ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿಶ್ವೇಶ್ವರ ಭಟ್‌

Editor in Chief, Author, Columnist

info1@vishwavani.news

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
‌Vishweshwar Bhat Column: ಎಡಭಾಗದಲ್ಲೇ ಬೋರ್ಡಿಂಗ್

‌Vishweshwar Bhat Column: ಎಡಭಾಗದಲ್ಲೇ ಬೋರ್ಡಿಂಗ್

ವಿಮಾನದ ಕ್ಯಾಪ್ಟನ್ ಅಥವಾ ಮುಖ್ಯ ಪೈಲಟ್ ಯಾವಾಗಲೂ ಕಾಕ್‌ಪಿಟ್‌ನ ಎಡಭಾಗದಲ್ಲಿ ಕುಳಿತಿರುತ್ತಾರೆ. ವಿಮಾನವನ್ನು ಟರ್ಮಿನಲ್ ಹತ್ತಿರ ತರುವಾಗ (Taxiing ), ಪೈಲಟ್ಗೆ ಎಡಭಾಗದ ಕಿಟಕಿಯಿಂದ ವಿಮಾನದ ರೆಕ್ಕೆ ಮತ್ತು ಜೆಟ್ ಸೇತುವೆ ಯ ನಡುವಿನ ಅಂತರವು ಸ್ಪಷ್ಟವಾಗಿ ಕಾಣಿಸು ತ್ತದೆ. ಇದು ವಿಮಾನವನ್ನು ಅತ್ಯಂತ ನಿಖರವಾಗಿ ನಿಲುಗಡೆ ಮಾಡಲು ಸಹಾಯ ಮಾಡುತ್ತದೆ.

Vishweshwar Bhat Column: ವಿಮಾನ ಬಯಲಲ್ಲಿ ಲ್ಯಾಂಡ್‌ ಆದರೆ...

Vishweshwar Bhat Column: ವಿಮಾನ ಬಯಲಲ್ಲಿ ಲ್ಯಾಂಡ್‌ ಆದರೆ...

ವಿಮಾನವು ಹೇಗೋ ಒಂದು ಬಯಲಲ್ಲಿ ಲ್ಯಾಂಡ್ ಆಯಿತು ಎಂದು ಭಾವಿಸಿ. ಅಲ್ಲಿ ರನ್‌ವೇ ಇಲ್ಲ. ಅಲ್ಲಿಂದ ಅದು ಹೇಗೆ ಟೇಕಾಫ್ ಆಗುತ್ತದೆ? ವಿಮಾನವೊಂದು ರನ್‌ವೇ ಇಲ್ಲದ ಬಯಲಿನಲ್ಲಿ ಅಥವಾ ಅಸಮತೋಲಿತ ಜಾಗದಲ್ಲಿ ಅನಿವಾರ್ಯ ಕಾರಣಗಳಿಂದ ಲ್ಯಾಂಡ್ ಆದರೆ, ಅದನ್ನು ಅಲ್ಲಿಂದ ಮತ್ತೆ ಸುರಕ್ಷಿತವಾಗಿ ಟೇಕಾಫ್ ಮಾಡುವುದು ವಿಮಾನಯಾನ ಎಂಜಿನಿಯರಿಂಗ್‌ನ ಅತ್ಯಂತ ಸವಾಲಿನ ಕೆಲಸಗಳಲ್ಲಿ ಒಂದು. ‌

Vishweshwar Bhat Column: ಸಂಭವಿಸದ ವೈಫಲ್ಯಗಳಿಗೆ ಸಿದ್ಧತೆ

ಸಂಭವಿಸದ ವೈಫಲ್ಯಗಳಿಗೆ ಸಿದ್ಧತೆ

ವಿಮಾನದ ಒಂದು ಎಂಜಿನ್ ವಿಫಲವಾದರೆ ಏನು ಮಾಡಬೇಕೆಂದು ಪ್ರತಿಯೊಬ್ಬ ಪೈಲಟ್‌ಗೂ ತಿಳಿದಿರುತ್ತದೆ. ಆದರೆ, ಎಂಜಿನ್ ವೈಫಲ್ಯದ ಜತೆಗೆ ಹವಾಮಾನ ಕೆಟ್ಟದಾಗಿದ್ದು, ವಿಮಾನದ ಹೈಡ್ರಾ ಲಿಕ್ ವ್ಯವಸ್ಥೆಯೂ ಕೈಕೊಟ್ಟರೆ? ಇಂಥ ಸನ್ನಿವೇಶಗಳನ್ನು ‘ಕಾಂಪೌಂಡ್ ಫೈಲ್ಯೂರ್ಸ್’ ಎನ್ನಲಾಗು ತ್ತದೆ. ಸಿಮ್ಯುಲೇಟರ್‌ಗಳಲ್ಲಿ ಇಂಥ ಪರಸ್ಪರ ಸಂಬಂಧವಿಲ್ಲದ ತಾಂತ್ರಿಕ ತೊಂದರೆಗಳನ್ನು ಒಟ್ಟಿಗೆ ನೀಡಲಾಗುತ್ತದೆ.

