ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೈಲೈನ್‌ ಸ್ಟೋರೀಸ್‌

Sabarimala: ಪತ್ತನಂತಿಟ್ಟದಲ್ಲಿ ‘ಶಬರಿಮಲೆ’ ವಿವಾದ: ಈ ಸಲ ಚುನಾವಣಾ ಪ್ರಚಾರ ವಿಷಯ

ಪತ್ತನಂತಿಟ್ಟದಲ್ಲಿ ‘ಶಬರಿಮಲೆ’ ವಿವಾದ: ಈ ಸಲ ಚುನಾವಣಾ ಪ್ರಚಾರ ವಿಷಯ

ಆರನ್ಮುಳ ವಿಧಾನಸಭಾ ಕ್ಷೇತ್ರ ಕೂಡಾ ಕಳೆದೆರಡು ಚುನಾವಣೆಯಲ್ಲಿ ಎಡರಂಗದ ಕೈ ಹಿಡಿದಿದ್ದು ಹಿರಿಯ ಪತ್ರಕರ್ತೆ ವೀಣಾ ಜಾರ್ಜ್ ಆ ಕ್ಷೇತ್ರದಿಂದ ಗೆದ್ದು ಎರಡು ಅವಧಿಯ ಸರಕಾರದಲ್ಲೂ ಸಚಿವೆಯಾದವರು. ಈ ಬಾರಿ ಕೂಡಾ ಅವರು ಆರನ್ಮುಳದಿಂದ ಸ್ಪರ್ಧಿಸು ತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಅಭಿನ್ ವರ್ಕಿ ಕಣದಲ್ಲಿದ್ದರೆ ಬಿಜೆಪಿಯು ರಾಜ್ಯದ ಹಿರಿಯ ನೇತಾರ ಮತ್ತು ಮಿಜೋರಾಮ್ ಮಾಜಿ ರಾಜ್ಯಪಾಲರಾಗಿದ್ದ ಕುಮ್ಮನಂ ರಾಜಶೇಖರನ್ ಅವರನ್ನು ಆರನ್ಮುಳದಿಂದ ಕಣಕ್ಕಿಳಿಸಿ ರೋಚಕ ಪೈಪೋಟಿಗೆ ನಾಂದಿ ಹಾಡಿದೆ.

ಮರಹಾನಕುಳಿ ಜ್ಞಾನ ಗಿರಿಗೆ ಶತಮಾನದ ಸಂಭ್ರಮ..

ಮರಹಾನಕುಳಿ ಜ್ಞಾನ ಗಿರಿಗೆ ಶತಮಾನದ ಸಂಭ್ರಮ..

ಬ್ರಿಟಿಷರ ಆಳ್ವಿಕೆಯ ಸಂದರ್ಭ ಅಂದರೆ 1925 ರಲ್ಲಿ ಹೊಸಳ್ಳಿ ಆಂಜನೇಯ ದೇವಾಲಯದಲ್ಲಿ ಸ್ಥಾಪನೆಗೊಂಡ ಶಾಲೆ ನಂತರ ಹಿಂಡು ನಂಜುಂಡಪ್ಪನವರ ಮನೆ ಅಂಗಳಕ್ಕೆ ಬಂದು ತದ ನಂತರ ಮರಹಾನುಕುಳಿ ದೇವಸ್ಥಾನ ದಲ್ಲಿ ನಡೆದು ಕೆಲ ವರ್ಷಗಳ ನಂತರ ಸರಕಾರಿ ಕಟ್ಟಡ ದಲ್ಲಿ ಆರಂಭವಾಯಿತು.

