಬಳಸಲು ಮತ್ತು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಸಹಾಯ ಮಾಡುತ್ತವೆ. ‌

Vishweshwar Bhat Column: ಅತಿ ಹೆಚ್ಚು ಜನರಿದ್ದ ವಿಮಾನ

Vishweshwar Bhat Column: ಅತಿ ಹೆಚ್ಚು ಜನರಿದ್ದ ವಿಮಾನ

ಒಂದು ಬೋಯಿಂಗ್ 747 ವಿಮಾನವು ಸುಮಾರು 400-500 ಪ್ರಯಾಣಿ ಕರನ್ನು ಹೊತ್ತೊಯ್ಯಬಲ್ಲದು. ಆದರೆ, ಈ ತುರ್ತು ಕಾರ್ಯಾಚರಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕರೆತರಲು ವಿಮಾನ ದೊಳಗಿನ ಎಲ್ಲ ಆಸನಗಳನ್ನು ತೆಗೆದು ಹಾಕಲಾಯಿತು. ಅಧಿಕೃತ ವಾಗಿ ವಿಮಾನ ಹತ್ತುವಾಗ 1086 ಪ್ರಯಾಣಿಕರಿದ್ದರು. ಆದರೆ, ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿಯೇ ಮಗುವೊಂದು ಜನಿಸಿದ್ದ ರಿಂದ, ವಿಮಾನವು ಇಸ್ರೇಲ್ ನಲ್ಲಿ ಇಳಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ 1087 ಆಗಿತ್ತು.

Vishweshwar Bhat Column: ಸ್ವತಂತ್ರ ವಿದ್ಯುತ್‌ ವ್ಯವಸ್ಥೆ

Vishweshwar Bhat Column: ಸ್ವತಂತ್ರ ವಿದ್ಯುತ್‌ ವ್ಯವಸ್ಥೆ

ಸಣ್ಣ ವಿದ್ಯುತ್ ವ್ಯತ್ಯಯವಾದರೂ, ಅದು ದೊಡ್ಡ ಗೊಂದಲಕ್ಕೆ ಮತ್ತು ಅಪಾಯಕ್ಕೆ ಕಾರಣವಾಗ ಬಹುದು. ಆದ್ದರಿಂದ, ವಿಮಾನ ನಿಲ್ದಾಣಗಳು ತಮ್ಮದೇ ಆದ ಸ್ವತಂತ್ರ ಮತ್ತು ಸುಭದ್ರ ವಿದ್ಯುತ್ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಸ್ವತಂತ್ರ ವಿದ್ಯುತ್ ವ್ಯವಸ್ಥೆ ಏಕೆ ಬೇಕು? ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ

Vishweshwar Bhat Column: ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್‌ ಮುಟ್ಟುವುದಿಲ್ಲ !

ಈಗಲೂ ವಾರದಲ್ಲಿ ಒಂದು ದಿನ ಇಸ್ರೇಲಿಗರು ಮೊಬೈಲ್‌ ಮುಟ್ಟುವುದಿಲ್ಲ !

ಶಬ್ಬತ್ ದಿನದಲ್ಲಿ ಯಹೂದಿಗಳು ಬಹುತೇಕ ಎಲ್ಲ ಕೆಲಸಗಳಿಂದ ದೂರವಿದ್ದು, ವಿಶ್ರಾಂತಿ, ಪ್ರಾರ್ಥನೆ, ಕುಟುಂಬ ಜೀವನಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಕೆಲವರು ಅಂದು ಮೊಬೈಲ್ ಕರೆಗಳನ್ನು ಸಹ ಸ್ವೀಕರಿಸುವುದಿಲ್ಲ. ಇನ್ನು ಕೆಲವರು ವಾಟ್ಸಾಪ್ ಮತ್ತು ಇಮೇಲ್‌ಗೂ ಪ್ರತಿಕ್ರಿಯಿಸುವುದಿಲ್ಲ.

V‌ishweshwar Bhat Column: ವಿಮಾನ ನಿಲ್ದಾಣ ಕೋಡ್

V‌ishweshwar Bhat Column: ವಿಮಾನ ನಿಲ್ದಾಣ ಕೋಡ್

ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಮತ್ತು ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಷನ್ (ICAO). ಈ ಕೋಡ್‌ಗಳು ವಿಮಾನ ಪ್ರಯಾಣದ ವ್ಯವಸ್ಥೆ ಯನ್ನು ಸುಲಭ ಮತ್ತು ಸುರಕ್ಷಿತವಾಗಿಸಲು ಸಹಾಯ ಮಾಡುತ್ತವೆ. ಇಂಟರ್‌ ನ್ಯಾಷನಲ್ IATA ಸಂಸ್ಥೆ ಯು ಏರ್‌ಲೈನ್‌ಗಳು, ಪ್ರಯಾಣ ಏಜೆಂಟರು ಮತ್ತು ಇತರ ಸಂಬಂಧಿತ ವ್ಯಾಪಾರಗಳಿಗೆ ಜಾಗತಿಕ ಗುಣಮಟ್ಟಗಳನ್ನು ರೂಪಿಸುವ ಖಾಸಗಿ ಸಂಸ್ಥೆಯಾಗಿದೆ.