Vishweshwar Bhat Column: ಸುಲ್ತಾನ್ ಕಬೂಸ್:‌ ಒಮಾನಿನ ಕನ್ನಡಿಗರಿಗೂ ಆರಾಧ್ಯ ದೈವ !

ಸುಲ್ತಾನ್ ಕಬೂಸ್:‌ ಒಮಾನಿನ ಕನ್ನಡಿಗರಿಗೂ ಆರಾಧ್ಯ ದೈವ !

ಸುಲ್ತಾನ್ ಕಬೂಸ್ ಅವರಿಗೆ ಭಾರತದ ಬಗ್ಗೆ ವಿಶೇಷವಾದ ಪ್ರೀತಿ ಇತ್ತು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಅವರ ಆರಂಭಿಕ ಶಿಕ್ಷಣ ನಡೆದದ್ದೇ ಭಾರತದಲ್ಲಿ. ಕಬೂಸ್ ಅವರು ಪುಣೆಯ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಅಚ್ಚರಿಯ ಸಂಗತಿಯೆಂದರೆ, ಭಾರತದ ಮಾಜಿ ರಾಷ್ಟ್ರ ಪತಿ ಡಾ.ಶಂಕರ್ ದಯಾಳ್ ಶರ್ಮಾ ಅವರು ಪುಣೆಯಲ್ಲಿ ಕಬೂಸ್ ಅವರಿಗೆ ಪಾಠ ಹೇಳಿಕೊಟ್ಟ ಗುರು ಗಳಾಗಿದ್ದರು!

Vishweshwar Bhat Column: ಬೋಯಿಂಗ್‌ 777 ಮಾಡಿದ ಕ್ರಾಂತಿ

Vishweshwar Bhat Column: ಬೋಯಿಂಗ್‌ 777 ಮಾಡಿದ ಕ್ರಾಂತಿ

1990ರ ದಶಕದ ಆರಂಭದಲ್ಲಿ, ವಾಯುಯಾನ ಕ್ಷೇತ್ರವು ಒಂದು ದೊಡ್ಡ ಬದಲಾವಣೆಯನ್ನು ಎದುರು ನೋಡುತ್ತಿತ್ತು. ಆ ಸಮಯದಲ್ಲಿ ಬೋಯಿಂಗ್ ಕಂಪನಿಯ ಬಳಿ ಬೃಹತ್ ಗಾತ್ರದ 747 ಜಂಬೋ ಜೆಟ್ ಮತ್ತು ಚಿಕ್ಕದಾದ 767 ವಿಮಾನಗಳಿದ್ದವು. ಆದರೆ ಇವೆರಡರ ನಡುವೆ ಒಂದು ಮಧ್ಯಮ ಗಾತ್ರದ, ಆದರೆ ದೀರ್ಘದೂರ ಹಾರಬಲ್ಲ ವಿಮಾನದ ಅಗತ್ಯವಿತ್ತು. ಈ ಕೊರತೆಯನ್ನು ನೀಗಿಸಲು ಬೋಯಿಂಗ್ 777 ಅನ್ನು ವಿನ್ಯಾಸಗೊಳಿಸಲಾಯಿತು.

Vishweshwar Bhat Column: ರೆಕ್ಕೆಗಳಲ್ಲೇಕೆ ಇಂಧನ ?

Vishweshwar Bhat Column: ರೆಕ್ಕೆಗಳಲ್ಲೇಕೆ ಇಂಧನ ?

ಒಂದು ವೇಳೆ ಇಂಧನವನ್ನು ವಿಮಾನದ ಹೊಟ್ಟೆಯಲ್ಲಿ ( Fuselage ) ತುಂಬಿದ್ದರೆ, ರೆಕ್ಕೆಗಳು ತೂಕ ವಿಲ್ಲದೆ ಹಗುರವಾಗಿರುತ್ತಿದ್ದವು ಮತ್ತು ಲಿಫ್ಟ್ ಬಲದಿಂದಾಗಿ ಅತಿಯಾಗಿ ಮೇಲಕ್ಕೆ ಬಾಗುತ್ತಿದ್ದವು. ಆದರೆ ರೆಕ್ಕೆಗಳಲ್ಲಿ ಟನ್‌ಗಟ್ಟಲೆ ಇಂಧನವನ್ನು ತುಂಬುವುದರಿಂದ, ಆ ಇಂಧನದ ಭಾರವು ರೆಕ್ಕೆ‌ ಗಳನ್ನು ಕೆಳಕ್ಕೆ ಎಳೆಯುತ್ತದೆ. ಇದು ಲಿಫ್ಟ್ ಬಲವನ್ನು ಸರಿದೂಗಿಸಿ, ರೆಕ್ಕೆಗಳು ಅತಿಯಾಗಿ ಬಾಗ ದಂತೆ ಮತ್ತು ವಿಂಗ್ ರೂಟ್ ಮುರಿಯದಂತೆ ತಡೆಯುತ್ತದೆ.

