ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೈಲೈನ್‌ ಸ್ಟೋರೀಸ್‌

Safari begins: ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿ ಪುನರಾರಂಭಿಸುವಂತೆ ಸೂಚನೆ ನೀಡಿ ತಿಂಗಳು ಕಳೆದರೂ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಸುಳಿವನ್ನು ನೀಡಿಲ್ಲ. ತಾಂತ್ರಿಕ ಸಮಿತಿ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಈಶ್ವರ್ ಖಂಡ್ರೆ ಹೇಳಿದ್ದರು.

ಮೇಲ್ಮನೆಯಲ್ಲಿ ಕಾರ್ಯದರ್ಶಿ ಸ್ಥಾನದಲ್ಲಿ ಸದ್ಯದಲ್ಲೇ ಶೂನ್ಯ ಸೃಷ್ಟಿ

ಮೇಲ್ಮನೆಯಲ್ಲಿ ಕಾರ್ಯದರ್ಶಿ ಸ್ಥಾನದಲ್ಲಿ ಸದ್ಯದಲ್ಲೇ ಶೂನ್ಯ ಸೃಷ್ಟಿ

ಪರಿಷತ್ತಿನ ಇತಿಹಾಸದ ಇಂಥ ಸ್ಥಿತಿ ನಿರ್ಮಾಣವಾಗುತ್ತಿರುವುದು ಪ್ರಥಮ. ಹೇಗೆಂದರೆ, ಸದ್ಯ ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಮೇ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗು ತ್ತಿದ್ದು, ಅವರ ನಂತರದಲ್ಲಿ ಕಾರ್ಯದರ್ಶಿಯಾಗಬೇಕಿದ್ದ ಎಸ್.ನಿರ್ಮಲಾ ಅವರು ಮಾರ್ಚ್‌ನ ಸೇವೆ ಮುಗಿಸಲಿದ್ದಾರೆ.

SAFARI: ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ನಿರ್ಬಂಧ ಹೇರಿರುವ ಪ್ರದೇಶಕ್ಕಿಂತ ಅರಣ್ಯ ಪ್ರದೇಶದೊಳಗೆ ಈ ರೀತಿ ಅಕ್ರಮ ಕಟ್ಟಡ ಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ಅರಣ್ಯ, ವನ್ಯಜೀವಿ ಗಳನ್ನು ರಕ್ಷಿಸಬೇಕು ಎನ್ನುವ ಆಲೋಚನೆ ಇದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿಯನ್ನು ಸ್ಥಗಿತಗೊಳಿಸುವುದಕ್ಕಿಂತ ಮೊದಲು ಅರಣ್ಯ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಜಮೀನು ಮಾಡಿಕೊಂಡಿರುವವರು, ಎಲೆಕ್ಟ್ರಿಕ್ ಫೆನ್ಸಿಂಗ್ಗಳನ್ನು ಮಾಡಿಕೊಂಡಿರುವವರನ್ನು ಮಟ್ಟಹಾಕಬೇಕಿದೆ

Organ donation: ಅಂಗಾಂಗ ದಾನದಿಂದ ಸಾವಿನಲ್ಲೂ ಸಾರ್ಥಕತೆ

ಅಂಗಾಂಗ ದಾನದಿಂದ ಸಾವಿನಲ್ಲೂ ಸಾರ್ಥಕತೆ

ವಿಜಯಪುರ ನಗರದ ಶಹಾಪುರ ಅಗಸಿಯ ನಿವಾಸಿ ಬಲರಾಮ ಕೃಷ್ಣ ಬಾಗಲ ಕೋಟ (30) ನೂರಾರು ಕನಸು ಕಟ್ಟಿಕೊಂಡಿರುವ ಯುವಕ, ಸಾಧಿಸಬೇಕು ಎನ್ನುವ ಹುಮ್ಮಸ್ಸುನಲ್ಲಿದ್ದ ಆದರೆ ವಿಧಿಯಾಟವೇ ಬೇರೆಯಾಗಿತ್ತು ಫೆ.9 ಆತನ ಕೊನೆಯ ದಿನವಾ ಗಿತ್ತು ಫೆ.9ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಿಎಲ್‌ಡಿಇ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ದಾಖಲಾಗಿದ್ದರು.

