ಕೆ.ಆರ್. ಪುರಂನ ಗೋಡೆಗಳ ಮೇಲೆ ಸಮುದಾಯ ಸಹಭಾಗಿತ್ವದ ಭಿತ್ತಿಚಿತ್ರದ ಚಿತ್ತಾರ
ಕೆ. ಆರ್. ಪುರಂನಲ್ಲಿರುವ 'ಡ್ರೀಮ್ ಎ ಡ್ರೀಮ್' ಕೇಂದ್ರದ 27 ಯುವಜನರೊಂದಿಗೆ ನಡೆಸಿದ ಕಲಾ ಕಾರ್ಯಾಗಾರಗಳ ಮೂಲಕ ಈ ಭಿತ್ತಿಚಿತ್ರಕ್ಕೆ ಜೀವ ತುಂಬಲಾಗಿದೆ. ಈ ಕಾರ್ಯಾಗಾರಗಳು ಕಲೆಯ ಮೂಲಕ ಯುವ ಜನರ ಆತ್ಮ-ಅಭಿವ್ಯಕ್ತಿ, ಗುರುತು, ಕನಸುಗಳು ಮತ್ತು ಯಶಸ್ಸಿನಂತಹ ಆಳವಾದ ಅಂಶಗಳನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಟ್ಟಿವೆ.

-

ಬೆಂಗಳೂರು: ಭಾರತದಲ್ಲಿ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ತರಲು ಶ್ರಮಿಸುತ್ತಿರುವ 'ಡ್ರೀಮ್ ಎ ಡ್ರೀಮ್' ಸಂಸ್ಥೆಯು, 'ಅರಾವನಿ ಆರ್ಟ್ ಪ್ರಾಜೆಕ್ಟ್' (ತೃತೀಯ ಲಿಂಗಿಗಳು ಮತ್ತು ಮಹಿಳೆಯರ ನೇತೃತ್ವದ ಕಲಾ ಸಮೂಹ) ಸಹಯೋಗದೊಂದಿಗೆ, ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ಸಾರ್ವಜನಿಕ ಭಿತ್ತಿಚಿತ್ರವೊಂದನ್ನು ಅನಾವರಣಗೊಳಿಸಿದೆ.
ಬಸವನಪುರ ಮುಖ್ಯರಸ್ತೆಯಲ್ಲಿ ಅನಾವರಣಗೊಂಡಿರುವ ಈ ಕಲಾಕೃತಿಯು, 'ಯಶಸ್ಸನ್ನು ಮರು ವ್ಯಾಖ್ಯಾನಿಸುವುದು' (Redefining Success) ಎಂಬ ಅಭಿಯಾನದ ಭಾಗವಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಯುವಜನರಿಗೆ 'ಯಶಸ್ಸು' ಎಂದರೆ ಏನು ಎಂಬುದನ್ನು ಅರಿಯಲು ನೆರವಾಗು ತ್ತದೆ. ಸಮಾಜದಲ್ಲಿ ಬೇರೂರಿರುವ 'ಯಶಸ್ಸು' ಮತ್ತು 'ವೈಫಲ್ಯ' ಎಂಬ ಸಾಂಪ್ರದಾಯಿಕ ಕಥನ ಗಳನ್ನು ಪ್ರಶ್ನಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.
ಕೆ. ಆರ್. ಪುರಂನಲ್ಲಿರುವ 'ಡ್ರೀಮ್ ಎ ಡ್ರೀಮ್' ಕೇಂದ್ರದ 27 ಯುವಜನರೊಂದಿಗೆ ನಡೆಸಿದ ಕಲಾ ಕಾರ್ಯಾಗಾರಗಳ ಮೂಲಕ ಈ ಭಿತ್ತಿಚಿತ್ರಕ್ಕೆ ಜೀವ ತುಂಬಲಾಗಿದೆ. ಈ ಕಾರ್ಯಾಗಾರಗಳು ಕಲೆಯ ಮೂಲಕ ಯುವ ಜನರ ಆತ್ಮ-ಅಭಿವ್ಯಕ್ತಿ, ಗುರುತು, ಕನಸುಗಳು ಮತ್ತು ಯಶಸ್ಸಿನಂತಹ ಆಳವಾದ ಅಂಶಗಳನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಟ್ಟಿವೆ.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಏಕಪೋಷಕ ಕುಟುಂಬದ ಹಿನ್ನೆಲೆಯುಳ್ಳ ಬಿಕಾಂ ವಿದ್ಯಾರ್ಥಿ ಮನೋಜ್ ಎಂ. ಮಾತನಾಡಿ, "ಗುರಿಗಳು ಸದಾ ಬದಲಾಗುತ್ತಲೇ ಇರುತ್ತವೆ. ಹೀಗಾಗಿ, ಅವುಗಳನ್ನು ಸಾಧಿಸುವುದು ಮಾತ್ರ ಯಶಸ್ಸಲ್ಲ. ನನಗೆ ನಿಜವಾದ ಯಶಸ್ಸು ಎಂದರೆ ಮನಸ್ಸಿನ ಶಾಂತಿ ಮತ್ತು ಆತ್ಮದ ಸಂತೃಪ್ತಿ. ನಿನ್ನೆಯ ಸವಾಲುಗಳನ್ನು ಮೆಟ್ಟಿ ನಿಂತು ಇಂದನ್ನು ಎದುರಿಸುವುದೇ ನಿಜವಾದ ಯಶಸ್ಸು" ಎಂದು ಅಭಿಪ್ರಾಯಪಟ್ಟರು.
ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಬಿ.ಟೆಕ್ ವಿದ್ಯಾರ್ಥಿನಿ ಪ್ರತ್ಯೂಷಾ ಎಸ್. ಕೆ. ಮಾತನಾಡಿ, "ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಆಹಾರ ಲಭ್ಯವಾಗುವಂತೆ ಮಾಡುವುದು ಮತ್ತು ಆ ಸಂತೋಷದ ಭಾವನೆಯನ್ನು ಅನುಭವಿಸುವುದೇ ನಿಜವಾದ ಯಶಸ್ಸು" ಎಂದು ಅಭಿಪ್ರಾಯ ಪಟ್ಟರು. 'ಅರಾವನಿ ಆರ್ಟ್ ಪ್ರಾಜೆಕ್ಟ್'ನ ಟ್ರಾನ್ಸ್-ಮಹಿಳಾ ಕಲಾವಿದರೊಂದಿಗಿನ ಸಂವಾದವು, ತೃತೀಯ ಲಿಂಗಿಗಳ ಬದುಕಿನ ಅನುಭವಗಳ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ನೀಡಿದ್ದು, ಅವರಲ್ಲಿ ಆಳವಾದ ಸಹಾನುಭೂತಿಯನ್ನು ಬೆಳೆಸಿದೆ ಎಂದು ತಿಳಿಸಿದರು.

'ಅರಾವನಿ ಆರ್ಟ್ ಪ್ರಾಜೆಕ್ಟ್'ನ ಕಲಾವಿದೆ ಶಾಂತಿ ಮಾತನಾಡಿ, "ಈ ಯುವಜನರು ತಮ್ಮ ಯಶಸ್ಸಿನ ಕಲ್ಪನೆಗೆ ತಾವೇ ಬಣ್ಣ ಬಳಿಯುವುದನ್ನು ನೋಡಿದಾಗ, ಆ ಹೆಮ್ಮೆಯ ಕ್ಷಣಗಳು ಅಮೋಘ ಎನಿಸಿತು. ಈ ಭಿತ್ತಿಚಿತ್ರವು ನಮ್ಮ ಅತ್ಯಂತ ಮೆಚ್ಚಿನ ಕೃತಿಗಳಲ್ಲಿ ಒಂದಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
2023-2025ರ ಅವಧಿಯಲ್ಲಿ, 14ರಿಂದ 65 ವರ್ಷ ವಯಸ್ಸಿನ 325ಕ್ಕೂ ಹೆಚ್ಚು ಜನರೊಂದಿಗಿನ ಸಂವಾದದ ಆಧಾರದ ಮೇಲೆ ಈ ಅಭಿಯಾನವು ರೂಪುಗೊಂಡಿದೆ. ಈ ಸಂವಾದಗಳ ಮೂಲಕ, 'ಡ್ರೀಮ್ ಎ ಡ್ರೀಮ್' ಸಂಸ್ಥೆಯು, ಯಶಸ್ಸು ಎಂಬುದು ಸಾರ್ವತ್ರಿಕ ಪರಿಕಲ್ಪನೆಯಾಗದೆ, ಅದು ಆಳವಾದ ವೈಯಕ್ತಿಕ ಮತ್ತು ಸಾಂದರ್ಭಿಕ ಅನುಭವ ಎಂಬ ಮಹತ್ವದ ಒಳನೋಟವನ್ನು ಪಡೆದುಕೊಂಡಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಶಿಕ್ಷಣ ವ್ಯವಸ್ಥೆಯು ಯಶಸ್ಸನ್ನು ಕೇವಲ ಶೈಕ್ಷಣಿಕ ಸಾಧನೆ ಮತ್ತು ಭೌತಿಕ ಸಂಪತ್ತಿನ ಸಂಕುಚಿತ ವ್ಯಾಖ್ಯಾನದಲ್ಲಿ ಬಂಧಿಸುತ್ತಿದೆ. ಈ ಏಕಮುಖ ದೃಷ್ಟಿಕೋನವು, ವ್ಯವಸ್ಥಿತವಾಗಿ ಅನೇಕ ಯುವಜನರನ್ನು, ವಿಶೇಷವಾಗಿ ಸಂಕಷ್ಟ ದಲ್ಲಿರುವವರನ್ನು ಮುಖ್ಯವಾಹಿನಿಯಿಂದ ದೂರ ತಳ್ಳುತ್ತಿದೆ.
'ಡ್ರೀಮ್ ಎ ಡ್ರೀಮ್' ಸಂಸ್ಥೆಯ ಸಿಇಒ ಸುಚೇತಾ ಭಟ್ ಮಾತನಾಡಿ, "ಈ ಅಭಿಯಾನದ ಮೂಲಕ, ಯುವಜನರು ತಮ್ಮ ಸಂದರ್ಭದಲ್ಲಿ ಯಶಸ್ಸಿನ ಅರ್ಥವನ್ನು ಪ್ರತಿಬಿಂಬಿಸಲು ಅವಕಾಶ ಸೃಷ್ಟಿಸು ವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ವೈವಿಧ್ಯಮಯ ಮಾರ್ಗಗಳು ಮತ್ತು ಹೋರಾಟಗಳನ್ನು ಗುರುತಿಸುವ, ಹೆಚ್ಚು ಸೂಕ್ಷ್ಮವಾದ, ಸಹಾನುಭೂತಿಯುಳ್ಳ ತಿಳುವಳಿಕೆಯನ್ನು ಪ್ರೇರೇಪಿಸಲು ನಾವು ಬಯಸಿದ್ದೇವೆ. ಕೆ. ಆರ್. ಪುರಂನ ಐದು ಗೋಡೆಗಳ ಭಿತ್ತಿಚಿತ್ರವು ಈ ಸಾಮೂಹಿಕ ಒಳನೋಟಗಳ ಒಂದು ರೋಮಾಂಚಕ ಅಭಿವ್ಯಕ್ತಿಯಾಗಿದೆ. ಸೃಜನಾತ್ಮಕ ಮತ್ತು ಪ್ರತಿಫಲಿತ ಪ್ರಕ್ರಿಯೆಗಳ ಮೂಲಕ, ಇತರ ಸಮುದಾಯಗಳು ಮತ್ತು ಸಂಸ್ಥೆಗಳು 'ಯಶಸ್ಸನ್ನು ಮರು ವ್ಯಾಖ್ಯಾನಿಸುವ' ಈ ವಿಧಾನವನ್ನು ಅಳವಡಿಸಿಕೊಳ್ಳಲಿವೆ ಎಂದು ನಾವು ಆಶಿಸುತ್ತೇವೆ" ಎಂದು ತಿಳಿಸಿದರು.
''ಅರಾವನಿ ಆರ್ಟ್ ಪ್ರಾಜೆಕ್ಟ್'ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಪೂರ್ಣಿಮಾ ಸುಕುಮಾರ್ ಮಾತ ನಾಡಿ, "ಈ ಭಿತ್ತಿಚಿತ್ರವು ಒಂದು ರೋಮಾಂಚಕ 'ಕನಸಿನ ಲೋಕ'ವಾಗಿದ್ದು, ಇದು ಯುವಜನರ ವೈಯಕ್ತಿಕ ಪಯಣದ ಪ್ರತಿಬಿಂಬವಾಗಿದೆ. ಸಂಪೂರ್ಣ ಸಹಯೋಗದೊಂದಿಗೆ ನಡೆದ ಈ ವಿನ್ಯಾಸ ಪ್ರಕ್ರಿಯೆಯಲ್ಲಿ, ಯುವಜನರೇ ವಿಷಯ, ಬಣ್ಣ, ಮತ್ತು ಚಿತ್ರಣಗಳನ್ನು ರೂಪಿಸಿದರೆ, ನಮ್ಮ ತಂಡವು ಕೇವಲ ಕಲಾತ್ಮಕ ನಿರ್ವಹಣೆಯನ್ನು ಸುಗಮಗೊಳಿಸಿದೆ" ಎಂದು ತಿಳಿಸಿದರು.