ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Puttakkana Makkalu: ವೀಕ್ಷಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಪುಟ್ಟಕ್ಕನ ಮಕ್ಕಳು: ಸೀರಿಯಲ್​ನಿಂದ ಹೊರಬಂದ ಮತ್ತೊಬ್ಬ ನಟಿ

ಪುಟ್ಟಕ್ಕನ ಮಕ್ಕಳು ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗುತ್ತಿಲ್ಲ. ಮೊದಲೇ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವ ಈ ಧಾರಾವಾಹಿಯಿಂದ ಈಗ ಮತ್ತೊಬ್ಬ ನಟಿ ಹೊರಬಂದಿದ್ದಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಿಂದ ಹೊರಬಂದ ಮತ್ತೊಬ್ಬ ನಟಿ

Puttakkana Makkalu Serial

Profile Vinay Bhat Mar 22, 2025 4:10 PM

ಕೆಲವು ತಿಂಗಳುಗಳ ಹಿಂದೆ ಧಾರಾವಾಹಿ ಟಿಆರ್​ಪಿಯಲ್ಲಿ ನಂಬರ್ ಸ್ಥಾನದಲ್ಲಿದ್ದು ಕಿರುತೆರೆ ಲೋಕವನ್ನು ಆಳುತ್ತಿದ್ದ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಈಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ವರ್ಷದ ಹತ್ತನೇ ವಾರ ಈ ಧಾರಾವಾಹಿಗೆ ಸಿಕ್ಕ ಟಿವಿಆರ್ ಕೇವಲ 4.6. ಸೀರಿಯಲ್​ನಲ್ಲಿ ಆದ ಪಾತ್ರಗಳ ಬದಲಾವಣೆ ದೊಡ್ಡ ಹೊಡೆತ ಬಿದ್ದಿತು.​ ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗುತ್ತಿಲ್ಲ. ಮೊದಲೇ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವ ಈ ಧಾರಾವಾಹಿಯಿಂದ ಈಗ ಮತ್ತೊಬ್ಬ ನಟಿ ಹೊರಬಂದಿದ್ದಾರೆ.

ಈ ಹಿಂದೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಮ್ಮನ ಕನಸನ್ನು ನನಸು ಮಾಡಿದ್ದಳು ಮಗಳು ಸ್ನೇಹಾ. ಕಷ್ಟಗಳನ್ನು ಎದುರಿಸಿ ಐಎಎಸ್‌ ಪರೀಕ್ಷೆ ಬರೆದು ಡಿಸಿ ಆಗಿದ್ದಳು. ಸ್ನೇಹಾಳ ಈ ಸಾಧನೆಗೆ ಮನೆ ಮಂದಿ ಮಾತ್ರವಲ್ಲ ಊರವರೂ ಮೆಚ್ಚಿ ಕುಣಿದಾಡಿದ್ದರು. ಆದರೆ, ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಸ್ನೇಹಾ ಭೀಕರ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಹೀಗೆ ಸ್ನೇಹಾ ಪಾತ್ರ ಕಣ್ಮುಚ್ಚುತ್ತಿದ್ದಂತೆ, ಕಿರುತೆರೆ ವೀಕ್ಷಕರಿಗೆ ಈ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಸೋಷಿಯಲ್‌ ಮೀಡಿಯಾದಲ್ಲಿ ನಿರ್ದೇಶಕರ ಈ ನಡೆಯ ಬಗ್ಗೆಯೂ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ, ಡಿಸಿ ಸ್ನೇಹಾ ಸಾಯೋ ಮೊದಲು ಅಂಗಾಗ ದಾನ ಮಾಡಿರುತ್ತಾಳೆ. ಸ್ನೇಹಾಳ ಹೃದಯವನ್ನ ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಮತ್ತೊಂದು ಜೀವಕ್ಕೆ ಕಸಿ ಮಾಡಲಾಯಿತು. ಆ ಹೃದಯವನ್ನ ಪಡೆದುಕೊಂಡು ಪುಟ್ಟಕನ ಮನೆಯಲ್ಲೇ ವಾಸಿಸುತ್ತಿದ್ದಳು ಸ್ನೇಹ.

ಪುಟ್ಟಕ್ಕನ ಮಗಳು ಸ್ನೇಹಾಳ ಪಾತ್ರಕ್ಕೆ ಇವರು ರೀಪ್ಲೇಸ್​ ಅಲ್ಲದಿದ್ದರೂ, ಇದೇ ಬೇರೆ ಪಾತ್ರವಾಗಿದ್ದರೂ ವೀಕ್ಷಕರು ಯಾಕೋ ಈ ಸ್ನೇಹಾಳನ್ನು ಅಷ್ಟು ಇಷ್ಟಪಡಲಿಲ್ಲ. ಕಂಠಿಗೆ ಈ ಸ್ನೇಹಾ ಸೂಟ್​ ಆಗಲ್ಲ ಎಂದೇ ಹೇಳುತ್ತಾ ಬಂದರು. ಆದರೂ ಹೊಸ ಪಾತ್ರಕ್ಕೆ ಒಗ್ಗಿಕೊಳ್ಳುವಷ್ಟರಲ್ಲಿಯೇ ಈಗ ಈ ಸ್ನೇಹಾ ಪಾತ್ರಧಾರಿಯನ್ನು ಮತ್ತೆ ಬದಲಾಯಿಸಲಾಗಿದೆ.

ಇದೀಗ ಡಿಸಿ ಸ್ನೇಹಾಳ ಹೃದಯವನ್ನು ಪಡೆದುಕೊಂಡು ಸ್ನೇಹಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಪೂರ್ವ ನಾಗರಾಜ್ ದಿಢೀರ್​ ಸೀರಿಯಲ್​ನಿಂದ ಆಚೆ ಬಂದಿದ್ದಾರೆ. ಝೀ ಕನ್ನಡ ರಿಲೀಸ್​ ಮಾಡಿದ ಹೊರ ಪ್ರೋಮೋದಲ್ಲಿ ಅಪೂರ್ವ ನಾಗರಾಜ್ ಬದಲು ಮತ್ತೊಬ್ಬ ನಟಿಯ ಎಂಟ್ರಿಯಾಗಿದೆ. ರಾಮಾಚಾರಿ ಸೀರಿಯಲ್​ನಲ್ಲಿ ರುಕ್ಮಿಣಿ ಪಾತ್ರ ಮಾಡಿ, ಸೀರಿಯಲ್​ ಅನ್ನು ಮಧ್ಯೆಯೇ ಬಿಟ್ಟಿದ್ದ ನಟಿ ವಿಧ್ಯಾ ರಾಜ್​ ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅತ್ತ ಈ ವಿಚಾರ ತಿಳಿದ ಅಭಿಮಾನಿಗಳು ಇನ್ಮೇಲೆ ಸೀರಿಯಲ್‌ ನೋಡಲ್ಲ ಎಂದು ಕಾಮೆಂಟ್‌ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸ್ನೇಹಾ ಸಾವಿನ ನಂತರ ಕಥೆ ಎತ್ತಲೋ ಸಾಗುತ್ತಿದೆ, ಈ ಕಥೆಯೇ ಬೇಡ ಅಂತಾನೂ ಹೇಳ್ತಿದ್ದಾರೆ ಜನ.

Bhagya Lakshmi Serial: ಮಗಳಿಗೆ ಪಾಠ ಕಲಿಸಲು ಕಟುವಾದ ಭಾಗ್ಯ: ಕೋಪಗೊಂಡ ತನ್ವಿ