ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸತ್ಯದ ಕತ್ತು ಹಿಸುಕಿ ಕೊಲ್ಲುವ ಸಂದರ್ಭದಲ್ಲಿ ರಂಗಪ್ರಯೋಗ ಆಗುತ್ತಿರುವುದು ಶ್ಲಾಘನೀಯ

ರಂಗ ಸಂಸ್ಕೃತಿ ಪುನರುತ್ಥಾನ ಕೊಳ್ಳಬೇಕು. ಮಾಯಾಲೋಕ ನಮ್ಮದಲ್ಲ.ಜಾನಪದ ಕಥೆಗಳು, ಕೇಳಿಕೆ ಯಂತಹ ಪರಂಪರೆ ನಮ್ಮ ದಾಗಬೇಕು. ಸತ್ಯದ ಕತ್ತು ಹಿಸುಕಿ ಕೊಲ್ಲುವ ಸಂದರ್ಭದಲ್ಲಿ ರಂಗಪ್ರಯೋಗ ಆಗುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳೇ ನಾಳೆಗಳು ನಿಮ್ಮ ಮೇಲಿದೆ.ವರ್ಷಕ್ಕೊಮ್ಮೆಯಾದರೂ ಮನಸ್ಸು ಗಳನ್ನು ತೊಳೆದುಕೊಳ್ಳಿ

ನಾಡಿನೆಲ್ಲೆಡೆ ರಂಗ ಸಂಸ್ಕೃತಿ ಪುನರುತ್ಥಾನಗೊಳ್ಳಬೇಕಿದೆ

Profile Ashok Nayak Mar 19, 2025 8:53 PM

ಚಿಕ್ಕಬಳ್ಳಾಪುರ: ನಾಡಿನೆಲ್ಲೆಡೆ ರಂಗ ಸಂಸ್ಕೃತಿ ಪುನರುತ್ಥಾನಗೊಳ್ಳಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು. ನಗರ ಹೊರವಲಯದ ಸರ್ಕಾ ರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನನ್ಯ ಸಾಂಸ್ಕೃತಿಕ ಸಂಘಟನೆ, ಗೌತಮಬುದ್ಧ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕುವೆಂಪು ಅವರ ಮಹಾರಾತ್ರಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಸಿದ್ದಾರ್ಥ ವೈರಾಗ್ಯಕ್ಕೆ ಹೋಗುವ ಸಂದ ರ್ಭವನ್ನು ಕುವೆಂಪು ಮಹಾರಾತ್ರಿ ಎಂದು ಕರೆದಿದ್ದಾರೆ.ಈ ನಾಟಕವನ್ನು ವೀಕ್ಷಣೆ ಮಾಡುವ ಮೂಲಕವೆ ರಂಗರೂಪವನ್ನು ಅರ್ಥ ಮಾಡಿಕೊಳ್ಳಿ ಎಂದು ಪ್ರೇಕ್ಷಕರಿಗೆ ಕರೆ ನೀಡಿದರು.

ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ ರಂಗ ಸಂಸ್ಕೃತಿ ಪುನರುತ್ಥಾನ ಕೊಳ್ಳಬೇಕು. ಮಾಯಾಲೋಕ ನಮ್ಮದಲ್ಲ.ಜಾನಪದ ಕಥೆಗಳು, ಕೇಳಿಕೆಯಂತಹ ಪರಂಪರೆ ನಮ್ಮ ದಾಗಬೇಕು. ಸತ್ಯದ ಕತ್ತು ಹಿಸುಕಿ ಕೊಲ್ಲುವ ಸಂದರ್ಭದಲ್ಲಿ ರಂಗಪ್ರಯೋಗ ಆಗುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳೇ ನಾಳೆಗಳು ನಿಮ್ಮ ಮೇಲಿದೆ.ವರ್ಷಕ್ಕೊಮ್ಮೆಯಾದರೂ ಮನಸ್ಸು ಗಳನ್ನು ತೊಳೆದುಕೊಳ್ಳಿ ಎಂದರು.

ಇದನ್ನೂ ಓದಿ: Chikkaballapur News: ಬುದ್ಧಿಮಾಂದ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಚಿವರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ತುಂಬಾ ಸಂತೋಷ

ಇಂದಿರಾ ಕೃಷ್ಣಪ್ಪ ಮಾತನಾಡಿ ನಾಲ್ಕು ದಿನಗಳ ರಂಗೋತ್ಸವ ಯಶಸ್ವಿಯಾಗಲಿ. ಬಹುಮುಖ ಪ್ರತಿಭೆಯ ಗ.ನ.ಅಶ್ವತ್ಥ ಅವರ ನಿರ್ದೇಶನದ ಮಹಾರಾತ್ರಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಶೇಕ್ಸ್ ಪಿಯರ್ ನಾಟಕ ರಂಗದ ಶ್ರೇಷ್ಠ ನಾಟಕಕಾರ.ಗ್ರಾಮೀಣ ಪ್ರದೇಶದಲ್ಲಿ ಸಣ್ಣಾಟ ದೊಡ್ಡಾಟ ಇಂದಿಗೂ ಜೀವಂತವಾಗಿದೆ.ಮಹಿಳಾ ಕಾಲೇಜಿನಲ್ಲಿ ನಾಟಕದ ಪರಂಪರೆ ಪ್ರಾರಂಭವಾಗಿರುವುದು ಸಂತೋಷ.ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ನಾಟಕ ಪರಂಪರೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ಕೋಡಿ ರಂಗಪ್ಪ ಮಾತನಾಡಿ ನಾಟಕ ಬಹುಜನ ಸಮಾರಾಧನೆ ಎಂದಿದ್ದಾರೆ.ಸತ್ಯ ಹರೀಶ್ಚಂದ್ರನ ನಾಟಕ ನೋಡಿ ಗಾಂಧೀಜಿ ಬದಲಾದರು.ಶತಮಾನಗಳ ಕಾಲ ಬುದ್ಧನನ್ನು ಪುಸ್ತಕಗಳಲ್ಲಿ ಬಚ್ಚಿಟ್ಟಿ ದ್ದರು. ಅಂಬೇಡ್ಕರ್ ಬಂದ ಮೇಲೆ ಜಗತ್ತಿಗೆ ಹೆಚ್ಚು ಪರಿಚಿತ ಆದರು.ಮಹಿಳಾ ಕಾಲೇಜು ವಿದ್ಯಾರ್ಥಿ ಗಳು ಸಹನಾ ಶೀಲ ರಾಗಬೇಕು.ಆಗ ಮಾತ್ರ ಸಾಧಕರಾಗಬಹುದು.ಬುದ್ಧನನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸುವ ಕೆಲಸ ನಿರ್ದೆಶಕ ಗ.ನ.ಮಾಡಿದ್ದಾರೆ.

ಬುದ್ಧ ಇಂದು ತುಂಬಾ ಅಗತ್ಯವಿದೆ.8ರ ರಾತ್ರಿ ಕನ್ನಡ ಭವನದಲ್ಲಿ ಈ ನಾಟಕ ಪ್ರದರ್ಶನ ಆಗಲಿದೆ ಎಂದರು. ಹೆಣ್ಣು ಮಕ್ಕಳ ಸಬಲೀಕರಣ ಆದರೆ ದೇಶದ ಅಭಿವೃದ್ಧಿ ಆಗಲಿದೆ ಎಂದರು.