ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಲು ಬಲವಾದ ಕಾರಣ ತಿಳಿಸಿದ ವಿಜಯ್ ಮಲ್ಯ!
18 ವರ್ಷಗಳ ದೀರ್ಘ ಕಾಯುವಿಕೆಯ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೊಚ್ಚಲ ಚಾಂಪಿಯನ್ ಆಯಿತು. ಉದ್ಯಮಿ ವಿಜಯ್ ಮಲ್ಯ 2008ರಲ್ಲಿ ಆರ್ಸಿಬಿ ತಂಡವನ್ನು ಖರೀದಿಸಲು ಬಲವಾದ ಕಾರಣವೇನೆಂದು ವಿವರಿಸಿದ್ದಾರೆ.

ಆರ್ಸಿಬಿಯನ್ನು ಖರೀದಿಸಲು ಕಾರಣ ತಿಳಿಸಿದ ವಿಜಯ್ ಮಲ್ಯ.

ನವದೆಹಲಿ: ಸತತ 18 ವರ್ಷಗಳ ಹೋರಾಟ, ಧೈರ್ಯ ಮತ್ತು ಪರಿಶ್ರಮದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಂತಿಮವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 2025ರ ಐಪಿಎಲ್ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಆರ್ಸಿಬಿ 6 ರನ್ ರೋಚಕ ಗೆಲುವು ಸಾಧಿಸಿತು. ಅತ್ಯಂತ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಆರ್ಸಿಬಿ, 17 ಆವೃತ್ತಿಗಳವರೆಗೂ ಒಂದೇ ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಘಟಾನುಘಟಿ ಆಟಗಾರರು ಬಂದು ಹೋಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಇನ್ನೂ ಆರ್ಸಿಬಿ ತಂಡದಲ್ಲಿಯೇ ಉಳಿದಿದ್ದಾರೆ. ಜೂನ್ 3 ರಂದು ಮಂಗಳವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ಸಿಬಿ ಚಾಂಪಿಯನ್ ಆಗುತ್ತಿದ್ದಂತೆ ಎಲ್ಲರ ಕಣ್ಣುಗಳು ಮೊದಲು ವಿರಾಟ್ ಕೊಹ್ಲಿಯತ್ತ ಹೋದವು. ಈ ವೇಳೆ ಅಭಿಮಾನಿಗಳು ಈ ತಂಡದ ಮೊದಲ ಮಾಲೀಕರಾಗಿದ್ದ ವಿಜಯ್ ಮಲ್ಯ (Vijay Mallya) ಅವರನ್ನು ನೆನಪಿಸಿಕೊಂಡಿದ್ದರು.
ಆರ್ಸಿಬಿ ಚೊಚ್ಚಲ ಕಪ್ ಗೆಲ್ಲುತ್ತಿದ್ದಂತೆ ವಿಜಯ್ ಮಲ್ಯ ಕೂಡ ಭಾವುಕರಾಗಿದ್ದರು ಹಾಗೂ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದರು. ಇತ್ತೀಚೆಗೆ ಪಾಟ್ಕಾಸ್ಟ್ವೊಂದರಲ್ಲಿ ಭಾಗವಹಿಸಿದ್ದ ವಿಜಯ್ ಮಲ್ಯ, 2008ರಲ್ಲಿ ಐಪಿಎಲ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಿದ್ದೇಕೆಂದು ರಿವೀಲ್ ಮಾಡಿದ್ದಾರೆ. ಅವರು ಮೊದಲಿಗೆ ಮುಂಬೈ ತಂಡವನ್ನು ಖರೀದಿಸಲು ಪ್ರಯತ್ನಿಸಿದ್ದರು. ಆದರೆ, ಕೊನೆಯ ಕೊದಲೆಳೆಯ ಅಂತರದಲ್ಲಿ ಅವರು ವಿಫಲರಾಗಿದ್ದರು. ಅಂತಿಮವಾಗಿ ಅವರು 112 ದಶಲಕ್ಷ ಯುಎಸ್ ಡಾಲರ್ಗೆ (600 ರಿಂದ 700 ಕೋಟಿ ರೂ) ಬೆಂಗಳೂರು ತಂಡವನ್ನು ಖರೀದಿಸುವಲ್ಲಿ ಸಫಲರಾಗಿದ್ದರು.
IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್ ಸ್ಟಾರ್ಕ್!
ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಇತ್ತೀಚೆಗೆ ಪಾಡ್ಕ್ಯಾಸ್ಟ್ನಲ್ಲಿ ಆರ್ಸಿಬಿ ಮತ್ತು ಐಪಿಎಲ್ಗೆ ಸಂಬಂಧಿಸಿದ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. 2008 ರಲ್ಲಿ ಆರ್ಸಿಬಿಯನ್ನು ಖರೀದಿಸಿ ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಅವರು ವಿವರಿಸಿದ್ದಾರೆ. ತಮ್ಮ ಉದ್ದೇಶ ಕ್ರಿಕೆಟ್ ಮೇಲಿನ ಪ್ರೀತಿ ಅಲ್ಲ, ಬದಲಾಗಿ ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅನ್ನು ಪ್ರಚಾರ ಮಾಡುವುದು ಎಂದು ಮಲ್ಯ ಹೇಳಿದ್ದಾರೆ. ಆರ್ಸಿಬಿ ಗೆಲುವಿನ ನಂತರ, ಮಲ್ಯ ಅವರ ಹಳೆಯ ದಿನಗಳ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದೆ.
