ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸದನ ಪರಂಪರೆಗೆ ಕಪ್ಪುಚುಕ್ಕೆ

ಈ ಬಾರಿಯ ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿಗಿದ್ದ ಹತ್ತಾರು ವಿಷಯಗಳ ‘ಪ್ರಸ್ತಾಪ’ವೂ ಆಗಲಿಲ್ಲ. ಜತೆಗೆ ಕಳೆದ 3 ದಿನಗಳಿಂದ ವಿಧಾನಸಭೆಯ ಕಲಾಪ ಹನಿಟ್ರ್ಯಾಪ್ ವಿಷಯದ ಸುತ್ತಲೇ ಗಿರಕಿ ಹೊಡೆದಿದೆ. ಮೊದಲ ದಿನ ಸುನೀಲ್‌ಕುಮಾರ್ ಸೇರಿ ಕೆಲ ಶಾಸಕರು ವಿಷಯ ಪ್ರಸ್ತಾಪಿಸಿ ಕೈಬಿಟ್ಟರೆ, ಎರಡನೇ ದಿನ ಸಹಕಾರ ಸಚಿವ ರಾಜಣ್ಣ ಅವರೇ, ತಮ್ಮ ಮೇಲಿನ ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿ ತನಿಖೆ ನಡೆಸಲು ಆಗ್ರಹಿಸಿದರು

ಸದನ ಪರಂಪರೆಗೆ ಕಪ್ಪುಚುಕ್ಕೆ

Profile Ashok Nayak Mar 22, 2025 6:08 AM

ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಹಾಗೂ ಗೌರವಯುತ ಸ್ಥಾನವಿದೆ. ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ರಾಜ್ಯಗಳಲ್ಲಿನ ಸಂಸದೀಯ ವ್ಯವಸ್ಥೆಗೆ ಹೋಲಿಸಿ ದರೆ ಕರ್ನಾಟಕದ ಸಂಸದೀಯ ವ್ಯವಸ್ಥೆ ಮೇಲುಸ್ತರದಲ್ಲಿದೆ ಎನ್ನುವುದು ಎಲ್ಲರ ಭಾವನೆಯಾಗಿತ್ತು. ನಾಡು, ನುಡಿ, ಜನರ ವಿಷಯ ಬಂದಾಗ ಅದೆಷ್ಟೋ ಬಾರಿ ‘ಪಕ್ಷಾತೀತ’ ತೀರ್ಮಾನಗಳು, ಚರ್ಚೆಗಳು ನಡೆದಿರುವ ಇತಿಹಾಸ ಕರ್ನಾಟಕದ ವಿಧಾನಸಭೆಗಿದೆ. ಆದರೆ ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ದಲ್ಲಿ ನಡೆದ ಒಟ್ಟು ಕಲಾಪವನ್ನು ಪರಿಗಣಿಸಿದರೆ ಜನರ ಸಮಸ್ಯೆಗಿಂತಲೂ ಸವಾಲು-ಪ್ರತಿ ಸವಾ ಲು, ಗದ್ದಲಗಳಿಗೆ ಹೆಚ್ಚು ಸಮಯ ವ್ಯಯವಾಗಿದೆ. ಆರಂಭ ದ ಕೆಲ ದಿನ ಬಜೆಟ್ ಮೇಲಿನ ಚರ್ಚೆ ಆರಂಭಿಸಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತ ನಾಡಿದ್ದ ನಾಯಕರು ಬಳಿಕ ಸವಾಲು, ರಾಜಕೀಯ ಹೋರಾಟಕ್ಕೆ ಸೀಮಿತಗೊಳಿಸಿಕೊಂಡಿದ್ದು ವಿಪರ್ಯಾಸ.