Vishweshwar Bhat Column: ತನ್ನ ಕೃತಿಯನ್ನು ಟೀಕಿಸಿದ್ದಕ್ಕಾಗಿ ಆತ ವಿಮರ್ಶಕನ ಮುಖಕ್ಕೆ ಉಗಿದಿದ್ದ !

ತನ್ನ ಕೃತಿಯನ್ನು ಟೀಕಿಸಿದ್ದಕ್ಕಾಗಿ ಆತ ವಿಮರ್ಶಕನ ಮುಖಕ್ಕೆ ಉಗಿದಿದ್ದ !

ಸಾಹಿತ್ಯವಲಯದಲ್ಲಿ ಸಾಮಾನ್ಯವಾಗಿ ವಿವಾದ ಕಿಡಿ ಹೊತ್ತಿಕೊಳ್ಳುವುದು ವಿಮರ್ಶಕ ರಿಂದ. ಯಾವ ಸಾಹಿತಿಯೂ ವಿಮರ್ಶಕರನ್ನು ಇಷ್ಟಪಡುವುದಿಲ್ಲ. ಅದರಲ್ಲೂ ತಮ್ಮನ್ನು ಟೀಕಿಸುವ ವಿಮರ್ಶಕರನ್ನಂತೂ ಇಷ್ಟಪಡುವ, ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ, 2002 ಮತ್ತು 2004ರ ಅವಧಿಯಲ್ಲಿ ಅಮೆರಿಕದ ಸಾಹಿತ್ಯ ವಲಯದಲ್ಲಿ ನಡೆದ ಒಂದು ಘಟನೆ ಇಡೀ ಜಗತ್ತನ್ನೇ ಹುಬ್ಬೇರಿಸುವಂತೆ ಮಾಡಿತ್ತು.

‌Vishweshwar Bhat Column: ಆಕ್ಸಿಜನ್‌ ಮಾಸ್ಕ್‌ ಮತ್ತು ಮೈಕ್ರೋಪೋನ್

‌Vishweshwar Bhat Column: ಆಕ್ಸಿಜನ್‌ ಮಾಸ್ಕ್‌ ಮತ್ತು ಮೈಕ್ರೋಪೋನ್

ವಿಮಾನದ ಕ್ಯಾಬಿನ್‌ನಲ್ಲಿ ಒತ್ತಡ ಕಡಿಮೆಯಾದಾಗ ಅಥವಾ ಹೊಗೆ ಆವರಿಸಿದಾಗ, ಪೈಲಟ್‌ ಗಳು ತಕ್ಷಣವೇ ‘ಕ್ವಿಕ್ ಡಾನಿಂಗ್ ಮಾಸ್ಕ್’ ಧರಿಸುತ್ತಾರೆ. ಇದನ್ನು ಧರಿಸಿದ ತಕ್ಷಣ, ಅವರು ಬಳಸುತ್ತಿದ್ದ ಸಾಮಾನ್ಯ ಹೆಡ್ಸೆಟ್ ಮೈಕ್ರೊಫೋನ್ ನಿಷ್ಕ್ರಿಯವಾಗುತ್ತದೆ ಮತ್ತು ಮಾಸ್ಕ್ ಒಳಗಿರುವ ವಿಶೇಷ ಮೈಕ್ರೊಫೋನ್ ಕೆಲಸ ಮಾಡಲು ಶುರು ಮಾಡುತ್ತದೆ.

Vishweshwar Bhat Column: ಬ್ಲಾಕ್‌ ಬಾಕ್ಸ್‌ ಸಿಗ್ನಲ್‌ ಕಳಿಸುವುದೇಗೆ ?

Vishweshwar Bhat Column: ಬ್ಲಾಕ್‌ ಬಾಕ್ಸ್‌ ಸಿಗ್ನಲ್‌ ಕಳಿಸುವುದೇಗೆ ?

ವಿಮಾನಯಾನದ ಅತ್ಯಂತ ನಿಗೂಢ ಮತ್ತು ಕುತೂಹಲಕಾರಿ ವಸ್ತುವೆಂದರೆ ’ಬ್ಲಾಕ್ ಬಾಕ್ಸ್’. ವಿಮಾನ ವೊಂದು ಸಮುದ್ರದ ಆಳದಲ್ಲಿ ಬಿದ್ದಾಗ, ಮನುಷ್ಯರಿಗೆ ತಲುಪಲು ಅಸಾಧ್ಯವಾದಾಗ, ಈ ಪುಟ್ಟ ಪೆಟ್ಟಿಗೆಯು ಜಗತ್ತಿಗೆ ತನ್ನ ಇರುವಿಕೆಯನ್ನು ಹೇಗೆ ತಿಳಿಸುತ್ತದೆ ಎಂಬುದು ತಂತ್ರಜ್ಞಾನದ ಅದ್ಭುತ. ‌

V‌ishweshwar Bhat Column: ಅತಿ ವಿಶಿಷ್ಟ ಕುಲುಲ ಏರ್‌ʼಲೈನ್ಸ್

V‌ishweshwar Bhat Column: ಅತಿ ವಿಶಿಷ್ಟ ಕುಲುಲ ಏರ್‌ʼಲೈನ್ಸ್

ಈ ವಿಮಾನದ ವಿಶೇಷವೇನೆಂದರೆ, ಇದು ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊಂದಿತ್ತು (ಸಾಮಾನ್ಯವಾಗಿ ವಿಮಾನಗಳು ಹಸಿರು ಬಣ್ಣದಲ್ಲಿ ಇರುವುದಿಲ್ಲ). ಇದರ ಮೇಲೆ ಬಿಳಿ ಬಣ್ಣದ ಬಾಣದ ಗುರುತುಗಳು ಮತ್ತು ಅಕ್ಷರಗಳನ್ನು ಬರೆಯಲಾಗಿತ್ತು. ಈ ಗುರುತುಗಳು ವಿಮಾನದ ಪ್ರತಿ ಯೊಂದು ಭಾಗವನ್ನೂ ತೋರಿಸಿ, ಅದು ಏನು ಮತ್ತು ಅದರ ಕೆಲಸವೇನು ಎಂಬುದನ್ನು ಅತ್ಯಂತ ತಮಾಷೆಯಾಗಿ ವಿವರಿಸಲಾಗಿತ್ತು

Vishweshwar Bhat Column: ಸಣ್ಣ ಸನ್ನೆ, ಉಳಿದ ಪ್ರಾಣ

Vishweshwar Bhat Column: ಸಣ್ಣ ಸನ್ನೆ, ಉಳಿದ ಪ್ರಾಣ

ಅಂದು ಇಸಾಬೆಲಾ ಅವರ ಆ ಒಂದು ಸೂಕ್ಷ್ಮದೃಷ್ಟಿ, ಆ ಬಾಲಕನ ಪಾಲಿಗೆ ದೇವರ ದೃಷ್ಟಿಯಾಗಿ ಪರಿಣಮಿಸಿತ್ತು. ಆ ಕ್ಷಣದಲ್ಲಿ ಇಸಾಬೆಲಾ ಅವರಿಗೆ ಅರ್ಥವಾಯಿತು; ತಾನು ಕೇವಲ ಊಟ ಬಡಿಸುವ ಸಿಬ್ಬಂದಿಯಲ್ಲ, ಬದಲಿಗೆ ಒಂದು ಜೀವವನ್ನು ಉಳಿಸಿದ ರಕ್ಷಕಿ ಎಂದು. ಪೊಲೀಸರು ಆ ಬಾಲಕನನ್ನು ಕರೆದೊಯ್ಯುವಾಗ, ಅವನು ಬಾಗಿಲ ಬಳಿ ನಿಂತು ಹಿಂದೆ ತಿರುಗಿ ನೋಡಿದನು. ಕಣ್ಣೀರಿನ ನಡುವೆಯೂ ಅವನ ಮುಖದಲ್ಲಿ ಮುಗ್ಧ ನಗು ಮೂಡಿತ್ತು.

Vishweshwar Bhat Column: ಸಿಡ್ನಿ-ಲಂಡನ್‌ ಇಪ್ಪತ್ತೆರಡು ಗಂಟೆಗಳ ನೇರ ವಿಮಾನ ಪ್ರಯಾಣ ಹೇಗಿರಬಹುದು ?

ಸಿಡ್ನಿ-ಲಂಡನ್‌ ಇಪ್ಪತ್ತೆರಡು ಗಂಟೆಗಳ ನೇರ ವಿಮಾನ ಪ್ರಯಾಣ ಹೇಗಿರಬಹುದು ?

