Bhagya Lakshmi Serial: ಆಗಿರೋದು ಎಂಗೇಜ್ಮೆಂಟ್ ಅಷ್ಟೆ, ಮದುವೆ ಆಗಲ್ಲ ಎಂದ ಆದೀಶ್ವರ್
ಎಲ್ಲರೂ ಹೊರಡಲು ಮುಂದಾದಾಗ ಆದೀಶ್ವರ್ ಭಾಗ್ಯ ಬಳಿ ಬಂದು, ತುಂಬಾ ಖುಷಿ ಪಡಬೇಡಿ.. ಆಗಿರೋದು ಎಂಗೇಜ್ಮೆಂಟ್ ಅಷ್ಟೇ ಮದುವೆ ಆಗುತ್ತೆ ಅನ್ನೋ ಆಸೆನ ಬಿಟ್ಟುಬಿಡಿ ಎಂದು ಹೇಳಿದ್ದಾನೆ. ಈ ಮಾತು ಕೇಳಿ ಭಾಗ್ಯಾಗೆ ಆಘಾತವಾಗಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ನಾನಾ ಅಡೆತಡೆಗಳ ಮಧ್ಯೆ ಕೊನೆಗೆ ಹೇಗೋ ಪೂಜಾ-ಕಿಶನ್ ಎಂಗೇಜ್ಮೆಂಟ್ ನಡೆದು ಹೋಗಿದೆ. ಆದೀಶ್ವರ್, ಮೀನಾಕ್ಷಿ ಮತ್ತು ಕನ್ನಿಕಾ ಈ ಎಂಗೇಜ್ಮೆಂಟ್ ಯಾವುದೇ ಕಾರಣಕ್ಕೂ ಆಗಬಾರದು ಎಂದು ಪ್ಲ್ಯಾನ್ ಮಾಡಿದ್ದರು. ಆದರೆ, ರಾಮ್ದಾಸ್ ಕಾಮತ್ ಕೊಟ್ಟ ಮಾತಿನಂತೆ ಈ ನಿಶ್ಚಿತಾರ್ಥವನ್ನು ನೆರವೇರಿಸಿದ್ದಾರೆ. ಅಲ್ಲದೆ ಮೀನಾಕ್ಷಿಗೂ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದರ ಮಧ್ಯೆ ಆದೀಶ್ವರ್ ಭಾಗ್ಯ ಬಳಿ ಬಂದು ಈ ಮದುವೆ ಆಗಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದಾನೆ.
ಆದೀ- ಕನ್ನಿಕಾ ಈ ಎಂಗೇಜ್ಮೆಂಟ್ ನಿಲ್ಲಿಸಲು ಅನೇಕ ಪ್ಲ್ಯಾನ್ ಮಾಡಿದರು. ಇದಕ್ಕಾಗಿ ರಾಮ್ದಾಸ್ ತಂಗಿ ಮೀನಾಕ್ಷಿಯನ್ನು ಬರಲು ಹೇಳಿದರು. ಆದರೆ, ಮೀನಾಕ್ಷಿ ಮಾತು ರಾಮ್ದಾಸ್ ಕೇಳಲಿಲ್ಲ. ನಾನು ನಿರ್ಧಾರ ತೆಗೆದುಕೊಂಡು ಆಗಿದೆ.. ನಾನು ಅನೇಕ ಜನರ ಜೊತೆ ಬೆರೆತಿದ್ದೇನೆ.. ಯಾರು ಹೇಗೆ ಅನ್ನೋದು ನಂಗೆ ಚೆನ್ನಾಗಿ ಗೊತ್ತು.. ಕಿಶನ್ಗೆ ಪೂಜಾನೆ ಸರಿಯಾದ ಜೋಡಿ.. ನಮ್ಮ ಮನೆಗೆ ಪೂಜಾನೆ ಸರಿಯಾದ ಸೊಸೆ. ಈ ಸಂಬಂಧ ಸರಿ ಇಲ್ಲ ಅನ್ನೋದನ್ನು ಪ್ರೂವ್ ಮಾಡಿ.. ಅದು ಪ್ರೂವ್ ಆದ್ರೆ ಆ ಕ್ಷಣವೇ ಮದುವೆ ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಈ ಮೂಲಕ ಪೂಜಾ-ಕಿಶನ್ ಎಂಗೇಜ್ಮೆಂಟ್ ನಡೆದು ಹೋಗಿದೆ. ಎಲ್ಲರೂ ಹೊರಡಲು ಮುಂದಾದಾಗ ಆದೀಶ್ವರ್ ಭಾಗ್ಯ ಬಳಿ ಬಂದು, ತುಂಬಾ ಖುಷಿ ಪಡಬೇಡಿ.. ಆಗಿರೋದು ಎಂಗೇಜ್ಮೆಂಟ್ ಅಷ್ಟೇ ಮದುವೆ ಆಗುತ್ತೆ ಅನ್ನೋ ಆಸೆನ ಬಿಟ್ಟುಬಿಡಿ ಎಂದು ಹೇಳಿದ್ದಾನೆ. ಈ ಮಾತು ಕೇಳಿ ಭಾಗ್ಯಾಗೆ ಆಘಾತವಾಗಿದೆ. ಅಷ್ಟೇ ಅಲ್ಲದೆ, ಮೀನಾಕ್ಷಿ ಈ ಮದುವೆ ಹೇಗೆ ಆಗುತ್ತೆ ಅಂತ ನಾನೂ ನೋಡ್ತೀನಿ ಎಂದು ಕೋಪದಲ್ಲಿ ಹೇಳಿರುವುದು ಭಾಗ್ಯ ತಂದೆಯ ಕಿವಿಗೆ ಬಿದ್ದಿದೆ. ಈ ವಿಚಾರವನ್ನು ಅವರು ಭಾಗ್ಯಾಳಿಗೆ ಹೇಳಿದ್ದಾರೆ.
