ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಆಷಾಢ ಬುಧವಾರ ಈ ಪೂಜೆ ಮಾಡಿದರೆ ಗಣೇಶನ ಕೃಪೆ; ಜೀವನದ ವಿಘ್ನಗಳು ದೂರವಾಗುತ್ತವೆ!

ಆಷಾಢ ಮಾಸದ ಬುಧವಾರವು ಗಣೇಶ ಹಾಗೂ ಶಿವನ ಆರಾಧನೆಗೆ ಅತ್ಯಂತ ಶುಭಕರವೆಂದು ನಂಬಲಾಗಿದೆ. ಈ ದಿನ ವಿಶೇಷ ಪೂಜೆ, ಅಭಿಷೇಕ, ಮಂತ್ರ ಜಪ ಹಾಗೂ ಧಾರ್ಮಿಕ ಆಚರಣೆಗಳನ್ನು ಭಕ್ತಿಯಿಂದ ಪಾಲಿಸಿದರೆ ವಿಘ್ನಗಳು ದೂರಾಗಿ, ಸುಖ-ಸಮೃದ್ಧಿ, ಯಶಸ್ಸು ಮತ್ತು ಮನೋಕಾಮನೆಗಳ ಈಡೇರಿಕೆ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ಆಷಾಢ ಮಾಸದ ಬುಧವಾರ ಶಿವ-ಗಣೇಶ ಆರಾಧನೆಯಿಂದ ಸಿಗಲಿದೆ ಶುಭಫಲ

ಜ್ಯೋತಿಷ್ಯ ಶಾಸ್ತ್ರ -

Profile
Sushmitha Jain Jul 15, 2026 10:21 AM

ಬೆಂಗಳೂರು: ಹಿಂದೂ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವೂ ಒಂದೊಂದು ದೇವರಿಗೆ ಸಮರ್ಪಿತವಾಗಿದೆ. ಅದರಂತೆ ಬುಧವಾರವನ್ನು ವಿಘ್ನನಿವಾರಕ, ಬುದ್ಧಿವಂತಿಕೆ, ವಿದ್ಯೆ ಮತ್ತು ಶುಭಕಾರ್ಯಗಳ ಅಧಿಪತಿಯಾದ ಶ್ರೀ ಗಣೇಶನ ಆರಾಧನೆಗೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಪವಿತ್ರ ಆಷಾಢ ಮಾಸ ನಡೆಯುತ್ತಿದ್ದು, ಈ ಮಾಸದಲ್ಲಿ ಶಿವ ಮತ್ತು ಗಣೇಶನ ಆರಾಧನೆಗೆ ವಿಶೇಷ ಮಹತ್ವವಿದೆ ಎಂದು ಪುರಾಣಗಳು ಹಾಗೂ ಧಾರ್ಮಿಕ ನಂಬಿಕೆಗಳು ತಿಳಿಸುತ್ತವೆ. ಶಿವನ ಅನುಗ್ರಹವಿಲ್ಲದೆ ಗಣೇಶನ ಕೃಪೆ ಸಂಪೂರ್ಣವಾಗುವುದಿಲ್ಲ ಎಂಬ ನಂಬಿಕೆಯೂ ಇದೆ.

ಆಷಾಢ ಮಾಸದ ಬುಧವಾರದಂದು ಭಕ್ತಿಯಿಂದ ಗಣೇಶ ಮತ್ತು ಶಿವನನ್ನು ಪೂಜಿಸಿ, ಕೆಲವು ವಿಶೇಷ ಮಂತ್ರಗಳನ್ನು ಜಪಿಸಿ ಹಾಗೂ ಸರಳ ಧಾರ್ಮಿಕ ಆಚರಣೆಗಳನ್ನು ಪಾಲಿಸಿದರೆ ಜೀವನದಲ್ಲಿರುವ ವಿಘ್ನಗಳು ದೂರಾಗಿ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ, ಆರ್ಥಿಕ ಪ್ರಗತಿ ಉಂಟಾಗುತ್ತದೆ ಮತ್ತು ಮನೋಕಾಮನೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಹಾಗಾದರೆ, ಆಷಾಢ ಮಾಸದ ಬುಧವಾರದಂದು ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಗಣೇಶನ ಕೃಪೆಗೆ ಪಾತ್ರರಾಗಲು ಯಾವ ಪೂಜೆ, ಮಂತ್ರ ಮತ್ತು ಪರಿಹಾರಗಳನ್ನು ಮಾಡಬೇಕು ಎಂಬುದನ್ನು ತಿಳಿಯೋಣ.

ಬುಧವಾರ ಈ ಮಂತ್ರವನ್ನು ಜಪಿಸಿ

ಆಷಾಢ ಬುಧವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಶಿವಲಿಂಗಕ್ಕೆ ಗಂಗಾಜಲ ಹಾಗೂ ಶಮಿ ಎಲೆಗಳಿಂದ ಅಭಿಷೇಕ ಮಾಡಿ. ನಂತರ ಕೆಳಗಿನ ಮಂತ್ರವನ್ನು 21 ಬಾರಿ ಭಕ್ತಿಯಿಂದ ಜಪಿಸಿ.

ಮಂತ್ರ: "ಓಂ ಪೂರ್ವಕಪಿಮುಖಾಯ ಪಚ್ಚಮುಖ ಹನುಮತೇ ಟಂ ಟಂ ಟಂ ಟಂ ಟಂ ಸಕಲ ಶತ್ರು ಸಂಹಾರಣಾಯ ಸ್ವಾಹಾ॥"

ಧಾರ್ಮಿಕ ನಂಬಿಕೆಯ ಪ್ರಕಾರ, ಈ ಮಂತ್ರ ಜಪಿಸುವುದರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ ಹಾಗೂ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ.

