ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ತಂಡದ ನಾಯಕತ್ವದ ರೇಸ್‌ನಲ್ಲಿ ಶ್ರೇಯಸ್‌ ಅಯ್ಯರ್‌! ಅಧಿಕಾರಿ ಹೇಳಿದ್ದೇನು?

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದ ಸಾಮರ್ಥ್ಯವನ್ನು ಬಿಸಿಸಿಐ ಪರಿಶೀಲಿಸುತ್ತಿದೆ ಹಾಗೂ ಭಾರತ ವೈಟ್‌ಬಾಲ್‌ ತಂಡದ ನಾಯಕತ್ವದ ರೇಸ್‌ಗೆ ಅವರು ಮರಳಿದ್ದಾರೆಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ತಂಡದ ನಾಯಕತ್ವದ ರೇಸ್‌ನಲ್ಲಿ ಶ್ರೇಯಸ್‌ ಅಯ್ಯರ್!

ಭಾರತ ತಂಡದ ನಾಯಕತ್ವದ ರೇಸ್‌ಗೆ ಮರಳಿದ ಶ್ರೇಯಸ್‌ ಅಯ್ಯರ್‌!

Profile Ramesh Kote Jun 7, 2025 8:39 PM

ನವದೆಹಲಿ: ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಫೈನಲ್‌ನಲ್ಲಿ ಸೋತರೂ, ಭಾರತೀಯ ಕ್ರಿಕೆಟ್‌ನಲ್ಲಿ ಅವರ ಸ್ಥಾನಮಾನ ಹೆಚ್ಚಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್‌ಗೂ ಮುನ್ನ ಬಿಸಿಸಿಐನ ದೊಡ್ಡ ಅಧಿಕಾರಿಯೊಬ್ಬರು ಅಯ್ಯರ್ ಅವರ ಭವಿಷ್ಯದ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದರು. ಸದ್ಯ ಶ್ರೇಯಸ್‌ ಅಯ್ಯರ್‌ ಸದ್ಯ ಭಾರತ ಏಕದಿನ (Indian Cricket Team) ತಂಡದಲ್ಲಿ ಆಡುತ್ತಿದ್ದಾರೆ. ಆದರೆ, ಐಪಿಎಲ್‌ ಟೂರ್ನಿಯ ಯಶಸ್ಸಿನ ಬಳಿಕ ಅವರನ್ನು ಟಿ20 ಮತ್ತು ಟೆಸ್ಟ್‌ ತಂಡದಿಂದ ದೂರವಿಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಭಾರತ ವೈಟ್‌ಬಾಲ್‌ ತಂಡದ ನಾಯಕತ್ವವನ್ನು ಅಯ್ಯರ್‌ಗೆ ನೀಡಲು ಕೂಡ ಚಿಂತಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ ಒಂದು ವರ್ಷದ ಹಿಂದೆ ಶ್ರೇಯಸ್ ಅಯ್ಯರ್ ಬಿಸಿಸಿಐನ ಯಾವುದೇ ಕೇಂದ್ರ ಒಪ್ಪಂದವನ್ನು ಹೊಂದಿರಲಿಲ್ಲ. ಅವರನ್ನು ಟೆಸ್ಟ್ ಮತ್ತು ಟಿ20ಐ ತಂಡದಿಂದ ಕೈಬಿಡಲಾಗಿತ್ತು. ಆದರೆ, 2024ರಲ್ಲಿ ಇವರ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಐಪಿಎಲ್ ಗೆದ್ದಿತ್ತು. ಇದಾದ ಬಳಿಕ ಅವರು ಕೆಕೆಆರ್‌ ತಂಡವನ್ನು ತೊರೆದಿದ್ದರು. ಅವರ ಫಿಟ್ನೆಸ್, ಫಾರ್ಮ್ ಮತ್ತು ಮನೋಧರ್ಮದ ಬಗ್ಗೆ ಪ್ರಶ್ನೆಗಳು ಎದ್ದವು. ಆದರೆ, ಅಯ್ಯರ್ ಮುಂಬೈ ಪರ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರು. ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದರು.

IND vs ENG: ಯಶಸ್ವಿ ಜೈಸ್ವಾಲ್‌ ಜೊತೆ ಸಾಯಿ ಸುದರ್ಶನ್‌ ಇನಿಂಗ್ಸ್‌ ಆರಂಭಿಸಬೇಕೆಂದ ರಿಕಿ ಪಾಂಟಿಂಗ್‌!