Safari Ban: ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಸಫಾರಿ ನಿರ್ಬಂಧದಿಂದ ಕರ್ನಾಟಕದೊಳಗಿರುವ ಹಾಗೂ ನೆರೆ ರಾಜ್ಯ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ನಾಗರಹೊಳೆ, ಬಂಡೀಪುರ ಬಿಟ್ಟು ರಾಜ್ಯದ ಇತರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ವಿದೇಶದಿಂದ ಆಗಮಿಸುವವರಿಗೆ, ಉತ್ತರ ಭಾರತದಿಂದ ‘ಮಕ್ಕಳ ರಜೆ’ ಎಂಜಾಯ್ ಮಾಡಲು ಬರುವವರು ಈ ಸಫಾರಿಯ ನಿರ್ಬಂಧದಿಂದ ಕರ್ನಾಟಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

Safari for VIPs?: ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಬಂಡೀಪುರ, ನಾಗರಹೊಳೆ ಭಾಗದಲ್ಲಿ ಸಂಪೂರ್ಣವಾಗಿ ಸಫಾರಿ ನಿರ್ಬಂಧವಾಗಿಲ್ಲ. ಬದಲಿಗೆ ಅಧಿಕಾರಿ ವರ್ಗ, ರಾಜಕೀಯ ನಾಯಕರು, ಅವರ ಕುಟುಂದವರು ಬಂದರೆ ಈಗಲೂ ಅರಣ್ಯ ಇಲಾಖೆಯ ಗೆಸ್ಟ್ ಹೌಸ್‌ನಲ್ಲಿಯೇ ರಾಜಾತಿಥ್ಯ ನೀಡಿ, ಸಫಾರಿಗೆ ಕರೆದುಕೊಂಡು ಹೋಗಲಾಗು ತ್ತಿದೆ ಎನ್ನುವ ಮಾತುಗಳನ್ನು ಸ್ಥಳೀಯರೇ ಹೇಳುತ್ತಿದ್ದಾರೆ.

ಐತಿಹಾಸಿಕ ಭೋಗನಂದೀಶ್ವರ ಉಮಾಮಹೇಶ್ವರಿ ಜೋಡಿ ಬ್ರಹ್ಮರಥೋತ್ಸವಕ್ಕೆ ದಿನಗಣನೆ

ದನಗಳ ಜಾತ್ರೆಯ ಸಿದ್ದತೆ ಜೋರು : ಶಿವರಾತ್ರಿ ಮಹೋತ್ಸವಕ್ಕೆ ನಂದಿಗ್ರಾಮ ಸಜ್ಜು

ಮಹಾಶಿವರಾತ್ರಿ ಮಾರನೆಯ ದಿನ ನಡೆಯುವ ಜೋಡಿ ಕಲ್ಲಿನ ರಥೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ತಮಿಳುನಾಡು, ಆಂದ್ರಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಯಲ್ಲಿ ಜಾತ್ರಾ ಮಹೋತ್ಸವವು ಐತಿಹಾಸಿಕವಾಗಿ ಧಾರ್ಮಿಕವಾಗಿ ಪೌರಾಣಿಕವಾಗಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

