ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಬೈಲೈನ್‌ ಸ್ಟೋರೀಸ್‌
Yagati Raghu Naadig Column: ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಕರ್ನಾಟಕದಲ್ಲೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವಿದ್ದಿದ್ದರೆ ಅಥವಾ ಕೇಂದ್ರದ ಮೇಲೆ ಪ್ರಭಾವ ಬೀರುವ ಮಟ್ಟಿಗಿನ ಹಿಡಿತ ರಾಜ್ಯದ ಆಳುಗರಿಗೆ ಇದ್ದಿದ್ದರೆ ಎಷ್ಟು ಚೆನ್ನಿತ್ತು ಎನಿಸುವುದು ನಿಜ. ಆದರೆ ಅದೇನು ವಿಚಿತ್ರವೋ, ಕೆಲವೇ ನಿದರ್ಶನಗಳನ್ನು ಹೊರತುಪಡಿಸಿದರೆ ರಾಜ್ಯಕ್ಕೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೂ ಆಗಿ ಬರುತ್ತಿಲ್ಲ ಎಂಬುದು ಖರೆ!

ವಾಡಿಕೆಗಿಂತ ಮುಂಗಾರು ಜೋರು

ಮೇ ಅಂತ್ಯ, ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು

ಮೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಜೂನ್‌ನಲ್ಲಿ ಮುಂಗಾರು ಮಳೆ ಆರಂಭ ವಾಗುತ್ತದೆ ಎನ್ನಲಾಗಿದೆ. ವಾಡಿಕೆಗಿಂತ ಕೊಂಚ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು, ಸುಮಾರು ಶೇ.105 ರಷ್ಟು ಮಳೆಯಾಗಲಿದೆ. ಈ ಬಾರಿಯ ಮುಂಗಾರು ಮಾರುತಗಳು, ಮೇ ಕೊನೆಯ ವಾರದಲ್ಲಿ ದಕ್ಷಿಣದ ಕೇರಳ ಪ್ರವೇಶಿಸಿ, ಸೆಪ್ಟೆಂಬರ್‌ವರೆಗೂ ಮಳೆಯಾಗಲಿದೆ ಎನ್ನಲಾಗುತ್ತಿದೆ.

Caste Census: ಸರಕಾರ ಸುಭದ್ರಕ್ಕೆ ಜಾತಿಗಣತಿ ಅಸ್ತ್ರ

ಸರಕಾರ ಸುಭದ್ರಕ್ಕೆ ಜಾತಿಗಣತಿ ಅಸ್ತ್ರ

ವಾಸ್ತವದಲ್ಲಿ ಜಾತಿಗಣತಿ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನ ಮಾಡಿದರೆ ಈಗಿರುವ ಮೀಸಲು ಪ್ರಮಾಣ ಶೇ.85 ಮೀರುತ್ತದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುವುದು ದೂರದ ಮಾತು. ಅದರಲ್ಲೂ ಇದನ್ನು ಸಂಸತ್‌ನ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಸದ್ಯಕ್ಕೆ ಕನಸಿನ ಮಾತು. ಈ ನಿಟ್ಟಿನಲ್ಲಿ ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ವಿಫಲ ಯತ್ನ ನಡೆಸಿವೆ

ಚಿನ್ನ ಎಗರಿಸಿದ ಇನ್ಸ್‌ ಪೆಕ್ಟರ್‌ ವಿರುದ್ದ ತನಿಖೆಗೆ ಆಗ್ರಹ !

ಆರೋಪ ರುಜುವಾತು ಹೊತ್ತಲ್ಲಿ ತನಿಖಾಧಿಕಾರಿ ಬದಲಾವಣೆ

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಮಾಡಿದ ಸಾಧನೆಗೆ ಬಾಲಕೃಷ್ಣ ನಾಯಕ್‌ಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು. ಆದರೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರೇ ಅವರನ್ನು ವರ್ಗಾಯಿಸುವಂತೆ ಅಲ್ಲಿನ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ.ಖಾದರ್‌ಗೆ ದೂರು ನೀಡಿದ್ದರು

ವಿನಯ್‌ ಸಾವಿನ ಸುತ್ತ, ನಿಗೂಢತೆಯ ಹುತ್ತ

ವಿನಯ್‌ ಸಾವಿನ ಸುತ್ತ, ನಿಗೂಢತೆಯ ಹುತ್ತ

ದೇಶಪ್ರೇಮ, ಬಿಜೆಪಿ ಸಂಬಂಧಿತ ಮಾಹಿತಿಗಳನ್ನು ವಿನಯ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸುತ್ತಿದ್ದರು. ಕೊಡಗಿನ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅನೇಕ ವಾಟ್ಸಪ್ ಗ್ರೂಪ್ ಗಳಂತೆಯೇ ಕೊಡಗಿನ ಸಮಸ್ಯೆಗಳು ಎಂಬ ವಾಟ್ಸಪ್ ಗ್ರೂಪ್ ಕಾರ್ಯಪ್ರವೃತ್ತ ವಾಗಿದೆ. ಕಳೆದ ಫೆಬ್ರವರಿಯಲ್ಲಿ ಈ ಬಳಗಕ್ಕೆ ಸೇರ್ಪಡೆಯಾಗಿದ್ದ ವಿನಯ್ ನನ್ನು ಆ ಬಳಗದ ಇತರರು ಅಡ್ಮಿನ್ ಮಾಡಿದ್ದರು. ಆದರೆ, ಅಡ್ಮಿನ್ ಆದ ಕೇವಲ 5 ದಿನಗಳಲ್ಲಿಯೇ ವಿನಯ್ ಪಾಲಿಗೆ ಆಘಾತ ಕಾದಿತ್ತು.

ಭ್ರಷ್ಟರಿಗೆ ಪ್ರಾಮಾಣಿಕ ಅಧಿಕಾರಿಗಳೇ ಟಾರ್ಗೆಟ್‌, ಮಂಗಳೂರಿನಲ್ಲಿ ಹೆಚ್ಚುತ್ತಿದೆ ಭ್ರಷ್ಟಾಚಾರಿಗಳ ಲಾಬಿ

ಭ್ರಷ್ಟಾಚಾರ- ವಾಮಾಚಾರ ಅಬ್ಬರ

ಮಂಗಳೂರಿನಲ್ಲಿ ಪ್ರಾಮಾಣಿಕರ ಮೇಲೆ ವಾಮಾಚಾರ ಮಾಡುವ ಭ್ರಷ್ಟಾ ಚಾರಿಗಳು ಹೆಚ್ಚತೊಡಗಿ ದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಉರ್ವಾ ಕಚೇರಿಯಲ್ಲಿ ಬ್ರೋಕರುಗಳ ಆಟಾಟೋಪ ಮಿತಿ ಮೀರಿದ್ದು ಮುಡಾ ಕಮಿಷನರ್ ಅವರನ್ನೇ ಬ್ಲಾಕ್ ಮೇಲ್ ಮಾಡುವ ಹಂತಕ್ಕಿಳಿ ದಿದ್ದಾರೆ. ಇದರಿಂದ ನೊಂದ ಮುಡಾ ಕಮಿಷನರ್ ನೂರ್ ಝಹರಾ ಖಾನಂ ಅವರು ಇಬ್ಬರು ಬ್ರೋಕರ್ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದು ಎಫ್‌ ಐಆರ್ ದಾಖಲಾಗಿದೆ.

ಜಿಲ್ಲೆಯಲ್ಲಿಲ್ಲ ವಾಣಿಜ್ಯ ಬೆಳೆಗಳ ಕಾಪಾಡುವ ಸರಕಾರಿ ಶೈತ್ಯಾಗಾರ

ಬೆಲೆಯಿಳಿಕೆಯಿಂದ ಪಾರಾಗಲು ರೈತರ ಪರದಾಟ

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಯನ್ನು ರೈತರು ಸುಮಾರು ೪ ಸಾವಿರ ಹೆಕ್ಟೇರ್‌ ನಲ್ಲಿ ಬೆಳೆಯಲಾಗಿದೆ.ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಆಲೂಗಡ್ಡೆಗೆ ಬೆಂಗಳೂರು ಸೇರಿದಂತೆ ಆಂಧ್ರ, ಮಹಾರಾಷ್ಟ್ರ ,ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ ಈ ಬಾರಿ ಎಲ್ಲೆಡೆ ಉತ್ತಮ ಬೆಳೆಯಾಗಿರುವ ಕಾರಣ ರಾಜ್ಯದ ಆಲೂಗಡ್ಡೆಗೆ ಬೇಡಿಕೆ ಇಲ್ಲವಾಗಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.

BJP Karnataka: ಬಿಜೆಪಿಯ ಅತೃಪ್ತರಿಗೆ ಅತಂತ್ರದ ಆತಂಕ

ಬಿಜೆಪಿಯ ಅತೃಪ್ತರಿಗೆ ಅತಂತ್ರದ ಆತಂಕ

ಸುದೀರ್ಘ ಕಾಲದ ಪಕ್ಷದೊಳಗಿನ ಈಗ ಅತೃಪ್ತಿ ಹೋರಾಟದ ಹಿಂದಿನ ರೂವಾರಿಗಳ ತೆರೆಮರೆ ಯ ಆರ್ಭಟ ಕೂಡ ಸದ್ದಡಗಿದ್ದು, ಅವರಲ್ಲೂ ಆತಂಕ ಶುರುವಾಗಿದೆ. ಅಂದಹಾಗೆ ಯತ್ನಾಳ್‌ಗೆ ಸಂಬಂಧಿಸಿದ ಬೆಳವಣಿಗೆಗೆ ನೈಜ ಕಾರಣವೇನು ಎನ್ನುವ ಚರ್ಚೆ ತೀವ್ರವಾಗಿದೆ. ಉಚ್ಚಾಟನೆಗೆ ನಿಜಕ್ಕೂ ಆರೋಪ, ಪ್ರತ್ಯಾರೋಪಗಳ ಹುಚ್ಚು ಆಟ ಕಾರಣವೋ ಅಥವಾ ಮೆಚ್ಚುವಂತೆ ಕಾಣುತ್ತಿದ್ದ ಬಿಚ್ಚು ಮಾತುಗಳು ಕಾರಣವೋ ಎನ್ನುವುದು ಈಗ ಅತೃಪ್ತರರಿಗೆ ಆರ್ಥವೇ ಆಗು ತ್ತಿಲ್ಲ ಎನ್ನಲಾಗಿದೆ.

ರಸ್ತೆ ತೆರಿಗೆ ಕಟ್ಟಲು ವರ್ಷದವರೆಗೆ ಅವಕಾಶವಿದ್ದರೂ ದಂಡಾಸ್ತ್ರ ಪ್ರಯೋಗ

ನೆರೆ ರಾಜ್ಯದಿಂದ ಕಾರು ತಂದು ಓಡಿಸಿದರೆ ತಪ್ಪೇನು ?

ಬೆಂಗಳೂರಿನಲ್ಲಿ ವಾಸಿಸುವ ಅನೇಕರು ಪಾಂಡಿಚೇರಿಯಲ್ಲಿ ವಾಹನ ಖರೀದಿಸುತ್ತಾರೆ. ಬಳಿಕ ವರ್ಷದೊಳಗೆ ಕರ್ನಾಟಕ ರಸ್ತೆ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ಆರ್‌ಟಿಒ ಅಧಿಕಾರಿಗಳು, ವರ್ಷದ ಅವಧಿ ಮೀರದಿರುವ ವಾಹನಗಳನ್ನು ಜಪ್ತಿ ಮಾಡುತ್ತಿರುವ ಹಾಗೂ ಆ ವಾಹನಗಳಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುತ್ತಿದ್ದಾರೆ ಎಂದು ಕಾರ್ ಮಾಲೀಕರು ಆರೋಪ ಮಾಡು ತ್ತಿದ್ದಾರೆ

Legislature House: ಭದ್ರಕೋಟೆ ನಡುವೆಯಿರುವ ಎಲ್‌ಎಚ್ʼಗೇಕೆ ಸ್ಮಾರ್ಟ್‌ ಲಾಕರ್‌ ?

ಭದ್ರಕೋಟೆ ನಡುವೆಯಿರುವ ಎಲ್‌ಎಚ್ʼಗೇಕೆ ಸ್ಮಾರ್ಟ್‌ ಲಾಕರ್‌ ?

ರಾಜಧಾನಿ ಬೆಂಗಳೂರಿನ ಭದ್ರಕೋಟೆಯಂತಿರುವ, ಶಕ್ತಿಸೌಧ ಹಾಗೂ ರಾಜಭವನಕ್ಕೆ ಹೊಂದಿ ಕೊಂಡಿರುವ ಶಾಸಕರ ಭವನದಲ್ಲಿ ಶಾಸಕರ ಕೋಣೆಗಳಿಗೆ ಆಧುನಿಕ ಸ್ಮಾರ್ಟ್ ಲಾಕ್, ಲಾಕರ್ ಅಳವಡಿಸಲು ಮುಂದಾಗಿರುವ ವಿಧಾನಸಭಾ ಸಚಿವಾಲಯದ ನಡೆಗೆ ಹಲವರು ಅಚ್ಚರಿ ಯೊಂದಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Ration Shop scam: ಉಳಿಕೆ ಅಕ್ಕಿ ಕೊಡುವಲ್ಲಿ ಕಳ್ಳಾಟ !

ಫೆಬ್ರವರಿ ತಿಂಗಳ ಹೆಚ್ಚುವರಿ 5 ಕೆಜಿ ಕೊಡುವುದಕ್ಕೆ ಹಿಂಜರಿತ

ಕಳೆದ ತಿಂಗಳಿನಿಂದ (ಫೆಬ್ರವರಿ) ನಗದಿನ ಬದಲಿಗೆ ಐದು ಕೆ.ಜಿ. ಅಕ್ಕಿಯನ್ನೇ ನೀಡಲು ತೀರ್ಮಾ ನಿಸಿತ್ತು. ಆದರೆ ಫೆಬ್ರವರಿಯಲ್ಲಿ ಅಗತ್ಯವಿರುವಷ್ಟು ಅಕ್ಕಿಯ ಕೊರತೆ ಇದ್ದಿದ್ದರಿಂದ ಮಾರ್ಚ್‌ ನಲ್ಲಿ ಬಾಕಿ ಐದು ಕೆಜಿ ಅಕ್ಕಿ ನೀಡಲು ಆದೇಶಿಸಲಾಗಿದೆ. ಮಾರ್ಚ್‌ನಲ್ಲಿ ರಾಜ್ಯದ ಬಹುತೇಕ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿವ್ಯಕ್ತಿಗೆ ಮಾರ್ಚ್‌ನಲ್ಲಿ ನೀಡ ಬೇಕಿದ್ದ ೧೫ ಕೆ.ಜಿ ಅಕ್ಕಿಯ ಬದಲು ಕೇವಲ 10 ಕೆ.ಜಿ. ನೀಡುತ್ತಿದ್ದಾರೆ

Honey Trap: ಹನಿ ಟ್ರ್ಯಾಪ್‌ ತನಿಖೆಗೆ ಬಿಜೆಪಿಗಿಂತ ಕಾಂಗ್ರೆಸ್‌ ಒತ್ತಡವೇ ಜಾಸ್ತಿ

ಹನಿ ಟ್ರ್ಯಾಪ್‌ ತನಿಖೆಗೆ ಬಿಜೆಪಿಗಿಂತ ಕಾಂಗ್ರೆಸ್‌ ಒತ್ತಡವೇ ಜಾಸ್ತಿ

ಹನಿಟ್ರ್ಯಾಪ್‌ನಲ್ಲಿ ಕಾಂಗ್ರೆಸ್ ಕೈವಾಡವಿದೆ ಎನ್ನುವ ಸಚಿವ ಕೆ.ಎನ್.ರಾಜಣ್ಣ ಅವರ ಅಧಿಕೃತ ಹೇಳಿಕೆಯಲ್ಲಿರುವ ಅಂಶ ಪಕ್ಷದ ವರಿಷ್ಠರನ್ನುಕಂಗೆಡಿಸಿದೆ. ಇದರಿಂದ ಪಕ್ಷದ ವರಿಷ್ಠರು ಕೆಂಡಾಮಂಡಲವಾಗಿದ್ದು, ಸತತ ಸೋಲು ಗಳಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಇದು ಅಪಾ ಯದ ಗಂಟೆಯಂತಾಗಿದೆ. ಈ ಮಧ್ಯೆ, ಈ ಪ್ರಕರಣವನ್ನು ಇಲ್ಲಿಗೇ ಬಿಡಬಾರದು.

ಇದೀಗ ಸರಕು ಸಾಗಣೆಯಲ್ಲಿ ತೊಡಗಿಸಿಕೊಳ್ಳಲು ಮೆಟ್ರೋ ಚಿಂತನೆ

ಮೆಟ್ರೋದಲ್ಲಿ ಸರಕು ಸಾಗಾಟ?

ದೆಹಲಿ ಮೆಟ್ರೋದಲ್ಲಿ ಸರಕು ಸಾಗಾಣಿಕೆಗೆ ಅವಕಾಶ ನೀಡಲಾಗಿದ್ದು, ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಅತಿವೇಗವಾಗಿ ವಸ್ತುಗಳನ್ನು ರವಾನಿಸುವ ಜತೆಗೆ ಮೆಟ್ರೋ ಸಂಸ್ಥೆಗಳಿಗೂ ಹೆಚ್ಚುವರಿ ಆದಾಯ ಬರುತ್ತಿದೆ. ಆದ್ದರಿಂದ ದೆಹಲಿ ಮಾದರಿಯನ್ನೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಯೂ ಅಳವಡಿಸುವ ಬಗ್ಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ ದ್ದು, ಶೀಘ್ರದಲ್ಲಿಯೇ ಈ ಸಂಬಂಧ ಖಾಸಗಿ ಸಂಸ್ಥೆಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

App for cauvery Water: ಕಾವೇರಿ ನೀರಿಗೂ App ಬುಕ್ಕಿಂಗ್‌ ಸೌಲಭ್ಯ

ಕಾವೇರಿ ನೀರಿಗೂ App ಬುಕ್ಕಿಂಗ್‌ ಸೌಲಭ್ಯ

ಬೇಸಿಗೆಯ ಸಮಯದಲ್ಲಿ ಬೆಂಗಳೂರಿನ ಹಲವು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುವ ಸಾರ್ವಜನಿಕರಿಗೆ ಟ್ಯಾಂಕರ್ ಮಾಫಿ ಯಾದವರು ಭಾರಿ ಶುಲ್ಕವನ್ನು ವಿಧಿಸುತ್ತಿರುವ ಆರೋಪ ಕೇಳಿಬಂದಿದೆ. ಆದ್ದರಿಂದ ಈ ಬಾರಿ ಜಲ ಮಂಡಳಿಯ ವತಿಯಿಂದ ಟ್ಯಾಂಕರ್ ಮೂಲಕ ಕಾವೇರಿ ನೀರಿನ ಟ್ಯಾಂಕರ್ ಪಡೆಯಲು ಆಪ್ ಮೂಲಕ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.

ಐಪಿಎಲ್ ಟಿಕೆಟ್: ಬೆಂಗ್ಳೂರಲ್ಲಿ ಡಿಮಾಂಡಪ್ಪೋ ಡಿಮಾಂಡ್!

ಐಪಿಎಲ್ 18ನೇ ಆವೃತ್ತಿಯ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭ

ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಸೇರಿದಂತೆ ಆರ್‌ಸಿಬಿ ಬಳಗದ ಆಟಗಾರರ ಆಟವನ್ನು ಮೈದಾನದಲ್ಲಿಯೇ ನೇರ ಬಂದು ಕಣ್ತುಂಬಿಕೊಳ್ಳಬೇಕೆಂಬ ಉತ್ಸಾಹದಲ್ಲಿರುವ ಆರ್‌ಸಿಬಿಯ ಅಭಿಮಾನಿಗಳಿಗೆ ಈ ಸಲದ ಐಪಿಎಲ್ ಟಿಕೆಟ್ ದರ ಕೇಳಿ ಶಾಕ್ ಆಗಿದೆ. ದೇಶದ ಇತರ ಯಾವುದೇ ಏಳು ಫ್ರಾಂಚೈಸಿಯ ಟಿಕೆಟ್ ದರವು ಬೆಂಗಳೂರಿನ ಆರ್‌ಸಿಬಿ ಪಂದ್ಯದ ಅರ್ಧದಷ್ಟಿಲ್ಲ ಎಂಬುದು ಗಮನಾರ್ಹ

Demand for Fish: ಮೀನು, ಮಟನ್‌ ಗೆ ಬೇಡಿಕೆ

ಮೀನು, ಮಟನ್‌ ಗೆ ಬೇಡಿಕೆ

ಕೋಳಿ, ಮಟನ್ ಸಹವಾಸವೇ ಬೇಡ ಎಂದು ಮೀನು ಸೇವಿಸುವತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೀಗಾಗಿ ಮೀನಿನ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮೀನಿನ ಬೆಲೆ ಶೇ.30 ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿರುವುದು ಮೊದಲ ಕಾರಣವಾದರೆ, ಮೀನುಗಾರಿಕೆ ಕುಸಿತ ಕಂಡಿರುವುದು ಪ್ರಮುಖ ಇನ್ನೊಂದು ಕಾರಣವಾಗಿದೆ.

KSRTC Bus: ಬಸ್‌ ಹತ್ತಲು ಸಾಲಾಗಿ ಬನ್ನಿ

ಬಸ್‌ ಹತ್ತಲು ಸಾಲಾಗಿ ಬನ್ನಿ

ನೂಕುನುಗ್ಗಲು ತಡೆಗಟ್ಟಲು ಇದೀಗ ಕೆಎಸ್‌ಆರ್‌ಟಿಸಿ ಬಸ್ ಹತ್ತುವುದಕ್ಕೆ ಸರದಿ ಸಾಲು ಗಳನ್ನು ಪರಿಚಯಿಸಲು ಮುಂದಾಗಿದೆ. ಇದಿಷ್ಟೇ ಅಲ್ಲದೇ ಒಂದು ವೇಳೆ ನೂಕು ನುಗ್ಗಲು ಮಾಡಲು ಯಾರಾದರೂ ಪ್ರಯತ್ನಿಸಿದರೆ, ಕ್ರಮ ವಹಿಸಲು ಅಧಿಕಾರಿಗಳು ತೀರ್ಮಾನಿಸಿ ದ್ದಾರೆ. ಈ ಮೂಲ ಕ ಬಸ್ ನಿಲ್ದಾಣಗಳಲ್ಲಿ ಎದುರಾಗುವ ಹತ್ತಾರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಬೇಡಿಕೆ ಇಂದು ನಿನ್ನೆಯದಲ್ಲ, ಅದು ದಶಕಗಳಷ್ಟು ಹಳೆಯ ವಿಷಯ. ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಇತ್ತೀಚಿನ ವರ್ಷಗಳಲ್ಲಿ ತನ್ನ ಬಲವೃದ್ಧಿ ಮಾಡಿಕೊಂಡಿದ್ದು, ಹಿಂಸಾ ಹೋರಾಟ ತೀವ್ರಗೊಳಿಸಿದೆ. ಪಾಕ್ ಸೇನೆ, ಆಡಳಿತದ ವಿರುದ್ಧ ತನ್ನ ದಾಳಿ ಮುಂದುವರಿಸು ತ್ತಲೇ ಬಂದಿದೆ

ಗಡಿಭಾಗದ ಅಮಾಯಕ ಮರಾಠಿಗರಿಗೆ, ಕನ್ನಡ ಭಾಷಿಕರಿಗೆ ಕಿರಿಕ್

ಮರಾಠಿಯಲ್ಲೇ ದಾಖಲೆಗಾಗಿ ಕ್ಯಾತೆ

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶ. ಭಾಷೆ ವಿಷಯದಲ್ಲಿ ಹೊತ್ತಿಕೊಳ್ಳುವ ಸಣ್ಣ ಕಿಡಿಯೂ ಇಲ್ಲಿ ಎರಡು ರಾಜ್ಯಗಳ ಸ್ವಾಸ್ಥ್ಯ ಹಾಳು ಮಾಡುತ್ತವೆ. ಅನೇಕ ಬಾರಿ ಎಂಇಎಸ್ ಹಾಗೂ ಶಿವಸೇನೆ ಮಾಡುವ ಅವಾಂತರ ಹಾಗೂ ಪುಂಡಾಟಕ್ಕೆ ಅಮಾಯಕ ಮರಾಠಿ ಹಾಗೂ ಕನ್ನಡ ಭಾಷಿಕರು ತೊಂದರೆಗೆ ಒಳಗಾಗುತ್ತಾರೆ. ಈ ಮಧ್ಯೆ ಅಧಿಕಾರಿಗಳ ದ್ವಂದ್ವ ನಿರ್ಧಾ ರಕ್ಕೆ ಮತ್ತೊಮ್ಮೆ ಬೆಳಗಾವಿ ಹೊತ್ತಿ ಉರಿಯುವಂತಾಗಿದೆ.

ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್‌ ಬಾಕಿ

ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್‌ ಬಾಕಿ

ಮಗುವಿನ ರಕ್ಷಣೆಗೆ ಯಂತ್ರೋಪಕರಣ ಪೂರೈಸಿ ಸತತ 22 ತಾಸು ಕೆಲಸ ಮಾಡಿ ಕಾರ್ಯಾಚರಣೆ ಯಶಸ್ವಿಗೊಳಿಸುವಲ್ಲಿ ನೆರವಾಗಿದ್ದೇವೆ. ಆದರೆ ನಮ್ಮ ಕೂಲಿ ಹಾಗೂ ಯಂತ್ರೋಪಕರಣಗಳ ಬಾಡಿಗೆ 3 ಲಕ್ಷದಷ್ಟು ಇನ್ನೂ ಪಾವತಿಯಾಗಿಲ್ಲ. ಬಿಲ್ ಮೊತ್ತ ಕ್ಕಾಗಿ ಗ್ರಾಪಂ ಪಿಡಿಓ ಅವರಿಂದ ಹಿಡಿದು, ತಹಸೀ ಲ್ದಾರ್, ಎಸಿ, ಡಿಸಿವರೆಗೂ ಭೇಟಿಯಾಗಿ ಕೇಳುತ್ತಲೇ ಬಂದಿದ್ದರೂ ವರ್ಷವಾದರೂ ಬಿಲ್ ಪಾವತಿ ಯಾಗಿಲ್ಲ

ಸಹಜ ಪ್ರಸವ ಮಾಯ, ಶಸ್ತ್ರಚಿಕಿತ್ಸೆ ಅಯೋಮಯ

ಸಿಸೇರಿಯನ್ ಹೆರಿಗೆಗೆ ಪ್ರಾಮುಖ್ಯ ನೀಡುತ್ತಿರುವ ಪ್ರಕರಣಗಳು ಹೆಚ್ಚು

ಖಾಸಗಿ ಆಸ್ಪತ್ರೆಗಳಲ್ಲಿ ಬಹುತೇಕ ಸಿಸೇರಿಯನ್ ಹೆರಿಗೆಗೆ ಆದ್ಯತೆ ನೀಡಲಾಗುತ್ತದೆ. ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಗರ್ಭಿಣಿಯರಲ್ಲಿ ಆತಂಕ ಮೂಡಿಸಿ, ಸಿಸೇರಿಯನ್‌ಗೆ ಪ್ರೋತ್ಸಾಹಿಸಲಾಗುತ್ತದೆ. ಸಹಜ ಹೆರಿಗೆಗೆ ಹೋಲಿಸಿದರೆ ಸಿಸೇರಿಯನ್ ತಾಯಿ, ಮಗುವಿನ ಆರೋಗ್ಯ ಕಾಪಾಡಲು ಉತ್ತಮ ಎನಿಸಿದರೂ ಬಡವರ ಪಾಲಿಗೆ ಬಿಸಿ ತುಪ್ಪವಾಗಿದೆ

ವೀಳ್ಯದೆಲೆ ಮಾರುಕಟ್ಟೆಗೆ ಪೂರೈಕೆ ಶೇ.50 ಕುಸಿತ, ಇಳುವರಿಯೂ ಕಡಿಮೆ

ಒಂದು ವೀಳ್ಯದೆಲೆ ಬೆಲೆ - 5 ರೂ.

ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಗದಗ, ವಿಜಯಪುರ ಹಾಗೂ ಇತರೆ ಕಡೆಗಳಲ್ಲಿ ಬೆಳೆಯುತ್ತಿರುವ ವೀಳ್ಯೆದೆಲೆಯ ಇಳುವರಿ ಈ ವರ್ಷ ತೀರಾ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ವೀಳ್ಯೆದೆಲೆ ಪೂರೈಕೆಯಾಗದಿದ್ದರಿಂದ ದರ ತೀವ್ರವಾಗಿ ಏರಿಕೆ ಯಾಗಲು ಕಾರಣವಾಗಿದೆ.

ಅಧಿಕಾರಿಗಳ ವರ್ಗಾವಣೆ ಸಂಬಂಧ ಬೋಸರಾಜು-ಶರಣಪ್ರಕಾಶ್ ನಡುವೆ ವಾಕ್ಸಮರ

ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ಕಿತ್ತಾಟ

ರಾಯಚೂರು ಜಿಲ್ಲೆಯಲ್ಲಿ ಬೋಸರಾಜು ಹಾಗೂ ಶರಣಪ್ರಕಾಶ್ ಪಾಟೀಲ್ ನಡುವೆ ಎರಡು ಗುಂಪುಗಳಾಗಿವೆ. ಆರಂಭದಲ್ಲಿ ಜಿಲ್ಲೆಗೆ ಸೀಮಿತಗೊಂಡಿದ್ದ ಭಿನ್ನಮತ ಇದೀಗ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಗೂ ವಿಸ್ತರಿಸಿದ್ದು, ಕೊನೆಗೆ ಸಿಎಂ, ಡಿಸಿಎಂ ಇಬ್ಬರನ್ನೂ ಸಮಾ ಧಾನಪಡಿಸಿದ ಪ್ರಸಂಗ ನಡೆದಿದೆ.

ಆಕಾಂಕ್ಷಿಗಳ ಪಟ್ಟಿಯಲ್ಲಿ ಶಾಸಕರ ಬಂಟರು, ಆಪ್ತರದೇ ಮೇಲುಗೈ, ಕಾರ್ಯಕರ್ತರಿಗೆ ಬರೀ ಕೈ

ನಿಗಮ ಸದಸ್ಯ, ನಿರ್ದೇಶಕರ ನೇಮಕ ವಿಚಾರ ಸದ್ಯಕ್ಕೆ ಮುಗಿದ ಅಧ್ಯಾಯ

ಸುಮಾರು 85ಕ್ಕೂ ಹೆಚ್ಚಿನ ನಿಗಮ, ಮಂಡಳಿಗಳ ಸದಸ್ಯರು ಹಾಗೂ ನಿರ್ದೇಶಕ ರನ್ನು ನೇಮಕ ಮಾಡುವ ಸಂಬಂಧ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದ ಡಾ.ಜಿ.ಪರಮೇಶ್ವರ್ ನೇತೃ ತ್ವದ ಸಮಿತಿ ಇನ್ನೆರಡು ಸಭೆಗಳನ್ನು ನಡೆಸಿ ಪಟ್ಟಿಯನ್ನು ಅಂತಿಮ ಗೊಳಿಸಬೇಕು ಎನ್ನುವಷ್ಟ ರಲ್ಲಿ ಸದಸ್ಯರು ಮತ್ತು ನಿರ್ದೇಶಕರ ಆಕಾಂಕ್ಷಿಗಳಿಗೆ ಆಘಾತದ ಸುದ್ದಿ ಹೊರ ಬಿದ್ದಿದೆ