ಶಿವಲಿಂಗಕ್ಕೆ ಜೇನುತುಪ್ಪದಿಂದ ಅಭಿಷೇಕ ಮಾಡಿ

ದಾಂಪತ್ಯ ಜೀವನದಲ್ಲಿ ಕಲಹ ಅಥವಾ ಮನಸ್ತಾಪ ಇದ್ದರೆ, ಬುಧವಾರದಂದು ಪತಿ-ಪತ್ನಿ ಸೇರಿ ನೀರಿನಲ್ಲಿ ಜೇನುತುಪ್ಪ ಮತ್ತು ಸುಗಂಧ ದ್ರವ್ಯ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಶುಭಕರವೆಂದು ಹೇಳಲಾಗಿದೆ. ಇದರಿಂದ ಪರಸ್ಪರ ಪ್ರೀತಿ, ನಂಬಿಕೆ ಮತ್ತು ಹೊಂದಾಣಿಕೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

Astro Tips: ಆಷಾಢದಲ್ಲಿ ತುಳಸಿ ಪೂಜೆ ಹೀಗೆ ಮಾಡಿ; ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ

ಗಣೇಶ ಚಾಲೀಸಾ ಮತ್ತು ಸ್ತೋತ್ರ ಪಠಿಸಿ

ಬುಧವಾರದಂದು ಕನಿಷ್ಠ 11 ಬಾರಿ ಗಣೇಶ ಚಾಲೀಸಾ ಹಾಗೂ ಗಣೇಶ ಸ್ತೋತ್ರವನ್ನು ಪಠಿಸುವುದು ಅತ್ಯಂತ ಫಲಪ್ರದ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಭಕ್ತಿಯಿಂದ ಈ ಪಠಣ ಮಾಡಿದರೆ ವಿಘ್ನಗಳು ನಿವಾರಣೆಯಾಗಿ, ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ.

ಶಿವನಿಗೆ ಹಾಲು ಮತ್ತು ಕುಂಕುಮದಿಂದ ಅಭಿಷೇಕ ಮಾಡಿ

ಗಣೇಶನ ಜೊತೆಗೆ ಆತನ ತಂದೆಯಾದ ಭಗವಾನ್ ಶಿವನ ಆರಾಧನೆ ಮಾಡಿದರೆ ಹೆಚ್ಚಿನ ಪುಣ್ಯ ಫಲ ದೊರೆಯುತ್ತದೆ ಎಂದು ನಂಬಲಾಗಿದೆ. ಬುಧವಾರದಂದು ಶಿವಲಿಂಗಕ್ಕೆ ಹಾಲಿನಲ್ಲಿ ಸ್ವಲ್ಪ ಕುಂಕುಮ ಬೆರೆಸಿ ಅಭಿಷೇಕ ಮಾಡಿದರೆ ಮನೋಕಾಮನೆಗಳು ಈಡೇರುತ್ತವೆ ಹಾಗೂ ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಗಣೇಶನಿಗೆ ದುರ್ವೆ ಮತ್ತು ಮೋದಕ ಅರ್ಪಿಸಿ

ಬುಧವಾರದಂದು ಗಣೇಶನಿಗೆ 21 ದುರ್ವೆ ಹುಲ್ಲುಗಳು, ಕೆಂಪು ಹೂವು ಮತ್ತು ಮೋದಕ ಅಥವಾ ಲಡ್ಡು ನೈವೇದ್ಯವಾಗಿ ಅರ್ಪಿಸಿ. ದುರ್ವೆ ಗಣೇಶನಿಗೆ ಅತ್ಯಂತ ಪ್ರಿಯವಾದ ಕಾರಣ, ಇದರಿಂದ ವಿಘ್ನಗಳು ದೂರಾಗಿ ಐಶ್ವರ್ಯ ಮತ್ತು ಶುಭಫಲಗಳು ಲಭಿಸುತ್ತವೆ ಎಂಬ ನಂಬಿಕೆ ಇದೆ.

ಹಸುವಿಗೆ ಹಸಿರು ಹುಲ್ಲು ದಾನ ಮಾಡಿ

ಬುಧವಾರವು ಬುಧ ಗ್ರಹದ ದಿನವೂ ಆಗಿರುವುದರಿಂದ ಹಸಿರು ಬಣ್ಣಕ್ಕೆ ವಿಶೇಷ ಮಹತ್ವವಿದೆ. ಈ ದಿನ ಹಸುವಿಗೆ ಹಸಿರು ಹುಲ್ಲು ಅಥವಾ ಹಸಿರು ತರಕಾರಿಗಳನ್ನು ದಾನ ಮಾಡಿದರೆ ಬುಧ ಗ್ರಹದ ಅನುಗ್ರಹ ದೊರೆತು ಶಿಕ್ಷಣ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡುಬರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಬಡವರಿಗೆ ದಾನ ಮಾಡಿ

ಆಷಾಢ ಬುಧವಾರದಂದು ಅಗತ್ಯವಿರುವವರಿಗೆ ಹಸಿರು ಬಟ್ಟೆ, ಹೆಸರುಕಾಳು, ಹಣ್ಣು ಅಥವಾ ಆಹಾರ ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ದಾನದಿಂದ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.