H S Venkateshmurthy: ಸಾಹಿತಿ ವೆಂಕಟೇಶಮೂರ್ತಿ ಅವರಿಗೆ ಕಸಾಪ ಶ್ರದ್ಧಾಂಜಲಿ
ಗೀತೆಗಳು ಕನ್ನಡಿಗರನ್ನು ಸಂತಸದ ಕಡಲಿನಲ್ಲಿ ತೇಲಿಸುತ್ತಿದ್ದವು. ಅವರು ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ನಾಡಿನಲ್ಲಿ ತಮ್ಮ ಗೀತೆಗಳ ಮೂಲಕವೇ ಖ್ಯಾತಿ ಹೊಂದಿದ್ದು, ಸರಳತೆಯನ್ನು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದ ಸಾಹಿತಿಯಾಗಿದ್ದರು. ಇವರು ಬರೆದ ಬಹುತೇಕ ಗೀತೆಗಳು ಹೃದಯಕ್ಕೆ ತಟ್ಟುತ್ತಿದ್ದವು

ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಸಾಹಿತಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರಿಗೆ ಶ್ರದ್ದಾಂಜಲಿ ಅರ್ಪಣೆ ಮಾಡಿದರು.

ಚಿಕ್ಕಬಳ್ಳಾಪುರ : ನಗರದ ನಂದಿ ರಂಗಮಂದಿರದ ಕಸಾಪ ಕಚೇರಿಯಲ್ಲಿ ಭಾವಗೀತೆಗಳ ಸರದಾರ ಎಚ್.ಎಸ್.ವೆಂಕಟೇಶ್ಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಎಚ್ಎಸ್ವಿ ನಿಧನದಿಂದ ಸಾಹಿತ್ಯ ಲೋಕಕ್ಕೆ ಅಪಾರವಾದ ನಷ್ಟ ಉಂಟಾಗಿದೆ. ಇವರು ಭಾವಗೀತೆಗಳ ಸರದಾರ ರಾಗಿದ್ದು ಇವರ ಅಗಲಿಕೆಯು ಕನ್ನಡ ನಾಡಿನ ಜನತೆಗೆ ಹೃದಯ ಭಾರವಾಗಿಸಿದೆ. ಇವರ ಗೀತೆ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವ ದಿನಗಳನ್ನು ನೆನಪಿಸಿಕೊಂಡರು.
ಇದನ್ನೂ ಓದಿ: HS Venkateshmurthy Passed Away: ಜನಮನ ಕದ್ದ ಎಚ್ಎಸ್ ವೆಂಕಟೇಶಮೂರ್ತಿಯವರ ಹೃದಯಂಗಮ ಹಾಡುಗಳು
ಅವರ ಗೀತೆಗಳು ಕನ್ನಡಿಗರನ್ನು ಸಂತಸದ ಕಡಲಿನಲ್ಲಿ ತೇಲಿಸುತ್ತಿದ್ದವು. ಅವರು ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ನಾಡಿನಲ್ಲಿ ತಮ್ಮ ಗೀತೆಗಳ ಮೂಲಕವೇ ಖ್ಯಾತಿ ಹೊಂದಿದ್ದು, ಸರಳತೆಯನ್ನು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದ ಸಾಹಿತಿಯಾಗಿದ್ದರು. ಇವರು ಬರೆದ ಬಹುತೇಕ ಗೀತೆಗಳು ಹೃದಯಕ್ಕೆ ತಟ್ಟುತ್ತಿದ್ದವು ಎಂದರು.
ಎ.ಆರ್.ಶಶಿಕಲಾ ಅವರು ಎಚ್.ಎಸ್.ವೆಂಕಟೇಶ್ ಮೂರ್ತಿ ಅವರ ಭಾವಗೀತೆಗಳನ್ನು ಹಾಡಿದರು.
ಸಾಹಿತಿ ಬಿ.ಎಂ.ಪ್ರಮೀಳ, ಕೆ.ಎಂ.ರೆಡ್ಡಪ್ಪ, ಡಿ.ಎಂ.ಶ್ರೀರಾಮ, ನರಸಿಂಹರೆಡ್ಡಿ, ರವಿಕುಮಾರ್, ಮುನಿಕೃಷ್ಣಪ್ಪ, ವಿಜಯಕುಮಾರ್, ವಹಿದಾ, ಅಣ್ಣಮ್ಮ ಇದ್ದರು.