ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇತಿಮಿತಿಯ ನಡುವಿನ ರಾಜ್ಯ ಬಜೆಟ್

1995ರಲ್ಲಿ ಅವರು ಮೊದಲ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದಾಗ ಅದರ ಗಾತ್ರವು ಕೇವಲ 12 ಸಾವಿರ ಕೋಟಿ ರು. ಇತ್ತು. ಕಳೆದ ವರ್ಷ ಸಾಲ 1,05,246 ಕೋಟಿ ರು. ಆಗಿದ್ದು, ಈ ವರ್ಷ 1,16,000 ಕೋಟಿ ರು. ಸಾಲವಷ್ಟೇ ಏರಿರುವುದು ಎಂಬುದು ಗಮನಾರ್ಹ ವಿಷಯ. ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆಯ ಪ್ರಕಾರ ಒಂದು ರಾಜ್ಯದ ಬಜೆಟ್ ಜಿಎಸ್‌ಡಿಪಿಯ ಶೇ. 25ರೊಳಗೆ ಸಾಲದ ಪ್ರಮಾಣ ಇರಬೇಕು, ಈ ಬಜೆಟ್‌ನಲ್ಲಿ ಶೇ.24.91 ಸಾಲ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ತಮ್ಮ ಸಮರ್ಥನೆಯನ್ನೂ ಮಾಡಿದ್ದಾರೆ

ಇತಿಮಿತಿಯ ನಡುವಿನ ರಾಜ್ಯ ಬಜೆಟ್

Profile Ashok Nayak Mar 8, 2025 10:03 AM

ವಿಧಾನಸಭೆಯಲ್ಲಿ ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ದಾಖಲೆಯ ಬಜೆಟ್‌ಗೆ ಪ್ರತೀ ಬಜೆಟ್‌ನಂತೆ ಈ ಸಲ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸ್ವಾಭಾವಿಕ. 4.09ಲಕ್ಷ ಕೋಟಿಯ ರು.ದಾಖಲೆಯ ರಾಜ್ಯ ಬಜೆಟ್ ಇದಾಗಿದ್ದು, ಈ ಮುಂಗಡ ಪತ್ರವು ಶೋಷಿತರ, ದೀನ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ಹೆಚ್ಚಿನ ಗಮನ ಹರಿಸಿದೆ ಎಂಬುದು ಒಂದೇ ನೋಟಕ್ಕೆ ಅನಿಸಿದರೂ ಇತರ ವಲಯದ ಬೇಡಿಕೆಗಳನ್ನೂ ಚಿಕ್ಕ ಪ್ರಮಾಣದಲ್ಲಿ ಈಡೇರಿಸುವಲ್ಲಿ ಸಿದ್ಧರಾಮಯ್ಯ ಚಾಕಚಕ್ಯತೆ ಮೆರೆದಿದ್ದಾರೆ. 1995ರಲ್ಲಿ ಅವರು ಮೊದಲ ಬಾರಿಗೆ ರಾಜ್ಯ ಬಜೆಟ್ ಮಂಡಿಸಿ ದಾಗ ಅದರ ಗಾತ್ರವು ಕೇವಲ 12 ಸಾವಿರ ಕೋಟಿ ರು. ಇತ್ತು. ಕಳೆದ ವರ್ಷ ಸಾಲ 1,05,246 ಕೋಟಿ ರು. ಆಗಿದ್ದು, ಈ ವರ್ಷ 1,16,000 ಕೋಟಿ ರು. ಸಾಲವಷ್ಟೇ ಏರಿರುವುದು ಎಂಬುದು ಗಮನಾರ್ಹ ವಿಷಯ.

ಇದನ್ನೂ ಓದಿ: Vishwavani Editorial: ದರ ಏರಿಕೆಯೊಂದೇ ಪರಿಹಾರವಲ್ಲ

ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆಯ ಪ್ರಕಾರ ಒಂದು ರಾಜ್ಯದ ಬಜೆಟ್ ಜಿಎಸ್‌ಡಿಪಿಯ ಶೇ.25ರೊಳಗೆ ಸಾಲದ ಪ್ರಮಾಣ ಇರಬೇಕು, ಈ ಬಜೆಟ್‌ನಲ್ಲಿ ಶೇ.24.91 ಸಾಲ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ತಮ್ಮ ಸಮರ್ಥನೆಯನ್ನೂ ಮಾಡಿದ್ದಾರೆ.

ಕೇಂದ್ರ ಸರಕಾರಕ್ಕೆ ಹೋಲಿಸಿದರೆ ರಾಜ್ಯ ಸರಕಾರದ ವಿತ್ತೀಯ ಕೊರತೆ ತುಂಬಾ ಕಡಿಮೆ ಎಂದೂ ಹೇಳಿದ್ದಾರೆ. ಗ್ಯಾರಂಟಿ ಗಳನ್ನು ಜಾರಿ ಮಾಡಿದಾಗ ರಾಜ್ಯವು ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದ್ದರೂ ವಿತ್ತೀಯ ಶಿಸ್ತನ್ನು ಕಾಪಾಡಲು ನಮ್ಮಿಂದ ಸಾಧ್ಯವಾಗಿದೆ ಎಂದು ಸಿದ್ಧರಾಮಯ್ಯ ಬಜೆಟ್ ಮಂಡನೆಯ ವೇಳೆ ತಿರುಗೇಟು ನೀಡಿದ್ದಾರೆ. 2025-26ನೇ ಸಾಲಿನ ಒಟ್ಟು 2,92,477 ಕೋಟಿ ರು.ಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದ್ದು, ಇದರಲ್ಲಿ 208 000 ಕೋಟಿ ರು.ಗಳ ರಾಜ್ಯ ತೆರಿಗೆ ರಾಜಸ್ವ, 16,500 ಕೋಟಿ ರು.ಗಳ ಸ್ವಂತ ತೆರಿಗೇತರ ರಾಜಸ್ವ ಮತ್ತು ಕೇಂದ್ರ ಸರಕಾರದ ಸ್ವೀಕೃತಿ 67,877 ಕೋಟಿ ರು. ಸೇರಿವೆ ಎಂದು ಬಜೆಟ್ ಭಾಷಣದಲ್ಲಿ ಸ್ವತಃ ಆರ್ಥಿಕ ತಜ್ಞರೂ ಆಗಿರುವ ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯದ ಆರು ಆದ್ಯತಾ ವಲಯಗಳಾದ ಕಲ್ಯಾಣ ಕಾರ್ಯಕ್ರಮ, ಕೃಷಿ-ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮೂಲ ಸೌಕರ್ಯ, ಹೂಡಿಕೆ ಮತ್ತು ಉದ್ಯೋಗ ಸೃಜನೆಗೂ ತಕ್ಕ ಮಟ್ಟಿಗಿನ ಪ್ರಾಮುಖ್ಯತೆ ನೀಡಿದ್ದಾರೆ ಎಂಬುದೂ ಉಲ್ಲೇಖಾರ್ಹ ವಿಷಯ.