ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೈಲೈನ್‌ ಸ್ಟೋರೀಸ್‌

ನಿವೃತ್ತಿಯಂಚಿನ ಆಕಾಂಕ್ಷಿಗಳ ಹೊಸ ಆಟ !

ನಿವೃತ್ತಿಯಂಚಿನ ಆಕಾಂಕ್ಷಿಗಳ ಹೊಸ ಆಟ !

ರಾಜ್ಯ ಕಾಂಗ್ರೆಸ್ ರಾಜಕಾರಣ ಸದ್ಯ ನಾಯಕತ್ವ ಬದಲಾವಣೆಯೋ ಅಥವಾ ಸಂಪುಟ ಪುನಾ ರಚನೆಯೋ ಇಲ್ಲವೇ ಸದ್ಯಕ್ಕೆ ಮುಂದೂಡಿಕೆಯೇ ಎನ್ನುವ ಚರ್ಚೆಗೆ ಉತ್ತರಿಸಲಾಗದ ಸ್ಥಿತಿ ಯಲ್ಲಿದೆ. ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ದೆಹಲಿ ಪ್ರವಾಸ ಕೈಗೊಳ್ಳ ಲಿದ್ದು, ಮುಖ್ಯಮಂತ್ರಿ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.

‌ಪೈಪ್‌ ಲೈನ್‌ ಸಮಸ್ಯೆ ತಡೆಗೆ ಬರಲಿವೆ ರೊಬೋಟ್

ಪೈಪ್‌ ಲೈನ್‌ ಸಮಸ್ಯೆ ತಡೆಗೆ ಬರಲಿವೆ ರೊಬೋಟ್

ಜಲಮಂಡಳಿಯ ಈ ರೊಬೋಟ್ ತಂತ್ರಜ್ಞಾನದಲ್ಲಿ ಆಟಿಕೆ ಕಾರಿನ ಗ್ರಾತದ ರೋಬೋಟ್‌ ನ್ನು ಪೈಪಿನ ಒಳಕಳುಹಿಸಿ ಮೇಲಿನಿಂದ ನಿಂತು ಕಾರ್ಯನಿರ್ವಹಿಸಬಹುದಾಗಿದೆ. ಇದರಿಂದ ಕಾರ್ಮಿ ಕರು ಹೋಗಲು ಕಷ್ಟಕರವಾಗಿರುವ ಪೈಪಿನಲ್ಲಿಯೂ ಸರಾಗವಾಗಿ ಈ ರೋಬೋಟ್‌ನ್ನು ಕಳುಹಿಸಬಹುದು. ಈ ರೋಬೋಟ್‌ನಲ್ಲಿ ಎಚ್‌ಡಿ ವಿಡಿಯೊ ಸಂಗ್ರಹಿಸುವ ಕ್ಯಾಮೆರಾ ಇರುವು ದರಿಂದ ಪೈಪಿನ ಒಳಭಾಗದ ಸ್ಪಷ್ಟ ಚಿತ್ರಣವನ್ನು ನೀಡಲಿದೆ.

Bihar Election ground report by Raghav Sharma Nidle: ಎನ್‌ಡಿಎಗೆ ಗಜಬಲ, ʼಇಂಡಿʼ ವಿಲವಿಲ

ಎನ್‌ಡಿಎಗೆ ಗಜಬಲ, ʼಇಂಡಿʼ ವಿಲವಿಲ

ಬಿಹಾರದಲ್ಲಿ ಈ ಸಲ ಮತ ಪ್ರಮಾಣ ಶೇ.66ರಷ್ಟು ದಾಖಲಾದ ಹೊಸ ಇತಿಹಾಸ ನಿರ್ಮಾಣವಾಗಿತ್ತು. ಇದಕ್ಕೆ ಪೂರಕವಾಗಿ, ಬಿಜೆಪಿ-ಜೆಡಿಯು-ಎಲ್‌ಜೆಪಿ- ಆರ್‌ಎಲ್ಎಂ-ಎಚ್‌ಎಎಂ ಒಳಗೊಂಡ ಬಲಿಷ್ಠ ಎನ್ ಡಿಎ ಮೈತ್ರಿಕೂಟ 200ಕ್ಕೂ ಹೆಚ್ಚು ಸೀಟುಗಳಲ್ಲಿ ದಿಗ್ವಿಜಯ ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಹಲವು ಇತಿಹಾಸ, ದಾಖಲೆ ಗಳ ಸೃಷ್ಟಿಗೂ ಈ ಚುನಾವಣೆ ನಾಂದಿ ಹಾಡಿದೆ.

ನಡೆಯದು ನವೆಂಬರ್ ಕ್ರಾಂತಿ, ಸದ್ಯಕ್ಕೇನಿದ್ದರೂ ಶಾಂತಿ ಜಪ

ನಡೆಯದು ನವೆಂಬರ್ ಕ್ರಾಂತಿ, ಸದ್ಯಕ್ಕೇನಿದ್ದರೂ ಶಾಂತಿ ಜಪ

ನವೆಂಬರ್ ೧೪ರ ವರೆಗೂ ಬಿಹಾರ ಚುನಾವಣೆ ಗುಂಗಿನಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ನಂತರದಲ್ಲೂ ರಾಜ್ಯ ಕಾಂಗ್ರೆಸ್ ಸರಕಾರದ ವಿಚಾರಕ್ಕೆ ತಲೆ ಹಾಕುವ ಚಿಂತನೆಯಲ್ಲಿಲ್ಲ. ಇದರ ಮಧ್ಯೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ಬಹುತೇಕ ನವೆಂಬರ್ ಪ್ರವಾಸದಲ್ಲಿರು ತ್ತಾರೆ. ಆದ ಕಾರಣ ಅಂತ್ಯದವರೆಗೂ ವಿದೇಶ ರಾಜ್ಯ ಕಾಂಗ್ರೆಸ್‌ನಲ್ಲಾಗಲಿ, ಕಾಂಗ್ರೆಸ್ ಸರಕಾರದಲ್ಲಾಗಲಿ ಭಾರೀ ಬದಲಾವಣೆಗಳು ನಡೆಯುತ್ತವೆ.

Bihar Election ground report by Raghav Sharma Nidle: ಬಿಹಾರ ಸಮರಕಣದಲ್ಲಿ ನಾನು ಕಂಡದ್ದು...ಕೇಳಿದ್ದು

ಬಿಹಾರ ಸಮರಕಣದಲ್ಲಿ ನಾನು ಕಂಡದ್ದು...ಕೇಳಿದ್ದು

ಶರಾಬ್ ಬಂದ್ ಮಾಡಿ ಏನು ಪ್ರಯೋಜನ. ಇಲ್ಲಿ ಲಿಕ್ಕರ್ ಹೋಮ್ ಡೆಲಿವರಿ ಆಗುತ್ತದೆ. ನಿಮಗೆ ಬೇಕಿದ್ದರೆ ಈಗ ತಂದುಕೊಡುತ್ತೇನೆ ಎಂದು ನನಗೂ ಕೆಲವರು ಆಫರ್ ಮಾಡಿದರು. ನಾನು ಬೇಡ ಎಂದು ನಯವಾಗಿ ತಿರಸ್ಕರಿಸಿದೆ. ನಾವು 150 ರು. ಮದ್ಯವನ್ನು 500 ರು. ಕೊಟ್ಟು ಖರೀದಿ ಮಾಡಬೇಕು. ಇಲ್ಲಿ ಮದ್ಯ ನಿಷೇಧ ತೆಗೆಯಬೇಕು, ನಮ್ಮ ಕಷ್ಟಕ್ಕೂ ಸ್ಪಂದಿಸಬೇಕು ಎನ್ನುವುದು ಮದ್ಯಪ್ರಿಯರ ಡಿಮ್ಯಾಂಡ್. ಹಾಗಂತ, ಮಹಿಳಾಪರ ನಿಲುವಿನ ಸಿಎಂ ನಿತೀಶ್ ಕುಮಾರ್ ಇದಕ್ಕೆ ತಲೆಕೆಡಿಸಿ ಕೊಂಡಂತಿಲ್ಲ.

Bihar Election ground report by Raghav Sharma Nidle: ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?

ಪರ್ವತ ಪುರುಷನ ಪರಿವಾರ ಕೈ ಕಡೆ ವಾಲಿದ್ದೇಕೆ ?

ಬಿಹಾರದ ಗಯಾದಿಂದ ಅತ್ರಿ ವಿಧಾನಸಭೆ ವ್ಯಾಪ್ತಿಯ ಗೆಹ್ಲೋರ್ ಇತಿಹಾಸ ಪ್ರಸಿದ್ಧ ಸ್ಥಳ. ಈ ಹಳ್ಳಿ ವಿಶ್ವದ ಗಮನ ಸೆಳೆದಿದ್ದು ಬಿಹಾರದ ಪರ್ವತ ಪುರುಷ ದಶರಥ ಮಾಂಜಿ ಕಾರಣದಿಂದ. ಬರೀ ಸುತ್ತಿಗೆ ಮತ್ತು ಉಳಿ ಬಳಸಿ ೨೨ ವರ್ಷಗಳ ಕಾಲ ಗೆಹ್ಲೋರ್‌ನ ಬೃಹತ್ ಬೆಟ್ಟವನ್ನು ಏಕಾಂಗಿಯಾಗಿ ಕೊರೆದು ರಸ್ತೆ ನಿರ್ಮಾಣ ಮಾಡಿದ್ದ ಮಹಾನ್ ಪರ್ವತ ಪುರುಷ ಆತ.

B‌ihar Election ground report by Raghav Sharma Nidle: ಬಿಹಾರಿಗರನ್ನು ಹೊಸ ಚಿಂತನೆಗೆ ಪ್ರೇರೇಪಿಸಿದ ಪ್ರಶಾಂತ್

ಬಿಹಾರಿಗರನ್ನು ಹೊಸ ಚಿಂತನೆಗೆ ಪ್ರೇರೇಪಿಸಿದ ಪ್ರಶಾಂತ್

ನೀರು, ರಸ್ತೆ, ಶಿಕ್ಷಣ, ಉದ್ಯೋಗ, ವಲಸೆಗೆ ಕಡಿವಾಣ, ಆರೋಗ್ಯ ಇವು ನಮ್ಮ ಮೂಲಭೂತ ಹಕ್ಕುಗಳು ಮತ್ತು ಅದನ್ನು ನಾವು ಪಡೆಯಲೇಬೇಕು ಎಂಬ ಜಾಗೃತ ಮಾನಸಿಕತೆಯನ್ನು ಮುಖ್ಯವಾಗಿ ಬಿಹಾರದ ಯುವಕರಲ್ಲಿ ಬಿಟ್ಟಿರುವುದು ಪ್ರಶಾಂತ್ ಕಿಶೋರ್ ಸಾಧನೆ. ಜಾತಿಗಳ ಸಂಕೋಲೆಯಿಂದ ಹೊರಬಂದು ಯೋಚಿಸಬೇಕು ಹಾಗೂ ನಮ್ಮ ಮಕ್ಕಳ ಭದ್ರ ಭವಿಷ್ಯಕ್ಕಾಗಿ ಬದಲಾವಣೆಗೆ ತೆರೆದುಕೊಳ್ಳಬೇಕು ಎಂಬ ಚಿಂತನೆ-ಚರ್ಚೆಗಳು ಬಿಹಾರ ಜನರ ಮಧ್ಯೆ ನಡೆದಿರುವುದು ಹೊಸ ಬೆಳವಣಿಗೆ.

Bihar Election ground report by Raghav Sharma Nidle: ಬಿಹಾರ ಚುನಾವಣಾ ಸಮರಕಣದಲ್ಲಿ ಜಾತಿಗಣಿತದ ತಕಧಿಮಿತ

ಬಿಹಾರ ಚುನಾವಣಾ ಸಮರಕಣದಲ್ಲಿ ಜಾತಿಗಣಿತದ ತಕಧಿಮಿತ

ಬಿಹಾರದಲ್ಲಿ ಈಗಲೂ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ ಮತ್ತು ಅದನ್ನು ಅಳಿಸಿ ಹಾಕುವುದು ಅಷ್ಟೊಂದು ಸುಲಭವೂ ಅಲ್ಲ. ರಾಜ್ಯದ ಮೇಲ್ವರ್ಗದ ರಜಪೂತರು, ಭೂಮಿ ಹಾರ್, ಬ್ರಾಹ್ಮಣ, ಕಾಯಸ್ಥರು ಮತ್ತು ಇತರೆ ಹಿಂದುಳಿದ ವರ್ಗದ ಯಾದವರನ್ನು (ರಾಜಕೀಯ ಪ್ರಾಬಲ್ಯ ಹೊಂದಿದ ಮತ್ತೊಂದು ಜಾತಿ) ಪರಸ್ಪರ ದ್ವೇಷ ಇರುವುದನ್ನು ರಾಜ್ಯದ ಹಲವೆಡೆ ಕಾಣಬಹುದು.

ಪರಿಶಿಷ್ಟರ ಅನುದಾನ: ಮುಗಿಯದ ಜಟಾಪಟಿ

ಪರಿಶಿಷ್ಟರ ಅನುದಾನ: ಮುಗಿಯದ ಜಟಾಪಟಿ

ಎಸ್ ಸಿಪಿ, ಟಿಎಸ್ ಪಿ ಗೆ ನೀಡಬೇಕಿದ್ದ ಸುಮಾರು 27000 ಕೋಟಿ ರು.ಗಳನ್ನು ಬಿಡುಗಡೆ ಮಾಡು ವುದರಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ಈ ವಿಚಾರ ದಲಿತ ಸಮುದಾಯದ ಸಚಿವರು ಮತ್ತು ಶಾಸಕರನ್ನು ಕೆರಳಿಸಿದೆ. ಹೀಗಾಗಿಯೇ ಕಳೆದ ಸಚಿವ ಸಂಪುಟ ದಲ್ಲಿ ಪರಿಶಿಷ್ಟರ ಅನುದಾನ ಹಂಚಿಕೆ ವಿಚಾರವಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ವಿಚಾರ ಪ್ರಸ್ತಾಪಿಸಿ ಭಾರೀ ಚರ್ಚೆಗೆ ಗ್ರಾಸವಾ ಗಿತ್ತು.

Bihar Election ground report by Raghav Sharma Nidle : 20 ವರ್ಷ ಕಳೆದರೂ ತಗ್ಗದ ನಿತೀಶ್ ಜನಪ್ರಿಯತೆ

20 ವರ್ಷ ಕಳೆದರೂ ತಗ್ಗದ ನಿತೀಶ್ ಜನಪ್ರಿಯತೆ

ಅ.೩೧ರಂದು ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಸಂಚಾರ ಸಾಧ್ಯವಾಗದ ಕಾರಣ ತಾವು ತೆರಳಿ ಭಾಷಣ ಮಾಡಬೇಕಿದ್ದ ಪ್ರದೇಶಗಳ ಜನರಿಗೆ ಬಿಜೆಪಿ, ಆರ್‌ಜೆಡಿ ನಾಯಕರು ಮೊಬೈಲ್ ಮೂಲಕ ಸಂದೇಶ ನೀಡುತ್ತಿದ್ದರೆ, ನಿತೀಶ್ ಕುಮಾರ್ 300 ಕಿಮೀ ದೂರವನ್ನು ಕಾರಿನ ಕ್ರಮಿಸಿ, ಸಮಸ್ತಿಪುರ, ದರ್ಭಂಗಾ ಮತ್ತು ಮಧುಬನಿ ಜಿಲ್ಲೆಗಳಲ್ಲಿ ಪ್ರಚಾರಭಿಯಾನ ನಡೆಸಿದರು.

ಸಂಗಮ ಕನ್ನಡ ಸಂಘ, ಸೈಂಟ್‌ ಲೂಯಿಸ್‌, ಮಿಸ್ಸೋರಿ

ಸಂಗಮ ಕನ್ನಡ ಸಂಘ, ಸೈಂಟ್‌ ಲೂಯಿಸ್‌, ಮಿಸ್ಸೋರಿ

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಕವನದ ಸಾಲಿನಂತೆ ತಾಯಿನಾಡಿನಿಂದ ಹೊರಗೆ ಇದ್ದು, ತಮ್ಮ ಕಸ್ತೂರಿ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಕಲೆಗಳು, ಆಟ ಪಾಠ, ಆಚರಣೆ, ವಿಚಾರಣೆ ಹಾಗೂಮುಂದಿನ ಪೀಳಿಗೆಗೆ ಕಲಿಸುವ ಉದ್ದೇಶ ದಿಂದ ಸೈಂಟ್ ಲೂಯಿಸ್ ಕನ್ನಡಾಭಿಮಾನಿ ಮಿತ್ರರ ಸಮಾಲೋಚನೆಯಿಂದ ಸಂಗಮದ ಉಗಮ.

Bihar Election ground report by Raghav Sharma Nidle: ಬಿಹಾರದಲ್ಲಿ ತೇಜಸ್ವಿಗೆ ಹೊರೆಯಾಗಿದೆಯೇ ಕಾಂಗ್ರೆಸ್?

ಬಿಹಾರದಲ್ಲಿ ತೇಜಸ್ವಿಗೆ ಹೊರೆಯಾಗಿದೆಯೇ ಕಾಂಗ್ರೆಸ್?

ಇಂಡಿ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರ್.ಜೆ.ಡಿ.ಯ ತೇಜಸ್ವಿ ಯಾದವ್‌ರನ್ನು ಅಧಿಕೃತ ವಾಗಿ ಘೋಷಿಸಿದರೂ, ರಾಹುಲ್ ಗಾಂಧಿ ಮಾತ್ರ ಮಾತ್ರ ‘ತೇಜಸ್ವಿ ಬಿಹಾರದ ನಾಯಕ ಆಗಲಿದ್ದಾರೆ. ಅವರನ್ನು ಗೆಲ್ಲಿಸಲು ಮತ್ತು ವರ್ಚಸ್ವೀ ನಾಯಕತ್ವ ರಾಜ್ಯಕ್ಕೆ ಸಿಗಲು ನೀವು ಮಹಾಘಟ ಬಂಧನಕ್ಕೆ ಮತ ನೀಡಬೇಕು ಎಂದು ತಮ್ಮ ಜನಸಭೆಗಳಲ್ಲಿ ಏಕೆ ಹೇಳುತ್ತಿಲ್ಲ?’ ಎಂಬ ಚರ್ಚೆಗಳು ಸಹಜವಾಗಿಯೇ ಆರ್.ಜೆ.ಡಿ. ಕ್ಯಾಂಪ್ ಗಳಲ್ಲಿ ನಡೆಯುತ್ತಿವೆ.

Bihar Election ground report by Raghav Sharma Nidle: ಬದಲಾಗದ ನತದೃಷ್ಟ ಮಾಂಜಿಗಳ ಬದುಕು

ಬದಲಾಗದ ನತದೃಷ್ಟ ಮಾಂಜಿಗಳ ಬದುಕು

ಅಹಿಯಾಪುರ ಟೋಲಿಯಲ್ಲಿ ಸುಮಾರು 1400 ಮತದಾರರಿದ್ದಾರೆ. ಎನ್ಡಿಎ ಮೈತ್ರಿಕೂಟ, ಇಂಡಿ ಒಕ್ಕೂಟ, ಜನ ಸುರಾಜ್‌ ಪಾರ್ಟಿ ಸೇರಿ ಯಾವ ಪಕ್ಷದವರೂ ಈವರೆಗೆ ಇಲ್ಲಿ ಮತ ಕೇಳಲು ಬಂದಿಲ್ಲ. ಮತ ಕೇಳಲು ಬರುವ, ನಮ್ಮ ಸಮಸ್ಯೆಗಳನ್ನು ಆಲಿಸುವ ಮಂದಿಗೆ ಮತ ಹಾಕುತ್ತೇವೆ ಎಂದು ನಿವಾಸಿ ಗರು ವಿಶ್ವವಾಣಿ ಜತೆ ಮಾತನಾಡಿದರು. ಅಷ್ಟಕ್ಕೂ, ಮತ ಹಾಕಿ ಏನು ಪ್ರಯೋಜನ ಹೇಳಿ? ನಮ್ಮ ಜೀವನ ಹೀಗೆ ಇರುತ್ತದಲ್ಲ ಎನ್ನುತ್ತಾರೆ ಅವರು.

Yagati Raghu Naadig Column: ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದವ ಕನ್ನಡ ಕಿಂಕರನಾದ

ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದವ ಕನ್ನಡ ಕಿಂಕರನಾದ

ಮತ ಪ್ರಚಾರಕ್ಕೆ ಬೇಕಾಗುವಷ್ಟು/ಸಾಕಾಗುವಷ್ಟು ಕನ್ನಡವನ್ನು ಅವರು ಕಲಿತಿದ್ದರೆ ಸಾಕಾಗಿತ್ತೇನೋ? ಆದರೆ ಕನ್ನಡದ ಸೊಗಡು ಅವರನ್ನು ಇನ್ನಿಲ್ಲದಂತೆ ಸೆಳೆದುಬಿಟ್ಟಿತು. ಹೀಗಾಗಿ ‘ವ್ಯಾವಹಾರಿಕ/ಧಾರ್ಮಿಕ’ ಅಗತ್ಯವನ್ನೂ ಮೀರಿ, ಕರ್ನಾಟಕದ ಕಲೆ-ಸಂಸ್ಕೃತಿ-ಪರಂಪರೆಗಳ ಅಧ್ಯಯನಕ್ಕೆ ಇಳಿದು ಅನನ್ಯ ಜ್ಞಾನಭಂಡಾರವನ್ನು ತಮ್ಮದಾಗಿಸಿಕೊಂಡರು, ಕನ್ನಡಿಗರೇ ಆಗಿಬಿಟ್ಟರು ಮೋಗ್ಲಿಂಗ್.

ಬೆಂಗಳೂರು 5 ಪಾಲಿಕೆಗಳ ಚುನಾವಣೆ ಸದ್ಯಕ್ಕಿಲ್ಲ

ಬೆಂಗಳೂರು 5 ಪಾಲಿಕೆಗಳ ಚುನಾವಣೆ ಸದ್ಯಕ್ಕಿಲ್ಲ

ಪಾಲಿಕೆಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಈಗಾಲೇ ಮುಗಿದಿದ್ದು, ಈ ಬಗ್ಗೆ ಸದ್ಯದ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ವಾರ್ಡ್‌ಗಳ ಪಟ್ಟಿ ಹಾಗೂ ಮೀಸಲು ಪಟ್ಟಿ ನೀಡು ವುದರಲ್ಲಿ ಸರಕಾರ ಇನ್ನೂ ಆಮೆ ವೇಗ ಅನುಸರಿಸುತ್ತಿದ್ದರಿಂದ ಇದರಿಂದ ಸಹಜವಾಗಿಯೇ ಚುನಾವಣಾ ಘೋಷಣೆ ಮುಂದೆ ಹೋಗುವಂತಾಗಿದೆ. ಈಗ ಸರಕಾರ ಚುನಾವಣೆ ನಡೆಸಲು ಇನ್ನೂ ಹೆಚ್ಚಿನ ಸಮಯ ಕೇಳುವ ಸಾಧ್ಯತೆ ಹೆಚ್ಚಾಗಿದೆ.

Bihar Election ground report by Raghav Sharma Nidle: ಎನ್‌ಡಿಎನಲ್ಲೂ ಇದ್ದಾರೆ ಜಂಗಲ್‌ ರಾಜ್‌ ರೂವಾರಿಗಳು

ಎನ್‌ಡಿಎನಲ್ಲೂ ಇದ್ದಾರೆ ಜಂಗಲ್‌ ರಾಜ್‌ ರೂವಾರಿಗಳು

ವಿಚಿತ್ರ ಎಂದರೆ ಬಾಹುಬಲಿಗಳು ಕೊಲೆ, ಅತ್ಯಾಚಾರ, ಸುಲಿಗೆ ಆರೋಪ ಹೊತ್ತವರು ಎನ್‌ಡಿಎ ಮೈತ್ರಿ ಕೂಟದಿಂದಲೂ ಸ್ಪರ್ಧಿಸುತ್ತಿದ್ದಾರೆ. ‘ನಿಮ್ಮಲ್ಲೂ ಬಾಹುಬಲಿಗಳಿದ್ದಾರಲ್ಲ’ ಎಂದರೆ ಬಿಜೆಪಿ-ಜೆಡಿಯು-ಎಲ್‌ಜೆಪಿಯ ಒಬ್ಬರೂ ಉತ್ತರ ನೀಡುವುದಿಲ್ಲ. ಆರ್.ಜೆ.ಡಿ.ಯಿಂದ ಗ್ಯಾಂಗ್‌ಸ್ಟರ್ ಹಿನ್ನೆಲೆಯ ವ್ಯಕ್ತಿ ಸ್ಪರ್ಧಿಸುವುದು ದೊಡ್ಡ ವಿಷಯವಲ್ಲ, ಏಕೆಂದರೆ ಆ ಪಕ್ಷಕ್ಕೇ ಬಾಹುಬಲಿ ಹಿನ್ನೆಲೆ ಇದೆ.

Bihar Election ground report by Raghav Sharma Nidle : ಬಿಹಾರದ ʼಕದನಕಣʼದಲ್ಲಿ ಯುವ ಕನ್ನಡಿಗರ ಸಾಹಸ

ಬಿಹಾರದ ʼಕದನಕಣʼದಲ್ಲಿ ಯುವ ಕನ್ನಡಿಗರ ಸಾಹಸ

ಎರಡೂ ರಾಷ್ಟ್ರೀಯ ಮೈತ್ರಿಕೂಟಗಳ ನಡುವೆ ಜನ ಸುರಾಜ್ ಪಕ್ಷವೂ ತಲೆ ಎತ್ತಿದ್ದು, ಎರಡೂ ಕಡೆ ಯವರ ವೋಟ್ ಕಟ್ ಮಾಡುವ ೩ನೇ ಆಟಗಾರನಾಗಿದೆ. ಬಿಹಾರದಲ್ಲಿ ಪಿಎಂ ಮೋದಿ, ಸಿಎಂ ನಿತೀಶ್, ಆರ್‌ಜೆಡಿಯ ತೇಜಸ್ವಿ ಯಾದವ್, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಜನ ಸುರಾಜ್‌ನ ಪ್ರಶಾಂತ್ ಕಿಶೋರ್ ಹವಾ ಎಬ್ಬಿಸಿದ್ದಾರೆ. ಇದರ ಮಧ್ಯೆಯೇ ಮೂವರು ಯುವ ಕನ್ನಡಿಗರು ರಾಜಕೀಯ ಪಕ್ಷಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಕನ್ನಡ ಸಿನಿಮಾ ಧ್ವಜ ಜಾಗತಿಕ ಮಟ್ಟಕ್ಕೆ ಹಾರಿಸಿದ ಡಿವೈನ್ ಸ್ಟಾರ್

ಕನ್ನಡ ಸಿನಿಮಾ ಧ್ವಜ ಜಾಗತಿಕ ಮಟ್ಟಕ್ಕೆ ಹಾರಿಸಿದ ಡಿವೈನ್ ಸ್ಟಾರ್

ಕರ್ನಾಟಕದ ಸಂಸ್ಕೃತಿಯನ್ನು ದೇಶದಲ್ಲೇ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ಪರಿಚಯಿಸಿದ ಕೀರ್ತಿ ರಿಷಬ್ ಶೆಟ್ಟರಿಗೆ ಸಲ್ಲುತ್ತದೆ. ಏಕತಾನತೆಯಲ್ಲಿ ಬಳಲುತ್ತಿದ್ದ ಭಾರತೀಯ ಚಿತ್ರರಂಗಕ್ಕೆ ಹೊಸ ಹಮ್ಮಸ್ಸು, ಹೊಸ ರೂಪ ಕೊಟ್ಟ ರಿಷಬ್ ಶೆಟ್ಟರು ತುಳುನಾಡಿನ ಭೂತಕೋಲ, ಕಂಬಳ ಮಾತ್ರವಲ್ಲದೆ ತುಳುನಾಡಿನ ಇತಿಹಾಸದ ತುಣುಕುಗಳನ್ನು ಪ್ರಕೃತಿ ರಮಣೀಯತೆಯನ್ನು ಸಿನಿಮಾದಲ್ಲಿ ಸುಂದರವಾಗಿ ತೋರಿಸಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದರು.

ಗಡಿನಾಡಿನಲ್ಲಿ ಕನ್ನಡದ ದುಸ್ಥಿತಿ: ಭಾಷಾ ಬೆಳವಣಿಗೆಗೆ ಸವಾಲು

ಗಡಿನಾಡಿನಲ್ಲಿ ಕನ್ನಡದ ದುಸ್ಥಿತಿ: ಭಾಷಾ ಬೆಳವಣಿಗೆಗೆ ಸವಾಲು

ಕಾಸರಗೋಡು ಮಾತ್ರ ಅಲ್ಲ, ರಾಜ್ಯದ ಗಡಿನಾಡು ಪ್ರದೇಶಗಳ ಪರಿಸ್ಥಿತಿಗಳೆಲ್ಲವೂ ಹಾಗೆ. ಗಡಿನಾಡಿ ನಲ್ಲಿ ದಿನೇ ದಿನೇ ಕನ್ನಡ ಅಸ್ಮಿತೆ ಮಂಕಾಗುತ್ತಿದೆ ಎಂಬುದಂತೂ ಸುಳ್ಳಲ್ಲ. ನಮ್ಮ ದೇಶದಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಆದಾಗ ಅದೊಂದು ಸಮರ್ಪಕ ಪ್ರಕ್ರಿಯೆ ಆಗಿಲ್ಲ ಎಂಬುದನ್ನು ಹೆಚ್ಚಿನವರು ಒಪ್ಪಿರುವ ವಿಷಯ.

Bihar Election Ground Report from Raghava Sharma Nidle: ಜಾರ್ಜ್ ಕರ್ಮಭೂಮಿಯಲ್ಲಿ ಡಾಕ್ಟರ್ Vs ಪೇಶೆಂಟ್..!

ಜಾರ್ಜ್ ಕರ್ಮಭೂಮಿಯಲ್ಲಿ ಡಾಕ್ಟರ್ Vs ಪೇಶೆಂಟ್..!

ಜಾರ್ಜ್ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗ ನಾವು ಸಣ್ಣವರಾಗಿದ್ದೆವು, ನನ್ನ ಪ್ರಚಾರ ದಲ್ಲೂ ಅವರ ಹೆಸರನ್ನು ಬಳಸುತ್ತೇನೆ. ಅವರು ಬದಲಾವಣೆ ಹಾಗೂ ಅಭಿವೃದ್ಧಿಗಾಗಿ ಕೆಲಸ ಮಾಡಿ ಜನಮನ ಗೆದ್ದರು. ನಾನು ಕೂಡ ಅವರಂತೆ ಬದಲಾವಣೆಯನ್ನೇ ಬಯಸುತ್ತಿದ್ದೇನೆ. ಅದನ್ನೇ ಮನದಟ್ಟು ಮಾಡುವ ಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ಡಾ. ದಾಸ್.

ಕಾಂಗ್ರೆಸ್‌ʼನಲ್ಲಿ ಸಿದ್ದು ಹೇಳಿಕೆ ತಂದ ಸದ್ದಿಲ್ಲದ ಸಂಚಲನ

ಕಾಂಗ್ರೆಸ್‌ʼನಲ್ಲಿ ಸಿದ್ದು ಹೇಳಿಕೆ ತಂದ ಸದ್ದಿಲ್ಲದ ಸಂಚಲನ

ರಾಜಕೀಯ ನಿವೃತ್ತಿ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿ ಸುವ ಇಂಗಿತ ವ್ಯಕ್ತಪಡಿಸಿದ್ದು, ಇದು ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ರಾಜಕೀಯ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲ, ಇಷ್ಟೂ ದಿನ ರಾಜಕೀಯ ಕ್ರಾಂತಿ ಬಗ್ಗೆ ಚಿಂತಿಸುತ್ತಿದ್ದ ಸಚಿವರು, ಶಾಸಕರು ಇದೀಗ ಮುಂಬರುವ 2028 ಚುನಾವಣೆಯನ್ನು ಗುರಿಯಾಗಿಸಿ ರಾಜಕಾರಣದಲ್ಲಿ ತೊಡಗಿದ್ದಾರೆ.

Bihar Election ground Report from Raghav Sharma Nidle: ಮಹುವಾದಲ್ಲಿ ತೇಜ್‌ ಪ್ರತಾಪ್‌ ಬಗ್ಗೆ ಒಲವು

ಮಹುವಾದಲ್ಲಿ ತೇಜ್‌ ಪ್ರತಾಪ್‌ ಬಗ್ಗೆ ಒಲವು

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಳೆದ ಬಾರಿ ಸೋತಿದ್ದ ಎಲ್‌ಜೆಪಿಯ ಸಂಜಯ್ ಸಿಂಗ್ ಕಣದಲ್ಲಿದ್ದರೆ, 2020ರಲ್ಲಿ ಜೆಡಿಯುನಿಂದ ಸ್ಫರ್ಧಿಸಿದ್ದ ಆಸ್ಮಾ ಪರ್ವೀನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆಸ್ಮಾ ಕಳೆದ ಬಾರಿ ೨ನೇ ಸ್ಥಾನದಲ್ಲಿದ್ದರು. ಈ ಬಾರಿ ಟಿಕೆಟ್ ಸಿಗದೆ ಪಕ್ಷೇತರ ಸ್ಪರ್ಧೆಗೆ ಮುಂದಾಗಿದ್ದರಿಂದ ಅವರನ್ನು ಜೆಡಿಯುನಿಂದ ಉಚ್ಚಾಟಿಸಲಾಗಿದೆ.

ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆ

ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆ

ಮಳೆ ಮತ್ತು ಮೋಡ ಮುಸುಕಿದ ವಾತಾವರಣದ ಕಾರಣಕ್ಕೆ ರೋಗಬಾಧೆ ಕಾಣಿಸಿಕೊಂಡಿದ್ದು, ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿವೆ. ಹೊರ ರಾಜ್ಯಗಳಲ್ಲಿ ತರಕಾರಿಗಳಿಗೆ ಬೇಡಿಕೆ ದಿಢೀರ್ ಹೆಚ್ಚಳವಾಗಿದೆ. ಬೇಡಿಕೆ ತಕ್ಕಂತೆ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಾರೆ ಚಿಲ್ಲರೆ ತರಕಾರಿ ವ್ಯಾಪಾರಿ ವಿಜಯಕುಮಾರ್.

Raghav Sharma Nidle Column: ಪಾಸ್ವಾನ್‌ ಭದ್ರಕೋಟೆಯಲ್ಲಿ ಪರಿವರ್ತನೆಗೆ ಮತವೇ ?

ಪಾಸ್ವಾನ್‌ ಭದ್ರಕೋಟೆಯಲ್ಲಿ ಪರಿವರ್ತನೆಗೆ ಮತವೇ ?

ಇಲ್ಲಿ ಯುವಕರನ್ನು ನಿರುದ್ಯೋಗ ಬಾಧಿಸುತ್ತಿದ್ದರೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಕರ್ಯ ಗಳಿಂದ ಜನತೆ ಈಗಲೂ ವಂಚಿತರಾಗಿದ್ದಾರೆ. ಸರಿಯಾದ ಆಸ್ಪತ್ರೆಗಳಿಲ್ಲದೆ, ಎಲ್ಲದಕ್ಕೂ ಪಟನಾವನ್ನೇ ಅವಲಂಬಿಸಬೇಕಾದ ದುಸ್ಥಿತಿಯಿದೆ. ಹಾಜಿಪುರ ವೈಶಾಲಿ ಜಿಗೆ ಒಳಪಟ್ಟಿದ್ದರೂ, ಜಿಲ್ಲಾ ಕೇಂದ್ರ ಹಾಜಿಪುರದ ಇದೆ. ‘ಎಲ್‌ಜೆಪಿ’ ಪಕ್ಷದ ಸ್ಥಾಪಕ ದಿ.ರಾಮ್ ವಿಲಾಸ್ ಪಾಸ್ವಾನ್ ಅವರ ಕರ್ಮಭೂಮಿ ಹಾಜಿಪುರ.

Loading...