ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anushree: ಮದುವೆಯಾಗಿ 1 ತಿಂಗಳು ಕೂಡ ಆಗಿಲ್ಲ, ಆಗಲೇ..: ಅನುಶ್ರೀ ವಿರುದ್ಧ ಕೋಪಗೊಂಡ ಫ್ಯಾನ್ಸ್

ಅನುಶ್ರೀ ಕಿರುತೆರೆಗೆ ಮರಳುವಾಗ ಕೊರಳಲ್ಲಿ ತಾಳಿಯನ್ನು ಕಂಡು ಅವರನ್ನು ಅಭಿಮಾನಿಗಳಿಗೆ ಕೊಂಡಾಡಿದರು. ಆದರೆ ಈಗ ಅನುಶ್ರೀ ಮೇಲೆ ಫ್ಯಾನ್ಸ್ ಕೋಪಗೊಂಡಿದ್ದಾರೆ. ಅನುಶ್ರೀ ಪಿಂಕ್ ಬಣ್ಣದ ಲೆಹೆಂಗಾ ಧರಿಸಿ, ಮುದ್ದಾಗಿ ಪ್ರೋಮೋದಲ್ಲಿ ಕಾಣಿಸುತ್ತಿದ್ದಾರೆ. ಆದರೆ ವೀಕ್ಷಕರು ಮಾತ್ರ ಈ ಪ್ರೋಮೋ ನೋಡಿ ಅನುಶ್ರೀ ವಿರುದ್ಧ ಮುನಿಸಿಕೊಂಡಿದ್ದಾರೆ.

ಮದುವೆಯಾಗಿ 1 ತಿಂಗಳು ಕೂಡ ಆಗಿಲ್ಲ, ಆಗಲೇ..

Anushree -

Profile Vinay Bhat Sep 26, 2025 4:04 PM

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಅವರ ವಿವಾಹ ಆಗಸ್ಟ್‌ 28ರಂದು ಬೆಂಗಳೂರಿನ ಹೊರವಲಯದಲ್ಲಿ ನೆರವೇರಿತು. ರೋಷನ್ ಜೊತೆ ಅನುಶ್ರೀ ಸಪ್ತಪದಿ ತುಳಿದಿದ್ದು, ಈ ಅದ್ಧೂರಿ ಸಮಾರಂಭಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಆಗಮಿಸಿ ಶುಭ ಹಾರೈಸಿದರು. ಇವರಿಬ್ಬರದ್ದು ಲವ್ ಕಮ್‌ ಆರೆಂಜ್‌ ಮ್ಯಾರೇಜ್. ಮದುವೆ ಬಳಿಕ ಅನುಶ್ರೀ ಹನಿಮೂನ್ ಎಂದು ಟೈಮ್ ವೇಸ್ಟ್ ಮಾಡದೆ ಮುಂದಿನ ವಾರವೇ ಮತ್ತೆ ತಮ್ಮ ನಿರೂಪಣೆ ಕೆಲಸಕ್ಕೆ ಹಾಜರಾಗಿದ್ದರು.

ಆ ಸಂದರ್ಭ ಅನುಶ್ರೀ ಕಿರುತೆರೆಗೆ ಮರಳುವಾಗ ಸಂಪ್ರದಾಯ ಮುರಿಯಲಿಲ್ಲ. ಶೋನ ಕಾಸ್ಟ್ಯೂಮ್, ನೆಕ್ಲೇಸ್ ಜೊತೆ ಕರಿಮಣಿ ಕೂಡ ಧರಿಸಿದ್ದರು. ಇತ್ತೀಚಿನದ ದಿನಗಳಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು, ನಟಿಯರು, ನಿರೂಪಕಿಯರು ಮದುವೆಯಾದ ನಂತರ ತಾಳಿ ತೆಗೆದು ಶೋಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಶೋ ಮುಗಿದ ಮೇಲೆ ಮತ್ತೆ ತಾಳಿ ಹಾಕಿಕೊಳ್ಳುತ್ತಾರೆ. ಆದರೆ ಈ ವಿಚಾರದಲ್ಲಿ ಅನುಶ್ರೀ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.

