ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ಆರ್.ಸಿ.ರಾಮಚಂದ್ರಪ್ಪ ವಿದ್ಯಾರ್ಥಿಗಳು ಜೂನ್ ೩೦ರೊಳಗೆ ಅರ್ಜಿ ಸಲ್ಲಿಸುವಂತೆ ಮನವಿ
ಶಿರಾ ತಾಲ್ಲೂಕು ಮಾತಂಗ ನೌಕರರ ಬಳಗದ ವತಿಯಿಂದ 2024-25ನೇ ಸಾಲಿನ ಎಸ್.ಎಸ್. ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತಲೂ ಹೆಚ್ಚು ಅಂಕ ಗಳನ್ನು ಪಡೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ

ಶಿರಾ ತಾಲ್ಲೂಕು ಮಾತಂಗ ನೌಕರರ ಬಳಗದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಆರ್.ಸಿ.ರಾಮಚಂದ್ರಪ್ಪ, ಮುಖ್ಯ ಶಿಕ್ಷಕ ರಾಮರಾಜ್, ಮಹದೇವಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಶಿರಾ: ಶಿರಾ ತಾಲ್ಲೂಕು ಮಾತಂಗ ನೌಕರರ ಬಳಗದ ವತಿಯಿಂದ 2024-25ನೇ ಸಾಲಿನ ಎಸ್.ಎಸ್. ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತಲೂ ಹೆಚ್ಚು ಅಂಕ ಗಳನ್ನು ಪಡೆದ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಆರ್.ಸಿ.ರಾಮಚಂದ್ರಪ್ಪ ತಿಳಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಾರ್ಯ ಕ್ರಮವು ಜುಲೈ 13 ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸ ಲಾಗಿದೆ. ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ವೈದ್ಯಕೀಯ ಪದವಿ ಪಡೆದಂತಹ ಸಮುದಾ ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಕೂಡ ಗೌರವ ಪುರಸ್ಕಾರ ಏರ್ಪಡಿಸಲಾಗಿದೆ. ಮಾದಿಗ ಸಮುದಾಯದ ಎಲ್ಲಾ ಮುಖಂಡರೂ ಪಕ್ಷಾತಿತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಇದನ್ನೂ ಓದಿ: Tumkur (Sira) News: ವಿಜ್ಞಾನ ಪ್ರದರ್ಶನವು ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮ
ಮುಖ್ಯ ಶಿಕ್ಷಕ ರಾಮರಾಜ್ ಮಾತನಾಡಿ, ಶಿರಾ ತಾಲೂಕು ಮಾತಂಗ ನೌಕರರ ಬಳಗದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರಕ್ಕೆ ೨೦೨೪-೨೫ ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೭೫ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಾದಿಗ (ಆದಿ ಕರ್ನಾಟಕ) ಸಮುದಾಯದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳನ್ನು ದೇವರಾಜ್ ದೀಕ್ಷಾ ಡಿಟಿಪಿ ಸೆಂಟರ್ ಶಿರಾ (ಸಾರ್ವಜನಿಕ ಗ್ರಂಥಾಲಯ ಮುಂಭಾಗ) ಮೊಬೈಲ್ ಸಂಖ್ಯೆ- ೯೭೩೧೦೪೭೪೮೮ ಇಲ್ಲಿಗೆ ಅಥವಾ ಜಯರಾಮ ಕೃಷ್ಣ (ನವೋದಯ) ಮೊಬೈಲ್ ಸಂಖ್ಯೆ - ೮೭೨೨೯೫೮೬೯೮ ಇವರಿಗೆ ಖುದ್ದಾಗಿ ತಲುಪಿಸಬಹುದು. ನೋಂದಾಯಿಸಲು ಜೂನ್ ೩೦ ಸಂಜೆ ೫ ಗಂಟೆಯವರೆಗೆ ಅವಕಾಶವಿದ್ದು, ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅದೇ ರೀತಿ, ೨೦೨೪ ರ ಜುಲೈ ತಿಂಗಳಿನಿಂದ ೨೦೨೫ ಜೂನ್ ೩೦ ನೇ ದಿನಾಂಕದೊಳಗೆ ವಯೋ ನಿವೃತ್ತಿ ಹೊಂದಿರುವ ವಿವಿಧ ಇಲಾಖೆಯಲ್ಲಿನ ನೌಕರರೂ ಕೂಡ ತಮ್ಮ ಮಾಹಿತಿಯನ್ನು ಮೇಲ್ಕಂಡ ವಿಳಾಸಕ್ಕೆ ತಲುಪಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರಾದ ಮಹದೇವಪ್ಪ, ನರಸಿಂಹಮೂರ್ತಿ, ಎಲ್.ಟಿ.ಗೌಡ, ಸುರೇಶ್, ಸಂಜೀವಪ್ಪ, ವಕೀಲರಾದ ಸಣ್ಣೀರಪ್ಪ, ನವೋದಯ ಯುವ ವೇದಿಕೆ ಅಧ್ಯಕ್ಷ ಜಯರಾಮಕೃಷ್ಣ, ಸಾಹಿತಿ ಸಕ್ಕರ ನಾಗರಾಜು, ಕೃಷಿ ಇಲಾಖೆಯ ರಾಜೇಶ್, ಹಲ್ಕೂರು ನರಸಿಂಹಮೂರ್ತಿ, ಕೊಟ್ಟ ಸಣ್ಣಪ್ಪ ಸೇರಿದಂತೆ ಹಲವರು ಹಾಜರಿದ್ದರು.