ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mallikarjun Kharge: ಸರ್ಕಾರ ದೇಶವನ್ನು ದಾರಿ ತಪ್ಪಿಸಿದೆ; ಸಿಡಿಎಸ್‌ ಚೌಹಾಣ್‌ ಹೇಳಿಕೆ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ

ಪಾಕಿಸ್ತಾನದೊಂದಿಗಿನ ಇತ್ತೀಚಿನ ಯುದ್ಧದ ಸಮಯದಲ್ಲಿ ಕೆಲವು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ , ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ದೇಶವನ್ನು ದಾರಿ ತಪ್ಪಿಸಿದೆ;  ಮಲ್ಲಿಕಾರ್ಜುನ ಖರ್ಗೆ

Profile Vishakha Bhat Jun 1, 2025 7:44 AM

ನವದೆಹಲಿ: ಪಾಕಿಸ್ತಾನದೊಂದಿಗಿನ ಇತ್ತೀಚಿನ ಯುದ್ಧದ ಸಮಯದಲ್ಲಿ ಕೆಲವು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ , ಕಾಂಗ್ರೆಸ್ ಅಧ್ಯಕ್ಷ(Mallikarjun Kharge) ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ದೇಶದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸಿಂಗಾಪುರದಲ್ಲಿ ನಡೆದ ಸಂವಾದದಲ್ಲಿ ಸಿಡಿಎಸ್ ಚೌಹಾಣ್, ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷದ ಸಮಯದಲ್ಲಿ ಭಾರತವು ಕೆಲವನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು.

ಆದರೆ ಅವರು ನಿಖರವಾದ ಸಂಖ್ಯೆಯನ್ನು ಹೇಳಿರಲಿಲ್ಲ. ಸಶಸ್ತ್ರ ಪಡೆಗಳು ಎಡವಿದ್ದನ್ನು ಸರಿಪಡಿಸಿಕೊಂಡು ಪಾಕಿಸ್ತಾನದ ಮೇಲೆ ದಾಳಿ ಮಾಡಿ ಅವರ 11 ವಾಯುನೆಲೆಗಳನ್ನು ಧ್ವಂಸ ಮಾಡಿದವು ಎಂದು ಅವರು ಹೇಳಿದ್ದರು. ಈ ಕುರಿತು ಟ್ವೀಟ್‌ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಗಾಪುರದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (ಸಿಡಿಎಸ್) ಸಂದರ್ಶನವೊಂದರಲ್ಲಿ ಮಾಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ, ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಸಂಸತ್ತಿನ ವಿಶೇಷ ಅಧಿವೇಶನವನ್ನು ತಕ್ಷಣವೇ ಕರೆದರೆ ಮಾತ್ರ ಇವುಗಳನ್ನು ಕೇಳಬಹುದು. ಮೋದಿ ಸರ್ಕಾರ ರಾಷ್ಟ್ರವನ್ನು ದಾರಿ ತಪ್ಪಿಸಿದೆ. ಯುದ್ಧದ ಮಂಜು ಈಗ ಕಡಿಮೆಯಾಗುತ್ತಿದೆ" ಖರ್ಗೆ ಹೇಳಿದ್ದಾರೆ.



ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನವು ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿತ್ತು , ಆದರೆ ಭಾರತ ಈ ಹೇಳಿಕೆಯನ್ನು ನಿರ್ಲಕ್ಷಿಸಿ, ಇವು ಮಿಲಿಟರಿ ಸಂಘರ್ಷದ ಭಾಗ ಎಂದು ಹೇಳಿತ್ತು. ನಮ್ಮ ಐಎಎಫ್ ಪೈಲಟ್‌ಗಳು ಶತ್ರುಗಳ ವಿರುದ್ಧ ಹೋರಾಡುತ್ತಾ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ನಾವು ಕೆಲವು ನಷ್ಟಗಳನ್ನು ಅನುಭವಿಸಿದ್ದೇವೆ, ಆದರೆ ನಮ್ಮ ಪೈಲಟ್‌ಗಳು ಸುರಕ್ಷಿತವಾಗಿದ್ದರು. ನಾವು ಕೆಲ ತಪ್ಪುಗಳನ್ನು ಮಾಡಿದ್ದೆವು. ಅದನ್ನು ಸರಿಪಡಿಸಿಕೊಂಡು ಮತ್ತೆ ಜೆಟ್‌ ಹಾರಿಸಿದ್ದೇವೆ ಎಂದು ಸಿಡಿಎಸ್‌ ಹೇಳಿದ್ದರು.

ಈ ಸುದ್ದಿಯನ್ನೂ ಓದಿ:ಪಕ್ಕದ ಮನೆಯ ಗೂಢಚಾರರು: ಸಾಮಾನ್ಯ ಭಾರತೀಯರು ಪಾಕಿಸ್ತಾನಿ ಐಎಸ್‌ಐ ಆಸ್ತಿಗಳಾದದ್ದು ಹೇಗೆ?

ಭಾರತದ ಆಪರೇಷನ್ ಸಿಂದೂರ್ ನಿಖರ ದಾಳಿ ಮತ್ತು ನಂತರದ ಪಾಕಿಸ್ತಾನಿ ಭಯೋತ್ಪಾದಕ ಮೂಲಸೌಕರ್ಯದ ಮೇಲಿನ ಕ್ಷಿಪಣಿ ದಾಳಿಯನ್ನು "ಸಣ್ಣ ಯುದ್ಧ" ಎಂದು ಕರೆದಿದ್ದ ಕಾಂಗ್ರೆಸ್ ಮುಖ್ಯಸ್ಥರು, ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ತಾವು ಮಧ್ಯವರ್ತಿ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಟೀಕಿಸಿದರು ಮತ್ತು ಈ ಬಗ್ಗೆ ಸರ್ಕಾರದ ಸ್ಪಷ್ಟೀಕರಣವನ್ನು ಕೋರಿದ್ದಾರೆ.