Safari: ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ಈ ಹಿಂದೆ ಬಂಡೀಪುರ, ನಾಗರಹೊಳೆ ಭಾಗದಲ್ಲಿ ಅರಣ್ಯದ ಅಂಚಿನಿಂದ ಮೂರು ಕಿಮೀ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಆ ಪ್ರದೇಶದಲ್ಲಿ ಯಾವುದೇ ಕಟ್ಟಡ ಕಾಮಗಾರಿಗೆ ಅಥವಾ ಕೃಷಿಗೆ ಅವಕಾಶ ನೀಡುತ್ತಿರಲಿಲ್ಲ. ಇದರಿಂದ ಪ್ರಾಣಿಗಳು ಕಾಡಿನಿಂದ ಹೊರ ಬಂದರೂ ಮನುಷ್ಯರ ಸಂಪರ್ಕ ಸಿಗುತ್ತಿರಲಿಲ್ಲ. ಆದರೆ ಸಚಿವ ಸಂಪುಟ ಉಪಸಮಿತಿ ಈ ನಿರ್ಬಂಧವನ್ನು ಮೂರು ಕಿಮೀ ನಿಂದ ಒಂದು ಕಿಲೋ ಮೀಟರ್‌ಗೆ ಇಳಿಸಿದೆ.

Safari Bandh: ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಬಂಡೀಪುರ-ನಾಗರಹೊಳೆ ಭಾಗದ ರೆಸಾರ್ಟ್ ಮಾಲೀಕರು ಇಡೀ ವರ್ಷದ ಲಾಭದ ಶೇ.50ರಷ್ಟು ಲಾಭ ವನ್ನು ಕೇವಲ ಮೂರು ತಿಂಗಳಲ್ಲಿ ಮಾಡಿಕೊಳ್ಳುತ್ತಿದ್ದರು. ಆದರೆ ಅರಣ್ಯ ಇಲಾಖೆಯ ಅವೈಜ್ಞಾನಿಕ ಸಫಾರಿ ನಿರ್ಬಂಧದ ತೀರ್ಮಾನದಿಂದಾಗಿ, ನಷ್ಟ ಇರಲಿ, ಇಷ್ಟು ವರ್ಷದ ಲಾಭ ವನ್ನೂ ಕಳೆದು ಕೊಳ್ಳುವ ಆತಂಕ ರೆಸಾರ್ಟ್ ಮಾಲೀಕರದ್ದಾಗಿದೆ.

Tigers in Safari: ಅಮಾಯಕ ಹುಲಿಗಳು ಮಾಡಿದ ತಪ್ಪಾದರೂ ಏನು ?

ಅಮಾಯಕ ಹುಲಿಗಳು ಮಾಡಿದ ತಪ್ಪಾದರೂ ಏನು ?

ಬಂಡೀಪುರ, ನಾಗರಹೊಳೆ ಭಾಗದಲ್ಲಾಗಿರುವ ಹುಲಿ ದಾಳಿಗೂ, ಸಫಾರಿಗೂ ಸಂಬಂಧವಿಲ್ಲ ದಿದ್ದರೂ ಎರಡಕ್ಕೂ ಸಂಬಂಧ ಕಲ್ಪಿಸಿ ಅರಣ್ಯ ಇಲಾಖೆ ಸಫಾರಿಯನ್ನು ಸ್ಥಗಿತಗೊಳಿಸಿದೆ. ಆದರೆ ಈ ಭಾಗದಲ್ಲಿ ಹುಲಿ ದಾಳಿಯ ಹಿಂದಿನ ಉದ್ದೇಶವೇನು? ಮನುಷ್ಯರಿಂದ ಹುಲಿಗಳಿಗೆ ಆಗಿರುವ ತೊಂದರೆ ಏನು ಎನ್ನುವ ಬಗ್ಗೆ ಅರಣ್ಯ ಇಲಾಖೆ ಪರಿಶೀಲಿಸುತ್ತಿಲ್ಲ.