Bagalkot Byelection: ಬಾಗಲಕೋಟೆಯಲ್ಲಿ ಕಾಂಗ್ರೆಸ್‌ʼಗೆ ಒಳೇಟಿನ ಭೀತಿ

ಬಾಗಲಕೋಟೆಯಲ್ಲಿ ಕಾಂಗ್ರೆಸ್‌ʼಗೆ ಒಳೇಟಿನ ಭೀತಿ

ಎಚ್.ವೈ ಮೇಟಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಪುತ್ರ ಉಮೇಶ್ ಮೇಟಿ ಸ್ಪರ್ಧಿಸಿದ್ದಾರೆ. ಆದರೆ ಕೇವಲ ಅನುಕಂಪದ ಅಲೆಯನ್ನೇ ಮೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರ ರನ್ನು ಸೆಳೆಯುವುದೇ ಸವಾಲಿನ ಕೆಲಸವಾಗಿದೆ. ಇಡೀ ಸರಕಾರವೇ ಮೇಟಿ ಪರ ಪ್ರಚಾರದಲ್ಲಿ ತೊಡಗಿದರು ಸಮನ್ವಯ ಕೊರತೆ ಎದ್ದು ಕಾಣುತ್ತಿದೆ

Kottayam: ಕೊಟ್ಟಾಯಂ: ಕ್ರೈಸ್ತರ ಮತವೇ ನಿರ್ಣಾಯಕ

Kottayam: ಕೊಟ್ಟಾಯಂ: ಕ್ರೈಸ್ತರ ಮತವೇ ನಿರ್ಣಾಯಕ

ಕೊಟ್ಟಾಯಂ ಜಿಲ್ಲೆಯಲ್ಲಿ ಒಂಭತ್ತು ವಿಧಾನಸಭಾ ಕ್ಷೇತ್ರಗಳಿವೆ. ಚೆಂಗನಾಶ್ಶೇರಿ, ಏಟುಮಾನ್ನೂರ್, ಕಡುತುರುತ್ತಿ, ಕಾಂಞಂರಪಳ್ಳಿ, ಕೊಟ್ಟಾಯಂ, ಪಾಲಾ, ಪೂಂಞಂರ್, ಪುತುಪಳ್ಳಿ ಮತ್ತು ವೈಕ್ಯಂ. ಪುತುಪಳ್ಳಿ ವಿಧಾನಸಭಾ ಕ್ಷೇತ್ರವು ಕೇರಳದ ಮಾಜಿ ಮುಖ್ಯ ಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಉಮ್ಮನ್ ಚಾಂಡಿ ಅವರ ಹುಟ್ಟೂರು.

NOTA: ದಾವಣಗೆರೆಯಲ್ಲಿ ಕಾಂಗ್ರೆಸ್‌ʼಗೆ ʼನೋಟಾʼ ಆತಂಕ

NOTA: ದಾವಣಗೆರೆಯಲ್ಲಿ ಕಾಂಗ್ರೆಸ್‌ʼಗೆ ʼನೋಟಾʼ ಆತಂಕ

ಕಾಂಗ್ರೆಸ್ ಆತಂಕದಲ್ಲಿದ್ದರೆ ಬಹುತೇಕ ಅಲ್ಪಸಂಖ್ಯಾತ ಮತದಾರರು ಜಾರಿಗೆ ಮತ ಹಾಕಬೇಕೆ ನ್ನುವ ಗೊಂದಲದಲ್ಲಿದ್ದು, ಇವರಲ್ಲಿ ಹೆಚ್ಚಿನ ಮಂದಿ ಮೇಲಿನ ಯಾವ ಅಭ್ಯರ್ಥಿಯೂ ಬೇಡ ಎನ್ನುವವರು ‘ನೋಟಾ’ ಮತದಾನ ಮಾಡುವ ಸಾಧ್ಯತೆ ಹೆಚ್ಚು ಕಂಡು ಬರುತ್ತಿದೆ ಎನ್ನುತ್ತಾರೆ ಆ ಸಮುದಾಯದ ಮುಖಂಡರು.

