Bigg Boss Kannada 13: ಕಾಮನರ್ಸ್ ಈ ಶೋಗೆ ಬೇಡ; ಸ್ಪರ್ಧಿಗಳ ವರ್ತನೆಗೆ ಬೇಸತ್ತ ಕಿಚ್ಚ
Bigg Boss Kannada 13: ಈ ವಾರ ಬಿಗ್ ಬಾಸ್ ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಕಾಮನರ್ಸ್ಗಳಿಗೆ ಚಳಿ ಬಿಡಿಸಿದರು. ‘ಬಿಗ್ ಬಾಸ್ ಸೀಸನ್-13’ರ ಅಗ್ನಿಪರೀಕ್ಷೆ ಸ್ಪರ್ಧಿಗಳು ವರ್ಸ್ಟ್ ವರ್ತನೆ ಮಾಡಿದ್ದಾರೆ. ಇದೇ ಕಾರಣಕ್ಕೆ ಮುಂದಿನ ವರ್ಷ ಬಿಗ್ ಬಾಸ್ ಅಗ್ನಿಪರೀಕ್ಷೆ ಕಾನ್ಸೆಪ್ಟ್ನೇ ಮಾಡಬೇಡಿ, ಸಾಮಾನ್ಯ ಜನತಗೆ ಅವಕಾಶ ಕ್ಯಾನ್ಸಲ್ ಆದರೆ, ಅದಕ್ಕೆ ಈ ನಾಲ್ಕು ಜನ ಕಾರಣ ಎಂದು ನೇರವಾಗಿ ಹೇಳಿದ್ದಾರೆ ಸುದೀಪ್.
ಬಿಗ್ ಬಾಸ್ ಕನ್ನಡ -
ಈ ವಾರ ಬಿಗ್ ಬಾಸ್ ವೀಕೆಂಡ್ ಪಂಚಾಯ್ತಿಯಲ್ಲಿ (Bigg Boss Kannada 13) ಸುದೀಪ್ ಕಾಮನರ್ಸ್ಗಳಿಗೆ ಚಳಿ ಬಿಡಿಸಿದರು. ‘ಬಿಗ್ ಬಾಸ್ ಸೀಸನ್-13’ರ ಅಗ್ನಿಪರೀಕ್ಷೆ ಸ್ಪರ್ಧಿಗಳು ವರ್ಸ್ಟ್ ವರ್ತನೆ ಮಾಡಿದ್ದಾರೆ. ಇದೇ ಕಾರಣಕ್ಕೆ ಮುಂದಿನ ವರ್ಷ ಬಿಗ್ ಬಾಸ್ ಅಗ್ನಿಪರೀಕ್ಷೆ (Agniparikshe) ಕಾನ್ಸೆಪ್ಟ್ನೇ ಮಾಡಬೇಡಿ, ಸಾಮಾನ್ಯ ಜನತಗೆ ಅವಕಾಶ ಕ್ಯಾನ್ಸಲ್ ಆದರೆ, ಅದಕ್ಕೆ ಈ ನಾಲ್ಕು ಜನ ಕಾರಣ ಎಂದು ನೇರವಾಗಿ ಹೇಳಿದ್ದಾರೆ ಸುದೀಪ್.
ನಾಲ್ವರು ಸ್ಪರ್ಧಿಗಳ ನಡೆ-ನುಡಿ
ಈ ಬಾರಿಯ ಸೀಸನ್ನಲ್ಲಿ ‘ಅಗ್ನಿಪರೀಕ್ಷೆ’ ಎಂಬ ವಿಶೇಷ ಆಯ್ಕೆ ಪ್ರಕ್ರಿಯೆಯ ಮೂಲಕ ಕಾಮನ್ ಮ್ಯಾನ್ಗಳನ್ನು ಕರೆಸಲಾಗಿತ್ತು. ಈ ಕೋಟಾದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜು, ಕಿರಣ್, ಧನುಷ್ ಹಾಗೂ ಲಿಖಿತ್ ಎಂಬ ನಾಲ್ವರು ಸ್ಪರ್ಧಿಗಳ ನಡೆ-ನುಡಿ ಪ್ರೇಕ್ಷಕರ ತಾಳ್ಮೆ ಕೆರಳಿಸಿದೆ.
ಸಹ ಸ್ಪರ್ಧಿಗಳನ್ನ ಪೈಸೆ ಪೈಸೆ ಲೆಕ್ಕದಲ್ಲಿ ಹೀಯಾಳಿಸಿದ್ದ ಮಾಡ್ರನ್ ಮಹಾಕವಿ ಮಂಜ . ಈ ವರ್ತನೆಗೆ ಗರಂ ಆದ ಕಿಚ್ಚ ಸುದೀಪ್, “ನಿಮ್ಮ ಬೆಲೆ ಎಷ್ಟು ಮಂಜು, ನಿಮಗೆ ಮಾತ್ನಾಡೋಕೆ ಬರಲ್ಲ, ಮಿಸ್ಟರ್ ಸೌಂಡ್ ಮಂಜು, ಗಾಂಜಾಲಿ ಜಾಸ್ತಿ ಆಯ್ತು” ಎಂದು ಕಿಚ್ಚ ಸುದೀಪ್ ಮಾಡ್ರನ್ ಮಹಾಕವಿ ಮಂಜನಿಗೆ ಕ್ಲಾಸ್ ತಗೊಂಡರು.