Burude Gang: ನೋಟಿಸ್‌ʼಗೆ ಮುನ್ನವೇ ‌ʼಆರೋಪʼ ಹೊತ್ತುಕೊಂಡ ಬುರುಡೆ ಗ್ಯಾಂಗ್

ನೋಟಿಸ್‌ʼಗೆ ಮುನ್ನವೇ ‌ʼಆರೋಪʼ ಹೊತ್ತುಕೊಂಡ ಬುರುಡೆ ಗ್ಯಾಂಗ್

ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಪರವಾಗಿ ವಕೀಲರು ಬೆಳ್ತಂಗಡಿ ಕೋರ್ಟ್‌ ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ತಮ್ಮನ್ನು ‘ಪ್ರಪೋಸ್ಟ್ ಅಕ್ಯೂಸ್ಡ್’ ಎಂದು ಪರಿಗಣಿಸಲು ಕೋರಿದ್ದರು. ಬಳಿಕ ಮಧ್ಯಾಹ್ನವಾಗುತ್ತಿದ್ದಂತೆ ಈ ಅರ್ಜಿಯನ್ನು ವಾಪಸ್ ಪಡೆದಿದ್ದರು. ಈ ಮೂಲಕ ದೋಷಾ ರೋಪಕ್ಕೆ ಮುನ್ನವೇ ಬುರುಡೆ ಗ್ಯಾಂಗ್ ಸದಸ್ಯರು ತಮ್ಮನ್ನು ತಾವೇ ಆರೋಪಿಗಳಾಗಿ ಪರಿಗಣಿಸಿದಂತಾ ಗಿದೆ

Safari Ban: ಇರುವುದೇ ಸ್ವಲ್ಪ ಜಾಗ, ಅಲ್ಲೂ ಸಫಾರಿ ನಿರ್ಬಂಧ !

ಇರುವುದೇ ಸ್ವಲ್ಪ ಜಾಗ, ಅಲ್ಲೂ ಸಫಾರಿ ನಿರ್ಬಂಧ !

ಬಂಡೀಪುರ ಸಫಾರಿ ಸುಮಾರು 15 ರಿಂದ 20 ಕಿಮೀ ಇದ್ದರೆ, ನಾಗರಹೊಳೆಯದ್ದು 12ರಿಂದ 18 ಕಿಮೀ ಇದೆ. ಒಂದು ಸುತ್ತಿನಲ್ಲಿ ಈ ದೂರವನ್ನು ಕ್ರಮಿಸುವುದರಿಂದ ಕಾಡಿನ ಆರೇಳು ಕಿಮೀ ಭಾಗದಲ್ಲಿ ಮಾತ್ರ ಸಫಾರಿ ವಾಹನಗಳು ಹೋಗುತ್ತವೆ. ಅದರ ಆಚೆಗೆ ಈಗಲೂ ಪ್ರವಾಸಿಗರಿಗೆ ಅವಕಾಶವಿಲ್ಲ. ಇದನ್ನು ಗಣಿಸದೇ, ಇನ್ನೊಂದು ಭಾಗದಲ್ಲಿ ಆಗಿರುವ ಹುಲಿ ದಾಳಿಗೆ ಸಫಾರಿ ಯನ್ನು ‘ಲಿಂಕ್’ ಮಾಡುತ್ತಿರುವುದು ಸರಿಯಲ್ಲ ಎಂಬ ಆಕ್ರೋಶ ಕೇಳಿಸಿದೆ.

Computer Cleanup Day: ಇಂದು ಕಂಪ್ಯೂಟರ್‌ ಸ್ವಚ್ಛತಾ ದಿನ

ಇಂದು ಕಂಪ್ಯೂಟರ್‌ ಸ್ವಚ್ಛತಾ ದಿನ

ದಿನವಿಡೀ ನಮ್ಮ ಕೆಲಸದ ಅವಿಭಾಜ್ಯ ಅಂಗವಾಗಿರುವ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ಗಳ ಸ್ವಚ್ಛತೆಯ ಬಗ್ಗೆ ಎಷ್ಟು ಗಮನ ಹರಿಸುತ್ತೇವೆ? ಈ ಪ್ರಶ್ನೆಯನ್ನು ನೆನಪಿಸಲು ಮತ್ತು ಡಿಜಿಟಲ್ ಶಿಸ್ತನ್ನು ಮೈಗೂಡಿಸಿಕೊಳ್ಳಲು ಪ್ರತಿ ವರ್ಷ ಫೆಬ್ರವರಿ ತಿಂಗಳ 2ನೇ ಸೋಮವಾರದಂದು (ಫೆ.9)‘ರಾಷ್ಟ್ರೀಯ ಕಂಪ್ಯೂ ಟರ್ ಸ್ವಚ್ಛತಾ ದಿನ’ವನ್ನು ಆಚರಿಸಲಾಗುತ್ತದೆ.

Kusum: ಕೃಷಿ ಪಂಪ್‌ʼಸೆಟ್‌ಗೆ ಬೆಳಕಾದ ʼಕುಸುಮ್ʼ

Kusum: ಕೃಷಿ ಪಂಪ್‌ʼಸೆಟ್‌ಗೆ ಬೆಳಕಾದ ʼಕುಸುಮ್ʼ

ಚುನಾವಣೆಗೂ ಮೊದಲು ಕಾಂಗ್ರೆಸ್ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್ ನೀಡುವ ಘೋಷಣೆಯನ್ನು ಮಾಡಿತ್ತು. ಈ ಘೋಷಣೆ ಪೂರೈಸಲು ಹಾಗೂ ಅಗತ್ಯವಿರುವಷ್ಟು ವಿದ್ಯುತ್ ಒದಗಿಸಲು ಕುಸುಮ್-ಸಿ ಯೋಜನೆ ಸಹಕಾರಿಯಾಗಿದ್ದು, ಬೆಸ್ಕಾಂ ವ್ಯಾಪ್ತಿ ಒಂದರಲ್ಲಿಯೇ 2.70 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳಿಗೆ ಹಗಲಿನ ಸಮಯದಲ್ಲಿ ನಿರಂತರ 7 ಗಂಟೆ ವಿದ್ಯುತ್ ನೀಡಲು ಸಾಧ್ಯವಾಗಿದೆ.

Ban on Safari: ಸಫಾರಿಗೆ ನಿರ್ಬಂಧ; ಕರುನಾಡು ಪ್ರವಾಸಿ ಸಂಸ್ಕೃತಿಗೆ ಧಕ್ಕೆ

ಸಫಾರಿಗೆ ನಿರ್ಬಂಧ; ಕರುನಾಡು ಪ್ರವಾಸಿ ಸಂಸ್ಕೃತಿಗೆ ಧಕ್ಕೆ

ಉತ್ತರ ಭಾರತದಿಂದ ವಾರಗಟ್ಟಲೇ ರಾಜ್ಯಕ್ಕೆ ಆಗಮಿಸುವವರು, ಕೇವಲ ಬಂಡೀಪುರಕ್ಕೆ ಬರುವುದಿಲ್ಲ. ಬದಲಿಗೆ ಬಂಡೀಪುರಕ್ಕೆ ಬಂದು ಇಲ್ಲಿನ ಸಫಾರಿ ವೀಕ್ಷಿಸಿ ಬಳಿಕ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ. ಆದರೀಗ ಕರ್ನಾಟಕದಲ್ಲಿ ಸಫಾರಿ ಇಲ್ಲ ಎಂದರೆ ಅವರು ನೆರೆ ರಾಜ್ಯಗಳಿಗೆ ಭೇಟಿ ನೀಡುವ ಸಾಧ್ಯತೆಯಿರುತ್ತದೆ ಎನ್ನುವ ಆತಂಕವನ್ನು ಪ್ರವಾಸೋದ್ಯಮ ಕ್ಷೇತ್ರದ ತಜ್ಞರು ವ್ಯಕ್ತಪಡಿಸಿದ್ದಾರೆ.

Challenges for Budget: ಬಜೆಟ್‌ʼಗೆ ಸಾಲು ಸಾಲು ಚುನಾವಣೆಗಳ ಸವಾಲು

ಬಜೆಟ್‌ʼಗೆ ಸಾಲು ಸಾಲು ಚುನಾವಣೆಗಳ ಸವಾಲು

ಕಾರಣ, ಗ್ಯಾರಂಟಿಗಳ ಹಣಕಾಸು ಆರ್ಭಟ ಹಾಗೂ ಕೇಂದ್ರ ಸರಕಾರದ ಆರ್ಥಿಕ ಅಸಹಕಾರದಿಂದ ರಾಜ್ಯ ಸರಕಾರ ಅನೇಕ ಯೋಜನೆಗಳಿಗೆ ಹಣವಿಲ್ಲದೆ ಪರದಾಡುವಂತಾಗಿದೆ. ಇಂಥ ಸ್ಥಿತಿಯಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸಬೇಕಿದೆ.

Footpath encroachment: ಫುಟ್‌ʼಪಾತ್‌ ಅತಿಕ್ರಮಣ, ಹದಗೆಟ್ಟ ಸಂಚಾರ ವ್ಯವಸ್ಥೆ

ಫುಟ್‌ʼಪಾತ್‌ ಅತಿಕ್ರಮಣ, ಹದಗೆಟ್ಟ ಸಂಚಾರ ವ್ಯವಸ್ಥೆ

ವ್ಯಾಪಾರಕ್ಕೆ ಬರುವವರು ಮತ್ತು ಅಂಗಡಿಕಾರರು ರಸ್ತೆಯಲ್ಲಿಯೇ ಅಡ್ಡಾದಿಡ್ಡಿಯಾಗಿ ತಮ್ಮ ವಾಹನ ಗಳನ್ನು ನಿಲ್ಲಿಸುತ್ತಾರೆ ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡಲು ಪರದಾಡುವಂತಾಗಿದೆ. ಇದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿರುತ್ತವೆ, ನಗರದಲ್ಲಿ ಇಷ್ಟೊಂದು ಅವ್ಯವಸ್ಥೆ ಇದ್ದರೂ ಸಂಬಂಧಿಸಿದ ಪುರಸಭೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಕುಂಬ ನಿದ್ರೆಗೆ ಜಾರಿದಂತೆ ವರ್ತಿಸುತ್ತಿದ್ದಾರೆ.

QR code for water bill payment: ಪುರಸಭೆಯ ನೀರಿನ ಕರ ಪಾವತಿಗೆ ಕ್ಯೂಆರ್‌ ಕೋಡ್

ಪುರಸಭೆಯ ನೀರಿನ ಕರ ಪಾವತಿಗೆ ಕ್ಯೂಆರ್‌ ಕೋಡ್

ಫೆ.1ರಿಂದ ಗ್ರಾಹಕರಿಗೆ ಕ್ಯೂಆರ್‌ಕೋಡ್ ಸೌಲಭ್ಯವನ್ನು ಒದಗಿಸಿದ್ದು, ಈಗಾಗಲೇ ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ, ಅಷ್ಟೇ ಅಲ್ಲದೇ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿಗಳು ಸ್ವತಃ ತಾವೇ ಮನೆ ಮನೆಗೆ ತೆರಳಿ ಕ್ಯೂಆರ್‌ಕೋಡ್ ಸೌಲಭ್ಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

Safari struggle: ಐಎಫ್‌ಎಸ್‌- ಖಂಡ್ರೆ ಕಿತ್ತಾಟದಲ್ಲಿ ಸಫಾರಿ ಸ್ಥಗಿತ ?

ಐಎಫ್‌ಎಸ್‌- ಖಂಡ್ರೆ ಕಿತ್ತಾಟದಲ್ಲಿ ಸಫಾರಿ ಸ್ಥಗಿತ ?

ಬಂಡೀಪುರ, ನಾಗರಹೊಳೆ ಸಫಾರಿ ನಿರ್ಬಂಧ ಸದ್ಯದ ಹಾಟ್ ಟಾಪಿಕ್. ಸಫಾರಿಯಿಂದ 40 ಕಿಮೀ ದೂರದ ಪ್ರದೇಶದಲ್ಲಿನ ಹುಲಿ ದಾಳಿ ಮುಂದಿಟ್ಟುಕೊಂಡು ಸಫಾರಿ ನಿರ್ಬಂಧಿಸಿರುವುದಕ್ಕೆ ಪ್ರವಾಸಿ ಕ್ಷೇತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತ ವಾಗುತ್ತದೆಯಾದರೂ, ನಿರ್ಬಂಧಕ್ಕೆ ಸಚಿವರು ಮತ್ತು ಐಎಫ್‌ಎಸ್ ಅಧಿಕಾರಿ ಗಳ ನಡುವಣ ತಿಕ್ಕಾಟ ಕಾರಣ ಎನ್ನಲಾಗುತ್ತಿದೆ.

Safari: ಪ್ರತಿಷ್ಠೆಗೆ ಬಿದ್ದು ನಿರ್ಬಂಧ, ನೂರಾರು ಕುಟುಂಬ ಬೀದಿಗೆ

ಪ್ರತಿಷ್ಠೆಗೆ ಬಿದ್ದು ನಿರ್ಬಂಧ, ನೂರಾರು ಕುಟುಂಬ ಬೀದಿಗೆ

ಜಂಗಲ್ ರೆಸಾರ್ಟ್ ನಿಗಮದ ರೆಸಾರ್ಟ್‌ನಲ್ಲಿ 180ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನು ಕೆಲ ಐಷಾರಾಮಿ ರೆಸಾರ್ಟ್‌ನಲ್ಲಿ 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ರೆಸಾರ್ಟ್, ಹೋಮ್ ಸ್ಟೇಗಳಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಸಿಬ್ಬಂದಿಯ ಮನೆಯಲ್ಲಿ ನಾಲ್ಕು ಜನರಿದ್ದರೂ, ಈ ಸಫಾರಿಗೆ ಬರುವ ಪ್ರವಾಸಿಗರಿಂದಲೇ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನರ ಜೀವನ ಅವಲಂಬಿಸಿದೆ.

‘ಭಾರತ’ಕ್ಕೆ ಮತ್ತೊಂದು ‘ವಿಶ್ವಕಪ್’ ಗೆಲ್ಲುವ ತವಕ

‘ಭಾರತ’ಕ್ಕೆ ಮತ್ತೊಂದು ‘ವಿಶ್ವಕಪ್’ ಗೆಲ್ಲುವ ತವಕ

ಇಂಗ್ಲೆಂಡ್ ದೇಶವು ಕ್ರಿಕಟ್‌ನ ತವರೂರು. ಮೊತ್ತಮೊದಲ ಬಾರಿಗೆ ಕ್ರಿಕೆಟ್ ಆರಂಭವಾಗಿರುವುದ ಕೂಡಾ ಅಲ್ಲೇನೆ. ನಮ್ಮ ಭಾರತದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಗೆಯೋ ಹಾಗೆಯೇ ಅಲ್ಲಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ). ಜಗತ್ತಿನ ವಿವಿಧ ಕ್ರಿಕೆಟ್ ಮೈದಾನಗಳಲ್ಲಿ ಇಳಿಮುಖವಾಗುತ್ತಿದ್ದ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲು, ಬಹು ಮುಖ್ಯವಾಗಿ ಯುವಕರನ್ನು ಆಕರ್ಷಿಸಲು 2001ರಲ್ಲಿ ಇಸಿಬಿಯ ಇಂತಹದ್ದೊಂದು ಚುಟುಕು ಕ್ರಿಕೆಟ್‌ನ ಕುರಿತು ಯೋಚನೆ ಮಾಡಿ ಅದಕ್ಕೆ ನಿಯಮಾವಳಿಯನ್ನೂ ರೂಪಿಸಿತು.

ಸಾಗರದ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ

ಸಾಗರದ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ

ಸಾಗರ ಎಂದಾಕ್ಷಣ ಹಲವು ವಿಶೇಷತೆಯೊಂದಿಗೆ ಕಣ್ಮುಂದೆ ಬರುವುದು ಇಲ್ಲಿನ ಮಾರಿಕಾಂಬ ಜಾತ್ರೆಯ ವೈಭವ. ರಾಜ್ಯದಲ್ಲಿ ಶಿರಸಿ ಮತ್ತು ಸಾಗರ ಎರಡು ಪ್ರಸಿದ್ದ ಐತಿಹಾಸಿಕ ಜಾತ್ರೆಗಳಲ್ಲಿ ಎರಡನೇ ದೊಡ್ಡ ಜಾತ್ರೆ ಎನ್ನುವ ಸ್ಥಾನದಲ್ಲಿ ಸಾಗರ ಮಾರಿಜಾತ್ರೆ ನಿಲ್ಲುತ್ತದೆ. ಅದು ಕೇವಲ ದೇವಿ ಪೂಜೆಯ ಉತ್ಸವವಲ್ಲ ಬದಲಾಗಿ ಜನರ ಭಾವನೆಯ ಮಹಾ ತೇರು.

ರಾಜ್ಯದಲ್ಲಿ ದೂರು ದಾಖಲಿಸಲು ಮುಂದಾದ ಸಂದೀಪ್‌ ಪಾಟೀಲ್

ರಾಜ್ಯದಲ್ಲಿ ದೂರು ದಾಖಲಿಸಲು ಮುಂದಾದ ಸಂದೀಪ್‌ ಪಾಟೀಲ್

400 ಕೋಟಿ ರು. ಹಣ ಇದ್ದ ಜೋಡಿ ಕಂಟೇನರ್ ಹೈಜಾಕ್ ಪ್ರಕರಣದ ಮೂಲ ಹುಡುಕುವುದೇ ಪೊಲೀಸ ರಿಗೆ ಸವಾಲಿನ ಕೆಲಸವಾಗಿದೆ. ಚೋರ್ಲಾ ಘಾಟ್‌ನಲ್ಲಿ ದರೋಡೆ ಆಗಿದ್ದು ಒಂದು ಭಾಗವಾಗಿದ್ದರೆ ಕಂಟೇನರ್‌ನಲ್ಲಿ ಹಣವನ್ನು ಯಾವ ಜಾಗದಲ್ಲಿ ತುಂಬಿಸಲಾಯಿತು ಎಂಬುವುದೇ ಯಕ್ಷಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ, 2025ರ ಸಪ್ಟೆಂಬರ್‌ನಲ್ಲಿ ಗೋವಾದಲ್ಲಿ ಎರಡು ಕಂಟೇನರ್‌ ನಲ್ಲಿ 2 ಸಾವಿರ ಮುಖಬೆಲೆಯ ನೋಟು ತುಂಬಿಸಲಾಗಿದೆ.

Dream Library: ಬಾಗಿಲು ಮುಚ್ಚುವ ಹಂತ ತಲುಪಿದ ಕನಸಿನ ಗ್ರಂಥಾಲಯ

ಬಾಗಿಲು ಮುಚ್ಚುವ ಹಂತ ತಲುಪಿದ ಕನಸಿನ ಗ್ರಂಥಾಲಯ

ಮೈಸೂರಿನ ರಾಜೀವ್ ನಗರ ಬಡಾವಣೆ ನಿವಾಸಿಯಾಗಿರುವ ಇವರು ಓದಿದ್ದು ಕೇವಲ ಒಂದನೇ ತರಗತಿ, ಆದರೆ ನೋಡಿ ಕಲಿತದ್ದು ಅಪಾರ. ಬಡತನದ ಬೇಗೆಯಲ್ಲಿ ನಲುಗಿದ ಕುಟುಂಬದಲ್ಲಿ ಹುಟ್ಟಿದ ಇಸಾಕ್ ಅವರಿಗೆ ಓದು ಹತ್ತಲಿಲ್ಲ ಎಂದಲ್ಲ, ತುಂಬಿದ ಕುಟುಂಬದ ಹೊಟ್ಟೆ ತುಂಬಿಸಬೇಕಾದ ಅನಿವಾರ್ಯತೆ. ಅದರ ಪರಿಣಾಮವಾಗಿ ಎಳೆಯ ವಯಸ್ಸಿಗೇ ಬಾಲಕಾರ್ಮಿಕ, ಜೀತದಾಳು.

Loading...