ಗೆಲುವನ್ನು ರಸ್ತೆ ಅಪಘಾತದಲ್ಲಿ ಮಡಿದ ಅಭಿಮಾನಿಗಳಿಗೆ ಅರ್ಪಿಸಿದ ಅಕ್ಷರ್ ಪಟೇಲ್
IPL 2026: ಕಳೆದ ವಾರ ದೆಹಲಿಯಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಮನೆಗೆ ಮರಳುತ್ತಿದ್ದ ಇಬ್ಬರು ಸೋದರಸಂಬಂಧಿಗಳಾದ ಯಜ್ಞ ಭಾಟಿಯಾ (20) ಮತ್ತು ಅಭವ್ ಭಾಟಿಯಾ (14) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರಿಬ್ಬರೂ ಬೈಕ್ ಸವಾರಿ ಮಾಡುತ್ತಿದ್ದಾಗ ಮಧ್ಯ ದೆಹಲಿಯ ಅಶೋಕ ರಸ್ತೆಯಲ್ಲಿ ಹಿಟ್ ಅಂಡ್ ರನ್ ಘಟನೆ ಸಂಭವಿಸಿತ್ತು.
Axar Patel -
ಜೈಪುರ, ಮೇ 2: ರಾಜಸ್ಥಾನ್ ರಾಯಲ್ಸ್(RR vs DC) ವಿರುದ್ಧದ ಗೆಲವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್(Axar Patel), ದೆಹಲಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಇಬ್ಬರು ಅಭಿಮಾನಿಗಳಿಗೆ ಅರ್ಪಿಸಿದರು. ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಅಕ್ಷರ್ ದುರಂತವನ್ನು ಉದ್ದೇಶಿಸಿ ಗೌರವ ಸಲ್ಲಿಸಿದರು. ಅಭಿಮಾನಗಳ ಸಾವಿಗೆ ಗೌರವ ಸೂಚಿಸುವ ಸಲುವಾಗಿ ಡೆಲ್ಲಿ ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು.
"ಕಳೆದ ಪಂದ್ಯದ ನಂತರ ನಮ್ಮ ಅಭಿಮಾನಿಗಳಿಗೆ ಆದ ದುರಂತದ ನಂತರ, ಅವರ ಸಾವಿಗೆ ಆಳವಾದ ಸಂತಾಪವನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಈ ಗೆಲುವನ್ನು ಅವರಿಗೆ ಅರ್ಪಿಸಲು ನಾನು ಬಯಸುತ್ತೇನೆ. ಅವರು ನಮ್ಮ ಡಿಸಿ ಕುಟುಂಬದ ಇಬ್ಬರು ಸದಸ್ಯರು" ಎಂದು ಹೇಳಿ ಅಕ್ಷರ್ ಭಾವುಕರಾದರು.
𝗛𝗲𝗮𝗿𝘁𝗯𝗿𝗼𝗸𝗲𝗻. 𝗧𝗵𝗲𝗿𝗲 𝗮𝗿𝗲 𝗻𝗼 𝘄𝗼𝗿𝗱𝘀.
— Delhi Capitals (@DelhiCapitals) April 30, 2026
We mourn the tragic loss of Abhav (14) and Yagya Bhatia (20), members of the DC Toli.
They have been in the stands with us, cheering for Dilli. Today, we stand with their families and loved ones in this moment of… pic.twitter.com/Hp8iY3IXqL
ಕಳೆದ ವಾರ ದೆಹಲಿಯಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಮನೆಗೆ ಮರಳುತ್ತಿದ್ದ ಇಬ್ಬರು ಸೋದರಸಂಬಂಧಿಗಳಾದ ಯಜ್ಞ ಭಾಟಿಯಾ (20) ಮತ್ತು ಅಭವ್ ಭಾಟಿಯಾ (14) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರಿಬ್ಬರೂ ಬೈಕ್ ಸವಾರಿ ಮಾಡುತ್ತಿದ್ದಾಗ ಮಧ್ಯ ದೆಹಲಿಯ ಅಶೋಕ ರಸ್ತೆಯಲ್ಲಿ ಹಿಟ್ ಅಂಡ್ ರನ್ ಘಟನೆ ಸಂಭವಿಸಿತ್ತು.
ಪೊಲೀಸರ ಪ್ರಕಾರ, ಮಹಾದೇವ್ ರಸ್ತೆಯ ಟಿ-ಪಾಯಿಂಟ್ ಬಳಿ ಟ್ರಕ್ ತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಬಿಎಸ್ಸಿ ವಿದ್ಯಾರ್ಥಿನಿ ಯಜ್ಞ ಮತ್ತು 10 ನೇ ತರಗತಿ ವಿದ್ಯಾರ್ಥಿ ಅಭವ್ ಇಬ್ಬರೂ ಅಶೋಕ್ ನಗರದ ನಿವಾಸಿಗಳಾಗಿದ್ದು, ಡೆಲ್ಲಿ ತಂಡದ ಅಭಿಮಾನಿಗಳಾಗಿದ್ದರು.
RR vs DC: ಧೋನಿಯಂತೆ ಐದು ಟ್ರೋಫಿ ಗೆಲ್ಲಬೇಕು ಎಂದ ಕೆ.ಎಲ್ ರಾಹುಲ್
ಪ್ಲೇ ಆಪ್ ಪ್ರವೇಶದ ನಿಟ್ಟಿನಲ್ಲಿ ಆರ್ಆರ್ ವಿರುದ್ಧ ಡಿಸಿ ತಂಡವು ಗಳಿಸಿದ ಗೆಲುವು ಅತ್ಯಂತ ಮಹತ್ವದ್ದಾಗಿತ್ತು ಮತ್ತು ಸಮಯೋಚಿತವಾಗಿತ್ತು. 226 ರನ್ಗಳ ಗುರಿಯನ್ನು ಬೆನ್ನಟ್ಟಿದ ಅವರು, ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್ ಚೇಸ್ ಅನ್ನು ಪೂರ್ಣಗೊಳಿಸಿದರು. ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿದರು ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 264 ರನ್ಗಳನ್ನು ರಕ್ಷಿಸುವಲ್ಲಿ ವಿಫಲವಾದ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 75 ರನ್ಗಳಿಗೆ ಆಲೌಟ್ ಆಗಿದ್ದ ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿದರು.