Rahul Gandhi: ಆಪರೇಷನ್ ಸಿಂದೂರ್ ಕುರಿತ ರಾಹುಲ್ ಗಾಂಧಿಯ ‘ಶರಣಾಗತಿ’ ಟೀಕೆಗೆ ಬಿಜೆಪಿ ತಿರುಗೇಟು
Operation Sindoor: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಶರಣಾಗತರಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಕ್ ಜತೆಗಿನ ಸಂಘರ್ಷಕ್ಕೆ ಅಂತ್ಯ ಹಾಡಿದರು ಎಂಬ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ರಾಹುಲ್ ಗಾಂಧಿಯನ್ನು “ಪ್ರಮಾದ” ಎಂದು ಕರೆದು ಎಕ್ಸ್ನಲ್ಲಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಆಪರೇಷನ್ ಸಿಂದೂರ್ (Operation Sindoor) ಮತ್ತು ಪಾಕಿಸ್ತಾನದೊಂದಿಗಿನ ಸಂಘರ್ಷದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಿಂದ ಶರಣಾಗತರಾದರು ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಕ್ಕೆ ಭಾರತೀಯ ಜನತಾ ಪಕ್ಷ (BJP) ತಿರುಗೇಟು ನೀಡಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ರಾಹುಲ್ ಗಾಂಧಿಯನ್ನು “ಪ್ರಮಾದ” ಎಂದು ಕರೆದು ಎಕ್ಸ್ನಲ್ಲಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಮಧ್ಯ ಪ್ರದೇಶದ ಭೋಪಾಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi), “ಪಾಕಿಸ್ತಾನದೊಂದಿಗಿನ ಸಂಘರ್ಷದ ವೇಳೆ ಟ್ರಂಪ್ ಅವರಿಂದ ಕರೆ ಬಂದಿತ್ತು. ತಕ್ಷಣ ನರೇಂದ್ರ ಜೀ ಶರಣಾದರು. ಇದಕ್ಕೆ ಇತಿಹಾಸವೇ ಸಾಕ್ಷಿ. ಇದು ಬಿಜೆಪಿ-ಆರ್ಎಸ್ಎಸ್ನ ಸ್ವಭಾವ. ಅವರು ಯಾವಾಗಲೂ ಶಿರಬಾಗುತ್ತಾರೆ” ಎಂದು ಹೇಳಿದ್ದರು. 1971ರಲ್ಲಿ ಕಾಂಗ್ರೆಸ್ ಸರ್ಕಾರ “ಅಮೆರಿಕದ ಬೆದರಿಕೆಯ ಹೊರತಾಗಿಯೂ ಪಾಕಿಸ್ತಾನದ ಮೇಲೆ ದಾಳಿ ಮಾಡಿತ್ತು. ಕಾಂಗ್ರೆಸ್ನ ಸಿಂಹ-ಸಿಂಹಿಣಿಯರು ಮಹಾಶಕ್ತಿಗಳ ವಿರುದ್ಧ ಹೋರಾಡುತ್ತಾರೆ, ಎಂದಿಗೂ ಶಿರಬಾಗುವುದಿಲ್ಲ” ಎಂದಿದ್ದರು.
Narendra Modi ji = Thunder 🔥
— Gaurav Bhatia गौरव भाटिया 🇮🇳 (@gauravbhatiabjp) June 3, 2025
Rahul Gandhi = Blunder 😂 pic.twitter.com/lqrBnulDmL
ಈ ಸುದಿಯನ್ನೂ ಓದಿ: Rahul Gandhi: ದೆಹಲಿ ವಿಶ್ವ ವಿದ್ಯಾಲಯಕ್ಕೆ ರಾಹುಲ್ ಗಾಂಧಿ ಭೇಟಿ ; ಕಚೇರಿಯೆದುರು ವಿದ್ಯಾರ್ಥಿಗಳ ಹೈಡ್ರಾಮಾ
ಅಮೆರಿಕದ ಪಾತ್ರದ ವಿವಾದ
ಭಾರತ ಮತ್ತು ಪಾಕಿಸ್ತಾನದಿಂದ ಅಧಿಕೃತ ಶಾಂತಿಯ ಒಪ್ಪಂದ ಘೋಷಣೆಗೂ ಮುನ್ನ, ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್ಫಾರ್ಮ್ನಲ್ಲಿ ಅಮೆರಿಕವು ತಕ್ಷಣದ ಶಾಂತಿ ಒಪ್ಪಂದಕ್ಕೆ ಪ್ರಮುಖ ಪಾತ್ರ ವಹಿಸಿತು ಎಂದು ಹೇಳಿಕೊಂಡಿದ್ದರು. ಕಳೆದ ಒಂದು ತಿಂಗಳಿಂದ ಟ್ರಂಪ್ ಮತ್ತು ಅಮೆರಿಕವು ಈ ಪ್ರದೇಶದಲ್ಲಿ ಶಾಂತಿ ತಂದಿದೆ ಎಂದು ವಾದಿಸುತ್ತಿವೆ.
ಭಾರತದ ಸ್ಪಷ್ಟನೆ
ಆದರೆ, ಭಾರತವು ಟ್ರಂಪ್ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಕದನ ವಿರಾಮ ಒಪ್ಪಂದದಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಹೇಳಿಕೆಗಳು ಇದನ್ನೇ ಪುಷ್ಟೀಕರಿಸಿವೆ. ಎರಡೂ ಕಡೆಯ ಮಿಲಿಟರಿ ಕಮಾಂಡರ್ಗಳು ನೇರ ಸಂಪರ್ಕದ ಮೂಲಕ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.