ಕೊರಳಲ್ಲಿ ತಾಳಿಯನ್ನು ಕಂಡು ಅನುಶ್ರೀ ಅವರನ್ನು ಅಭಿಮಾನಿಗಳಿಗೆ ಕೊಂಡಾಡಿದರು. ಆದರೆ ಈಗ ಅನುಶ್ರೀ ಮೇಲೆ ಫ್ಯಾನ್ಸ್ ಕೋಪಗೊಂಡಿದ್ದಾರೆ. ಹೊಸದಾಗಿ ಬಿಡುಗಡೆಯಾಗಿರುವ ಮಹಾನಟಿ ಪ್ರೊಮೋದಲ್ಲಿ ನವರಾತ್ರಿ ಸಂಭ್ರಮ ನಡೆಯುತ್ತಿದ್ದು, ಈ ಸಂದರ್ಭ ನವದುರ್ಗೆಯರ ನೃತ್ಯ ವೈಭವ, ನಿಶ್ವಿಕಾ ನಾಯ್ದು ನಾಟ್ಯದ ಝಲಕ್ ತೋರಿಸಲಾಗಿದೆ. ಇವರ ಜೊತೆ ವೇದಿಕೆಯಲ್ಲಿ ನಿರೂಪಕಿ ಅನುಶ್ರೀ ಮಿಂಚಿದ್ದಾರೆ.



ಅನುಶ್ರೀ ಪಿಂಕ್ ಬಣ್ಣದ ಲೆಹೆಂಗಾ ಧರಿಸಿ, ಮುದ್ದಾಗಿ ಕಾಣಿಸುತ್ತಿದ್ದಾರೆ. ಆದರೆ ವೀಕ್ಷಕರು ಮಾತ್ರ ಈ ಪ್ರೋಮೋ ನೋಡಿ ಅನುಶ್ರೀ ವಿರುದ್ಧ ಮುನಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅನುಶ್ರೀ ತಾಳಿಸರ ಧರಿಸಿರದಿರುವುದು. ಕಳೆದ ಎರಡು ವಾರಗಳಿಂದ ಅನುಶ್ರೀ ತಾಳಿ ಧರಿಸಿದ್ದನ್ನು ನೋಡಿ, ನಮ್ಮ ಸಂಪ್ರದಾಯದ ಹೆಣ್ಣು ಮಗಳು ಎಂದು ಖುಷಿ ಪಟ್ಟಿದ್ದ ಜನ, ಇದೀಗ ನಿರೂಪಕಿ ತಾಳಿ ಹಾಕದ್ದನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮ ಮೇಲೆ ಅಪಾರ ಗೌರವ ಇದೆ, ದಯವಿಟ್ಟು ನಮ್ಮ ಸಂಪ್ರದಾಯ ಮರೆಯ ಬೇಡಿ ಎಂದು ಹೇಳಿದ್ದಾರೆ.

ಅಂದಹಾಗೆ ಅನುಶ್ರೀ-ರೋಹನ್ ಅವರದ್ದು ಲವ್ ಮ್ಯಾರೇಜ್‌ ಅಂತೆ. ಐಟಿ ಉದ್ಯೋಗಿಯಾಗಿರುವ ರೋಶನ್‌ ಅವರು ಕೊಡಗು ಮೂಲದವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ಅನುಶ್ರೀ, ರೋಶನ್‌ ಭೇಟಿಯಾಗಿತ್ತು. ಮೂಲತಃ ಮಂಗಳೂರಿನವರಾಗಿರುವ ಅನುಶ್ರೀ ಆ್ಯಂಕರ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಜನಪ್ರಿಯ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Bhagya Lakshmi Serial: ಮನೆಗೆ ಬಂದು ಬುಕ್ಸ್ ತೆಗೊಂಡೋದ ತನ್ವಿ: ಶ್ರೇಷ್ಠಾಳ ಪ್ಲ್ಯಾನ್ ಸಕ್ಸಸ್