ಪರವೂರ್: ಸೋಲೇ ಕಾಣದ ಸತೀಶನ್

ಪರವೂರ್: ಸೋಲೇ ಕಾಣದ ಸತೀಶನ್

ಎರ್ನಾಕುಳಂ ಜಿಲ್ಲೆಯ 14 ವಿಧಾನಸಭಾ ಕ್ಷೇತ್ರಗಳ ಪೈಕಿ 2021ರ ಕೇರಳ ಚುನಾವಣೆಯಲ್ಲಿ ಯುಡಿಎಫ್ 8 ಕ್ಷೇತ್ರಗಳನ್ನು ಪಡೆದಿದ್ದರೆ, ಎಲ್‌ಡಿಎಫ್ 6 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿ ಯಾಗಿತ್ತು. ಈ ಬಾರಿ ಕೂಡಾ ಎರಡೂ ಒಕ್ಕೂಟಗಳೂ ಬಲಿಷ್ಠ ಅಭ್ಯರ್ಥಿಗಳನ್ನು ಜಿಲ್ಲೆಯಲ್ಲಿ ಕಣಕ್ಕಿಳಿಸಿವೆ.

BJP Kerala Campaign: ತ್ರಿಶೂರ್, ಪಾಲಕ್ಕಾಡಿನಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ

ತ್ರಿಶೂರ್, ಪಾಲಕ್ಕಾಡಿನಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ

ಮೋದಿಗೆ ಕೇರಳದ ತ್ರಿಶೂರ್ ಅಂದರೆ ಬಹಳ ಅಚ್ಚುಮೆಚ್ಚಿನ ಮತ್ತು ನಿರೀಕ್ಷೆಯ ತಾಣ. ಅದಕ್ಕೆರಡು ಕಾರಣ, ಒಂದು ಕೇರಳದ ಮೊತ್ತ ಬಿಜೆಪಿ ಸಂಸತ್ ಸದಸ್ಯ ಆಯ್ಕೆಯಾಗಿ ಆ ರಾಜ್ಯದಲ್ಲಿ ಪಕ್ಷದ ಪಾಲಿಗೆ ಹೊಸ ಇತಿಹಾಸ ಸೃಷ್ಟಿಸಿರುವುದು ಪ್ರಮುಖ ಕಾರಣವಾದರೆ, ಇನ್ನೊಂದು ಕೇರಳದ ಇತಿಹಾಸ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಇರುವುದು ಕೂಡಾ ಇದೇ ತ್ರಿಶೂರ್ ಜಿಲ್ಲೆಯಲ್ಲೇ.

ಮಲಬಾರ್ ಕೇರಳ 2 ಒಕ್ಕೂಟಗಳಿಗೂ ಪ್ರತಿಷ್ಠೆಯ ಕಣ

ಮಲಬಾರ್ ಕೇರಳ 2 ಒಕ್ಕೂಟಗಳಿಗೂ ಪ್ರತಿಷ್ಠೆಯ ಕಣ

8 ಗ್ರಾಮ ಪಂಚಾಯತ್‌ಗಳನ್ನೊಳಗೊಂಡ ಧರ್ಮಾಡಂ ವಿಧಾನಸಭಾ ಕ್ಷೇತ್ರದಲ್ಲಿ 2016ರ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಅವರು ಸುಮಾರು 37,೦೦೦ ಅಂತರದಲ್ಲಿ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದಿವಾಕರನ್ ಅವರನ್ನು ಸೋಲಿಸಿದರು, ಆ ಮೂಲಕ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಆಗ ಬಿಜೆಪಿಗೆ ಅಲ್ಲಿ ಒಟ್ಟು 12,000 ಮತಗಳಷ್ಟೇ ಬಂದಿದ್ದವು.

