IPL 2025: ʻಈ ಒಂದು ಕಾರಣದಿಂದಲೇ ವಿರಾಟ್ ಕೊಹ್ಲಿಯ ಮೇಲೆ ನನಗೆ ಗೌರವ ಜಾಸ್ತಿʼ: ಎಬಿಡಿ!
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿಯನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ ಎಬಿ ಡಿ ವಿಲಿಯರ್ಸ್.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು (Virat Kohli) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 36ನೇ ವಯಸ್ಸಿನಲ್ಲಿಯೂ ವಿರಾಟ್ ಕೊಹ್ಲಿ ಅವರ ಶಕ್ತಿ ಹಾಗೂ ಉತ್ಸಾಹವನ್ನು ಯಾರಿಂದಲೂ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ ಎಂದು ಆರ್ಸಿಬಿ ಮಾಜಿ ಬ್ಯಾಟ್ಸ್ಮನ್ ತಿಳಿಸಿದ್ದಾರೆ. ಅದರಲ್ಲಿಯೂ ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ದದ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರೂ ಫೀಲ್ಡಿಂಗ್ ವೇಳೆ ಸಾಕಷ್ಟು ಉತ್ಸಾಹದಲ್ಲಿ ಕಂಡಿದ್ದರು. ಈ ಪಂದ್ಯದಲ್ಲಿ ಆರ್ಸಿಬಿ 8 ವಿಕೆಟ್ಗಳಿಂದ ಗೆಲುವು ಪಡೆದಿತ್ತು.
ಚಂಡೀಗಢಧ ಮುಲ್ಲನ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪಂಜಾಬ್ ಕಿಂಗ್ಸ್ ತಂಡದ ಎಲ್ಲಾ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದರು. ಆ ಮೂಲಕ 14.1 ಓವರ್ಗಳಿಗೆ 101 ರನ್ಗಳಿಗೆ ಆಲ್ಔಟ್ ಆಗಿತ್ತು. ಪ್ರಥಮ ಇನಿಂಗ್ಸ್ನಲ್ಲಿ ಫೀಲ್ಡಿಂಗ್ ವೇಳೆ ವಿರಾಟ್ ಕೊಹ್ಲಿ ತುಂಬಾ ಉತ್ಸಾಹಿಯಾಗಿ ಕಾಣುತ್ತಿದ್ದರು. ವಿಕೆಟ್ ಬಿದ್ದಾಗ ಬೌಲರ್ಗಳಿಗಿಂತ ಜಾಸ್ತಿ ಕೊಹ್ಲಿ ಸಂಭ್ರಮಿಸಿದ್ದರು. ನಂತರ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಆದರೆ, ಕಡಿಮೆ ಟಾರ್ಗೆಟ್ ಇದ್ದ ಕಾರಣ ಆರ್ಸಿಬಿ 10 ಓವರ್ಗಳಿಗೆ ಆರ್ಸಿಬಿ ಮುಗಿಸಿತ್ತು.
IPL 2025: ʻಆರ್ಸಿಬಿ ಈ ಸಲ ಕಪ್ ಗೆಲ್ಲುವುದು ಪಕ್ಕಾʼ-ಶೇನ್ ವ್ಯಾಟ್ಸನ್ ಭವಿಷ್ಯ ನಿಜವಾಗುತ್ತಾ?
