Operation Sindoor: ಕಾಂಗ್ರೆಸ್ ಏನನ್ನು ನಿರೀಕ್ಷಿಸುತ್ತದೆ? ಶಶಿ ತರೂರ್ ಬಿಜೆಪಿ ವಕ್ತಾರ ಎಂದ ನಾಯಕರಿಗೆ ತಿರುಗೇಟು ಕೊಟ್ಟ ಸಚಿವ ರಿಜುಜು
ಆಪರೇಷನ್ ಸಿಂದೂರ್ನಲ್ಲಿ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ತಮ್ಮದೇ ಪಕ್ಷದಿಂದಲೂ ಟೀಕೆ ಎದುರಿಸುತ್ತಿರುವ ಕಾಂಗ್ರೆಸ್ನ ಶಶಿ ತರೂರ್ಗೆ ಬಿಜೆಪಿ ಪಾಳಯದಿಂದ ಅನಿರೀಕ್ಷಿತ ಬೆಂಬಲ ಸಿಕ್ಕಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಶಶಿ ತರೂರ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.


ನವದೆಹಲಿ: ಆಪರೇಷನ್ ಸಿಂದೂರ್ನಲ್ಲಿ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ತಮ್ಮದೇ ಪಕ್ಷದಿಂದಲೂ ಟೀಕೆ ಎದುರಿಸುತ್ತಿರುವ (Operation Sindoor) ಕಾಂಗ್ರೆಸ್ನ ಶಶಿ ತರೂರ್ಗೆ (Shashi Taroor) ಬಿಜೆಪಿ ಪಾಳಯದಿಂದ ಅನಿರೀಕ್ಷಿತ ಬೆಂಬಲ ಸಿಕ್ಕಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಶಶಿ ತರೂರ್ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ತರೂರ್ ಬಿಜೆಪಿ ವಕ್ತಾರರಾಗಿ ಮಾತನಾಡುತ್ತಿದ್ದಾರೆ ಎಂಬ ಕಾಂಗ್ರೆಸ್ನ ಟೀಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಪರೇಷನ್ ಸಿಂದೂರ್ ಅನ್ನು ವಿವರಿಸಲು ಕೇಂದ್ರವು ಪ್ರಮುಖ ರಾಷ್ಟ್ರಗಳಿಗೆ ಕಳುಹಿಸಿರುವ ಸರ್ವಪಕ್ಷ ತಂಡಗಳಿಂದ ಕಾಂಗ್ರೆಸ್ ಏನನ್ನು ನಿರೀಕ್ಷೆ ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಏಳು ದೇಶಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಪನಾಮದಲ್ಲಿ ಮಾತನಾಡುತ್ತಾ, 2016 ರಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಭಾರತ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು(LOC) ಉಲ್ಲಂಘಿಸಿತು ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು. ತರೂರ್ ಅವರ ಹೇಳಿಕೆಯನ್ನು ಟ್ಯಾಗ್ ಮಾಡಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಉದಿತ್ ರಾಜ್ ಅವರು, "ನನ್ನ ಪ್ರೀತಿಯ ಶಶಿ ತರೂರ್, ಅಯ್ಯೋ! ಭಾರತಕ್ಕೆ ಇಳಿಯುವ ಮೊದಲು ನಿಮ್ಮನ್ನು ವಿದೇಶಾಂಗ ಸಚಿವ ಎಂದು ಘೋಷಿಸಲು ನಾನು ಪ್ರಧಾನಿ ಮೋದಿಯವರ ಮನವೊಲಿಸಬಲ್ಲೆ. ಆದರೆ ಪ್ರಧಾನಿ ಮೋದಿಗಿಂತ ಮೊದಲು, ಭಾರತ ಎಂದಿಗೂ ಎಲ್ಒಸಿ ಮತ್ತು ಅಂತರರಾಷ್ಟ್ರೀಯ ಗಡಿಯನ್ನು ದಾಟಿಲ್ಲ ಎಂದು ಹೇಳುವ ಮೂಲಕ ನೀವು ಕಾಂಗ್ರೆಸ್ನ ಸುವರ್ಣ ಇತಿಹಾಸವನ್ನು ಅವಮಾನಿಸಿದ್ದೀರಿ ಎಂದು ಹೇಳಿದ್ದರು.
ಈ ಹೇಳಿಕೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದೆ. ಕಾಂಗ್ರೆಸ್ನನ್ನು ತರಾಟೆಗೆ ತೆಗೆದುಕೊಂಡ ಕಿರಣ್ ರಿಜುಜು ಕಾಂಗ್ರೆಸ್ ಪಕ್ಷವು ಏನು ಬಯಸುತ್ತದೆ ಮತ್ತು ಅವರು ನಿಜವಾಗಿಯೂ ದೇಶಕ್ಕಾಗಿ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದು ಅವರ ಹೇಳಿಕೆಯಲ್ಲಿ ಗೊತ್ತಾಗುತ್ತದೆ. ಕಾಂಗ್ರೆಸ್ನ ಈ ಕೀಳು ರಾಜಕಾರಣ ಅವರನ್ನು ಇಂದು ಈ ಸ್ಥಿತಿಗೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Shashi Taroor: ಉಗ್ರರ ವಿರುದ್ಧ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ; ಅಮೆರಿಕದಲ್ಲಿ ಪಾಕ್ ವಿರುದ್ಧ ಗುಡುಗಿದ ಶಶಿ ತರೂರ್
ಪಹಲ್ಗಾಮ್ ಉಗ್ರ ದಾಳಿ ಮತ್ತು ಉಗ್ರವಾದಕ್ಕೆ ಪಾಕಿಸ್ತಾನದ ಬೆಂಬಲದ ಸತ್ಯಾಸತ್ಯತೆಯನ್ನು ಜಗತ್ತಿಗೆ ಮನವರಿಕೆ ಮಾಡಲು, ಭಾರತದ ಸರ್ವಪಕ್ಷ ಸಂಸದೀಯ ನಿಯೋಗ ವಿವಿಧ ದೇಶಗಳಿಗೆ ಭೇಟಿ ನೀಡಿದೆ.