ಸತತ 22 ಗಂಟೆಗಳ ಕಾಲ ಆಕಾಶದಲ್ಲಿಯೇ ಹಾರಾಡುವ ಈ ವಿಮಾನವು, ಸುಮಾರು 10500 ಮೈಲಿ ಗಳಷ್ಟು (ಸುಮಾರು 17000 ಕಿ.ಮೀ.) ದೀರ್ಘ ಅಂತರವನ್ನು ಕ್ರಮಿಸಲಿದೆಯಂತೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ‘ಪ್ರಾಜೆಕ್ಟ್ ಸನ್‌ರೈಸ್’ ಎಂದು ಹೆಸರಿಡಲಾಗಿದೆಯಂತೆ. ಈ ಯೋಜನೆಯು ಜಾಗತಿಕ ಪ್ರಯಾಣದ ದಿಕ್ಕನ್ನೇ ಬದಲಾಯಿಸಲಿದ್ದು, ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡಲಿದೆ. ‌

Vishweshwar Bhat Column: ಸಣ್ಣ ಸನ್ನೆ, ಉಳಿದ ಪ್ರಾಣ

Vishweshwar Bhat Column: ಸಣ್ಣ ಸನ್ನೆ, ಉಳಿದ ಪ್ರಾಣ

ಕ್ಯಾಪ್ಟನ್ ಬಳಿ ಹೋದ ಇಸಾಬೆಲಾ, ಅತ್ಯಂತ ತುರ್ತು ಮತ್ತು ಗೌಪ್ಯ ಸಂದೇಶವನ್ನು ರವಾನಿಸಿದರು - ’೩-ಎ ಸೀಟ್‌ನಲ್ಲಿರುವ ಪ್ರಯಾಣಿಕರ ಬಗ್ಗೆ ಬಲವಾದ ಅನುಮಾನವಿದೆ. ಇದು ಸಂಭಾವ್ಯ ಅಪಹರಣ ಅಥವಾ ಮಾನವ ಕಳ್ಳಸಾಗಣೆಯ ಪ್ರಕರಣ ವಾಗಿರಬಹುದು. ತಕ್ಷಣವೇ ಲ್ಯಾಂಡಿಂಗ್ ಮತ್ತು ನೆಲದ ಮೇಲೆ ಪೊಲೀಸ್ ಭದ್ರತೆಯನ್ನು ಕೋರು ತ್ತಿದ್ದೇನೆ’ ಮುಂದೇನಾಯಿತು?

Vishweshwar Bhat Column: ನೆಹರು- ವಾಜಪೇಯಿ ಸ್ನೇಹ

Vishweshwar Bhat Column: ನೆಹರು- ವಾಜಪೇಯಿ ಸ್ನೇಹ

ಕ್ರುಶ್ಚೇವ್ ಗೌರವಾರ್ಥ ಏರ್ಪಡಿಸಿದ ಭೋಜನಕೂಟದಲ್ಲಿ ಅತಿಗಣ್ಯ ವ್ಯಕ್ತಿಗಳನ್ನು ಖುದ್ದಾಗಿ ನೆಹರು ಅವರೇ ಪರಿಚಯಿಸುತ್ತಿದ್ದರು. ವಾಜಪೇಯಿ ಅವರ ಸರದಿ ಬಂದಿತು. ಆಗ ನೆಹರು ಕ್ರುಶ್ಚೇವ್ ಅವರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಾ, ‘ಇವರು ನಮ್ಮ ದೇಶದ ಭವಿಷ್ಯದ ಪ್ರಧಾನಿ’ ಎಂದು ಉದ್ಗರಿಸಿ, ಪರಿಚಯಿಸಿದರು.

Vishweshwar Bhat Column: ಅದು ಕವಿ ಮತ್ತು ಕಾದಂಬರಿಕಾರನ ಕೆಸರು ಕಂಬಳ ಕಾದಾಟ !

ಅದು ಕವಿ ಮತ್ತು ಕಾದಂಬರಿಕಾರನ ಕೆಸರು ಕಂಬಳ ಕಾದಾಟ !

ಸ್ಟೀವನ್ಸ್ ನೋಡೋಕೆ ಶಾಂತವಾಗಿದ್ದರೂ, ಮದ್ಯ ಹೊಟ್ಟೆಗೆ ಬಿದ್ದರೆ ಸಾಕು, ಆತನೊಳಗಿನ ರಾಕ್ಷಸ ಎಚ್ಚರವಾಗುತ್ತಿದ್ದ. ಕುಡಿದಾಗ ಆತ ಕವಿಯಲ್ಲ, ಉಗ್ರ ಮೃಗ! ಹೀಗೆ ಒಂದು ಕಡೆ ಬಾಕ್ಸಿಂಗ್ ರಿಂಗ್ ಹುಲಿ ಹೆಮಿಂಗ್ವೇ, ಇನ್ನೊಂದು ಕಡೆ ಕಾರ್ಪೊರೇಟ್ ಜಗತ್ತಿನ ಕವಿ ಸ್ಟೀವನ್ಸ್. ಇವರಿಬ್ಬರೂ ಮುಖಾಮುಖಿ ಯಾಗಿದ್ದು ವಿಧಿಯಾಟ.