ಇದನ್ನೂ ಓದಿ: Bigg Boss Kannada 13: 50 ಪೈಸೆ ಬೆಲೆ ಇಲ್ಲ ಎಂದ ಮಂಜನ ಮಾತಿಗೆ ಕಿಚ್ಚ ಗರಂ; ಇದು ತಪ್ಪು ಮಾಡಿದವರಿಗೆ ದಂಡನೆ!
“ಕಿರಣ್ ಶಾಸ್ತ್ರಿ ಅವರೇ ನಿಮ್ಮ ಜೊತೆಗೆ ಇದ್ದವರೇ ನಿಮ್ಮ ಪಾಯಿಂಟ್ಗಳನ್ನ ಎತ್ತಿಕೊಟ್ಟಿದ್ದಾರೆ. ಹೇಳ್ರಿ ಲಿಖಿತ್, ಮಾಡ್ರನ್ ಮಹಾಕವಿ ಮಂಜ, ಧನುಷ್ ಎಂದು ಟೈಮ್ ಕೊಟ್ಟು ಒಂದೊಂದೆ ಮಾತನ್ನ, ಆ ದಿನ ಟಾಸ್ಕ್ನಲ್ಲಿ ಏನು ನಡೆಯಿತು ಹೇಳಿ” ಅಂತ ಮೂವರಿಗೆ ಕೇಳ್ತಾರೆ. ಲಿಖಿತ್, ಮಂಜ ಎತ್ತಿಕೊಟ್ಟವರು, ಧನುಷ್ ಹಾಕೊಟ್ಟರು, ತಾಂಡವ್ ಬಲಿಪಶು ಆಗಿದ್ದು ಎಂದು ಕಿರಣ್ ಶಾಸ್ತ್ರಿ ಮುಂದೆ ಮೂವರ ಸತ್ಯ ಬಾಯಿ ಬಿಡಿಸುತ್ತಾರೆ.
ಒಂದು ಮಟ್ಟಿಗೆ Manja ಮತ್ತು Kiran ಅಂತಹ commoners ಕಾರಣದಿಂದ ಮುಂದಿನ seasonಗಳಿಂದ commonersಗೆ Big Boss Houseಗೆ entry ಇಲ್ಲ ಅಂತ ಹೇಳಬಹುದು.😶
— 𝚅𝚎𝚗𝚘𝚖™ (@IAMGAYAKAWAD18) September 20, 2026
ಆದ್ರೆ ಈ Likkhi ಮತ್ತು Dhanush ಏನು ಮಾಡಿದ್ದಾರೆ ಅಂತ commonersನ cancel ಮಾಡಬೇಕು ಅಂತ @KicchaSudeep sir ಹೇಳ್ತಾರಲ್ಲ🤷🏻♂️
Rest of the debate is yours👇#BBK13 pic.twitter.com/mE97zrm1um
ಕಾಮನರ್ಸ್ ಈ ಶೋಗೆ ಬೇಡ
ನಿಮ್ಮಿಂದ ಕೋಟಿ ಕೋಟಿ ವೀಕ್ಷಕರನ್ನ ಕಳೆದುಕೊಳ್ಳೋಕೆ ನಾವು ರೆಡಿಯಿಲ್ಲ. ನಾವು ಇದುವರೆಗೂ ಸಂಪಾದಿಸಿದ ಆಸ್ತಿ ಜನತೆ. 2 ನಿಮಿಷ ಲೈಟ್ ಆಫ್ ಮಾಡಿಸ್ತೀನಿ, ಎಲ್ಲರ ಬಂಡವಾಳ ಬಯಲಾಗುತ್ತೆ. ಮುಂದಿನ ಸೀಸನ್ನಿಂದ ಅಗ್ನಿಪರೀಕ್ಷೆ ತೆಗೆದು ಹಾಕಿ, ಕಾಮನರ್ಸ್ ಈ ಶೋಗೆ ಬೇಡ. ಹೀಗೆ ಹೇಳೋಕೆ ನನಗೆ ಬೇಸರ ಆಗುತ್ತೆ. ಅದೇಷ್ಟೋ ಲಕ್ಷಾಂತರ ಜನರು ಈ ಒಂದು ಅವಕಾಶಕ್ಕೆ ಕಾಯುತ್ತಿರುತ್ತಾರೆ. ಕ್ಷಾಂತರ ಜನರಲ್ಲಿ ನಿಮ್ಮನ್ನ ಆಯ್ಕೆ ಮಾಡಿದ್ರೇ, ಸಿಕ್ಕ ಅವಕಾಶನ ಹೀಗ ಬಳಿಸಿಕೊಳ್ಳೋದು? ಮುಂದಿನ ಸೀಸನ್ನಿಂದ ಸಾಮಾನ್ಯ ಜನತಗೆ ಬಿಗ್ ಅವಕಾಶ ತಪ್ಪಿದರೇ ಅದಕ್ಕೆ ಕಾರಣ ಈ ನಾಲ್ಕು ಜನ.
ಇದನ್ನೂ ಓದಿ: Deepika Padukone : ಎರಡನೇ ಬಾರಿಗೆ ಪೋಷಕರಾದ ದೀಪಿಕಾ-ರಣವೀರ್; ಹೆಣ್ಣು ಮಗು ಜನನ
ಇವರಿಂದಲೇ ಕಾಮನರ್ಸ್ಗೆ ಅವಕಾಶ ತಪ್ಪಿದ್ದು, ಎಂಬುವುದನ್ನ ನೆನಪಿಟ್ಟುಕೊಳ್ಳಿ" ಎಂದು ನೇರವಾಗಿ ಹೇಳಿದ್ದಾರೆ.