Young Fish Farmer: ಮತ್ಸ್ಯ ಕೃಷಿ ಯುವಕನಿಗೆ ಮೋದಿ ಪ್ರಶಂಸೆ

Young Fish Farmer: ಮತ್ಸ್ಯ ಕೃಷಿ ಯುವಕನಿಗೆ ಮೋದಿ ಪ್ರಶಂಸೆ

ಬಿಎ ಪದವಿ ಮುಗಿಸಿರುವ ರಾಜು ಹುದ್ದಾರ, ಮೊದಲಿಗೆ ಆರ್ಮಿ ಸೇರುವ ಉತ್ಸಾಹ ದಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಹೈನುಗಾರಿಕೆ ಉದ್ಯಮಕ್ಕೆ ಕೈ ಹಾಕುವ ಯೋಚನೆ ಯನ್ನು ಕೈ ಬಿಟ್ಟರು. ಮುಂದೆ ಮೀನು ಕೃಷಿ ಕುರಿತು ಆಸಕ್ತಿ ಬೆಳೆಸಿಕೊಂಡು ಅತ್ಯಾಧುನಿಕ ಪದ್ಧತಿಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನ ಬಳಸಿ ಕುಚ್ಚು ಮೀನು ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ.

Land Record Digitization: ಭೂ ದಾಖಲೆ ಡಿಜಿಟಲೀಕರಣ: ರಾಜ್ಯಕ್ಕೆ ಕಲಬುರಗಿ ಮಾದರಿ

ಭೂ ದಾಖಲೆ ಡಿಜಿಟಲೀಕರಣ: ರಾಜ್ಯಕ್ಕೆ ಕಲಬುರಗಿ ಮಾದರಿ

ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸೇರಿ ಒಟ್ಟು 1,38,81,963 ಪುಟಗಳನ್ನು ಡಿಜಿಟಲೀ ಕರಿಸುವ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆ ಗಿಂತಲೂ ಹೆಚ್ಚಿನ ಅಂದರೆ 1,39,41,869 ಪುಟಗಳನ್ನು ಸ್ಕ್ಯಾನ್ ಮಾಡಿ ಸಾಫ್ಟ್‌ʼವೇರ್‌ಗೆ ಅಪ್‌ಲೋಡ್ ಮಾಡಲಾಗಿದೆ. ಈ ಮೂಲಕ ಶೇ.100.40 ರಷ್ಟು ಪ್ರಗತಿ ಸಾಧಿಸಲಾಗಿದೆ.

ಮೊಟ್ಟೆಗೂ ತಟ್ಟಿದ ಯುದ್ಧದ ಬಿಸಿ

ಮೊಟ್ಟೆಗೂ ತಟ್ಟಿದ ಯುದ್ಧದ ಬಿಸಿ

ಪ್ರತಿ ದಿನ 3 ಸಾವಿರಕ್ಕೂ ಹೆಚ್ಚಿನ ಮೊಟ್ಟೆ ಸಂಗ್ರಹವಾಗುತ್ತದೆ. ಬೇಸಿಗೆ ಸಮಯದಲ್ಲಿ ಮೊಟ್ಟೆ ಉತ್ಪಾದನೆ ಸಹಜವಾಗಿ ಕುಸಿಯುತ್ತದೆ. ಈ ಸಮಯಲ್ಲಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗಬೇಕು. ಆದರೆ, ಶಾಲೆಗಳಲ್ಲಿ ಪರೀಕ್ಷೆ ಆರಂಭವಾಗಿದ್ದು, ಪ್ರತಿ ನಿತ್ಯ ಮೊಟ್ಟೆ ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

Kasargod Kannadigas: ಕಾಸರಗೋಡಿನ ಕನ್ನಡಿಗರು ಬರೀ ವೋಟ್ ಬ್ಯಾಂಕ್

Kasargod Kannadigas: ಕಾಸರಗೋಡಿನ ಕನ್ನಡಿಗರು ಬರೀ ವೋಟ್ ಬ್ಯಾಂಕ್

ಚಂದ್ರಗಿರಿ ನದಿಯ ಉತ್ತರ ಭಾಗ ಕನ್ನಡಿಗರ ಪ್ರಾಬಲ್ಯ ಪ್ರದೇಶವಾಗಿದ್ದರೂ ಅವರ ಒಗ್ಗಟ್ಟನ್ನು ತಮ್ಮ ಪಕ್ಷದ ಸಿದ್ಧಾಂತಕ್ಕನುಗುಣವಾಗಿ ಮುರಿಯುವುದು ಬಹಳ ಸುಲಭ ಎಂದು ಕೇರಳದ ಮೂರು ಪಕ್ಷಗಳೂ ಸುಲಭವಾಗಿ ಅರಿತಿರುವುದೇ ಕಾಸರಗೋಡಿನಲ್ಲಿ ಕನ್ನಡ ಅವಗಣನೆಗೆ ಬಹುಮುಖ್ಯ ಕಾರಣ. ಹಾಗಾಗಿ ಚುನಾವಣೆ ಬಂದಾಗಲೂ ಕೂಡಾ ಕಾಸರಗೋಡು ಕನ್ನಡಿಗರ ಪರಿಸ್ಥಿತಿ ಆಟಕ್ಕುಂಟು, ಭಾಷಾಭಿವೃದ್ಧಿಯ ವಿಷಯದಲ್ಲಿ ಲೆಕ್ಕಕ್ಕಿಲ್ಲ ಎಂಬಂತಾಗಿರುವುದಾಗಿದೆ.

Kannadiga majority voters in Manjeshwara: ಮಂಜೇಶ್ವರದಲ್ಲಿ ಕನ್ನಡಿಗರೇ ಬಹುಸಂಖ್ಯಾತ ಮತದಾರರು

ಮಂಜೇಶ್ವರದಲ್ಲಿ ಕನ್ನಡಿಗರೇ ಬಹುಸಂಖ್ಯಾತ ಮತದಾರರು

ಮಂಜೇಶ್ವರ ತಾಲೂಕಿಗೆ ಒಳಪಟ್ಟ ಎಣ್ಮಕಜೆ, ಕುಂಬಳೆ, ಮಂಗಲ್ಪಾಡಿ (ಉಪ್ಪಳ) ಮಂಜೇಶ್ವರ, ಮೀಂಜಾ, ಪೈವಳಿಕೆ, ಪುತ್ತಿಗೆ, ವರ್ಕಾಡಿ ಗ್ರಾಮ ಪಂಚಾಯತ್‌ಗಳು ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೊಳಪಡುತ್ತದೆ. ಕನ್ನಡ, ಹವ್ಯಕ, ತುಳು, ಕೊಂಕಣಿ ಮಲಯಾಳಂ, ಬ್ಯಾರಿ ಮತ್ತು ಮರಾಠಿ ಮಾತೃಭಾಷೆಯವರು ಇಲ್ಲಿ ವಾಸಿಸುತ್ತಿದ್ದರೂ ಆ ಪೈಕಿ ಶೇ.80 ಮಂದಿ ಕನ್ನಡ ಮಾಧ್ಯಮದಲ್ಲಿ ಕಲಿತವರು.

Election in Kerala: 'ದೇವರ ನಾಡಿ’ನಲ್ಲೀಗ ರಂಗೇರಿರುವ ಚುನಾವಣಾ ಕಾವು

'ದೇವರ ನಾಡಿ’ನಲ್ಲೀಗ ರಂಗೇರಿರುವ ಚುನಾವಣಾ ಕಾವು

ಕೇರಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಯೇರಲು ಬೇಕಿರುವ ಒಟ್ಟು ಸ್ಥಾನಗಳ ಸಂಖ್ಯೆ 71. ಕಳೆದ ನಾಲ್ಕು ದಶಕಗಳಲ್ಲಿ ಎರಡೂ ಒಕ್ಕೂಟಗಳು ಪಯಾರ್ಯವಾಗಿ ಅಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದುದೇ ವಿಶೇಷ ವಾಗಿತ್ತು. ಒಂದು ಸಲ ಒಂದು ಒಕ್ಕೂಟ ಅಧಿಕಾರಕ್ಕೇರಿದರೆ, ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷ ಬಹುಮತ ಪಡೆಯುತ್ತಿತ್ತು.