Vishweshwar Bhat Column: ಆಕಾಶದಲ್ಲಿ ಅದೃಶ್ಯ ತಂತಿ

Vishweshwar Bhat Column: ಆಕಾಶದಲ್ಲಿ ಅದೃಶ್ಯ ತಂತಿ

ಈಗ ವಿಮಾನದ ವೇಗ ಎಷ್ಟಿದೆ? ಗಾಳಿ ಯಾವ ಕಡೆಯಿಂದ ಬೀಸುತ್ತಿದೆ? ಈಗ ಎಡಕ್ಕೆ ತಿರುಗಿದ್ರೆ ಸುರಕ್ಷಿತ ಅಲ್ವಾ?’ ಅಂತ ಯೋಚಿಸಿ, ನಂತರ ಆ ಕಂಪ್ಯೂಟರೇ ರೆಕ್ಕೆಯ ಮೇಲಿರುವ ಮೋಟಾರ್‌ ಗಳಿಗೆ ಆದೇಶ (ಕರೆಂಟ್) ಪಾಸ್ ಮಾಡುತ್ತದೆ. ಆಗ ರೆಕ್ಕೆ ತಿರುಗುತ್ತದೆ. ಅಂದರೆ, ಇಲ್ಲಿ ಪೈಲಟ್ ಕೇವಲ ಆರ್ಡರ್ ಮಾಡೋನು. ಕೆಲಸ ಮಾಡೋದು ಕಂಪ್ಯೂಟರ್ ಮತ್ತು ವೈರ್ ಗಳು! ಇದನ್ನೇ ಇಂಗ್ಲಿಷ್‌ನಲ್ಲಿ ‘ಫ್ಲೈ ಬೈ ವೈರ್’ ಅಂತಾರೆ.

Vishweshwar Bhat Column: ಹೀಥ್ರೂ ನಿಲ್ದಾಣದ ಸಾಧನೆ

Vishweshwar Bhat Column: ಹೀಥ್ರೂ ನಿಲ್ದಾಣದ ಸಾಧನೆ

ಅಮೆರಿಕ ಅಥವಾ ಮಧ್ಯಪ್ರಾಚ್ಯದ ಬೃಹತ್ ವಿಮಾನ ನಿಲ್ದಾಣಗಳಂತೆ ಇಲ್ಲಿ ನಾಲ್ಕು ಅಥವಾ ಆರು ರನ್‌ವೇಗಳಿಲ್ಲ. ಹೀಥ್ರೂ ಹೊಂದಿರುವುದು ಕೇವಲ ಎರಡು ರನ್‌ವೇಗಳು. ಆದರೂ, ಈ ಎರಡು ರನ್‌ವೇಗಳು ಜಗತ್ತಿನ ಯಾವುದೇ ಎರಡು-ರನ್‌ವೇ ವಿಮಾನ ನಿಲ್ದಾಣಗಳಿಗಿಂತ ಹೆಚ್ಚು ‘ಭಾರಿ ಗಾತ್ರದ ಜೆಟ್’ ವಿಮಾನಗಳನ್ನು ನಿರ್ವಹಿಸುತ್ತವೆ.

Vishweshwar Bhat Column: ವಿಮಾನ ಸಿಬ್ಬಂದಿಯೂ, ಗಿಫ್ಟ್‌ ಸ್ವೀಕಾರವೂ

Vishweshwar Bhat Column: ವಿಮಾನ ಸಿಬ್ಬಂದಿಯೂ, ಗಿಫ್ಟ್‌ ಸ್ವೀಕಾರವೂ

ಇತ್ತೀಚೆಗೆ ಅಮೆರಿಕನ್ ಏರ್‌ಲೈನ್ಸ್‌ನ ಪ್ರಯಾಣಿಕರೊಬ್ಬರು ಸಿಬ್ಬಂದಿಗೆ ದುಬಾರಿ ‘ಆಪಲ್ ಏರ್‌ಪಾಡ್ಸ್’ ನೀಡಿದ ಘಟನೆ ವೈರಲ್ ಆದ ನಂತರ, ವಿಮಾನಯಾನ ಸಂಸ್ಥೆಗಳು ‘ಉಡುಗೊರೆ ನೀತಿ’ (Gifting Policy) ಯನ್ನು ಜಾರಿಗೊಳಿಸಿವೆ. ಹೊರಗಿನಿಂದ ನೋಡಲು ಇದು ಕೇವಲ ಸೌಜನ್ಯದ ವಿಷಯವಾಗಿ ಕಂಡರೂ, ವಿಮಾನಯಾನ ಉದ್ಯಮದಲ್ಲಿ ಉಡುಗೊರೆಗಳನ್ನು ಸ್ವೀಕರಿಸುವುದಕ್ಕೆ ಕಠಿಣವಾದ ಮತ್ತು ಸಂಕೀರ್ಣ ವಾದ ನಿಯಮಗಳಿವೆ.