Vishweshwar Bhat Column: ಎಡದಿಂದ ಏರಿಳಿಯುತ್ತಾರೆ ಏಕೆ?

Vishweshwar Bhat Column: ಎಡದಿಂದ ಏರಿಳಿಯುತ್ತಾರೆ ಏಕೆ?

ಆರಂಭಿಕ ವಿಮಾನಗಳಲ್ಲಿ, ಎಡ ಭಾಗದ ಬಾಗಿಲುಗಳು ಸಾಮಾನ್ಯವಾಗಿದ್ದವು, ಏಕೆಂದರೆ ಇದು ಗ್ರೌಂಡ್ ಕಾರ್ಯಾಚರಣೆಗೆ ಸುಲಭವಾಗಿತ್ತು. ವಿಮಾನದ ಕಾಕ್‌ಪಿಟ್‌ನಲ್ಲಿ, ಕ್ಯಾಪ್ಟನ್ (ಪೈಲಟ್) ಸಾಮಾನ್ಯವಾಗಿ ಎಡಗಡೆಯ ಸೀಟಿನಲ್ಲಿ ಕುಳಿತುಕೊಳ್ಳುತ್ತಾನೆ. ಇದರಿಂದಾಗಿ, ವಿಮಾನವನ್ನು ಟರ್ಮಿನಲ್‌ಗೆ ಜೋಡಿ ಸುವ ಜೆಟ್ ಬ್ರಿಡ್ಜ್ ( Jet bridge) ಎಡಭಾಗದಲ್ಲಿ ಇರುವುದು ಸುಲಭವಾಗಿರು ತ್ತದೆ.

Vishweshwar Bhat Column: ಕೆಲವೊಮ್ಮೆ ಸೋಲುಗಳು ನಮ್ಮ ಸಾಮರ್ಥ್ಯವನ್ನು ತೋರಿಸುತ್ತವೆ !

ಕೆಲವೊಮ್ಮೆ ಸೋಲುಗಳು ನಮ್ಮ ಸಾಮರ್ಥ್ಯವನ್ನು ತೋರಿಸುತ್ತವೆ !

ಇದು ನಮಗೇ ಗೊತ್ತಿಲ್ಲದೇ ನಮ್ಮೊಳಗೆ ನಡೆಯುವ ಹಕೀಕತ್ತು. ನಮ್ಮೊಳಗೆ ನಾವೇ ಸಾಕಿಕೊಂಡು ಪೊರೆಯುವ ಸೋಲಿನ ಅಸಲಿಯತ್ತು. ಅಷ್ಟಕ್ಕೂ ಅಂದು ಆಗಿದ್ದೇನೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಗಾರ್ಡ್‌ನ್ ರೂಟ್ ಎಂಬ ಮಾರ್ಗವಿದೆ. ಅದು ಹೆಸರೇ ಸೂಚಿಸುವಂತೆ, ಪ್ರಕೃತಿಯ ಸೊಬಗನ್ನೆಲ್ಲ ತನ್ನ ಮೇಲೆ ಬೋರಲು ಹಾಕಿಕೊಂಡ ನಯನ ಮನೋಹರ ಪ್ರದೇಶ.

Vishweshwar Bhat Column: ಹೆಸರಿನ ಬಗ್ಗೆ ಮತ್ತಷ್ಟು

Vishweshwar Bhat Column: ಹೆಸರಿನ ಬಗ್ಗೆ ಮತ್ತಷ್ಟು

ವ್ಯಕ್ತಿಗಳ ಹೆಸರಿನಲ್ಲಿ ಸಂಖ್ಯೆಯಿರುವುದು ತೀರಾ ವಿಚಿತ್ರ, ವಿಲಕ್ಷಣ ಎಂದೆನಿಸಿತು. ಹಾಗಂತ ಈಕೆ ಸಾಮಾನ್ಯಳೇನೂ ಅಲ್ಲ. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಕೆಲಸ ಮಾಡಿದವಳು. ‘ದಿ ಬೋಸ್ಟನ್ ಗ್ಲೋಬಲ್’ ಪತ್ರಿಕೆಯಲ್ಲೂ ಕೆಲಸ ಮಾಡಿದ್ದಾಳೆ. ನಿಕೋಡ್ ಇಮೊಜಿ ಸಮಿತಿಯಲ್ಲಿ‌ ಕೆಲಸ ಮಾಡಿ ದವಳು. ಅಂದರೆ ಯುನಿಕೋಡ್‌ನಲ್ಲಿ ಬಳಸುವ ಇಮೊಜಿಯನ್ನು ಬಳಕೆಗೆ ಬಿಡುವ ಮುನ್ನ ಪರಿಶೀಲಿ ಸುವ ಸಮಿತಿಯದು.