ನಷ್ಟದಲ್ಲಿಯೇ ದಿನದೂಡುತ್ತಿರುವ ಹಲವು ನಿಗಮಗಳು

ನಷ್ಟದಲ್ಲಿಯೇ ದಿನದೂಡುತ್ತಿರುವ ಹಲವು ನಿಗಮಗಳು

ವಿದ್ಯುತ್, ಸಾರಿಗೆ, ನೀರಾವರಿ ಇಲಾಖೆಯ ಹೊರತಾಗಿ ವಿವಿಧ ಸಮುದಾಯ, ವಿವಿಧ ಉದ್ದೇಶ ಗಳಿಗೆ ಒಟ್ಟು 128 ಸರಕಾರಿ ಉದ್ದಿಮೆಗಳನ್ನು ಸ್ಥಾಪಿಸಿರುವುದಾಗಿ ಹೇಳಲಾಗಿದ್ದು, ಇವುಗಳ ಪೈಕಿ ಒಟ್ಟು 24 ಉದ್ದಿಮೆಗಳು ನಷ್ಟದ ಸುಳಿಯಲ್ಲಿವೆ. ಈ 24 ಸರಕಾರಿ ಉದ್ದಿಮೆಗಳ ಪೈಕಿ ಸಾರಿಗೆ ಸಂಸ್ಥೆಗೆ ಸೇರಿರುವ ನಾಲ್ಕು, ಇಂಧನ ಇಲಾಖೆಯ ಐದಾರು ಎಸ್ಕಾಂಗಳ ನಷ್ಟ ಬಹುಪಾಲು ಹೊಂದಿದೆ.

ಕಲಬುರಗಿಯಲ್ಲಿ ʼಜಲಕ್ಷಾಮʼ

ಕಲಬುರಗಿಯಲ್ಲಿ ʼಜಲಕ್ಷಾಮʼ

ಆಳಂದ ತಾಲೂಕಿನ ಕವಲಗಾ ಗ್ರಾಮದ ಜನ ಹನಿ ನೀರಿಗೆ ಪರಿತಪಿಸುವ ಸ್ಥಿತಿ ನಿರ್ಮಾಣ ಆಗಿದೆ. ಇಲ್ಲಿನ ಮಹಿಳೆಯರು ಹಗಲು ರಾತ್ರಿಯನ್ನೂ ಲೆಕ್ಕಿಸದೇ ನಲ್ಲಿ ನೀರು ಹಿಡಿಯಲು ಕಾಯುವುದು ಸಾಮಾನ್ಯವಾಗಿದೆ. ಗ್ರಾಮದ ಸಾರ್ವಜನಿಕ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದ್ದು, ನಲ್ಲಿ ನೀರಿನ ಮೇಲೆ ಸಂಪೂರ್ಣ ಅವಲಂಬನೆ ಆಗಿದ್ದಾರೆ.

ಅಹೋರಾತ್ರಿ ನಾಟಕಕ್ಕೆ ಸಿಗದ ಕಲಾವಿದರು?

ಅಹೋರಾತ್ರಿ ನಾಟಕಕ್ಕೆ ಸಿಗದ ಕಲಾವಿದರು?

