ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Diganth: ಆ ಸಿನಿಮಾದಿಂದ ಕಣ್ಣು ಕಳೆದುಕೊಳ್ಳಬೇಕಾಯ್ತು ಎಂದ ನಟ ದೂದ್ ಪೇಡಾ ದಿಗಂತ್

ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ದಿಗಂತ್ ಸಿನಿಮಾವೊಂದರ  ಚಿತ್ರೀಕರಣ ನಡೆಸುವಾಗ ದುರ್ಘಟನೆಯೊಂದು ನಡೆದಿತ್ತು. ಈ ಚಿತ್ರೀಕರಣದ ವೇಳೆ ದಿಗಂತ್ ಕಣ್ಣಿಗೆ ಹಾನಿಯಾಗಿತ್ತು. ಅಲ್ಲದೆ ಕಣ್ಣೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಹಾಗಾದರೆ ನಟ ದಿಗಂತ್ ಗೆ ಏನಾಗಿತ್ತು? ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಟ ದಿಗಂತ್‌ಗೆ ಶೂಟಿಂಗ್ ವೇಳೆ ಹೀಲ್ಡ್ ಶೂ ಎಸೆದ ನಟಿ

Diganth

Profile Pushpa Kumari Jun 4, 2025 10:47 PM

ಬೆಂಗಳೂರು: ದೂದ್​ಪೇಡಾ ಎಂದೇ ಜನಪ್ರಿಯರಾಗಿರುವ ನಟ ದಿಗಂತ್ (Diganth) ತಮ್ಮ ನಟನೆಯಿಂದಲೇ ಜನಪ್ರಿಯರಾಗಿದ್ದಾರೆ. ʼಗಾಳಿಪಟʼ, ʼಮನಸಾರೆʼ, ʼಪಂಚರಂಗಿʼ ಸಿನಿಮಾ ಮೂಲಕ ಜನ ಮನ ಗೆದ್ದ ನಟ ದಿಗಂತ್ ಲವರ್‌ ಬಾಯ್‌ ಪಾತ್ರದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಲವ್, ಕಾಮಿಡಿ ಕಿಕ್ ಇರುವ ಪಾತ್ರಗಳೆ ಇವರಿಗೆ ಹೆಚ್ಚು ಹೋಲುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ದಿಗಂತ್ ಸಿನಿಮಾವೊಂದರ  ಚಿತ್ರೀಕರಣದಲ್ಲಿದ್ದಾಗ ದುರ್ಘಟನೆಯೊಂದು ನಡೆದಿತ್ತು. ಈ ಚಿತ್ರೀಕರಣದ ವೇಳೆ ದಿಗಂತ್ ಕಣ್ಣಿಗೆ ಹಾನಿಯಾಗಿತ್ತು. ಅಲ್ಲದೆ ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಹಾಗಾದರೆ ನಟ ದಿಗಂತ್ ಗೆ ಏನಾಗಿತ್ತು? ಎಂಬುದನ್ನು ಅವರೇ ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಈ ಕುರಿತಾದ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟ ದಿಗಂತ್ ಹಿಂದಿಯ ʼಟಿಕೆಟ್ ಟು ಬಾಲಿವುಡ್ʼ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೆ ಶೂಟಿಂಗ್ ಸಮಯದಲ್ಲಿ ಆ ಸಿನಿಮಾದ ನಾಯಕಿ ಮಾಡಿದ ಎಡವಟ್ಟಿನಿಂದ ದಿಗಂತ್ ಒಂದು ಕಣ್ಣನ್ನು ಕಳೆದುಕೊಳ್ಳಬೇಕಾಗಿ ಬಂತು. ಆದರೆ ಈ ಬಗ್ಗೆ ದಿಗಂತ್‌  ನಟಿಯ ಮೇಲೆ ಆರೋಪ ಕೂಡ ಮಾಡಿರಲಿಲ್ಲ. ಆದರೆ ಇದೀಗ  ಸಂದರ್ಶನವೊಂದರಲ್ಲಿ  ದಿಗಂತ್ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ʼಟಿಕೆಟ್ ಟು ಬಾಲಿವುಡ್ʼ ಸಿನಿಮಾ ನಾಯಕಿ ದಿಗಂತ್ ಮೇಲೆ ಹೈ ಹೀಲ್ಡ್ ಚಪ್ಪಲಿಯನ್ನು ಎಸೆದಿದ್ದರು. ಅದು ಅವರ ಕಣ್ಣಿಗೆ ಬಡಿದು ಪೆಟ್ಟಾಗಿತ್ತು ಎಂದು ಈ ಘಟನೆಯನ್ನು ದಿಗಂತ್ ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ನೆನಪಿಸಿಕೊಂಡಿದ್ದಾರೆ.

ನಟ ದಿಗಂತ್ ಕಣ್ಣಿಗೆ ಪೆಟ್ಟಾದ 15-20 ದಿನಗಳ ಕಾಲವು ಎಲ್ಲ ಮುಗಿದು ಹೋಯ್ತು ಎಂದು ಅನಿಸಿತ್ತಂತೆ. ಕಣ್ಣಿಗೆ ಪೆಟ್ಟಾದ ಕಾರಣ ಶೂಟಿಂಗ್ ಹೋಗುವಂತಿರಲಿಲ್ಲ. ಹಾಗಾಗಿ ರೆಸ್ಟ್ ಮಾಡುತ್ತಿದ್ದೆ. ನಡುವೆ ಬ್ಯಾಡ್ಮಿಂಟನ್ ಆಡುವುದಕ್ಕೆಂದು ಹೋದಾಗ ಕಣ್ಣಿಗೆ ಶಟಲ್ ಕೂಡ ಕಾಣುತ್ತಿರಲಿಲ್ಲ. ನನ್ನ ಕೆರಿಯರ್ ಮುಗಿದೆ ಹೋಯ್ತು ಎಂದು ಅಂದುಕೊಂಡಿದ್ದೆ ಎಂದು ನಟ ದಿಗಂತ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ʼಟಿಕೆಟ್‌ ಟು ಬಾಲಿವುಡ್‌ʼ ಸಿನಿಮಾದ ಒಂದು ಸೀನ್ ಅನ್ನು ಹೊಟೇಲ್ ರೂಮ್ ಬಳಿ ಮಾಡಲು ನಿರ್ಧರಿಸಲಾಗಿತ್ತಂತೆ. ಹೀರೋ ಹೀರೋಯಿನ್ ಒಂದು ರೂಮಲ್ಲಿ ಇದ್ದು ಅವರ ನಡುವೆ ಜಗಳ ಆಗಿರುವ ಆ ಸೀಸನ್‌ನಲ್ಲಿ ಹೀರೋಯಿನ್ ಬಟ್ಟೆ ಬಿಸಾಕಿ ರೂಮ್ ಬಾಗಿಲು ಹಾಕ್ಬೇಕು ಅನ್ನೊ ಸೀನ್ ಇದ್ದಿದ್ದು. ಅದರೆ ಹೀರೋಯಿನ್ 15 ರಿಂದ 20 ಟೇಕ್ ತೆಗೆದುಕೊಂಡಿದ್ದರಂತೆ. ಕೊನೆಗೆ ಸೀನ್ ನ್ಯಾಚುರಲ್ ಆಗಿರಲೆಂದು ಸೂಟ್‌ಕೇಸ್‌ನಲ್ಲೇ ಇದ್ದಿದ್ದನ್ನು ತೆಗೆದು ಎಸೆದಿದ್ದಾಳೆ. ಅದರಲ್ಲಿ ಹುಡುಗಿಯರು ಹಾಕುವ ಹೈ ಹೀಲ್ಡ್ ಶೂ ಬಂದು ಸೀದಾ ದಿಗಂತ್ ಅವರ ಕಣ್ಣಿಗೆ ಬಡಿದಿದೆ. ಅವಳು ಗೊತ್ತಿದ್ದು ಮಾಡಿದ್ದಾಳೋ. ಗೊತ್ತಿಲ್ಲದೆ ಮಾಡಿದ್ದಾಳೋ ಗೊತ್ತಿಲ್ಲ. ಸೀನ್ ಆಗಿ 20 ನಿಮಿಷದ ತನಕ ನನಗೆ ಎಚ್ಚರ ಇರಲಿಲ್ಲ. ಆಮೇಲೆ ಲಂಡನ್‌ನಲ್ಲಿ ಡಾಕ್ಟರ್‌ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋದರು. ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ನೀನು ಕಣ್ಣನ್ನು ಕಳೆದು ಕೊಂಡಿದ್ದೀಯ ಅಂದುಬಿಟ್ಟರು. ಅದು ನನ್ನ ಜೀವನದ ದೊಡ್ಡ ಶಾಕ್ ಆಗಿತ್ತು. ನಟಿ ನನ್ನನ್ನು ನೋಡುವುದಕ್ಕೆ ಆಸ್ಪತ್ರೆಗೂ ಬರಲಿಲ್ಲ. ಚಿಕ್ಕದೊಂದು ಮೆಸೇಜ್ ಹಾಕಿ ಸುಮ್ಮನಾಗಿದ್ದರು ಎಂದು ದಿಗಂತ್ ಹೇಳಿಕೊಂಡಿದ್ದಾರೆ.