ಈ ನಿಶ್ಚಿತಾರ್ಥ ಆರಂಭ ಆದಾಗಿನಿಂದ ನಮಗೆ ಅವಮಾನ, ಕೊಂಕು ಮಾತುಗಳು ಬರೀ ಇದೇ ನಡೆಯುತ್ತಿದೆ.. ಆ ಮನೆಯಲ್ಲಿ ತುಂಬಾ ಜನಕ್ಕೆ ಈ ಮದುವೆ ಆಗಬಾರದು ಅಂತಾನೆ ಇದೆ. ಈ ಮದುವೆ ಆಗೋದು ಯಾಕೊ ಸರಿ ಕಾಣುತ್ತಿಲ್ಲ.. ಇದನ್ನ ನಿಲ್ಲಿಸಿ ಬಿಡೋಣ ಎಂದು ಭಾಗ್ಯ ಬಳಿ ಹೇಳಿದ್ದಾರೆ. ಇದು ಭಾಗ್ಯಾಗೆ ಕೂಡ ಸರಿ ಎಂದು ಕಾಣುತ್ತದೆ. ಅದರಂತೆ ಭಾಗ್ಯ ತಂದೆ ಬಂದು ಪೂಜಾ ಬಳಿ ಇದನ್ನು ಹೇಳುತ್ತಾರೆ. ಒಬ್ಬಳ ಮಗಳ ಜೀವನ ಹೀಗೆ ಆಗಿರುವುದು ಸಾಕು.. ಇನ್ನೊಬ್ಬಳ ಜೀವನ ಕೂಡ ಹಾಗೆ ಆಗೋದು ನನಗೆ ಇಷ್ಟ ಇಲ್ಲ ಎನ್ನುತ್ತಾರೆ. ಆದರೆ, ಇದು ಪೂಜಾಗೆ ತೀರಾ ನೋವು ತರಿಸಿದೆ.
ಪೂಜಾ ಅಳುತ್ತಿರುವಾಗ ಭಾಗ್ಯ ಬಂದು ಸಮಾಧಾನ ಪಡಿಸಲು ಮುಂದಾಗುತ್ತಾಳೆ. ಆದರೆ, ಪೂಜಾ ನಾನು ಮದುವೆ ಆಗೋದು ಅಂತ ಆದ್ರೆ ಅದು ಕಿಶನ್ನ ಮಾತ್ರ.. ಕಿಶನ್ನ ಬಿಟ್ಟು ಮತ್ಯಾರನ್ನೂ ನಾನು ಮದುವೆ ಆಗಲ್ಲ ಎಂದು ಹೇಳುತ್ತಾಳೆ. ಸದ್ಯ ಭಾಗ್ಯ ಕುಟುಂಬ ಮದುವೆ ಸಂಭ್ರಮವನ್ನು ಸಂಭ್ರಮಿಸಲು ಆಗುತ್ತಿಲ್ಲ.. ಒಂದೆಡೆ ಆದೀ-ಕನ್ನಿಕಾ ಈ ಮದುವೆ ನಿಲ್ಲಿಸಿಯೇ ತೀರುತ್ತೇವೆ ಎಂದಿದ್ದಾರೆ.. ಮತ್ತೊಂದೆಡೆ ಭಾಗ್ಯ ತನ್ನ ತಂಗಿಯ ಖುಷಿಗಾಗಿ ಈ ಮದುವೆ ನಡೆಸಲು ಮುಂದಾಗಿದ್ದಾಳೆ. ಮುಂದೆ ಏನೆಲ್ಲ ಆಗುತ್ತೆ ಎಂಬುದು ನೋಡಬೇಕಿದೆ.
Aishwarya Bapsure: ರಾಕೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ ಬಸ್ಪುರೆ