Vishweshwar Bhat Column: ಒಂದು ಫೋಟೋ ಹುಟ್ಟಿಸಿದ ಭೀತಿ

Vishweshwar Bhat Column: ಒಂದು ಫೋಟೋ ಹುಟ್ಟಿಸಿದ ಭೀತಿ

2017ರ ಏಪ್ರಿಲ್ ೫ರಂದು ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಕೆಲವು ಪ್ರಮುಖ ಪತ್ರಿಕೆಗಳಲ್ಲಿ ಒಂದು ಫೋಟೋ ಪ್ರಕಟವಾಗಿತ್ತು. ಪೋಲೆಂಡ್‌ನ ಮೇಲೆ ಎಮಿರೇಟ್ಸ್ ಮತ್ತು ಪಾಕಿಸ್ತಾನ್ ಇಂಟರ್‌ ನ್ಯಾಷನಲ್ ಏರ್‌ರ್ಲೈ ವಿಮಾನ ಪರಸ್ಪರ ಮುಖಾಮುಖಿಯಾಗಿ ಆಗಸದಲ್ಲಿ ಇನ್ನೇನು ಡಿಕ್ಕಿ ಹೊಡೆದೇ ಬಿಟ್ಟವು ಎಂದು ಭಾಸವಾಗುವ ಫೋಟೋ ಅದು. ಆ ಫೋಟೋ ವಾಯುಯಾನ ಪ್ರೇಮಿ ಗಳನ್ನು ಮತ್ತು ಸಾಮಾನ್ಯ ಜನರನ್ನು ಹೌಹಾರುವಂತೆ ಮಾಡಿತ್ತು.

Vishweshwar Bhat Column: ಆಮೆಗಳ ಹಿತರಕ್ಷಣೆ ಯೋಚಿಸಿ, ಅಭಿವೃದ್ಧಿ ಯೋಜನೆ ಕೈಬಿಟ್ಟ ಒಮಾನ್‌ !

ಆಮೆಗಳ ಹಿತರಕ್ಷಣೆ ಯೋಚಿಸಿ, ಅಭಿವೃದ್ಧಿ ಯೋಜನೆ ಕೈಬಿಟ್ಟ ಒಮಾನ್‌ !

ಒಮಾನ್ ದೇಶವು ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದೆ- ‘ನಾವು ಪ್ರಕೃತಿಯನ್ನು ತಿದ್ದಲು ಹೋಗುವುದಿಲ್ಲ, ಪ್ರಕೃತಿ ಹೇಗಿದೆಯೋ ಹಾಗೆಯೇ ಅದನ್ನು ಪ್ರೀತಿಸುತ್ತೇವೆ’. ಒಮಾನ್‌ನ ಪರಿಸರ ಪ್ರೇಮಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ‘ರಾಸ್ ಅಲ್ ಜಿನ್ಜ್’ ಆಮೆ ಸಂರಕ್ಷಣೆ ಕೇಂದ್ರ. ಇದು ಅರೇಬಿಯನ್ ಸಮುದ್ರದ ತೀರದಲ್ಲಿರುವ ಒಂದು ಸುಂದರವಾದ ಬೀಚ್.

Vishweshwar Bhat Column: ವಿಮಾನದ ಚಲನೆಯ ಆಯಾಮ

Vishweshwar Bhat Column: ವಿಮಾನದ ಚಲನೆಯ ಆಯಾಮ

ಕಾರನ್ನು ರಸ್ತೆಯ ಮೇಲೆ ಎಡಕ್ಕೆ ಅಥವಾ ಬಲಕ್ಕೆ ತಿರುಗಿಸುವುದು ಸುಲಭ. ಆದರೆ, ಗಾಳಿಯಲ್ಲಿ ತೇಲುತ್ತಿರುವ ಬೃಹತ್ ವಿಮಾನವನ್ನು ನಿಯಂತ್ರಿಸುವುದು ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆ. ವಿಮಾನದ ಈ ನಿಯಂತ್ರಣಕ್ಕೆ ಅದರ ರೆಕ್ಕೆಗಳು ಮತ್ತು ಬಾಲದ ಭಾಗದಲ್ಲಿರುವ ವಿವಿಧ ಚಲಿಸುವ ಭಾಗಗಳು ( Control Surfaces) ಕಾರಣ.