ಇದನ್ನು ಓದಿ:No Entry Movie: 'ನೋ ಎಂಟ್ರಿ 2' ಸಿನಿಮಾದಿಂದ ಹೊರ ನಡೆದ್ರಾ ನಟ ದಿಲ್ಜಿತ್ ದೋಸಾಂಜ್? ಈ ಬಗ್ಗೆ ನಿರ್ಮಾಪಕ ಹೇಳಿದ್ದೇನು?

ಎಷ್ಟೋ ಸಿನಿಮಾ ಕಲಾವಿದರಿಗೆ ಶೂಟಿಂಗ್ ವೇಳೆ ಅವಘಡ ಸಂಭವಿಸುತ್ತದೆ. ಕುದುರೆ ಮೇಲಿಂದ ಬಿದ್ದು ಬೆನ್ನು ಹುರಿ ಮುರಿದು ಹೋಗಿದ್ದು, ಫೈಟ್ ಮಾಡುವಾಗ ಪೆಟ್ಟಾಗಿ ಮೂಳೆ ಮುರಿತವಾಗಿದ್ದೂ ಇದೆ. ಅಂತೆಯೇ ನನ್ನ ಸ್ಥಿತಿ ಹೀಗಾಗಿದ್ದು ಖಿನ್ನತೆ ಸಮಸ್ಯೆಗೆ ಮೂಲ ಕಾರಣವಾಯಿತು. ಬಳಿಕ ಅನೇಕ ದಿನಗಳ ಸತತ ಚಿಕಿತ್ಸೆ ಹಾಗೂ ಸರ್ಜರಿ ಬಳಿಕ ಕಣ್ಣಿನ ಭಾಗ ಚೇತರಿಕೆ ಕಾಣುತ್ತಾ ಬಂದಿದೆ. ಬಳಿಕ ಲೆನ್ಸ್ ಹಾಕಿ ಶೂಟಿಂಗ್ ಮಾಡುವ ಅವಕಾಶ ನೀಡಲಾಗಿದ್ದು ಪುನರ್ಜನ್ಮ ಸಿಕ್ಕಂತಾಗಿದೆ ಎಂದು ನಟ ದಿಗಂತ್ ತಿಳಿಸಿದ್ದಾರೆ‌