ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜುಲೈ 15ರಿಂದ ಹೊಸ ಐಆರ್‌ಸಿಟಿಸಿ ವೆಬ್‌ಸೈಟ್? ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಸಚಿವ ಅಶ್ವಿನಿ ವೈಷ್ಣವ್

ಟಿಕೆಟ್ ಬುಕ್ಕಿಂಗ್ ವೇಳೆ ಎದುರಾಗುವ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜುಲೈ 15ರಿಂದ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಹೊಸ ವೆಬ್‌ಸೈಟ್ ಅನ್ನು ಪರಿಚಯಿಸುವುದಾಗಿ ಹೇಳಿದರು. ರಾಜಸ್ಥಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಭರವಸೆ ನೀಡಿದರು.

ಶೀಘ್ರದಲ್ಲೇ ಹೊಸ  ಐಆರ್‌ಸಿಟಿಸಿ ವೆಬ್‌ಸೈಟ್ ?

ಸಂಗ್ರಹ ಚಿತ್ರ -

ರಾಜಸ್ಥಾನ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (Indian Railway Catering and Tourism Corporation) ಶೀಘ್ರದಲ್ಲೇ ಹೊಸ ಸುಧಾರಿತ ವೆಬ್‌ಸೈಟ್ (IRCTC website) ಅನ್ನು ಅನಾವರಣಗೊಳಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Union railway minister Ashwini Vaishnaw) ಅವರು ಗುರುವಾರ ಘೋಷಿಸಿದರು. ರಾಜಸ್ಥಾನದಲ್ಲಿ (Rajasthan) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಕೆಟ್ ಬುಕ್ಕಿಂಗ್ ವೇಳೆಯಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿ ಜುಲೈ 15ರಿಂದ ಹೊಸ ವೆಬ್‌ಸೈಟ್ ಅನಾವರಣಗೊಳಿಸುವುದಾಗಿ ಭರವಸೆ ನೀಡಿದರು.

ರಾಜಸ್ಥಾನದಲ್ಲಿ ವಿದ್ಯಾರ್ಥಿಗಳು ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಗುರುವಾರ ಸಂವಾದ ನಡೆಸುತ್ತಿದ್ದ ವೇಳೆ ಈಗ ಅಸ್ತಿತ್ವದಲ್ಲಿರುವ ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ; ಕೋಚ್‌ನ ಕಿಟಕಿ ಗಾಜು ಪುಡಿಪುಡಿ

ಒಬ್ಬ ವಿದ್ಯಾರ್ಥಿಯು ರೈಲ್ವೇ ಟಿಕೆಟ್ ಬುಕ್ಕಿಂಗ್ ವೇಳೆಯಲ್ಲಿ ವೆಬ್‌ಸೈಟ್‌ನ ಕ್ಯಾಪ್ಚಾ ಪರಿಶೀಲನೆಯಲ್ಲಿ ಸಮಸ್ಯೆಗಳಿವೆ. ಇದರಿಂದ ಟಿಕೆಟ್ ಬುಕ್ಕಿಂಗ್ ಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾನೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಚಿವ ವೈಷ್ಣವ್, ಸಂಬಂಧಿತ ಅಧಿಕಾರಿಗೆ ಕರೆ ಮಾಡಿ ವಿದ್ಯಾರ್ಥಿಯ ದೂರಿನ ಬಗ್ಗೆ ತಿಳಿಸಿದರು. ಇದಕ್ಕೆ 30 ದಿನಗಳಲ್ಲಿ ಪರಿಹಾರ ಸಾಧ್ಯವೇ ಎಂದು ಪ್ರಶ್ನಿಸಿದರು. ಬಳಿಕ ಅವರು ವಿದ್ಯಾರ್ಥಿಯನ್ನು ಉದ್ದೇಶಿಸಿ, ಜುಲೈ 15 ರೊಳಗೆ ಹೊಸ ಐಆರ್‌ಸಿಟಿಸಿ ವೆಬ್‌ಸೈಟ್ ಅನ್ನು ಪ್ರಾರಂಭಿಸುವುದಾಗಿ ತಿಳಿಸಿದರು.

ಸಚಿವ ಅಶ್ವಿನ್ ವೈಷ್ಣವ್ ಅವರು ಗುರುವಾರ ಜೈಪುರದ ಮಾಲವಿಯಾ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಸುಧಾರಿತ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್ ಸಂವಹನ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿದರು.

ಇದನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಐಸಿಟಿ ಶೈಕ್ಷಣಿಕ ಯೋಜನೆಯಡಿಯಲ್ಲಿ ಸ್ಥಾಪಿಸಲಾಗುವುದು. ಇದು ಕ್ವಾಂಟಮ್ ಕೀ ವಿತರಣೆ (QKD), ಕ್ವಾಂಟಮ್ ಕಂಪ್ಯೂಟಿಂಗ್ ಸಿಮ್ಯುಲೇಶನ್ ಮತ್ತು ಕ್ವಾಂಟಮ್ ಸೆನ್ಸಿಂಗ್ ಹಾರ್ಡ್‌ವೇರ್ ಘಟಕಗಳಲ್ಲಿ ಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಹೆಚ್ಚಿನ ಗಮನ ಹರಿಸಲಿದೆ ಎಂದು ತಿಳಿಸಿದರು.

ಪ್ರಸ್ತುತ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆಯಿಂದ ನಡೆಸಲಾಗುತ್ತಿದೆ. ಆದರೆ ಮುಂದೆ ಇದು ಕ್ವಾಂಟಮ್ ತಂತ್ರಜ್ಞಾನದಿಂದ ಮುನ್ನಡೆಯಲಿದೆ. ಹೀಗಾಗಿ ಈ ಯೋಜನೆಯಡಿಯಲ್ಲಿ ಕೈಗೊಳ್ಳಲಾಗುವ ಪ್ರತಿಯೊಂದು ಕೆಲಸವು ದೇಶಕ್ಕೆ ಮಹತ್ವದಾಗಿದೆ ಎಂದು ತಿಳಿಸಿದರು.

ಜೈಪುರದ ಮಾಲವಿಯಾ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿಸ್ಥಾಪನೆಯಾಗುವ ಪ್ರಯೋಗಾಲಯವು ಕ್ವಾಂಟಮ್ ಕೀ ವಿತರಣೆ (QKD) ಯಲ್ಲಿಯೂ ಸಂಶೋಧನೆ ನಡೆಸಲಿದೆ. ಇದು ರಾಷ್ಟ್ರೀಯ ಭದ್ರತಾ ದೃಷ್ಟಿಕೋನದಿಂದ ಬಹಳ ಮುಖ್ಯ. ಇದರೊಂದಿಗೆ ಎಂಎನ್‌ಐಟಿ ಜೈಪುರದ ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಅವಕಾಶವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವ ವೈಷ್ಣವ್ ಅವರು ಜೈಸಲ್ಮೇರ್‌ನ ರಾಮಗಢದಲ್ಲಿ ಆಕಾಶವಾಣಿ ಜೈಪುರ ಆವರಣದಿಂದ 20 ಕಿಲೋವ್ಯಾಟ್ ಆಕಾಶವಾಣಿ ಎಫ್‌ಎಂ ಟ್ರಾನ್ಸ್‌ಮಿಟರ್ ಅನ್ನು ಉದ್ಘಾಟಿಸಿದರು.

ಅಮೆರಿಕದೊಂದಿಗೆ ಒಪ್ಪಂದ ಇನ್ನೂ ಅಂತಿಮವಾಗಿಲ್ಲ: ಟ್ರಂಪ್ ಹೇಳಿಕೆಗೆ ಇರಾನ್‌ ತಿರುಗೇಟು

ಬಳಿಕ ಮಾತನಾಡಿದ ಅವರು, ತ್ವರಿತ ತಾಂತ್ರಿಕ ಪ್ರಗತಿಯ ಯುಗದಲ್ಲಿ ರೇಡಿಯೋ ಪ್ರಸಾರವು ಪ್ರಸ್ತುತ ಮತ್ತು ಪರಿಣಾಮಕಾರಿಯಾಗಿ ಉಳಿಯಲು ಡಿಜಿಟಲ್ ಗೂ ಮೊದಲು ಮತ್ತು ಹೈಪರ್-ಲೋಕಲ್ ವಿಧಾನವನ್ನು ಅಳವ Indian Railway Catering and Tourism Corporation Indian Railway Catering and Tourism Corporation ಡಿಸಿಕೊಳ್ಳಬೇಕು. ಸ್ಥಳೀಯ ಕಲಾವಿದರು ಮತ್ತು ಕುಶಲಕರ್ಮಿಗಳನ್ನು ಇದರೊಂದಿಗೆ ಸಂಯೋಜಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.