Internationa Yoga Day: ತ್ರಿಕರಣ ಸಮನ್ವಯವೇ ಯೋಗ : ಡಾ.ಎ ಆರ್ ರಘುಪತಿ
ಯೋಗ ಗುರು ಪತಂಜಲಿಯು ಸೂತ್ರಗಳ ಮೂಲಕ ನೀಡಿದ ಯೋಗವು ಭಾರತದ ಸಂಸ್ಕೃತಿಯ ಆರೋಗ್ಯ ಸಿದ್ಧಿಯ ನಿತ್ಯ ತಪವಾಗಿದೆ. ದಶಕದ ಹಿಂದೆ ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಭಾರತೀಯ ಮೂಲದ ಯೋಗವನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ದಿನಾಚರಣೆಯಾಗಿ ಘೋಷಿಸಿ ಕಾಯ ರೂಪಕ್ಕೆ ತಂದಿತ್ತು

ತ್ರಿಕರಣ ಸಮನ್ವಯವೇ ಯೋಗ ಎಂದು ಡಾ.ಎ.ಆರ್ ರಘುಪತಿ ಸತ್ಯಸಾಯಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಹೇಳಿದರು.

ಚಿಕ್ಕಬಳ್ಳಾಪುರ: ದೇಹ, ಮನಸ್ಸು ಮತ್ತು ಬುದ್ಧಿಗಳನ್ನು ಒಂದೇ ಕೇಂದ್ರದಲ್ಲಿ ಕೂಡಿಟ್ಟು ಸಮನ್ವಯಗೊಳಿಸುವ ಶಕ್ತಿಯೇ ಯೋಗ. ಇದು ಭಾರತೀಯರ ನಿತ್ಯ ಯಾಗ. ಈ ಕಾರ್ಯವನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಫಲ ಸಿದ್ಧಿಯ ರೂಪದಲ್ಲಿ ಸದೃಢವಾದ ಆರೋಗ್ಯ ದೊರೆಯುತ್ತದೆ ಎಂದು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾಕ್ಟರ್ ಎ ಆರ್ ರಘುಪತಿ ತಿಳಿಸಿದರು.
ಇದನ್ನೂ ಓದಿ: Chikkaballapur News: ಜ್ಞಾನಾಂಕುರ ಕಾರ್ಯಕ್ರಮ ಚುಂಚಶ್ರೀ ಚಾಲನೆ
ಅವರು ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಆಯೋಜನೆಯಾದ 11ನೇ ಜಾಗತಿಕ ಯೋಗ ದಿನಾಚರಣೆಯ ಸಂದರ್ಭದಲ್ಲಿ ಶ್ರೀ ಸಾಯಿ ಕೃಷ್ಣನ್ ಕ್ರೀಡಾಂಗಣದಲ್ಲಿ ಯೋಗಾಚರಣೆಗೆ ನೆರೆದಿದ್ದ ಜನಪಮೋಹವನ್ನು ಉದ್ದೇಶಿಸಿ ಮಾತನಾಡಿದರು.
ಯೋಗ ಗುರು ಪತಂಜಲಿಯು ಸೂತ್ರಗಳ ಮೂಲಕ ನೀಡಿದ ಯೋಗವು ಭಾರತದ ಸಂಸ್ಕೃತಿಯ ಆರೋಗ್ಯ ಸಿದ್ಧಿಯ ನಿತ್ಯ ತಪವಾಗಿದೆ. ದಶಕದ ಹಿಂದೆ ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಭಾರತೀಯ ಮೂಲದ ಯೋಗವನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ದಿನಾಚರಣೆಯಾಗಿ ಘೋಷಿಸಿ ಕಾಯ ರೂಪಕ್ಕೆ ತಂದಿತ್ತು. ಪ್ರತಿ ವರ್ಷವೂ ಈ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತಿದ್ದು ಸತ್ಯಸಾಯಿ ಗ್ರಾಮದಲ್ಲೂ ಬಹು ಸಡಗರದಿಂದ ಆಚರಿಸಲಾ ಯಿತು.
ಸತ್ಯಸಾಯಿ ಗ್ರಾಮದ ಹಿರಿಯ ಕಿರಿಯ ನಿವಾಸಿಗಳೊಂದಿಗೆ ಸಾವಿರಾರು ಮಂದಿ ಆಚರಣೆಯ ಭಾಗವಾಗಿ ಪಾಲ್ಗೊಂಡಿದ್ದರು.