ಪಂಜಾಬ್ ಕಿಂಗ್ಸ್‌ನಲ್ಲಿ ಅವಕಾಶ

ನಂತರ ಪಂಜಾಬ್ ಕಿಂಗ್ಸ್ ಅವರಿಗೆ ಅವಕಾಶ ನೀಡಿತು. ತಮ್ಮ ನಾಯಕತ್ವದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಕಿಂಗ್ಸ್‌ ತಂಡವನ್ನು 2014ರ ಬಳಿಕ ಪೈನಲ್‌ಗೆ ತಂದರು. ಆದರೆ, ಫೈನಲ್‌ನಲ್ಲಿ ಕೇವಲ 6 ರನ್‌ನಿಂದ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟರು. ಈ ಹಿಂದಿನ ಆವೃತ್ತಿಗಳಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗುತ್ತಿದ್ದ ಪಂಜಾಬ್‌ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿತು. ತಂಡದಲ್ಲಿ ಲಭ್ಯವಿದ್ದ ಆಟಗಾರರನ್ನು ಬಳಸಿಕೊಂಡು ಅವರು ಪಿಬಿಕೆಎಸ್‌ ತಂಡವನ್ನು ಮೇಲೆತ್ತಿದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅವರು ತಮ್ಮ ಛಾಪು ಮೂಡಿಸಿದರು. ತಂಡವು ಗುರಿಯನ್ನು ಬೆನ್ನಟ್ಟಲು ಕಷ್ಟಪಡುತ್ತಿದ್ದಾಗ ಮತ್ತು ಜಸ್‌ಪ್ರೀತ್‌ ಬುಮ್ರಾ ಮಾರಕ ದಾಳಿ ನಡೆಸುತ್ತಿದ್ದ ವೇಳೆ ಅಯ್ಯರ್ ಅದ್ಭುತ ಆಟವನ್ನು ಹೊರ ತಂದರು. ಅವರು ಬುಮ್ರಾ ಅವರ ಯಾರ್ಕರ್‌ಗಳನ್ನು ಸಮರ್ಥವಾಗಿ ಬೌಂಡರಿಗೆ ಅಟ್ಟಿಸಿದರು. ಒಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದರೂ ಏಕಾಂಗಿಯಾಗಿ ಬ್ಯಾಟ್‌ ಮಾಡಿದ ಅಯ್ಯರ್, 41 ಎಸೆತಗಳಲ್ಲಿ 87 ರನ್ ಗಳಿಸಿದರು ಮತ್ತು ಪಂಜಾಬ್ ಒಂದು ಓವರ್ ಮುಂಚಿತವಾಗಿ 204 ರನ್‌ಗಳ ಗುರಿಯನ್ನು ತಲುಪಿತ್ತು.

IND vs ENG: ಭಾರತದ ಪ್ಲೇಯಿಂಗ್‌ XIನಲ್ಲಿ 3ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಹೆಸರಿಸಿದ ಮೈಕಲ್‌ ಕ್ಲಾರ್ಕ್‌!

ಶ್ರೇಯಸ್‌ ಅಯ್ಯರ್‌ ಬಗ್ಗೆ ದೊಡ್ಡ ಹೇಳಿಕೆ

"ಸದ್ಯ ಅವರು ಕೇವಲ ಏಕದಿನ ತಂಡದಲ್ಲಿ ಆಡುತ್ತಿದ್ದಾರೆ. ಆದರೆ ಈ ಐಪಿಎಲ್ ಟೂರ್ನಿಯ ನಂತರ ನಾವು ಅವರನ್ನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ಮತ್ತು ಟೆಸ್ಟ್ ಪಂದ್ಯಗಳಿಂದ ದೂರವಿಡಲು ಸಾಧ್ಯವಿಲ್ಲ. ಇದಲ್ಲದೆ, ಅವರು ಈಗ ಅಧಿಕೃತವಾಗಿ ವೈಟ್-ಬಾಲ್ ನಾಯಕತ್ವದ ರೇಸ್‌ಗೆ ಸೇರಿದ್ದಾರೆ," ಎಂದು ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಇದರರ್ಥ ಶ್ರೇಯಸ್‌ ಅಯ್ಯರ್ ಅವರ ಪ್ರದರ್ಶನದಿಂದ ರಾಷ್ಟ್ರೀಯ ತಂಡವು ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸುವಂತೆ ಮಾಡಿದೆ. 2024ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದ ನಂತರವೂ, ಅಯ್ಯರ್ ಅವರನ್ನು ಕೈಬಿಡಲಾಗಿತ್ತು. ಇದು ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದುರಾಗಿದ್ದವು. ಆದರೂ ಅವರು ತಮ್ಮ ಛಲವನ್ನು ಬಿಡಲಿಲ್ಲ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಬಿಸಿಸಿಐ ಗುತ್ತಿಗೆ ಪಟ್ಟಿಗೆ ಕಮ್‌ಬ್ಯಾಕ್‌ ಮಾಡಿದ್ದರು.