Vishweshwar Bhat Column: ಸುರಕ್ಷತೆಗೆ ಮೊದಲ ಆದ್ಯತೆ

Vishweshwar Bhat Column: ಸುರಕ್ಷತೆಗೆ ಮೊದಲ ಆದ್ಯತೆ

ವಿಮಾನ ಮತ್ತು ವಿಮಾನಯಾನದಲ್ಲಿ ಯಾವತ್ತೂ ಸುಧಾರಣೆಗೆ ಒಳಗಾಗುವುದು ಭದ್ರತೆ ಮತ್ತು ಸುರಕ್ಷತೆ ಯೊಂದೇ. ಈ ಎರಡು ವಿಷಯಗಳಲ್ಲಿ ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ಸಣ್ಣ ಸುಧಾರಣೆಗೆ ಅವಕಾಶವಿದ್ದರೂ, ಅದನ್ನು ನಿರ್ಲಕ್ಷಿಸುವುದಿಲ್ಲ. ಅಮೆರಿಕದ ವಿಮಾನ ಯಾನ ಕಂಪನಿ ಗಳು ತಮ್ಮ ಹೊಸ ವಿಮಾನಗಳಲ್ಲಿ ಈಗ ಎರಡನೇ ಗೇಟ್ (ಸೆಕೆಂಡರಿ ಕಾಕ್‌ಪಿಟ್ ಬ್ಯಾರಿಯರ್) ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ.

Vishweshwar Bhat Column: ವಿಮಾನದಲ್ಲಿ ಕಿಟಕಿಗಳ ಮಹತ್ಚ

Vishweshwar Bhat Column: ವಿಮಾನದಲ್ಲಿ ಕಿಟಕಿಗಳ ಮಹತ್ಚ

ವಿಮಾನದ ಕಿಟಕಿಗಳು ಒಂದು ಪ್ರಮುಖ ಸುರಕ್ಷತಾ ಕಾರ್ಯವನ್ನು ನಿರ್ವಹಿಸುತ್ತವೆ. ಅನಿರೀಕ್ಷಿತ ಸಂದರ್ಭಗಳಲ್ಲಿ, ವಿಮಾನದಲ್ಲಿ ಏನಾದರೂ ತೊಂದರೆ ಉಂಟಾದಾಗ, ಸಿಬ್ಬಂದಿ ಮತ್ತು ಪ್ರಯಾಣಿಕರು ವಿಮಾನದ ಹೊರಗಿನ ಪರಿಸ್ಥಿತಿಗಳನ್ನು ನೋಡಲು, ಅರಿಯಲು ಇವು ಸಹಾಯ ಮಾಡುತ್ತವೆ. ಇದರಿಂದ, ಹೊರಗಡೆ ಬೆಂಕಿ ಅಥವಾ ಇನ್ನಾವುದೇ ಅಪಾಯಗಳಿವೆಯೇ ಎಂದು ಪರಿಶೀಲಿಸಿ, ಸ್ಥಳಾಂತರ ಗೊಳ್ಳುವುದು ಸುರಕ್ಷಿತ ವೇ ಎಂದು ನಿರ್ಧರಿಸಲು ಸಹಾಯವಾಗುತ್ತದೆ.

Vishweshwar Bhat Column: ನಾಯಿಗಳಿಗೂ ವಿಮಾನಯೋಗ

Vishweshwar Bhat Column: ನಾಯಿಗಳಿಗೂ ವಿಮಾನಯೋಗ

ITA Airways ಮತ್ತು Neos ನಂಥ ಕೆಲವು ಪ್ರಮುಖ ಏರ್ ಲೈನ್ಸ್‌ಗಳು ಈಗಾಗಲೇ ಈ ನೀತಿಯನ್ನು ಅನುಸರಿಸಲು ಪ್ರಾರಂಭಿಸಿವೆ. ಅವು ಪ್ರಾಣಿಗಳನ್ನು ಕೇವಲ ಸಾಮಾನುಗಳಂತೆ ನೋಡದೇ, ಪ್ರಯಾಣಿಕ ರಂತೆ ಪರಿಗಣಿಸಿ ಸೀಟು ಗಳನ್ನು ಒದಗಿಸುತ್ತಿವೆ. ಇದು ಪ್ರಾಣಿಗಳ ಕಲ್ಯಾಣಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ. ಅವುಗಳಿಗೆ ಪ್ರಯಾಣದ ಸಮಯದಲ್ಲಿ ಸುರಕ್ಷತೆ ಮತ್ತು ಸೌಕರ್ಯ ದೊರಕುತ್ತದೆ.