ಈ ಬಾರಿಯ ಅಧಿವೇಶನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿಗಿದ್ದ ಹತ್ತಾರು ವಿಷಯಗಳ ‘ಪ್ರಸ್ತಾಪ’ವೂ ಆಗಲಿಲ್ಲ. ಜತೆಗೆ ಕಳೆದ 3 ದಿನಗಳಿಂದ ವಿಧಾನಸಭೆಯ ಕಲಾಪ ಹನಿಟ್ರ್ಯಾಪ್ ವಿಷಯದ ಸುತ್ತಲೇ ಗಿರಕಿ ಹೊಡೆದಿದೆ. ಮೊದಲ ದಿನ ಸುನೀಲ್‌ಕುಮಾರ್ ಸೇರಿ ಕೆಲ ಶಾಸಕರು ವಿಷಯ ಪ್ರಸ್ತಾಪಿಸಿ ಕೈಬಿಟ್ಟರೆ, ಎರಡನೇ ದಿನ ಸಹಕಾರ ಸಚಿವ ರಾಜಣ್ಣ ಅವರೇ, ತಮ್ಮ ಮೇಲಿನ ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿ ತನಿಖೆ ನಡೆಸಲು ಆಗ್ರಹಿಸಿದರು.

ಇದನ್ನೂ ಓದಿ: Vishwavani Editorial: ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ

ಇದಕ್ಕೆ ಪೂರಕವಾಗಿ, ಗೃಹ ಸಚಿವ ಪರಮೇಶ್ವರ್ ‘ಉನ್ನತ’ ಮಟ್ಟದ ತನಿಖೆಗೆ ಭರವಸೆ ನೀಡಿ, ವಿಷಯಕ್ಕೆ ತೆರೆ ಹಾಡುವ ಪ್ರಯತ್ನ ಮಾಡಿದ್ದರು. ಆದರೆ ಶುಕ್ರವಾರ ಈ ವಿಷಯವನ್ನು ಮುಂದಿ ಟ್ಟುಕೊಂಡು ಬಿಜೆಪಿಗರು ಶುರುಮಾಡಿದ ಹೋರಾಟ-ಹಾರಾಟ ಬಳಿಕ ಬಾವಿಗಿಳಿದು ನಡೆಸಿದ ಪ್ರತಿ ಭಟನೆ, ಸ್ಪೀಕರ್ ಕುರ್ಚಿಯತ್ತ ಸದಸ್ಯ ನುಗ್ಗಿದ್ದು, ಆಡಳಿತ-ಪ್ರತಿಪಕ್ಷ ಶಾಸಕರ ನಡುವೆ ಕೈಕೈ ಮಿಲಾ ಯಿಸುವ ಹಂತಕ್ಕೆ ವಿಷಯ ತೆಗೆದುಕೊಂಡು ಹೋಗಿದ್ದು, ಕೊನೆಯಲ್ಲಿ 18 ಶಾಸಕರ ಅಮಾ ನತು ಕರ್ನಾಟಕ ಸಂಸದೀಯ ವ್ಯವಸ್ಥೆಯಲ್ಲಿಯೇ ಕಪ್ಪು ಚುಕ್ಕಿ ಎನ್ನಲಡ್ಡಿಯಿಲ್ಲ. ಆದರೆ ಈ ಎಲ್ಲದರ ನಡುವೆ ಶಾಸಕರ ವೇತನ ಹೆಚ್ಚಿಸಿಕೊಳ್ಳುವ ವಿಷಯದಲ್ಲಿ ಮಾತ್ರ ಎಲ್ಲರೂ ‘ಮೌನ ಒಪ್ಪಿಗೆ’ ನೀಡಿದ್ದಾರೆ,

ಒಂದೆಡೆ ಜನರ ಕಣ್ಣಿಗೆ ಮಣ್ಣೆರಚುವ ಹೊಂದಾಣಿಕೆ ರಾಜಕೀಯ, ಇನ್ನೊಂದೆಡೆ ಆರ್ಥಿಕ ಸಂಕ ಷ್ಟದ ನಡುವೆ ಸಂಬಳ,ಭತ್ಯೆ ದುಪ್ಪಟ್ಟು ನಿರ್ಧಾರ ಕರ್ನಾಟಕದ ಮಾದರಿ ಸಂಸದೀಯ ಪರಂಪರೆಗೆ ಕಳಂಕ ತಂದಿದೆ.