Vishweshwar Bhat Column: ವಿಮಾನಗಳು ಎತ್ತರದಲ್ಲಿ ಹಾರುವುದೇಕೆ ?

Vishweshwar Bhat Column: ವಿಮಾನಗಳು ಎತ್ತರದಲ್ಲಿ ಹಾರುವುದೇಕೆ ?

ವಿಮಾನವೊಂದು ನೆಲದ ಮೇಲೆ ಅಥವಾ ಕಡಿಮೆ ಎತ್ತರದಲ್ಲಿ ಹಾರುವುದಕ್ಕೂ, 35000 ಅಡಿ ಎತ್ತರದಲ್ಲಿ ಹಾರುವುದಕ್ಕೂ ಬಹಳ ವ್ಯತ್ಯಾಸವಿದೆ. ಭೂಮಿಯ ಮೇಲ್ಮೈಗೆ ಹತ್ತಿರವಿದ್ದಷ್ಟೂ ಗಾಳಿಯ ಸಾಂದ್ರತೆ ಹೆಚ್ಚಿರುತ್ತದೆ. ಸರಳವಾಗಿ ಹೇಳಬೇಕೆಂದರೆ, ಕೆಳಗಿನ ಗಾಳಿ ದಪ್ಪವಾಗಿರುತ್ತದೆ. ಇಂಥ ದಪ್ಪ ಗಾಳಿಯಲ್ಲಿ ವಿಮಾನ ಮುನ್ನುಗ್ಗಬೇಕಾದರೆ, ಅದು ಹೆಚ್ಚಿನ ‘ಡ್ರ್ಯಾಗ್’ ಅಥವಾ ವಾಯು ಪ್ರತಿರೋಧವನ್ನು ಎದುರಿಸ ಬೇಕಾಗುತ್ತದೆ.

Vishweshwar Bhat Column: ನೊಬೆಲ್‌ ಸಾಹಿತಿ-ವಿಮರ್ಶಕ ನೆಲಕ್ಕುರುಳಿ ಹೊಡೆದಾಡಿಕೊಂಡರು !

ನೊಬೆಲ್‌ ಸಾಹಿತಿ-ವಿಮರ್ಶಕ ನೆಲಕ್ಕುರುಳಿ ಹೊಡೆದಾಡಿಕೊಂಡರು !

ನೊಬೆಲ್ ಪುರಸ್ಕೃತರು ಸಹ ಮನುಷ್ಯರೇ ಅಲ್ಲವಾ, ಹೊಡೆದಾಟ ಮನುಷ್ಯ ಸಹಜ ಗುಣ ಅಲ್ಲವಾ ಎಂದು ಭಾವಿಸಿ, ಆ ಘಟನೆಯನ್ನು ಅರಗಿಸಿಕೊಳ್ಳಬಹುದಷ್ಟೇ. ಸಾಹಿತ್ಯ ಲೋಕದಲ್ಲಿ ಲೇಖಕರು ಸಾಮಾನ್ಯವಾಗಿ ತಮ್ಮ ಲೇಖನಿಗಳ ಮೂಲಕ ಕಾದಾಡುವುದನ್ನು ನೋಡಿದ್ದೇವೆ. ಪದಗಳೇ ಅವರ ಅಸ್ತ್ರ ಮತ್ತು ವಿಮರ್ಶೆಯೇ ಅವರ ರಕ್ಷಾಕವಚ.

Vishweshwar Bhat Column: ವಿಮಾನಕ್ಕೆ ಬಣ್ಣ ಬಳಿಯುವುದು

Vishweshwar Bhat Column: ವಿಮಾನಕ್ಕೆ ಬಣ್ಣ ಬಳಿಯುವುದು

ವಿಮಾನದ ಹೊರಭಾಗವನ್ನು ಅಲ್ಯೂಮಿನಿ ಯಂ ಮತ್ತು ಕಾಂಪೋಸಿಟ್ ವಸ್ತುಗಳಿಂದ ಮಾಡಲಾಗಿರು ತ್ತದೆ. ಸರಿಯಾದ ಬಣ್ಣದ ಲೇಪನ ಇಲ್ಲದಿದ್ದರೆ, ಈ ಲೋಹಗಳು ಬೇಗನೆ ತುಕ್ಕು ಹಿಡಿಯುತ್ತವೆ. ಬಣ್ಣವು ಒಂದು ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ವಿಮಾನದ ಮೈಮೇಲೆ ಧೂಳು ಅಥವಾ ಕಣಗಳು ಕುಳಿತರೆ ಅದು ಹಾರಾಟದ ವೇಗಕ್ಕೆ ಅಡ್ಡಿಯಾಗಬಹುದು.

Loading...