Vishweshwar Bhat Column: ಇಸ್ರೇಲಿಗಳ ಈ ಸಿನೆಮಾ ಮುಗಿಯಲು ಇನ್ನೆಷ್ಟು ಇಂಟರ್ವಲ್ಲುಗಳು ಬಾಕಿಯಿದೆಯೋ ?!

ಇಸ್ರೇಲಿಗಳ ಈ ಸಿನೆಮಾ ಮುಗಿಯಲು ಇನ್ನೆಷ್ಟು ಇಂಟರ್ವಲ್ಲುಗಳು ಬಾಕಿಯಿದೆಯೋ ?!

2023ರ ಆರಂಭದಿಂದ, ಪ್ರತಿ ವಾರ ಲಕ್ಷಾಂತರ ಇಸ್ರೇಲಿಗರು, ವಿಶೇಷವಾಗಿ ಟೆಲ್ ಅವಿವ್ ಮತ್ತು ಜೆರುಸಲೆಮ್ ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಇಸ್ರೇಲ್‌ನ ಇತಿಹಾಸ ದಲ್ಲಿಯೇ ಅತಿ ದೊಡ್ಡ ಪ್ರತಿಭಟನಾ ಚಳವಳಿ ಎಂದು ಪರಿಗಣಿಸಲಾಗಿದೆ. ಈ ಬಿಕ್ಕಟ್ಟು ಇಸ್ರೇಲಿ ಸಮಾಜದೊಳಗಿನ ಹಳೆಯ ಬಿರುಕು ಗಳನ್ನು ಮತ್ತಷ್ಟು ಆಳವಾಗಿಸಿದೆ.

Vishweshwar Bhat Column: ಭೈರಪ್ಪನವರ ಸ್ನೇಹಿತರು

Vishweshwar Bhat Column: ಭೈರಪ್ಪನವರ ಸ್ನೇಹಿತರು

ಮೈಸೂರಿನ ರೈಲು ಬರಲು ಇನ್ನೂ ಸಮಯವಿತ್ತು. ಆಗ ಅಲ್ಲಿಗೆ ಬಂದ ಭೈರಪ್ಪನವರ ಸ್ನೇಹಿತರು, ಗಣೇಶರನ್ನು ಗುರುತಿಸಿ ಮಾತಾಡಿಸಿದರು. ಹಾಗೆ ಅದೂ- ಇದೂ ಮಾತಾಡುತ್ತಾ ಗಣೇಶ್, “ನಿಮಗೆ ಭೈರಪ್ಪನವರ ಪರಿಚಯ ಎಷ್ಟು ಕಾಲದಿಂದ? ಅವರ ಎಷ್ಟು ಕಾದಂಬರಿಗಳನ್ನು ಓದಿದ್ದೀರಿ?" ಎಂದು ಕೇಳಿದರು. ಅದಕ್ಕೆ ಭೈರಪ್ಪನವರ ಸ್ನೇಹಿತರು, “ಸುಮಾರು ಇಪ್ಪತ್ತೈದು ವರ್ಷಗಳಿಂದ ಅವರು ನನ್ನ ಗೆಳೆಯರು. ಆದರೆ ನಾನು ಅವರ ಒಂದು ಕಾದಂಬರಿಯನ್ನೂ ಓದಿಲ್ಲ" ಎಂದರು.

Vishweshwar Bhat Column: ಪ್ರಣಬ್‌ ರಾಷ್ಟ್ರಪತಿ ಆಯ್ಕೆ

Vishweshwar Bhat Column: ಪ್ರಣಬ್‌ ರಾಷ್ಟ್ರಪತಿ ಆಯ್ಕೆ

ಅನ್ಸಾರಿಯವರನ್ನು ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿದರೆ, ಎಲ್ಲ ಪಕ್ಷಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಕ್ಕಿಲ್ಲವೆಂದು ಸೋನಿಯಾಗೆ ಅನಿಸಿತಂತೆ. ಆ ಚುನಾವಣೆಯಲ್ಲಿ ಗೆಲ್ಲಲು ಮಮತಾ ಬ್ಯಾನರ್ಜಿ ಯವರ ಬೆಂಬಲ ತೀರಾ ಅಗತ್ಯವಾಗಿತ್ತು. ಬಂಗಾಳದ ಅಭ್ಯರ್ಥಿಯನ್ನು ಮಮತಾ ಬೆಂಬಲಿಸ ಬಹುದು ಎನಿಸಿದ್ದರಿಂದ ಪ್ರಣಬ್ ಪರ ಸೋನಿಯಾ ವಾಲಿದರು.

Loading...