ವಚನ ಕಲ್ಯಾಣಕ್ಕೆ ಒಟ್ಟು 75 ಕಲಾವಿದರನ್ನು ಆಯ್ಕೆ ಮಾಡುವ ಗುರಿ ಹೊಂದಿದ್ದರೂ, ಅರ್ಜಿ ಯನ್ನು ಕೇವಲ ಕೇವಲ 58 ಮಂದಿ ಮಾತ್ರ ಸಲ್ಲಿಸಿದ್ದಾರೆ. ನಿಗದಿತ ದಿನಾಂಕ ಮುಗಿದರೂ ಅಗತ್ಯ ವಿರುವಷ್ಟು ಕಲಾವಿದರಿಂದ ಅರ್ಜಿ ಬಾರದಿರುವುದರಿಂದ ಇದೀಗ ಅರ್ಜಿ ಅವಧಿಯನ್ನು ವಿಸ್ತರಿಸಲು ಇಲಾಖೆ ಮುಂದಾಗಿದೆ.

Davanagere Byelection: ಟಿಕೆಟ್ ಹಂಚಿಕೆ ಹಿಂದೆ ಸ್ವಯಂ ಲಾಭಗಳ ತಂತ್ರ

ಟಿಕೆಟ್ ಹಂಚಿಕೆ ಹಿಂದೆ ಸ್ವಯಂ ಲಾಭಗಳ ತಂತ್ರ

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ‘ಬಿ’ ಫಾರಂ ಸಿಗುವ ಮುನ್ನವೇ ನಾಮಪತ್ರ ಸಲ್ಲಿಸಿ ಪಕ್ಷದ ನಾಯಕರನ್ನು ಒಂದು ರೀತಿಯಲ್ಲಿ ಬಲೆಗೆ ಸಿಲುಕಿಸಿಕೊಂಡಂತೆ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಪಕ್ಷದ ಹಿರಿಯ ನಾಯಕರೊಬ್ಬರ ಸಲಹೆ ಯೂ ಇತ್ತು ಎನ್ನಲಾಗಿದೆ.

ಮೈಸೂರು ಜಿಲ್ಲೆ ಜಾನುವಾರುಗಳಿಗೆ ಮೇವು, ನೀರಿಗೆ ಬರ ಇಲ್ಲ

ಮೈಸೂರು ಜಿಲ್ಲೆ ಜಾನುವಾರುಗಳಿಗೆ ಮೇವು, ನೀರಿಗೆ ಬರ ಇಲ್ಲ

ಪ್ರಸ್ತುತ ಜಿಲ್ಲೆಯಲ್ಲಿ 34 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ ಎಂದು ಪಶುಪಾ ಲನಾ ಇಲಾಖೆ ಮಾಹಿತಿ ನೀಡಿದೆ. ಒಂದು ವೇಳೆ ಮುಂಗಾರು ಮಳೆ ಸಕಾಲದಲ್ಲಿ ಬಾರದೆ ಪರಿಸ್ಥಿತಿ ಕೈ ಮೇರಿ ಹೋದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.

Zero development, Bogus bills: ಅಭಿವೃದ್ಧಿ ಶೂನ್ಯ, ಬೋಗಸ್ ಬಿಲ್‌ಗಳದ್ದೇ ಹವಾ

ಅಭಿವೃದ್ಧಿ ಶೂನ್ಯ, ಬೋಗಸ್ ಬಿಲ್‌ಗಳದ್ದೇ ಹವಾ

ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲೆ ಸೀಮಿತ ವಾಗಿದ್ದು, ಯಾವುದೇ ಕೆಲಸ ಮಾಡದೆಯೇ ನೂರಕ್ಕೆ ನೂರರಷ್ಟು ಹಣ ಪಾವತಿ ಮಾಡಿ ಕೊಳ್ಳುವ ಮೂಲಕ ಕೋಟ್ಯಂತರ ರು. ಸಾರ್ವಜನಿಕ ಹಣ ದುರ್ಬಳಕೆಯಾಗುತ್ತಿದೆ. ಸರಕಾರಿ ಅನುದಾನದ ದುರ್ಬಳಕೆ ಮಿತಿ ಮೀರಿದ್ದು, ಪಂಚಾಯತ್ ರಾಜ್ ಇಲಾಖೆಯಿಂದ ಹಿಡಿದು ಶಿಕ್ಷಣ ಮತ್ತು ವಸತಿ ನಿಲಯಗಳವರೆಗೆ ಭ್ರಷ್ಟಾಚಾರದ ಜಾಲ ವ್ಯಾಪಿಸಿದೆ.