"ನನ್ನ ಕ್ರಿಕೆಟ್ ದಿನಗಳ ಕೊನೆಯ ವರ್ಷಗಳಲ್ಲಿ ನನಗೆ ವಿರಾಟ್ ಕೊಹ್ಲಿ ಬಗ್ಗೆ ಏನೇನೂ ಯೋಚನೆಗಳು ಬಂದಿದ್ದವು. ಅವರು ಕೇವಲ ಎರಡು ವರ್ಷಗಳು ಮಾತ್ರ ಕ್ರಿಕೆಟ್ ಆಡುವುದಿಲ್ಲ, ಇದರ ಬದಲಿಗೆ ಇನ್ನೂ 5 ವರ್ಷಗಳ ಕಾಲ ಆಡಲಿದ್ದಾರೆಂದು ನನಗೆ ಅನಿಸಿತ್ತು. ಆದರೆ 30ರ ದಶಕದ ಅಂತ್ಯಕ್ಕೆ ಕಾಲಿಡುತ್ತಿರುವಾಗ, ಅವರು (ವಿರಾಟ್ ಕೊಹ್ಲಿ) ಇನ್ನೂ ತೋರಿಸುತ್ತಿರುವ ಶಕ್ತಿ, ಕಾಳಜಿ, ಮತ್ತೊಂದು ಟ್ರೋಫಿಯನ್ನು ಗೆಲ್ಲುವ ಇಚ್ಛಾಶಕ್ತಿ, ಆ ಆಳವಾದ ಬಯಕೆಯ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದು ನಾನು ಹೇಳಲೇಬೇಕು," ಎಂದು ಎಬಿ ಡಿ ವಿಲಿಯರ್ಸ್ ತಿಳಿಸಿದ್ದಾರೆ.
ಕೊಹ್ಲಿ ಫೈನಲ್ಗೆ ತಮ್ಮ ಶಕ್ತಿಯನ್ನು ಉಳಿಸಿಕೊಳ್ಳುತ್ತಿದ್ದಾರೆ: ಎಬಿಡಿ
ಬಸ್ನಿಂದ ಕೆಳಗೆ ಇಳಿದ ಬಳಿಕ ವಿರಾಟ್ ಕೊಹ್ಲಿ ನಡೆ ವಿಭಿನ್ನವಾಗಿರಲಿದೆ. ಅವರ ಶಕ್ತಿ ತಂಡದ ಇನ್ನುಳಿದ ಆಟಗಾರರ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಲಿದೆ. ಅಂದ ಹಾಗೆ ವಿರಾಟ್ ಕೊಹ್ಲಿ ತಮ್ಮ ಶಕ್ತಿಯನ್ನು ಫೈನಲ್ ಪಂದ್ಯಕ್ಕೆ ಉಳಿಸಿಕೊಂಡಿದ್ದಾರೆಂದು ಎಬಿಡಿ ತಿಳಿಸಿದ್ದಾರೆ.
IPL 2025: ʻದಿಗ್ವೇಶ್ ರಾಠಿಯನ್ನು ಬ್ಯಾನ್ ಮಾಡಬಾರದಿತ್ತುʼ-ಎಲ್ಎಸ್ಜಿ ಬೌಲರ್ಗೆ ಸೆಹ್ವಾಗ್ ಬೆಂಬಲ!
"ಇಂದು(ಗುರುವಾರ) ಅವರು ಬಸ್ನಿಂದ ಹೊರಗಡೆ ಇಳಿದ ಬಳಿಕ ಅವರನ್ನು ನೋಡಿದ ಬಳಿಕ ನನಗೆ ಹಾಗೆ ಅನಿಸುತ್ತದೆ. ಮತ್ತೊಮ್ಮೆ ನಾನು ಅವರ ನಡತೆಯನ್ನು ಗಮನಿಸಿದ್ದೆ. ತನ್ನ ಕಡೆಯಿಂದ ತಂಡಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕೆಂದು ಅವರು ಹೆಚ್ಚಿನ ಗಮನವನ್ನು ಕೇಂದ್ರಿಕರಿಸುತ್ತಾರೆ. ಇದು ತಂಡದ ಇನ್ನುಳಿದ ಆಟಗಾರರ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಆದರೆ, ಅವರು ಉತ್ತಮ ಪ್ರದರ್ಶನ ತೋರಲಿ ಅಥವಾ ಇವತ್ತಿನ ತರಹ ತೋರದೇ ಇರಲಿ, ಇದು ತಂಡಕ್ಕೆ ನಷ್ಟ ಉಂಟು ಮಾಡುವುದಿಲ್ಲ. ಅವರು ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ತೋರಲು ಎದುರು ನೋಡುತ್ತಿದ್ದಾರೆ," ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ.