ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಬೈಲೈನ್‌ ಸ್ಟೋರೀಸ್‌
ಇದು ಹಸೆ ಚಿತ್ತಾರ ಕಲೆಗಾರ್ತಿಗೆ ಒಲಿದ ಸ್ವಾತಂತ್ರ್ಯೋತ್ಸವ ಪರೇಡ್ ಭಾಗ್ಯ

ಇದು ಹಸೆ ಚಿತ್ತಾರ ಕಲೆಗಾರ್ತಿಗೆ ಒಲಿದ ಸ್ವಾತಂತ್ರ್ಯೋತ್ಸವ ಪರೇಡ್ ಭಾಗ್ಯ

ದೇಶದ ಹಲವಾರು ವಿರಳ ಹಾಗೂ ನಶಿಸಿ ಹೋಗುತ್ತಿರುವಂತಹ ಪುರಾತನ ಕಲೆಗಳನ್ನ ಕೇಂದ್ರ ಸರ್ಕಾರ ಗುರುತಿಸಿ ವಿಶ್ವದೆಲ್ಲೆಡೆ ಅದನ್ನ ಪಸರಿಸೋ ಕಾರ್ಯಗಳನ್ನ ಮಾಡ್ತಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಪರೇಡ್ ಗೆ ಇಂತಹ ವಿರಳ ಕಲೆಗಾರರನ್ನ ಕರೆಸಿ ಅವರಿಗೆ ಗೌರವ ನೀಡೋ ಕಾರ್ಯಕ್ರಮಗಳನ್ನ ಮಾಡ್ತಿದೆ. ಅದರಂತೆ ಈ ವರ್ಷದ ಸ್ವಾತಂತ್ರ್ಯೋ ತ್ಸವದಲ್ಲಿ ಪಾಲ್ಗೊಳ್ಳೋಕೆ ರಾಜ್ಯದ 5 ಕಲಾವಿದರನ್ನ ಕೇಂದ್ರ ಸರ್ಕಾರ ಗುರುತಿಸಿದೆ.

ಟಾರ್ಗೆಟ್‌ ಧರ್ಮಸ್ಥಳ ತಂಡಕ್ಕೆ ಸರಣಿ ಸೋಲು !

ಟಾರ್ಗೆಟ್‌ ಧರ್ಮಸ್ಥಳ ತಂಡಕ್ಕೆ ಸರಣಿ ಸೋಲು !

ಅಂತಿಮ ಗುಂಡಿ ತೋಡಿ ಮುಗಿಯುವವರೆಗೂ ಹೇರಳವಾಗಿರುವ ಸಹನೆ ಶಕ್ತಿಯನ್ನು ಬಳಸಿ ಕೊಂಡು ಸುಮ್ಮನೆ ಉಳಿದಿದ್ದರು. ಈ ನಡುವೆ ಸತ್ಯದ ಪರವೂ ಇಲ್ಲ, ಸುಳ್ಳಿನ ಪರವೂ ಇಲ್ಲ ಎಂಬ ಸೋಗಿನಲ್ಲಿದ್ದ ಕೆಲ ತಟಸ್ಥರು ತನಿಖೆಯಾಗಲಿ, ಹೆಣ ಹೊರ ತೆಗೆಯಲಿ, ಶಿಕ್ಷೆಯಾಗಲಿ ಎನ್ನುತ್ತಾ ಪರೋಕ್ಷವಾಗಿ ಧರ್ಮಸ್ಥಳ ಅವಹೇಳನಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರೋತ್ಸಾಹ ನೀಡುತ್ತಿದ್ದರು.

ದಿಕ್ಕಿಲ್ಲದೇ ಸಾಗುತ್ತಿರುವ ತನಿಖೆಗೆ ಬೇಕಿದೆ ಲಗಾಮು

ದಿಕ್ಕಿಲ್ಲದೇ ಸಾಗುತ್ತಿರುವ ತನಿಖೆಗೆ ಬೇಕಿದೆ ಲಗಾಮು

ನಿತ್ಯ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅರ್ಥವಿಲ್ಲದ ತನಿಖೆಯನ್ನು ಕೂಡಲೇ ಸ್ಥಗಿತಗೊಳಿಸ ದಿದ್ದರೆ ವಿಶೇಷ ತನಿಖಾ ತಂಡದ ‘ಅಣಕ’ವಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಸದ್ದು ಮಾಡುತ್ತಿರುವ ‘ಮುಸುಕುಧಾರಿ ವ್ಯಕ್ತಿ’ಯ ಬುರುಡೆ ರಹಸ್ಯ ಆರಂಭದಲ್ಲಿ ರೋಚಕವಾಗಿ ಕಂಡರೂ, ‘ಗುಂಡಿ’ ತೋಡುವ ಕಾರ್ಯಾರಂಭಗೊಂಡು ನಿತ್ಯ ‘ಖಾಲಿ’ ಕೈಯಲ್ಲಿ ವಾಪಸಾಗಿದ್ದರಿಂದ ಎಸ್‌ಐಟಿಯ ತನಿಖೆಗೇ ಅರ್ಥವಿಲ್ಲದಂತಾಗಿದೆ.

ಮರಳಿ ನಾಂದಣಿಗೆ ಬರುವಳೇ ಮಹಾದೇವಿ ?

ಮರಳಿ ನಾಂದಣಿಗೆ ಬರುವಳೇ ಮಹಾದೇವಿ ?

ಮಹಾರಾಷ್ಟ್ರದ ಕೊಲ್ಹಾಪುರದ ನಾಂದಣಿಯಲ್ಲಿ ಜೈನ ಧಾರ್ಮಿಕ ಕೇಂದ್ರವಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟದ ಲಕ್ಷಾಂತರ ಭಕ್ತರನ್ನು ಹೊಂದಿದೆ. ಮೂರು ದಶಕಗಳ ಹಿಂದೆ ಮಹಾದೇವಿ ಹೆಸರಿನ ಆನೆ ತರಲಾಗಿತ್ತು. ಅವತ್ತಿನಿಂದಲೂ ಜನರ ಜತೆ ಉತ್ತಮ ಒಡನಾಟ ಹೊಂದಿದ್ದ ಆನೆಗೆ ಭಕ್ತರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Chikkaballapur News: ನಗರ ಹೊರವಲಯದ ಗುಣಿಯಿಂದ ಮೇಲೇಳದ ಗುರುಭವನ : ಕೋಟಿ ಹಣ ಗುಳುಂ

ನಗರ ಹೊರವಲಯದ ಗುಣಿಯಿಂದ ಮೇಲೇಳದ ಗುರುಭವನ

ನಗರ ಹೊರವಲಯ ಮಹಾವೀರ್ ಜೈನ್ ಆಸ್ಪತ್ರೆ ಸಮೀಪವಿರುವ ಬೃಹತ್ ಗುಣಿಯನ್ನು ಸಮತಟ್ಟು ಮಾಡಿ ನಿರ್ಮಿಸಲು ಹೊರಟಿರುವ ಜಿಲ್ಲಾ ಗುರುಭವನದ ಕಾಮಗಾರಿ ೨೦೨೧-೨೨ರಿಂದ ಗುಣಿಯನ್ನು ಬಿಟ್ಟು ಮೇಲೇಳಲೇಯಿಲ್ಲ. ನಿರ್ಮಾಣಕ್ಕಾಗಿ ಇಟ್ಟಿದ್ದ ಎರಡೂವರೆ ಕೋಟಿ ಹಣ ಕರಗಿಸಿ ನೆಲಮಾಳಿಗೆ ಯಷ್ಟೇ ನಿರ್ಮಾಣ ಮಾಡಲಾಗಿದೆ.

ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ

ಹೋರ್ತಿ ಶ್ರೀರೇವಣಸಿದ್ದೇಶ್ವರ ದೇವಾಲಯ ಪ್ರವಾಸಿ ತಾಣವಾಗಲಿ

ಭೂತಾಯಿಗೆ ನೀವು ಎಲ್ಲರೂ ಒಗ್ಗಟಾಗಿ ಒಂದು ಹನಿ ನೀರು ಕೊಡಿ ಈ ಬರಡು ಭೂಮಿ ಕ್ಯಾಲಿ ಪೋರ್ನಿಯಾ ಆಗುತ್ತದೆ ಎಂಬ ಅವರ ನುಡಿಗಳಿಂದ ಪುಳಕಿತರಾದ ಜಿಲ್ಲಾ ರಾಜಕೀಯ ಮುಖಂಡರು ಪಕ್ಷ ಭೇದ ಮರೆತು ನೀರಾವರಿಗಾಗಿ ಛಲತೊಟ್ಟು ಬರಡು ಭೂಮಿಗೆ ಇಂದು ನೀರು ಒದಗಿಸಿ ಬಣಗುಟ್ಟುವ ಬಂಜರ ಭೂಮಿಗೆ ನೀರು ಹರಿಸಿರುವುದರಿಂದ ಕ್ಷೀಪ್ರ ಗಿಡಮರಗಳು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

Raj B Shetty Interview: ಸು ಫ್ರಮ್‌ ಸೋ ಗೆಲ್ಲೋ ಬಗ್ಗೆ ಅನುಮಾನವೇ ಇರಲಿಲ್ಲ

ಸು ಫ್ರಮ್‌ ಸೋ ಗೆಲ್ಲೋ ಬಗ್ಗೆ ಅನುಮಾನವೇ ಇರಲಿಲ್ಲ

ಬೆಳಗಾವಿಯಂಥ ಪ್ರದೇಶದಲ್ಲೂ ಈ ದಕ್ಷಿಣ ಕನ್ನಡ ಸೊಗಡಿನ ಚಿತ್ರ ಹೌಸ್ ಫುಲ್ ಆಗುತ್ತಿದೆ. ಇದೀಗ ಕತಾರ್, ಯುಎಸ್‌ಎ, ಕೆನಡಾ, ಜರ್ಮನಿ. ಯುಎಇ, ಓಮಾನ್, ಬಹರೈನ್‌ಗಳಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳಿಗೆ ಆನ್ ಡಿಮ್ಯಾಂಡ್ ವೇದಿಕೆ ಸಿದ್ಧವಾಗಿದೆ. ಮಲಯಾಳಂ ಆವೃತ್ತಿ ಕೇರಳಾದ್ಯಂತ ಆಗ ಒಂದಕ್ಕೆ ತೆರೆ ಕಾಣಲಿದ್ದು, ಅದರ ಪೇಯ್ಡ ಪ್ರೀಮಿಯರ್ ಕೂಡ ಯಶಸ್ವಿಯಾಗಿದೆ.

ಬೆಂಗಳೂರಲ್ಲಿ ಡೆಂಘೀ ಗಣನೀಯ ಇಳಿಕೆ

ಬೆಂಗಳೂರಲ್ಲಿ ಡೆಂಘೀ ಗಣನೀಯ ಇಳಿಕೆ

ಮಳೆಗಾಲದ ಆರಂಭದಲ್ಲಿಯೇ ಡೆಂಘೀ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಅಧಿಕಾರಿಗಳು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರಿಂದ ಡೆಂಘೀ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, ಶೇ.50ರಷ್ಟು ಪ್ರಕರಣಗಳು ಕಡಿಮೆಯಾಗಿದೆ. ಜನವರಿ 1 ರಿಂದ ಜುಲೈ 23 ರವರೆಗೆ ನಗರದಲ್ಲಿ ಕೇವಲ 1676 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಹೈಸ್ಕೂಲ್ ಮಕ್ಕಳಿಗೆ ಅ, ಆ, ಇ, ಈ ಪಾಠ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡ ಓದಲೂ ಬರಲ್ಲ!

ಹಳೆಗನ್ನಡ ಪದ್ಯವನ್ನು ನಿರರ್ಗಳವಾಗಿ ಓದುತ್ತಾ ಇಂಗ್ಲಿಷ್ ವ್ಯಾಕರಣವನ್ನು ನಿರ್ಭೀತವಾಗಿ ಕಲಿಯ ಬೇಕಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕನ್ನಡದ ವರ್ಣಮಾಲೆ ಅ, ಆ, ಇ, ಈ, ಇಂಗ್ಲಿಷ್ ಅಲ್ಫಾಬೆಟ್‌ ಗಳಾದ ಎ, ಬಿ, ಸಿ, ಡಿಯನ್ನೇ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ ಎನ್ನುವ ಕಳವಳಕಾರಿ ವಿಷಯ ಹೊರ ಬಿದ್ದಿದೆ.

ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ

ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ

ಕರ್ನಾಟಕದಲ್ಲಿ ಪ್ರತೀ ವರ್ಷ ಅಂದಾಜು 28.77 ಲಕ್ಷ ಹೆಕ್ಟರ್ ನಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ, ಹವಾಮಾನಕ್ಕನುಗುಣವಾಗಿ 20.62 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಪ್ರಸಕ್ತ ಸಾಲಿನ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಂದು ಉತ್ತಮ ದರ್ಜೆ ವೀಳ್ಯದೆಲೆ ಹೊರೆಯ ದರ 14000 ರು.ಗೂ ಏರಿತ್ತು, ಆದರೆ ಈಗ ಅದರ ಬೆಲೆ ಕೇವಲ 2000 ರು.ಗೆ ಕುಸಿದಿದೆ. ಅಂದರೆ ಒಂದು ಹೊರೆಗೆ 12 ಸಾವಿರ ರು. ಕಡಿಮೆಯಾಗಿದೆ.

‌ಪ್ರವಾಹ ತಡೆಗೆ ಸ್ಲೂಯಿಸ್‌ ಗೇಟ್

ಪ್ರವಾಹ ತಡೆಗೆ ಸ್ಲೂಯಿಸ್‌ ಗೇಟ್

ನಗರದ ಪ್ರಮುಖ ವಲಯಗಳಲ್ಲಿ ಮಳೆ ಬಂದಾಗ ಉಂಟಾಗುವ ಸಮಸ್ಯೆಯನ್ನು ನಿಯಂತ್ರಿಸಲು ಪಾಲಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ 15 ಸ್ಲೂಯಿಸ್ ಗೇಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೆ, 7 ಗೇಟ್‌ಗಳ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದೆ. ಇನ್ನು ಒಂದು ಗೇಟ್ ಅಳವಡಿಕೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು, ಈ ಮೂಲಕ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸಲು ಪಾಲಿಕೆ ಕಾರ್ಯಪ್ರವೃತ್ತವಾಗಿದೆ

ಉಸ್ತುವಾರಿ ಜತೆ ಕುಸ್ತಿ

ಉಸ್ತುವಾರಿ ಜತೆ ಕುಸ್ತಿ

ಕಾಂಗ್ರೆಸ್ ತನ್ನಲ್ಲಿ ಎಲ್ಲವೂ ಇದ್ದರೂ ಇಲ್ಲದಂತಾಗಿದೆ. ಪಕ್ಷಕ್ಕೆ ಅಪಾರ ಶಾಸಕರ ಬಲ, ಅಧಿಕಾರ, ಜನಪ್ರಿಯತೆ ಎಲ್ಲವೂ ಇದ್ದರೂ ದಿನದಿನಕ್ಕೂ ಆಂತರಿಕ ಸಮಸ್ಯೆಗಳಿಂದಾಗಿ ವರ್ಚಸ್ಸು ನಾಶ ಮಾಡಿ ಕೊಳ್ಳುವ ಹಾದಿಯತ್ತ ಸಾಗುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಇತ್ತೀಚೆಗಿನ ಅನಗತ್ಯ ಬೆಳವಣಿಗೆ ಹಾಗೂ ಷಡ್ಯಂತ್ರ ಎಂದು ಸ್ವತಃ ಕಾಂಗ್ರೆಸ್ ಸಚಿವರು ಮತ್ತು ಹಿರಿಯ ಶಾಸಕರೇ ಹೇಳುತ್ತಿದ್ದಾರೆ.

ಮೂರು ಹುದ್ದೆಗೆ 108 ಅರ್ಜಿ ಸಲ್ಲಿಕೆ

ಮೂರು ಹುದ್ದೆಗೆ 108 ಅರ್ಜಿ ಸಲ್ಲಿಕೆ

ರಾಜ್ಯ ಸರಕಾರ ಮೊದಲ ಹಂತದಲ್ಲಿ ಏಳು ಮಂದಿಯನ್ನು ಆಯುಕ್ತರ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಆದರೀಗ ಖಾಲಿಯಿರುವ ಮೂರು ಸ್ಥಾನಕ್ಕೆ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲ ಶುರುವಾಗಿದೆ. ಈ ಹಿಂದೆ ನ್ಯಾಯಾಂಗ ವ್ಯವಸ್ಥೆ ಯಲ್ಲಿ ಕಾರ್ಯನಿರ್ವಹಿಸಿದ ಹಾಗೂ ಆರ್ ಟಿಐ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದವರು ಅರ್ಜಿ ಸಲ್ಲಿಸುತ್ತಿದ್ದರು. ಆದರೀಗ ಈ ಅನುಭವ ಇಲ್ಲದ ಅನೇಕರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮಲ್ಲಿ ಇದ್ದರೆ ಪೈಸಾ ಸರಾಗ ಸಿಗಲಿದೆ ವೀಸಾ !

ನಿಮ್ಮಲ್ಲಿ ಇದ್ದರೆ ಪೈಸಾ ಸರಾಗ ಸಿಗಲಿದೆ ವೀಸಾ !

ವಿಶ್ವದ ಎಲ್ಲೆಡೆಯ ಜನರನ್ನೂ ಆಯಸ್ಕಾಂತದಂತೆ ಸೆಳೆದುಕೊಳ್ಳುವ ಅತ್ಯಂತ ಸಿರಿವಂತ ದೇಶ ಅಮೆರಿಕಕ್ಕೆ ತೆರಳಬೇಕು, ಅಲ್ಲೇ ಉಳಿಯಬೇಕು, ದುಡಿದು ಹೇರಳ ದುಡ್ಡು ಗಳಿಸಬೇಕು, ಸುಖವಾಗಿ ಬದುಕು ಸಾಗಿಸಬೇಕು ಎಂಬುದು ವಿಶ್ವಾದ್ಯಂತದ ಬಹಳಷ್ಟು ಜನರ ಕನಸು. ಅದನ್ನು ಬಲು ಸುಲಭವಾಗಿ ನನಸಾಗಿಸಿಕೊಳ್ಳಲು ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಸರಳ ಆದರೆ, ದುಬಾರಿಯಾದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ.

ಸರಕಾರಕ್ಕೆ ತಟ್ಟಿದ ಡಿಸಿ, ಎಸ್ಪಿ ಹುದ್ದೆ ಹಂಚಿಕೆ ಬಿಸಿ

ಸರಕಾರಕ್ಕೆ ತಟ್ಟಿದ ಡಿಸಿ, ಎಸ್ಪಿ ಹುದ್ದೆ ಹಂಚಿಕೆ ಬಿಸಿ

ಹಿಂದಿನ ಬಿಜೆಪಿ ಸರಕಾರದಲ್ಲಿ ಸುಮಾರು 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಜಿಲ್ಲಾಧಿಕಾರಿಗಳಾಗಿದ್ದರು. ಆದರೆ ಈ ಸರಕಾರದಲ್ಲಿ ಕೇವಲ ಒಂದೇ ಒಂದು ಜಿಲ್ಲೆಯಲ್ಲಿ ಇದ್ದಾರೆ. ಇದರ ಬಗ್ಗೆ ಬೇಸರ ವ್ಯಕ್ತವಾದ ನಂತರ ಇತ್ತೀಚಿಗೆ ಮತ್ತೊಂದು ಜಿಲ್ಲೆಯಲ್ಲಿ ಅವಕಾಶ ನೀಡ ಲಾಗಿದೆ. ಹೀಗಾಗಿ ದಲಿತ ಸಮಾಜಕ್ಕೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಎಂದು ಬಹುತೇಕ ಐಎಎಸ್ ಅಧಿಕಾರಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಿನ ಜಿಲ್ಲೆಗೆ ವಿಷ ಪ್ರಾಶನದ ಕಳಂಕ

ಕಾಡಿನ ಜಿಲ್ಲೆಗೆ ವಿಷ ಪ್ರಾಶನದ ಕಳಂಕ

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಬೀಟ್ ನಲ್ಲಿ ಸತ್ತ ಹಸುವಿಗೆ ವಿಷ ಹಾಕಿ ತಾಯಿ ಹುಲಿಯೊಂದಿಗೆ ನಾಲ್ಕು ಮರಿ ಹುಲಿಗಳು ಮೃತಪಟ್ಟವು. ಇನ್ನು ಸತ್ತು ಬಿದ್ದ ಹಸುವಿನ ಹತ್ತಿರವೇ ಐದು ಹುಲಿಗಳು ಸತ್ತು ಬಿದ್ದ ದೃಶ್ಯ ಎಂಥವರನ್ನು ಮರಗುವಂತೆ ಮಾಡಿತ್ತು. ಇನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಘಟನೆ ಆತಂಕ ಪಡುವಂತೆ ಮಾಡಿದೆ. ಪರಿಸರ ಪ್ರೇಮಿಗಳು ಹಾಗೂ ಪರಿಸರ ವಾದಿಗಳು ತೀವ್ರ ಆಕ್ರೋಶ ಕೂಡ ಹೊರಹಾಕಿದ್ದಾರೆ

ಗುರಿ ಮುಟ್ಟುವುದೇ ಏಮ್ಸ್ ಹೋರಾಟ?

ಗುರಿ ಮುಟ್ಟುವುದೇ ಏಮ್ಸ್ ಹೋರಾಟ?

ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವಂತೆ ಪ್ರೊ.ನಂಜುಂಡಪ್ಪ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಯಾಗಿದ್ದಾಗ ಕಲಬುರ್ಗಿಯ ಸಚಿವ ಸಂಪುಟದಲ್ಲೂ ತಿರ್ಮಾನಿಸಲಾಗಿತ್ತು. ನಂತರ ನಡೆದ ರಾಜಕೀಯ ಮೇಲಾಟದಿಂದ ರಾಯಚೂರಿಗೆ ಐಐಟಿ ಕೈ ತಪ್ಪಿ ಧಾರವಾಡದ ಪಾಲಾಯಿತು.

ಬದಲಾಗಿದೆ ರೈಲ್ವೆ, ಬದಲಾಗಿದೆ ನಿಯಮ

ಬದಲಾಗಿದೆ ರೈಲ್ವೆ, ಬದಲಾಗಿದೆ ನಿಯಮ

ತತ್ಕಾಲ್ ಟಿಕೆಟ್ ಬುಕಿಂಗ್ ಅನ್ನು ಹೆಚ್ಚು ಪಾರದರ್ಶಕವಾಗಿಸುವುದು ಮತ್ತು ಅಗತ್ಯವಿರುವ ಪ್ರಯಾಣಿಕ ರಿಗೆ ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಬುಕಿಂಗ್ ವಿಂಡೋ ತೆರೆದ ನಂತರ ಮೊದಲ 30 ನಿಮಿಷಗಳ ಕಾಲ ಏಜೆಂಟರು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯ ವಾಗುವುದಿಲ್ಲ

ಕಚ್ಚಾತೈಲ ಭಾರತಕ್ಕಿಲ್ಲ ಚಿಂತೆ

ಕಚ್ಚಾತೈಲ ಭಾರತಕ್ಕಿಲ್ಲ ಚಿಂತೆ

ಯುದ್ಧವಾದರೆ ಕಚ್ಚಾತೈಲ ಪೂರೈಕೆಗೆ ಅಡ್ಡಿ ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತು. ಪರಿಣಾಮ, ಆಗಿನಿಂದ ಭಾರತ ಇರಾನ್‌ನಿಂದ ಕಚ್ಚಾತೈಲ ಖರೀದಿ ನಿಲ್ಲಿಸಬೇಕಾಯಿತು. ಆದರೆ, ಇರಾಕ್, ಸೌದಿ ಅರೇಬಿಯ, ಕುವೇತ್, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸಲು ಆರಂಭಿಸಿತು.

40 ನಿಗಮಗಳಿಗೆ ನೇಮಕ ಇನ್ನೂ ಗ್ಯಾರಂಟಿ ಸಿಕ್ಕಿಲ್ಲ

40 ನಿಗಮಗಳಿಗೆ ನೇಮಕ ಇನ್ನೂ ಗ್ಯಾರಂಟಿ ಸಿಕ್ಕಿಲ್ಲ

ಜೂನ್ 30ರಿಂದ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಅವರ ಗಮನಕ್ಕೇ ಮತ್ತೆ ತಂದು ಶೀಘ್ರ ನೇಮಕ ಮಾಡುವಂತೆ ಒತ್ತಾಯಿಸುತ್ತೇವೆ ಎಂದು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ.

ಹುಲಿಯ ಮೇವಿಗೆ ವಿಷವಿಕ್ಕಿದ್ದೇಕೆ ?: ಮಾನವನ ಕ್ರೂರತ್ವಕ್ಕೆ ಬಲಿಯಾದ ರಾಷ್ಟ್ರೀಯ ಪ್ರಾಣಿ

ಹುಲಿಯ ಮೇವಿಗೆ ವಿಷವಿಕ್ಕಿದ್ದೇಕೆ ?

ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಪ್ರಕಾರ, 20ನೇ ಶತಮಾನದಲ್ಲಿ ವಿಶ್ವದಲ್ಲಿ ಸುಮಾರು 100000 ಹುಲಿಗಳು ಇದ್ದವು. ಆದರೆ, ಇಂದು ಈ ಸಂಖ್ಯೆ 5000ರಿಂದ 6000ರೊಳಗೆ ಕುಸಿದಿದೆ. ಹುಲಿಯ 9‌ ಪ್ರಭೇದಗಳಲ್ಲಿ ಈಗ ಕೇವಲ 6 ಪ್ರಭೇದದ ಹುಲಿಗಳು ಮಾತ್ರ ಉಳಿದಿವೆ.

ಡಿಎನ್‌ಎ ಎಡವಿದ್ದೇ ಕಾಲ್ತುಳಿತ ದುರಂತಕ್ಕೆ ಕಾರಣ ?

ಡಿಎನ್‌ಎ ಎಡವಿದ್ದೇ ಕಾಲ್ತುಳಿತ ದುರಂತಕ್ಕೆ ಕಾರಣ ?

ದುರಂತಕ್ಕೆ ಪೂರ್ವ ಸಿದ್ಧತೆಗಳ ಕೊರತೆಯ ಜತೆಗೆ ತಪ್ಪು ಮಾಹಿತಿಗಳನ್ನು ಹರಿಯಬಿಟ್ಟಿದ್ದು ಕಾರಣ ಇರಬಹುದೇ ಎನ್ನುವ ಅಂಶಗಳನ್ನು ಮುಂದಿಟ್ಟು ತನಿಖೆಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಐಪಿಎಲ್ ಇವೆಂಟ್ ನಿರ್ವಹಿಸುವ ಮತ್ತು ಅದರ ಟಿಕೇಟ್, ಪಾಸ್ ವ್ಯವಹಾರ ನಿರ್ವಹಿಸುವ ಡಿಎನ್‌ಎ ಸಂಸ್ಥೆಯ ಕಡೆಗೆ ತನಿಖಾ ಸಂಸ್ಥೆಗಳು ಹೆಚ್ಚು ಗಮನ ನೀಡಿವೆ ಎನ್ನಲಾಗಿದೆ.

ತೊಗರಿಬೇಳೆ ಬೆಲೆ ಇಳಿಕೆ: ಗ್ರಾಹಕರಲ್ಲಿ ಖುಶಿ, ರೈತರಲ್ಲಿ ಬೇಸರ

ತೊಗರಿಬೇಳೆ ಬೆಲೆ ಇಳಿಕೆ: ಗ್ರಾಹಕರಲ್ಲಿ ಖುಶಿ, ರೈತರಲ್ಲಿ ಬೇಸರ

ತೊಗರಿಯ ಕಣಜ ಎನಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಇಳುವರಿ ಬಂದಿರುವುದರ ಜೊತೆಗೆ, ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿಯೂ ಉತ್ಪಾದನೆ ಹೆಚ್ಚಿದ ಪರಿಣಾಮವಾಗಿ ತೊಗರಿ ಬೇಳೆಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ ಜೂನ್-ಜುಲೈನಲ್ಲಿ ತೊಗರಿಬೇಳೆಯ ದರ ಗಗನಮುಖಿಯಾಗಿತ್ತು.

ಕ.ಕ ಭಾಗದ ಸಾಹಿತಿಗೆ ಅವಕಾಶ ಸಿಗುವ ನಿರೀಕ್ಷೆ: ಬಳ್ಳಾರಿ ಸಾಹಿತ್ಯ ಸಮ್ಮೇಳನ

ಕ.ಕ ಭಾಗದ ಸಾಹಿತಿಗೆ ಅವಕಾಶ ಸಿಗುವ ನಿರೀಕ್ಷೆ

ಕಳೆದ 87 ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ನಾಲ್ಕು ಸಮ್ಮೇಳನದಲ್ಲಿ ಮಹಿಳೆಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಗದಗದಲ್ಲಿ ನಡೆದ 76ನೇ ಸಾಹಿತ್ಯ ಸಮ್ಮೇಳನ ದಲ್ಲಿ ಗೀತಾ ನಾಗಭೂಷಣ ಬಳಿಕ ಕಳೆದ 15 ವರ್ಷಗಳಲ್ಲಿ ಯಾವ ಮಹಿಳಾ ಸಾಹಿತಿಗೂ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ಬಳ್ಳಾರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಮಹಿಳೆಯರನ್ನು ಸರ್ವಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಚರ್ಚೆಗಳು ಕೇಳಿ ಬರುತ್ತಿವೆ.

Loading...