ಲಲಿತ್ ಮೋದಿ ಪ್ರಸ್ತಾವನೆ ನನ್ನನ್ನು ಆಕರ್ಷಿಸಿತ್ತು
"ಲಲಿತ್ ಮೋದಿ ಬಿಸಿಸಿಐ ಸಮಿತಿಗೆ ನೀಡಿದ ಈ ಲೀಗ್ನ ಪ್ರಸ್ತಾವನೆಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅವರು ಒಂದು ದಿನ ನನಗೆ ಕರೆ ಮಾಡಿ ತಂಡಗಳನ್ನು ಹರಾಜಿನಲ್ಲಿ ಇಡಲಾಗುವುದು ಎಂದು ಹೇಳಿದ್ದರು. ನೀವು ತಂಡವನ್ನು ಖರೀದಿಸಲು ಬಯಸುವಿರಾ? ಎಂದು ಕೇಳಿದ್ದರು. ಹಾಗಾಗಿ, ನಾನು ಮೂರು ತಂಡಗಳಿಗೆ ಬಿಡ್ ಮಾಡಿದೆ ಮತ್ತು ನಾನು ಮುಂಬೈ ಖರೀದಿಸುವಲ್ಲಿ ಕೊದಲೆಳೆಯ ಅಂತರದಲ್ಲಿ ಎಡವಿದ್ದೇನೆ," ಎಂದು ಹೇಳಿದ್ದಾರೆ.
Vijay Mallya said, “Royal Challengers Bangalore(RCB) was born to promote his whiskey brand "Royal Challenge." The sole purpose was to promote the Royal Challenge whiskey brand. pic.twitter.com/6TZRpAXnUP
— Rishabh Singh Parmar (@irishabhparmar) June 6, 2025
ಆರ್ಸಿಬಿಯನ್ನು ಖರೀದಿಸಲು ಕಾರಣವೇನು?
ಆರ್ಸಿಬಿ ಖರೀದಿಸುವ ಹಿಂದಿನ ಕಾರಣವನ್ನು ವಿವರಿದ ಅವರು, "2008 ರಲ್ಲಿ ನಾನು ಆರ್ಸಿಬಿ ತಂಡಕ್ಕೆ ಬಿಡ್ ಮಾಡಿದಾಗ, ಐಪಿಎಲ್ ಅನ್ನು ಭಾರತೀಯ ಕ್ರಿಕೆಟ್ಗೆ ಒಂದು ದಿಟ್ಟ ತಿರುವು ಎಂದು ನಾನು ಭಾವಿಸಿದ್ದೆ. ಬೆಂಗಳೂರಿನ ಉತ್ಸಾಹವನ್ನು ಪ್ರತಿಬಿಂಬಿಸುವ ತಂಡವನ್ನು ರಚಿಸುವುದು ನನ್ನ ಕನಸಾಗಿತ್ತು. ನಾನು $112 ಮಿಲಿಯನ್ (600 ರಿಂದ 700 ಕೋಟಿ ರೂ.) ಪಾವತಿಸಿದ್ದೆ. ಅದು ಎರಡನೇ ಅತ್ಯಧಿಕ ಬಿಡ್ ಆಗಿತ್ತು, ಏಕೆಂದರೆ ನಾನು ಅದರ ಮೌಲ್ಯ ಏನೆಂದು ನನಗೆ ಅರಿವಿತ್ತು. ಆರ್ಸಿಬಿಯನ್ನು ಮೈದಾನದಲ್ಲಿ ಮಾತ್ರವಲ್ಲದೆ ಅದರ ಹೊರಗೆಯೂ ಶ್ರೇಷ್ಠತೆಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ಆಗಿ ಮಾಡಲು ನಾನು ಬಯಸಿದ್ದೆ. ಆದ್ದರಿಂದ ನಾನು ಅದನ್ನು ನಮ್ಮ ಅತ್ಯುತ್ತಮ ಮಾರಾಟವಾಗುವ ಮದ್ಯದ ಬ್ರಾಂಡ್ಗಳಲ್ಲಿ ಒಂದಾದ ರಾಯಲ್ ಚಾಲೆಂಜ್ನೊಂದಿಗೆ ಸಂಯೋಜಿಸಿದೆ. ಆ ಮೂಲಕ ರಾಯಲ್ ಚಾಲೆಂಜ್ನ ಮೌಲ್ಯವನ್ನು ಹೆಚ್ಚಿಸಲು ಬೆಂಗಳೂರು ತಂಡವನ್ನು ಖರೀದಿಸಿದ್ದೆ," ಎಂದು ವಿಜಯ್ ಮಲ್ಯ ತಿಳಿಸಿದ್ದಾರೆ.