ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indi (vijayapura) News: ಸಂಶೋಧನೆಯು ಅಲ್ಪ ವಿರಾಮ, ಮಧ್ಯವಿರಾಮದಿಂದ ಪೂರ್ಣವಿರಾಮದೆಡೆಗೆ ಹೋಗುತ್ತದೆ: ಯಶವಂತರಾಯಗೌಡ

ಸ್ವಸ್ಥ ಸಮಾಜ ನಿರ್ಮಾಣ,ವಚನ ಪರಂಪರೆ,ಸೌಹಾರ್ಧ ಸಿದ್ದಾಂತ ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಡಾ| ಕಲಬುರ್ಗಿಯವರು ಅಚಾರ.ವಿಚಾರ, ಸಿದ್ದಾಂತ,ಬರವಣೆಗೆ ಬಿಟ್ಟು ಹೋಗಿದ್ದು ಒಂದು ವೇದಿಕೆ ಇರುವದು ನಡೆಯುವದಕ್ಕೆ ಅಲ್ಲ ನಿಲ್ಲುವದಕ್ಕೆ. ಸಂಶೋಧನೆಗೆ ಸಾವಿರ ಕೈ ಸಾಲುವುದಿಲ್ಲ ಅದಕ್ಕಾಗಿ ಶಿಷ್ಯರ ಕೈಗಳು ಬೇಕು ಎಂಬ ನಂಬಿಕೆ ಅವರದಾಗಿತ್ತು

ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ

ಇಂಡಿ ಪಟ್ಟಣದ ಗುರುಭವನದಲ್ಲಿ ಕಲಬುರ್ಗಿ ಪೌಂಡೇಷನ್ ವಿಜಯಪುರ ಇವರಿಂದ ಡಾ| ಎಂ.ಎA.ಕಲಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿ. ಡಾ. ಎಂ.ಎA.ಪಡಶೆಟ್ಟಿ , ಮತ್ತು ಡಾ. ದಾನಮ್ಮ ಝಳಕಿ ಇವರಿಗೆ ವಚನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು

Profile Ashok Nayak Jun 29, 2025 11:17 PM

ಇಂಡಿ: ಡಾ| ಎಂ.ಎಂ.ಕಲಬುರ್ಗಿಯವರು ಸಂಶೋಧನೆಯು ಅಲ್ಪ ವಿರಾಮ, ಮಧ್ಯವಿರಾಮದಿಂದ ಪೂರ್ಣವಿರಾಮದೆಡೆಗೆ ಹೋಗುತ್ತದೆ ಎಂದು ಡಾ| ಕಲಬುರ್ಗಿಯವರು ನಂಬಿದ್ದರು. ಕಳೆದ ನಾಲ್ಕು ದಶಕ ಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ನಾಲ್ಕು ನೂರಕ್ಕು ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ಸಂಸೋಧನಾ ಕ್ಷೇತ್ರದ ದಿಗ್ಗಜ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.

ಪಟ್ಟಣದ ಗುರುಭವನದಲ್ಲಿ ಕಲಬುರ್ಗಿ ಪೌಂಡೇಷನ್ ವಿಜಯಪುರ ಮತ್ತು ಭೀಮಾಂತರAಗ ಸಾಹಿತ್ಯಿಕ ಸಾಂಸ್ಕೃತಿಕ ಜಗಲಿ ಇಂಡಿ ಇವರ ಸಹಯೋಗದಲ್ಲಿ ಡಾ| ಎಂ.ಎಂ.ಕಲಬುರ್ಗಿ ಸಾಹಿತ್ಯ ಸಿರಿ ಮತ್ತು ವಚನ ಸಿರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷರು ಕುವೆಂಪು ಭಾಷಾಭಾರತಿ ಪ್ರಾಧಿಕಾರ ಬೆಂಗಳೂರಿನ ಡಾ. ಚನ್ನಪ್ಪ ಕಟ್ಟಿ ಮಾತನಾಡಿ ಡಾ| ಎಂ.ಎಂ.ಕಲಬುರ್ಗಿಯವರು ಸಾಹಿತ್ಯ, ಸಂಸ್ಕೃತಿ, ಜಾನಪದ ಶಾಸನ, ಇತಿಹಾಸ, ಹಸ್ತ ಪ್ರತಿ ಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ: Indi (Vijayapura) News: ಇಂಡಿ ನಗರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ 19ರಂದು ಸಭೆ

ಸ್ವಸ್ಥ ಸಮಾಜ ನಿರ್ಮಾಣ,ವಚನ ಪರಂಪರೆ,ಸೌಹಾರ್ಧ ಸಿದ್ದಾಂತ ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಡಾ| ಕಲಬುರ್ಗಿಯವರು ಅಚಾರ.ವಿಚಾರ, ಸಿದ್ದಾಂತ,ಬರವಣೆಗೆ ಬಿಟ್ಟು ಹೋಗಿದ್ದು ಒಂದು ವೇದಿಕೆ ಇರುವದು ನಡೆಯುವದಕ್ಕೆ ಅಲ್ಲ ನಿಲ್ಲುವದಕ್ಕೆ. ಸಂಶೋಧನೆಗೆ ಸಾವಿರ ಕೈ ಸಾಲುವುದಿಲ್ಲ ಅದಕ್ಕಾಗಿ ಶಿಷ್ಯರ ಕೈಗಳು ಬೇಕು ಎಂಬ ನಂಬಿಕೆ ಅವರದಾಗಿತ್ತು ಎಂದರು.

ಸನ್ಮಾನಿತ ಸಾಹಿತ್ಯ ಸಿರಿ ಪುರಸ್ಕೃತ ಡಾ. ಎಂ.ಎಂ.ಪಡಶೆಟ್ಟಿ ಮತ್ತು ವಚನ ಸಿರಿ ಪುರಸ್ಕೃತ ಡಾ. ದಾನಮ್ಮ ಝಳಕಿ ಮಾತನಾಡಿ ನಾವು ಕಲಬುಗಿಯವರ ಶಿಷ್ಯರು, ನಮಗೆ ಎಂ.ಎ ಕನ್ನಡ ಕಲಿಯು ವಾಗ ಉಪನ್ಯಾಸ ನೀಡಿದ್ದು ಕಲಬುರ್ಗಿಯವರ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವದು ಒಂದು ಕಡೆ ಸಂತಸ ಮತ್ತೊಂದು ಕಡೆ ಅವರ ಅಂತ್ಯ ಕೊಲೆಯಲ್ಲಿ ಆಗಿರುವದು ನೋವು ನಮಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಎಂ.ಎಸ್. ಮದಬಾವಿ, ಕಲಬುರ್ಗಿ ಪೌಂಡೆಷನ್ ಅಧ್ಯಕ್ಷ ಶಿವಲಿಂಗ ಕಲಬುರ್ಗಿ, ಭೀಮಾಂತರಂಗ ವೇದಿಕೆಯ ಸಿ.ಎಂ ಬಂಡಗರ, ವಾಯ್.ಜಿ.ಬಿರಾದಾರ, ಶ್ರೀಮತಿ ಬಿ.ಸಿ.ಭಗವಂತ ಗೌಡರ, ಸಂತೋಷ ಬಂಡೆ, ರಾಘವೇಂದ್ರ ಕುಲಕರ್ಣಿ ಮಾತನಾಡಿದರು.

ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ, ಸಿಂದಗಿಯ ಹ.ಮ.ಪೂಜಾರಿ, ಶಿವಪ್ಪ ಗವಸಾನಿ, ಜಗದೇವಪ್ಪ ಪಾಟೀಲ,ಗೀತಯೋಗಿ, ನಿವೃತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ಎಸ್.ಜಿ.ಬನಸೋಡೆ, ಪಿ.ಬಿ.ಕತ್ತಿ, ಡಿ.ಎನ್.ಅಕ್ಕಿ ಶ್ರೀಧರ ಹಿಪ್ಪರಗಿ, ಸುಧಾಕರಗೌಡ ಬಿರಾದಾರ ಮತ್ತಿತರಿದ್ದರು.

ಡಾ.ಎಂ.ಎಂ.ಪಡಶೆಟ್ಟಿ ಇವರಿಗೆ ಸಾಹಿತ್ಯ ಸಿರಿ ಮತ್ತು ಡಾ.ದಾನಮ್ಮ ಝಳಕಿ ಇವರಿಗೆ ವಚನ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಅಕ್ಷತಾ ಕೋಟಿ, ರಕ್ಷಿತಾ ಕೊಡ ಹೊನ್ನ ಮತ್ತು ಸಂಜನಾ ತಳವಾರ ಇವರಿಗೆ ರೂ 5001 ರೂ ಮತ್ತು ಪ್ರಶಸ್ತಿ ನೀಡಿ ಗೌರವಿಸ ಲಾಯಿತು.