Water Crisis: 411 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ

411 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ

ಉತ್ತರಕನ್ನಡ ಜಿಲ್ಲೆ ಶೇ. 80ರಷ್ಟು ಅರಣ್ಯ ಪ್ರದೇಶ ಹೊಂದಿದ್ದು, ಜಿಲ್ಲೆಯ ಹಲವು ತಾಲೂಕು ಗಳಲ್ಲಿ ಬೇಸಿಗೆಯ ಆರಂಭದಲ್ಲೇ ನೀರಿನ ಅಭಾವ ತಲೆದೋರುತ್ತಿದೆ. ಜಿಲ್ಲೆಯ ಸುಮಾರು 411 ಹಳ್ಳಿಗಳು ಕುಡಿಯುವ ನೀರಿನ ತುಟಾಗ್ರತೆ ಎದುರಿಸುವ ಸಾಧ್ಯತೆಯಿದೆ ಎಂದು ಗುರುತಿಸಲಾಗಿದೆ.

Ramadan: ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ

ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ

ಹಗಲಿನಲ್ಲಿ ಸಾಕಷ್ಟು ಬಿಸಿಲಿರುವ ಕಾರಣ ಸಂಜೆ ಮಗರಿಬ್ ಪ್ರಾರ್ಥನೆ ಮುಗಿಸಿ ಉಪವಾಸ (ರೋಜಾ) ಅಂತ್ಯಗೊಳಿಸಿದ ನಂತರ ಮುಸ್ಲಿಂ ಬಾಂಧವರು ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸಿ, ಖರೀದಿಯಲ್ಲಿ ತೊಡಗುತ್ತಿದ್ದಾರೆ. ಗಾಂಧಿ ಚೌಕ್, ಕೆ.ಸಿ ಮಾರ್ಕೆಟ್ ಗಳಲ್ಲಿ ರಂಜಾನ್ ಶಾಪಿಂಗ್ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ.

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತಾಲೂಕು ಆಸ್ಪತ್ರೆ

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತಾಲೂಕು ಆಸ್ಪತ್ರೆ

ರಾಮದುರ್ಗ ತಾಲೂಕು ವೈದ್ಯಾಧಿಕಾರಿ ಡಾ.ನವೀನ ಕಾಶಿನಾಥ ನಿಜಗುಲಿ ಅವರು ಶಾಸಕ ಅಶೋಕ ಪಟ್ಟಣ ಅವರ ಮಾರ್ಗದರ್ಶನಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳು. ಸಿಬ್ಬಂದಿಗಳ ಸಹಕಾರದೊಂದಿಗೆ ಬಡ ರೋಗಿಗಳಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ.

ದಾವಣಗೆರೆ ದಕ್ಷಿಣಾಧಿಪತಿ ಸ್ಥಾನಕ್ಕೆ ಭಾರೀ ಪೈಪೋಟಿ

ದಾವಣಗೆರೆ ದಕ್ಷಿಣಾಧಿಪತಿ ಸ್ಥಾನಕ್ಕೆ ಭಾರೀ ಪೈಪೋಟಿ

ಮನೆಯೊಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿ ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಕಗ್ಗಂಟು ಬಗೆಹರಿದಂತಿಲ್ಲ. ಪ್ರಸ್ತುತ ಚುನಾವಣೆ ರಾಜಕೀಯ ಮುಖಂಡ ರಿಗೆ ಅಸ್ತಿತ್ವದ ಪ್ರಶ್ನೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಎಸ್‌ಎಸ್ ಕುಟುಂಬ ಅನುಕಂಪದ ಆಧಾರ, ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಚುನಾವಣೆ ಬಯಸಿದೆ.

Loading...